Homeಕರ್ನಾಟಕಟಿಪ್ಪು ಜನ್ಮ ದಿನಾಚರಣೆ: ಮೈಸೂರು ಹುಲಿ ಟಿಪ್ಪುವಿನ ಪುಸ್ತಕ ಪ್ರೇಮ!

ಟಿಪ್ಪು ಜನ್ಮ ದಿನಾಚರಣೆ: ಮೈಸೂರು ಹುಲಿ ಟಿಪ್ಪುವಿನ ಪುಸ್ತಕ ಪ್ರೇಮ!

ಕೇಂದ್ರ ಗ್ರಂಥ ಭಂಡಾರವಲ್ಲದೇ ರಾಜ್ಯದ ವಿವಿಧೆಡೆ ಚಿಕ್ಕ ಪುಸ್ತಕ ಭಂಡಾರಗಳನ್ನೂ ಟಿಪ್ಪು ಸ್ಥಾಪಿಸಿದ್ದರು. ಓದುವುದು ಉಸಿರಾಡುವಷ್ಟೇ ಸುಲಭವಾಗಿರಬೇಕು ಎಂದು ಟಿಪ್ಪು ಪ್ರತಿಪಾದಿಸುತ್ತಿದ್ದರು.

- Advertisement -
- Advertisement -

ಮೈಸೂರು ಹುಲಿ ಟಿಪ್ಪುವಿನ ಮದುವೆಗೆ ಮುಂಚೆ ತಂದೆ ಹೈದರ್ ಅಲಿ, ಮಗನೇ ನನ್ನದೆಲ್ಲವೂ ನಿನ್ನದೇ ಆದರೂ ನಿನ್ನ ಮದುವೆಯ ಸಂದರ್ಭದಲ್ಲಿ ನಿನ್ನ ಖುಷಿಯನ್ನು ಇಮ್ಮಡಿಗೊಳಿಸಲು ನಿನಗೇನಾದರೂ ಕೊಡಬೇಕೆಂದಿದ್ದೇನೆ ಎಂದು ಟಿಪ್ಪುವಿನಲ್ಲಿ ಕೇಳಿದರು. ಅದಕ್ಕೆ ಟಿಪ್ಪು ನೀವು ಈಗಾಗಲೇ ಬಹಳಷ್ಟನ್ನು ಕೊಟ್ಟಿದ್ದೀರಿ, ನನಗೆ ಇನ್ನೇನು ಬೇಡ ಎಂದಾಗ ಅಪ್ಪ ಹೈದರ್ ಪಟ್ಟು ಬಿಡದೇ ಒತ್ತಾಯಿಸಿದರು.

ತಂದೆಯ ಒತ್ತಾಯಕ್ಕೆ ಮಣಿದ ಟಿಪ್ಪು, ಹಾಗಾದರೆ ನನಗೊಂದು ಗ್ರಂಥ ಭಂಡಾರ ನಿರ್ಮಿಸಿ ಕೊಡಿ ಎಂದರು. ಅನಕ್ಷರಸ್ಥರಾಗಿದ್ದ ಹೈದರ್ ಅಲಿಗೆ ಸೋಜಿಗವೆನಿಸಿತ್ತು. ಅವರಿಗೆ ಲೆಕ್ಕ ಮಾತ್ರ ಗೊತ್ತಿತ್ತು. ಲೆಕ್ಕ ಬರೆದಿಡುವ ಪುಸ್ತಕಗಳ ಮಹತ್ವ ಮಾತ್ರ ತಿಳಿದಿತ್ತು. ಅದರಲ್ಲೂ ಬರಬೇಕಾಗಿದ್ದ ತೆರಿಗೆಗಳ ವಿವರಗಳಿದ್ದ ಪುಸ್ತಕಗಳ ಪ್ರಾಶಸ್ತ್ಯ ಮಾತ್ರ ತಿಳಿದಿತ್ತು. ಖುರಾನ್, ಗೀತಾ, ತಾಲ್ಮಡ್, ಬೈಬಲ್, ಗುರು ಗ್ರಂಥ್ ಸಾಹಿಬ್ ಮುಂತಾದ ಪವಿತ್ರ ಗ್ರಂಥಗಳನ್ನು ಓದುತ್ತಿದ್ದವರನ್ನು ಹೈದರ್ ಅಲಿ ಗೌರವಿಸುತ್ತಿದ್ದರು. ಅಂತಹ ಪುಸ್ತಕಗಳು ಮನುಷ್ಯ ಕೆಡುಕು ಮಾಡುವುದರಿಂದ ದೂರವಿರಿಸುತ್ತದೆಂದು ಹೈದರ್ ನಂಬಿದ್ದರು.

ಟಿಪ್ಪುವಿನ ಗುರುಗಳಾದ ಮೌಲವಿ ಉಬೇದುಲ್ಲಾ ಮತ್ತು ಗೋವರ್ಧನ ಪಂಡಿತರು ಟಿಪ್ಪುವಿಗೆ ಸಾಕಷ್ಟು ಪುಸ್ತಕಗಳನ್ನು ಉಡುಗೊರೆಯಾಗಿ ಕೊಟ್ಟು ಹೋಗಿದ್ದರು. ಟಿಪ್ಪುವಿನ ದೊಡ್ಡ ಅಭ್ಯಾಸದ ಕೋಣೆಯ ತುಂಬಾ ಪುಸ್ತಕಗಳೇ ತುಂಬಿದ್ದವು. ಟಿಪ್ಪು ಇನ್ನೂ ಪುಸ್ತಕಗಳು ಬೇಕೆನ್ನುವುದಾದರೆ ಹೈದರ್ ಬೇಡವೆನ್ನಲಾರರು.
ಹೈದರ್ ರಾಜ್ಯದಲ್ಲಿರುವ ಎಲ್ಲಾ ಪುಸ್ತಕಗಳನ್ನು ಖರೀದಿಸಿ ಟಿಪ್ಪುವಿಗೆ ಕೊಡಲು ಪ್ರಧಾನಿ ಪೂರ್ಣಯ್ಯನಿಗೆ ಆಜ್ಞೆ ಮಾಡಿದರು. ಟಿಪ್ಪು ತನ್ನ ಮನಸ್ಸಿನಲ್ಲಿರುವ ದೊಡ್ಡ ಯೋಜನೆಯನ್ನು ಹೇಳಿದರು.

ಟಿಪ್ಪು ಸುಲ್ತಾನ್, ನಾನು ಎಲ್ಲಾ ಸಂಸ್ಕೃತಿಗಳ, ಎಲ್ಲಾ ರಾಷ್ಟ್ರಗಳ ಪುಸ್ತಕಗಳನ್ನು ಸಂಗ್ರಹಿಸಬೇಕೆಂದಿದ್ದೇನೆ ಎಂದು ತಂದೆಯ ಬಳಿ ಹೇಳಿದ್ದರು. ಆಗ ನಿನ್ನ ಕುರಿತೂ ಮುಂದೊಂದು ದಿನ ಜನರು ಓದಬಹುದು ಎಂದು ಹೈದರ್ ಭವಿಷ್ಯ ನುಡಿದಿದ್ದರು. ಜೊತೆಗೆ ಬೇರೆ ದೇಶಗಳ ಪುಸ್ತಕಗಳು ಬೇರೆ ಭಾಷೆಯಲ್ಲಿರುತ್ತವಲ್ಲವೇ ಎಂದು ಹೈದರ್ ಪ್ರಶ್ನಿಸಿದರು. ಅವುಗಳನ್ನು ಭಾಷಾಂತರ ಮಾಡಿಸಬೇಕು ಎಂದು ಟಿಪ್ಪು ಹೇಳಿದರು.

ಇದನ್ನೂ ಓದಿ: ವೀರ ಹೋರಾಟಗಾರ ’ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಈ ನೆಲದ ಮಗ: ವಿಧಾನ ಪರಿಷತ್‌ ಬಿಜೆಪಿ ಸದಸ್ಯ

ಟಿಪ್ಪುವಿಗೆ ಪರ್ಷಿಯನ್ ಭಾಷೆ ತುಂಬಾ ಚೆನ್ನಾಗಿ ಗೊತ್ತಿತ್ತು. ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳನ್ನೂ ಟಿಪ್ಪು ಅಭ್ಯಾಸ ಮಾಡಿದ್ದರಾದರೂ ಅವುಗಳ ಮೇಲೆ ಹಿಡಿತ ಸಾಧಿಸಲಾಗಿರಲಿಲ್ಲ. ಟಿಪ್ಪುವಿಗೆ ಕನ್ನಡ, ಹಿಂದಿ ಮತ್ತು ಉರ್ದುವಲ್ಲದೇ ಅಲ್ಪ ಸ್ವಲ್ಪ ಮಲಯಾಳಂ ಮತ್ತು ತಮಿಳು ಗೊತ್ತಿತ್ತು.

ದಿವಾನ್ ಪೂರ್ಣಯ್ಯನವರ ಉಸ್ತುವಾರಿಯಲ್ಲಿ ಹೈದರ್ ಅಲಿಯ ಆಜ್ಞೆ ಮೇರೆಗೆ ಟಿಪ್ಪುವಿಗಾಗಿ ಸ್ಥಾಪಿಸಿದ ಗ್ರಂಥಾಲಯಕ್ಕೆ ನೂರುಲ್ ಅಮೀನ್ ಎಂಬವನನ್ನು ಮುಖ್ಯ ಗ್ರಂಥಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಅವರ ಸಹಾಯಕ ಗ್ರಂಥಾಧಿಕಾರಿಗಳು, ಪುಸ್ತಕ ಪಟ್ಟಿ ತಯಾರಕರು, ಸಂಶೋಧನಾ ಸಹಾಯಕರು, ಪರಿಶೀಲಕರು ಮುಂತಾದ ಹುದ್ದೆಗಳಿಗೆ ದೇಶ ವಿದೇಶಗಳ ವಿಷಯ ತಜ್ಞರನ್ನು ನೇಮಿಸಲಾಗಿತ್ತು. ಫ್ರೆಂಚ್, ಜರ್ಮನ್, ಇಂಗ್ಲಿಷ್, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳ ಅನುವಾದಕರನ್ನೂ ನೇಮಿಸಲಾಗಿತ್ತು.

ಕೇಂದ್ರ ಗ್ರಂಥ ಭಂಡಾರವಲ್ಲದೇ ರಾಜ್ಯದ ವಿವಿಧೆಡೆ ಚಿಕ್ಕ ಪುಸ್ತಕ ಭಂಡಾರಗಳನ್ನೂ ಟಿಪ್ಪು ಸ್ಥಾಪಿಸಿದ್ದರು. ಓದುವುದು ಉಸಿರಾಡುವಷ್ಟೇ ಸುಲಭವಾಗಿರಬೇಕು ಎಂದು ಟಿಪ್ಪು ಪ್ರತಿಪಾದಿಸುತ್ತಿದ್ದರು. ಆ ಕಾಲದಲ್ಲೇ ಗ್ರಂಥ ಭಂಡಾರಗಳಿಗೆ ಹೋಗಿ ಓದಲು ಬಾಲಕ-ಬಾಲಕಿಯರಿಗೆ ಪ್ರೋತ್ಸಾಹ ನೀಡಬೇಕೆಂದು ಟಿಪ್ಪು ಆದೇಶಿಸಿದ್ದರು.
ಟಿಪ್ಪುವಿನ ಗ್ರಂಥಾಲಯದಲ್ಲಿ ಖಗೋಳ ಶಾಸ್ತ್ರ, ವೈದ್ಯಶಾಸ್ತ್ರ, ಕಲೆ, ತತ್ವಶಾಸ್ತ್ರ, ತಸವ್ವುಫ್ (ಸೂಫಿ ತತ್ವಜ್ಞಾನದ ಗ್ರಂಥಗಳು), ಆಧ್ಯಾತ, ಕಾನೂನು, ಖುರ್‌ಆನ್ ವ್ಯಾಖ್ಯಾನ ಗ್ರಂಥಗಳೆಲ್ಲಾ ಇದ್ದವು. ಕನ್ನಡ, ಉರ್ದು, ಪರ್ಶ್ಯನ್, ಫ್ರೆಂಚ್, ತುರ್ಕಿ, ದಖನಿ ಜರ್ಮನ್, ಇಂಗ್ಲೀಷ್, ಸಂಸ್ಕೃತ, ಅರಬಿಕ್ ಹೀಗೆ ಜಗತ್ತಿನ ಹಲವು ಭಾಷೆಗಳ ಗ್ರಂಥಗಳು ಗ್ರಂಥಾಲಯದಲ್ಲಿದ್ದವು.

ಟಿಪ್ಪು ತನ್ನ ಹದಿನೇಳು ವರ್ಷಗಳ ಆಡಳಿತಾವಧಿಯಲ್ಲಿ ನಲ್ವತ್ತೈದು ಗ್ರಂಥಗಳನ್ನು ಬರೆಸಿದ್ದರು. ಉರ್ದು, ತುರ್ಕಿ, ಪರ್ಶ್ಯನ್, ಅರೆಬಿಕ್, ದಖನಿ ಭಾಷೆಗಳ ನೂರ ತೊಂಬತ್ತು ಹಸ್ತಪ್ರತಿಗಳಿದ್ದವು. ಇತರೆಲ್ಲಾ ಭಾಷೆಗಳ ಎರಡು ಸಾವಿರಕ್ಕೂ ಮಿಕ್ಕಿದ ಗ್ರಂಥಗಳು ಟಿಪ್ಪುವಿನ ಗ್ರಂಥಾಲಯದಲ್ಲಿದ್ದವು.

ಟಿಪ್ಪುವಿನ ಗ್ರಂಥ ಭಂಡಾರಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡಲು ವಿದ್ವಾಂಸರ ಸಲಹೆಗಳನ್ನು ಆಗಾಗ ಕೇಳಲಾಗುತ್ತಿತ್ತು. ಅಂತಹ ವಿದ್ವಾಂಸರಲ್ಲಿ ಬಹುಮುಖ ಪ್ರತಿಭೆಯ ಫ್ರೆಂಚ್ ವಿದ್ವಾಂಸ ಫಿಯರಿ ಕೆರನ್ ಡ ಬ್ಯೂಮಾರ್ಕೆಸ್ ಕೂಡಾ ಒಬ್ಬನಾಗಿದ್ದ. ಆತ ಸುಪ್ರಸಿದ್ಧ ಬಾರ್ಬರ್ ಆಫ್ ಸೆವಿಲೆ ಹಾಗೂ ಫಿಗಾರೋ ಎಂಬ ಗ್ರಂಥಗಳನ್ನು ಬರೆದಿದ್ದ. ಆತ ಫ್ರೆಂಚ್ ಸಂಸ್ಕೃತಿ, ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರಗಳ ಕುರಿತ ಶ್ರೇಷ್ಠ ಪುಸ್ತಕಗಳು ಟಿಪ್ಪುವಿನ ಗ್ರಂಥ ಭಂಡಾರ ಸೇರಲು ಕಾರಣಕರ್ತನಾಗಿದ್ದ.

ಬ್ಯೂಮಾರ್ಕೆಸ್ ಸೂಚಿಸಿದ ಪುಸ್ತಕಗಳಲ್ಲಿ ಟಿಪ್ಪುವಿನ ಮೇಲೆ ಅತ್ಯಂತ ಪ್ರಭಾವ ಬೀರಿದ ಗ್ರಂಥ ಥಾಮಸ್ ಜೆಪರ್ಸನ್ ಬರೆದಿದ್ದ ಅಮೆರಿಕಾ ಸ್ವಾತಂತ್ರ್ಯ ಘೋಷಣೆ. ಅದು ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಕುರಿತ ಶ್ರೇಷ್ಠ ಕೃತಿಯಾಗಿತ್ತು. ಟಿಪ್ಪು ಅದನ್ನು ಆಗಾಗ ಓದುತ್ತಿದ್ದರು. ಅದು ಟಿಪ್ಪುವಿನ ಮನ ಕಲಕಿತ್ತು. ಅದು ಬ್ರಿಟಿಷರ ವಿರುದ್ಧದ ಅವರ ಹೋರಾಟದ ಕೆಚ್ಚನ್ನು ಇಮ್ಮಡಿಗೊಳಿಸಿತ್ತು.

ಇದನ್ನೂ ಓದಿ:ಟಿಪ್ಪು ಈ ದೇಶದ ಇತಿಹಾಸದ ಭಾಗ, ಪಠ್ಯದಿಂದ ಕೈಬಿಡುವುದು ಸರಿಯಲ್ಲ: ಡಿಕೆಶಿ

ಅಮೆರಿಕಾ ಸ್ವಾತಂತ್ರ್ಯ ಘೋಷಣೆ ಪುಸ್ತಕದ ಒಂದು ಅಂಶವು ಟಿಪ್ಪುವಿನ ವ್ಯಕ್ತಿತ್ವದ ಮೇಲೆಯೂ ಅಪಾರ ಪ್ರಭಾವ ಬೀರಿದ್ದನ್ನು ನಾವು ಟಿಪ್ಪುವಿನ ಮಾನವ ಹಕ್ಕುಗಳ ಪರ ಮತ್ತು ಮತೀಯ ಸೌಹಾರ್ದತೆಯ ಕಾನೂನಿನಲ್ಲಿ ಕಾಣಲು ಸಾಧ್ಯ.

ಟಿಪ್ಪುವಿನ ಮೇಲೆ ಅಪಾರ ಪ್ರಭಾವ ಬೀರಿದ ಥಾಮಸ್ ಜೆಫರ್ಸನ್ ಅವರ ಅಮೆರಿಕಾ ಸ್ವಾತಂತ್ರ್ಯ ಘೋಷಣೆ ಗ್ರಂಥದ ಆ ಪ್ಯಾರಾ ಇಂತಿದೆ. “ನಾವು ಈ ಸ್ವಯಂ ವೇದ್ಯ ಸತ್ಯಗಳನ್ನು ಎತ್ತಿ ಹಿಡಿಯುತ್ತೇವೆ. ಎಲ್ಲಾ ಮಾನವರು ಸಮಾನರಾಗಿಯೇ ಸೃಷ್ಟಿಯಾದವರು. ಅವರ ಸೃಷ್ಟಿಕರ್ತ ಅವರಿಗೆ ಅವರಿಂದ ಬೇರ್ಪಡಿಸಲಾಗದಂತಹ ಹಕ್ಕುಗಳನ್ನು ಕೊಟ್ಟಿದ್ದಾನೆ. ಆ ಹಕ್ಕುಗಳಲ್ಲಿ ಜೀವನ, ಸ್ವಾತಂತ್ರ್ಯ ಮತ್ತು ಸಂತೋಷದ ಅನ್ವೇಷಣೆಗಳೂ ಸೇರಿವೆ. ಈ ಹಕ್ಕುಗಳ ರಕ್ಷಣೆಗಾಗಿ ಪ್ರಜೆಗಳು ಸರ್ಕಾರವನ್ನು ರಚಿಸಿಕೊಳ್ಳುತ್ತಾರೆ. ಸರ್ಕಾರಗಳಿಗೆ ನ್ಯಾಯಬದ್ಧ ಅಧಿಕಾರ ದೊರಕುವುದು ಅವುಗಳ ಪ್ರಜೆಗಳ ಒಪ್ಪಿಗೆಯಿಂದಾಗಿದೆ. ಯಾವ ಸರ್ಕಾರವಾದರೂ ಈ ಉದ್ದೇಶಗಳಿಗೆ ಭಂಗ ತಂದರೆ ಆ ಸರ್ಕಾರವನ್ನು ಮಾರ್ಪಡಿಸುವ ಅಥವಾ ತೆಗೆದು ಹಾಕುವ ಅಧಿಕಾರ ಆ ಪ್ರಜೆಗಳಿಗೆ ಇದೆ. ಹಾಗೂ ತಮ್ಮ ಸುರಕ್ಷತೆ ಮತ್ತು ಸಂತೋಷಗಳನ್ನು ಕಾಪಾಡಬಹುದಾದಂತಹ ಸಿದ್ಧಾಂತಗಳ ತಳಹದಿಯ ಮೇಲೆ ಅಧಿಕಾರ ಬಳಸಿ ಕಾರ್ಯನಿರ್ವಹಿಸುವಂತಹ ಹೊಸ ಸರ್ಕಾರವನ್ನು ಅವರು ಸ್ಥಾಪಿಸಿಕೊಳ್ಳಬಹುದು”.

ಹಾಗೆಯೇ ದೇಶ ವಿದೇಶಗಳ ಅತ್ಯಂತ ಮೌಲ್ಯಯುತ ಪುಸ್ತಕಗಳನ್ನು ಟಿಪ್ಪು ಸಂಗ್ರಹಿಸಿದ್ದರು. ಅವರು ಅದೆಂತಹ ಪುಸ್ತಕ ಪ್ರೇಮಿಯಾಗಿದ್ದರೆಂದರೆ ಇವೇ ನನ್ನ ಸಂಪತ್ತು. ಈ ಸಂಪತ್ತು ಬೆಳ್ಳಿ-ಬಂಗಾರಗಳಿಗಿಂತಲೂ ಮೌಲ್ಯಯುತವಾದವುಗಳು ಮತ್ತು ಹೆಚ್ಚು ಶಾಶ್ವತವಾದವುಗಳು. ಇವುಗಳನ್ನು ಯಾರೂ ಕದಿಯಲಾರರು ಮತ್ತು ನಾಶಪಡಿಸಲಾರರು ಎಂದು ಮೈಸೂರು ಹುಲಿ ಹೇಳುತ್ತಿದ್ದರು.

ಆದರೆ ಅವರ ಲೆಕ್ಕಾಚಾರ ತಪ್ಪಾಗಿತ್ತು. ಬ್ರಿಟಿಷರು ಶ್ರೀರಂಗಪಟ್ಟಣವನ್ನು ಕೈ ವಶಪಡಿಸಿಕೊಂಡಾಗ ಮೊದಲು ದಾಳಿಗೀಡಾದವುಗಳಲ್ಲಿ ಟಿಪ್ಪುವಿನ ಗ್ರಂಥ ಭಂಡಾರವೂ ಒಂದಾಗಿತ್ತು. ಅವರು ಆ ಬಳಿಕ ಅಂದರೆ 1800ರಲ್ಲಿ ಟಿಪ್ಪುವಿನ ಗ್ರಂಥಾಲಯದಲ್ಲಿದ್ದ ಗ್ರಂಥಗಳನ್ನು ಕೊಲ್ಕತ್ತಾಗೆ ಸಾಗಿಸಿ, ಅಲ್ಲಿಂದ ಇಂಗ್ಲೆಂಡಿಗೆ ಕೊಂಡೊಯ್ದರು.

ಉರ್ದು ಭಾಷೆಯಲ್ಲಿ ಮೊಟ್ಟ ಮೊದಲು ಪತ್ರಿಕೆಯೊಂದನ್ನು ಹೊರತಂದವರು ಮೈಸೂರು ಹುಲಿ ಟಿಪ್ಪು ಸುಲ್ತಾನ್. ಅದೊಂದು ವಾರಪತ್ರಿಕೆಯಾಗಿತ್ತು. ಅದು ಟಿಪ್ಪುವಿನ ಸೇನಾ ಚಟುವಟಿಕೆಗಳ ಮುಖಾವಾಣಿಯಾಗಿತ್ತು. ಆ ವಾರಪತ್ರಿಕೆಯನ್ನು ಒಂದು ದೊಡ್ಡ ಹಾಳೆಯಲ್ಲಿ ಮುದ್ರಿಸಲಾಗುತ್ತಿತ್ತು. ಟಿಪ್ಪುವಿನ ಪತನದ ನಂತರ ಆ ಪತ್ರಿಕೆ ನಿಂತು ಹೋಯಿತು ಮತ್ತು ಬ್ರಿಟಿಷರು ಟಿಪ್ಪುವಿನ ಮುದ್ರಣಾಲಯವನ್ನು ನಾಶಪಡಿಸಿದರು.


ಇದನ್ನೂ ಓದಿ: ಆರ್‌.ಆರ್‌.ನಗರ- ಮೊದಲ ಹಂತದ ಎಣಿಕೆಯಲ್ಲಿ ಮುನಿರತ್ನಗೆ 3000 ಮತಗಳ ಮುನ್ನಡೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...