Homeಅಂಕಣಗಳುಲಸಿಕಾಯಣ: ಲಸಿಕೆಯೋ, ಔಷಧಿಯೋ, ಭೈರವಿ ಭಜನೆಯೋ

ಲಸಿಕಾಯಣ: ಲಸಿಕೆಯೋ, ಔಷಧಿಯೋ, ಭೈರವಿ ಭಜನೆಯೋ

- Advertisement -
- Advertisement -

ಇಪ್ಪತ್ತೊಂದು ದಿವಸ ಮನ್ಯಾಗ ಕುತಗೊಂಡು ಎಲ್ಲಾರಿಗೂ ಸಾಕಾಗಿ ಹೋಗೇತಿ. ಕೆಲವರಂತೂ ಕುಂತಲ್ಲೇ ಕುಂತು ಕುಂತು ಬೂಳಸ ಬಂದು ಬಿಟ್ಟಾರು.

ಜನರಿಗೆ ನೀವು ಠೀವಿ ನೋಡ್ರಿ, ಫೋನಿನ್ಯಾಗ ಸಮಾಜ ವಿರೋಧಿ ಮಾಧ್ಯಮದ ಪೋಸ್ಟುಗಳನ್ನ ಪೋಸ್ಟಮೆನ್‍ಗತೆ ಮಂದಿಗೆ ಹಂಚಿಕೊಂತ ಕೂತ ಬಿಡ್ರಿ ಅಂದರ ಹೂಂ ಅಂತೇವಿ. ಆದರ “ನೀವು ಹಿಂಗ ಇರಬ್ಯಾಡ್ರಿ, ಒಂದು ಈಟು ಬುದ್ಧಿ ಉಪಯೋಗ ಮಾಡ್ರಿ” ಅಂತ ಅಂದರ ಹೆಂಗ? ಅದೊಂದು ಬಿಟ್ಟು ಬ್ಯಾರೆ ಏನರ ಹೇಳರಿ, ಮಾಡೇವಿ, ಇದನ್ನ ಮಾತ್ರ ಅನಬ್ಯಾಡ್ರಿ,” ಅಂತ ಅಂತೀರೇನೋ? ಇರಲಿ, ಇದೊಂದು ಸಲ ಕೇಳ್ರಿ.

`ಈ ಕೊರೊನಾ ವೈರಸ್ಸನ ಅಪಾಯವನ್ನೇ ನಮ್ಮ ವಿಜ್ಞಾನಿಗಳು ಅನ್ನಿಸಿಕೊಳ್ಳೋರು ಅರ್ಥ ಮಾಡಿಕೊಂಡಿಲ್ಲ, ಇನ್ನ ಇಸ್ಲಾಮಿನ ಅಪಾಯವನ್ನು ಹೇಗೆ ಅರ್ಥ ಮಾಡಿಕೊಂಡಾರು ಅಂತ ಹೇಳಿ ನಮ್ಮ ನವ್ಯಾತೀತ ಚಿಂತಕ ಅನಂತ ಕುಮಾರ ಹೆಗಡೆ ಅವರು ಹೇಳ್ಯಾರ. ಸರ್ವೇ ಸಾಮಾನ್ಯವಾಗಿ ಅವರು ಮಾತಾಡೋದು ಕಮ್ಮಿ. ಅವರ ಕೈ ಆಡೋದ ಜಾಸ್ತಿ. ಹಿಂಗಾಗಿ ಅವರೇನೋ ಅಪರೂಪಕ್ಕೊಮ್ಮೆ ಮಾತಾಡಿರಬೇಕು ಅಂತ ಜನಾ ಸುಮ್ಮನಿರಬೇಕು.

ಆದರ ನಿಜವಾಗಿಯೂ ವಿಜ್ಞಾನಿಗಳಿಗೆ ಈ ಕರೋನಾ ಅಥವಾ ಕಿರೀಟಿ ವೈರಸ್ಸು ವ್ಯಾಧಿಯನ್ನು ಅರ್ಥ ಮಾಡಿಕೊಳ್ಳೋದರಾಗ ಹಿಂಬರಿಕಿ ಆಗೇದೇನು? ಅವರು ಸೋತು ಹೋಗ್ಯಾರೇನು? ಅವರಿಗೆ ಅರ್ಥನ ಆಗಿಲ್ಲಾ ಅಂದರ ನಮ್ಮ ಗತಿ ಏನು?

ಈ ಹೊಸಾ ಇಂಗ್ಲೀಷ ಪಿಚ್ಚರ ಬಂದಿರತಾವಲ್ಲಾ. ಅದರಾಗ ಯಾವಾನೋ ಒಬ್ಬವ ರಷಿಯಾ/ ಇರಾನ/ ‍ಅಫಘಾನಿಸ್ತಾನ/ ಉತ್ತರ ಕೋರಿಯಾದಿಂದ ಬರತಾನ, ಯಾರಿಗೂ ಗೊತ್ತಾಗದಂಗ ಜನರ ನಡುವ ಒಂದು ವೈರಸ್ ಬಿಟ್ಟ ಬಿಡತಾನ.

ಇದರಿಂದಾಗಿ ಹೀರೋ- ಹಿರೋಯಿನಿ ಇಬ್ಬಳಾರನ್ನ ಬಿಟ್ಟು ಎಲ್ಲಾರು ಷಟದು ಹೋಗತಾರು. ಕಡೀಕೆ ಅದಕ್ಕ ಒಂದು ಭಾರತೀಯ/ ಪೂರ್ವ ಯುರೋಪಿಯನ್ನ/ ಆಫ್ರಿಕನ್ ವಿಜ್ಞಾನಿ ಎಂಟಿಡೋಟು ಅಥವಾ ನಂಜುಮುರಕಾ ಕಂಡು ಹಿಡಿತಾನ. ಅದರಿಂದ ಕೆಲವರ ಜೀವ ಉಳೀತೇತಿ.

ಈಗನೂ ಹಂಗ ಆಗೋದ ಐತೇನು? ನಾವೆಲ್ಲಾ ಭೈರವಿ ಭಜನೆ ಹಾಡಿಕೊಂತ ಹೋಗಾವರ ಅದೇವೇನು?

ಇಂಥಾ ಎಲ್ಲಾ ಪ್ರಶ್ನಿಗಳ ಉತ್ತರ ಏನು ಅಂತ ಅಂದರ. “ಇಲ್ಲಾ”. ವಿಜ್ಞಾನಿಗಳು- ಭಾರತೀರಾಗಿರಲಿ, ಹೊರಗಿನವರಾಗಿರಲಿ, ಇದರ ಮ್ಯಾಲೆ ಭಾಳ ಕೆಲಸಾ ಮಾಡಾಕುಂತಾರು. ಮನಿ- ಮಠಾ ಬಿಟ್ಟು ಹಗಲೂ -ರಾತ್ರಿ ಅದರಾಗ ಸಂಶೋಧನೆ ನಡದೇತಿ. ಎಂದಿನಂತೆ ನಮ್ಮ ಸರಕಾರಗಳು ಇಂಥಾದೆಲ್ಲಾ ನಮ್ಮಿಂದ ಮುಚ್ಚಿ ಇಡಾಕ ಹತ್ಯಾರ.

ಇದು ಎರಡು ಲೆವಲ್ಲಿನೊಳಗ ಕೆಲಸ ನಡದದ. ಒಂದು ಲಸಿಕೆ ತಯಾರು ಮಾಡೋದು, ಇನ್ನೊಂದು ಔಷಧಿ ಕಂಡು ಹಿಡಿಯೋದು.

ಇದರೊಳಗ ಒಂದು ಸಣ್ಣ ವ್ಯತ್ಯಾಸ ಅದ.

ಔಷಧಿ ಅಂದರ ರಸಾಯನಶಾಸ್ತ್ರದ ಸಂಶೋಧನೆಯೊಳಗಿಂದ ಹುಟ್ಟೋದು. ಲಸಿಕೆ ಉಪಯೋಗ ಅಂದರ ಜೀವಶಾಸ್ತ್ರಜ್ಞರ ತಡಕಾಟ.

ಔಷಧಿ ಅಂದರ ಕೆಲವು ರಸಾಯನಿಕಗಳನ್ನ ತೊಗೊಳ್ಳೋದು, ಅವು ಬ್ಯಾಕ್ಟೀರಿಯಾ, ವೈರಸ್ಸು ಅಥವಾ ಇತರ ರೋಗಾಣುಗಳನ್ನು ನಿಷ್ಕ್ರಿಯ ಗೊಳಿಸತದೋ ಇಲ್ಲೋ ಅಂತ ನೋಡೋದು.

ಇದು ಸಾಮಾನ್ಯವಾಗಿ ಆಗತದ ಅಂದರ ಆ ರೋಗಾಣುವಿನ ಜೀವಕೋಶದ ಚರ್ಮವನ್ನು ಕರಗಿಸಿ ಬಿಡತದ. ಔಷಧಿ ಶಾಸ್ತ್ರಜ್ಞರು ಹೆಂಗ ಮಾಡತಾರ ಅಂದರ ಈಗ ಮಾರುಕಟ್ಟೆಯೊಳಗ ಇರೋ ಔಷಧಿಗಳನ್ನು ಬೇರೆ ಬೇರೆ ರೋಗಗಳನ್ನ ಗುಣ ಪಡಿಸಲಿಕ್ಕೆ ಉಪಯೋಗ ಮಾಡತಾರ. ಇದಕ್ಕ ರಿಪರಪಸಿಂಗ ಅಥವಾ ಮರುಪ್ರಯೋಜನ ಮಾಡೋದು ಅಂತಾರ.

ಕರೋನಾದ ವಿರುದ್ಧ ರೆಮೆಡೆಸಿವಿರ, ಏಸೈಕ್ಲೋವಿರ, ಪೆನ್ಸಿಕ್ಲೋವಿರ, ಫಾವಿಪಿರಾವಿರ ಮುಂತಾದ ಔಷಧಿ ಬಗ್ಗೆ ಸಂಶೋಧನೆ ನಡದದ. ಇನ್ನು ನಮ್ಮ ಟ್ರಂಪಣ್ಣನವರ ಧಮಕಿ ಡ್ರಗ್ ಹೈಡ್ರೋಕ್ಸಿ ಕ್ಲೋರೋಕ್ವಿನ್ ಸಹಿತ ಉಪಯೋಗಸಲಿಕ್ಕೆ ಹತ್ಯಾರ. ಇದರಾಗ ಯಾವುದು ಹೆಚ್ಚು ಪ್ರಾಯೋಜಕ ಅನಸತದೋ ಅದನ್ನ ಎಲ್ಲಾರಿಗೂ ಕೊಡತಾರ.

ಇವೆಲ್ಲಾ ಈಗ ಬೇರೆ ಬೇರೆ ರೋಗಗಳಿಗೆ ಬಳಸೋ ಔಷಧಿ. ಇವನ್ನು ಉಪಯೋಗಿಸೋ ಔಚಿತ್ಯ ಏನಂದರ ಹೊಸಾ ಔಷಧಿ ಕಂಡು ಹಿಡೀಬೇಕು ಅಂದರ ಅದಕ್ಕ ಹತ್ತು- ಇಪ್ಪತ್ತು ವರ್ಷ ಹಿಡೀತದ. ಯಾಕಂದರ ಅದನ್ನ ಮದಲಿಗೆ ಪ್ರಾಣಿಗಳ ಮ್ಯಾಲೆ, ಆಮ್ಯಾಲೆ ಮನುಷರ ಮ್ಯಾಲೆ ಪ್ರಯೋಗ ಮಾಡಿ ಆಮ್ಯಾಲೆ ಮಾರುಕಟ್ಟೆ ಒಳಗ ಬಿಡಬೇಕಾಗತದ.

ಇನ್ನ ಲಸಿಕೆ ಅಂದರ ಯಾವ ವೈರಸ್ಸು ರೋಗಾಣುಗಳ ವಿರುದ್ಧ ನೀವು ಲಸಿಕೆ ತಯಾರಿಸಲಿಕ್ಕೆ ಹೊಂಟಿರತೀರೋ ಅದರದ ನಿರುಪದ್ರವಿ ರೂಪವೊಂದನ್ನ ತಯಾರು ಮಾಡಿ ನಿಮಗ ಕೊಡೋದು. ಅದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಅದರ ವಿರುದ್ಧ ಹೋರಾಡೋವಂಥಾ ಪ್ರತಿಜೀವಿಗಳನ್ನ ತಯಾರು ಮಾಡತದ. ಇಂಥಾ ಲಸಿಕೆ ಸುಮಾರು 60-80 ಶೇಕಡಾ ಜನರಿಗೆ ಸಿಕ್ಕಿತಲಾ ಅಂದರ ಇಡೀ ಜನಸಂಖ್ಯೆಗೆ ರೋಗ ನಿರೋಧಕ ಶಕ್ತಿ ಬರತದ.

ಇವೆರಡೂ ಆಗಲಿಲ್ಲ ಅಂದರ ಸರಕಾರ ಕೈಚೆಲ್ಲಿ ಕುತಕೋಬೇಕು. ಅವಾಗ ಎನಾಗತದ ಅಂದರ ಕೆಲವು ದಶಕಗಳ ನಂತರ ಹಿಂಡು ನಿರೋಧ ಬರತದ. ಅಷ್ಟರೊಳಗ ಭಾಳ ಜನ ಸ್ವರ್ಗ ವಾಸಿಗಳಾಗಿರತಾರ. ಆಗ ನಮ್ಮಲ್ಲಿ ಹಣೆಬರಾ ಗಟ್ಟಿ ಇದ್ದು ಉಳದೋರು, ಮತ್ತು ನಾವು ಆರಿಸಿ ಕಳಿಸಿದವರು ಕೋಲಾಟ ಆಡಬಹುದು – ಯಾರು ಹಿತವರು ನಿನಗೆ ಈ ಮೂವರೊಳಗ ಅಂತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...