Homeಚಳವಳಿಜಾತಿಪದ್ಧತಿಯ ಕಡುವಿರೋಧಿ, ಹೋರಾಟಗಾರ ಸುಧೀರ್ ಧಾವ್ಳೆ

ಜಾತಿಪದ್ಧತಿಯ ಕಡುವಿರೋಧಿ, ಹೋರಾಟಗಾರ ಸುಧೀರ್ ಧಾವ್ಳೆ

ಒಬ್ಬ ಸಂಘಟಕರಾಗಿ, ಲೇಖಕರಾಗಿ, ಕವಿಯಾಗಿ, ನಾಟಕಕಾರರಾಗಿ, ಸ್ವತಂತ್ರ ಪತ್ರಕರ್ತರಾಗಿ, ಮರಾಠಿ ಪತ್ರಿಕೆಯೊಂದರ ಸಂಪಾದಕರಾಗಿ, ಸುಧೀರ್ ಧಾವ್ಳೆಯವರು ಸಾಮಾಜಿಕ ಅನ್ಯಾಯ ಮತ್ತು ದಲಿತರ ಮೇಲಿನ ದೌರ್ಜನ್ಯಗಳನ್ನು ಸಾರ್ವಜನಿಕ ಚರ್ಚೆಗೆ ತರಲು ಅವಿರತ ಪ್ರಯತ್ನ ಮಾಡಿ, ಪ್ರಜಾಪ್ರಭುತ್ವವವನ್ನು ಒಂದು ಮುಖ್ಯ ಹೋರಾಟದ ಶಕ್ತಿಯಾಗಿ ಪರಿವರ್ತಿಸಲು ದುಡಿದಿದ್ದಾರೆ.

- Advertisement -
- Advertisement -

ಸುಧೀರ್ ಧಾವ್ಳೆ ಅವರ ಹೋರಾಟಗಳ ಬಗೆಗಿನ ಬದ್ಧತೆ, ನ್ಯಾಯದ ಬಗೆಗೆ ಅವರಿಗಿರುವ ಆಳವಾದ ಮೂಲಭೂತ ನಂಬಿಕೆಯ ಮೇಲೆ ನಿಂತಿದೆ. ನಾಗಪುರದ ಅಂಬೇಡ್ಕರ್‌ವಾದಿ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿದ್ದ, ಇಂದೋರದಲ್ಲಿ ತನ್ನ ಬಾಲ್ಯ ಜೀವನ ಕಳೆದ ಸುಧೀರ್, ಆರಂಭದಿಂದಲೇ ಮಾನವ ಹಕ್ಕುಗಳು ಮತ್ತು ಘನತೆಯ ಸಂಬಂಧಿ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. 1994ನೇ ಇಸವಿಯವರೆಗೂ ನಾಗಪುರದಲ್ಲಿನ ಜನಪರ ಚಳುವಳಿಗಳಲ್ಲಿ ಭಾಗಿಯಾಗಿದ್ದ ಸುಧೀರ್ ತರುವಾಯ ಕೆಲಸದ ಹುಡುಕಾಟದಲ್ಲಿ ಬಾಂಬೆಗೆ ನೆಲೆ ಬದಲಿಸಿದರು.

1995ನೇ ಇಸವಿಯಿಂದ, ಸುಧೀರ್ ಧಾವ್ಳೆ ಯವರು ತಮ್ಮ ಜೀವನವನ್ನು ದಲಿತರ ಮತ್ತು ಇನ್ನಿತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ವಿರುದ್ಧ ಹೋರಾಡಲು ಮುಡುಪಿಟ್ಟರು. ಅವರು ಬೀದಿ ಹೋರಾಟಗಳಲ್ಲಿ ಮತ್ತು ಕೋರ್ಟ್‌ಗಳಲ್ಲಿನ ಹೋರಾಟಗಳೆರಡರಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು ಮತ್ತು ಘಾಟ್ಕೋಪರ್ ರಮಾಬಾಯಿ ನಗರದಲ್ಲಿ ಜರುಗಿದ ದಲಿತ ಹತ್ಯಾಕಾಂಡದಂತಹ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಹೋರಾಡಿದ್ದರು. ಆ ಘಟನೆಯಲ್ಲಿ ಅಂಬೇಡ್ಕರ್ ಪ್ರತಿಮೆಯ ವಿರೂಪಗೊಳಿಸದ್ದನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದ 10 ಮಂದಿ ದಲಿತರನ್ನು ಪೊಲೀಸರು ಗುಂಡು ಹಾರಿಸಿ ಕೊಂದಿದ್ದರು.

ಹಾಗೆಯೇ ಖೈರ್ಲಾಂಜಿ ಹೋರಾಟ (2006ರ ದಲಿತ ಕುಟುಂಬ ಒಂದರ ಮಾರಣಹೋಮ), 2008ರ ಅಹಮದಾಬಾದ್ ಜಿಲ್ಲೆಯ ಬಾಬನ್ ಮಿಸಲ್ ಕೊಲೆ, 2008ರ ಮರಾಟ್‌ವಾಡದಲ್ಲಾದ ಸಾಹೇಬರಾವ್ ಜೊಂಧಲೆ ಅವರ ಘೋರ ಕೊಲೆ, ಬೀಡ್ ಜಿಲ್ಲೆಯಲ್ಲಿ 2009ರಲ್ಲಾದ ಸದಾಶಿವ್ ಸಾಲ್ವೆಯವರ ಕೊಲೆ, ನಾಗ್ಪುರದಲ್ಲಿ 2009ರಲ್ಲಾದ ಮನೋರಮಾ ಕಾಂಬ್ಳೆ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣ, 2009ರಲ್ಲಿ ಔರಂಗಾಬಾದ ಬಳಿಯ ಪಾಲ್ಗಾಂವ್ ನಲ್ಲಿ ಕೊಲೆಯಾದ ರೋಹಿದಾಸ್ ತೂಪೆ, ಮತ್ತು ಮಹಾರಾಷ್ಟ್ರದಲ್ಲಿ ಇನ್ನು ಹತ್ತು ಹಲವು ದಲಿತರ ಕೊಲೆ ಮತ್ತು ದೌರ್ಜನ್ಯದ ಕೇಸ್‌ಗಳ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

2002ರಲ್ಲಿ, ಗುಜರಾತ್‌ನಲ್ಲಾದ ಸಾಮೂಹಿಕ ಹತ್ಯಾಕಾಂಡದ ನಂತರದ ದಿನಗಳಲ್ಲಿ, ವಿದ್ರೋಹಿ ಎನ್ನುವ ಮರಾಠಿ ಪತ್ರಿಕೆಯೊಂದನ್ನು ಪ್ರಾರಂಭಿಸಿದರು. ನಾಲ್ಕು ಪುಟಗಳ ಪತ್ರಿಕೆಯಾಗಿ ಶುರುವಾಗಿ ನಂತರ ಕೆಲವು ತಿಂಗಳುಗಳ ನಂತರ ಎಂಟು ಪುಟಗಳ ಪತ್ರಿಕೆಯಾಗಿ ಮಾರ್ಪಾಡಾಯಿತು. ಕೆಲವೇ ವರ್ಷಗಳಲ್ಲಿ ಒಂದು ಪೂರ್ಣ ಪ್ರಮಾಣದ ಪತ್ರಿಕೆಯ ಸ್ವರೂಪ ಪಡೆದು ತಿಂಗಳಿಗೆ ಎರಡು ಬಾರಿ ಮುದ್ರಣ ಹೊಂದತ್ತಾ, ರಾಷ್ಟದಲ್ಲಿ ಜರುಗುವ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡಲು ಶುರುಮಾಡಿತು. ಈಗಲೂ ದಲಿತರ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮಾನವಹಕ್ಕುಗಳ ಉಲ್ಲಂಘನೆಯ ಬಗ್ಗೆ ದಲಿತರ ದನಿಯಾಗಿ ಹೋರಾಟ ಮುಂದುವರೆಸಿ, ಸತ್ಯಶೋಧನ ವರದಿಗಳನ್ನು ಮತ್ತು ಮೌಲ್ಯಯುತ ಸಾಹಿತ್ಯವನ್ನು ಪ್ರಕಟಿಸುವ ಪತ್ರಿಕೆಯಾಗಿ ಮುಂದುವರೆದಿದೆ.

ಇದನ್ನೂ ಓದಿ: ಎಷ್ಟೋ ಆದಿವಾಸಿ ಕುಟುಂಬಗಳ ಪ್ರೀತಿಯ ಪುತ್ರ ಮಹೇಶ್ ರಾವುತ್ ಬಂಧನ ನ್ಯಾಯವೇ?

2006ರ ಖೈರ್ಲಾಂಜಿ ಹತ್ಯಾಕಾಂಡದ ನಂತರ, ಬಹುತೇಕ ಅಂಬೇಡ್ಕರ್‌ವಾದಿಗಳು, ಎಡ ಮತ್ತು ಇತರ ಪ್ರಗತಿಪರ ಸಂಘಟನೆಗಳು, ತಮ್ಮ ಹೋರಾಟದ ಸ್ವರೂಪಗಳನ್ನು ಒಗ್ಗೂಡಿಸಿಕೊಂಡು, ಜಾತಿ ವಿನಾಶದ ಪ್ರತಿರೋಧದ ಮೂಲಕ, ಧೀರ್ಘಕಾಲದ ಗುರಿಗಳನ್ನು ಹೊಂದಿರುವ ರಾಜಕೀಯ ಚಳುವಳಿ ಮಾಡುವ ನಿರ್ಧಾರಕ್ಕೆ ಬಂದವು. ಈ ಹೊಸ ಆಶಯದೊಂದಿಗೆ, ಮುಂಬೈನ ಚೈತನ್ಯ ಭೂಮಿಯಲ್ಲಿ ಡಿಸೆಂಬರ್ 6, 2007ರಂದು “Republican Panthers Jaatiya Antachi Chalwal” (ಜಾತಿ ವಿನಾಶ ರಿಪಬ್ಲಿಕನ್ ಪ್ಯಾಂಥರ್ಸ್ ಅಂದೋಲನ) ಸಂಘಟನೆ ಚಾಲನೆಗೆ ಬಂದಿತು.

ಸುಧೀರ್ ಧಾವ್ಳೆ, ಈ ಸಂಘಟನೆಯ ಸಂಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದರು. ತಮ್ಮ ಹಲವು ವರ್ಷಗಳ ಕಾಲದ ರಾಜಕೀಯ ಬೌದ್ಧಿಕ ಪರಿಜ್ಞಾನದ ಸಹಾಯದಿಂದ, ಜಾತಿ ವಿನಾಶವನ್ನು ಕೇಂದ್ರದಲ್ಲಿ ಇಟ್ಟುಕೊಂಡು ರಿಪಬ್ಲಿಕನ್ ಪ್ಯಾಂಥರ್ಸ್ ಸಂಘಟನೆಗೆ ಬೇಕಾದ ತಾತ್ವಿಕ ಸ್ವರೂಪವನ್ನು ತಂದುಕೊಟ್ಟರು. ಒಂದು ಸಾಂಸ್ಕೃತಿಕ ಸಂಘಟನೆಯಾಗಿ, ತಮ್ಮ ಕ್ರಾಂತಿಕಾರಿ ಸಂಗೀತ, ಬೀದಿ ನಾಟಕಗಳನ್ನು ಸ್ಲಂಗಳಿಗೆ, ಕಾರ್ಮಿಕ ಸಂಘಟನೆಗಳಿಗೆ, ಶಾಲೆಗಳಿಗೆ, ಹಲವು ಪ್ರತಿಭಟನೆಗಳಿಗೆ ಕೊಂಡೊಯ್ದು, ಹಿಂದೂ ಜಾತಿ ಪದ್ಧತಿಯ ದೌರ್ಜನ್ಯಗಳನ್ನು ಜನರಿಗೆ ತಲಪುವಂತೆ ಮಾಡಿದರು .

2011ರಲ್ಲಿ, ಮಹಾರಾಷ್ಟ್ರ ಪೊಲೀಸ್ ಧಾವ್ಳೆಯವರನ್ನು ದೇಶದ್ರೋಹದ ಆರೋಪದ ಮತ್ತು ಆತಂಕವಾದಿ ಸಂಘಟನೆಯ ಸದಸ್ಯ ಮತ್ತು ಅವರಿಗೆ ಸಹಕಾರ ನೀಡುತ್ತಿರುವ ಅರೋಪಗಳನ್ನು ಹೊರಿಸಿ ಬಂಧಿಸಿದರು. 2014ರ ಮೇ ತಿಂಗಳಲ್ಲಿ, 40 ತಿಂಗಳು ಜೈಲಿನಲ್ಲಿ ಸೆರೆವಾಸ ಅನುಭವಿಸದ ನಂತರ, ಮಹಾರಾಷ್ಟ್ರದ ಗೊಂಡಿ ಜಿಲ್ಲೆಯ ಯುಎಪಿಎ ವಿಶೇಷ ನ್ಯಾಯಾಲಯದ ಮುಖ್ಯನ್ಯಾಯಾಧೀಶರಾದ ಆರ್ ಜಿ ಅಸ್ಮರ್, ಧಾವ್ಳೆ ಮತ್ತು ಇನ್ನಿತರ 8 ಮಂದಿಯನ್ನು ಎಲ್ಲಾ ಆರೋಪಗಳಿಂದ ದೋಷಮುಕ್ತಗೊಳಿಸಿ ನಿರಪರಾಧಿ ಎಂದು ತೀರ್ಪು ನೀಡಿದರು. ಬಹಳ ಖಾರವಾಗಿ ಪ್ರತಿಕ್ರಿಯಿಸಿದ್ದ ಕೋರ್ಟಿನ ತೀರ್ಪು, ರಾಜ್ಯ ಪೊಲೀಸ್ ತನಿಖೆಯ ಮೇಲೆ ಟೀಕಾ ಪ್ರಹಾರ ಮಾಡಿ ಅಸಮಧಾನ ಸೂಚಿಸಿತ್ತು.

ವಿದ್ರೋಹಿ ಪತ್ರಿಕೆಯನ್ನು ಶುರು ಮಾಡಿದ್ದುದೇ, ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾಗಿ ಧಾವ್ಳೆಯವರನ್ನು ಬಂಧಿಸಲು ಕಾರಣವಾಗಿತ್ತು ಎಂಬುದು ಎಲ್ಲರ ನಂಬಿಕೆ. ಬಿಡುಗಡೆಯ ನಂತರ ಸುಧೀರ್‌ರವರು ಪತ್ರಿಕೆಯ ಪ್ರಸಾರವನ್ನು ಇನ್ನಷ್ಟು ಹೆಚ್ಚಿಸುವುದರ ಜತೆಗೆ, ಹಲವಾರು ಚಳುವಳಿಗಳು, ಪ್ರತಿಭಟನೆಗಳನ್ನು ಸಾಮಾಜಿಕ ಸಮಸ್ಯೆಗಳ ಮೇಲೆ ಹಮ್ಮಿಕೊಂಡರು. ಜಾತಿ ದೌರ್ಜನ್ಯಗಳ ಮೇಲೆ ಹೋರಾಡುವ ಹಲವಾರು ಸಂಘಟನೆಗಳ ಒಕ್ಕೂಟಗಳಾದ, ಜಾತಿ ಅತ್ಯಾಚಾರ್ ವಿರೋಧಿ ಕೃತಿ ಸಮಿತಿ (ಜಾತಿ ದೌರ್ಜನ್ಯ ವಿರೋಧಿ ಕಾರ್ಯ ಸಮಿತಿ), ಸಾಮಾಜಿಕ ನ್ಯಾಯಕ್ಕಾಗಿ ಜಂಟಿ ಸಮಿತಿ, ಭೀಮ್ ಕೋರೆಗಾಂವ್ ಶೌರ್ಯ ದಿನ್ ಪ್ರೇರಣಾ ಅಭಿಯಾನ, ಮುಂತಾದವುಗಳ ಜತೆ ಕೈಜೋಡಿಸಿ ಸಕ್ರಿಯವಾಗಿ ಮುನ್ನಡೆಸಿದ್ದರು. ಸಾಂದರ್ಭಿಕವಾಗಿ, ಇವರ ಜೊತೆಗೆ ಸದ್ಯದ ಭೀಮ್ ಕೋರೆಗಾಂವ್ ಪ್ರಕರಣದ ಸಹ ಆರೋಪಿ ವಕೀಲ ಸುರೇಂದ್ರ ಗಾಡ್ಲಿಂಗ್, 2011 ರ ಪ್ರಕರಣದಲ್ಲಿ ಧಾವ್ಳೆ ಅವರನ್ನು ಪ್ರತಿನಿಧಿಸಿದ್ದರು.

ಸುಧೀರ್ ತಮ್ಮ ನೆಲಮಟ್ಟದ ಹೋರಾಟ ರಾಜಕೀಯ ಅನುಭವಗಳನ್ನು ಮತ್ತು ತಿಳಿವಳಿಕೆಯನ್ನು ಬರಹಕ್ಕಿಳಿಸಿದರು. ಕೇವಲ ವಿದ್ರೋಹಿ ಪತ್ರಿಕೆಯ ಮೂಲಕ ಮಾತ್ರವಲ್ಲದೆ, ಹಲವಾರು ಸಾಮಾಜಿಕ -ರಾಜಕೀಯ ವಿಚಾರಗಳ ಮೇಲೆ ಅವರು ಬರೆದ ಮತ್ತು ಸಂಪಾದಿಸಿದ ಹಲವು ಪುಸ್ತಕಗಳಲ್ಲಿ ಕೂಡ ಅವರು ಇದನ್ನು ಸಾಧಿಸಿದ್ದಾರೆ. ತಾವು ಜೈಲಿನಲ್ಲಿದ್ದ ದಿನಗಳಲ್ಲಿಯೂ, ಮೂರು ಪುಸ್ತಕಗಳನ್ನು ಬರೆದಿದ್ದಾರೆ. ಜನಸಮೂಹದ ನೋವು ಮತ್ತು ಸಂಘರ್ಷಗಳ ಸಮ್ಮಿಲನ ಅವರ ಲೇಖನಗಳ ಜೀವಾಳ.

ಸುಧೀರ್ ತಮ್ಮ ಹಲವಾರು ಸಂಗಾತಿಗಳೊಂದಿಗೆ ದಲಿತ, ಮರಾಠ ಮತ್ತು ಮುಸ್ಲಿಂ ನಾಯಕರನ್ನು ಒಂದು ಸಮಾನ ವೇದಿಕೆಯಲ್ಲಿ ಒಗ್ಗೂಡಿಸಿ, ಸಮಾಜದ ವಿವಿಧ ದುರ್ಬಲ ಸಮುದಾಯಗಳ ಮೇಲಿನ ಪ್ರಭುತ್ವದ ದೌರ್ಜನ್ಯವನ್ನು ಚರ್ಚಿಸಲು ಭೀಮ ಕೋರೆಗಾಂವ್ ಘಟನೆಯ 200ನೇ ವರ್ಷದ ಸಂಸ್ಮರಣೆಯ ದಿನದಂದು, ಎಲ್ಗಾರ್ ಪರಿಷದ್ ಸಭೆಯನ್ನು ಡಿಸೆಂಬರ್ 31, 2017ರಲ್ಲಿ ಕರೆನೀಡಿದ್ದರು.

ಒಬ್ಬ ಸಂಘಟಕರಾಗಿ, ಲೇಖಕರಾಗಿ, ಕವಿಯಾಗಿ, ನಾಟಕಕಾರರಾಗಿ, ಸ್ವತಂತ್ರ ಪತ್ರಕರ್ತರಾಗಿ, ಮರಾಠಿ ಪತ್ರಿಕೆಯೊಂದರ ಸಂಪಾದಕರಾಗಿ, ಸುಧೀರ್ ಧಾವ್ಳೆಯವರು ಸಾಮಾಜಿಕ ಅನ್ಯಾಯ ಮತ್ತು ದಲಿತರ ಮೇಲಿನ ದೌರ್ಜನ್ಯಗಳನ್ನು ಸಾರ್ವಜನಿಕ ಚರ್ಚೆಗೆ ತರಲು ಅವಿರತ ಪ್ರಯತ್ನ ಮಾಡಿ, ಪ್ರಜಾಪ್ರಭುತ್ವವವನ್ನು ಒಂದು ಮುಖ್ಯ ಹೋರಾಟದ ಶಕ್ತಿಯಾಗಿ ಪರಿವರ್ತಿಸಲು ದುಡಿದಿದ್ದಾರೆ.

ಸುಧೀರ್‌ರವರ ಮಾತುಗಳು ತಮ್ಮ ಕ್ರಿಯಾಶೀಲತೆಯಿಂದ, ಧೃಡತೆಯಿಂದ ಶಿಲೆಯನ್ನೂ ಚಲಿಸುವ ಹಾಗೆ ಮಾಡಬಲ್ಲವು. ಸುಧೀರ್ ಪ್ರತಿ ಚಳುವಳಿಯೂ ಹೇಗೆ “ಅನನ್ಯ”ವಾಗಿರಬೇಕು ಎಂದು ವಿವರಿಸುತ್ತಾರೆ. ನಮ್ಮದೇ ಅನನ್ಯ ಕ್ರಾಂತಿಗಾಗಿ …

“ಇದು ಯಾವ ಸೀಮೆಯ ನಗರ?

ನೀವು ಯಾವ ಸೀಮೆಯ ಜನರು?

ಒಂದು ಅನ್ಯಾಯವಾದಾಗ ಆ ನಗರದಲ್ಲಿ ದಂಗೆಯಾಗಬೇಕು.

ಹಾಗೇನಾದರೂ ದಂಗೆಯಾಗದಿದ್ದರೆ,

ಆ ನಗರ ಉರಿದು ಬೆಳಗಾಗುವಷ್ಟರಲ್ಲಿ ಬೂಧಿಯಾಗುವುದೇ ಉತ್ತಮ …”

 

ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ

ಅನುವಾದ: ಮಂಜುನಾಥ ಚಾರ್ವಾಕ


ಇದನ್ನೂ ಓದಿ: ಕಾಶ್ಮೀರದ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಪ್ರೇರೇಪಣೆಯ ಗೌತಮ್ ನೌಲಾಖ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...