Homeಮುಖಪುಟಜಾತಿ ವ್ಯವಸ್ಥೆಯ ಹೊಲಸು ಎತ್ತಿತೋರಿಸುವ ಪಲಾಸ 1978

ಜಾತಿ ವ್ಯವಸ್ಥೆಯ ಹೊಲಸು ಎತ್ತಿತೋರಿಸುವ ಪಲಾಸ 1978

- Advertisement -
- Advertisement -

ನಿಂತಿರುವವನಿಗೆ ಗೊತ್ತಾಗದ ಹಾಗೆ ಅವನ ಚಡ್ಡಿ ಕಳಚಿದರೆ ಅವನೇ ಸಾಹುಕಾರ (ಯಜಮಾನ)’ ಎಂಬುದು ಪಲಾಸ ಸಿನೆಮಾದಲ್ಲಿ ಬರುವ ದೊಡ್ಡ ಯಜಮಾನನ ಡೈಲಾಗ್. ಮೇಲ್ಜಾತಿ ಭೂಮಾಲೀಕರ ಯಜಮಾನಿಕೆಯ ದರ್ಪ ದಬ್ಬಾಳಿಕೆಗೆ ನಲುಗಿದ ಕೆಳಜಾತಿಯ ಸಮುದಾಯ. ದೌರ್ಜನ್ಯವನ್ನು ಸಹಿಸದೆ, ಎಚ್ಚೆತ್ತ ಕೆಳಜಾತಿಯ ಯುವಕರು ಹಾಗೂ ಭೂಮಾಲೀಕನ ನಡುವೆ ನಡೆಯುವ ಸಂಘರ್ಷದ ಕತೆಯೇ “ಪಲಾಸ 1978” ಸಿನೆಮಾ.

ಟಾಲಿವುಡ್ ಎಂದಾಕ್ಷಣ ಬಾರಿ ಬಡ್ಜೆಟ್‍ನ ಹಾಗೂ ಅಬ್ಬರಿಸಿ ಬೊಬ್ಬಿರಿಯುವ ಹಿರೋಗಳ ಸಿನೆಮಾಗಳು ನಮ್ಮ ಕಣ್ಣಮುಂದೆ ಬರುತ್ತವೆ. ಆದರೆ ಆಗಾಗ ತೆಲುಗು ಸಿನೆಮಾ ರಂಗದಲ್ಲಿಯೂ ಸಾಮಾಜಿಕ ಕಳಕಳಿಯುಳ್ಳ ಸಿನೆಮಾಗಳು ಮಿಣುಕು ಹುಳುಗಳಂತೆ ಬಂದು ಹೋಗುತ್ತಲೇ ಇವೆ. ಪಲಾಸ 1978 ಸಿನೆಮಾ ಇತ್ತೀಚೆಗೆ ತೆರೆಕಂಡ ಅಂತಹದ್ದೇ ಒಂದು ಗಮನಾರ್ಹ ಸಿನೆಮಾ.

ಈ ಸಿನೆಮಾ ಗ್ರಾಮೀಣ ಭಾರತದ ಜಾತಿ ವ್ಯವಸ್ಥೆಯ ವಾಸ್ತವಗಳನ್ನು ಚರ್ಚೆ ಮಾಡುವ ದಿಕ್ಕಿನಲ್ಲಿ ಯಶಸ್ವಿಯಾಗಿದೆ. ಮೋಹನ್ ರಾವ್, ರಂಗರಾವ್ ಎಂಬ ಕೆಳಜಾತಿಯ ಯುವಕರು ಮತ್ತು ಆಸ್ತಿ ಅಂತಸ್ತು ಇರುವ ಮೇಲ್ಜಾತಿಯ ಇಬ್ಬರು ಸಹೋದರರ ನಡುವೆ ನಡೆಯುವ ಕಥೆಯಾಗಿದ್ದರೂ ಸಹ, ಜಾತಿ ವ್ಯವಸ್ಥೆ ಎಂಬ ಜೇಡರಬಲೆಯಲ್ಲಿ ಸಿಕ್ಕಿಕೊಳ್ಳುವ ದಲಿತರ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಇದು ತೋರಿಸಿದೆ.

ಸಿನೆಮಾದಲ್ಲಿ ಬರುವ ಸಬಾಸ್ಟಿಯನ್ ಎಂಬ ಪೊಲೀಸ್ ಪಾತ್ರ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ ಹಾಗೆ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು, ಆಗಲೇ ನಮ್ಮ ಉದ್ದಾರ ಎಂಬ ಚರ್ಚೆಯನ್ನು ಎತ್ತುತ್ತದೆ. ಆದರೆ, ಜಾತಿ ವ್ಯವಸ್ಥೆ ತಾನು ಚಾಚಿರುವ ಕಬಂಧಬಾಹುಗಳನ್ನು ಕಾರ್ಯಂಗ, ಶಾಸಕಾಂಗವಲ್ಲದೇ ನ್ಯಾಯಾಂಗದವರೆಗೂ ಎಷ್ಟರ ಮಟ್ಟಿಗೆ ವಿಸ್ತರಿಸಿದೆ ಎಂಬುದು ಸಬಾಸ್ಟಿಯನ್‍ಗೆ ಅರ್ಥವಾಗುವುದು, ಆತ ನಡೆಸುತ್ತಿದ್ದ ಕೇಸ್ ಸೋಲುಂಡ ಸಂದರ್ಭದಲ್ಲಿ. ಪೊಲೀಸ್ ಆಗಿದ್ದ ಸಬಾಸ್ಟಿಯನ್ ಕೊನೆಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಅನಿವಾರ್ಯತೆಗಳನ್ನು ಎದುರಿಸಲೇಬೇಕೆಂದು ಮೋಹಾನ್‍ರಾವ್‍ಗೆ ಚಿಕ್ಕ ಸಾಹುಕಾರನನ್ನು ಕೊಲ್ಲಲು ಹೇಳುತ್ತಾನೆ.

ಸಬಾಸ್ಟಿಯನ್ ಈ ಮೂಲಕ ಮೇಲ್ಜಾತಿಯ ದೌರ್ಜನ್ಯದ ಮನಸ್ಥಿತಿಯನ್ನು ಕೊಲ್ಲಲು ಇರುವ ದುಬಾರಿ ಸಾಧ್ಯತೆಗಳಿಗೆ ಪ್ರತೀಕವಾಗಿ ನಿಲ್ಲುತ್ತಾನೆ. ಸಬಾಸ್ಟಿಯನ್ ಮತ್ತು ಮೋಹನ್ ರಾವ್ ಚರ್ಚೆಗಳು ದಲಿತ ಯುವಜನರ ಹೊಸಪೀಳಿಗೆಯ ಪ್ರಶ್ನೆಗಳಂತೆ ಕಾಣಿಸುತ್ತವೆ. ಇನ್ನೂ ದೊಡ್ಡ ಯಜಮಾನನ ಮನೆಯಲ್ಲಿ ನಡೆಯುವ ಚರ್ಚೆಗಳು ಮೇಲ್ಜಾತಿಯ ಯಜಮಾನರ ಕುತಂತ್ರಗಳನ್ನು ಬಯಲುಗೊಳಿಸುತ್ತವೆ.
ಪಲಾಸ ಸಿನೆಮಾ ಗ್ರಾಮೀಣ ಭಾಗದಲ್ಲಿನ ಕೆಳಜಾತಿಯ ಜನರು ಜಾತಿಯ ಕೀಳರಿಮೆಯ ಕಾರಣಕ್ಕೆ ಪ್ರತಿಕ್ಷಣ ಹೇಗೆ ನಿಂದನೆ, ಅಪಮಾನಗಳ ಜೊತೆಗೆ ಗುದ್ದಾಡಬೇಕು ಎಂಬುದನ್ನು ತೋರಿಸಿದೆ.

1978ರಲ್ಲಿ ಪಲಾಸ ಎಂಬ ಹಳ್ಳಿಯಲ್ಲಿ ನಡೆದ ನೈಜ ಘಟನೆಗಳ ಆಧಾರವಾಗಿ ಬಂದ ಈ ಸಿನೆಮಾ 2020ರಲ್ಲೂ ನಡೆಯತ್ತಿರುವ ಜಾತಿದೌರ್ಜನ್ಯಗಳು, ಜಾತಿ ಕಾರಣಕ್ಕಾಗಿ ನಡೆಯುವ ಕೊಲೆಗಳು, ಅತ್ಯಾಚಾರಗಳನ್ನು ಹೇಗೆ ನೋಡಬೇಕೆಂಬುದನ್ನು ತೋರಿಸುತ್ತದೆ. ಈಗಲೂ ಹಳ್ಳಿಗಳಲ್ಲಿ ಮೇಲ್ಜಾತಿ ಕೆಳಜಾತಿಗಳ ನಡುವೆ ನಡೆಯುತ್ತಿರುವ ಗಲಾಟೆಗಳು ಸಾಮಾನ್ಯವಾಗಿವೆ ಇನ್ನೂ ಸಹ ಜಾತಿ ಮನಸ್ಥಿತಿಯೆಂಬುದು ಬದಲಾಗದೇ ಉಳಿದುಬಿಟ್ಟಿರುವುದಕ್ಕೆ ಈ ಸಿನೆಮಾ ಸಾಕ್ಷಿಯನ್ನೊದಗಿಸಿದೆ.

ಪಲಾಸ ಗ್ರಾಮೀಣ ಭಾರತದ ದೈನಂದಿನ ವಾಸ್ತವಕ್ಕೆ ಸಾಕ್ಷಿಯಾಗಿ ನಿಂತಿದೆ. ಚಿಕ್ಕ ಯಜಮಾನನ ಪಾತ್ರ ಮಾಡಿರುವ ರಘುಕುಂಚೆ ಈ ಸಿನೆಮಾಕ್ಕೆ ವಿಶೇಷವಾದ ಸಂಗೀತವನ್ನು ನೀಡಿದ್ದಾರೆ. ಹಾಡು ಕುಣಿತವನ್ನು ರಕ್ತಗತವಾಗಿಸಿಕೊಂಡಿರುವ ಕೆಳಜಾತಿಯ ಜನಕ್ಕೆ ತಮ್ಮ ಕಲೆಯೂ ಸಹ ದೊಡ್ಡವರ ಕಣ್ಣುಕುಕ್ಕುವ ರೀತಿ ಮೋಹನ್ ರಾವ್‍ಗೆ ಬಾಲ್ಯದಲ್ಲಿಯೇ ಅನುಭವವಾಗುತ್ತದೆ. ಇದು ಕಲೆಯಲ್ಲಿನ ಜಾತಿ ರಾಜಕಾರಣವನ್ನು ಎತ್ತಿತೋರಿಸುತ್ತದೆ. ಪಲಾಸ ಸಿನೆಮಾ ಖಂಡಿತ ಟಾಲಿವುಡ್‍ನಲ್ಲಿ ದಲಿತರ ಸಮಸ್ಯೆಗಳನ್ನು ಪ್ರಶ್ನಿಸುವ ಮತ್ತು ಮತ್ತು ಜಾತಿ ನಿರ್ಮೂಲನೆಯ ಬಗ್ಗೆ ಚರ್ಚಿಸುವ ಸಿನೆಮಾಗಳಿಗೆ ಮೈಲಿಗಲ್ಲಾಗಲೆಂದು ಆಶಿಸೋಣ. ಇನ್ನು ನಿರ್ದೇಶಕ ಕರಣಕುಮಾರ ಮೊದಲ ಸಿನೆಮಾದಲ್ಲೇ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ.


ಇದನ್ನೂ ಓದಿ: ಸೋನು ಸೂದ್‌ ನಂತರ ಕಾರ್ಮಿಕರಿಗೆ ಸಹಾಯ ಮಾಡಲು ಪಣತೊಟ್ಟ ಸ್ವರ ಭಾಸ್ಕರ್‌ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...