Homeಮುಖಪುಟಅಮೆರಿಕಾ ಚುನಾವಣೆ: ಹೊಸ ಭರವಸೆಯಿತ್ತ ನಾಲ್ವರು ಪ್ರಗತಿಪರ ಮಹಿಳೆಯರ ಗೆಲುವು

ಅಮೆರಿಕಾ ಚುನಾವಣೆ: ಹೊಸ ಭರವಸೆಯಿತ್ತ ನಾಲ್ವರು ಪ್ರಗತಿಪರ ಮಹಿಳೆಯರ ಗೆಲುವು

ಈ ನಾಲ್ವರು ಮಹಿಳೆಯರು “ಬ್ಲೂ ವೇವ್” 2018 ರ ಮಧ್ಯಂತರ ಚುನಾವಣೆಗಳಲ್ಲಿ ಆಯ್ಕೆಯಾದವರು. ಇವರು ತಮ್ಮ ಬೆಂಬಲಿಗರು ಮತ್ತು ತಮ್ಮದೇ ಗುಂಪುಗಳಲ್ಲಿ “ದಿ ಸ್ಕ್ವಾಡ್” ಎಂದು ಪ್ರಸಿದ್ಧರಾದವರು.

- Advertisement -
- Advertisement -

ಅಮೆರಿಕಾ ಚುನಾವಣೆ ಫಲಿತಾಂಶದಲ್ಲಿ ಎಲ್ಲರ ಗಮನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಜೋ ಬಿಡೆನ್ ಮೇಲೆ ಕೇಂದ್ರಿಕರಿಸಿದೆ. ಆದರೆ ಇತ್ತ ಅಧ್ಯಕ್ಷರ ಆಯ್ಕೆಗೂ ಮುನ್ನ ಖುಷಿ ನೀಡುವ ಮತ್ತಷ್ಟು ಸುದ್ದಿಗಳಿವೆ. ಸಮಾಜದ ಲೈಂಗಿಕತೆ, ವರ್ಣಭೇದ ನೀತಿ, ಇಸ್ಲಾಮೋಫೋಬಿಯಾಗಳ ವಿರುದ್ಧ ಹೋರಾಡುತ್ತಾ, ಟೀಕೆ, ದಾಳಿಗಳನ್ನು ಎದುರಿಸಿದ ನಾಲ್ವರು ಪ್ರಗತಿಪರ ಮಹಿಳೆಯರು ಜಯಗಳಿಸಿದ್ದಾರೆ.

ಹೌದು, ಮಿನ್ನಿಯಾಪೊಲೀಸ್‌ನ ಇಲ್ಹಾನ್ ಒಮರ್, ನ್ಯೂಯಾರ್ಕ್‌ನ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್, ಮ್ಯಾಸಚೂಸೆಟ್ಸ್‌ನ ಅಯನ್ನಾ ಪ್ರೆಸ್ಲೆ, ಮತ್ತು ಮಿಚಿಗನ್‌ನ ರಶೀದಾ ಟ್ಲೈಬ್ ಎಲ್ಲರೂ  ಮರುಚುನಾವಣೆಯಲ್ಲಿ ವಿಜಯ ಸಾಧಿಸಿದ್ದಾರೆ.

ಈ ನಾಲ್ವರು ಕಾಂಗ್ರೆಸ್ ಮಹಿಳೆಯರು “ಬ್ಲೂ ವೇವ್” 2018 ರ ಮಧ್ಯಂತರ ಚುನಾವಣೆಗಳಲ್ಲಿ ಆಯ್ಕೆಯಾದವರು. ಇವರು ತಮ್ಮ ಬೆಂಬಲಿಗರು ಮತ್ತು ತಮ್ಮದೇ ಗುಂಪುಗಳಲ್ಲಿ “ದಿ ಸ್ಕ್ವಾಡ್” ಎಂದು ಪ್ರಸಿದ್ಧರಾದವರು.

ಇದನ್ನೂ ಓದಿ: ಟ್ರಂಪ್ ನಡೆಸಿದ 18 ರ್ಯಾಲಿಗಳಿಂದ 30 ಸಾವಿರ ಜನರಿಗೆ ಸೋಂಕು, 700 ಸಾವು ಸಾಧ್ಯತೆ: ವರದಿ

ಡೆಮಾಕ್ರಟಿಕ್ ಪಕ್ಷದ ಎಒಸಿ ಎಂದೂ ಕರೆಯಲ್ಪಡುವ ಒಕಾಸಿಯೊ-ಕಾರ್ಟೆಜ್, ರಿಪಬ್ಲಿಕನ್ ಎದುರಾಳಿ ಜಾನ್ ಕಮ್ಮಿಂಗ್ಸ್ ಅವರನ್ನು ಸೋಲಿಸಿ, ನ್ಯೂಯಾರ್ಕ್‌ನ 14 ನೇ ಜಿಲ್ಲೆಯಲ್ಲಿ 68.8% ಮತಗಳೊಂದಿಗೆ ಮರು ಆಯ್ಕೆಯಾಗಿದ್ದಾರೆ. 2018 ರಲ್ಲಿ ಎಒಸಿ ಸದನಕ್ಕೆ ಚುನಾಯಿತರಾದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಎಒಸಿ ತಮ್ಮ ಪ್ರಗತಿಪರ ಸಿದ್ದಾಂತಗಳು ಮತ್ತು ಅಜೆಂಡಾವನ್ನು ಬಹಿರಂಗವಾಗಿ ಮಾತನಾಡಿದ್ದು, ಅವರ ಸಹೋದ್ಯೋಗಿಗಳು ಮತ್ತು ಸಂಪ್ರದಾಯವಾದಿ ಪತ್ರಿಕಾ ಮಾಧ್ಯಮಗಳನ್ನು ಕೆರಳಿಸಿತ್ತು. ಸದ್ಯ 31 ವರ್ಷದ ಒಕಾಸಿಯೊ-ಕಾರ್ಟೆಜ್, 60 ವರ್ಷದ ಕ್ಯಾಥೊಲಿಕ್ ಪ್ರೌಢಶಾಲಾ ಶಿಕ್ಷಕ, 10 ಮಿಲಿಯನ್ ಡಾಲರ್‌ಗಳಿಗೂ ಹೆಚ್ಚು ಹಣ ಸಂಪಾಡಿಸಿರುವ ರಿಪಬ್ಲಿಕನ್ ಅಭ್ಯರ್ಥಿ ಜಾನ್ ಕಮ್ಮಿಂಗ್ಸ್ ಅವರನ್ನು ಸೋಲಿಸಿದ್ದಾರೆ.

ರಿಪಬ್ಲಿಕನ್ ಅಭ್ಯರ್ಥಿ ಲ್ಯಾಸಿ ಜಾನ್ಸನ್ ವಿರುದ್ಧ 64.6% ಮತಗಳೊಂದಿಗೆ ಮಿನ್ನೇಸೋಟದ 5 ನೇ ಕಾಂಗ್ರೆಸ್ ಜಿಲ್ಲೆಯಲ್ಲಿ ಇಲ್ಹಾನ್ ಒಮರ್ ಗೆಲುವು ಸಾಧಿಸಿದ್ದಾರೆ. ಬಾಲ್ಯದಲ್ಲಿ ಅಂತರ್ಯುದ್ಧದಿಂದ ಪಲಾಯನ ಮಾಡಿದ ಸೊಮಾಲಿ ನಿರಾಶ್ರಿತರಾಗಿದ್ದ ಒಮರ್, ಸದನಕ್ಕೆ ಚುನಾಯಿತರಾದ ಮೊದಲ ಸೊಮಾಲಿ ಅಮೆರಿಕನ್ ಎನಿಸಿಕೊಂಡಿದ್ದಾರೆ.

ಅವರು ತನ್ನ ಜನರ ಬಗ್ಗೆ, ತನ್ನ ಮಣ್ಣಿನ ಬಗ್ಗೆ ಬಹಿರಂಗವಾಗಿ ಮಾತನಾಡುವ ದೊಡ್ಡ ಧ್ವನಿಯಾಗಿದ್ದಾರೆ. ಜನಾಂಗೀಯ ಹಲ್ಲೆ ಮತ್ತು ವಲಸಿಗರ ಮೇಲೆ ನಡೆಯುವ ದಾಳಿಗಳ ಬಗ್ಗೆ ಮಾತನಾಡಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇದನ್ನೆ ದಾಳವಾಗಿಸಿ ರಿಪಬ್ಲಿಕನ್ ಅಭ್ಯರ್ಥಿ ಲ್ಯಾಸಿ ಜಾನ್ಸನ್ ವಿರುದ್ಧ ಜಯಗಳಿಸಿದ್ದಾರೆ.

ಇದನ್ನೂ ಓದಿ: ಅಮೇರಿಕಾ ಚುನಾವಣೆ: ಗೆಲುವಿನ ತುದಿಯಲ್ಲಿರುವ ಬೈಡೆನ್; ಟ್ರಂಪ್‌ಗೆ ಹಿನ್ನಡೆ!

 

ಇನ್ನು ಮ್ಯಾಸಚೂಸೆಟ್ಸ್‌ನ 7 ನೇ ಜಿಲ್ಲೆಯ ಪಾದ್ರಿಯಾಗಿದ್ದ ಸ್ವತಂತ್ರ ಅಭ್ಯರ್ಥಿ ರಾಯ್ ಓವೆನ್ಸ್‌ರನ್ನು 87.5% ಮತಗಳನ್ನು ಪಡೆಯುವ ಮೂಲಕ ಪ್ರೆಸ್ಲೆ ಸೋಲಿಸಿದರು. ಕಪ್ಪು ಹುಡುಗಿಯರ ಮೇಲಾಗುವ ಅನ್ಯಾಯದ ಅಪರಾಧೀಕರಣವನ್ನು ಸರಿಪಡಿಸುವ ಯೋಜನೆಗಳ ಬಗ್ಗೆ ಅವರು ಗಮನಾರ್ಹವಾಗಿ ಮಾತನಾಡಿದ್ದಾರೆ ಮತ್ತು ಈ ಕುರಿತು ಪ್ರಸ್ತಾಪಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಅವರು ಸ್ಪೂರ್ತಿದಾಯಕ ವೀಡಿಯೊವನ್ನು ಸಹ ಬಿಡುಗಡೆ ಮಾಡಿದರು, ಇದರಲ್ಲಿ ತಾವು ಬೋಳುತಲೆ(ಅಲೋಪೆಸಿಯಾ) ಹೊಂದಿರುವ ಕುರಿತು ವಿವರಿಸಿದ್ದರು.

ಮಿಚಿಗನ್‌ನ 13 ನೇ ಜಿಲ್ಲೆಯ ರಿಪಬ್ಲಿಕನ್ ಎದುರಾಳಿ ಡೇವಿಡ್ ಡುಡೆನ್‌ಹೋಫರ್ ವಿರುದ್ಧ ಟ್ಲೈಬ್ ಜಯಗಳಿಸಿದ್ದಾರೆ. ಟ್ಲೈಬ್, 2018 ರಲ್ಲಿ ಸದನದಲ್ಲಿ ಪ್ಯಾಲೇಸ್ಟಿನಿಯನ್ ಮೂಲದ ಮೊದಲ ಮಹಿಳೆ ಮತ್ತು ಒಮರ್ ಜೊತೆಗೆ  ಸದನಕ್ಕೆ ಆಯ್ಕೆಯಾದ ಮೊದಲ ಇಬ್ಬರು ಮುಸ್ಲಿಂ ಮಹಿಳೆಯರಲ್ಲಿ ಒಬ್ಬರಾಗಿದ್ದರು.

“ದಿ ಸ್ಕ್ವಾಡ್” ಎಂದು ಕರೆಸಿಕೊಳ್ಳುವ ಇವರ ಮೇಲೆ ಅಧ್ಯಕ್ಷ ಟ್ರಂಪ್ ಪದೇ ಪದೇ ಆಕ್ರಮಣ ಮಾಡಿದ್ದಾರೆ. ಈನಾಲ್ವರನ್ನು “ಎಒಸಿ ಪ್ಲಸ್ ತ್ರೀ” ಎಂದು ವ್ಯಂಗ್ಯವಾಡುತ್ತಾರೆ. ಕಳೆದ ವರ್ಷ, ಟ್ರಂಪ್ ಈ ನಾಲ್ವರು ಅಮೆರಿಕಾ ಪ್ರಜೆಗಳಾಗಿದ್ದರೂ ತಾವು ಬಂದ ದೇಶಗಳಿಗೆ ಹಿಂತಿರುಗಿ ಎಂದು ಹೇಳಿದ್ದರು.

ಇದನ್ನೂ ಓದಿ: ಗುಡ್ ನ್ಯೂಸ್: ಬೊಲಿವಿಯಾದಲ್ಲಿ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆ ಶೇ.50ಕ್ಕಿಂತಲೂ ಹೆಚ್ಚು!

ಈ ನಾಲ್ವರೂ ಎಂದು ಸುಮ್ಮನೆ ಕುಳಿತವರಲ್ಲ. ತಮ್ಮ ತಮ್ಮ ವ್ಯಾಪ್ತಿಯಲ್ಲಿ, ವ್ಯಾಪ್ತಿಯ ಹೊರಗಡೆಯೂ ಅನ್ಯಾಯಗಳ ವಿರುದ್ಧ ಧ್ವನಿ ಮಾಡಿದವರು. ಲೈಂಗಿಕತೆ, ಇಸ್ಲಾಮೋಫೋಬಿಯಾ ಮತ್ತು ವರ್ಣಭೇದ ನೀತಿಯಿಂದ ಜೀನೋಫೋಬಿಯಾ (ವಲಸಿಗರ ಮೇಲೆ ದಾಳಿ) ವರೆಗಿನ ಬಗ್ಗೆ ಬಹಿರಂಗವಾಗಿ ಮಾತನಾಡಿವರು. ಈ ಕಾರಣಕ್ಕೆ ಅನೇಕ ದಾಳಿಗಳು ಮತ್ತು ಟೀಕೆಗಳನ್ನು ಎದುರಿಸಿದ್ದಾರೆ.

ಒಕಾಸಿಯೊ-ಕಾರ್ಟೆಜ್, ಈ ನಾಲ್ವರಲ್ಲಿ ಗಮನಾರ್ಹವಾದವರು. ತನ್ನ ಎಡಪಂಥೀಯ ರಾಜಕಾರಣಕ್ಕಾಗಿ ಸಂಪ್ರದಾಯವಾದಿಗಳಿಂದ ಕಟುಟೀಕೆ ಎದುರಿಸಿದವರು.

ಇನ್ನು ಈ ನಾಲ್ವರಲ್ಲಿ ಅಮೆರಿಕಾಕ್ಕೆ ಹೊರಗಡೆಯಿಂದ ಬಂದವರು ಇಲ್ಹಾನ್ ಒಮರ್ ಮಾತ್ರ. ಯುವತಿಯೊಬ್ಬಳು ವಲಸೆಗಾರರ ಬಗ್ಗೆ ಮತ್ತು ಇಸ್ಲಾಮೋಫೋಬಿಯಾ ಬಗ್ಗೆ ಸಾಕಷ್ಟು ಧ್ವನಿ ಎತ್ತಿದ್ದರಿಂದ ಈಕೆಯನ್ನು ಚಿಕ್ಕವಯಸ್ಸಿನಲ್ಲೇ ಅಮೆರಿಕಕ್ಕೆ ಕರೆತರಲಾಗಿತ್ತು.

ಅಮೆರಿಕಾ ಚುನಾವಣೆ ಅಧ್ಯಕ್ಷೀಯ ಚುನಾವಣಾ ಫಲಿತಾಂಶಕ್ಕಾಗಿ ಇಡೀ ವಿಶ್ವದ ಜನರೇ ಎದುರು ನೋಡುತ್ತಿದ್ದಾರೆ. ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡೆನ್ ವೈಟ್ ಹೌಸ್‌ನತ್ತ ಮುನ್ನುಗ್ಗುತ್ತಿದ್ದಾರೆ. ಆದರೆ ಪೂರ್ತಿ ಮತ ಏಣಿಕೆ ಮುಗಿರುವವರೆಗೂ ಯಾವುದನ್ನೂ ನಿರ್ಧರಿಸಲು ಸಾಧ್ಯವಿಲ್ಲ.

ಅಮೆರಿಕಾ ಚುನಾವಣೆ ಫಲಿತಾಂಶ ಏನೇ ಇರಲಿ. ಕೆಲವು ಸ್ಥಳಗಳಲ್ಲಿನ ಮಹಿಳೆಯರ ಗೆಲುವು, ಹೋರಾಟಗಾರರು, ಅನ್ಯಾಯ ವಿರುದ್ಧ ದನಿ ಎತ್ತುವವರಿಗೆ ಹೊಸ ಭರವಸೆ ಮೂಡಿಸಿರುವುದು ಸುಳ್ಳಲ್ಲ.


ಇದನ್ನೂ ಓದಿ: ಮತದಾನದಲ್ಲಿ ವಂಚನೆ, ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇವೆ: ಡೊನಾಲ್ಡ್ ಟ್ರಂಪ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...