Homeಅಂಕಣಗಳುಲಸಿಕಾಯಣ: ಲಸಿಕೆಯೋ, ಔಷಧಿಯೋ, ಭೈರವಿ ಭಜನೆಯೋ

ಲಸಿಕಾಯಣ: ಲಸಿಕೆಯೋ, ಔಷಧಿಯೋ, ಭೈರವಿ ಭಜನೆಯೋ

- Advertisement -
- Advertisement -

ಇಪ್ಪತ್ತೊಂದು ದಿವಸ ಮನ್ಯಾಗ ಕುತಗೊಂಡು ಎಲ್ಲಾರಿಗೂ ಸಾಕಾಗಿ ಹೋಗೇತಿ. ಕೆಲವರಂತೂ ಕುಂತಲ್ಲೇ ಕುಂತು ಕುಂತು ಬೂಳಸ ಬಂದು ಬಿಟ್ಟಾರು.

ಜನರಿಗೆ ನೀವು ಠೀವಿ ನೋಡ್ರಿ, ಫೋನಿನ್ಯಾಗ ಸಮಾಜ ವಿರೋಧಿ ಮಾಧ್ಯಮದ ಪೋಸ್ಟುಗಳನ್ನ ಪೋಸ್ಟಮೆನ್‍ಗತೆ ಮಂದಿಗೆ ಹಂಚಿಕೊಂತ ಕೂತ ಬಿಡ್ರಿ ಅಂದರ ಹೂಂ ಅಂತೇವಿ. ಆದರ “ನೀವು ಹಿಂಗ ಇರಬ್ಯಾಡ್ರಿ, ಒಂದು ಈಟು ಬುದ್ಧಿ ಉಪಯೋಗ ಮಾಡ್ರಿ” ಅಂತ ಅಂದರ ಹೆಂಗ? ಅದೊಂದು ಬಿಟ್ಟು ಬ್ಯಾರೆ ಏನರ ಹೇಳರಿ, ಮಾಡೇವಿ, ಇದನ್ನ ಮಾತ್ರ ಅನಬ್ಯಾಡ್ರಿ,” ಅಂತ ಅಂತೀರೇನೋ? ಇರಲಿ, ಇದೊಂದು ಸಲ ಕೇಳ್ರಿ.

`ಈ ಕೊರೊನಾ ವೈರಸ್ಸನ ಅಪಾಯವನ್ನೇ ನಮ್ಮ ವಿಜ್ಞಾನಿಗಳು ಅನ್ನಿಸಿಕೊಳ್ಳೋರು ಅರ್ಥ ಮಾಡಿಕೊಂಡಿಲ್ಲ, ಇನ್ನ ಇಸ್ಲಾಮಿನ ಅಪಾಯವನ್ನು ಹೇಗೆ ಅರ್ಥ ಮಾಡಿಕೊಂಡಾರು ಅಂತ ಹೇಳಿ ನಮ್ಮ ನವ್ಯಾತೀತ ಚಿಂತಕ ಅನಂತ ಕುಮಾರ ಹೆಗಡೆ ಅವರು ಹೇಳ್ಯಾರ. ಸರ್ವೇ ಸಾಮಾನ್ಯವಾಗಿ ಅವರು ಮಾತಾಡೋದು ಕಮ್ಮಿ. ಅವರ ಕೈ ಆಡೋದ ಜಾಸ್ತಿ. ಹಿಂಗಾಗಿ ಅವರೇನೋ ಅಪರೂಪಕ್ಕೊಮ್ಮೆ ಮಾತಾಡಿರಬೇಕು ಅಂತ ಜನಾ ಸುಮ್ಮನಿರಬೇಕು.

ಆದರ ನಿಜವಾಗಿಯೂ ವಿಜ್ಞಾನಿಗಳಿಗೆ ಈ ಕರೋನಾ ಅಥವಾ ಕಿರೀಟಿ ವೈರಸ್ಸು ವ್ಯಾಧಿಯನ್ನು ಅರ್ಥ ಮಾಡಿಕೊಳ್ಳೋದರಾಗ ಹಿಂಬರಿಕಿ ಆಗೇದೇನು? ಅವರು ಸೋತು ಹೋಗ್ಯಾರೇನು? ಅವರಿಗೆ ಅರ್ಥನ ಆಗಿಲ್ಲಾ ಅಂದರ ನಮ್ಮ ಗತಿ ಏನು?

ಈ ಹೊಸಾ ಇಂಗ್ಲೀಷ ಪಿಚ್ಚರ ಬಂದಿರತಾವಲ್ಲಾ. ಅದರಾಗ ಯಾವಾನೋ ಒಬ್ಬವ ರಷಿಯಾ/ ಇರಾನ/ ‍ಅಫಘಾನಿಸ್ತಾನ/ ಉತ್ತರ ಕೋರಿಯಾದಿಂದ ಬರತಾನ, ಯಾರಿಗೂ ಗೊತ್ತಾಗದಂಗ ಜನರ ನಡುವ ಒಂದು ವೈರಸ್ ಬಿಟ್ಟ ಬಿಡತಾನ.

ಇದರಿಂದಾಗಿ ಹೀರೋ- ಹಿರೋಯಿನಿ ಇಬ್ಬಳಾರನ್ನ ಬಿಟ್ಟು ಎಲ್ಲಾರು ಷಟದು ಹೋಗತಾರು. ಕಡೀಕೆ ಅದಕ್ಕ ಒಂದು ಭಾರತೀಯ/ ಪೂರ್ವ ಯುರೋಪಿಯನ್ನ/ ಆಫ್ರಿಕನ್ ವಿಜ್ಞಾನಿ ಎಂಟಿಡೋಟು ಅಥವಾ ನಂಜುಮುರಕಾ ಕಂಡು ಹಿಡಿತಾನ. ಅದರಿಂದ ಕೆಲವರ ಜೀವ ಉಳೀತೇತಿ.

ಈಗನೂ ಹಂಗ ಆಗೋದ ಐತೇನು? ನಾವೆಲ್ಲಾ ಭೈರವಿ ಭಜನೆ ಹಾಡಿಕೊಂತ ಹೋಗಾವರ ಅದೇವೇನು?

ಇಂಥಾ ಎಲ್ಲಾ ಪ್ರಶ್ನಿಗಳ ಉತ್ತರ ಏನು ಅಂತ ಅಂದರ. “ಇಲ್ಲಾ”. ವಿಜ್ಞಾನಿಗಳು- ಭಾರತೀರಾಗಿರಲಿ, ಹೊರಗಿನವರಾಗಿರಲಿ, ಇದರ ಮ್ಯಾಲೆ ಭಾಳ ಕೆಲಸಾ ಮಾಡಾಕುಂತಾರು. ಮನಿ- ಮಠಾ ಬಿಟ್ಟು ಹಗಲೂ -ರಾತ್ರಿ ಅದರಾಗ ಸಂಶೋಧನೆ ನಡದೇತಿ. ಎಂದಿನಂತೆ ನಮ್ಮ ಸರಕಾರಗಳು ಇಂಥಾದೆಲ್ಲಾ ನಮ್ಮಿಂದ ಮುಚ್ಚಿ ಇಡಾಕ ಹತ್ಯಾರ.

ಇದು ಎರಡು ಲೆವಲ್ಲಿನೊಳಗ ಕೆಲಸ ನಡದದ. ಒಂದು ಲಸಿಕೆ ತಯಾರು ಮಾಡೋದು, ಇನ್ನೊಂದು ಔಷಧಿ ಕಂಡು ಹಿಡಿಯೋದು.

ಇದರೊಳಗ ಒಂದು ಸಣ್ಣ ವ್ಯತ್ಯಾಸ ಅದ.

ಔಷಧಿ ಅಂದರ ರಸಾಯನಶಾಸ್ತ್ರದ ಸಂಶೋಧನೆಯೊಳಗಿಂದ ಹುಟ್ಟೋದು. ಲಸಿಕೆ ಉಪಯೋಗ ಅಂದರ ಜೀವಶಾಸ್ತ್ರಜ್ಞರ ತಡಕಾಟ.

ಔಷಧಿ ಅಂದರ ಕೆಲವು ರಸಾಯನಿಕಗಳನ್ನ ತೊಗೊಳ್ಳೋದು, ಅವು ಬ್ಯಾಕ್ಟೀರಿಯಾ, ವೈರಸ್ಸು ಅಥವಾ ಇತರ ರೋಗಾಣುಗಳನ್ನು ನಿಷ್ಕ್ರಿಯ ಗೊಳಿಸತದೋ ಇಲ್ಲೋ ಅಂತ ನೋಡೋದು.

ಇದು ಸಾಮಾನ್ಯವಾಗಿ ಆಗತದ ಅಂದರ ಆ ರೋಗಾಣುವಿನ ಜೀವಕೋಶದ ಚರ್ಮವನ್ನು ಕರಗಿಸಿ ಬಿಡತದ. ಔಷಧಿ ಶಾಸ್ತ್ರಜ್ಞರು ಹೆಂಗ ಮಾಡತಾರ ಅಂದರ ಈಗ ಮಾರುಕಟ್ಟೆಯೊಳಗ ಇರೋ ಔಷಧಿಗಳನ್ನು ಬೇರೆ ಬೇರೆ ರೋಗಗಳನ್ನ ಗುಣ ಪಡಿಸಲಿಕ್ಕೆ ಉಪಯೋಗ ಮಾಡತಾರ. ಇದಕ್ಕ ರಿಪರಪಸಿಂಗ ಅಥವಾ ಮರುಪ್ರಯೋಜನ ಮಾಡೋದು ಅಂತಾರ.

ಕರೋನಾದ ವಿರುದ್ಧ ರೆಮೆಡೆಸಿವಿರ, ಏಸೈಕ್ಲೋವಿರ, ಪೆನ್ಸಿಕ್ಲೋವಿರ, ಫಾವಿಪಿರಾವಿರ ಮುಂತಾದ ಔಷಧಿ ಬಗ್ಗೆ ಸಂಶೋಧನೆ ನಡದದ. ಇನ್ನು ನಮ್ಮ ಟ್ರಂಪಣ್ಣನವರ ಧಮಕಿ ಡ್ರಗ್ ಹೈಡ್ರೋಕ್ಸಿ ಕ್ಲೋರೋಕ್ವಿನ್ ಸಹಿತ ಉಪಯೋಗಸಲಿಕ್ಕೆ ಹತ್ಯಾರ. ಇದರಾಗ ಯಾವುದು ಹೆಚ್ಚು ಪ್ರಾಯೋಜಕ ಅನಸತದೋ ಅದನ್ನ ಎಲ್ಲಾರಿಗೂ ಕೊಡತಾರ.

ಇವೆಲ್ಲಾ ಈಗ ಬೇರೆ ಬೇರೆ ರೋಗಗಳಿಗೆ ಬಳಸೋ ಔಷಧಿ. ಇವನ್ನು ಉಪಯೋಗಿಸೋ ಔಚಿತ್ಯ ಏನಂದರ ಹೊಸಾ ಔಷಧಿ ಕಂಡು ಹಿಡೀಬೇಕು ಅಂದರ ಅದಕ್ಕ ಹತ್ತು- ಇಪ್ಪತ್ತು ವರ್ಷ ಹಿಡೀತದ. ಯಾಕಂದರ ಅದನ್ನ ಮದಲಿಗೆ ಪ್ರಾಣಿಗಳ ಮ್ಯಾಲೆ, ಆಮ್ಯಾಲೆ ಮನುಷರ ಮ್ಯಾಲೆ ಪ್ರಯೋಗ ಮಾಡಿ ಆಮ್ಯಾಲೆ ಮಾರುಕಟ್ಟೆ ಒಳಗ ಬಿಡಬೇಕಾಗತದ.

ಇನ್ನ ಲಸಿಕೆ ಅಂದರ ಯಾವ ವೈರಸ್ಸು ರೋಗಾಣುಗಳ ವಿರುದ್ಧ ನೀವು ಲಸಿಕೆ ತಯಾರಿಸಲಿಕ್ಕೆ ಹೊಂಟಿರತೀರೋ ಅದರದ ನಿರುಪದ್ರವಿ ರೂಪವೊಂದನ್ನ ತಯಾರು ಮಾಡಿ ನಿಮಗ ಕೊಡೋದು. ಅದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಅದರ ವಿರುದ್ಧ ಹೋರಾಡೋವಂಥಾ ಪ್ರತಿಜೀವಿಗಳನ್ನ ತಯಾರು ಮಾಡತದ. ಇಂಥಾ ಲಸಿಕೆ ಸುಮಾರು 60-80 ಶೇಕಡಾ ಜನರಿಗೆ ಸಿಕ್ಕಿತಲಾ ಅಂದರ ಇಡೀ ಜನಸಂಖ್ಯೆಗೆ ರೋಗ ನಿರೋಧಕ ಶಕ್ತಿ ಬರತದ.

ಇವೆರಡೂ ಆಗಲಿಲ್ಲ ಅಂದರ ಸರಕಾರ ಕೈಚೆಲ್ಲಿ ಕುತಕೋಬೇಕು. ಅವಾಗ ಎನಾಗತದ ಅಂದರ ಕೆಲವು ದಶಕಗಳ ನಂತರ ಹಿಂಡು ನಿರೋಧ ಬರತದ. ಅಷ್ಟರೊಳಗ ಭಾಳ ಜನ ಸ್ವರ್ಗ ವಾಸಿಗಳಾಗಿರತಾರ. ಆಗ ನಮ್ಮಲ್ಲಿ ಹಣೆಬರಾ ಗಟ್ಟಿ ಇದ್ದು ಉಳದೋರು, ಮತ್ತು ನಾವು ಆರಿಸಿ ಕಳಿಸಿದವರು ಕೋಲಾಟ ಆಡಬಹುದು – ಯಾರು ಹಿತವರು ನಿನಗೆ ಈ ಮೂವರೊಳಗ ಅಂತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...