Homeಕರ್ನಾಟಕನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ - ಎ.ಕೆ.ಸುಬ್ಬಯ್ಯ

ನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ – ಎ.ಕೆ.ಸುಬ್ಬಯ್ಯ

- Advertisement -
ಎ.ಕೆ.ಸುಬ್ಬಯ್ಯ, ಹಿರಿಯ ಚಿಂತಕರು. 
ನರೇಂದ್ರ ಮೋದಿ ಮತ್ತು ಅವರ ಪರಿವಾರದವರ ಕೈಯಲ್ಲಿ ಈ ದೇಶದ ಆಡಳಿತ ಇರುವುದಕ್ಕಿಂತ  ಅಪಾಯಕಾರಿ ಸಂದರ್ಭ ಈ ದೇಶಕ್ಕೆ ಹಿಂದೆಂದೂ ಬಂದಿರಲಿಲ್ಲ. ಈ ಚುನಾವಣಾ ಸಮಯದಲ್ಲಿ ಇನ್‍ಕಂ ಟ್ಯಾಕ್ಸ್ ಇಲಾಖೆಯ ದಾಳಿಗಳೇ ದೊಡ್ಡ ಭ್ರಷ್ಟಾಚಾರವಾಗಿದೆ.
ಮೋದಿಯವರು ಮೊನ್ನೆ ಬೆಂಗಳೂರಿನ ಭಾಷಣದಲ್ಲಿ ಎರಡು ತಪ್ಪು ಸಂದೇಶಗಳನ್ನು ಕೊಡುವುದಕ್ಕೆ ಬುದ್ಧಿಪೂರ್ವಕ ಪ್ರಯತ್ನವನ್ನು ಮಾಡಿದ್ದಾರೆ. ಮೊದಲನೆಯದು ಮೋದಿಯನ್ನು ಟೀಕೆ ಮಾಡುವವರೆಲ್ಲರೂ ದೇಶ ದ್ರೋಹಿಗಳು. ಅವರು ದೇಶದ ವಿರುದ್ಧ ಮಾತಾಡುತ್ತಾರೆ. ಎರಡನೆಯದು ತನ್ನ ಭ್ರಷ್ಟಾಚಾರದ ಹೋರಾಟ. ಈ ಉದ್ಯಮಿಗಳ ಮನೆ ಮೇಲೆ  ಇನ್‍ಕಂಟ್ಯಾಕ್ಸ್ ನವರು ಏನು ದಾಳಿ ನಡೆಸುತ್ತಿದ್ದಾರೆ, ಅದು ಭ್ರಷ್ಟಾಚಾರದ ಹೋರಾಟ. ಅದರಿಂದ ವಿರೋಧ ಪಕ್ಷಗಳು ಗಾಬರಿ ಆಗುತ್ತಿದ್ದಾರೆ. ಒಂದು ಕಡೆ ಭ್ರಷ್ಟಾಚಾರದ ಹೋರಾಟ, ಇನ್ನೊಂದು ಕಡೆ ತಾನೇ ದೇಶಭಕ್ತ, ತನ್ನ ಪರಿವಾರದವೇ ದೇಶಭಕ್ತರು ಎಂಬ ತಪ್ಪು ಸಂದೇಶವನ್ನು ಜನರಿಗೆ ಕೊಡುವ ಮೂಲಕ ಜನರ ದಾರಿ ತಪ್ಪಿಸುವ ಬುದ್ಧಿಪೂರ್ವಕ ಪ್ರಯತ್ನವನ್ನು ನರೇಂದ್ರ ಮೋದಿಯವರು ಇಲ್ಲಿ ಮಾಡಿದ್ದಾರೆ. ಈ ಎರಡೂ ಸಹ ಸುಳ್ಳುಗಳು. ಒಂದು ದೇಶ ಅಂದ್ರೆ ಏನು? ನರೇಂದ್ರ  ಮೋದಿಯ ಮಾತಿನ ಪ್ರಕಾರವೇ ದೇಶವೆಂದರೆ ನರೇಂದ್ರ ಮೋದಿ, ಮೋದಿ ಬಿಟ್ಟು ದೇಶ ಇಲ್ಲ.  ನರೇಂದ್ರ ಮೋದಿಯನ್ನ  ಟೀಕೆ ಮಾಡುವ ಎಲ್ಲರೂ ದೇಶದ್ರೋಹಿಗಳು. ಇಂತಹ ಒಂದು ಸಂದೇಶವನ್ನು ಆತ ಜನಕ್ಕೆ ಕೊಡುತ್ತಿದ್ದಾನೆ.
ದೇಶಕ್ಕಾಗಿ ನಾವು ಎಂಬ ಆಂದೋಲನ ನಡೆಸುತ್ತಿರುವವರ ಪೈಕಿ ನಾನೂ ಒಬ್ಬ. ನಮಗೆ ದೇಶ ಅಂದರೆ, ಈ ಭಾರತದ ಭೂಪಟದಲ್ಲಿ ವಿಶಾಲವಾದ ಭೂ ಪ್ರದೇಶ. ಅಲ್ಲಿ ಇರುವಂತ ವೈವಿಧ್ಯಮಯವಾದಂತಹ ಜನರ ಸೌಹಾರ್ದಯುತವಾದಂತಹ ಬದುಕು. ವೈವಿಧ್ಯಮಯವಾದ ಜೀವ ಸಂಸ್ಕøತಿ. ಇವೆಲ್ಲವೂ ಸೇರಿ ನಮಗೆ ದೇಶ.  ಅವೆಲ್ಲವನ್ನೂ ಉಳಿಸಿಕೊಳ್ಳಲಿಕ್ಕಾಗಿ ದೇಶಕ್ಕಾಗಿ ನಾವು ಜನಾಂದೋಲನವನ್ನು ಮಾಡುತ್ತಿದ್ದೇವೆ. ನಾವು ಯಾವುದೇ ಕ್ಷುಲ್ಲಕವಾದಂತಹ ಚಳವಳಿಯೂ ಅಲ್ಲ. .. .. ಸ್ವಾರ್ಥದಿಂದ ಮಾಡುತ್ತಿರುವ ಚಳವಳಿಯೂ ಅಲ್ಲ. ಇದು ನಮ್ಮ ನಿಜವಾದ ದೇಶವನ್ನು ಉಳಿಸಿಕೊಳ್ಳಬೇಕು ಎಂದು ಮಾಡುತ್ತಿರುವ ಚಳವಳಿ ಇದಾಗಿದೆ. ನಮ್ಮ ದೇಶದ ಪರಿಕಲ್ಪನೆ ನರೇಂದ್ರ ಮೋದಿ ದೇಶದ ಪರಿಕಲ್ಪನೆಯಂತಲ್ಲ. ನಮ್ಮ ದೃಷ್ಟಿಯಲ್ಲಿ ಅತ್ಯಂತ ದೇಶದ್ರೋಹಿಗಳು ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ  ಮತ್ತು ಅವನ ಪರಿವಾರದವರು.
ನಮಗೆ ಮಹಾತ್ಮ ಗಾಂಧಿ ದೇಶದ ಶ್ರೇಷ್ಠ ಮಾರ್ಗದರ್ಶಕ. ನರೇಂದ್ರ ಮೋದಿಗೆ ಮಹಾತ್ಮ ಗಾಂಧಿಯನ್ನು ಕೊಂದವರು ದೇಶಭಕ್ತರು. ನಮಗೆ ಮಹಾತ್ಮ ಗಾಂಧಿ ದೇಶಭಕ್ತ. ನಮಗೆ ವಿವೇಕಾನಂದರ ದೇಶ ಬೇಕು. ನರೇಂದ್ರ ಮೋದಿಗೆ ಗೋಡ್ಸೆಯ ದೇಶ ಬೇಕು. ನಮಗೆ ನಾರಾಯಣ ಗುರು, ಮಹಾತ್ಮ ಫುಲೆ, ಬಾಬಾ ಸಾಹೆಬ್ ಅಂಬೇಢ್ಕರ್, ಗೌತಮ ಬುದ್ದ ಇಂತಹ ಮಹಾ ಮಾನವರ ಜೀವಪರ ವ್ಯಕ್ತಿಗಳ ದೇಶ ಬೇಕು. ಈ ದೇಶವನ್ನು ಉಳಿಸಲಿಕ್ಕೆ ನಾವು ದೇಶಭಕ್ತಿಯ ಚಳವಳಿಯನ್ನು ನಾವು ಮಾಡುತ್ತಿದ್ದೇವೆ.
ಆದರೆ ಈ ದೇಶವನ್ನ ಗಾಂಧಿಯವರನ್ನು ಕೊಂದವರ ದೇಶ ಮಾಡಬೇಕು. ಗೌರಿ ಲಂಕೇಶರನ್ನು  ಕೊಂದವರ ದೇಶವನ್ನಾಗಿ ಮಾಡಬೇಕು, ಹಾಗೆಯೇ ಧಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿಯವರನ್ನ ಕೊಂದವರ  ರೀತಿಯ ದೇಶ ಮಾಡಲು ಹೊರಟಿದ್ದಾರೆ. ನರೇಂದ್ರ ಮೋದಿ ಮತ್ತು ಅವರ ಪರಿವಾರದವರ ಕೈಯಲ್ಲಿ ಈ ದೇಶದ ಆಡಳಿತ ಇರುವುದಕ್ಕಿಂತ  ಅಪಾಯಕಾರಿ ಸಂದರ್ಭ ಈ ದೇಶಕ್ಕೆ ಹಿಂದೆಂದೂ ಬಂದಿರಲಿಲ್ಲ ಅನ್ನಿಸುತ್ತೆ. ಇಂದು ನಮ್ಮ ದೇಶದ ಮುಂದೆ  ಇಂತ ಅಪಾಯದಿಂದ ಇಡೀ ದೇಶವನ್ನು ಪಾರುಮಾಡುವಂತಹ ಹೊಣೆಗಾರಿಕೆ  ಬೇರೆ ಬೇರೆ ರಾಜಕೀಯ ಪಕ್ಷಗಳಿಗಿಂತ  ಹೆಚ್ಚಾಗಿ ನಮ್ಮಂತೆ ಚಿಂತನೆ ಮಾಡುವವರ ಹೆಗಲ ಮೇಲೆ ಹೆಚ್ಚಾಗಿ ಇದೆ. ಅದರಿಂದಾಗಿ ನಾವು ವಿಚಲಿತರಾಗಿದ್ದೇವೆ.
ಚುನಾವಣೆಯ ಸಂಧರ್ಭದಲ್ಲಿ ನಡೆಯುತ್ತಿರುವ ಐಟಿ ದಾಳಿಗಳನ್ನೇ  ಭ್ರಷ್ಟಾಚಾರಿ ವಿರೋಧಿ ಹೋರಾಟ ಮತ್ತು ತಾನೇ ಮಾಡಿಸುತ್ತಿದ್ದೇನೆ ಎಂದು ಪರೋಕ್ಷವಾಗಿ  ಹೇಳುತ್ತಿದ್ದಾರೆ. ಐಟಿ ಸಂಸ್ಥೆ ಇಲಾಖೆಯ ವತಿಯಿಂದ ಅದರ ಪಾಡಿಗೆ ಅದರ ಕೆಲಸ ಮಾಡುತ್ತಿದೆ ಎಂದು ಹೇಳುತ್ತಿಲ್ಲ. ಇದನ್ನು ವಿರೋಧಿಸಿದವರು ದೇಶದ್ರೋಹಿಗಳು. ನರೇಂದ್ರ ಮೋದಿ ಈ ದಾಳಿಗಳನ್ನು ಮಾಡಿಸುತ್ತಿರುವುದಾದರೂ ಏಕೆ. ವಿರೋಧ ಪಕ್ಷಗಳಿಗೆ ಚುನಾವಣಾ ಪ್ರಚಾರ ಮಾಡಲು ಸಾಧ್ಯವಾಗದಂತಹ ಏಕಮಾತ್ರ ಬಿಕ್ಕಟ್ಟು ನಿರ್ಮಾಣ ಮಾಡುವ ಏಕಮಾತ್ರ ಉದ್ದೇಶದಿಂದ ಈ ದಾಳಿಗಳನ್ನು ನಡೆಸುತ್ತಿದ್ದಾರೆ. ಇಂತಹ ದಾಳಿಗಳನ್ನು ಚುನಾವಣೆಗೆ ಮೊದಲು ಮುಗಿಸಬಹುದಿತ್ತು. ಚುನಾವಣೆಯ ನಂತರದ ಇಪ್ಪತ್ತು ದಿನ ಕಾದಿದ್ದರೂ ಆಕಾಶವೇನೂ ಕೆಳಗೆ ಬೀಳುತ್ತಿರಲಿಲ್ಲ. ಚುನಾವಣೆಯಲ್ಲಿ ಹಣದ ದುವ್ರ್ಯವಹಾರಗಳು ನಡೆಯುತ್ತಿದ್ದರೆ, ಚುನಾವಣಾ ಆಯೋಗ ದಾಳಿಗಳನ್ನು ಮಾಡಬಹುದಿತ್ತು. ಇನ್‍ಕಂ ಟ್ಯಾಕ್ಸ್‍ನವರು ಬರುವ ಅವಶ್ಯಕತೆ ಏನಿತ್ತು. ಈ ಚುನಾವಣಾ ಸಮಯದಲ್ಲಿ ಇನ್‍ಕಂ ಟ್ಯಾಕ್ಸ್ ಇಲಾಖೆಯ ದಾಳಿಗಳೇ ದೊಡ್ಡ ಭ್ರಷ್ಟಾಚಾರವಾಗಿದೆ. ಇದು  ಭ್ರಷ್ಟಾಚಾರ ತಡೆಯುವುದಲ್ಲ. ಆದರೆ ಮೋದಿ ಯತಾ ಪ್ರಕಾರ ಇದನ್ನು ಭ್ರಷ್ಟಾಚಾರ ವಿರೋಧಿ ಚಳವಳಿ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ ನಮ್ಮ ದೇಶದ ಜನ ಅಷ್ಟು ದಡ್ಡರಲ್ಲ. ಜನರ ಮೇಲೆ ಭರವಸೆ ಇಟ್ಟೇ ನಾವು ದೇಶಕ್ಕಾಗಿ ನಾವು ಚಳವಳಿಯನ್ನು ಮುಂದುವರೆಸುತ್ತೇವೆ. ಈ ರೀತಿ ಯೋಚನೆ ಮಾಡುವಂತ ಇಡೀ ದೇಶದ ಪ್ರಗತಿಪರ ಮತದಾರರು, ಈ ಚುನಾವಣೆಯಲ್ಲಿ ತಮ್ಮಿಂದ ತಾವೇ ಇದನ್ನು ಅರಿತು ತನು, ಮನ, ಧನಗಳನ್ನು ಅರ್ಪಿಸಿ ಈ ನರೇಂದ್ರ ಮೋದಿಯಂತಹ ದೇಶದ್ರೋಹಿ ಕೋಮು ಶಕ್ತಿಗಳಿಂದ  ದೇಶವನ್ನು ಈ ಚುನಾವಣೆಯಲ್ಲಿ ಪಾರು ಮಾಡುವಂತಹ ಸುವರ್ಣ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಾನು ಪ್ರಾರ್ಥನೆ ಮಾಡುತ್ತೇನೆ.
(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...