Homeಅಂಕಣಗಳುಕಳೆದುಹೋದ ದಿನಗಳುಕಳೆದುಹೋದ ದಿನಗಳು ಅಧ್ಯಾಯ -11: ಕಾಫಿ ಉದ್ಯಮದಲ್ಲಿ ಮರೆಯಲಾಗದ ಹೆಸರು ಸಿದ್ಧಾರ್ಥ ಹೆಗಡೆ

ಕಳೆದುಹೋದ ದಿನಗಳು ಅಧ್ಯಾಯ -11: ಕಾಫಿ ಉದ್ಯಮದಲ್ಲಿ ಮರೆಯಲಾಗದ ಹೆಸರು ಸಿದ್ಧಾರ್ಥ ಹೆಗಡೆ

ನಾನಿದನ್ನು ಬರೆಯುತ್ತಿರುವ ವೇಳೆಗೆ, ಸಿದ್ದಾರ್ಥರು ಇಲ್ಲ. ಅವರು ಕಟ್ಟಿದ ಸಂಸ್ಥೆಗಳನ್ನು ಉಳಿಸಿಕೊಳ್ಳುವ ಹೋರಾಟವನ್ನು ಅವರ ಕುಟುಂಬದವರು ನಡೆಸುತ್ತಿದ್ದಾರೆ.

- Advertisement -
- Advertisement -

ಕಾಫಿ ಉದ್ಯಮದಲ್ಲಿ ಎಂದು ಮರೆಯಲಾಗದ ಇನ್ನೊಂದು ಹೆಸರು ಸಿದ್ಧಾರ್ಥ ಹೆಗಡೆಯವರದು. ಬಹುಶಃ ಇಂದು ಭಾರತದ ಯುವಪೀಳಿಗೆಯಲ್ಲಿ ಅವರ ಹೆಸರನ್ನು ಕೇಳದವರೇ ಇಲ್ಲವೆನ್ನಬಹುದು. ಯಾಕೆಂದರೆ ಯುವಕರ ನೆಚ್ಚಿನ ಮತ್ತು ಮೆಚ್ಚಿನ ತಾಣಗಳಾಗಿದ್ದ ಕೆಫೇ ಕಾಫಿ ಡೇ ಗಳು.

ಸಿದ್ಧಾರ್ಥ ಒಬ್ಬ ದೊಡ್ಡ ಕನಸುಗಾರ. ಅವರು ಮಲೆನಾಡಿಗ. ಕಾಫಿ ಅವರ ಬದುಕಾಗಿತ್ತು, ಕಾಫಿ ಅವರ ಕನಸಾಗಿತ್ತು. ಕಾಫಿ ಕೃಷಿಯಿಂದ ಕಾಫಿ ಉದ್ಯಮಕ್ಕಿಳಿದು ಹೊಸತೊಂದು ಸಾಧನೆಯ ಸಾಮ್ರಾಜ್ಯ ಕಟ್ಟುವುದರೊಂದಿಗೆ ಸಾವಿರಾರು ಯುವಕರಿಗೆ ಉದ್ಯೋಗ ನೀಡಿದವರು.  ಮಲೆನಾಡಿನ ರಸ್ತೆಬದಿಯ ಕಟ್ಟೆಗಳಲ್ಲಿ, ಟೀ ಅಂಗಡಿಯಲ್ಲಿ, ಇತರ ಸಣ್ಣ ಪುಟ್ಟ ಸ್ಥಳಗಳಲ್ಲಿ ಹಾಳು ಹರಟೆಗಳಲ್ಲಿ ಕಾಲ ಕಳೆಯುತ್ತಿದ್ದ ಯುವಕರನ್ನು ದುಡಿಮೆಗೆ ಹಚ್ಚುವುದಷ್ಟೇ ಅಲ್ಲ ಗೌರವಯುತವಾದ ಸಂಬಳ, ಸಂಭಾವನೆಯನ್ನೂ ಕಲ್ಪಿಸಿಕೊಟ್ಟವರು. 2019 ರಲ್ಲಿ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದವರ ಸಂಖ್ಯೆ 20,000 ಕ್ಕೂ ಹೆಚ್ಚಿತ್ತು.

ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಸಿದ್ದಾರ್ಥರಿಗೆ ಹಿರಿಯರಿಂದ ಬಂದ ದೊಡ್ಡ ಕಾಫಿ ಪ್ಲಾಂಟೇಷನ್ ಇತ್ತು. 1992 ರಲ್ಲಿ ಅವರು ಅಮಾಲ್ಗಮೇಟೆಡ್ ಬೀನ್ ಕಾಫಿ ಎಂಬ ಕಾಫಿ ವಾಣಿಜ್ಯ ಸಂಸ್ಥೆಯನ್ನು ಸ್ಥಾಪಿಸಿದ ನಂತರ ಅವರ ಕಾಫಿ ಪ್ಲಾಂಟೇಷನ್ ಗಳೂ ವಿಸ್ತಾರವಾದವು. 1995-96 ರಲ್ಲಿ ಪ್ರಾರಂಭವಾದ ಕೆಫೆ ಕಾಫಿ ಡೇ, ಕಾಫಿ ಚಿಲ್ಲರೆ ಮಾರಾಟ ಕೇಂದ್ರಗಳು. ಅತಿ ಬೇಗ ಭಾರತ ಮಾತ್ರವಲ್ಲ ವಿದೇಶಗಳಲ್ಲಿಯೂ ಪ್ರಸಿದ್ಧವಾದವು. ಕೆಫೆ ಕಾಫಿ ಡೇ ಯಂತೂ ಇತರ ದೊಡ್ಡ ಕಾಫಿ ಕಂಪನಿಗಳಿಗೂ ಸಾದ್ಯವಾಗದಷ್ಟು ಬೆಳೆಯಿತು. ಕೇವಲ ಎರಡು ದಶಕಗಳಲ್ಲಿ 1700 ಕೆಫೆ ಕಾಫಿ ಡೇ ಕೇಂದ್ರಗಳು ಮತ್ತು ಸುಮಾರು 50,000 ದಷ್ಟು ಚಿಲ್ಲರೆ ಮಾರಾಟ ಯಂತ್ರ ಕೇಂದ್ರಗಳು ಸ್ಥಾಪನೆಯಾದದ್ದು ಸಣ್ಣ ಸಾಧನೆಯಲ್ಲ. ಇಂದು ಭಾರತದ ಆಂತರಿಕ ಮಾರುಕಟ್ಟೆ ಸಾಕಷ್ಟು ವೃದ್ಧಿಯಾಗಿದ್ದರೆ ಅದರಲ್ಲಿ ಸಿದ್ಧಾರ್ಥರ ಕೊಡುಗೆಯೂ ದೊಡ್ಡದು.

ಸಿದ್ಧಾರ್ಥ ಹೆಗಡೆಯವರ ಅಮಾಲ್ಗಮೇಟೆಡ್ ಬೀನ್ ಕಾಫಿ ಕಂಪನಿಯ ಕಛೇರಿ ಚಿಕ್ಕಮಗಳೂರು

A lot can happen over a cup of coffee ಎನ್ನುವ  ಕೆಫೆ ಕಾಫಿ ಡೇ ಘೋಷಣೆಯೇ ಯುವ ಪೀಳಿಗೆಯನ್ನು ಆಕರ್ಷಿಸಿತ್ತು.

ನಗರಗಳ ಸಾವಿರಾರು ಯುವ ಉದ್ಯೋಗಿಗಳಿಗೆ ಕಾಫಿ ಡೇ ನಿತ್ಯದ ಮೆಚ್ಚಿನ ತಾಣವಾಯಿತು.

ನಾವು ಈ ಸಂದರ್ಭದಲ್ಲಿ ಒಂದು ವಿಚಾರವನ್ನು ಮತ್ತೆ ನೆನಪಿಸಿಕೊಳ್ಳಬೇಕು. ಇದೇ ರೀತಿಯ ಒಂದು ಸಾಹಸವನ್ನು  ಸುಮಾರು ಒಂದು ಶತಮಾನದ ಹಿಂದೆಯೇ ಒಬ್ಬರು ಮಹಿಳೆ ಮಾಡಿದ್ದರು. ಅವರೂ ಒಬ್ಬ ಕಾಫಿ ಬೆಳೆಗಾರರರು. ಅವರ ಬಗ್ಗೆ ಹಿಂದೆಯೇ ಉಲ್ಲೇಖವನ್ನು ಮಾಡಿದ್ದೇನೆ.

ಅವರು ಭಾರತದ ಪ್ರಥಮ ಮಹಿಳಾ ಉದ್ಯಮಿಯೆನಿಸಿದ ಕೊಡಗಿನ ಸಾಕಮ್ಮ 1920 ರಲ್ಲಿ ಅವರು ಬೆಂಗಳೂರಿನಲ್ಲಿ “ಸಾಕಮ್ಮಾಸ್ ಕಾಫಿ” ಎಂಬ ಕಾಫಿ ಪುಡಿ ಉದ್ಯಮವನ್ನು ಸ್ಥಾಪಿಸಿದ್ದರು. ಅವರೂ ಕೂಡ ಹಲವಾರು ಊರುಗಳಿಗೆ ತಮ್ಮ ಕಾಫಿ ಪುಡಿ ಉದ್ಯಮವನ್ನು ವಿಸ್ತರಿಸಿದ್ದರು.

ಸಿದ್ದಾರ್ಥರ ಕಾಫಿ ಸಂಬಂಧಿತ ಉದ್ಯಮಗಳು ಕೊಮಾರ್ಕ್ ನ ಹುಟ್ಟಿನ ಜೊತೆ ಜೊತೆಯಾಗಿಯೇ ಸಾಗಿದ್ದವು.  ಕೊಮಾರ್ಕ್ ನ ಸಂಘಟನೆಯ ಸಮಯದಲ್ಲಿಯೇ  ಸಿದ್ಧಾರ್ಥ ಅವರೊಮ್ಮೆ ಭಾರತದ ಕಾಫಿಯ ಸ್ಥಿತಿ -ಗತಿಗಳ ಬಗ್ಗೆ ಹೇಳಿದ್ದರು. ಆ ಸಂದರ್ಭದಲ್ಲೇ, ಕಾಫಿ ವ್ಯವಹಾರಗಳೆಲ್ಲವೂ ವಿದೇಶಗಳ ಹಿಡಿತದಲ್ಲಿರುವ ದೊಡ್ಡ ಉದ್ಯಮ. ಅದರ ಜೊತೆ ಭಾರತದ ಸಹಕಾರಿ ವಲಯದ ಸಂಸ್ಥೆಯೊಂದು ಸ್ಪರ್ಧಿಸಬೇಕಾದರೆ ಇರುವ ಕಷ್ಟ ಮತ್ತು ಸಮಸ್ಯೆಗಳ ಬಗ್ಗೆಯೂ ಹೇಳಿದ್ದರು.

ಇವುಗಳೇನೇ ಇರಲಿ ಕೆಲಕಾಲ ಇವೆರಡೂ ಸಂಸ್ಥೆಗಳು ಸಮಾನಾಂತರವಾಗಿ ಕೆಲಸ ಮಾಡುತ್ತ ಬೆಳೆಗಾರರರಿಗೆ ಒಂದು ರೀತಿಯ ಮಾರುಕಟ್ಟೆಯ ಸ್ಥಿರತೆಯನ್ನೂ ಜೊತೆಯಲ್ಲಿ ಆರ್ಥಿಕ ಸ್ಥೈರ್ಯವನ್ನೂ ನೀಡಿದ್ದವು.

ಸಾವಿರಾರು ಕೋಟಿಗಳ ಬೃಹತ್ ಉದ್ಯಮಿಯಾಗಿದ್ದ ಸಿದ್ದಾರ್ಥ ಅಷ್ಟೇ ಸರಳ ವ್ಯಕ್ತಿಯೂ ಆಗಿದ್ದರು. ನಮ್ಮೂರಿನ ಸುತ್ತಮತ್ತ ಅವರ  ಹಲವಾರು ತೋಟಗಳಿದ್ದವು. ಅನೇಕ ಸಾರ್ವಜನಿಕ ಕಾರ್ಯಗಳಿಗೆ ಅವರು ನಿರಂತರವಾಗಿ ಸಹಾಯ ಮಾಡಿದ್ದಾರೆ.

ಕುಪ್ಪಳಿಯಲ್ಲಿನ ಕವಿಶೈಲದ ಕುವೆಂಪು ಮತ್ತು ತೇಜಸ್ವಿ ಸ್ಮಾರಕಗಳ ನಿರ್ಮಾಣದಲ್ಲಿ ಲಕ್ಷಾಂತರ ರೂಗಳ ಕೊಡುಗೆ ಮಾತ್ರವಲ್ಲ ಇತರ ಸಹಾಯಗಳನ್ನೂ ಮಾಡಿದ್ದಾರೆ. ಸಿದ್ದಾರ್ಥರ ಬೆಂಬಲವಿಲ್ಲದಿದ್ದರೆ ಕಲಾವಿದ ಕೆ.ಟಿ.ಶಿವಪ್ರಸಾದರ ಅದ್ಭುತ ಶಿಲ್ಪ ಕಲಾ ನಿರ್ಮಾಣಗಳು ಸಾಧ್ಯವಾಗುತ್ತಿರಲಿಲ್ಲ ಎನಿಸುತ್ತದೆ.

ತೇಜಸ್ವಿ ಸ್ಮಾರಕ, ಕುಪ್ಪಳಿ
ಕುವೆಂಪು ಸ್ಮಾರಕ ಕುಪ್ಪಳಿ

ನಾವು ಹಾನುಬಾಳಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡಿದಾಗಲೂ ಅಷ್ಟೇ “ಗುಡ್ ಕಾಫಿ ನೆಲದಲ್ಲಿ ಇವೆಲ್ಲ ಆಗಬೇಕು ಕಣ್ರಿ” ಎಂದು  ಹೇಳಿ ಹಣ ಸಹಾಯ ಮಾಡಿದ್ದರು.

ಇಷ್ಟು ವರ್ಷಗಳ ನಂತರ ನಾನಿದನ್ನು ಬರೆಯುತ್ತಿರುವ ವೇಳೆಗೆ, ಸಿದ್ದಾರ್ಥರು ಇಲ್ಲ. ಅವರು ಕಟ್ಟಿದ ಸಂಸ್ಥೆಗಳನ್ನು ಉಳಿಸಿಕೊಳ್ಳುವ ಹೋರಾಟವನ್ನು ಅವರ ಕುಟುಂಬದವರು ನಡೆಸುತ್ತಿದ್ದಾರೆ.

ಸಿದ್ದಾರ್ಥ ಹೆಗಡೆಯವರರಿಗೆ ಸ್ವಯಂ ಪ್ರೇರಣೆಯಿಂದ ರಸ್ತೆಗಳಲ್ಲಿ ನಿಂತು ಶ್ರದ್ಧಾಂಜಲಿ ಅರ್ಪಿಸುತ್ರಿರು ಕಾಫಿ ಬೆಳೆಗಾರರು, ಸಕಲೇಶಪುರ ತಾಲ್ಲೂಕಿನ ಹಾನುಬಾಳು ನಲ್ಲಿ

ಕೊಮಾರ್ಕ್ ಸಂಸ್ಥೆಯೂ ನಾಮಾವಶೇಷ ಸ್ಥಿತಿಯಲ್ಲಿದೆ. (ಅದನ್ನು ಮುಂದೆ ಬರೆಯುತ್ತೇನೆ).

ಸಿದ್ಧಾರ್ಥರ ದುರಂತದಲ್ಲಿ ಮುಕ್ತಾಯವಾದ ಬದುಕನ್ನು ನೋಡಿದಾಗ ಗಿರೀಶ್ ಕಾರ್ನಾಡರ ನಾಟಕದ ಸಾಲುಗಳು ನೆನಪಿಗೆ ಬರುತ್ತವೆ. ಅವರ ತುಘಲಕ್ ನಾಟಕದ ತುಘಲಕ್ ಪಾತ್ರದ ಮಾತುಗಳಿವು.

“ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು, ಆದರೆ ಕನಸುಗಳಿಲ್ಲದ ಹಾದಿಯಲ್ಲಿ ನಡೆಯುವುದು ಹೇಗೆ ?”

ಚರಿತ್ರೆಯ ತುಘಲಕ್ ಹುಚ್ಚು ದೊರೆಯೆಂದು ಖ್ಯಾತನಾದವ, ಕಾರ್ನಾಡರ ತುಘಲಕ್ ಕನಸುಗಾರ, ತನ್ನ ಕಾಲವನ್ನು ಮೀರಿ ಮುಂದೋಡಿದವ. ಅಪಾರ ಬುದ್ಧಿವಂತ. ಜಾಗತೀಕರಣದ ಚಿಮ್ಮು ಹಲಗೆಯನ್ನೇರಿ ದಿಗಂತಕ್ಕೆ ಜಿಗಿದ ಸಿದ್ಧಾರ್ಥ ಅದೇ ಜಾಗತೀಕರಣದ ಮಾರಿಸುಳಿಗೆ ಬಲಿಯಾದರೇ? ಸಿದ್ಧಾರ್ಥರ ತಪ್ಪು ಸರಿಗಳೇನೇ ಇರಲಿ. ಅವರು ದುರಂತವಪ್ಪಿರಲಿ… ಕಾಫಿ ಬೆಳೆಗಾರರು ಅಂದಿಗೂ ಇಂದಿಗೂ ಸಿದ್ಧಾರ್ಥ ತಮ್ಮವನೆಂದು ಎದೆಯಲ್ಲಿಟ್ಟುಕೊಂಡಿದ್ದಾರೆ… ಅಲ್ಲಿ ಸಿದ್ಧಾರ್ಥ ಚಿರಸ್ಥಾಯಿ.

ಕೊಮಾರ್ಕ್ ನ ವ್ಯವಹಾರಗಳು ಚೆನ್ನಾಗಿ ನಡೆದು ಮೊದಲಿನ ಎರಡು ವರ್ಷಗಳಲ್ಲಿ ಕೋಟ್ಯಂತರ ಲಾಭ ಗಳಿಸಿತ್ತು. ಭಾರತೀಯ ಕಾಫಿ ಮಾರುಕಟ್ಟೆಯ ಮುಂದಾಳುವಾಗಿ ಕೊಮಾರ್ಕ ಸಂಸ್ಥೆ ಹೊರಹೊಮ್ಮಿತ್ತು.

ಕೊಮಾರ್ಕ್ ನ ನಿರ್ದೇಶಕರುಗಳಲ್ಲಿ ಈಗ ಸಂಸ್ಥೆ ಹೊಸ ಹೊಸ ವಿಸ್ತರಣೆಗೆ ಸಂದರ್ಭ ಬಂದಿದೆ ಅನ್ನಿಸತೊಡಗಿತ್ತು.  ಅದರ ಮೊದಲ ಹೆಜ್ಜೆಯಾಗಿ ಅಮುಲ್ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು ಅದರ ಮೂಲಕ ಕಾಫಿ ಪುಡಿ ಮಾರಾಟವನ್ನು ಪ್ರಾರಂಭಿಸುವ ಉದ್ದೇಶವಿತ್ತು. ಅಮುಲ್ ಕೂಡಾ ಒಂದು ಸಹಕಾರಿ ಸಂಸ್ಥೆಯಾದದ್ದರಿಂದ ಇದು ಸರಿಯಾದ ಕ್ರಮವೂ ಆಗಿತ್ತು. ಆ ಸಮಯದಲ್ಲೇ ಅಮುಲ್ ಸಂಸ್ಥೆಗೆ ದೇಶಾದ್ಯಂತ ಒಂದು ಲಕ್ಷದಷ್ಟು ಮಾರಾಟ ಮಳಿಗೆಗಳಿದ್ದವು. ಇದು ಯಶಸ್ವಿಯಾದರೆ ದೇಶದ ಆಂತರಿಕ ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಸಾಧ್ಯತೆ ಇತ್ತು. ಇದಕ್ಕೆ ಪೂರಕವಾಗಿ ಕೊಮಾರ್ಕ್ ಸಂಸ್ಥೆಯೇ ಒಂದು ಇನ್ಸ್ಟಂಟ್ ಕಾಫಿ ಪುಡಿ ಉದ್ಯಮವನ್ನೂ ಸ್ಥಾಪಿಸಲು ತೊಡಗುವುದೆಂದೂ ತೀರ್ಮಾನಿಸಿ ಆ ನಿಟ್ಟಿನಲ್ಲಿಯೂ ಪ್ರಯತ್ನಗಳು ಪ್ರಾರಂಭವಾದವು.

ಕೊಮಾರ್ಕ್ ನ ನಿರ್ದೇಶಕರುಗಳಾದ ಎನ್.ಎಂ.ಶಿವಪ್ರಸಾದ್, ಪ್ರದೀಪ್ ಕೆಂಜಿಗೆ, ನಂದೀಶ್ ಬಾಳ್ಳು ಮುಂತಾದವರಲ್ಲದೆ ಕಾಫಿ ಮಂಡಳಿಯ ಸದಸ್ಯರಾಗಿದ್ದು ಕೊಮಾರ್ಕ ಸಂಸ್ಥೆಗೆ ಸಲಹೆಗಾರರೂ ಆಗಿದ್ದ ಬಾಳ್ಳು ಜಗನ್ನಾಥ್ ಇವರೆಲ್ಲರೂ ರವೀಂದ್ರನಾಥರ ಜೊತೆಗೂಡಿ  ಈ ವಿಚಾರದಲ್ಲಿ ಗುಜರಾತ್, ದೆಹಲಿ, ಹೈದರಾಬಾದ್ ಮುಂತಾದ ಕಡೆಗಳಿಗೆ ಹಲವು ಸಲ  ಹೋಗಿ ಸರ್ವ ಸಿದ್ಧತೆ ನಡೆಸಿದರು. ಆದರೆ ಇವರೆಲ್ಲರಿಗೂ  ಅನಿರೀಕ್ಷಿತವಾದ ಆದರೆ ಎಲ್ಲರನ್ನೂ ಬೆಚ್ಚಿಬೇಳಿಸುವಂತಹ ವಿದ್ಯಮಾನಗಳು ಕೋಮಾರ್ಕ್ ಸಂಸ್ಥೆಯಲ್ಲಿ ನಡೆದು ಹೋಗಿದ್ದವು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)

ಕಳೆದುಹೋದ ದಿನಗಳು ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಕಳೆದುಹೋದ ದಿನಗಳು 33 – ಬರವಣಿಗೆಯ ಹಿನ್ನೆಲೆ : ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Soddarth was never born with Golden spoon.He owned only 90 acres of plantation.By the turn of d century the empire was expanded – courtesy then CM of Karnataka.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...