Homeಅಂಕಣಗಳುಗ್ಯಾರಂಟಿ ಸಪೋರ್ಟು ಮಾಡಿ ನೋಡಿ ಸಾರ್

ಗ್ಯಾರಂಟಿ ಸಪೋರ್ಟು ಮಾಡಿ ನೋಡಿ ಸಾರ್

- Advertisement -
- Advertisement -

ಕಡೆಗೂ ಭಾರತ ಕಂಡ ಅಪರೂಪದ ಪ್ರಧಾನಿ ಲೋಕಸಭೆಯಲ್ಲಿ ಕಾಣಿಸಿಕೊಂಡು ಕಾಂಗ್ರೆಸ್ಸಿಗರನ್ನು ಎರಡು ಗಂಟೆ ಟೀಕಿಸಿದರು, ನಂತರ ಐದು ನಿಮಿಷ ಮಣಿಪುರದ ಪ್ರಸ್ತಾಪ ಮಾಡಿದರು. ಆದರೇನು ಪ್ರಧಾನಿಯ ಮುಖ ಸಹಜವಾಗಿರಲಿಲ್ಲ. ತಪ್ಪುಗಳನ್ನು ಮುಚ್ಚಿಕೊಳ್ಳುವ ಸುಳ್ಳುಹೇಳುವ ಮುಖದಂತಿತ್ತು. ಮೋದಿ ಈ ದೇಶದ ಜವಾಬ್ದಾರಿ ಹೊತ್ತ ಪ್ರಧಾನಿಯಾಗಿದ್ದರೆ ಮಣಿಪುರದಲ್ಲಿ ಗಲಭೆ ಹೊತ್ತಿಕೊಂಡ ಕೂಡಲೇ ಅಲ್ಲಿಗೆ ಹೋಗುತ್ತಿದ್ದರೆ, ಆ ಕಾರಣಕ್ಕಾದರೂ ನೂರಾರು ಕೊಲೆಗಳು ನಡೆಯುತ್ತಿರಲಿಲ್ಲ; ಸಾವಿರಾರು ಮನೆ ಧ್ವಂಸವಾಗುತ್ತಿರಲಿಲ್ಲ; ಹೆಣ್ಣು ಮಕ್ಕಳ ಬೆತ್ತಲೆ ಮೆರವಣಿಗೆ ನಡೆಯುತ್ತಿರಲಿಲ್ಲ ಮತ್ತು ಅವರ ಮೇಲಿನ ದೌರ್ಜನ್ಯ ನಡೆಯುತ್ತಿರಲಿಲ್ಲ. ಮೋದಿ ಸಂಸತ್‌ಗೆ ಬರದಂತೆ ತಪ್ಪಿಸಿಕೊಂಡು ತಿರುಗುವ ಪ್ರಮೇಯವೇ ಜರುಗುತ್ತಿರಲಿಲ್ಲ. ಗುಜರಾತಿನಲ್ಲಿ ಮೋದಿ ಸರಕಾರವಿದ್ದಾಗ ಮುಸ್ಲಿಮರ ಮಾರಣಹೋಮಕ್ಕೆ ಕಾರಣರಾದ ಕೋಮುಗಲಭೆಯ ಬಗ್ಗೆ ಇಂದಿಗೂ ಅವರು ಕ್ಷಮೆ ಕೋರಿಲ್ಲ. ಇನ್ನು ಮಣಿಪುರದ ಘಟನೆ ಕೇವಲ ಮಣಿಪುರಕ್ಕೆ ಮಾತ್ರ ಸೀಮಿತ ಎಂದು ಭಾರತದ ಒಕ್ಕೂಟದ ರಾಜ್ಯಗಳು ಭಾವಿಸುವಂತಿಲ್ಲ. ಈ ನಡುವೆ ಮಣಿಪುರದ ಘಟನೆಗಳನ್ನು ಮರೆಮಾಚಿ ಕುಳಿತಿರುವ ಮಾಧ್ಯಮದವರು ರಾಹುಲ್ ಗಾಂಧಿಯವರ ’ಫ್ಲೈಯಿಂಗ್ ಕಿಸ್’ ಬಗ್ಗೆ ತಲೆಕೆಡಿಸಿಕೊಂಡು ದಿನಗಟ್ಟಲೆ ಕೊರೆಯುತ್ತಿರುವುದು ನಗು ಕಳೆದುಕೊಂಡವರಿಗೆ ನಗು ತರಿಸಿದೆಯಲ್ಲಾ, ಥೂತ್ತೇರಿ.

******

ಪತ್ರಕರ್ತರಿಗೆ ಪ್ರಿಯರಾಗಿರುವ ಕುಮಾರಣ್ಣನನ್ನು ಮಾತನಾಡಿಸಬೇಕೆನಿಸಿತಲ್ಲಾ. ಇಂತಹ ಅಪೇಕ್ಷೆ ಮೂಡಲು, ಕುಮಾರಣ್ಣ ಸಿಂಗಾಪುರದ ಮುಖಾಂತರ ಯೂರೋಪ್ ಟೂರು ಮಾಡುತ್ತಿದ್ದಾರೆ ಎಂಬ ಸುದ್ದಿಯೇ ಕಾರಣವಾಗಿ ಪೋನು ಮಾಡಿದರೆ ರಿಂಗಾಯ್ತು. ರಿಂಗ್ ಟೋನ್ ’ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು..’

“ಯಾರು? ಹಲೊ ಯಾರು?”

“ನಾನು ಸಾರ್ ಯಾಹೂ.”

“ಎಲ್ಲಿ ಬ್ರದರ್ ಸಿಕ್ಕಲೇಯಿಲ್ಲ ನೀವು.”

“ಬಂದಿದ್ದೆ ಸಾರ್, ಈಗತಾನೇ ಸಿಂಗಾಪುರಕ್ಕೋದ್ರು ಅಂದ್ರು ಸಾರ್.”

“ಕರೆದಿದ್ರೆ ನೀವು ಬರತಿದ್ರ?”

“ನಾನಾಗ್ಲೆ ನೋಡಿದ್ದಿನಿ ಸಾರ್.”

“ಯಾವಾಗ ನೋಡಿದ್ರಿ?”

“ನಾನು ಸಿಂಗಾಪುರ ನೋಡಿದಾಗ ನೀವಿನ್ನೂ ಸ್ಟೂಡೆಂಟು ಸಾರ್, ಆಗ ಸಿಂಗಾಪುರ ತೋರಿಸೊ ಏಜೆಂಟ್‌ಗಳು ಹುಟ್ಟಿಗಂಡಿದ್ರು. ನಮ್ಮನ್ನ ಕರಕಂಡು ಹೋಗಿ, ನಮ್ಮ ಹೆಸರಲ್ಲಿ ಟಿ.ವಿ, ಗಡಿಯಾರ, ಫೋನು, ಟೇಪರಿಕಾರ್ಡು ಯಲ್ಲಾನು ತಗಂಡು ರಸ್ತೆ ಪಾರ್ಕು ಮಾಲ್ ತೋರಿಸಿ ಕರಕಂಡು ಬರೋರು. ಅಂಗೆ ನಾನು ಹೋಗಿದ್ದೆ, ನಾನು ಪತ್ರಕರ್ತ ಅಂತ ಒಂದು ಪೆನ್ನು ತಕ್ಕೊಟ್ರು ಸಾರ್, ಅಂಗಾಗಿ ನಾನು ಸಿಂಗಾಪುರ ನೋಡಿದ್ದಿನಿ.”

“ಈಗ ನೋಡಬೇಕು ನೀವು. ಆ ದೇಶಗಳ ನೋಡಿದ್ರೆ ತಲೆ ತಗ್ಗಸಂಗಾಯ್ತದೆ ಕಂಡ್ರಿ.”

“ನೀವ್ಯಾಕೆ ತಲೆ ತಗ್ಗಸಬೇಕು ಸಾರ್.”

“ನಾನು ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸಿಂಗಾಪುರದ ತರ ಒಂದು ರೋಡು ಒಂದು ಪಾರ್ಕು ಮಾಡಕ್ಕಾಗಲಿಲ್ಲವಲ್ಲ ಅಂತ ತಲೆ ತಗ್ಗಸತಕ್ಕಂತ ಅಭಿಪ್ರಾಯ ಮೂಡುತ್ತೆ ಕಂಡ್ರಿ.”

“ನಿಜ ಸಾರ್, ನಿಮ್ಮ ಆತ್ಮವಿಮರ್ಶೆ ಮೆಚ್ಚತಕ್ಕೆಂತದ್ದು. ಎಷ್ಟು ಜನ ರಾಜಕಾರಣಿಗಳಿಗೆ ಇಂತ ಜ್ಞಾನೋದಯ ಆಗತ್ತೆ ಸಾರ್? ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ನೀವು ರಾಮನಗರದ ಊರೊಳಗಡೆ ಹೋದ್ರೆ ತಲೆ ತಗ್ಗಿಸಲೇಬೇಕು ಸಾರ್. ಆ ರಸ್ತೆ ಗುಂಡಿಗಳು ಆ ಗಲೀಜು ನೋಡಕ್ಕಾಗಲ್ಲ ಸಾರ್.”

“ರಾಮನಗರ ಅಷ್ಟೇ ಅಲ್ಲ ಕಂಡ್ರಿ. ಐದಾರು ಬಾರಿ ಗೆದ್ದು ಶಾಸಕರು ಮಂತ್ರಿಗಳಾಗಿರತಕ್ಕಂತ ಉದಾಹರಣೆಗಳು ನಮ್ಮ ರಾಜ್ಯದಲ್ಲಿ ಹೇರಳವಾಗಿವೆ. ಕನಿಷ್ಟ ಜನಗಳಿಗೆ ಪ್ರಾಥಮಿಕವಾಗಿ ಬೇಕಾಗಿರತಕ್ಕಂತ ಅಗತ್ಯಗಳು ಏನಿವೆ ಅವನ್ನ ಪೂರ್ಣವಾಗಿ ಒದಗಿಸತಕ್ಕಂತ ಕೆಲಸನ ಯಾರೂ ಮಾಡತಕ್ಕಂತದ್ದಕ್ಕೆ ಮನಸು ಮಾಡದೆ ಬರೀ ಆಸ್ತಿ ಮಾಡಿಬುಟು.”

“ನಿಜ ಸಾರ್ ಕೇವಲ ಐದೊರ್ಸ ಮಂತ್ರಿಗಳಾಗಿದ್ದ ಜನಗಳು ಕೋಟ್ಯಾಂತರ ರೂಪಾಯಿಗಳ ಆಸ್ತಿ ಮಾಡಿದ್ದರೆ, ರಾಜಕಾರಣಿಗಳಿಗೆ ದುಡ್ಡು ಹೊಡಿಯಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಒಬ್ಬ ಅಧಿಕಾರಿನ ಲೋಕಾಯುಕ್ತರು ರೈಡ್ ಮಾಡಿದ್ರೆ ಐದು ಕೋಟಿ ಬೆಲೆ ಬಾಳೊ ಮನೆ, ಮೂರುವರೆ ಕೆ.ಜಿ ಚಿನ್ನ, ಸೈಟುಗಳು, ಅಪಾರ್ಟ್‌ಮೆಂಟ್ ಮನೆಲಿ ಎಪ್ಪತೈದು ಲಕ್ಷ ಕ್ಯಾಶು ಇನ್ನೂರು ಪ್ಯಾಂಟು, ನಾನ್ನೂರು ಶರಟು, ನೂರು ಜೊತೆ ಚಪ್ಪಲಿ ಸಿಗತವೆ ಸಾರ್.”

“ರಾಜಕಾರಣಿಗಳ ಮನೆ ರೈಡು ಮಾಡಿದ್ರು ಅಷ್ಟೆ ಆಸ್ತಿ ಸಿಗತಕ್ಕಂತ ವಾತಾವರಣ ಇದೆಯಲ್ರಿ. ಆ ದುಡ್ಡನ್ನೆಲ್ಲಾ ನಾವು ಕರ್ನಾಟಕದ ಅಭಿವೃದ್ಧಿಗೆ ಬಳಸಿದ್ರೆ ನಮ್ಮೂರು ಸಿಂಗಾಪುರ ಆಯ್ತಿತ್ತಲ್ರೀ.”

ಇದನ್ನೂ ಓದಿ: ರಾಮ ಕೃಷ್ಣ ಕಪ್ಪುಗಿದ್ರಲ್ಲವ..

“ಹಂಡ್ರೆಡ್ ಪರಸೆಂಟು ನಿಜ ಸಾರ್. ಒಬ್ಬ ರಾಜಕಾರಣಿಗೆ ನಾಲ್ಕು ಜನ ಗಂಡು ಮಕ್ಕಳಿದ್ರೆ ಅವುರಿಗೆಲ್ಲಾ ಮನೆ ಇರತ್ತೆ, ಕಾರಿರತ್ತೆ, ಬೈಕಿರತವೆ ನಾಲ್ಕು ಜನ ಸೊಸೆಯರತ್ರ ತಲಾ ನಾಲ್ಕು ಕೆ.ಜಿ ಚಿನ್ನದ ಒಡವೆಗಳಿರತವೆ. ಇಂಥ ರಾಜಕಾರಣಿಗಳ ಆಸ್ತಿ ಹರಾಜಾಕಿದ್ರೆ ಸಾಕು ಸಾರ್. ನಾವು ದುಬೈ ಶೇಕ್‌ಗಳ ತರ ಇರಬಹುದು.”

“ಆ ದೇಶದ ಜನಗಳನ್ನ ನೋಡ್ತಾಯಿದ್ರೆ ನಾವು ಯಾವತ್ತು ಆತರ ಆಗ್ತಿವಿ ಅನತಕ್ಕಂತ ಭಾವನೆ ಏನಿದೆ ಆ ಬಗ್ಗೆ ಚಿಂತನೆ ಮಾಡಿದ್ರೆ ನಿಜಕ್ಕೂ ಆಶ್ಚರ್ಯ ಆಗತ್ತೆ ಕಂಡ್ರಿ.”

“ನೀವು ಆ ದೇಶದ ಜನ ನೋಡದಿರ್ಲಿ, ಇಲ್ಲೆ ನಮ್ಮ ಸಿಟಿಗಳ ಹೊರಗೆ ಶೆಡ್ಡು ಗುಡುಸ್ಲಾಕ್ಕಂಡಿರೊ ಅಲೆಮಾರಿಗಳ ನೋಡಿದ್ರೆ. ಈ ರಾಜಕಾರಣಿಗಳು ಯಾವತ್ತು ಉದ್ದಾರಾಗಬಾರದು ಅನ್ಸುತ್ತೆ ಸಾರ್. ನೀವು ಮುಖ್ಯಮಂತ್ರಿಯಾಗಿದ್ದಾಗ ಇಂತವರ ಕಡೆ ನೋಡದು ಬಿಟ್ಟು ಬ್ರಾಹ್ಮಣರ ಅಭಿವೃದ್ಧಿ ನಿಗಮ ಮಾಡಿದ್ರಿ ಗೊತ್ತ ಸಾರ್.”

“ನಾನು ಬ್ರಾಹ್ಮಣರ ಅಭಿವೃದ್ಧಿ ನಿಗಮ ಮಾಡಿದ್ದು ಸರಿ ಕಂಡ್ರಿ. ಆ ಜನ ಸಮಾಜಕ್ಕೆ ಏನಾದ್ರು ಮಾಡ್ತರೆ, ಅದೇ ಈ ಊರ ಹೊರಗೆ ಇರತಕ್ಕಂತ ಜನಗಳಿಗೆ ಏನಾದ್ರು ಸಹಾಯ ಮಾಡಿದ್ರೆ ಕುಡುದು ತಿಂದು ಹಾಳು ಮಾಡ್ತರೆ. ಅವರಿಗೆ ಕೊಟ್ಟಿದ್ದೆ ವೇಸ್ಟು ಅನ್ನಂಗೆ ಮಾಡ್ತರೆ, ಅದ್ಕೆ ನಾನು ನಮ್ಮ ಸಹಾಯ ಏನಿದೆ ಅದು ಸದುಪಯೋಗ ಮಾಡಿಕತಕ್ಕಂತ ಜನಗಳನ್ನ ಪತ್ತೆ ಹಚ್ಚಿ ಆ ಕೆಲಸ ಮಾಡಿದೆ.”

“ನೀವು ಮಾಡಿದ್ದು ಬಿಜೆಪಿ ಕಾರ್ಯಕ್ರಮ ಸಾರ್. ನೋಡಿ ಅವುರು ನಿಮ್ಮನ್ನ ಬಳಸ್ಕಂಡ್ರು. ಮೋದಿನು ಬಳಸ್ಕಂಡು ಎಕನಾಮಿಕಲಿ ವೀಕರ್ ಸೆಕ್ಷನ್‌ಗೆ ಮೀಸಲಾತಿ ಬೇಕು ಅಂತ ಪಡದೇಬುಟ್ರು. ಈಗ ಅವುರನ್ನ ಹಿಡಿಯಕ್ಕೆ ಯಾರ ಕೈಲು ಆಗಲ್ಲ ಗೊತ್ತೆ.”

“ಆದ್ರು ಅವುರೆಷ್ಟು ಜನ ಇದಾರ್ರಿ?”

“ಒಬ್ಬರೆ ಸಾಕು ಸಾರ್, ಬ್ರಿಟಿಷರು ಎಷ್ಟು ಜನ ಇದ್ರು? ಇಂಡಿಯಾನೆ ಆಳಲಿಲ್ಲವ?”

“ಆಳಿದ್ರು ಸರಿ, ಆದ್ರೆ ರಾಜ್ಯವನ್ನ ಆಳತಕ್ಕಂತ ಜನಕ್ಕೆ ಅಧಿಕಾರ ಹೋದ್ರೆ ಹಾಗೆ ಇರದು ಕಷ್ಟ ಕಂಡ್ರಿ. ನನಿಗಂತು ಕರ್ನಾಟಕದಲ್ಲಿ ಇರಕ್ಕೆ ಬೇಜಾರು.”

“ಬೇಜಾರಾದ್ರೆ ಒಂದು ಕೆಲಸ ಮಾಡಬಹುದು ಸಾರ್. ಹ್ಯಂಗಿದ್ರೂ ನಮ್ಮ ಸಿನಿಮಾ ರಂಗ ಹಾಳಾಗ್ತಾಯಿದೆ. ಅದಕ್ಕೆ ಜೀವಕೊಡಿ ಸಾರ್, ಹೊಸ ಸಿನಿಮಾ ತಗಿರಿ, ಸಿನಿಮಾ ಟಾಕೀಸ್ ಕಟ್ಟಿ, ಡಿಸ್ಟ್ರಿಬ್ಯೂಷನ್ ಮಾಡಿ.”

“ಅವುನ್ಯಲ್ಲ ಮಾಡಿ ಆಯ್ತಲ್ರಿ, ಆ ಸಿನಿಮಾ ಲೋಕ ಏನು ಅನತಕ್ಕಂತ ಅನುಭವವನ್ನ ಪಡಕೊಂಡೆ ನಾನು ರಾಜಕಾರಣಕ್ಕೆ ಬಂದಿದ್ದು. ಈಗ ರಾಜಕಾರಣದ ಅನುಭವನೂ ಆಯ್ತು, ಪಂಚರತ್ನ ಕೈ ಹಿಡಿತವೆ ಅಂತ ತಿಳಕಂಡಿದ್ದೇ ತಪ್ಪಾಯ್ತು.”

“ಸಾರ್ ನನಿಗೆ ನಿಮ್ಮ ಬಗ್ಗೆ ಏನೋ ಒಂಥರ ಅಭಿಮಾನ ಇತ್ತು. ಅದ್ಯಲ್ಲ ವಂಟೊಯ್ತು ಸಾರ್.”

“ಯಾಕ್ರಿ?”

“ನಿಮ್ಮ ಪಾರ್ಟಿಗೆ ಐವತ್ತೆಂಟು ಸೀಟು ಬಂದಾಗ ಎಸ್ಸೆಂ ಕೃಷ್ಣ ಆಡಳಿತ ರಾಜ್ಯಪಾಲರ ಆಡಳಿತದಂಗಿತ್ತು, ಜನತಾದಳದಲ್ಲಿ ಪಟೇಲ್ರು, ಪ್ರಕಾಶ್, ಸಿಂಧ್ಯ, ಸಿದ್ದರಾಮಯ್ಯ, ವೈದ್ಯನಾಥ ಪಾಟೀಲ, ರಾಯರೆಡ್ಡಿ ಈ ತರ ಒಂದು ದಂಡೇಯಿದ್ದ ಕಾರಣಕ್ಕೆ ಜನತಾ ಪಾರ್ಟಿಗೆ ಅಷ್ಟು ಸೀಟು ಬಂದು ಈಗ ಅವರ್‍ಯಾರೂ ಇಲ್ಲದ ಕಾಲದಲ್ಲಿ ಪಂಚರತ್ನ ತೋರುಸ್ತ ನೀವೊಬ್ರು ಹೋದ್ರೆ ಯಾರು ಓಟಾಕ್ತರೆ ಸಾರ್? ನಿಜವಾಗ್ಲು ಹೇಳ್ತಿನಿ ನಿಮ್ಮ ಕುಟುಂಬದ ಮರ್‍ಯಾದಿಗೋಸ್ಕರ ಹತ್ತೊಂಬತ್ತು ಬಂದವೆ. ಇಲ್ಲಾ ಅಂದಿದ್ರೆ ಹತ್ತೆಯ. ಈಗ್ಲು ನೀವು ಬಿಜೆಪಿ ಕಡಿಕೋದ್ರೆ ನಿಮ್ಮ ಜೊತೆ ಬರವು ಒಂಬತ್ತು ನವಗ್ರಹಗಳು ಮಾತ್ರ.”

“ಮತ್ತೇನು ಮಾಡದೀಗ?”

“ಗ್ಯಾರಂಟಿ ಸಪೊರ್ಟ್ ಮಾಡಿ, ಮುಂದೆ ನೋಡಿ.”

“ಸತ್ರು ಅಂತ ಕೆಲಸ ಮಾಡಲ್ಲ.”

“ಥೂತ್ತೆರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಆರ್‌ಎಸ್‌ಎಸ್ ನೋಂದಣಿಗೆ ಕಾಂಗ್ರೆಸ್ ಕಾನೂನು ತರಲಿದೆ’: ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತ ತಮ್ಮ ಹೇಳಿಕೆಗಳನ್ನು ಮತ್ತು ಕರಾವಳಿ ಕರ್ನಾಟಕದ ಹೂಡಿಕೆಗಳ ಮೇಲೆ ಕೋಮು ಉದ್ವಿಗ್ನತೆ ಪರಿಣಾಮ...

ವಿನೋದ್ ಅದಾನಿ ಸಹಚರರ ವಿರುದ್ಧ ತನಿಖೆ ನಡೆಸಿದ ಇಟಾಲಿಯನ್ ಬ್ಯಾಂಕ್; ಅನುಮಾನಾಸ್ಪದ ‘ಹೆಡ್ಜ್ ಫಂಡ್’ ಹೂಡಿಕೆ ಪತ್ತೆ

ಜನವರಿ 2023 ರಲ್ಲಿ ಹಿಂಡೆನ್‌ಬರ್ಗ್‌ ರಿಸರ್ಚ್ ವರದಿಯ ಬೆನ್ನಲ್ಲೇ, ಇಟಲಿಯ ಅತಿದೊಡ್ಡ ಬ್ಯಾಂಕ್ 'ಇಂಟೆಸಾ ಸ್ಯಾನ್ಪೋಲೊ' ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅವರ ಇಬ್ಬರು ಸಹಚರರನ್ನು...

‘ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ’ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

"ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು, ಅವರನ್ನು ಚರಂಡಿ ಕಡೆಗೆ ಅಥವಾ ಮೋರಿಯ ಅಡಿಗೆ ಎಳೆಯುವುದು 'ಅತ್ಯಾಚಾರ ಅಥವಾ ಅತ್ಯಾಚಾರ ಯತ್ನವಲ್ಲ" ಎಂಬ ಅಲಹಾಬಾದ್‌ ಹೈಕೋರ್ಟ್‌ನ ವಿವಾದಾತ್ಮಕ ತೀರ್ಪಿನ್ನು ಸುಪ್ರೀಂ...

‘ದೇವರಿಗೆ ಧನ್ಯವಾದಗಳು, ದಕ್ಷಿಣ ಇನ್ನೂ ಸ್ವತಂತ್ರವಾಗಿದೆ, ನಾವು ನಿಮ್ಮಿಂದ ಶಕ್ತಿ ಪಡೆಯುತ್ತೇವೆ’: ಕೇರಳ ಸಮ್ಮೇಳನದಲ್ಲಿ ಫಾರೂಕ್ ಅಬ್ದುಲ್ಲಾ ಭಾವುಕ ಮಾತು

"ದೇವರಿಗೆ ಧನ್ಯವಾದಗಳು, ದಕ್ಷಿಣ ಇನ್ನೂ ಸ್ವತಂತ್ರವಾಗಿದೆ, ಮತ್ತು ಅದು ಸ್ವತಂತ್ರವಾಗಿಯೇ ಉಳಿದಿದೆ ಮತ್ತು ಅಭಿವೃದ್ಧಿ ಹೊಂದುತ್ತದೆ ಮತ್ತು ಬಲಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ನಿಮ್ಮಿಂದ ಶಕ್ತಿಯನ್ನು ಪಡೆಯುತ್ತೇವೆ. ನಾವು ನಿಮ್ಮನ್ನು ನೋಡುತ್ತೇವೆ...

ದತ್ತಾಂಶ ಸಂರಕ್ಷಣಾ ಕಾನೂನಿನಡಿಯಲ್ಲಿ ಆರ್‌ಟಿಐ ತಿದ್ದುಪಡಿಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯ ಮೂಲಕ ಪರಿಚಯಿಸಲಾದ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿಯನ್ನು ತಡೆಹಿಡಿಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ ಎಂದು 'ಬಾರ್ ಮತ್ತು ಬೆಂಚ್' ವರದಿ ಮಾಡಿದೆ. ಸಾರ್ವಜನಿಕ ಹಿತಾಸಕ್ತಿಯ ಆಧಾರದ...

ಅಜಿತ್ ಪವಾರ್ ಸಾವು : ಎರಡೂ ಫ್ಲೈಟ್ ರೆಕಾರ್ಡರ್‌ಗಳು ಹಾನಿಗೊಳಗಾಗಿವೆ ಎಂದ ವಿಮಾನಯಾನ ಸಚಿವಾಲಯ

ಬಾರಾಮತಿಯಲ್ಲಿ ಜನವರಿ 28 ರಂದು ಅಜಿತ್ ಪವಾರ್ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಅಪಘಾತಕ್ಕೀಡಾದ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ಮಂಗಳವಾರ (ಫೆ.17) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ವಿಮಾನದ ಎರಡೂ ಸ್ವತಂತ್ರ ಫ್ಲೈಟ್...

ರಾಜಸ್ಥಾನ| ಮೊದಲ ಬಜೆಟ್‌ನಲ್ಲಿ ಪಕ್ಷವು ‘ಗಂಡು ಮಗುವಿಗೆ ಜನ್ಮ ನೀಡಿದೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ

ರಾಜಸ್ಥಾನದ ಬಿಜೆಪಿ ಶಾಸಕ ಬಹದ್ದೂರ್ ಸಿಂಗ್ ಕೋಲಿ, ತಮ್ಮ ಪಕ್ಷ ಮತ್ತು ಕಾಂಗ್ರೆಸ್ ಮಂಡಿಸಿದ ಬಜೆಟ್‌ಗಳನ್ನು ಗಂಡು ಮತ್ತು ಹೆಣ್ಣು ಮಗುವಿನ ಜನನಕ್ಕೆ ಹೋಲಿಸಿದ ಬಳಿಕ ವಿಧಾನಸಭೆಯಲ್ಲಿ ವಿವಾದ ಭುಗಿಲೆದ್ದಿತು. ರಾಜ್ಯ ಬಜೆಟ್ ಮೇಲಿನ...

ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಖ್ ರೆಹಮಾನ್ ಪ್ರಮಾಣವಚನ ಸ್ವೀಕಾರ

ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ನಾಯಕ ತಾರಿಖ್ ರೆಹಮಾನ್ ಅವರು ಮಂಗಳವಾರ (ಫೆ.17) ಪ್ರಮಾಣ ವಚನ ಸ್ವೀಕರಿಸಿದರು. ಪದಗ್ರಹಣ ಕಾರ್ಯಕ್ರಮವು ಸಂಪ್ರದಾಯದಂತೆ ಅಧ್ಯಕ್ಷೀಯ ಅರಮನೆಯಲ್ಲಿ ನಡೆಯುವ ಬದಲು, ಢಾಕಾದ ರಾಷ್ಟ್ರೀಯ...

ಮಹಾರಾಷ್ಟ್ರ| ಪರೀಕ್ಷೆಯ ಸಮಯದಲ್ಲಿ ಸಾಮೂಹಿಕ ನಕಲಿಗೆ ಬೆಂಬಲಿಸಿದ 5 ಜನ ಶಿಕ್ಷಕರ ಅಮಾನತು

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೇಂದ್ರವೊಂದರಲ್ಲಿ ನಡೆದ 12 ನೇ ತರಗತಿಯ ಹೆಚ್‌ಎಸ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಕಲು ಮಾಡಲು ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಸಿಕ್ಕಿಬಿದ್ದ ಐದು ಶಿಕ್ಷಕರನ್ನು...

ಬಿಜೆಪಿ ವಿರುದ್ಧ 40% ಕಮಿಷನ್ ಜಾಹೀರಾತು : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್‌

ಜಾಹೀರಾತಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್ ಮಂಗಳವಾರ (ಫೆ.17) ರದ್ದುಗೊಳಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ ಬಾರ್ & ಬೆಂಚ್ ವರದಿ ಮಾಡಿದೆ. ಪ್ರಕರಣ ರದ್ದುಕೋರಿ...