Homeಮುಖಪುಟಜಾತಿ ವ್ಯವಸ್ಥೆಯ ಹೊಲಸು ಎತ್ತಿತೋರಿಸುವ ಪಲಾಸ 1978

ಜಾತಿ ವ್ಯವಸ್ಥೆಯ ಹೊಲಸು ಎತ್ತಿತೋರಿಸುವ ಪಲಾಸ 1978

- Advertisement -
- Advertisement -

ನಿಂತಿರುವವನಿಗೆ ಗೊತ್ತಾಗದ ಹಾಗೆ ಅವನ ಚಡ್ಡಿ ಕಳಚಿದರೆ ಅವನೇ ಸಾಹುಕಾರ (ಯಜಮಾನ)’ ಎಂಬುದು ಪಲಾಸ ಸಿನೆಮಾದಲ್ಲಿ ಬರುವ ದೊಡ್ಡ ಯಜಮಾನನ ಡೈಲಾಗ್. ಮೇಲ್ಜಾತಿ ಭೂಮಾಲೀಕರ ಯಜಮಾನಿಕೆಯ ದರ್ಪ ದಬ್ಬಾಳಿಕೆಗೆ ನಲುಗಿದ ಕೆಳಜಾತಿಯ ಸಮುದಾಯ. ದೌರ್ಜನ್ಯವನ್ನು ಸಹಿಸದೆ, ಎಚ್ಚೆತ್ತ ಕೆಳಜಾತಿಯ ಯುವಕರು ಹಾಗೂ ಭೂಮಾಲೀಕನ ನಡುವೆ ನಡೆಯುವ ಸಂಘರ್ಷದ ಕತೆಯೇ “ಪಲಾಸ 1978” ಸಿನೆಮಾ.

ಟಾಲಿವುಡ್ ಎಂದಾಕ್ಷಣ ಬಾರಿ ಬಡ್ಜೆಟ್‍ನ ಹಾಗೂ ಅಬ್ಬರಿಸಿ ಬೊಬ್ಬಿರಿಯುವ ಹಿರೋಗಳ ಸಿನೆಮಾಗಳು ನಮ್ಮ ಕಣ್ಣಮುಂದೆ ಬರುತ್ತವೆ. ಆದರೆ ಆಗಾಗ ತೆಲುಗು ಸಿನೆಮಾ ರಂಗದಲ್ಲಿಯೂ ಸಾಮಾಜಿಕ ಕಳಕಳಿಯುಳ್ಳ ಸಿನೆಮಾಗಳು ಮಿಣುಕು ಹುಳುಗಳಂತೆ ಬಂದು ಹೋಗುತ್ತಲೇ ಇವೆ. ಪಲಾಸ 1978 ಸಿನೆಮಾ ಇತ್ತೀಚೆಗೆ ತೆರೆಕಂಡ ಅಂತಹದ್ದೇ ಒಂದು ಗಮನಾರ್ಹ ಸಿನೆಮಾ.

ಈ ಸಿನೆಮಾ ಗ್ರಾಮೀಣ ಭಾರತದ ಜಾತಿ ವ್ಯವಸ್ಥೆಯ ವಾಸ್ತವಗಳನ್ನು ಚರ್ಚೆ ಮಾಡುವ ದಿಕ್ಕಿನಲ್ಲಿ ಯಶಸ್ವಿಯಾಗಿದೆ. ಮೋಹನ್ ರಾವ್, ರಂಗರಾವ್ ಎಂಬ ಕೆಳಜಾತಿಯ ಯುವಕರು ಮತ್ತು ಆಸ್ತಿ ಅಂತಸ್ತು ಇರುವ ಮೇಲ್ಜಾತಿಯ ಇಬ್ಬರು ಸಹೋದರರ ನಡುವೆ ನಡೆಯುವ ಕಥೆಯಾಗಿದ್ದರೂ ಸಹ, ಜಾತಿ ವ್ಯವಸ್ಥೆ ಎಂಬ ಜೇಡರಬಲೆಯಲ್ಲಿ ಸಿಕ್ಕಿಕೊಳ್ಳುವ ದಲಿತರ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಇದು ತೋರಿಸಿದೆ.

ಸಿನೆಮಾದಲ್ಲಿ ಬರುವ ಸಬಾಸ್ಟಿಯನ್ ಎಂಬ ಪೊಲೀಸ್ ಪಾತ್ರ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ ಹಾಗೆ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು, ಆಗಲೇ ನಮ್ಮ ಉದ್ದಾರ ಎಂಬ ಚರ್ಚೆಯನ್ನು ಎತ್ತುತ್ತದೆ. ಆದರೆ, ಜಾತಿ ವ್ಯವಸ್ಥೆ ತಾನು ಚಾಚಿರುವ ಕಬಂಧಬಾಹುಗಳನ್ನು ಕಾರ್ಯಂಗ, ಶಾಸಕಾಂಗವಲ್ಲದೇ ನ್ಯಾಯಾಂಗದವರೆಗೂ ಎಷ್ಟರ ಮಟ್ಟಿಗೆ ವಿಸ್ತರಿಸಿದೆ ಎಂಬುದು ಸಬಾಸ್ಟಿಯನ್‍ಗೆ ಅರ್ಥವಾಗುವುದು, ಆತ ನಡೆಸುತ್ತಿದ್ದ ಕೇಸ್ ಸೋಲುಂಡ ಸಂದರ್ಭದಲ್ಲಿ. ಪೊಲೀಸ್ ಆಗಿದ್ದ ಸಬಾಸ್ಟಿಯನ್ ಕೊನೆಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಅನಿವಾರ್ಯತೆಗಳನ್ನು ಎದುರಿಸಲೇಬೇಕೆಂದು ಮೋಹಾನ್‍ರಾವ್‍ಗೆ ಚಿಕ್ಕ ಸಾಹುಕಾರನನ್ನು ಕೊಲ್ಲಲು ಹೇಳುತ್ತಾನೆ.

ಸಬಾಸ್ಟಿಯನ್ ಈ ಮೂಲಕ ಮೇಲ್ಜಾತಿಯ ದೌರ್ಜನ್ಯದ ಮನಸ್ಥಿತಿಯನ್ನು ಕೊಲ್ಲಲು ಇರುವ ದುಬಾರಿ ಸಾಧ್ಯತೆಗಳಿಗೆ ಪ್ರತೀಕವಾಗಿ ನಿಲ್ಲುತ್ತಾನೆ. ಸಬಾಸ್ಟಿಯನ್ ಮತ್ತು ಮೋಹನ್ ರಾವ್ ಚರ್ಚೆಗಳು ದಲಿತ ಯುವಜನರ ಹೊಸಪೀಳಿಗೆಯ ಪ್ರಶ್ನೆಗಳಂತೆ ಕಾಣಿಸುತ್ತವೆ. ಇನ್ನೂ ದೊಡ್ಡ ಯಜಮಾನನ ಮನೆಯಲ್ಲಿ ನಡೆಯುವ ಚರ್ಚೆಗಳು ಮೇಲ್ಜಾತಿಯ ಯಜಮಾನರ ಕುತಂತ್ರಗಳನ್ನು ಬಯಲುಗೊಳಿಸುತ್ತವೆ.
ಪಲಾಸ ಸಿನೆಮಾ ಗ್ರಾಮೀಣ ಭಾಗದಲ್ಲಿನ ಕೆಳಜಾತಿಯ ಜನರು ಜಾತಿಯ ಕೀಳರಿಮೆಯ ಕಾರಣಕ್ಕೆ ಪ್ರತಿಕ್ಷಣ ಹೇಗೆ ನಿಂದನೆ, ಅಪಮಾನಗಳ ಜೊತೆಗೆ ಗುದ್ದಾಡಬೇಕು ಎಂಬುದನ್ನು ತೋರಿಸಿದೆ.

1978ರಲ್ಲಿ ಪಲಾಸ ಎಂಬ ಹಳ್ಳಿಯಲ್ಲಿ ನಡೆದ ನೈಜ ಘಟನೆಗಳ ಆಧಾರವಾಗಿ ಬಂದ ಈ ಸಿನೆಮಾ 2020ರಲ್ಲೂ ನಡೆಯತ್ತಿರುವ ಜಾತಿದೌರ್ಜನ್ಯಗಳು, ಜಾತಿ ಕಾರಣಕ್ಕಾಗಿ ನಡೆಯುವ ಕೊಲೆಗಳು, ಅತ್ಯಾಚಾರಗಳನ್ನು ಹೇಗೆ ನೋಡಬೇಕೆಂಬುದನ್ನು ತೋರಿಸುತ್ತದೆ. ಈಗಲೂ ಹಳ್ಳಿಗಳಲ್ಲಿ ಮೇಲ್ಜಾತಿ ಕೆಳಜಾತಿಗಳ ನಡುವೆ ನಡೆಯುತ್ತಿರುವ ಗಲಾಟೆಗಳು ಸಾಮಾನ್ಯವಾಗಿವೆ ಇನ್ನೂ ಸಹ ಜಾತಿ ಮನಸ್ಥಿತಿಯೆಂಬುದು ಬದಲಾಗದೇ ಉಳಿದುಬಿಟ್ಟಿರುವುದಕ್ಕೆ ಈ ಸಿನೆಮಾ ಸಾಕ್ಷಿಯನ್ನೊದಗಿಸಿದೆ.

ಪಲಾಸ ಗ್ರಾಮೀಣ ಭಾರತದ ದೈನಂದಿನ ವಾಸ್ತವಕ್ಕೆ ಸಾಕ್ಷಿಯಾಗಿ ನಿಂತಿದೆ. ಚಿಕ್ಕ ಯಜಮಾನನ ಪಾತ್ರ ಮಾಡಿರುವ ರಘುಕುಂಚೆ ಈ ಸಿನೆಮಾಕ್ಕೆ ವಿಶೇಷವಾದ ಸಂಗೀತವನ್ನು ನೀಡಿದ್ದಾರೆ. ಹಾಡು ಕುಣಿತವನ್ನು ರಕ್ತಗತವಾಗಿಸಿಕೊಂಡಿರುವ ಕೆಳಜಾತಿಯ ಜನಕ್ಕೆ ತಮ್ಮ ಕಲೆಯೂ ಸಹ ದೊಡ್ಡವರ ಕಣ್ಣುಕುಕ್ಕುವ ರೀತಿ ಮೋಹನ್ ರಾವ್‍ಗೆ ಬಾಲ್ಯದಲ್ಲಿಯೇ ಅನುಭವವಾಗುತ್ತದೆ. ಇದು ಕಲೆಯಲ್ಲಿನ ಜಾತಿ ರಾಜಕಾರಣವನ್ನು ಎತ್ತಿತೋರಿಸುತ್ತದೆ. ಪಲಾಸ ಸಿನೆಮಾ ಖಂಡಿತ ಟಾಲಿವುಡ್‍ನಲ್ಲಿ ದಲಿತರ ಸಮಸ್ಯೆಗಳನ್ನು ಪ್ರಶ್ನಿಸುವ ಮತ್ತು ಮತ್ತು ಜಾತಿ ನಿರ್ಮೂಲನೆಯ ಬಗ್ಗೆ ಚರ್ಚಿಸುವ ಸಿನೆಮಾಗಳಿಗೆ ಮೈಲಿಗಲ್ಲಾಗಲೆಂದು ಆಶಿಸೋಣ. ಇನ್ನು ನಿರ್ದೇಶಕ ಕರಣಕುಮಾರ ಮೊದಲ ಸಿನೆಮಾದಲ್ಲೇ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ.


ಇದನ್ನೂ ಓದಿ: ಸೋನು ಸೂದ್‌ ನಂತರ ಕಾರ್ಮಿಕರಿಗೆ ಸಹಾಯ ಮಾಡಲು ಪಣತೊಟ್ಟ ಸ್ವರ ಭಾಸ್ಕರ್‌ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...