Homeಮುಖಪುಟಯೋಗವಾಗಲಿ, ಭಗವದ್ಗೀತೆಯಾಗಲಿ ವೈದಿಕರ ಅಥವಾ ಹಿಂದೂಗಳ ಕೊಡುಗೆ ಅಲ್ಲ -ಫುಲ್ಗೇಂದ ಸಿನ್ಹಾ

ಯೋಗವಾಗಲಿ, ಭಗವದ್ಗೀತೆಯಾಗಲಿ ವೈದಿಕರ ಅಥವಾ ಹಿಂದೂಗಳ ಕೊಡುಗೆ ಅಲ್ಲ -ಫುಲ್ಗೇಂದ ಸಿನ್ಹಾ

- Advertisement -
- Advertisement -

ಪುಟಕ್ಕಿಟ್ಟ ಪುಟಗಳು : ಯೋಗೇಶ್ ಮಾಸ್ಟರ್

ಭಾರತದಲ್ಲಿ ಭಗವದ್ಗೀತೆ ಮತ್ತು ಯೋಗವನ್ನು ಪರ ವಿರೋಧಗಳ ನೆಲೆಗಟ್ಟುಗಳಿಂದಲ್ಲದೇ ಮರು ಸಂಶೋಧನೆ ಮಾಡಿದ ವಿದ್ವಾಂಸ ಫುಲ್ಗೇಂದ ಸಿನ್ಹಾ. ಅವರು ಅಮೆರಿಕೆಯಲ್ಲಿ ಸ್ವಯಂ ಯೋಗಾಚಾರ್ಯ ರಾಗಿದ್ದ ಕಾರಣದಿಂದ ಯೋಗದ ಮೂಲವನ್ನು ಹುಡುಕಲು ಹೊರಟ ಅವರು ಅದರ ಜೊತೆಜೊತೆಗೇ ಗೀತೆಯ ಮೂಲವನ್ನೂ ಗುರುತಿಸುವ ಯತ್ನ ಮಾಡಿದರು.

ಇದರಿಂದ ಗೀತಾ- ಯಾಸ್ ಇಟ್ ವಾಸ್ ಎಂಬ ಮಹತ್ವಪೂರ್ಣ ಕೃತಿಯ ರಚನೆಯಾಯ್ತು. ಗೀತಾ – ಯಾಸ್ ಇಟ್ ಈಸ್ ಎಂಬ ಇಸ್ಕಾನ್ ಸಂಸ್ಥಾಪಕರ ಕೃತಿಯೊಂದಿದೆ. ಈ ಕೃತಿಗಳ ನಡುವಿನ ವ್ಯತ್ಯಾಸವೆಂದರೆ, ಇಸ್ಕಾನ್ ಕೃತಿ ಮಂಪರನ್ನು ತರಿಸುತ್ತದೆ. ಸಿನ್ಹಾರವರ ಸಂಶೋಧನಾ ಕೃತಿ ಮಂಪರನ್ನು ಹರಿಸುತ್ತದೆ.

ಸಿನ್ಹಾರವರ ಈ ಕೃತಿ ಮಹತ್ವದ್ದು ಎನಿಸುವುದಕ್ಕೆ ಕಾರಣಗಳಿವೆ. ಯಾವುದೇ ನೆಲದ ಸಾಂಸ್ಕೃತಿಕ ರೂಢಿಗಳು ಮತ್ತು ಧಾರ್ಮಿಕ ನಂಬುಗೆಗಳು ಸಮಾಜದ ಪ್ರಗತಿಗೆ ಅಥವಾ ಅವನತಿಗೆ ಹೇಗೆ ಕಾರಣವಾಗುತ್ತದೆ ಎಂದು ವಿವರಿಸುತ್ತದೆ. ಯೋಗವಾಗಲಿ, ಭಗವದ್ಗೀತೆಯಾಗಲಿ ವೈದಿಕರ ಅಥವಾ ಹಿಂದೂಗಳ ಕೊಡುಗೆ ಹೇಗೆ ಅಲ್ಲ ಎಂದು ಪ್ರತಿಪಾದಿಸುತ್ತದೆ ಮತ್ತು ಅತಿ ಮುಖ್ಯವಾಗಿ ಮೂಲದಲ್ಲಿ ಇದ್ದಂತಹ ಭಗವದ್ಗೀತೆ ಏನು? ಯಾವ್ಯಾವ ಪ್ರಭಾವಗಳಿಂದ ಮತ್ತು ಯಾವ್ಯಾವ ನುಸುಳುವಿಕೆಗಳಿಂದ ಈಗ ನಾವು ಕಾಣುತ್ತಿರುವ ಭಗವದ್ಗೀತೆಯಾಗಿದೆ ಎಂದು ಆಧಾರಸಹಿತ ವಿವರಿಸುತ್ತಾರೆ.

ಚಿಂತನೆ ಮತ್ತು ಭಾವನೆಗಳ ಪ್ರಭಾವವು ದೇಶದ ಪ್ರಗತಿಗೆ ಹೇಗೆ ಕೆಲಸ ಮಾಡುತ್ತದೆ ಎಂದು ಯೋಚಿಸುತ್ತಾರೆ ಸಿನ್ಹಾ. ಕೆಲವು ದೇಶಗಳಿಗೆ ಸಂಪನ್ಮೂಲಗಳ ಕೊರತೆ ಇದ್ದು, ಎಲ್ಲವೂ ವ್ಯತಿರಿಕ್ತವಾಗಿರುವಂತಹ ವಾತಾವರಣವೇ ಇದ್ದರೂ ಔದ್ಯೋಗಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸುತ್ತಾರೆ. ಆದರೆ, ಭಾರತದಂತಹ ದೇಶವು ಎಲ್ಲವೂ ಇದ್ದು ಹಾಗೆ ಸಾಧಿಸಲಾಗದಿರುವುದಕ್ಕೆ ಕಾರಣ ಏನು ಎಂದು ನೋಡುತ್ತಾ, ಸಿನ್ಹಾ ಗೀತೆಯ ಕಡೆ ನೋಡುತ್ತಾರೆ. ಕೆಲಸ ಮಾಡು ಆದರೆ ಪ್ರತಿಫಲವನ್ನು ಅಪೇಕ್ಷಿಸಬೇಡ. ಬಯಕೆ ದುಃಖಕ್ಕೆ ಕಾರಣ, ಬಯಕೆಯನ್ನು ಹೊಂದಬೇಡ. ವಿಧಿ ಲಿಖಿತದಂತೆ ಎಲ್ಲವೂ ನಡೆಯುತ್ತದೆ. ಪ್ರಾಪಂಚಿಕ ವ್ಯವಹಾರ ನಶ್ವರ, ಆಧ್ಯಾತ್ಮಿಕತೆಯೇ ಉನ್ನತ ಮತ್ತು ಅಮರ. ನೀನು ಏನೇ ಮಾಡಿದರೂ ದೇವರು ಅನುಗ್ರಹಿಸದಿದ್ದರೆ ಎಲ್ಲವೂ ವ್ಯರ್ಥ. ದುಃಖ, ಸಂತೋಷ, ಯಶಸ್ಸು ಮತ್ತು ವೈಫಲ್ಯ ಎಲ್ಲವೂ ದೇವರ ಇಚ್ಛೆ. ಬೇರೂರಿರುವ ಇಂತಹ ವಿಚಾರಗಳು ಯಾವ ರೀತಿಯಲ್ಲಿ ಮನುಷ್ಯನ ಸಂಕಲ್ಪ ಮತ್ತು ಸಾಧನೆಗೆ ನ್ಯಾಯ ಸಂದಾಯ ಮಾಡುತ್ತದೆ ಎಂಬುದು ಸಿನ್ಹಾರ ಚಿಂತನೆ. ರಾಷ್ಟ್ರೀಯತೆಯು ಧಾರ್ಮಿಕತೆಯ ಮೇಲೆ ಅವಲಂಬಿತವಾದರೆ ಎಂತಹ ಪ್ರಮಾದಗಳನ್ನು ಮತ್ತು ವೈಫಲ್ಯಗಳನ್ನು ಕಾಣಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ.

ಕಪಿಲ ಪತಂಜಲ ಗೌತಮ ಜಿನರೆಲ್ಲರ ತಾತ್ವಿಕತೆಗಳು ಭಾರತದ ಸಿದ್ಧಾಂತಕ್ಕೆ ಕಾಣ್ಕೆಗಳನ್ನು ನೀಡಿದವು ಎನ್ನುತ್ತಲೇ ವ್ಯಾಸನ ಭಗವದ್ಗೀತೆಯಲ್ಲಿ ಅವೆಲ್ಲವೂ ಹೇಗೆ ನುಸುಳಿದವು ಎಂಬುದು ಒಂದು ಸಸ್ಪೆನ್ಸ್ ಥ್ರಿಲ್ಲರ್.
ಹದಿನೆಂಟು ಅಧ್ಯಾಯಗಳ ಭಗವದ್ಗೀತೆಯಲ್ಲಿ ಹದಿನೈದು ಅಧ್ಯಾಯಗಳೇ ಕಲಬೆರಕೆಯವು ಎಂದರೆ ಮರ್ಮಾಘಾತವಾಗದೇ!

ಮೂಲ ಗೀತ ಮೊದಲನೆಯ ಅಧ್ಯಾಯದ 28ನೇ ಶ್ಲೋಕದಿಂದ ಆರಂಭವಾಗುತ್ತದೆ. ನಂತರ ಮೊದಲ 3 ಅಧ್ಯಾಯಗಳಷ್ಟೇ ಅಸಲಿ ಎನ್ನುತ್ತಾ ಕ್ರಿಶ 800 ರಲ್ಲಿ ಬ್ರಾಹ್ಮಣವಾದವನ್ನು ಮತ್ತು ಅದ್ವೈತ ಸಿದ್ಧಾಂತವನ್ನು ಹೇಗೆ ತರಲಾಯ್ತು ಎಂದು ಕೂಲಂಕುಷವಾಗಿ ವಿವರಿಸುತ್ತಾರೆ.

ಕೊನೆಗೆ ತಿಳಿಯುವುದೇನೆಂದರೆ, ಮೂಲ ಭಗವದ್ಗೀತೆ ಅನೇಕ ಪ್ರಭಾವಗಳನ್ನು, ಬದಲಾವಣೆಗಳನ್ನು ಮತ್ತು ಕಲಬೆರಕೆಗಳನ್ನು ಹೊಂದಿದೆ. ಯೋಗ, ಗೀತೆ ಹಿಂದೂ ಧರ್ಮದ ಅಥವಾ ವೈದಿಕ ಧರ್ಮದ ಕೊಡುಗೆ ಏನಲ್ಲ. ಯೋಗ ದೇಹಕ್ಕೆ ಮತ್ತು ಗೀತೆ ಮನಸ್ಸಿಗೆ ಆರೋಗ್ಯ ಕೊಡುವ ದೃಷ್ಟಿಯನ್ನು ಹೊಂದಿರುವುದರಿಂದ ಪೂರ್ವಾಗ್ರಹಪೀಡಿತರಾಗಿ ತಿರಸ್ಕರಿಸಬಾರದು ಎಂಬುದು. ಒಬ್ಬ ಸತ್ಯಾನ್ವೇಷಿಯು ಪೂರ್ವಾಗ್ರಹಗಳಲ್ಲಿ ಬಂಧಿತನಾದರೆ ಸಂಶೋಧನೆಯಾಗಲಿ, ಅಧ್ಯಯನವಾಗಲಿ ಹೇಗೆ ಸಾಧ್ಯ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬಹುಜನರಿಗೆ ತಿಳಿದ ವಿಚಾರ. ಇದರಲ್ಲಿ ವಿಶೇಷವಾಗಿ ಏನೂ ಇಲ್ಲ. ಶತಮಾನಗಳಿಂದ ಈ ವಾದ ಇದ್ದದ್ದೇ…‌‌.!!

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...