Homeಮುಖಪುಟಯೋಗವಾಗಲಿ, ಭಗವದ್ಗೀತೆಯಾಗಲಿ ವೈದಿಕರ ಅಥವಾ ಹಿಂದೂಗಳ ಕೊಡುಗೆ ಅಲ್ಲ -ಫುಲ್ಗೇಂದ ಸಿನ್ಹಾ

ಯೋಗವಾಗಲಿ, ಭಗವದ್ಗೀತೆಯಾಗಲಿ ವೈದಿಕರ ಅಥವಾ ಹಿಂದೂಗಳ ಕೊಡುಗೆ ಅಲ್ಲ -ಫುಲ್ಗೇಂದ ಸಿನ್ಹಾ

- Advertisement -
- Advertisement -

ಪುಟಕ್ಕಿಟ್ಟ ಪುಟಗಳು : ಯೋಗೇಶ್ ಮಾಸ್ಟರ್

ಭಾರತದಲ್ಲಿ ಭಗವದ್ಗೀತೆ ಮತ್ತು ಯೋಗವನ್ನು ಪರ ವಿರೋಧಗಳ ನೆಲೆಗಟ್ಟುಗಳಿಂದಲ್ಲದೇ ಮರು ಸಂಶೋಧನೆ ಮಾಡಿದ ವಿದ್ವಾಂಸ ಫುಲ್ಗೇಂದ ಸಿನ್ಹಾ. ಅವರು ಅಮೆರಿಕೆಯಲ್ಲಿ ಸ್ವಯಂ ಯೋಗಾಚಾರ್ಯ ರಾಗಿದ್ದ ಕಾರಣದಿಂದ ಯೋಗದ ಮೂಲವನ್ನು ಹುಡುಕಲು ಹೊರಟ ಅವರು ಅದರ ಜೊತೆಜೊತೆಗೇ ಗೀತೆಯ ಮೂಲವನ್ನೂ ಗುರುತಿಸುವ ಯತ್ನ ಮಾಡಿದರು.

ಇದರಿಂದ ಗೀತಾ- ಯಾಸ್ ಇಟ್ ವಾಸ್ ಎಂಬ ಮಹತ್ವಪೂರ್ಣ ಕೃತಿಯ ರಚನೆಯಾಯ್ತು. ಗೀತಾ – ಯಾಸ್ ಇಟ್ ಈಸ್ ಎಂಬ ಇಸ್ಕಾನ್ ಸಂಸ್ಥಾಪಕರ ಕೃತಿಯೊಂದಿದೆ. ಈ ಕೃತಿಗಳ ನಡುವಿನ ವ್ಯತ್ಯಾಸವೆಂದರೆ, ಇಸ್ಕಾನ್ ಕೃತಿ ಮಂಪರನ್ನು ತರಿಸುತ್ತದೆ. ಸಿನ್ಹಾರವರ ಸಂಶೋಧನಾ ಕೃತಿ ಮಂಪರನ್ನು ಹರಿಸುತ್ತದೆ.

ಸಿನ್ಹಾರವರ ಈ ಕೃತಿ ಮಹತ್ವದ್ದು ಎನಿಸುವುದಕ್ಕೆ ಕಾರಣಗಳಿವೆ. ಯಾವುದೇ ನೆಲದ ಸಾಂಸ್ಕೃತಿಕ ರೂಢಿಗಳು ಮತ್ತು ಧಾರ್ಮಿಕ ನಂಬುಗೆಗಳು ಸಮಾಜದ ಪ್ರಗತಿಗೆ ಅಥವಾ ಅವನತಿಗೆ ಹೇಗೆ ಕಾರಣವಾಗುತ್ತದೆ ಎಂದು ವಿವರಿಸುತ್ತದೆ. ಯೋಗವಾಗಲಿ, ಭಗವದ್ಗೀತೆಯಾಗಲಿ ವೈದಿಕರ ಅಥವಾ ಹಿಂದೂಗಳ ಕೊಡುಗೆ ಹೇಗೆ ಅಲ್ಲ ಎಂದು ಪ್ರತಿಪಾದಿಸುತ್ತದೆ ಮತ್ತು ಅತಿ ಮುಖ್ಯವಾಗಿ ಮೂಲದಲ್ಲಿ ಇದ್ದಂತಹ ಭಗವದ್ಗೀತೆ ಏನು? ಯಾವ್ಯಾವ ಪ್ರಭಾವಗಳಿಂದ ಮತ್ತು ಯಾವ್ಯಾವ ನುಸುಳುವಿಕೆಗಳಿಂದ ಈಗ ನಾವು ಕಾಣುತ್ತಿರುವ ಭಗವದ್ಗೀತೆಯಾಗಿದೆ ಎಂದು ಆಧಾರಸಹಿತ ವಿವರಿಸುತ್ತಾರೆ.

ಚಿಂತನೆ ಮತ್ತು ಭಾವನೆಗಳ ಪ್ರಭಾವವು ದೇಶದ ಪ್ರಗತಿಗೆ ಹೇಗೆ ಕೆಲಸ ಮಾಡುತ್ತದೆ ಎಂದು ಯೋಚಿಸುತ್ತಾರೆ ಸಿನ್ಹಾ. ಕೆಲವು ದೇಶಗಳಿಗೆ ಸಂಪನ್ಮೂಲಗಳ ಕೊರತೆ ಇದ್ದು, ಎಲ್ಲವೂ ವ್ಯತಿರಿಕ್ತವಾಗಿರುವಂತಹ ವಾತಾವರಣವೇ ಇದ್ದರೂ ಔದ್ಯೋಗಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸುತ್ತಾರೆ. ಆದರೆ, ಭಾರತದಂತಹ ದೇಶವು ಎಲ್ಲವೂ ಇದ್ದು ಹಾಗೆ ಸಾಧಿಸಲಾಗದಿರುವುದಕ್ಕೆ ಕಾರಣ ಏನು ಎಂದು ನೋಡುತ್ತಾ, ಸಿನ್ಹಾ ಗೀತೆಯ ಕಡೆ ನೋಡುತ್ತಾರೆ. ಕೆಲಸ ಮಾಡು ಆದರೆ ಪ್ರತಿಫಲವನ್ನು ಅಪೇಕ್ಷಿಸಬೇಡ. ಬಯಕೆ ದುಃಖಕ್ಕೆ ಕಾರಣ, ಬಯಕೆಯನ್ನು ಹೊಂದಬೇಡ. ವಿಧಿ ಲಿಖಿತದಂತೆ ಎಲ್ಲವೂ ನಡೆಯುತ್ತದೆ. ಪ್ರಾಪಂಚಿಕ ವ್ಯವಹಾರ ನಶ್ವರ, ಆಧ್ಯಾತ್ಮಿಕತೆಯೇ ಉನ್ನತ ಮತ್ತು ಅಮರ. ನೀನು ಏನೇ ಮಾಡಿದರೂ ದೇವರು ಅನುಗ್ರಹಿಸದಿದ್ದರೆ ಎಲ್ಲವೂ ವ್ಯರ್ಥ. ದುಃಖ, ಸಂತೋಷ, ಯಶಸ್ಸು ಮತ್ತು ವೈಫಲ್ಯ ಎಲ್ಲವೂ ದೇವರ ಇಚ್ಛೆ. ಬೇರೂರಿರುವ ಇಂತಹ ವಿಚಾರಗಳು ಯಾವ ರೀತಿಯಲ್ಲಿ ಮನುಷ್ಯನ ಸಂಕಲ್ಪ ಮತ್ತು ಸಾಧನೆಗೆ ನ್ಯಾಯ ಸಂದಾಯ ಮಾಡುತ್ತದೆ ಎಂಬುದು ಸಿನ್ಹಾರ ಚಿಂತನೆ. ರಾಷ್ಟ್ರೀಯತೆಯು ಧಾರ್ಮಿಕತೆಯ ಮೇಲೆ ಅವಲಂಬಿತವಾದರೆ ಎಂತಹ ಪ್ರಮಾದಗಳನ್ನು ಮತ್ತು ವೈಫಲ್ಯಗಳನ್ನು ಕಾಣಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ.

ಕಪಿಲ ಪತಂಜಲ ಗೌತಮ ಜಿನರೆಲ್ಲರ ತಾತ್ವಿಕತೆಗಳು ಭಾರತದ ಸಿದ್ಧಾಂತಕ್ಕೆ ಕಾಣ್ಕೆಗಳನ್ನು ನೀಡಿದವು ಎನ್ನುತ್ತಲೇ ವ್ಯಾಸನ ಭಗವದ್ಗೀತೆಯಲ್ಲಿ ಅವೆಲ್ಲವೂ ಹೇಗೆ ನುಸುಳಿದವು ಎಂಬುದು ಒಂದು ಸಸ್ಪೆನ್ಸ್ ಥ್ರಿಲ್ಲರ್.
ಹದಿನೆಂಟು ಅಧ್ಯಾಯಗಳ ಭಗವದ್ಗೀತೆಯಲ್ಲಿ ಹದಿನೈದು ಅಧ್ಯಾಯಗಳೇ ಕಲಬೆರಕೆಯವು ಎಂದರೆ ಮರ್ಮಾಘಾತವಾಗದೇ!

ಮೂಲ ಗೀತ ಮೊದಲನೆಯ ಅಧ್ಯಾಯದ 28ನೇ ಶ್ಲೋಕದಿಂದ ಆರಂಭವಾಗುತ್ತದೆ. ನಂತರ ಮೊದಲ 3 ಅಧ್ಯಾಯಗಳಷ್ಟೇ ಅಸಲಿ ಎನ್ನುತ್ತಾ ಕ್ರಿಶ 800 ರಲ್ಲಿ ಬ್ರಾಹ್ಮಣವಾದವನ್ನು ಮತ್ತು ಅದ್ವೈತ ಸಿದ್ಧಾಂತವನ್ನು ಹೇಗೆ ತರಲಾಯ್ತು ಎಂದು ಕೂಲಂಕುಷವಾಗಿ ವಿವರಿಸುತ್ತಾರೆ.

ಕೊನೆಗೆ ತಿಳಿಯುವುದೇನೆಂದರೆ, ಮೂಲ ಭಗವದ್ಗೀತೆ ಅನೇಕ ಪ್ರಭಾವಗಳನ್ನು, ಬದಲಾವಣೆಗಳನ್ನು ಮತ್ತು ಕಲಬೆರಕೆಗಳನ್ನು ಹೊಂದಿದೆ. ಯೋಗ, ಗೀತೆ ಹಿಂದೂ ಧರ್ಮದ ಅಥವಾ ವೈದಿಕ ಧರ್ಮದ ಕೊಡುಗೆ ಏನಲ್ಲ. ಯೋಗ ದೇಹಕ್ಕೆ ಮತ್ತು ಗೀತೆ ಮನಸ್ಸಿಗೆ ಆರೋಗ್ಯ ಕೊಡುವ ದೃಷ್ಟಿಯನ್ನು ಹೊಂದಿರುವುದರಿಂದ ಪೂರ್ವಾಗ್ರಹಪೀಡಿತರಾಗಿ ತಿರಸ್ಕರಿಸಬಾರದು ಎಂಬುದು. ಒಬ್ಬ ಸತ್ಯಾನ್ವೇಷಿಯು ಪೂರ್ವಾಗ್ರಹಗಳಲ್ಲಿ ಬಂಧಿತನಾದರೆ ಸಂಶೋಧನೆಯಾಗಲಿ, ಅಧ್ಯಯನವಾಗಲಿ ಹೇಗೆ ಸಾಧ್ಯ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬಹುಜನರಿಗೆ ತಿಳಿದ ವಿಚಾರ. ಇದರಲ್ಲಿ ವಿಶೇಷವಾಗಿ ಏನೂ ಇಲ್ಲ. ಶತಮಾನಗಳಿಂದ ಈ ವಾದ ಇದ್ದದ್ದೇ…‌‌.!!

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...