Homeಮುಖಪುಟಸುಪ್ರೀಂ ಕೋರ್ಟ್‌ನಲ್ಲಿ ಸುಳ್ಳು ವಾಟ್ಸಾಪ್ ಫಾರ್ವಾಡ್ ಸಂದೇಶವನ್ನು ಉಲ್ಲೇಖಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

ಸುಪ್ರೀಂ ಕೋರ್ಟ್‌ನಲ್ಲಿ ಸುಳ್ಳು ವಾಟ್ಸಾಪ್ ಫಾರ್ವಾಡ್ ಸಂದೇಶವನ್ನು ಉಲ್ಲೇಖಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

"ಕೊಲೆಗಳು ಮತ್ತು ಹೆಣಗಳು ಮತ್ತು ಸಿಟ್ಟು ಮತ್ತು ನೋವು.... ಹಸಿದ ಅಥವಾ ಗಾಯಗೊಂಡ ಮಕ್ಕಳು... ಗುಂಡಿಕ್ಕಲು ತಹತಹಿಸುತ್ತಿರುವ ಹುಚ್ಚರು. ಹೆಚ್ಚಾಗಿ ಪೊಲೀಸರು, ಹಂತಕರು, ಕೊಲೆಗಡುಕರು ಇವೆಲ್ಲವುಗಳ ನೆನಪುಗಳು ನನ್ನನ್ನು ದೆವ್ವಗಳಂತೆ ಕಾಡುತ್ತಿವೆ" ಎಂದ ಕಾರ್ಟರ್‌ ಬರೆದಿದ್ದರು.

- Advertisement -
- Advertisement -

ಲಾಕ್‌ಡೌನ್ ಕಾರಣಕ್ಕೆ ಸಿಕ್ಕಿಕೊಂಡ ವಲಸೆ ಕಾರ್ಮಿಕರನ್ನು ತಮ್ಮ ಸ್ವಂತ ಸ್ಥಳಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿತ್ತು. ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಮೂರು ನ್ಯಾಯಾಧೀಶರ ಪೀಠದಿಂದ ಕನಿಷ್ಠ 50 ಪ್ರಶ್ನೆಗಳನ್ನು ಕೇಳಿದ್ದು ವಲಸೆ ಕಾಮಿಕರ ವಿಚಾರದಲ್ಲಿ ಸರ್ಕಾರಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಇದಕ್ಕೆ ಉತ್ತರಿಸಿದ ಅವರು, ರೈಲುಗಳು ಓಡುತ್ತವೆ, ವಲಸಿಗರನ್ನು ಸಾಗಿಸುತ್ತವೆ ಮತ್ತು ಊಟವನ್ನು ಒದಗಿಸಲಾಗಿದೆ. ಕೇಂದ್ರವು “ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡಿದೆ. “ವಿನಾಶವಾದಿಗಳು ಈ ವಿಷಯವನ್ನು ರಾಜಕೀಯ ಭಾಷಣಗಳಿಗೆ ವೇದಿಕೆಯನ್ನಾಗಿ ಮಾಡಿಕೊಳ್ಳಲು ಅವಕಾಶ ನೀಡಬಾರದು”. ಅವರು ಆರಾಮ ಕುರ್ಚಿಗಳಲ್ಲಿ ಕುಳಿತು ಟೀಕಿಸುವುದನ್ನು ಬಿಟ್ಟು ತಾವೇನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಬೇಕು ಎಂದು ಹೇಳಿದ್ದರು.

ಮುಂದುವರಿದು ತುಷಾರ್ ಮೆಹ್ತಾರವರು ರಣಹದ್ದು ಮತ್ತು ಪುಲಿಟ್ಜೆರ್ ಪ್ರಶಸ್ತಿ ವಿಜೇತ ಪತ್ರಕರ್ತ ಕೆವಿನ್ ಕಾರ್ಟರ್ ಅವರು ಸುಡಾನ್‌ನಲ್ಲಿನ ಕ್ಷಾಮದ ಸಮಯದಲ್ಲಿ ತೆಗೆದ ಛಾಯಾಚಿತ್ರದ ಕಥೆಯನ್ನು ನಿರೂಪಿಸಲು ಹೋದರು.

“1983 ರಲ್ಲಿ ಸುಡಾನ್‌ಗೆ ಕೆವಿನ್ ಕಾರ್ಟರ್ ಎಂಬ ಛಾಯಾಗ್ರಾಹಕ ಹೋದರು. ತೀವ್ರ ಬರಗಾಲವಾದ್ದರಿಂದ ಅಲ್ಲೊಂದು ಅಪೌಷ್ಠಿಕತೆ, ಅನಾರೋಗ್ಯದಿಂದ ಬಳಲುತ್ತಿದ್ದ ಮಗು ಇತ್ತು. ಅದರ ಹಿಂದೆ ಮಗು ಸಾಯುವುದನ್ನೇ ರಣಹದ್ದು ಕಾಯುತ್ತಿತ್ತು. ಅವರು ಆ ಫೋಟೊ ತೆಗೆದರು ಮತ್ತು ಅದನ್ನು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟಿಸಲಾಯಿತು. ಅವನಿಗೆ ಪುಲಿಟ್ಜೆರ್ ಪ್ರಶಸ್ತಿ ನೀಡಲಾಯಿತು. ಆತ 4 ತಿಂಗಳ ನಂತರ ಆತ್ಮಹತ್ಯೆ ಮಾಡಿಕೊಂಡ. ಅದಕ್ಕೂ ಮೊದಲು ಪತ್ರಕರ್ತರೊಬ್ಬರು ಮಗುವಿಗೆ ಏನಾಯಿತು ಎಂದು ಕೆವಿನ್ನನ್ನು ಕೇಳಿದರು? ನನಗೆ ಗೊತ್ತಿಲ್ಲ, ನಾನು ಮನೆಗೆ ಮರಳಿದೆ ಎಂದು ಆತ ಹೇಳಿದನು. ನಂತರ ಆ ಪತ್ರಕತ್ರ ಎಷ್ಟು ರಣಹದ್ದುಗಳಿದ್ದವು ಎಂದು ಕೇಳಿದನು. ಕೆವಿನ್ ಒಂದು ಎಂದನು. ಆಗ ಪತ್ರಕರ್ತ ಇಲ್ಲ, ಎರಡು ರಣಹದ್ದುಗಳಿದ್ದವು, ಅದರಲ್ಲಿ ಒಂದು ಕ್ಯಾಮೆರಾವನ್ನು ಹಿಡಿದಿತ್ತು ಎಂದನು” ಎಂಬ ಕತೆಯನ್ನು ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದಾರೆ.

ಸಾಲಿಸಿಟರ್ ಜನರಲ್ ನಿರೂಪಿಸಿದ ಈ ಕಥೆಯು ಪ್ರಧಾನಿ ಮೋದಿ ಬೆಂಬಲಿಗರು ಹರಡಿದ ಸುಳ್ಳು ವಾಟ್ಸಾಪ್ ಸಂದೇಶವಾಗಿದೆ. ಯಾರಾದರೂ ವಲಸೆ ಕಾರ್ಮಿಕರಿಗಾಗಿ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದರೆ ಈ ಕಥೆಯನ್ನು ಹೇಳಿ ನೀವೇನು ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ.

ಸೂಡಾನ್‌ನಲ್ಲಿ ನಿಜವಾಗಿ ನಡೆದಿದ್ದೇನು?

1993ರಲ್ಲಿ ಆಹಾರ ಕ್ಯಾಂಪನ್ನು ತಲುಪಲು ತೆವಳುತ್ತಿರುವ ಸುಡಾನಿನ ನಿಶ್ಶಕ್ತ ಮಗುವೊಂದರ ಹತ್ತಿರ ರಣಹದ್ದು ಕಾಯುತ್ತಿರುವ ಚಿತ್ರ ತೆಗೆದ ಕೆವಿನ್ ನಂತರ ಆ ರಣಹದ್ದನ್ನು ಓಡಿಸಿದ್ದಾನೆ. ಆತ 20 ನಿಮಿಷ ಅಲ್ಲೆ ಕಾದಿದ್ದಾನೆ. ಆತನಿಗೆ ರೋಗದ ಕಾರಣಕ್ಕಾಗಿ ಮಗುವನ್ನು ಮುಟ್ಟಬಾರದೆಂದು ಸೂಚಿಸಲಾಗಿತ್ತು. ಆ ಮಗು ಕೋಂಗ್ ಎನ್‌ಯೋಂಗ್ ಈ ಘಟನೆ ನಡೆದ ಬಳಿಕ ಬದುಕುಳಿಯಿತು. 14 ವರ್ಷಗಳ ನಂತರ ಜ್ವರದಿಂದ ಸಾವಿಗೀಡಾಯಿತು.

ಆದರೆ ಎಲ್ಲಿಯೂ ಆ ಸಮಯದಲ್ಲಿ ಇನ್ನೊಬ್ಬ ಪತ್ರಕರ್ತ ಕೆವಿನ್‌ನನ್ನು ಪ್ರಶ್ನಿಸಿದ್ದರ ಉಲ್ಲೇಖವಿಲ್ಲ.
ಕಾರ್ಟರ್ ಆತ್ಮಹತ್ಯೆಯು ಆಘಾತದ ಬಳಿಕದ ಅಸ್ವಸ್ಥತೆ (post traumatic disorders)ಗಳಿಂದ ಉಂಟಾಗಿತ್ತೆಂದು ಅವರ ಅಂತಿಮ ಪತ್ರದಿಂದ ಗೊತ್ತಾಗುತ್ತದೆ. ಅವರು ತುಂಬಾ ನೊಂದಿದ್ದರು.

ಅವರ ಪತ್ರದ ಮುಖ್ಯಾಂಶ ಹೀಗಿದೆ: “ಕೊಲೆಗಳು ಮತ್ತು ಹೆಣಗಳು ಮತ್ತು ಸಿಟ್ಟು ಮತ್ತು ನೋವು…. ಹಸಿದ ಅಥವಾ ಗಾಯಗೊಂಡ ಮಕ್ಕಳು… ಗುಂಡಿಕ್ಕಲು ತಹತಹಿಸುತ್ತಿರುವ ಹುಚ್ಚರು. ಹೆಚ್ಚಾಗಿ ಪೊಲೀಸರು, ಹಂತಕರು, ಕೊಲೆಗಡುಕರು ಇವೆಲ್ಲವುಗಳ ನೆನಪುಗಳು ನನ್ನನ್ನು ದೆವ್ವಗಳಂತೆ ಕಾಡುತ್ತಿವೆ”.

ಅವರ ಈ ಚಿತ್ರವು ಸುಡಾನಿನ ಭಯಂಕರ ಬರಗಾಲದ ಬಗ್ಗೆ ವಿಶ್ವಾದ್ಯಂತ ಗಮನ ಸೆಳೆದಿತ್ತು. ಕಾರ್ಟರ್ ಅವರನ್ನು ಇಂದಿಗೂ ಅವರ ವೃತ್ತಿಯಲ್ಲಿ ಅತ್ಯಂತ ಗೌರವದಿಂದ ಕಾಣಲಾಗುತ್ತಿದೆ. ಅಂತವರ ಮೇಲೆ ಮತ್ತು ವಲಸಿಗರ ಪರವಾಗಿ ಧ್ವನಿ ಎತ್ತಿರುವವರ ಮೇಲೆ ಹಿಂಸಾಸಂತೋಷ, ಅವಕಾಶವಾದ, ಅಸಹಾನುಭೂತಿ ಇಂತಹಾ ಆರೋಪ ಮಾಡಿ ಇಂತಹಾ ವರದಿಗಳ ಮೇಲೆಯೇ ಅವಲಂಬಿಸಿದ್ದಾರೆ ಎಂದು ತುಷಾರ್ ಮೆಹ್ತಾ ಆರೋಪಣೆ ಮಾಡುವುದು ಕೆಟ್ಟ ಅಭಿರುಚಿ ಮಾತ್ರವಲ್ಲ ನೈತಿಕವಾಗಿಯೂ ತಪ್ಪು.

ಒಂದು ನಿರ್ಭೀತ, ಸ್ವತಂತ್ರ ಮಾಧ್ಯಮವು ಒಂದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ನಿರ್ಣಾಯಕವಾದುದು. ಅಂತವರ ಜವಾಬ್ದಾರಿಯುತ ವರದಿಗಾರಿಕೆಯೇ ವಲಸೆ ಕಾರ್ಮಿಕರ ಘೋರ ಸಂಕಷ್ಟಗಳನ್ನು ಬೆಳಕಿಗೆ ತಂದಿರುವುದು ಎಂಬುದನ್ನು ಮರೆಯಬಾರದು.


ಇದನ್ನೂ ಓದಿ: ಪತ್ರಕರ್ತರು, ರಣಹದ್ದುಗಳು ಹಾಗೂ ಮತ್ತೊಬ್ಬ ಸಾಲಿಸಿಟರ್ ಜನರಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...