Homeಚಳವಳಿಕೀಳು ನನ್ನ 'ಜಾತಿ' ಅಲ್ಲ, ಕೀಳು ನಿನ್ನ ಬುದ್ಧಿಮಟ್ಟ...!

ಕೀಳು ನನ್ನ ‘ಜಾತಿ’ ಅಲ್ಲ, ಕೀಳು ನಿನ್ನ ಬುದ್ಧಿಮಟ್ಟ…!

'ಜಾತಿ' ಕುರಿತು ಕನ್ನಡದ ಮೊದಲ ಹಿಪ್‌‌ಹಾಪ್ ರ್‍ಯಾಪ್ ಸಾಂಗ್ ಮಾಡಿರುವ ಹರೀಶ್ ಅವರು ಈಗ ಕೊರೊನಾ ಕಾಲದಲ್ಲಿ ಬಡಜನರು ಅನುಭವಿಸಿದ ಸಂಕಷ್ಟ ಹಾಗೂ ಸರ್ಕಾರದ ಕರಾಳ ನೀತಿಯ ಬಗ್ಗೆ 'ಮಾಹಾಮಾರಿ ಕಥೆ' ಎನ್ನುವ ಹಿಪ್‌‌ಹಾಪ್ ಹಾಡಿನಲ್ಲಿ ಅದ್ಭುತವಾಗಿ ಬಿಚ್ಚಿಟ್ಟಿದ್ದಾರೆ.

- Advertisement -
- Advertisement -

ನೀವು ಫೇಸ್ ಬುಕ್,ಯೂಟ್ಯೂಬ್ ಬಳಕೆದಾರರಾಗಿದ್ದರೆ ಹರೀಶ್ ಕಾಂಬಳೆ ಎನ್ನುವ ಹೆಸರಿನ ಅಕೌಂಟ್ ಇದೆ. ಹರೀಶ್ ಅವರು ವರ್ಷದ ಹಿಂದೆ ಯುಟ್ಯೂಬ್‌ಗೆ ಸೇರಿಸಿದ ಕೇವಲ ಮೂರು ನಿಮಿಷದ ಒಂದು ವಿಡಿಯೋ ತುಣುಕು ಹಾಡು ಈಗ ಎಲ್ಲೆಡೆ  ಸಕ್ಕತ್ ಸೌಂಡ್ ಮಾಡ್ತಿದೆ. ಸಾಹಿತ್ಯ ತನ್ನದೇ, ಆದರೆ ಇಂದಿನ ಯುವ ಜನತೆಯನ್ನು ಆಕರ್ಷಿಸಲು ಹೊಸ ಮ್ಯೂಸಿಕ್ ಆಯ್ದು ವಿಶಿಷ್ಟವಾಗಿ ಪ್ರಯತ್ನಿಸಿದ್ದಾರೆ.

“ನಿ ಬಿಟ್ಟು ಕೊಡು ಜಾತಿ
ನಾನು ಬಿಡುವೆ ಮೀಸಲಾತಿ
ಹೇಳು ಏಕೆ ಸುಮ್ಮನಾದೆ
ನಿನಗೆ ಇಲ್ವಾ ಮಂಜೂರಾತಿ
ರಣನೀತಿ ಪ್ರಖ್ಯಾತಿ

ಕೀಳು ನನ್ನ ಜಾತಿ ಅಲ್ಲ
ಕೀಳು ನಿನ್ನ ಬುದ್ಧಿಮಟ್ಟ
ಜಾತಿ ನಿನಗೆ ಮುಖ್ಯ”

ಇದನ್ನೂ ಓದಿ: PC: ಬ್ರಾಹ್ಮಣ್ಯದ ವಿರೋಧ ಮತ್ತು ಜಾತಿ ವಾಸ್ತವದ ಪ್ರಶ್ನೆಗೆ ಒಂದು ಉತ್ತರ

‘ಜಾತಿ’ ಎನ್ನುವ ಶೀರ್ಷಿಕೆಯಲ್ಲಿ ಹರೀಶ್ ಅವರು ರಚಿಸಿದ ಹಾಡಿನ ಈ ಮೇಲಿನ ಸಾಲುಗಳು ಸಮಾಜದಲ್ಲಿರುವ ಅನ್ಯಾಯ, ಅತ್ಯಾಚಾರ, ದೌರ್ಜನ್ಯ, ಜಾತಿಯ ಭೀಕರತೆ ಬಿಚ್ಚಿಡುತ್ತವೆ. ಹರೀಶ್ ಅವರು ರಚಿಸಿ ಹಾಡಿರುವ ಹಾಡು ಕನ್ನಡ ಸಂಗೀತ ಕ್ಷೇತ್ರದಲ್ಲಿಯೇ ಪ್ರಪ್ರಥಮ ‘ಜಾತಿ’ Hip-hop Rap ಹಾಡು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಹರೀಶ್ ಅವರ ವಿನೂತನ ದೃಷ್ಟಿಕೋನದ ಫಲವಾಗಿ ಇಂದು ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕಲ್ಯಾಣ ಕರ್ನಾಟಕದ ಹೆಮ್ಮೆಯ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹತ್ಯಾಳ ಎನ್ನುವ ಪುಟ್ಟ ಗ್ರಾಮದವರಾದ ಹರೀಶ್ ಕಾಂಬಳೆ ಅವರು ಮೂಲತಃ ಕೃಷಿ ಕುಟುಂಬದವರು. ಬಿ.ಎಸ್ಸಿ. ಬಿ.ಇಡ್. ಪದವಿಧರರಾದ ಹರೀಶ್ ಅವರು ಸ್ವಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದಾರೆ. ‘ನನಗೆ ಕಾಲೇಜು ದಿನಗಳಿಂದಲೂ ಕವಿತೆ ಬರೆಯುವುದು, ಸಂಗೀತದ ಮೇಲೆ ಹೆಚ್ಚಿನ ಹವ್ಯಾಸ ಇದೆ. ಹಾಗೇ ಬುದ್ಧ ಬಸವ ಅಂಬೇಡ್ಕರ್ ಸೇರಿದಂತೆ ಸಮಾಜದ ಉನ್ನತಿಗಾಗಿ ಶ್ರಮಿಸಿದ ಮಹಾತ್ಮರ ಪುಸ್ತಕಗಳನ್ನು ಓದುವ ಆಸಕ್ತಿ ಇದೆ’ ಎನ್ನುತ್ತಾರೆ ಹರೀಶ್.

ಹರೀಶ್ ಅವರು ಪ್ರೀತಿ – ಪ್ರೇಮ, ನಾಡು -ನುಡಿಯ ಬಗ್ಗೆ ಕವಿತೆಗಳು ಬರೆಯಲು ಹಾಡುಗಾರಿಕೆ ಮಾಡಲು ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಸಮಾಜವನ್ನು ಸೂಕ್ಷ್ಮವಾಗಿ ಗೃಹಿಸಿ ‘ಕಂಡದ್ದು ಕಂಡಹಾಗೇ’ ಹೇಳುವ ಧೈರ್ಯ ಬೆಳೆಸಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಅನುಭವ ಜೊತೆಗೆ ಸಮಕಾಲೀನ ಸಮಾಜದ ಅವಸ್ಥೆಯ ವಿರುದ್ಧ ‘ಬಂಡಾಯ ಸಾಹಿತ್ಯ’ ರಚಿಸುವ ಮೂಲಕ ತಮ್ಮದೇ ಶೈಲಿಯ ವಿಭಿನ್ನವಾದ ಪದ ಜೋಡಣೆ, ಹಾಡುಗಾರಿಕೆಯ ಸಾಹಸ ಮಾಡುತ್ತಿದ್ದಾರೆ.

PC: Harish Kamble/Facebook

ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಕಾಯಕ ಭೂಮಿಯ ನೆಲದವರಾದ ಹರೀಶ್ ಅವರಿಗೆ ಶರಣರ ‘ವಚನ ಕ್ರಾಂತಿ’ಯ ಬಗ್ಗೆ ಬಹಳ ಹೆಮ್ಮೆ ಇದೆ. ‘ಅಂದು ಶೋಷಣೆಗೆ ಒಳಪಟ್ಟ ಅನೇಕ ಶ್ರಮಿಕ ವರ್ಗದವರು ಮುಂದೆ ವಚನಕಾರರಾಗಿ ಅಸಮಾನತೆ, ಶೋಷಣೆ ಸಮಾಜದ ವಿರುದ್ಧ ದನಿಯಾಗಿ ಸಮ ಸಮಾಜ ಸ್ಥಾಪನೆಗೆ ಮುಂದಾಗಿದರು. ಅಂತಹ ಮಹಾನ್ ಶರಣರ ವಚನ ಚಳವಳಿಯ ಆಶಯ ಮತ್ತು ಸಿದ್ಧಾಂತವನ್ನು ಮತ್ತೆ ಮುನ್ನೆಲೆಗೆ ತರಬಯಸುವ ತುಡಿತ ನನ್ನದಾಗಿದೆ, ಹಾಗಾಗಿಯೇ ಈ ಒಂದು ಚಿಕ್ಕ ಪ್ರಯತ್ನಕ್ಕೆ ಕೈ ಹಾಕಿರುವೆ’ ಎಂದು ಹರೀಶ್ ತಮ್ಮ ಸಾಮಾಜಿಕ ಬದ್ಧತೆಯ ನುಡಿಗಳು ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಜಾತಿ ಮತ್ತು ಮೀಸಲಾತಿ ಬಗ್ಗೆ ನಟಿ ಕಂಗನಾ ರಣಾವತ್‌ಗೊಂದು ಪತ್ರ

ಹರೀಶ್ ಅವರು ‘ಜಾತಿ’ ಎನ್ನುವ ಹಿಪ್ ಹಾಪ್ ರ್‍ಯಾಪ್‌ ಹಾಡು ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದರು. ಆದರೆ ಹೆಚ್ಚು ಪ್ರಚಾರ ದೊರಕಲಿಲ್ಲ. ಆದರೆ ಈಗ ಯುಟ್ಯೂಬ್ ನಲ್ಲಿ ಹೆಚ್ಚು ಜನರು ಸ್ವೀಕರಿಸುತ್ತಿದ್ದಾರೆ. ಈಗ ಎಲ್ಲೆಡೆ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಇದನ್ನು ವಿರೋಧಿಸಿ ಬೆದರಿಕೆ ಕರೆಗಳು ಕೂಡಾ ಮಾಡತೊಡಗಿದ್ದಾರೆ. ಆದರೆ ಹರೀಶ್ ಅದಕ್ಕೆಲ್ಲ ತಲೆಕೆಡಿಸಿಕೊಂಡವರಲ್ಲ, “ಅವರಿಗೆ ಮೊದಲು ‘ನೀ ಬಿಡು ನಿನ್ನ ಜಾತಿ’ ಆಮೇಲೆ ನನ್ನ ಬಗ್ಗೆ ಮಾತನಾಡಿ ಎಂದು ಪ್ರೀತಿಯಿಂದಲೇ ಉತ್ತರಿಸಿ ಸುಮ್ಮನಾದೆ” ಎಂದು ಹೇಳುತ್ತಾರೆ.

ಸಮಾಜದಲ್ಲಿ ಹೆಚ್ಚು ಹೆಚ್ಚು ಪ್ರಜ್ಞಾವಂತಿಕೆ ಬೆಳೆಯಬೇಕು, ಸಮಾನತೆ ಜಾರಿಯಾಗಬೇಕಾದರೆ ನಮಗೆ ಭಾರತದ ಸಂವಿಧಾನ ಮೂಲ ಅಸ್ತ್ರವಾಗಿದೆ. ಪ್ರಸ್ತುತ ಭಾರತದಲ್ಲಿ ಸಂವಿಧಾನದ ಒಂದೊಂದು ಹಕ್ಕುಗಳು ದಿನದಿಂದ ದಿನಕ್ಕೆ ರೆಕ್ಕೆ ಮುರಿದುಕೊಳ್ಳುತ್ತಿವೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆ ಎನ್ನಬಹುದು. ಈ ಕುರಿತು ಇಂದಿನ ಯುವ ಜನತೆ ಎಚ್ಚೆತ್ತುಕೊಳ್ಳುವುದು ತೀರ ಅಗತ್ಯವಿದೆ. ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದು
ಜಾತಿ ಧರ್ಮಗಳೇ ಮೇಲುಗೈ ಸಾಧಿಸುತ್ತಿವೆ. ಆದ್ದರಿಂದ ಎಲ್ಲದಕ್ಕೂ ಪರಿಹಾರ ಇರುವುದು ಸಂವಿಧಾನ ಅಂಶಗಳಲ್ಲ ಎಂದು ಹರೀಶ್ ತಮ್ಮ ಮನದಾಳದ ಮಾತುಗಳು ಹಂಚಿಕೊಳ್ಳುತ್ತಾರೆ.

‘ಜಾತಿ’ ಕುರಿತು ಕನ್ನಡದ ಮೊದಲ ಹಿಪ್‌‌ಹಾಪ್ ರ್‍ಯಾಪ್ ಸಾಂಗ್ ಮಾಡಿರುವ ಹರೀಶ್ ಅವರು ಈಗ ಕೊರೊನಾ ಕಾಲದಲ್ಲಿ ಬಡಜನರು ಅನುಭವಿಸಿದ ಸಂಕಷ್ಟ ಹಾಗೂ ಸರ್ಕಾರದ ಕರಾಳ ನೀತಿಯ ಬಗ್ಗೆ ‘ಮಾಹಾಮಾರಿ ಕಥೆ‘ ಎನ್ನುವ ಹಿಪ್‌‌ಹಾಪ್ ಹಾಡಿನಲ್ಲಿ ಅದ್ಭುತವಾಗಿ ಬಿಚ್ಚಿಟ್ಟಿದ್ದಾರೆ. ಇನ್ನು ‘ರಾಜನೀತಿ‘ ಎನ್ನುವ ಮತ್ತೊಂದು ಹಿಪ್‌‌ಹಾಪ್ ಹಾಡು ಕೆಲವು ದಿನಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

ಕೇವಲ ದಲಿತರ ಜೊತೆ ಸಹಪಂಕ್ತಿ ಭೋಜನ ಏರ್ಪಡಿಸಿ ಚಿತ್ರಾನ್ನ ಸೇವಿಸಿದರೆ ಮಾತ್ರಕ್ಕೆ ಜಾತಿ ತಾರತಮ್ಯ, ಅಸ್ಪೃಶ್ಯತೆ ಹೋಗಲಾಡಿಸಲು ಖಂಡಿತ ಸಾಧ್ಯವಿಲ್ಲ. ಅಸ್ಪೃಶ್ಯರ ಜೊತೆಗೆ ಹೆಚ್ಚೆಚ್ಚು ಒಳಗೊಳ್ಳುವಿಕೆಗೆ ಎಲ್ಲರೂ ಮುಂದಾಗಬೇಕು, ಅಸಮಾನತೆ ಬಿಟ್ಟು ಸಮಾನತೆ ಸಮಾಜ ಕಟ್ಟಲು ಒಳಮನಸ್ಸು ಪರಿವರ್ತನೆ ಮಾಡಿಕೊಳ್ಳಬೇಕು, ಅವಾಗಲೇ ಜಾತಿ ತಾರತಮ್ಯ ತೊಲಗಬಹುದು, ‘ಪರಿವರ್ತನೆ ಜಗದ ನಿಯಮ’ ಎನ್ನುವ ಭರವಸೆದೊಂದಿಗೆ ನನ್ನ ಹೋರಾಟ ಮುಂದುವರಿಯುತ್ತದೆ ಎನ್ನುತ್ತಾರೆ ಹರೀಶ್.

ಇದನ್ನೂ ಓದಿ: ಭಾರತದ ಜಾತಿ ವೃಕ್ಷದ ವಿಷಕಾರಿ ಹಣ್ಣು ಖೈರ್ಲಾಂಜಿಯನ್ನು ಮರೆಯಬಾರದು

ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟದ ಕಥಾ ಆಧಾರಿತ ‘ಮಹಾನಾಯಕ’ ಧಾರವಾಹಿ ನಾವು ವಿರೋಧಿಸುವ ಬದಲು ಪ್ರೀತಿ ಹಾಗೂ ಹೆಮ್ಮೆಯಿಂದ ಸ್ವೀಕರಿಸಬೇಕಾಗಿದೆ. ಕನ್ನಡದಲ್ಲಿ ಇದೊಂದು ಅಪರೂಪ ಧಾರವಾಹಿ, ದೇಶದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಕೊಲೆ, ಅತ್ಯಾಚಾರ, ದೌರ್ಜನ್ಯಗಳ ಪ್ರಮಾಣ ದಿನಕಳೆದಂತೆ ಹೆಚ್ಚಾಗುತ್ತಿರುವ ಇಂತಹ ಕಾಲಘಟ್ಟದಲ್ಲಿ ‘ಮಹಾನಾಯಕ’ ಧಾರವಾಹಿ ಸಮಾಜದಲ್ಲಿ ಬೆಳಕಾಗಿ ಹಲವು ಮನಸ್ಸುಗಳು ಪರಿವರ್ತನೆಗೊಳ್ಳಲಿ ಎಂದು ಆಶಿಸುತ್ತಾರೆ.

ಹರೀಶ್ ಕಾಂಬಳೆ ಅವರು ಮುಂದಿನ ದಿನಗಳಲ್ಲಿ ಕಿರುತೆರೆ, ಸಿನಿಮಾ, ಸಂಗೀತ ಕ್ಷೇತ್ರದಲ್ಲಿ ಅವಕಾಶ ದೊರೆತರೆ ತಮ್ಮ ವಿಶಿಷ್ಟ ಸಂಗೀತ ಕಲೆ ಪ್ರದರ್ಶಿಸುವ ಇಚ್ಛಾಶಕ್ತಿ ಹೊಂದಿದ್ದಾರೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗದ ಸಂಘ ಸಂಸ್ಥೆಗಳು ಹರೀಶ್ ಅವರ ಕಲೆಯನ್ನು ಗೌರವಿಸಿ ಪ್ರೋತ್ಸಾಹಿಸುತ್ತಿವೆ. ಬಡತನದಲ್ಲಿ ಹುಟ್ಟಿ ಬೆಳೆದ ಹರೀಶ್ ಅವರು ಸ್ವಯಂ ಪ್ರಯತ್ನದಿಂದಲೇ ಈ ಕಲೆಯನ್ನು ಕಲಿತುಕೊಂಡಿರುವುದು ಇನ್ನೊಂದು ವಿಶಿಷ್ಟ ಎನ್ನಬಹುದು.

PC: Harish Kamble/Facebook

ಇದನ್ನೂ ಓದಿ: ಜಾತಿಪದ್ಧತಿಯ ಕಡುವಿರೋಧಿ, ಹೋರಾಟಗಾರ ಸುಧೀರ್ ಧಾವ್ಳೆ

ಅಮೇರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ನಡೆದ ಹೋರಾಟದ ಸಂದರ್ಭದಲ್ಲಿ ಮೊಟ್ಟ ಮೊದಲು ಹಿಪ್‌ಹಾಪ್ ಹಾಡುಗಳು ಹುಟ್ಟು ಪಡೆದಿವೆ. ನಂತರದ ದಿನಗಳಲ್ಲಿ ವಿಶ್ವದಾದ್ಯಂತ ವ್ಯಾಪಿಸಿ ಹೆಚ್ಚು ಪ್ರಸಿ‌ದ್ಧಿ ಪಡೆದಿವೆ. ವಿಶೇಷವಾಗಿ ಅತೀ ಹೆಚ್ಚು ಯುವಜನತೆ ಇಷ್ಟ ಪಡುವ ಹಿಪ್‌ಹಾಪ್ ಹಾಡುಗಳಿಗೆ ಭಾರೀ ಡಿಮ್ಯಾಂಡ್ ಇದೆ. ಇದಕ್ಕೆ ಭಾರತವೂ ಹೊರತಾಗಿಲ್ಲ, ನನಗೂ ಮೊದಲಿನಿಂದಲೂ ತುಂಬಾ ಇಷ್ಟ ಪಡುವ ಸಂಗೀತವಾಗಿದೆ. ಹೀಗಾಗಿ ದೇಶದ ಭವಿಷ್ಯ ರೂಪಿಸುವ ಯುವಜನಾಂಗದ ಪ್ರಿಯವಾದ ಹಿಪ್‌ಹಾಪ್ ಮ್ಯೂಸಿಕ್ ನಾನು ನನ್ನ ‘ಜಾತಿ’ ಹಾಡಿಗೆ ಆಯ್ಕೆ ಮಾಡಿಕೊಂಡು ಪ್ರಯತ್ನಿಸಿದ್ದೇನೆ.

ಹರೀಶ್ ಕಾಂಬಳೆ ಅವರಿಗಿರುವ ಸಾಮಾಜಿಕ ತುಡಿತ ನಿಜಕ್ಕೂ ಮೆಚ್ಚಬೇಕು. ಅವರ ಉದ್ದೇಶ ಹಾಗೂ ಗುರಿಗಳಿಗೆ ನಾವೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಹಿಪ್‌ಹಾಪ್ ರ್‍ಯಾಪ್‌ ಸಾಂಗ್‌ನಲ್ಲಿ ಅಡಗಿರುವ ಸಮಾಜದ ಚಿಂತನೆ ಬಗ್ಗೆ ನಾವೆಲ್ಲರೂ ಸೂಕ್ಷ್ಮವಾಗಿ ಗ್ರಹಿಸಬೇಕಿದೆ. ಸಮ ಸಮಾಜದ ಪರಿಕಲ್ಪನೆ ಹೊತ್ತು ‘ಎಲೆಮರೆ ಕಾಯಿಯಂತೆ’ ತಮ್ಮ ನಿಸ್ವಾರ್ಥ ಕಲೆಯನ್ನು ಸಂಗೀತ ಲೋಕಕ್ಕೆ ಅರ್ಪಿಸುತ್ತಿರುವ ಪ್ರತಿಭಾವಂತ ಯುವಕ ಹರೀಶ್ ಕಾಂಬಳೆ ಕಾರ್ಯಕ್ಕೆ ಬೆಂಬಲಿಸಿ, ಹಾರೈಸೋಣ.‌‌!!

ಹರೀಶ್ ಕಾಂಬಳೆ ಅವರ ಯುಟ್ಯೂಬ್ ಚಾನಲ್‌ಗೆ ಹೋಗಿ ಅವರಿಗೊಂದು ಶುಭಾಶಯ ಹೇಳಲು ಇಲ್ಲಿ ಕ್ಲಿಕ್‌ ಮಾಡಿ. ಹಾಗೂ ಅವರ ಫೇಸ್‌ಬುಕ್‌ಗೆ ಇಲ್ಲಿ ಕ್ಲಿಕ್ ಮಾಡಿ ತಲುಪಬಹುದು.

-ಬಾಲಾಜಿ ಕುಂಬಾರ, ಚಟ್ನಾಳ

ಇದನ್ನೂ ಓದಿ: ಮೇಲ್ಜಾತಿ ದೌರ್ಜನ್ಯವನ್ನು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ತಂದ ಕಾರಂಚೇಡು ದಲಿತರ ಹತ್ಯಾಕಾಂಡಕ್ಕೆ 35 ವರ್ಷ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...