Homeಕರ್ನಾಟಕಹಿಂದುತ್ವದ ಅಜೆಂಡಾಗಳಿಗೆ ಬಲಿಯಾಗುತ್ತಿರುವ ‘ಹಿಂದೂ’ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು

ಹಿಂದುತ್ವದ ಅಜೆಂಡಾಗಳಿಗೆ ಬಲಿಯಾಗುತ್ತಿರುವ ‘ಹಿಂದೂ’ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು

- Advertisement -
- Advertisement -

ಕಳೆದ ಆರೇಳು ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಸಂಬಂಧಿ ಗೊಂದಲಗಳು ಹೆಚ್ಚು ಬಾಧಿಸುತ್ತಿರುವುದು ಮತ್ತು ಮುಂದೆ ಬಾಧಿಸಲಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು. ಈಗಾಗಲೇ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ನಡುವೆ ದೊಡ್ಡ ಕಂದಕ ನಿರ್ಮಾಣವಾಗಿದೆ. ಈ ಅಸಮಾನತೆಯನ್ನು ಇಲ್ಲವಾಗಿಸಿವುದು ಶಿಕ್ಷಣ ಕ್ಷೇತ್ರದಲ್ಲಿ ನಡೆಯಬೇಕಿರುವ ಅಗತ್ಯದ ಕೆಲಸ. ಆದರೆ ದಿನೇ ದಿನೇ ಈ ಅಂತರ ಹೆಚ್ಚಾಗುತ್ತಲೇ ಇದೆ.

ರಾಜ್ಯದ ಯೂನಿವರ್ಸಿಟಿಗಳಿಂದ ಹೊರಗೆ ಬಂದ ತಕ್ಷಣ ಒಂದೋ ಉದ್ಯೋಗ ಅಥವಾ ಉನ್ನತ ಶಿಕ್ಷಣಕ್ಕೆ ಹೋಗಬೇಕು. ಆದರೆ ಈ ಎರಡಕ್ಕೂ ಬೇಕಾದ ಕೌಶಲ್ಯವನ್ನು ಹೊಂದಿರದೇ ಇದ್ದಾಗ ವಿದ್ಯಾರ್ಥಿಗಳು ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗಿ ಬರುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈಗಾಗಲೇ ದೇಶ ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿದೆ. ಆದರೆ ಉದ್ಯೋಗಗಳು ಇಲ್ಲವೆಂದಲ್ಲ. ಆದರೆ ಈ ಉದ್ಯೋಗ ಪಡೆಯಲು ಬೇಕಾದ ಕೌಶಲ್ಯಗಳ ಕೊರತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಇದೆ. ಅಲ್ಲದೇ ಈ ಕೌಶಲ್ಯಗಳನ್ನು ಬೋಧಿಸುವ ಪಠ್ಯ ಕ್ರಮವೂ ನಮ್ಮಲ್ಲಿ ಇಲ್ಲ.

ಇದನ್ನೂ ಓದಿ: ಶಾಲೆಗಳಲ್ಲಿ ಹಿಜಾಬ್‌‌‌‌ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

ಗ್ರಾಮೀಣ ಭಾಗದಲ್ಲಿ ಇರುವ ಖಾಸಗಿಯೂ ಸೇರಿದಂತೆ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್ ಮಾತನಾಡುವುದಿಲ್ಲ. ವಿದ್ಯಾರ್ಥಿಗಳನ್ನು ಬಿಡಿ, ಉಪನ್ಯಾಸಕರೂ ತರಗತಿ ಮುಗಿದ ಮೇಲೆ ಇಂಗ್ಲೀಷ್‌ನಲ್ಲಿ ಮಾತನಾಡುವುದಿಲ್ಲ. ತರಗತಿಯಲ್ಲಿ ಪಾಠ ಮಾಡಲು ಬಳಸುವ ಇಂಗ್ಲೀಷ್ ಕೂಡ ಉತ್ತಮವಾಗಿಲ್ಲ.
ಈ ವಿದ್ಯಾರ್ಥಿಗಳು ಉದ್ಯೋಗ ನಿಮಿತ್ತ ಉನ್ನತ ಸಂಸ್ಥೆಗಳಿಗೆ ಹೋಗುವಾಗ ಅವರ ಸಂವಹನ ಸಾಮರ್ಥ್ಯ ನೋಡಿ ಬಾಗಿಲನ್ನು ಮುಚ್ಚುತ್ತಾರೆ. ಇವರಲ್ಲಿ ಸ್ಕಿಲ್ ಇದ್ದೂ, ಜ್ಞಾನ ಇದ್ದರೂ ಅದನ್ನು ಹೊರಗೆ ಹಾಕುವ ‘Presentation Skill’ ನ ಕೊರತೆ ಇರುತ್ತದೆ.

ವಿಶ್ವವಿದ್ಯಾಲಯಲ್ಲಿ ಒಬ್ಬ ಪಿಎಚ್‌ಡಿ ವಿದ್ಯಾರ್ಥಿಯ ಮೌಖಿಕ ಪರೀಕ್ಷೆಯಲ್ಲಿ ಭಾಗವಹಿಸಿದ್ದೆ. ಆಕೆ ತನ್ನ ಪಿಪಿಟಿಯಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಹೆಸರನ್ನು ಉಲ್ಲೇಖ ಮಾಡಿದ್ದರು. ಪರೀಕ್ಷಕರು ಆಕೆಯಲ್ಲಿ ‘ಕಮಲಾದೇವಿ ಚಟ್ಟೋಪಾಧ್ಯಾಯ ಯಾರು?’ ಎಂದು ಕೇಳಿದರು. ನಾಲ್ಕೈದು ವರ್ಷ ಸಂಶೋಧನೆ ನಡೆಸಿರುವ ವಿದ್ಯಾರ್ಥಿಗೆ ಕಮಲಾದೇವಿ ಚಟ್ಟೋಪಾಧ್ಯಾಯ ಯಾರು ಎಂದೇ ಗೊತ್ತಿರಲಿಲ್ಲ! ಆದರೆ ಅವರ ಸಂಶೋಧನಾ ಪ್ರಬಂಧವನ್ನು ಪಿಎಚ್‌ಡಿ ಪದವಿಗೆ ಸ್ವೀಕರಿಸಲಾಯಿತು!

ಹಾಗಾದರೆ ನಮ್ಮ ವಿವಿಗಳಿಂದ ಹೊರಬರುವ ಸಂಶೋಧನೆಗಳ ಗುಣಮಟ್ಟ ಹೇಗಿರಬಹುದು? ಒಂದು ವೇಳೆ ಇದೇ ವಿದ್ಯಾರ್ಥಿಗಳು ಮುಂದೆ ಶಿಕ್ಷಕರಾದರು ಮಕ್ಕಳ ಗತಿ ಏನು?

ನಾನು ಎಂ.ಎ ಓದುವಾಗ ಸಂಶೋಧನ ವಿಧಾನಗಳ ಬಗ್ಗೆ ಇರುವ ಪಾಠ ಯಾವತ್ತೂ ನೆನಪಲ್ಲಿ ಉಳಿಯಲೇ ಇಲ್ಲ. ತರಗತಿಯ ವಿದ್ಯಾರ್ಥಿಗಳಿಗೆ ‘ಸಂಶೋಧನೆ ಎಂದರೇನು? ಸಂಶೋಧನೆ ಯಾಕೆ ಮಾಡಬೇಕು?’ ಎಂಬ ಅತ್ಯಂತ ಬೇಸಿಕ್ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದ ಹಾಗೆ ವಿದ್ಯಾರ್ಥಿಗಳನ್ನು ತಯಾರಿ ಮಾಡಲಾಗಿದೆ. ಹೀಗಿರುವ ವಿದ್ಯಾರ್ಥಿಗಳು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಒಳಗೆ ಹೇಗೆ ಪ್ರವೇಶ ಪಡೆಯಲು ಸಾಧ್ಯ?

ದಿನೇ ದಿನೇ ಸಂಶೋಧನಾ ಕ್ಷೇತದಲ್ಲಿ ಹೊಸ ಹೊಸ ಬದಲಾವಣೆಗಳು ನಡೆಯುತ್ತಿವೆ. ಸಂಶೋಧನೆಯಲ್ಲಿ ಬಳಕೆಯಾಗುವ ಪರಿಭಾಷೆಗಳು ಬದಲಾಗುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಅನ್ವೇಷಣೆಗಳು ನಡೆಯುತ್ತಿವೆ. ಆದರೆ ಇದ್ಯಾವುದೂ ನಮ್ಮ ಮಕ್ಕಳ ಅರಿವಿಗೆ ಬರುತ್ತಿಲ್ಲ. ತರಗತಿಗಳು ಅಪ್ಡೇಟ್ ಆಗುತ್ತಿಲ್ಲ. ಶಿಕ್ಷಕರು ಹೊಸತನಕ್ಕೆ ತೆರೆದುಕೊಳ್ಳುತ್ತಿಲ್ಲ.

ಇದನ್ನೂ ಓದಿ: ಹಿಜಾಬ್ ವಿವಾದದ ಸುತ್ತ ದ್ವೇಷದ ಹುತ್ತ; ಹಿಂದುತ್ವದಲ್ಲಿ ಬಿರುಕು ಮತ್ತು ನಂಜಿನ ನೀರಡಿಕೆ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇರುವ ಒಂದು ಒಳ್ಳೆಯ ಅವಕಾಶ ಎಂದರೆ ಭಿನ್ನ ಭಾಷಿಲ ಮತ್ತು ಸಾಂಸ್ಕೃತಿಕ ವಲಯದಲ್ಲಿ ಬದುಕಲು ಇರುವ ಅವಕಾಶ. ನಾನು ಏಳೆಂಟು ಭಾಷೆಗಳಲ್ಲಿ ಮಾತನಾಡಬಲ್ಲೆ ಎಂಬುದು ತರಗತಿಯ ಹೊರಗೆ ಕಲಿತ ಪಾಠ. ಜಾತಿ, ಭಾಷಿಕ ಸಮುದಾಯಗಳು, ಗ್ರಾಮೀಣ ಬದುಕು, ಜಾನಪದ, ಸಮಾಜದ ಬೇರೆ ಬೇರೆ ಸ್ತರಗಳನ್ನು ಅರಿತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮಾಜ ಶಾಸ್ತ್ರವನ್ನು ಅರಿಯಲು ಸುಲಭವಾಗುತ್ತದೆ. ಈ ವಿಚಾರದಲ್ಲಿ ನಗರ ಭಾಗದ ವಿದ್ಯಾರ್ಥಿಗಳು ಹಿಂದುಳಿಯುತ್ತಾರೆ.

ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಮುಖ್ಯವಾಗಿ ಇರಬೇಕಾದ ಅಂಶವೊಂದು ಇರುವುದಿಲ್ಲ. ಅದು ಲೋಕ ಜ್ಞಾನವನ್ನು ತಮ್ಮ ಶೈಕ್ಷಣಿಕ ಕೆಲಸದಲ್ಲಿ ಬಳಸಿಕೊಳ್ಳುವ ಕ್ರಮ ಗೊತ್ತಿರುವುದಿಲ್ಲ. ಇದನ್ನು ನೀಡಬೇಕಾದ ಕೆಲಸ ಶಿಕ್ಷಣ ಸಂಸ್ಥೆಗಳದ್ದು. ಅದಕ್ಕೆ ಬೇಕಾದ ಪರಿಭಾಷೆಗಳನ್ನು ಮಕ್ಕಳಿಗೆ ಹೇಳಿಕೊಡಬೇಕು.

ಈ ಎಲ್ಲಾ ಸಮಸ್ಯೆಗಳ ಮಧ್ಯೆ ಹಿಂದುತ್ವ ಶಿಕ್ಷಣ ಸಂಸ್ಥೆಗಳಲ್ಲಿ ತಂದಿಡುತ್ತಿರುವ ಗೊಂದಲಗಳು ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಬದುಕನ್ನು ಸಂಪೂರ್ಣವಾಗಿ ನಾಶ ಮಾಡಲು ಸಿದ್ದವಾಗಿದೆ.

ಕೇವಲ ಹಿಜಾಬ್ ಸಮಸ್ಯೆಯನ್ನೇ ತೆಗೆದುಕೊಳ್ಳೋಣ. ಇದು ಕೇವಲ ಭಿನ್ನ ಕೋಮಿನ ಮಕ್ಕಳ ಮಧ್ಯೆ ದ್ವೇಷವನ್ನು ಹುಟ್ಟಿಸಿದ್ದು ಮಾತ್ರವಲ್ಲ, ಅದು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ಅಪಾಯಕ್ಕೆ ಒಡ್ಡಿದೆ.

ಇದನ್ನೂ ಓದಿ: ಹಿಂದುತ್ವ ರಾಜಕಾರಣ; ಹಿಜಾಬಿನ ಅಪರಾಧೀಕರಣ

1. ಹಿಂದುತ್ವ, ಹಿಜಾಬ್, ಜಟ್ಕಾ ಕಟ್, ಮಂದಿರ – ಮಸೀದಿ… ಇವೆಲ್ಲವೂ ಈ ಶತಮಾನದ ವಿದ್ಯಾರ್ಥಿ ಸಮುದಾಯವನ್ನು ತಮ್ಮ ಶೈಕ್ಷಣಿಕ ಜೀವನದ ಬಗ್ಗೆ ನಿರ್ಲಕ್ಷ್ಯ ತಾಳುವಂತೆ ಮಾಡಿದೆ. ಬಿಜೆಪಿ ಹಾಗೂ ಸಂಘ ಪರಿವಾರ ಹರಡುತ್ತಿರುವ ದ್ವೇಷದ ನರೆಟಿವ್‌ಗಳನ್ನು ಹಂಚಲು ಸ್ವತಂತ್ರ ಆಲೋಚನೆ ಮಾಡಬೇಕಾದ ವಿದ್ಯಾರ್ಥಿಗಳು ಬಳಕೆಯಾಗುತ್ತಿದ್ದಾರೆ.

2. ಸಮಾಜವನ್ನು ಅರ್ಥ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಾಮರ್ಥ್ಯ ಕಮ್ಮಿಯಾಗಿದೆ. ಹಿಂದುತ್ವ ಹೇಳಿಕೊಡುವ ಸಮಾಜ ವ್ಯವಸ್ಥೆ ಅಸ್ತಿತ್ವದಲ್ಲಿಯೇ ಇಲ್ಲ. ಅದು ಕಲಿಸುವ ಸಂಸ್ಕೃತಿ ನೆಲಮೂಲದ ಸಂಸ್ಕೃತಿಯೇ ಅಲ್ಲ. ಹೀಗಿರುವಾಗ ಇಸ್ಲಾಂ ಜೊತೆಗೆ ಎಂದೆಂದಿಗೂ ಬೆಸೆದುಕೊಳ್ಳುವ ನಾಥ ಪಂಥ, ದತ್ತ ಪಂಥಗಳು ನಮ್ಮ ಮಕ್ಕಳಿಗೆ ಅರ್ಥವಾಗದೆ ಹೋಗಬಹುದು.

3. ಭಾರತವನ್ನು ವೈವಿಧ್ಯತೆಯ ಕಾರಣಕ್ಕಾಗಿ ವಿಶಿಷ್ಟ ದೇಶ ಎಂದು ನಾವು ಪರಿಗಣಿಸುತ್ತೇವೆ. ಈ ವೈವಿಧ್ಯತೆಯನ್ನು ಅರಿಯದೆ, ಒಪ್ಪಿಕೊಳ್ಳದೇ ದೇಶವನ್ನು, ಸಂಸ್ಕೃತಿಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ!

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕಾರ್ಕಳ-ಹೆಬ್ರಿ: ಅಹಿಂಸೆಯ ಜೈನ ಕಾಶಿಯಲ್ಲಿ ಹಿಂಸೋನ್ಮಾದದ ಹಿಂದುತ್ವ ಕಾಳಗ!

4. ಹಿಜಾಬ್ ತಕರಾರಿನ ಜೊತೆ ಹುಟ್ಟಿಕೊಳ್ಳುವ ಅನ್ಯಮತ ದ್ವೇಷ, ಜಾತೀಯತೆ ಮಕ್ಕಳಿಗೆ ಭಿನ್ನ ಸಮುದಾಯಗಳ ಜೊತೆಗೆ ಬದುಕುವ ಸುವರ್ಣ ಅವಕಾಶ ಇಲ್ಲದಾಗಿತ್ತದೆ. ಈಗ ಮುಸ್ಲಿಂ ಮತ್ತು ಕ್ರೈಸ್ತ ವಿದ್ಯಾರ್ಥಿ ಜೊತೆಗೆ ಮಾತನಾಡದೆ ಇರುವ ಒಬ್ಬ ಹಿಂದೂ ವಿದ್ಯಾರ್ಥಿಗೆ ಬ್ಯಾರಿ ಭಾಷೆ, ಮಲಯಾಳಂ ಭಾಷೆ, ಕೊಂಕಣಿ ಭಾಷೆ ಕಲಿಯುವ ಅವಕಾಶ ತಪ್ಪಿ ಹೋಗುತ್ತದೆ.

5. ಒಬ್ಬ ಭಿನ್ನ ಸಂಸ್ಕೃತಿಯ, ಭಾಷಿಕ ಸ್ನೇಹಿತ ಇದ್ದರೆ ನಾವೊಂದು ಬೇರೆಯೇ ಸಂಸ್ಕೃತಿಯನ್ನು ತಿಳಿದುಕೊಂಡ ಹಾಗೆ. ದೇಶದ ‘ಆತ್ಮ’ ಕೂಡಾ ಇದುವೇ ಆಗಿದೆ.

6. ಕೋಮುವಾದ ಹೇಳುವ ಕಥನಗಳು ಎಲ್ಲವೂ ಮಕ್ಕಳ ಸ್ವತಂತ್ರ ಆಲೋಚನೆಯನ್ನು ನಾಶ ಮಾಡುತ್ತವೆ.
“ಮಂಗಳೂರಿನ ಬೆಳಿಯ ಪಲ್ಲಿ ಒಂದು ದೇವಸ್ಥಾನ” ಎಂದು ಹಿಂದುತ್ವ ಹೇಳಿದರೆ ನಮ್ಮ ವಿದ್ಯಾರ್ಥಿಗಳು ಅದನ್ನು ನಂಬಿದರೆ “ಹೌದಾ? ಆಗಿದ್ದರೆ ಅಲ್ಲಿ ಏನಿದೆ? ಅದರ ಇತಿಹಾಸ ಏನು….” ಈ ಯಾವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಮಕ್ಕಳು ಯೋಚನೆ ಮಾಡದೆ ಒಪ್ಪಿಕೊಳ್ಳಬೇಕು ಎಂಬುದೇ ಕೋಮುವಾದದ ದೊಡ್ಡ ತಂತ್ರ! ಹೀಗಾದರೆ ಮಕ್ಕಳು ಶಿಕ್ಷಣ ಪಡೆದು ಮಾಡುವುದಾದರೂ ಏನನ್ನು?

5. ಮಕ್ಕಳಿಗೆ ಪಾಠ ಹೇಳುವ ಕ್ರಮ, ಪಠ್ಯ ಮಾತ್ರವಲ್ಲ ಶಿಕ್ಷಣ ಸಂಸ್ಥೆಗಳಲ್ಲಿಯೇ ಅನೇಕ ಸಮಸ್ಯೆಗಳು ಇವೆ. ತಮಗೆ ಪಾಠ ಮಾಡುತ್ತಿರುವ ಶೈಕ್ಷಣಿಕ ಹಿನ್ನಲೆ, ಬೋಧನೆಯ ಗುಣಮಟ್ಟ ಇದ್ಯಾವುದರ ಬಗ್ಗೆ ಮಕ್ಕಳು ಪ್ರಶ್ನೆ ಎತ್ತುತ್ತಿಲ್ಲ! ಸ್ಕಾಲರ್ ಶಿಪ್ ಇಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ. ಯುಜಿಸಿಯು ಮಾನವಿಕ ವಿಭಾಗದ ಅನೇಕ ವಿಷಯಗಳಿಗೆ ಫೆಲೋಶಿಪ್ ಕಡಿಮೆ ಮಾಡಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಚಿಂತಿಸಲು ಹೋಗದ ಮಕ್ಕಳು ತಮ್ಮ ಪಕ್ಕ ಕೂರುವ ವಿದ್ಯಾರ್ಥಿನಿ ಹಾಕುವ ಹಿಜಾಬ್ ಅನ್ನು ಪ್ರಶ್ನೆ ಮಾಡುತ್ತಾರೆ!

ಇದನ್ನೂ ಓದಿ: ಭಗತ್ ಸಿಂಗ್ ಬದಲು ಹೆಡಗೇವಾರ್ ಪಾಠ; ಮಕ್ಕಳ ಮೇಲೆ ಹಿಂದುತ್ವದ ಪ್ರಯೋಗ

6. ಕೋಮುವಾದ ಉಡುಪಿ, ಸುಳ್ಯ, ಪುತ್ತೂರು….ಇಂಥ ಗ್ರಾಮೀಣ ಭಾಗದ ವಿದ್ಯಾರ್ಥಿಳನ್ನು ಹೆಚ್ಚು ಟಾರ್ಗೆಟ್ ಮಾಡುತ್ತವೆ. ಈ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಬಡ, ಕೆಳ ಮಧ್ಯಮ ವರ್ಗದ ವಿದ್ಯಾರ್ಥಿಗಳು. ಇವರನ್ನು ಶಿಕ್ಷಣದ ಕಡೆ ಗಮನ ನೀಡದಂತೆ ಮಾಡಿ, ಸ್ವತಂತ್ರ ಚಿಂತನೆ ಮಾಡದ ಹಾಗೆ ಮಾಡಿ, ಪ್ರಶ್ನೆಗಳು ಹುಟ್ಟದ ಹಾಗೆ ಮಾಡಿ ಯಾವ ಸೃಜನಾತ್ಮಕ ಕೆಲಸದಲ್ಲೂ ತೊಡಗದ ಹಾಗೆ ಮಾಡುತ್ತಿದೆ.

7. ಕೋಮುವಾದ ಗ್ರಾಮೀಣ ಮತ್ತು ನಗರ ಕೇಂದ್ರಿತ ವಿದ್ಯಾರ್ಥಿಗಳ ನಡುವಿನ ಅಸಮಾನತೆಯನ್ನು ಹೆಚ್ಚು ಮಾಡುತ್ತಿದೆ. ಇದರ ಪರಿಣಾಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಾರೆ.

ಒಟ್ಟಾರೆಯಾಗಿ, ಹೊಸ ಪಠ್ಯ ಪುಸ್ತಕ ವಿವಾದ ಸೇರಿದಂತೆ ಸಧ್ಯ ನಾಡಿನಲ್ಲಿ ನಡೆಯುತ್ತಿರುವ ಎಲ್ಲಾ ಗೊಂದಲಗಳು ಗ್ರಾಮೀಣ ಮಕ್ಕಳು ಬದುಕನ್ನು ನಾಶ ಮಾಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕೋಮುವಾದವನ್ನು ಸೃಷ್ಟಿ ಮಾಡೋರು ಅಶಿಕ್ಷಿತ ಸಂಘಟನೆ ಗಳ ಸದಸ್ಯರು , ಮೊದಲು ಅವರನ್ನು ಶಿಕ್ಷಿತರನ್ನಾಗಿ ಮಾಡಬೇಕು….. ಕಾನೂನಿನ ಸರಿಯಾದ ಬಳಕೆ ಯಾದರೆ ಸಂಘರ್ಷ ಗಳು ನಡೆಯುವುದಿಲ್ಲ.

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...