Homeಚಳವಳಿಕೀಳು ನನ್ನ 'ಜಾತಿ' ಅಲ್ಲ, ಕೀಳು ನಿನ್ನ ಬುದ್ಧಿಮಟ್ಟ...!

ಕೀಳು ನನ್ನ ‘ಜಾತಿ’ ಅಲ್ಲ, ಕೀಳು ನಿನ್ನ ಬುದ್ಧಿಮಟ್ಟ…!

'ಜಾತಿ' ಕುರಿತು ಕನ್ನಡದ ಮೊದಲ ಹಿಪ್‌‌ಹಾಪ್ ರ್‍ಯಾಪ್ ಸಾಂಗ್ ಮಾಡಿರುವ ಹರೀಶ್ ಅವರು ಈಗ ಕೊರೊನಾ ಕಾಲದಲ್ಲಿ ಬಡಜನರು ಅನುಭವಿಸಿದ ಸಂಕಷ್ಟ ಹಾಗೂ ಸರ್ಕಾರದ ಕರಾಳ ನೀತಿಯ ಬಗ್ಗೆ 'ಮಾಹಾಮಾರಿ ಕಥೆ' ಎನ್ನುವ ಹಿಪ್‌‌ಹಾಪ್ ಹಾಡಿನಲ್ಲಿ ಅದ್ಭುತವಾಗಿ ಬಿಚ್ಚಿಟ್ಟಿದ್ದಾರೆ.

- Advertisement -
- Advertisement -

ನೀವು ಫೇಸ್ ಬುಕ್,ಯೂಟ್ಯೂಬ್ ಬಳಕೆದಾರರಾಗಿದ್ದರೆ ಹರೀಶ್ ಕಾಂಬಳೆ ಎನ್ನುವ ಹೆಸರಿನ ಅಕೌಂಟ್ ಇದೆ. ಹರೀಶ್ ಅವರು ವರ್ಷದ ಹಿಂದೆ ಯುಟ್ಯೂಬ್‌ಗೆ ಸೇರಿಸಿದ ಕೇವಲ ಮೂರು ನಿಮಿಷದ ಒಂದು ವಿಡಿಯೋ ತುಣುಕು ಹಾಡು ಈಗ ಎಲ್ಲೆಡೆ  ಸಕ್ಕತ್ ಸೌಂಡ್ ಮಾಡ್ತಿದೆ. ಸಾಹಿತ್ಯ ತನ್ನದೇ, ಆದರೆ ಇಂದಿನ ಯುವ ಜನತೆಯನ್ನು ಆಕರ್ಷಿಸಲು ಹೊಸ ಮ್ಯೂಸಿಕ್ ಆಯ್ದು ವಿಶಿಷ್ಟವಾಗಿ ಪ್ರಯತ್ನಿಸಿದ್ದಾರೆ.

“ನಿ ಬಿಟ್ಟು ಕೊಡು ಜಾತಿ
ನಾನು ಬಿಡುವೆ ಮೀಸಲಾತಿ
ಹೇಳು ಏಕೆ ಸುಮ್ಮನಾದೆ
ನಿನಗೆ ಇಲ್ವಾ ಮಂಜೂರಾತಿ
ರಣನೀತಿ ಪ್ರಖ್ಯಾತಿ

ಕೀಳು ನನ್ನ ಜಾತಿ ಅಲ್ಲ
ಕೀಳು ನಿನ್ನ ಬುದ್ಧಿಮಟ್ಟ
ಜಾತಿ ನಿನಗೆ ಮುಖ್ಯ”

ಇದನ್ನೂ ಓದಿ: PC: ಬ್ರಾಹ್ಮಣ್ಯದ ವಿರೋಧ ಮತ್ತು ಜಾತಿ ವಾಸ್ತವದ ಪ್ರಶ್ನೆಗೆ ಒಂದು ಉತ್ತರ

‘ಜಾತಿ’ ಎನ್ನುವ ಶೀರ್ಷಿಕೆಯಲ್ಲಿ ಹರೀಶ್ ಅವರು ರಚಿಸಿದ ಹಾಡಿನ ಈ ಮೇಲಿನ ಸಾಲುಗಳು ಸಮಾಜದಲ್ಲಿರುವ ಅನ್ಯಾಯ, ಅತ್ಯಾಚಾರ, ದೌರ್ಜನ್ಯ, ಜಾತಿಯ ಭೀಕರತೆ ಬಿಚ್ಚಿಡುತ್ತವೆ. ಹರೀಶ್ ಅವರು ರಚಿಸಿ ಹಾಡಿರುವ ಹಾಡು ಕನ್ನಡ ಸಂಗೀತ ಕ್ಷೇತ್ರದಲ್ಲಿಯೇ ಪ್ರಪ್ರಥಮ ‘ಜಾತಿ’ Hip-hop Rap ಹಾಡು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಹರೀಶ್ ಅವರ ವಿನೂತನ ದೃಷ್ಟಿಕೋನದ ಫಲವಾಗಿ ಇಂದು ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕಲ್ಯಾಣ ಕರ್ನಾಟಕದ ಹೆಮ್ಮೆಯ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹತ್ಯಾಳ ಎನ್ನುವ ಪುಟ್ಟ ಗ್ರಾಮದವರಾದ ಹರೀಶ್ ಕಾಂಬಳೆ ಅವರು ಮೂಲತಃ ಕೃಷಿ ಕುಟುಂಬದವರು. ಬಿ.ಎಸ್ಸಿ. ಬಿ.ಇಡ್. ಪದವಿಧರರಾದ ಹರೀಶ್ ಅವರು ಸ್ವಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದಾರೆ. ‘ನನಗೆ ಕಾಲೇಜು ದಿನಗಳಿಂದಲೂ ಕವಿತೆ ಬರೆಯುವುದು, ಸಂಗೀತದ ಮೇಲೆ ಹೆಚ್ಚಿನ ಹವ್ಯಾಸ ಇದೆ. ಹಾಗೇ ಬುದ್ಧ ಬಸವ ಅಂಬೇಡ್ಕರ್ ಸೇರಿದಂತೆ ಸಮಾಜದ ಉನ್ನತಿಗಾಗಿ ಶ್ರಮಿಸಿದ ಮಹಾತ್ಮರ ಪುಸ್ತಕಗಳನ್ನು ಓದುವ ಆಸಕ್ತಿ ಇದೆ’ ಎನ್ನುತ್ತಾರೆ ಹರೀಶ್.

ಹರೀಶ್ ಅವರು ಪ್ರೀತಿ – ಪ್ರೇಮ, ನಾಡು -ನುಡಿಯ ಬಗ್ಗೆ ಕವಿತೆಗಳು ಬರೆಯಲು ಹಾಡುಗಾರಿಕೆ ಮಾಡಲು ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಸಮಾಜವನ್ನು ಸೂಕ್ಷ್ಮವಾಗಿ ಗೃಹಿಸಿ ‘ಕಂಡದ್ದು ಕಂಡಹಾಗೇ’ ಹೇಳುವ ಧೈರ್ಯ ಬೆಳೆಸಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಅನುಭವ ಜೊತೆಗೆ ಸಮಕಾಲೀನ ಸಮಾಜದ ಅವಸ್ಥೆಯ ವಿರುದ್ಧ ‘ಬಂಡಾಯ ಸಾಹಿತ್ಯ’ ರಚಿಸುವ ಮೂಲಕ ತಮ್ಮದೇ ಶೈಲಿಯ ವಿಭಿನ್ನವಾದ ಪದ ಜೋಡಣೆ, ಹಾಡುಗಾರಿಕೆಯ ಸಾಹಸ ಮಾಡುತ್ತಿದ್ದಾರೆ.

PC: Harish Kamble/Facebook

ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಕಾಯಕ ಭೂಮಿಯ ನೆಲದವರಾದ ಹರೀಶ್ ಅವರಿಗೆ ಶರಣರ ‘ವಚನ ಕ್ರಾಂತಿ’ಯ ಬಗ್ಗೆ ಬಹಳ ಹೆಮ್ಮೆ ಇದೆ. ‘ಅಂದು ಶೋಷಣೆಗೆ ಒಳಪಟ್ಟ ಅನೇಕ ಶ್ರಮಿಕ ವರ್ಗದವರು ಮುಂದೆ ವಚನಕಾರರಾಗಿ ಅಸಮಾನತೆ, ಶೋಷಣೆ ಸಮಾಜದ ವಿರುದ್ಧ ದನಿಯಾಗಿ ಸಮ ಸಮಾಜ ಸ್ಥಾಪನೆಗೆ ಮುಂದಾಗಿದರು. ಅಂತಹ ಮಹಾನ್ ಶರಣರ ವಚನ ಚಳವಳಿಯ ಆಶಯ ಮತ್ತು ಸಿದ್ಧಾಂತವನ್ನು ಮತ್ತೆ ಮುನ್ನೆಲೆಗೆ ತರಬಯಸುವ ತುಡಿತ ನನ್ನದಾಗಿದೆ, ಹಾಗಾಗಿಯೇ ಈ ಒಂದು ಚಿಕ್ಕ ಪ್ರಯತ್ನಕ್ಕೆ ಕೈ ಹಾಕಿರುವೆ’ ಎಂದು ಹರೀಶ್ ತಮ್ಮ ಸಾಮಾಜಿಕ ಬದ್ಧತೆಯ ನುಡಿಗಳು ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಜಾತಿ ಮತ್ತು ಮೀಸಲಾತಿ ಬಗ್ಗೆ ನಟಿ ಕಂಗನಾ ರಣಾವತ್‌ಗೊಂದು ಪತ್ರ

ಹರೀಶ್ ಅವರು ‘ಜಾತಿ’ ಎನ್ನುವ ಹಿಪ್ ಹಾಪ್ ರ್‍ಯಾಪ್‌ ಹಾಡು ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದರು. ಆದರೆ ಹೆಚ್ಚು ಪ್ರಚಾರ ದೊರಕಲಿಲ್ಲ. ಆದರೆ ಈಗ ಯುಟ್ಯೂಬ್ ನಲ್ಲಿ ಹೆಚ್ಚು ಜನರು ಸ್ವೀಕರಿಸುತ್ತಿದ್ದಾರೆ. ಈಗ ಎಲ್ಲೆಡೆ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಇದನ್ನು ವಿರೋಧಿಸಿ ಬೆದರಿಕೆ ಕರೆಗಳು ಕೂಡಾ ಮಾಡತೊಡಗಿದ್ದಾರೆ. ಆದರೆ ಹರೀಶ್ ಅದಕ್ಕೆಲ್ಲ ತಲೆಕೆಡಿಸಿಕೊಂಡವರಲ್ಲ, “ಅವರಿಗೆ ಮೊದಲು ‘ನೀ ಬಿಡು ನಿನ್ನ ಜಾತಿ’ ಆಮೇಲೆ ನನ್ನ ಬಗ್ಗೆ ಮಾತನಾಡಿ ಎಂದು ಪ್ರೀತಿಯಿಂದಲೇ ಉತ್ತರಿಸಿ ಸುಮ್ಮನಾದೆ” ಎಂದು ಹೇಳುತ್ತಾರೆ.

ಸಮಾಜದಲ್ಲಿ ಹೆಚ್ಚು ಹೆಚ್ಚು ಪ್ರಜ್ಞಾವಂತಿಕೆ ಬೆಳೆಯಬೇಕು, ಸಮಾನತೆ ಜಾರಿಯಾಗಬೇಕಾದರೆ ನಮಗೆ ಭಾರತದ ಸಂವಿಧಾನ ಮೂಲ ಅಸ್ತ್ರವಾಗಿದೆ. ಪ್ರಸ್ತುತ ಭಾರತದಲ್ಲಿ ಸಂವಿಧಾನದ ಒಂದೊಂದು ಹಕ್ಕುಗಳು ದಿನದಿಂದ ದಿನಕ್ಕೆ ರೆಕ್ಕೆ ಮುರಿದುಕೊಳ್ಳುತ್ತಿವೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆ ಎನ್ನಬಹುದು. ಈ ಕುರಿತು ಇಂದಿನ ಯುವ ಜನತೆ ಎಚ್ಚೆತ್ತುಕೊಳ್ಳುವುದು ತೀರ ಅಗತ್ಯವಿದೆ. ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದು
ಜಾತಿ ಧರ್ಮಗಳೇ ಮೇಲುಗೈ ಸಾಧಿಸುತ್ತಿವೆ. ಆದ್ದರಿಂದ ಎಲ್ಲದಕ್ಕೂ ಪರಿಹಾರ ಇರುವುದು ಸಂವಿಧಾನ ಅಂಶಗಳಲ್ಲ ಎಂದು ಹರೀಶ್ ತಮ್ಮ ಮನದಾಳದ ಮಾತುಗಳು ಹಂಚಿಕೊಳ್ಳುತ್ತಾರೆ.

‘ಜಾತಿ’ ಕುರಿತು ಕನ್ನಡದ ಮೊದಲ ಹಿಪ್‌‌ಹಾಪ್ ರ್‍ಯಾಪ್ ಸಾಂಗ್ ಮಾಡಿರುವ ಹರೀಶ್ ಅವರು ಈಗ ಕೊರೊನಾ ಕಾಲದಲ್ಲಿ ಬಡಜನರು ಅನುಭವಿಸಿದ ಸಂಕಷ್ಟ ಹಾಗೂ ಸರ್ಕಾರದ ಕರಾಳ ನೀತಿಯ ಬಗ್ಗೆ ‘ಮಾಹಾಮಾರಿ ಕಥೆ‘ ಎನ್ನುವ ಹಿಪ್‌‌ಹಾಪ್ ಹಾಡಿನಲ್ಲಿ ಅದ್ಭುತವಾಗಿ ಬಿಚ್ಚಿಟ್ಟಿದ್ದಾರೆ. ಇನ್ನು ‘ರಾಜನೀತಿ‘ ಎನ್ನುವ ಮತ್ತೊಂದು ಹಿಪ್‌‌ಹಾಪ್ ಹಾಡು ಕೆಲವು ದಿನಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

ಕೇವಲ ದಲಿತರ ಜೊತೆ ಸಹಪಂಕ್ತಿ ಭೋಜನ ಏರ್ಪಡಿಸಿ ಚಿತ್ರಾನ್ನ ಸೇವಿಸಿದರೆ ಮಾತ್ರಕ್ಕೆ ಜಾತಿ ತಾರತಮ್ಯ, ಅಸ್ಪೃಶ್ಯತೆ ಹೋಗಲಾಡಿಸಲು ಖಂಡಿತ ಸಾಧ್ಯವಿಲ್ಲ. ಅಸ್ಪೃಶ್ಯರ ಜೊತೆಗೆ ಹೆಚ್ಚೆಚ್ಚು ಒಳಗೊಳ್ಳುವಿಕೆಗೆ ಎಲ್ಲರೂ ಮುಂದಾಗಬೇಕು, ಅಸಮಾನತೆ ಬಿಟ್ಟು ಸಮಾನತೆ ಸಮಾಜ ಕಟ್ಟಲು ಒಳಮನಸ್ಸು ಪರಿವರ್ತನೆ ಮಾಡಿಕೊಳ್ಳಬೇಕು, ಅವಾಗಲೇ ಜಾತಿ ತಾರತಮ್ಯ ತೊಲಗಬಹುದು, ‘ಪರಿವರ್ತನೆ ಜಗದ ನಿಯಮ’ ಎನ್ನುವ ಭರವಸೆದೊಂದಿಗೆ ನನ್ನ ಹೋರಾಟ ಮುಂದುವರಿಯುತ್ತದೆ ಎನ್ನುತ್ತಾರೆ ಹರೀಶ್.

ಇದನ್ನೂ ಓದಿ: ಭಾರತದ ಜಾತಿ ವೃಕ್ಷದ ವಿಷಕಾರಿ ಹಣ್ಣು ಖೈರ್ಲಾಂಜಿಯನ್ನು ಮರೆಯಬಾರದು

ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟದ ಕಥಾ ಆಧಾರಿತ ‘ಮಹಾನಾಯಕ’ ಧಾರವಾಹಿ ನಾವು ವಿರೋಧಿಸುವ ಬದಲು ಪ್ರೀತಿ ಹಾಗೂ ಹೆಮ್ಮೆಯಿಂದ ಸ್ವೀಕರಿಸಬೇಕಾಗಿದೆ. ಕನ್ನಡದಲ್ಲಿ ಇದೊಂದು ಅಪರೂಪ ಧಾರವಾಹಿ, ದೇಶದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಕೊಲೆ, ಅತ್ಯಾಚಾರ, ದೌರ್ಜನ್ಯಗಳ ಪ್ರಮಾಣ ದಿನಕಳೆದಂತೆ ಹೆಚ್ಚಾಗುತ್ತಿರುವ ಇಂತಹ ಕಾಲಘಟ್ಟದಲ್ಲಿ ‘ಮಹಾನಾಯಕ’ ಧಾರವಾಹಿ ಸಮಾಜದಲ್ಲಿ ಬೆಳಕಾಗಿ ಹಲವು ಮನಸ್ಸುಗಳು ಪರಿವರ್ತನೆಗೊಳ್ಳಲಿ ಎಂದು ಆಶಿಸುತ್ತಾರೆ.

ಹರೀಶ್ ಕಾಂಬಳೆ ಅವರು ಮುಂದಿನ ದಿನಗಳಲ್ಲಿ ಕಿರುತೆರೆ, ಸಿನಿಮಾ, ಸಂಗೀತ ಕ್ಷೇತ್ರದಲ್ಲಿ ಅವಕಾಶ ದೊರೆತರೆ ತಮ್ಮ ವಿಶಿಷ್ಟ ಸಂಗೀತ ಕಲೆ ಪ್ರದರ್ಶಿಸುವ ಇಚ್ಛಾಶಕ್ತಿ ಹೊಂದಿದ್ದಾರೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗದ ಸಂಘ ಸಂಸ್ಥೆಗಳು ಹರೀಶ್ ಅವರ ಕಲೆಯನ್ನು ಗೌರವಿಸಿ ಪ್ರೋತ್ಸಾಹಿಸುತ್ತಿವೆ. ಬಡತನದಲ್ಲಿ ಹುಟ್ಟಿ ಬೆಳೆದ ಹರೀಶ್ ಅವರು ಸ್ವಯಂ ಪ್ರಯತ್ನದಿಂದಲೇ ಈ ಕಲೆಯನ್ನು ಕಲಿತುಕೊಂಡಿರುವುದು ಇನ್ನೊಂದು ವಿಶಿಷ್ಟ ಎನ್ನಬಹುದು.

PC: Harish Kamble/Facebook

ಇದನ್ನೂ ಓದಿ: ಜಾತಿಪದ್ಧತಿಯ ಕಡುವಿರೋಧಿ, ಹೋರಾಟಗಾರ ಸುಧೀರ್ ಧಾವ್ಳೆ

ಅಮೇರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ನಡೆದ ಹೋರಾಟದ ಸಂದರ್ಭದಲ್ಲಿ ಮೊಟ್ಟ ಮೊದಲು ಹಿಪ್‌ಹಾಪ್ ಹಾಡುಗಳು ಹುಟ್ಟು ಪಡೆದಿವೆ. ನಂತರದ ದಿನಗಳಲ್ಲಿ ವಿಶ್ವದಾದ್ಯಂತ ವ್ಯಾಪಿಸಿ ಹೆಚ್ಚು ಪ್ರಸಿ‌ದ್ಧಿ ಪಡೆದಿವೆ. ವಿಶೇಷವಾಗಿ ಅತೀ ಹೆಚ್ಚು ಯುವಜನತೆ ಇಷ್ಟ ಪಡುವ ಹಿಪ್‌ಹಾಪ್ ಹಾಡುಗಳಿಗೆ ಭಾರೀ ಡಿಮ್ಯಾಂಡ್ ಇದೆ. ಇದಕ್ಕೆ ಭಾರತವೂ ಹೊರತಾಗಿಲ್ಲ, ನನಗೂ ಮೊದಲಿನಿಂದಲೂ ತುಂಬಾ ಇಷ್ಟ ಪಡುವ ಸಂಗೀತವಾಗಿದೆ. ಹೀಗಾಗಿ ದೇಶದ ಭವಿಷ್ಯ ರೂಪಿಸುವ ಯುವಜನಾಂಗದ ಪ್ರಿಯವಾದ ಹಿಪ್‌ಹಾಪ್ ಮ್ಯೂಸಿಕ್ ನಾನು ನನ್ನ ‘ಜಾತಿ’ ಹಾಡಿಗೆ ಆಯ್ಕೆ ಮಾಡಿಕೊಂಡು ಪ್ರಯತ್ನಿಸಿದ್ದೇನೆ.

ಹರೀಶ್ ಕಾಂಬಳೆ ಅವರಿಗಿರುವ ಸಾಮಾಜಿಕ ತುಡಿತ ನಿಜಕ್ಕೂ ಮೆಚ್ಚಬೇಕು. ಅವರ ಉದ್ದೇಶ ಹಾಗೂ ಗುರಿಗಳಿಗೆ ನಾವೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಹಿಪ್‌ಹಾಪ್ ರ್‍ಯಾಪ್‌ ಸಾಂಗ್‌ನಲ್ಲಿ ಅಡಗಿರುವ ಸಮಾಜದ ಚಿಂತನೆ ಬಗ್ಗೆ ನಾವೆಲ್ಲರೂ ಸೂಕ್ಷ್ಮವಾಗಿ ಗ್ರಹಿಸಬೇಕಿದೆ. ಸಮ ಸಮಾಜದ ಪರಿಕಲ್ಪನೆ ಹೊತ್ತು ‘ಎಲೆಮರೆ ಕಾಯಿಯಂತೆ’ ತಮ್ಮ ನಿಸ್ವಾರ್ಥ ಕಲೆಯನ್ನು ಸಂಗೀತ ಲೋಕಕ್ಕೆ ಅರ್ಪಿಸುತ್ತಿರುವ ಪ್ರತಿಭಾವಂತ ಯುವಕ ಹರೀಶ್ ಕಾಂಬಳೆ ಕಾರ್ಯಕ್ಕೆ ಬೆಂಬಲಿಸಿ, ಹಾರೈಸೋಣ.‌‌!!

ಹರೀಶ್ ಕಾಂಬಳೆ ಅವರ ಯುಟ್ಯೂಬ್ ಚಾನಲ್‌ಗೆ ಹೋಗಿ ಅವರಿಗೊಂದು ಶುಭಾಶಯ ಹೇಳಲು ಇಲ್ಲಿ ಕ್ಲಿಕ್‌ ಮಾಡಿ. ಹಾಗೂ ಅವರ ಫೇಸ್‌ಬುಕ್‌ಗೆ ಇಲ್ಲಿ ಕ್ಲಿಕ್ ಮಾಡಿ ತಲುಪಬಹುದು.

-ಬಾಲಾಜಿ ಕುಂಬಾರ, ಚಟ್ನಾಳ

ಇದನ್ನೂ ಓದಿ: ಮೇಲ್ಜಾತಿ ದೌರ್ಜನ್ಯವನ್ನು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ತಂದ ಕಾರಂಚೇಡು ದಲಿತರ ಹತ್ಯಾಕಾಂಡಕ್ಕೆ 35 ವರ್ಷ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...