Homeಮುಖಪುಟಅಮೆರಿಕಾ ಚುನಾವಣೆ: ಹೊಸ ಭರವಸೆಯಿತ್ತ ನಾಲ್ವರು ಪ್ರಗತಿಪರ ಮಹಿಳೆಯರ ಗೆಲುವು

ಅಮೆರಿಕಾ ಚುನಾವಣೆ: ಹೊಸ ಭರವಸೆಯಿತ್ತ ನಾಲ್ವರು ಪ್ರಗತಿಪರ ಮಹಿಳೆಯರ ಗೆಲುವು

ಈ ನಾಲ್ವರು ಮಹಿಳೆಯರು “ಬ್ಲೂ ವೇವ್” 2018 ರ ಮಧ್ಯಂತರ ಚುನಾವಣೆಗಳಲ್ಲಿ ಆಯ್ಕೆಯಾದವರು. ಇವರು ತಮ್ಮ ಬೆಂಬಲಿಗರು ಮತ್ತು ತಮ್ಮದೇ ಗುಂಪುಗಳಲ್ಲಿ “ದಿ ಸ್ಕ್ವಾಡ್” ಎಂದು ಪ್ರಸಿದ್ಧರಾದವರು.

- Advertisement -
- Advertisement -

ಅಮೆರಿಕಾ ಚುನಾವಣೆ ಫಲಿತಾಂಶದಲ್ಲಿ ಎಲ್ಲರ ಗಮನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಜೋ ಬಿಡೆನ್ ಮೇಲೆ ಕೇಂದ್ರಿಕರಿಸಿದೆ. ಆದರೆ ಇತ್ತ ಅಧ್ಯಕ್ಷರ ಆಯ್ಕೆಗೂ ಮುನ್ನ ಖುಷಿ ನೀಡುವ ಮತ್ತಷ್ಟು ಸುದ್ದಿಗಳಿವೆ. ಸಮಾಜದ ಲೈಂಗಿಕತೆ, ವರ್ಣಭೇದ ನೀತಿ, ಇಸ್ಲಾಮೋಫೋಬಿಯಾಗಳ ವಿರುದ್ಧ ಹೋರಾಡುತ್ತಾ, ಟೀಕೆ, ದಾಳಿಗಳನ್ನು ಎದುರಿಸಿದ ನಾಲ್ವರು ಪ್ರಗತಿಪರ ಮಹಿಳೆಯರು ಜಯಗಳಿಸಿದ್ದಾರೆ.

ಹೌದು, ಮಿನ್ನಿಯಾಪೊಲೀಸ್‌ನ ಇಲ್ಹಾನ್ ಒಮರ್, ನ್ಯೂಯಾರ್ಕ್‌ನ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್, ಮ್ಯಾಸಚೂಸೆಟ್ಸ್‌ನ ಅಯನ್ನಾ ಪ್ರೆಸ್ಲೆ, ಮತ್ತು ಮಿಚಿಗನ್‌ನ ರಶೀದಾ ಟ್ಲೈಬ್ ಎಲ್ಲರೂ  ಮರುಚುನಾವಣೆಯಲ್ಲಿ ವಿಜಯ ಸಾಧಿಸಿದ್ದಾರೆ.

ಈ ನಾಲ್ವರು ಕಾಂಗ್ರೆಸ್ ಮಹಿಳೆಯರು “ಬ್ಲೂ ವೇವ್” 2018 ರ ಮಧ್ಯಂತರ ಚುನಾವಣೆಗಳಲ್ಲಿ ಆಯ್ಕೆಯಾದವರು. ಇವರು ತಮ್ಮ ಬೆಂಬಲಿಗರು ಮತ್ತು ತಮ್ಮದೇ ಗುಂಪುಗಳಲ್ಲಿ “ದಿ ಸ್ಕ್ವಾಡ್” ಎಂದು ಪ್ರಸಿದ್ಧರಾದವರು.

ಇದನ್ನೂ ಓದಿ: ಟ್ರಂಪ್ ನಡೆಸಿದ 18 ರ್ಯಾಲಿಗಳಿಂದ 30 ಸಾವಿರ ಜನರಿಗೆ ಸೋಂಕು, 700 ಸಾವು ಸಾಧ್ಯತೆ: ವರದಿ

ಡೆಮಾಕ್ರಟಿಕ್ ಪಕ್ಷದ ಎಒಸಿ ಎಂದೂ ಕರೆಯಲ್ಪಡುವ ಒಕಾಸಿಯೊ-ಕಾರ್ಟೆಜ್, ರಿಪಬ್ಲಿಕನ್ ಎದುರಾಳಿ ಜಾನ್ ಕಮ್ಮಿಂಗ್ಸ್ ಅವರನ್ನು ಸೋಲಿಸಿ, ನ್ಯೂಯಾರ್ಕ್‌ನ 14 ನೇ ಜಿಲ್ಲೆಯಲ್ಲಿ 68.8% ಮತಗಳೊಂದಿಗೆ ಮರು ಆಯ್ಕೆಯಾಗಿದ್ದಾರೆ. 2018 ರಲ್ಲಿ ಎಒಸಿ ಸದನಕ್ಕೆ ಚುನಾಯಿತರಾದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಎಒಸಿ ತಮ್ಮ ಪ್ರಗತಿಪರ ಸಿದ್ದಾಂತಗಳು ಮತ್ತು ಅಜೆಂಡಾವನ್ನು ಬಹಿರಂಗವಾಗಿ ಮಾತನಾಡಿದ್ದು, ಅವರ ಸಹೋದ್ಯೋಗಿಗಳು ಮತ್ತು ಸಂಪ್ರದಾಯವಾದಿ ಪತ್ರಿಕಾ ಮಾಧ್ಯಮಗಳನ್ನು ಕೆರಳಿಸಿತ್ತು. ಸದ್ಯ 31 ವರ್ಷದ ಒಕಾಸಿಯೊ-ಕಾರ್ಟೆಜ್, 60 ವರ್ಷದ ಕ್ಯಾಥೊಲಿಕ್ ಪ್ರೌಢಶಾಲಾ ಶಿಕ್ಷಕ, 10 ಮಿಲಿಯನ್ ಡಾಲರ್‌ಗಳಿಗೂ ಹೆಚ್ಚು ಹಣ ಸಂಪಾಡಿಸಿರುವ ರಿಪಬ್ಲಿಕನ್ ಅಭ್ಯರ್ಥಿ ಜಾನ್ ಕಮ್ಮಿಂಗ್ಸ್ ಅವರನ್ನು ಸೋಲಿಸಿದ್ದಾರೆ.

ರಿಪಬ್ಲಿಕನ್ ಅಭ್ಯರ್ಥಿ ಲ್ಯಾಸಿ ಜಾನ್ಸನ್ ವಿರುದ್ಧ 64.6% ಮತಗಳೊಂದಿಗೆ ಮಿನ್ನೇಸೋಟದ 5 ನೇ ಕಾಂಗ್ರೆಸ್ ಜಿಲ್ಲೆಯಲ್ಲಿ ಇಲ್ಹಾನ್ ಒಮರ್ ಗೆಲುವು ಸಾಧಿಸಿದ್ದಾರೆ. ಬಾಲ್ಯದಲ್ಲಿ ಅಂತರ್ಯುದ್ಧದಿಂದ ಪಲಾಯನ ಮಾಡಿದ ಸೊಮಾಲಿ ನಿರಾಶ್ರಿತರಾಗಿದ್ದ ಒಮರ್, ಸದನಕ್ಕೆ ಚುನಾಯಿತರಾದ ಮೊದಲ ಸೊಮಾಲಿ ಅಮೆರಿಕನ್ ಎನಿಸಿಕೊಂಡಿದ್ದಾರೆ.

ಅವರು ತನ್ನ ಜನರ ಬಗ್ಗೆ, ತನ್ನ ಮಣ್ಣಿನ ಬಗ್ಗೆ ಬಹಿರಂಗವಾಗಿ ಮಾತನಾಡುವ ದೊಡ್ಡ ಧ್ವನಿಯಾಗಿದ್ದಾರೆ. ಜನಾಂಗೀಯ ಹಲ್ಲೆ ಮತ್ತು ವಲಸಿಗರ ಮೇಲೆ ನಡೆಯುವ ದಾಳಿಗಳ ಬಗ್ಗೆ ಮಾತನಾಡಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇದನ್ನೆ ದಾಳವಾಗಿಸಿ ರಿಪಬ್ಲಿಕನ್ ಅಭ್ಯರ್ಥಿ ಲ್ಯಾಸಿ ಜಾನ್ಸನ್ ವಿರುದ್ಧ ಜಯಗಳಿಸಿದ್ದಾರೆ.

ಇದನ್ನೂ ಓದಿ: ಅಮೇರಿಕಾ ಚುನಾವಣೆ: ಗೆಲುವಿನ ತುದಿಯಲ್ಲಿರುವ ಬೈಡೆನ್; ಟ್ರಂಪ್‌ಗೆ ಹಿನ್ನಡೆ!

 

ಇನ್ನು ಮ್ಯಾಸಚೂಸೆಟ್ಸ್‌ನ 7 ನೇ ಜಿಲ್ಲೆಯ ಪಾದ್ರಿಯಾಗಿದ್ದ ಸ್ವತಂತ್ರ ಅಭ್ಯರ್ಥಿ ರಾಯ್ ಓವೆನ್ಸ್‌ರನ್ನು 87.5% ಮತಗಳನ್ನು ಪಡೆಯುವ ಮೂಲಕ ಪ್ರೆಸ್ಲೆ ಸೋಲಿಸಿದರು. ಕಪ್ಪು ಹುಡುಗಿಯರ ಮೇಲಾಗುವ ಅನ್ಯಾಯದ ಅಪರಾಧೀಕರಣವನ್ನು ಸರಿಪಡಿಸುವ ಯೋಜನೆಗಳ ಬಗ್ಗೆ ಅವರು ಗಮನಾರ್ಹವಾಗಿ ಮಾತನಾಡಿದ್ದಾರೆ ಮತ್ತು ಈ ಕುರಿತು ಪ್ರಸ್ತಾಪಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಅವರು ಸ್ಪೂರ್ತಿದಾಯಕ ವೀಡಿಯೊವನ್ನು ಸಹ ಬಿಡುಗಡೆ ಮಾಡಿದರು, ಇದರಲ್ಲಿ ತಾವು ಬೋಳುತಲೆ(ಅಲೋಪೆಸಿಯಾ) ಹೊಂದಿರುವ ಕುರಿತು ವಿವರಿಸಿದ್ದರು.

ಮಿಚಿಗನ್‌ನ 13 ನೇ ಜಿಲ್ಲೆಯ ರಿಪಬ್ಲಿಕನ್ ಎದುರಾಳಿ ಡೇವಿಡ್ ಡುಡೆನ್‌ಹೋಫರ್ ವಿರುದ್ಧ ಟ್ಲೈಬ್ ಜಯಗಳಿಸಿದ್ದಾರೆ. ಟ್ಲೈಬ್, 2018 ರಲ್ಲಿ ಸದನದಲ್ಲಿ ಪ್ಯಾಲೇಸ್ಟಿನಿಯನ್ ಮೂಲದ ಮೊದಲ ಮಹಿಳೆ ಮತ್ತು ಒಮರ್ ಜೊತೆಗೆ  ಸದನಕ್ಕೆ ಆಯ್ಕೆಯಾದ ಮೊದಲ ಇಬ್ಬರು ಮುಸ್ಲಿಂ ಮಹಿಳೆಯರಲ್ಲಿ ಒಬ್ಬರಾಗಿದ್ದರು.

“ದಿ ಸ್ಕ್ವಾಡ್” ಎಂದು ಕರೆಸಿಕೊಳ್ಳುವ ಇವರ ಮೇಲೆ ಅಧ್ಯಕ್ಷ ಟ್ರಂಪ್ ಪದೇ ಪದೇ ಆಕ್ರಮಣ ಮಾಡಿದ್ದಾರೆ. ಈನಾಲ್ವರನ್ನು “ಎಒಸಿ ಪ್ಲಸ್ ತ್ರೀ” ಎಂದು ವ್ಯಂಗ್ಯವಾಡುತ್ತಾರೆ. ಕಳೆದ ವರ್ಷ, ಟ್ರಂಪ್ ಈ ನಾಲ್ವರು ಅಮೆರಿಕಾ ಪ್ರಜೆಗಳಾಗಿದ್ದರೂ ತಾವು ಬಂದ ದೇಶಗಳಿಗೆ ಹಿಂತಿರುಗಿ ಎಂದು ಹೇಳಿದ್ದರು.

ಇದನ್ನೂ ಓದಿ: ಗುಡ್ ನ್ಯೂಸ್: ಬೊಲಿವಿಯಾದಲ್ಲಿ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆ ಶೇ.50ಕ್ಕಿಂತಲೂ ಹೆಚ್ಚು!

ಈ ನಾಲ್ವರೂ ಎಂದು ಸುಮ್ಮನೆ ಕುಳಿತವರಲ್ಲ. ತಮ್ಮ ತಮ್ಮ ವ್ಯಾಪ್ತಿಯಲ್ಲಿ, ವ್ಯಾಪ್ತಿಯ ಹೊರಗಡೆಯೂ ಅನ್ಯಾಯಗಳ ವಿರುದ್ಧ ಧ್ವನಿ ಮಾಡಿದವರು. ಲೈಂಗಿಕತೆ, ಇಸ್ಲಾಮೋಫೋಬಿಯಾ ಮತ್ತು ವರ್ಣಭೇದ ನೀತಿಯಿಂದ ಜೀನೋಫೋಬಿಯಾ (ವಲಸಿಗರ ಮೇಲೆ ದಾಳಿ) ವರೆಗಿನ ಬಗ್ಗೆ ಬಹಿರಂಗವಾಗಿ ಮಾತನಾಡಿವರು. ಈ ಕಾರಣಕ್ಕೆ ಅನೇಕ ದಾಳಿಗಳು ಮತ್ತು ಟೀಕೆಗಳನ್ನು ಎದುರಿಸಿದ್ದಾರೆ.

ಒಕಾಸಿಯೊ-ಕಾರ್ಟೆಜ್, ಈ ನಾಲ್ವರಲ್ಲಿ ಗಮನಾರ್ಹವಾದವರು. ತನ್ನ ಎಡಪಂಥೀಯ ರಾಜಕಾರಣಕ್ಕಾಗಿ ಸಂಪ್ರದಾಯವಾದಿಗಳಿಂದ ಕಟುಟೀಕೆ ಎದುರಿಸಿದವರು.

ಇನ್ನು ಈ ನಾಲ್ವರಲ್ಲಿ ಅಮೆರಿಕಾಕ್ಕೆ ಹೊರಗಡೆಯಿಂದ ಬಂದವರು ಇಲ್ಹಾನ್ ಒಮರ್ ಮಾತ್ರ. ಯುವತಿಯೊಬ್ಬಳು ವಲಸೆಗಾರರ ಬಗ್ಗೆ ಮತ್ತು ಇಸ್ಲಾಮೋಫೋಬಿಯಾ ಬಗ್ಗೆ ಸಾಕಷ್ಟು ಧ್ವನಿ ಎತ್ತಿದ್ದರಿಂದ ಈಕೆಯನ್ನು ಚಿಕ್ಕವಯಸ್ಸಿನಲ್ಲೇ ಅಮೆರಿಕಕ್ಕೆ ಕರೆತರಲಾಗಿತ್ತು.

ಅಮೆರಿಕಾ ಚುನಾವಣೆ ಅಧ್ಯಕ್ಷೀಯ ಚುನಾವಣಾ ಫಲಿತಾಂಶಕ್ಕಾಗಿ ಇಡೀ ವಿಶ್ವದ ಜನರೇ ಎದುರು ನೋಡುತ್ತಿದ್ದಾರೆ. ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡೆನ್ ವೈಟ್ ಹೌಸ್‌ನತ್ತ ಮುನ್ನುಗ್ಗುತ್ತಿದ್ದಾರೆ. ಆದರೆ ಪೂರ್ತಿ ಮತ ಏಣಿಕೆ ಮುಗಿರುವವರೆಗೂ ಯಾವುದನ್ನೂ ನಿರ್ಧರಿಸಲು ಸಾಧ್ಯವಿಲ್ಲ.

ಅಮೆರಿಕಾ ಚುನಾವಣೆ ಫಲಿತಾಂಶ ಏನೇ ಇರಲಿ. ಕೆಲವು ಸ್ಥಳಗಳಲ್ಲಿನ ಮಹಿಳೆಯರ ಗೆಲುವು, ಹೋರಾಟಗಾರರು, ಅನ್ಯಾಯ ವಿರುದ್ಧ ದನಿ ಎತ್ತುವವರಿಗೆ ಹೊಸ ಭರವಸೆ ಮೂಡಿಸಿರುವುದು ಸುಳ್ಳಲ್ಲ.


ಇದನ್ನೂ ಓದಿ: ಮತದಾನದಲ್ಲಿ ವಂಚನೆ, ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇವೆ: ಡೊನಾಲ್ಡ್ ಟ್ರಂಪ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...