Homeಅಂಕಣಗಳುಲಸಿಕಾಯಣ: ಲಸಿಕೆಯೋ, ಔಷಧಿಯೋ, ಭೈರವಿ ಭಜನೆಯೋ

ಲಸಿಕಾಯಣ: ಲಸಿಕೆಯೋ, ಔಷಧಿಯೋ, ಭೈರವಿ ಭಜನೆಯೋ

- Advertisement -
- Advertisement -

ಇಪ್ಪತ್ತೊಂದು ದಿವಸ ಮನ್ಯಾಗ ಕುತಗೊಂಡು ಎಲ್ಲಾರಿಗೂ ಸಾಕಾಗಿ ಹೋಗೇತಿ. ಕೆಲವರಂತೂ ಕುಂತಲ್ಲೇ ಕುಂತು ಕುಂತು ಬೂಳಸ ಬಂದು ಬಿಟ್ಟಾರು.

ಜನರಿಗೆ ನೀವು ಠೀವಿ ನೋಡ್ರಿ, ಫೋನಿನ್ಯಾಗ ಸಮಾಜ ವಿರೋಧಿ ಮಾಧ್ಯಮದ ಪೋಸ್ಟುಗಳನ್ನ ಪೋಸ್ಟಮೆನ್‍ಗತೆ ಮಂದಿಗೆ ಹಂಚಿಕೊಂತ ಕೂತ ಬಿಡ್ರಿ ಅಂದರ ಹೂಂ ಅಂತೇವಿ. ಆದರ “ನೀವು ಹಿಂಗ ಇರಬ್ಯಾಡ್ರಿ, ಒಂದು ಈಟು ಬುದ್ಧಿ ಉಪಯೋಗ ಮಾಡ್ರಿ” ಅಂತ ಅಂದರ ಹೆಂಗ? ಅದೊಂದು ಬಿಟ್ಟು ಬ್ಯಾರೆ ಏನರ ಹೇಳರಿ, ಮಾಡೇವಿ, ಇದನ್ನ ಮಾತ್ರ ಅನಬ್ಯಾಡ್ರಿ,” ಅಂತ ಅಂತೀರೇನೋ? ಇರಲಿ, ಇದೊಂದು ಸಲ ಕೇಳ್ರಿ.

`ಈ ಕೊರೊನಾ ವೈರಸ್ಸನ ಅಪಾಯವನ್ನೇ ನಮ್ಮ ವಿಜ್ಞಾನಿಗಳು ಅನ್ನಿಸಿಕೊಳ್ಳೋರು ಅರ್ಥ ಮಾಡಿಕೊಂಡಿಲ್ಲ, ಇನ್ನ ಇಸ್ಲಾಮಿನ ಅಪಾಯವನ್ನು ಹೇಗೆ ಅರ್ಥ ಮಾಡಿಕೊಂಡಾರು ಅಂತ ಹೇಳಿ ನಮ್ಮ ನವ್ಯಾತೀತ ಚಿಂತಕ ಅನಂತ ಕುಮಾರ ಹೆಗಡೆ ಅವರು ಹೇಳ್ಯಾರ. ಸರ್ವೇ ಸಾಮಾನ್ಯವಾಗಿ ಅವರು ಮಾತಾಡೋದು ಕಮ್ಮಿ. ಅವರ ಕೈ ಆಡೋದ ಜಾಸ್ತಿ. ಹಿಂಗಾಗಿ ಅವರೇನೋ ಅಪರೂಪಕ್ಕೊಮ್ಮೆ ಮಾತಾಡಿರಬೇಕು ಅಂತ ಜನಾ ಸುಮ್ಮನಿರಬೇಕು.

ಆದರ ನಿಜವಾಗಿಯೂ ವಿಜ್ಞಾನಿಗಳಿಗೆ ಈ ಕರೋನಾ ಅಥವಾ ಕಿರೀಟಿ ವೈರಸ್ಸು ವ್ಯಾಧಿಯನ್ನು ಅರ್ಥ ಮಾಡಿಕೊಳ್ಳೋದರಾಗ ಹಿಂಬರಿಕಿ ಆಗೇದೇನು? ಅವರು ಸೋತು ಹೋಗ್ಯಾರೇನು? ಅವರಿಗೆ ಅರ್ಥನ ಆಗಿಲ್ಲಾ ಅಂದರ ನಮ್ಮ ಗತಿ ಏನು?

ಈ ಹೊಸಾ ಇಂಗ್ಲೀಷ ಪಿಚ್ಚರ ಬಂದಿರತಾವಲ್ಲಾ. ಅದರಾಗ ಯಾವಾನೋ ಒಬ್ಬವ ರಷಿಯಾ/ ಇರಾನ/ ‍ಅಫಘಾನಿಸ್ತಾನ/ ಉತ್ತರ ಕೋರಿಯಾದಿಂದ ಬರತಾನ, ಯಾರಿಗೂ ಗೊತ್ತಾಗದಂಗ ಜನರ ನಡುವ ಒಂದು ವೈರಸ್ ಬಿಟ್ಟ ಬಿಡತಾನ.

ಇದರಿಂದಾಗಿ ಹೀರೋ- ಹಿರೋಯಿನಿ ಇಬ್ಬಳಾರನ್ನ ಬಿಟ್ಟು ಎಲ್ಲಾರು ಷಟದು ಹೋಗತಾರು. ಕಡೀಕೆ ಅದಕ್ಕ ಒಂದು ಭಾರತೀಯ/ ಪೂರ್ವ ಯುರೋಪಿಯನ್ನ/ ಆಫ್ರಿಕನ್ ವಿಜ್ಞಾನಿ ಎಂಟಿಡೋಟು ಅಥವಾ ನಂಜುಮುರಕಾ ಕಂಡು ಹಿಡಿತಾನ. ಅದರಿಂದ ಕೆಲವರ ಜೀವ ಉಳೀತೇತಿ.

ಈಗನೂ ಹಂಗ ಆಗೋದ ಐತೇನು? ನಾವೆಲ್ಲಾ ಭೈರವಿ ಭಜನೆ ಹಾಡಿಕೊಂತ ಹೋಗಾವರ ಅದೇವೇನು?

ಇಂಥಾ ಎಲ್ಲಾ ಪ್ರಶ್ನಿಗಳ ಉತ್ತರ ಏನು ಅಂತ ಅಂದರ. “ಇಲ್ಲಾ”. ವಿಜ್ಞಾನಿಗಳು- ಭಾರತೀರಾಗಿರಲಿ, ಹೊರಗಿನವರಾಗಿರಲಿ, ಇದರ ಮ್ಯಾಲೆ ಭಾಳ ಕೆಲಸಾ ಮಾಡಾಕುಂತಾರು. ಮನಿ- ಮಠಾ ಬಿಟ್ಟು ಹಗಲೂ -ರಾತ್ರಿ ಅದರಾಗ ಸಂಶೋಧನೆ ನಡದೇತಿ. ಎಂದಿನಂತೆ ನಮ್ಮ ಸರಕಾರಗಳು ಇಂಥಾದೆಲ್ಲಾ ನಮ್ಮಿಂದ ಮುಚ್ಚಿ ಇಡಾಕ ಹತ್ಯಾರ.

ಇದು ಎರಡು ಲೆವಲ್ಲಿನೊಳಗ ಕೆಲಸ ನಡದದ. ಒಂದು ಲಸಿಕೆ ತಯಾರು ಮಾಡೋದು, ಇನ್ನೊಂದು ಔಷಧಿ ಕಂಡು ಹಿಡಿಯೋದು.

ಇದರೊಳಗ ಒಂದು ಸಣ್ಣ ವ್ಯತ್ಯಾಸ ಅದ.

ಔಷಧಿ ಅಂದರ ರಸಾಯನಶಾಸ್ತ್ರದ ಸಂಶೋಧನೆಯೊಳಗಿಂದ ಹುಟ್ಟೋದು. ಲಸಿಕೆ ಉಪಯೋಗ ಅಂದರ ಜೀವಶಾಸ್ತ್ರಜ್ಞರ ತಡಕಾಟ.

ಔಷಧಿ ಅಂದರ ಕೆಲವು ರಸಾಯನಿಕಗಳನ್ನ ತೊಗೊಳ್ಳೋದು, ಅವು ಬ್ಯಾಕ್ಟೀರಿಯಾ, ವೈರಸ್ಸು ಅಥವಾ ಇತರ ರೋಗಾಣುಗಳನ್ನು ನಿಷ್ಕ್ರಿಯ ಗೊಳಿಸತದೋ ಇಲ್ಲೋ ಅಂತ ನೋಡೋದು.

ಇದು ಸಾಮಾನ್ಯವಾಗಿ ಆಗತದ ಅಂದರ ಆ ರೋಗಾಣುವಿನ ಜೀವಕೋಶದ ಚರ್ಮವನ್ನು ಕರಗಿಸಿ ಬಿಡತದ. ಔಷಧಿ ಶಾಸ್ತ್ರಜ್ಞರು ಹೆಂಗ ಮಾಡತಾರ ಅಂದರ ಈಗ ಮಾರುಕಟ್ಟೆಯೊಳಗ ಇರೋ ಔಷಧಿಗಳನ್ನು ಬೇರೆ ಬೇರೆ ರೋಗಗಳನ್ನ ಗುಣ ಪಡಿಸಲಿಕ್ಕೆ ಉಪಯೋಗ ಮಾಡತಾರ. ಇದಕ್ಕ ರಿಪರಪಸಿಂಗ ಅಥವಾ ಮರುಪ್ರಯೋಜನ ಮಾಡೋದು ಅಂತಾರ.

ಕರೋನಾದ ವಿರುದ್ಧ ರೆಮೆಡೆಸಿವಿರ, ಏಸೈಕ್ಲೋವಿರ, ಪೆನ್ಸಿಕ್ಲೋವಿರ, ಫಾವಿಪಿರಾವಿರ ಮುಂತಾದ ಔಷಧಿ ಬಗ್ಗೆ ಸಂಶೋಧನೆ ನಡದದ. ಇನ್ನು ನಮ್ಮ ಟ್ರಂಪಣ್ಣನವರ ಧಮಕಿ ಡ್ರಗ್ ಹೈಡ್ರೋಕ್ಸಿ ಕ್ಲೋರೋಕ್ವಿನ್ ಸಹಿತ ಉಪಯೋಗಸಲಿಕ್ಕೆ ಹತ್ಯಾರ. ಇದರಾಗ ಯಾವುದು ಹೆಚ್ಚು ಪ್ರಾಯೋಜಕ ಅನಸತದೋ ಅದನ್ನ ಎಲ್ಲಾರಿಗೂ ಕೊಡತಾರ.

ಇವೆಲ್ಲಾ ಈಗ ಬೇರೆ ಬೇರೆ ರೋಗಗಳಿಗೆ ಬಳಸೋ ಔಷಧಿ. ಇವನ್ನು ಉಪಯೋಗಿಸೋ ಔಚಿತ್ಯ ಏನಂದರ ಹೊಸಾ ಔಷಧಿ ಕಂಡು ಹಿಡೀಬೇಕು ಅಂದರ ಅದಕ್ಕ ಹತ್ತು- ಇಪ್ಪತ್ತು ವರ್ಷ ಹಿಡೀತದ. ಯಾಕಂದರ ಅದನ್ನ ಮದಲಿಗೆ ಪ್ರಾಣಿಗಳ ಮ್ಯಾಲೆ, ಆಮ್ಯಾಲೆ ಮನುಷರ ಮ್ಯಾಲೆ ಪ್ರಯೋಗ ಮಾಡಿ ಆಮ್ಯಾಲೆ ಮಾರುಕಟ್ಟೆ ಒಳಗ ಬಿಡಬೇಕಾಗತದ.

ಇನ್ನ ಲಸಿಕೆ ಅಂದರ ಯಾವ ವೈರಸ್ಸು ರೋಗಾಣುಗಳ ವಿರುದ್ಧ ನೀವು ಲಸಿಕೆ ತಯಾರಿಸಲಿಕ್ಕೆ ಹೊಂಟಿರತೀರೋ ಅದರದ ನಿರುಪದ್ರವಿ ರೂಪವೊಂದನ್ನ ತಯಾರು ಮಾಡಿ ನಿಮಗ ಕೊಡೋದು. ಅದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಅದರ ವಿರುದ್ಧ ಹೋರಾಡೋವಂಥಾ ಪ್ರತಿಜೀವಿಗಳನ್ನ ತಯಾರು ಮಾಡತದ. ಇಂಥಾ ಲಸಿಕೆ ಸುಮಾರು 60-80 ಶೇಕಡಾ ಜನರಿಗೆ ಸಿಕ್ಕಿತಲಾ ಅಂದರ ಇಡೀ ಜನಸಂಖ್ಯೆಗೆ ರೋಗ ನಿರೋಧಕ ಶಕ್ತಿ ಬರತದ.

ಇವೆರಡೂ ಆಗಲಿಲ್ಲ ಅಂದರ ಸರಕಾರ ಕೈಚೆಲ್ಲಿ ಕುತಕೋಬೇಕು. ಅವಾಗ ಎನಾಗತದ ಅಂದರ ಕೆಲವು ದಶಕಗಳ ನಂತರ ಹಿಂಡು ನಿರೋಧ ಬರತದ. ಅಷ್ಟರೊಳಗ ಭಾಳ ಜನ ಸ್ವರ್ಗ ವಾಸಿಗಳಾಗಿರತಾರ. ಆಗ ನಮ್ಮಲ್ಲಿ ಹಣೆಬರಾ ಗಟ್ಟಿ ಇದ್ದು ಉಳದೋರು, ಮತ್ತು ನಾವು ಆರಿಸಿ ಕಳಿಸಿದವರು ಕೋಲಾಟ ಆಡಬಹುದು – ಯಾರು ಹಿತವರು ನಿನಗೆ ಈ ಮೂವರೊಳಗ ಅಂತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...