Homeಅಂಕಣಗಳುಎರಡು ದುಃಖದ ಸಂಗತಿ ಎದುರಾದವಲ್ಲಾ

ಎರಡು ದುಃಖದ ಸಂಗತಿ ಎದುರಾದವಲ್ಲಾ

- Advertisement -
- Advertisement -

ಈವಾರ ಎರಡು ದುಃಖಕರ ಸಂಗತಿಗಳು ಹೊರಬಿದ್ದಿವೆಯಲ್ಲಾ. ಮೊದಲನೆಯದಾಗಿ ನಮ್ಮ ಸಭ್ಯರಾಜಕಾರಣಿ ಎಸ್.ಎಂ ಕೃಷ್ಣ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ನಿರ್ಧಾರಕ್ಕೆ ಬಿಜೆಪಿಗಳು ಕಿವಿ ಕೇಳದಂತಿರುವುದು ಸಹಜ. ಕೃಷ್ಣ ತಮ್ಮ ರಾಜಕಾರಣದ ಇತಿಹಾಸದಲ್ಲಿ ಎಂದೂ ಅಸಭ್ಯವಾಗಿ ನಡೆದುಕೊಂಡವರಲ್ಲ. ಅಸಂಬದ್ಧ ಮಾತನಾಡಿದವರಲ್ಲಾ. ಯಾರನ್ನೂ ಕಟುವಾಗಿ ಟೀಕಿಸಿದವರಲ್ಲ. ತಮ್ಮ ಕಾರಿನ ಡ್ರೈವರನ್ನು ಕೂಡ ಬಹುವಚನದಲ್ಲಿ ಮಾತನಾಡಿಸಿದ ವ್ಯಕ್ತಿ. ಎಲ್ಲಕ್ಕಿಂತ ಮುಖ್ಯವಾಗಿ ನರಹಂತಕ ವೀರಪ್ಪನ್‌ನನ್ನು, ’ವೀರಪ್ಪನ್‌ರವರೆ’ ಎಂದು ಸಂಭೋಧಿಸಿ “ಕಿಸ್ನ ನಲ್ಲ ಪೆರಿಯವರು” ಎಂಬ ಬಿರುದು ಪಡೆದವರು. ಕೃಷ್ಣರಲ್ಲಿರುವ ಈ ಗುಣಗಳಿಗಾಗಿ ಅವರು ಸುಮ್ಮನಾಗಬಹುದಿತ್ತು. ಅದುಬಿಟ್ಟು, ತಮ್ಮ ನಡವಳಿಕೆ ಭಾಷೆ ಮತ್ತು ಬುದ್ಧಿಯ ಸಮೀಪಕ್ಕೂ ಬಾರದ ಬಿಜೆಪಿ ಸೇರಿದ್ದು ಈ ಶತಮಾನದ ರಾಜಕೀಯ ದ್ರೋಹವಾಗಿ ಕಂಡಿತಂತಲ್ಲಾ. ಯಾರೋ ರಾಹುಲ್‌ಗಾಂಧಿಯವರನ್ನು ಕೇಳಿದಾಗ, ಇದು ಕೃಷ್ಣರ ಸಮಸ್ಯೆ, ಕಾಂಗ್ರೆಸ್ ಮತ್ತು ಬಿಜೆಪಿ ಸಮಸ್ಯೆಯಲ್ಲ; ಅಲ್ಲಿ ಯಾರೂ ಇವರನ್ನು ಕರೆದಿಲ್ಲ ಎಂದುಬಿಟ್ಟಿದ್ದರಲ್ಲಾ. ಆದರೇನು ಕೃಷ್ಣ ಎಲ್ಲವನ್ನು ಬಿಟ್ಟು ಬಿಜೆಪಿಯ ಬಾಗಿಲಿಗೆ ಹೋದರು. ಖಾಲಿಯಿದ್ದ ಒಂದು ಆರಾಮ ಕುರ್ಚಿಯಲ್ಲಿ ಕುಳಿತರು. ಯಾರೂ ಕ್ಯಾರೆ ಅನ್ನಲಿಲ್ಲ. ನಿಧಾನವಾಗಿ ಎದ್ದು ಬರ್ತಿನಿ ಇವುರೆ, ಬಹಳ ಹೊತ್ತು ಕೂರಕ್ಕೆ ವಯಸ್ಸು ಪರ್ಮಿಟ್ ಮಾಡ್ತ ಇಲ್ಲ ಎಂದು ನಿಧಾನವಾಗಿ ಎದ್ದು ಹೊರಟಾಗಲೂ ಯಾವ ಬಿಜೆಪಿಗಳೂ ಕೂಡ ಆಯ್ತು ಸರ್ ಹೋಗಿ ಬನ್ನಿ ಅನ್ನಲಿಲ್ಲವಂತಲ್ಲಾ, ಥೂತ್ತೇರಿ.

*******

ಎರಡನೆ ದುಃಖಪೂರಿತ ಸಂಗತಿ ಯಾವುದೆಂದರೇ ಗೃಹಮಂತ್ರಿ ಆರಗ ಜ್ಞಾನೇಂದ್ರ ಆತ್ಮಹತ್ಯೆಯ ಮಾತನಾಡಿರುವುದು. ಕರ್ನಾಟಕದ ರಾಜಕೀಯದ ಆಗಸದಲ್ಲಿ ಎಂದೆಂದೂ ಮಿನುಗುವ ನಕ್ಷತ್ರವಾಗುಳಿದಿರುವ ಶಾಂತವೇರಿ ಗೋಪಾಲಗೌಡರು ಆರಿಸಿ ಬಂದಿದ್ದ ತೀರ್ಥಹಳ್ಳಿಯನ್ನು ಪ್ರತಿನಿಧಿಸುತ್ತಿರುವ ಜ್ಞಾನೇಂದ್ರ ಅವರು ರಾಷ್ಟ್ರಕವಿ ಕುವೆಂಪು ವಿಚಾರಧಾರೆಗಳ ವಾಹಕನಾಗಿ ಬದುಕಲಾಗದೆ ಬಲವಂತವಾಗಿ ಎಂಬಂತೆ ಗೋಳವಲಕರ, ಹೆಡಗೆವಾರ, ಸಾವರಕರ ಇತ್ಯಾದಿ ಭಯಂಕರ ಹಿಂದೂವಾದಿಗಳ ಹಿಂಬಾಲಕರಾಗಿ, ಅವರ ಸಿದ್ಧಾಂತಗಳ ಪ್ರತಿಪಾದಕರಾಗಿ ಬದುಕಿದವರು. ಸದಾ ಶ್ವೇತವಸ್ತ್ರಧಾರಿಯಾಗಿ ಶುಭ್ರವಾಗಿ ಬದುಕಿದ್ದ ಅರಗರ ಪಕ್ಕ ಸ್ಯಾಂಟ್ರೊ ರವಿ ಅದೇ ಡ್ರೆಸ್ಸಿನಲ್ಲಿ ಬಂದು ನಿಂತಿದ್ದೂ ಅಲ್ಲದೆ, ಅರಗರ ಅರಿವಿಗೂ ಬರದೆ ಜೇಬಿಗೆ ಏನೊ ಇಟ್ಟು ಹೋದದ್ದು ಗಮನಕ್ಕೇ ಬರಲಿಲ್ಲವಂತಲ್ಲಾ. ಈಗ ನೋಡಿದರೆ ಸ್ಯಾಂಟ್ರೊ ರವಿ ಪೊಲೀಸ್ ವರ್ಗಾವಣೆಯಲ್ಲಿ ಪಡೆದ ಕಾಸಿನ ಕವಡೆಯನ್ನು ಅರಗರ ಜೇಬಿಗೆ ಹಾ ಹೋಗಿದ್ದಾನೆಂಬ ಸುದ್ದಿ ಹಬ್ಬಿದೆಯಲ್ಲಾ. ಇಂತಹ ಸುದ್ದಿಗಳ ಶೋಧನೆ ಮತ್ತು ಅನಾವರಣದಲ್ಲಿ ಎತ್ತಿದ ಕೈಯಾದ ಕುಮಾರಣ್ಣನವರು, ಆತ್ಮಹತ್ಯೆ ಬೇಡ ಆತ್ಮಸಾಕ್ಷಿಯಿದ್ದರೆ ಸಾಕು; ಆತ್ಮಹತ್ಯೆಯ ಹೆಸರೆತ್ತುವುದೂ ಅಪರಾಧವೇ, ಹಾಗೆ ರಾಜಕಾರಣಿಗಳು ಆತ್ಮಹತ್ಯೆ ಮಾಡಿಕೊಂಡರೆ ಇಡೀ ದೇಶದಲ್ಲಿ ರಾಜಕಾರಣಿಗಳೇ ಇಲ್ಲದಂತಾಗಿ ದೇಶವೇ ಅರಾಜಕ ಸ್ಥಿತಿಗೆ ಹೋಗುತ್ತದೆ ಎಂದಿಲ್ಲವಲ್ಲಾ, ಥೂತ್ತೇರಿ.

******

ಹಾವೇರಿ ಸಾಹಿತ್ಯ ಸಮ್ಮೇಳನ ಮುಗಿದಿದೆ. ಜೋಶಿಯ ಲೆಕ್ಕಾಚಾರಗಳು ಸಾಂಗವಾಗಿ ನಡೆದಿವೆ. ಈ ನಡುವೆ ಹಾವೇರಿಯ ಸಣ್ಣವೇದಿಕೆಯಿಂದ ದೊಡ್ಡ ಗಂಟಲಲ್ಲಿ ಅಬ್ಬರಿಸಿದ ದೊಡ್ಡರಂಗೇಗೌಡರ ದನಿ ನಾಡಿನ ಮೂಲೆಮೂಲೆಗೆ ತಲುಪಿ ತುಸು ಗೊಂದಲ ಮೂಡಿಸಿದೆಯಂತಲ್ಲಾ. ಕಳೆದ ಶತಮಾನದಲ್ಲಿ ಕುವೆಂಪು ಹೊಸ ತರುಣ ಜನಾಂಗಕ್ಕೆ ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ ಎಂದರು. ಆ ಕೂಡಲೇ ಹಲವು ತರುಣರು ದೇವರು ದಿಂಡಿರನ್ನು ಮತ್ತು ಜ್ಯೋತಿಷಿಗಳನ್ನು ಬಿಟ್ಟು ಮಂತ್ರ ಮಾಂಗಲ್ಯದ ಮದುವೆಯಾದರು, ಉರಿಯುವ ಪಂಜುಗಳಾದರು. ಆದರೀಗ ದೊಡ್ಡರಂಗೇಗೌಡರ ದನಿಗೆ ಕಿವಿಯಾದ ಹುಡುಗರು ಯಾವ ರೂಪದ ಕ್ರಾಂತಿ ಮಾಡಬೇಕೆಂದು ಯೋಚಿಸುತ್ತಿದ್ದಾರಂತಲ್ಲಾ. ಏಕೆಂದರೆ ಗೌಡರು ಮಠೋಪಜೀವಿಯಂತಹ ಕವಿ. ಆದಿಚುಂಚನಗಿರಿ ಬೆಟ್ಟದ ಮೇಲೆ ನಿಂತು ಸೂರ್ಯೋದಯ ನೋಡಿದ ಫಲವಾಗಿ “ತೇರಾಏರಿ ಅಂಬರದಾಗ ನೇಸರು ನಗತಾನೆ ಮರಗಿಡ ಕೂಗ್ಯಾವೇ ಹಕ್ಕಿ ಹಾಡ್ಯಾವೇ” ಎಂದು ಬೇಂದ್ರೆ ತೋರಿದ ಬೆಳಗಿನ ಪ್ರತಿಯಾಗಿ ನೇಸರ ತೋರಿದ ಕವಿ. ಆದರೇನು ಶೂದ್ರ ಸಮೂಹದ ಬೆಟ್ಟಸಾಲಲ್ಲಿ ನಿಂತು ಅದ್ಯಾವಾಗ ಬಿಜೆಪಿ ಗುಡಾರಕ್ಕೆ ನೆಗೆದರೊ ಸ್ಥಾನ ಮಾನಗಳು ಹಿಂಬಾಲಿಸಿ ಬಂದವು. ಕೂಡಲೇ ಮೋದಿ ಬಗ್ಗೆ ಎಡೂರಪ್ಪನ ಬಗ್ಗೆಯೂ ಕವನ ಬರೆದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆದರು. ಮುಂದೆ ಜೋಶಿಗೆ ತೋರುವ ಕೃತಜ್ಞತೆಯ ಫಲವಾಗಿ ಯಾವ ಕವನ ಉದ್ಭವವಾಗುತ್ತದೊ ಎಂಬ ಆತಂಕದ ನಡುವೆ ಇತ್ತ ಚೆಡ್ಡಿಗಳು, ಅತ್ತ ಚುಂಚನಗಿರಿ ಪ್ರಾಂತ್ಯದ ಹುಡುಗರು ಗೌಡರ ಕ್ರಾಂತಿ ಮಾತಿನಿಂದ ಗೊಂದಲಗೊಂಡಿದ್ದಾರಂತಲ್ಲಾ, ಥೂತ್ತೇರಿ.

*****

ಈಚೆಗೆ ಕೆಲವು ಮಠಾಧೀಶರು ಸಂಘಟಿತರಾಗಿ ಸರಕಾರಕ್ಕೆ ಸಲಹೆ ಕೊಡುವುದು ಸಾಮಾನ್ಯವಾಗಿದೆಯಂತಲ್ಲಾ. ಈಗವರ ಕಣ್ಣುಬಿದ್ದಿರುವುದು ಶಾಲಾ ಮಕ್ಕಳ ಆಹಾರದ ಬಗ್ಗೆ. ಸಾಮಾನ್ಯವಾಗಿ ಮಠಾಧೀಶರು, ಧರ್ಮವಂತರು, ನೀತಿವಂತರು, ಸತ್ಯವಂತರು. ತಾವು ಪ್ರತಿನಿಧಿಸುವ ಜಾತಿಯ ತಲೆಯ ಮೇಲೂ ಕುಳಿತವರು. ಇಂತಹ ಸ್ಥಾನದಲ್ಲಿರುವವರಿಗೆ ಸಾಮಾನ್ಯವಾಗಿ ಯಾವ ಶ್ರಮವೂ ಇರುವುದಿಲ್ಲ. ವಿಕಲಚೇತನ ಮಗುವಿಗೆ ತಾಯಿ ತಾನೇ ಆಹಾರ ನೀಡಿ ಸಾಕಿ ಸಲಹುವಂತೆ ಜನಾಂಗ ಈ ಜಗದ್ಗುರುಗಳನ್ನ ಸಾಕುತ್ತಿದೆ. ಹೀಗೆ ಸಾಕಿಸಿಕೊಂಡವರೆಲ್ಲಾ ಮಕ್ಕಳ ಸಾತ್ವಿಕ ಆಹಾರದ ಬಗ್ಗೆ ಮಾತನಾಡುತ್ತಿದ್ದಾರೆ. ಗುರುಗಳ ಭೋಜನದ ಬಗ್ಗೆ ’ಗುರು ಶಿಷ್ಯರು’ ಎಂಬ ಚಿತ್ರದ ತುಣುಕು ಹೇಳಿದರೆ ಅಪ್ರಸ್ತುತವಾಗಲಾರದು. ಉಂಡಾಡಿ ಗುರುವೊಬ್ಬರು ಗುರುವರ್ಯರ ಮನೆಗೆ ಬರುತ್ತಾರೆ. ಆಗ ಆಚಾರ್ಯರು ಅವರ ಕಾರ್ಯಕ್ರಮ ಕೇಳುತ್ತಾರೆ. ಆಗ ಅತಿಥಿಗಳು ಮುಂಜಾನೆ ಸ್ನಾನ, ಸಂಧ್ಯಾವಂದನೆ ಮತ್ತೆ ಉಪಾಹಾರ ಮಧ್ಯಾಹ್ನ ಭೋಜನ, ಶಯನ ನಂತರ ವಾಯುವಿಹಾರ, ರಾತ್ರಿ ಭೋಜನ ಮತ್ತು ಒಂದು ತಂಬಿಗೆ ಕ್ಷೀರ ಇದೇ ನನ್ನ ದಿನಚರಿ ಎನ್ನುತ್ತಾನೆ. ಹೀಗೆ ಬದುಕಿರುವ ನಮ್ಮ ಕೆಲವು ಜಗತ್ ಗುರುಗಳು ಮಕ್ಕಳ ಸಾತ್ವಿಕ ಆಹಾರದ ಬಗ್ಗೆ ಎಗ್ಗಿಲ್ಲದೆ ಸಲಹೆ ಕೊಡತೊಡಗಿದ್ದಾರೆ. ಇಂತಹವರ ಅವಗಾಹನೆಗೆ ತರುವ ವಿಷಯ ಯಾವುದೆಂದರೆ ಶೃಂಗೇರಿ, ಚುಂಚನಗಿರಿ, ಸಿದ್ಧಗಂಗಾ ಮಠ ಮತ್ತು ಇನ್ನಿತರ ಪ್ರಗತಿಪರ ಚಿಂತಕರನ್ನ ಪಡೆದಿರುವ ಮಠಗಳು ಎಂದೂ ಮಕ್ಕಳ ಆಹಾರ ಪದ್ಧತಿ ಬಗ್ಗೆ ಮಾತನಾಡಿಲ್ಲ. ಆಹಾರ ಅವರವರ ಜನ್ಮಸಿದ್ಧ ಹಕ್ಕು. ಆದ್ದರಿಂದ ತಮಗೆ ಬಿಟ್ಟಿ ಸಿಗುವ ದ್ರಾಕ್ಷಿ, ಉತ್ತುತ್ತೆ, ಗೋಡಂಬಿ ತಿಂದುಕೊಂಡು ಟಿವಿ ನೋಡುತ್ತ ಕಾಲ ಹಾಕಲು ಸಮಸ್ಯೆ ಏನು ಎಂದು ಕೇಳುವಂತೆ ಮಾತನಾಡುತ್ತಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...