Homeಚಳವಳಿಕೀಳು ನನ್ನ 'ಜಾತಿ' ಅಲ್ಲ, ಕೀಳು ನಿನ್ನ ಬುದ್ಧಿಮಟ್ಟ...!

ಕೀಳು ನನ್ನ ‘ಜಾತಿ’ ಅಲ್ಲ, ಕೀಳು ನಿನ್ನ ಬುದ್ಧಿಮಟ್ಟ…!

'ಜಾತಿ' ಕುರಿತು ಕನ್ನಡದ ಮೊದಲ ಹಿಪ್‌‌ಹಾಪ್ ರ್‍ಯಾಪ್ ಸಾಂಗ್ ಮಾಡಿರುವ ಹರೀಶ್ ಅವರು ಈಗ ಕೊರೊನಾ ಕಾಲದಲ್ಲಿ ಬಡಜನರು ಅನುಭವಿಸಿದ ಸಂಕಷ್ಟ ಹಾಗೂ ಸರ್ಕಾರದ ಕರಾಳ ನೀತಿಯ ಬಗ್ಗೆ 'ಮಾಹಾಮಾರಿ ಕಥೆ' ಎನ್ನುವ ಹಿಪ್‌‌ಹಾಪ್ ಹಾಡಿನಲ್ಲಿ ಅದ್ಭುತವಾಗಿ ಬಿಚ್ಚಿಟ್ಟಿದ್ದಾರೆ.

- Advertisement -
- Advertisement -

ನೀವು ಫೇಸ್ ಬುಕ್,ಯೂಟ್ಯೂಬ್ ಬಳಕೆದಾರರಾಗಿದ್ದರೆ ಹರೀಶ್ ಕಾಂಬಳೆ ಎನ್ನುವ ಹೆಸರಿನ ಅಕೌಂಟ್ ಇದೆ. ಹರೀಶ್ ಅವರು ವರ್ಷದ ಹಿಂದೆ ಯುಟ್ಯೂಬ್‌ಗೆ ಸೇರಿಸಿದ ಕೇವಲ ಮೂರು ನಿಮಿಷದ ಒಂದು ವಿಡಿಯೋ ತುಣುಕು ಹಾಡು ಈಗ ಎಲ್ಲೆಡೆ  ಸಕ್ಕತ್ ಸೌಂಡ್ ಮಾಡ್ತಿದೆ. ಸಾಹಿತ್ಯ ತನ್ನದೇ, ಆದರೆ ಇಂದಿನ ಯುವ ಜನತೆಯನ್ನು ಆಕರ್ಷಿಸಲು ಹೊಸ ಮ್ಯೂಸಿಕ್ ಆಯ್ದು ವಿಶಿಷ್ಟವಾಗಿ ಪ್ರಯತ್ನಿಸಿದ್ದಾರೆ.

“ನಿ ಬಿಟ್ಟು ಕೊಡು ಜಾತಿ
ನಾನು ಬಿಡುವೆ ಮೀಸಲಾತಿ
ಹೇಳು ಏಕೆ ಸುಮ್ಮನಾದೆ
ನಿನಗೆ ಇಲ್ವಾ ಮಂಜೂರಾತಿ
ರಣನೀತಿ ಪ್ರಖ್ಯಾತಿ

ಕೀಳು ನನ್ನ ಜಾತಿ ಅಲ್ಲ
ಕೀಳು ನಿನ್ನ ಬುದ್ಧಿಮಟ್ಟ
ಜಾತಿ ನಿನಗೆ ಮುಖ್ಯ”

ಇದನ್ನೂ ಓದಿ: PC: ಬ್ರಾಹ್ಮಣ್ಯದ ವಿರೋಧ ಮತ್ತು ಜಾತಿ ವಾಸ್ತವದ ಪ್ರಶ್ನೆಗೆ ಒಂದು ಉತ್ತರ

‘ಜಾತಿ’ ಎನ್ನುವ ಶೀರ್ಷಿಕೆಯಲ್ಲಿ ಹರೀಶ್ ಅವರು ರಚಿಸಿದ ಹಾಡಿನ ಈ ಮೇಲಿನ ಸಾಲುಗಳು ಸಮಾಜದಲ್ಲಿರುವ ಅನ್ಯಾಯ, ಅತ್ಯಾಚಾರ, ದೌರ್ಜನ್ಯ, ಜಾತಿಯ ಭೀಕರತೆ ಬಿಚ್ಚಿಡುತ್ತವೆ. ಹರೀಶ್ ಅವರು ರಚಿಸಿ ಹಾಡಿರುವ ಹಾಡು ಕನ್ನಡ ಸಂಗೀತ ಕ್ಷೇತ್ರದಲ್ಲಿಯೇ ಪ್ರಪ್ರಥಮ ‘ಜಾತಿ’ Hip-hop Rap ಹಾಡು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಹರೀಶ್ ಅವರ ವಿನೂತನ ದೃಷ್ಟಿಕೋನದ ಫಲವಾಗಿ ಇಂದು ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕಲ್ಯಾಣ ಕರ್ನಾಟಕದ ಹೆಮ್ಮೆಯ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹತ್ಯಾಳ ಎನ್ನುವ ಪುಟ್ಟ ಗ್ರಾಮದವರಾದ ಹರೀಶ್ ಕಾಂಬಳೆ ಅವರು ಮೂಲತಃ ಕೃಷಿ ಕುಟುಂಬದವರು. ಬಿ.ಎಸ್ಸಿ. ಬಿ.ಇಡ್. ಪದವಿಧರರಾದ ಹರೀಶ್ ಅವರು ಸ್ವಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದಾರೆ. ‘ನನಗೆ ಕಾಲೇಜು ದಿನಗಳಿಂದಲೂ ಕವಿತೆ ಬರೆಯುವುದು, ಸಂಗೀತದ ಮೇಲೆ ಹೆಚ್ಚಿನ ಹವ್ಯಾಸ ಇದೆ. ಹಾಗೇ ಬುದ್ಧ ಬಸವ ಅಂಬೇಡ್ಕರ್ ಸೇರಿದಂತೆ ಸಮಾಜದ ಉನ್ನತಿಗಾಗಿ ಶ್ರಮಿಸಿದ ಮಹಾತ್ಮರ ಪುಸ್ತಕಗಳನ್ನು ಓದುವ ಆಸಕ್ತಿ ಇದೆ’ ಎನ್ನುತ್ತಾರೆ ಹರೀಶ್.

ಹರೀಶ್ ಅವರು ಪ್ರೀತಿ – ಪ್ರೇಮ, ನಾಡು -ನುಡಿಯ ಬಗ್ಗೆ ಕವಿತೆಗಳು ಬರೆಯಲು ಹಾಡುಗಾರಿಕೆ ಮಾಡಲು ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಸಮಾಜವನ್ನು ಸೂಕ್ಷ್ಮವಾಗಿ ಗೃಹಿಸಿ ‘ಕಂಡದ್ದು ಕಂಡಹಾಗೇ’ ಹೇಳುವ ಧೈರ್ಯ ಬೆಳೆಸಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಅನುಭವ ಜೊತೆಗೆ ಸಮಕಾಲೀನ ಸಮಾಜದ ಅವಸ್ಥೆಯ ವಿರುದ್ಧ ‘ಬಂಡಾಯ ಸಾಹಿತ್ಯ’ ರಚಿಸುವ ಮೂಲಕ ತಮ್ಮದೇ ಶೈಲಿಯ ವಿಭಿನ್ನವಾದ ಪದ ಜೋಡಣೆ, ಹಾಡುಗಾರಿಕೆಯ ಸಾಹಸ ಮಾಡುತ್ತಿದ್ದಾರೆ.

PC: Harish Kamble/Facebook

ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಕಾಯಕ ಭೂಮಿಯ ನೆಲದವರಾದ ಹರೀಶ್ ಅವರಿಗೆ ಶರಣರ ‘ವಚನ ಕ್ರಾಂತಿ’ಯ ಬಗ್ಗೆ ಬಹಳ ಹೆಮ್ಮೆ ಇದೆ. ‘ಅಂದು ಶೋಷಣೆಗೆ ಒಳಪಟ್ಟ ಅನೇಕ ಶ್ರಮಿಕ ವರ್ಗದವರು ಮುಂದೆ ವಚನಕಾರರಾಗಿ ಅಸಮಾನತೆ, ಶೋಷಣೆ ಸಮಾಜದ ವಿರುದ್ಧ ದನಿಯಾಗಿ ಸಮ ಸಮಾಜ ಸ್ಥಾಪನೆಗೆ ಮುಂದಾಗಿದರು. ಅಂತಹ ಮಹಾನ್ ಶರಣರ ವಚನ ಚಳವಳಿಯ ಆಶಯ ಮತ್ತು ಸಿದ್ಧಾಂತವನ್ನು ಮತ್ತೆ ಮುನ್ನೆಲೆಗೆ ತರಬಯಸುವ ತುಡಿತ ನನ್ನದಾಗಿದೆ, ಹಾಗಾಗಿಯೇ ಈ ಒಂದು ಚಿಕ್ಕ ಪ್ರಯತ್ನಕ್ಕೆ ಕೈ ಹಾಕಿರುವೆ’ ಎಂದು ಹರೀಶ್ ತಮ್ಮ ಸಾಮಾಜಿಕ ಬದ್ಧತೆಯ ನುಡಿಗಳು ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಜಾತಿ ಮತ್ತು ಮೀಸಲಾತಿ ಬಗ್ಗೆ ನಟಿ ಕಂಗನಾ ರಣಾವತ್‌ಗೊಂದು ಪತ್ರ

ಹರೀಶ್ ಅವರು ‘ಜಾತಿ’ ಎನ್ನುವ ಹಿಪ್ ಹಾಪ್ ರ್‍ಯಾಪ್‌ ಹಾಡು ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದರು. ಆದರೆ ಹೆಚ್ಚು ಪ್ರಚಾರ ದೊರಕಲಿಲ್ಲ. ಆದರೆ ಈಗ ಯುಟ್ಯೂಬ್ ನಲ್ಲಿ ಹೆಚ್ಚು ಜನರು ಸ್ವೀಕರಿಸುತ್ತಿದ್ದಾರೆ. ಈಗ ಎಲ್ಲೆಡೆ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಇದನ್ನು ವಿರೋಧಿಸಿ ಬೆದರಿಕೆ ಕರೆಗಳು ಕೂಡಾ ಮಾಡತೊಡಗಿದ್ದಾರೆ. ಆದರೆ ಹರೀಶ್ ಅದಕ್ಕೆಲ್ಲ ತಲೆಕೆಡಿಸಿಕೊಂಡವರಲ್ಲ, “ಅವರಿಗೆ ಮೊದಲು ‘ನೀ ಬಿಡು ನಿನ್ನ ಜಾತಿ’ ಆಮೇಲೆ ನನ್ನ ಬಗ್ಗೆ ಮಾತನಾಡಿ ಎಂದು ಪ್ರೀತಿಯಿಂದಲೇ ಉತ್ತರಿಸಿ ಸುಮ್ಮನಾದೆ” ಎಂದು ಹೇಳುತ್ತಾರೆ.

ಸಮಾಜದಲ್ಲಿ ಹೆಚ್ಚು ಹೆಚ್ಚು ಪ್ರಜ್ಞಾವಂತಿಕೆ ಬೆಳೆಯಬೇಕು, ಸಮಾನತೆ ಜಾರಿಯಾಗಬೇಕಾದರೆ ನಮಗೆ ಭಾರತದ ಸಂವಿಧಾನ ಮೂಲ ಅಸ್ತ್ರವಾಗಿದೆ. ಪ್ರಸ್ತುತ ಭಾರತದಲ್ಲಿ ಸಂವಿಧಾನದ ಒಂದೊಂದು ಹಕ್ಕುಗಳು ದಿನದಿಂದ ದಿನಕ್ಕೆ ರೆಕ್ಕೆ ಮುರಿದುಕೊಳ್ಳುತ್ತಿವೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆ ಎನ್ನಬಹುದು. ಈ ಕುರಿತು ಇಂದಿನ ಯುವ ಜನತೆ ಎಚ್ಚೆತ್ತುಕೊಳ್ಳುವುದು ತೀರ ಅಗತ್ಯವಿದೆ. ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದು
ಜಾತಿ ಧರ್ಮಗಳೇ ಮೇಲುಗೈ ಸಾಧಿಸುತ್ತಿವೆ. ಆದ್ದರಿಂದ ಎಲ್ಲದಕ್ಕೂ ಪರಿಹಾರ ಇರುವುದು ಸಂವಿಧಾನ ಅಂಶಗಳಲ್ಲ ಎಂದು ಹರೀಶ್ ತಮ್ಮ ಮನದಾಳದ ಮಾತುಗಳು ಹಂಚಿಕೊಳ್ಳುತ್ತಾರೆ.

‘ಜಾತಿ’ ಕುರಿತು ಕನ್ನಡದ ಮೊದಲ ಹಿಪ್‌‌ಹಾಪ್ ರ್‍ಯಾಪ್ ಸಾಂಗ್ ಮಾಡಿರುವ ಹರೀಶ್ ಅವರು ಈಗ ಕೊರೊನಾ ಕಾಲದಲ್ಲಿ ಬಡಜನರು ಅನುಭವಿಸಿದ ಸಂಕಷ್ಟ ಹಾಗೂ ಸರ್ಕಾರದ ಕರಾಳ ನೀತಿಯ ಬಗ್ಗೆ ‘ಮಾಹಾಮಾರಿ ಕಥೆ‘ ಎನ್ನುವ ಹಿಪ್‌‌ಹಾಪ್ ಹಾಡಿನಲ್ಲಿ ಅದ್ಭುತವಾಗಿ ಬಿಚ್ಚಿಟ್ಟಿದ್ದಾರೆ. ಇನ್ನು ‘ರಾಜನೀತಿ‘ ಎನ್ನುವ ಮತ್ತೊಂದು ಹಿಪ್‌‌ಹಾಪ್ ಹಾಡು ಕೆಲವು ದಿನಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

ಕೇವಲ ದಲಿತರ ಜೊತೆ ಸಹಪಂಕ್ತಿ ಭೋಜನ ಏರ್ಪಡಿಸಿ ಚಿತ್ರಾನ್ನ ಸೇವಿಸಿದರೆ ಮಾತ್ರಕ್ಕೆ ಜಾತಿ ತಾರತಮ್ಯ, ಅಸ್ಪೃಶ್ಯತೆ ಹೋಗಲಾಡಿಸಲು ಖಂಡಿತ ಸಾಧ್ಯವಿಲ್ಲ. ಅಸ್ಪೃಶ್ಯರ ಜೊತೆಗೆ ಹೆಚ್ಚೆಚ್ಚು ಒಳಗೊಳ್ಳುವಿಕೆಗೆ ಎಲ್ಲರೂ ಮುಂದಾಗಬೇಕು, ಅಸಮಾನತೆ ಬಿಟ್ಟು ಸಮಾನತೆ ಸಮಾಜ ಕಟ್ಟಲು ಒಳಮನಸ್ಸು ಪರಿವರ್ತನೆ ಮಾಡಿಕೊಳ್ಳಬೇಕು, ಅವಾಗಲೇ ಜಾತಿ ತಾರತಮ್ಯ ತೊಲಗಬಹುದು, ‘ಪರಿವರ್ತನೆ ಜಗದ ನಿಯಮ’ ಎನ್ನುವ ಭರವಸೆದೊಂದಿಗೆ ನನ್ನ ಹೋರಾಟ ಮುಂದುವರಿಯುತ್ತದೆ ಎನ್ನುತ್ತಾರೆ ಹರೀಶ್.

ಇದನ್ನೂ ಓದಿ: ಭಾರತದ ಜಾತಿ ವೃಕ್ಷದ ವಿಷಕಾರಿ ಹಣ್ಣು ಖೈರ್ಲಾಂಜಿಯನ್ನು ಮರೆಯಬಾರದು

ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟದ ಕಥಾ ಆಧಾರಿತ ‘ಮಹಾನಾಯಕ’ ಧಾರವಾಹಿ ನಾವು ವಿರೋಧಿಸುವ ಬದಲು ಪ್ರೀತಿ ಹಾಗೂ ಹೆಮ್ಮೆಯಿಂದ ಸ್ವೀಕರಿಸಬೇಕಾಗಿದೆ. ಕನ್ನಡದಲ್ಲಿ ಇದೊಂದು ಅಪರೂಪ ಧಾರವಾಹಿ, ದೇಶದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಕೊಲೆ, ಅತ್ಯಾಚಾರ, ದೌರ್ಜನ್ಯಗಳ ಪ್ರಮಾಣ ದಿನಕಳೆದಂತೆ ಹೆಚ್ಚಾಗುತ್ತಿರುವ ಇಂತಹ ಕಾಲಘಟ್ಟದಲ್ಲಿ ‘ಮಹಾನಾಯಕ’ ಧಾರವಾಹಿ ಸಮಾಜದಲ್ಲಿ ಬೆಳಕಾಗಿ ಹಲವು ಮನಸ್ಸುಗಳು ಪರಿವರ್ತನೆಗೊಳ್ಳಲಿ ಎಂದು ಆಶಿಸುತ್ತಾರೆ.

ಹರೀಶ್ ಕಾಂಬಳೆ ಅವರು ಮುಂದಿನ ದಿನಗಳಲ್ಲಿ ಕಿರುತೆರೆ, ಸಿನಿಮಾ, ಸಂಗೀತ ಕ್ಷೇತ್ರದಲ್ಲಿ ಅವಕಾಶ ದೊರೆತರೆ ತಮ್ಮ ವಿಶಿಷ್ಟ ಸಂಗೀತ ಕಲೆ ಪ್ರದರ್ಶಿಸುವ ಇಚ್ಛಾಶಕ್ತಿ ಹೊಂದಿದ್ದಾರೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗದ ಸಂಘ ಸಂಸ್ಥೆಗಳು ಹರೀಶ್ ಅವರ ಕಲೆಯನ್ನು ಗೌರವಿಸಿ ಪ್ರೋತ್ಸಾಹಿಸುತ್ತಿವೆ. ಬಡತನದಲ್ಲಿ ಹುಟ್ಟಿ ಬೆಳೆದ ಹರೀಶ್ ಅವರು ಸ್ವಯಂ ಪ್ರಯತ್ನದಿಂದಲೇ ಈ ಕಲೆಯನ್ನು ಕಲಿತುಕೊಂಡಿರುವುದು ಇನ್ನೊಂದು ವಿಶಿಷ್ಟ ಎನ್ನಬಹುದು.

PC: Harish Kamble/Facebook

ಇದನ್ನೂ ಓದಿ: ಜಾತಿಪದ್ಧತಿಯ ಕಡುವಿರೋಧಿ, ಹೋರಾಟಗಾರ ಸುಧೀರ್ ಧಾವ್ಳೆ

ಅಮೇರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ನಡೆದ ಹೋರಾಟದ ಸಂದರ್ಭದಲ್ಲಿ ಮೊಟ್ಟ ಮೊದಲು ಹಿಪ್‌ಹಾಪ್ ಹಾಡುಗಳು ಹುಟ್ಟು ಪಡೆದಿವೆ. ನಂತರದ ದಿನಗಳಲ್ಲಿ ವಿಶ್ವದಾದ್ಯಂತ ವ್ಯಾಪಿಸಿ ಹೆಚ್ಚು ಪ್ರಸಿ‌ದ್ಧಿ ಪಡೆದಿವೆ. ವಿಶೇಷವಾಗಿ ಅತೀ ಹೆಚ್ಚು ಯುವಜನತೆ ಇಷ್ಟ ಪಡುವ ಹಿಪ್‌ಹಾಪ್ ಹಾಡುಗಳಿಗೆ ಭಾರೀ ಡಿಮ್ಯಾಂಡ್ ಇದೆ. ಇದಕ್ಕೆ ಭಾರತವೂ ಹೊರತಾಗಿಲ್ಲ, ನನಗೂ ಮೊದಲಿನಿಂದಲೂ ತುಂಬಾ ಇಷ್ಟ ಪಡುವ ಸಂಗೀತವಾಗಿದೆ. ಹೀಗಾಗಿ ದೇಶದ ಭವಿಷ್ಯ ರೂಪಿಸುವ ಯುವಜನಾಂಗದ ಪ್ರಿಯವಾದ ಹಿಪ್‌ಹಾಪ್ ಮ್ಯೂಸಿಕ್ ನಾನು ನನ್ನ ‘ಜಾತಿ’ ಹಾಡಿಗೆ ಆಯ್ಕೆ ಮಾಡಿಕೊಂಡು ಪ್ರಯತ್ನಿಸಿದ್ದೇನೆ.

ಹರೀಶ್ ಕಾಂಬಳೆ ಅವರಿಗಿರುವ ಸಾಮಾಜಿಕ ತುಡಿತ ನಿಜಕ್ಕೂ ಮೆಚ್ಚಬೇಕು. ಅವರ ಉದ್ದೇಶ ಹಾಗೂ ಗುರಿಗಳಿಗೆ ನಾವೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಹಿಪ್‌ಹಾಪ್ ರ್‍ಯಾಪ್‌ ಸಾಂಗ್‌ನಲ್ಲಿ ಅಡಗಿರುವ ಸಮಾಜದ ಚಿಂತನೆ ಬಗ್ಗೆ ನಾವೆಲ್ಲರೂ ಸೂಕ್ಷ್ಮವಾಗಿ ಗ್ರಹಿಸಬೇಕಿದೆ. ಸಮ ಸಮಾಜದ ಪರಿಕಲ್ಪನೆ ಹೊತ್ತು ‘ಎಲೆಮರೆ ಕಾಯಿಯಂತೆ’ ತಮ್ಮ ನಿಸ್ವಾರ್ಥ ಕಲೆಯನ್ನು ಸಂಗೀತ ಲೋಕಕ್ಕೆ ಅರ್ಪಿಸುತ್ತಿರುವ ಪ್ರತಿಭಾವಂತ ಯುವಕ ಹರೀಶ್ ಕಾಂಬಳೆ ಕಾರ್ಯಕ್ಕೆ ಬೆಂಬಲಿಸಿ, ಹಾರೈಸೋಣ.‌‌!!

ಹರೀಶ್ ಕಾಂಬಳೆ ಅವರ ಯುಟ್ಯೂಬ್ ಚಾನಲ್‌ಗೆ ಹೋಗಿ ಅವರಿಗೊಂದು ಶುಭಾಶಯ ಹೇಳಲು ಇಲ್ಲಿ ಕ್ಲಿಕ್‌ ಮಾಡಿ. ಹಾಗೂ ಅವರ ಫೇಸ್‌ಬುಕ್‌ಗೆ ಇಲ್ಲಿ ಕ್ಲಿಕ್ ಮಾಡಿ ತಲುಪಬಹುದು.

-ಬಾಲಾಜಿ ಕುಂಬಾರ, ಚಟ್ನಾಳ

ಇದನ್ನೂ ಓದಿ: ಮೇಲ್ಜಾತಿ ದೌರ್ಜನ್ಯವನ್ನು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ತಂದ ಕಾರಂಚೇಡು ದಲಿತರ ಹತ್ಯಾಕಾಂಡಕ್ಕೆ 35 ವರ್ಷ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...