Homeಕರ್ನಾಟಕವಾರ್ತಾಭಾರತಿಗೆ ಎರಡು ದಶಕ

ವಾರ್ತಾಭಾರತಿಗೆ ಎರಡು ದಶಕ

- Advertisement -
- Advertisement -

ಕನ್ನಡ ದಿನಪತ್ರಿಕೆ ‘ವಾರ್ತಾಭಾರತಿ’ ಎರಡು ದಶಕಗಳನ್ನು ಪೂರೈಸಿದೆ. ವಾಣಿಜ್ಯಸುದ್ದಿ ಮತ್ತು ಮತೀಯ ನಾಯಕರ ಹೇಳಿಕೆಗಳಿಗೆ ಹೆಚ್ಚಿನ ಪತ್ರಿಕೆಗಳು ಕೊಡುವ ಆದ್ಯತೆಗೆ ಹೋಲಿಸಿದರೆ, ಇದು ಜನಸಾಮಾನ್ಯರ ಸಾಮಾಜಿಕ ರಾಜಕೀಯ ವಿಷಯಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಾ ಬಂದಿದೆ. ಕರ್ನಾಟಕದ ಮುಖ್ಯ ಪತ್ರಿಕೆಗಳ ಮುಖಪುಟದ ತಲೆಬರೆಹಗಳನ್ನು ‘ವಾರ್ತಾಭಾರತಿ’ಯವುಗಳ ಜತೆಗಿಟ್ಟು ಗಮನಿಸಿದರೆ, ಇದರ ತಾತ್ವಿಕ ನಿಲುವು ಮತ್ತು ರಾಜಕಾರಣದ ದಿಸೆ ಸ್ಪಷ್ಟವಾಗುತ್ತದೆ. ಕಳೆದ ವರ್ಷ ಅಂಬೇಡ್ಕರ್ ಚಿತ್ರಪಟವನ್ನು ತೆಗೆಸಿದ ನ್ಯಾಯಾಧೀಶರ ವಿರುದ್ಧ ನಡೆದ ಚಳವಳಿಯನ್ನು ಇದು ವರದಿ ಮಾಡಿದ ಬಗೆಯನ್ನು ನೆನೆಯಬಹುದು. ‘ವಾರ್ತಾಭಾರತಿ’ ಇಲ್ಲದಿದ್ದರೆ, ಕರ್ನಾಟಕದಲ್ಲಿ ಮುಖ್ಯವಾಗಿ ಕರಾವಳಿಯಲ್ಲಿ ಜರುಗಿದ ಎಷ್ಟೊ ವಿದ್ಯಮಾನಗಳ ಇನ್ನೊಂದು ಮಗ್ಗುಲು ಓದುಗರಿಗೆ ಸಿಗುತ್ತಿರಲಿಲ್ಲ. ಅಡಗಿಸಲಾದ ಸುದ್ದಿಯನ್ನು ಅಥವಾ ಘಟನೆಯ ಇನ್ನೊಂದು ಮಗ್ಗುಲನ್ನು ಬಿಡಿಸಿ ತೋರಿಸುವುದು, ಭಿನ್ನಮತ ಹುಟ್ಟಿಸುವುದು, ಚಿಂತನಶೀಲತೆ ಬೆಳೆಸುವುದು ಸಾರ್ವಜನಿಕ ಚಿಂತಕರು ಮತ್ತು ಪತ್ರಿಕೆಗಳು ಮಾಡಬೇಕಾದ ಕೆಲಸ. ‘ವಾರ್ತಾಭಾರತಿ’ ಭಿನ್ನಮತವನ್ನು ಮತ್ತು ಸುದ್ದಿಯ ಭಿನ್ನಮಗ್ಗುಲನ್ನು ದಾಖಲಿಸುತ್ತ ಬಂದಿದೆ.

ಮತೀಯವಾದದ ಪ್ರಯೋಗಭೂಮಿಯಾಗಿರುವ ಕರಾವಳಿಯಲ್ಲಿದ್ದು ಇದು ರೂಪುಗೊಂಡಿತು ಮತ್ತು ಎರಡು ದಶಕ ದಾಟಿದೆ. ಈ ಸಂಗತಿಗೆ ಚಾರಿತ್ರಿಕ ಮಹತ್ವವಿದೆ. ಕರಾವಳಿಯಲ್ಲಿ ಹುಟ್ಟುವ ಜನಪರ ಪತ್ರಿಕೆಗಳು ಬೇರುಬಿಡದಂತೆ ಕೊರಳುಗೊಯ್ಕ ಸ್ಪರ್ಧೆಯನ್ನೊಡ್ಡುವ ಸನ್ನಿವೇಶವಿದೆ. ಜನಪರ ಪತ್ರಿಕೆಗಳಿಗೆ ಇದು ಔದ್ಯಮಿಕ ಸ್ಪರ್ಧೆ ಮಾತ್ರವಾಗಿರದೆ, ಸೈದ್ಧಾಂತಿಕ ಹೋರಾಟವೂ ಆಗಿದೆ. ‘ಮುಂಗಾರು’ ಹಾಗೆ ಜನ್ಮ ತಳೆದಿದ್ದು. ಅದನ್ನು ಓದುವುದು, ಅದಕ್ಕೆ ಬರೆಯುವುದು ಮತ್ತು ಚಂದಾ ಮಾಡಿಸುವುದು ನಮಗೆಲ್ಲ ಚಳವಳಿಯ ಕೆಲಸವಾಗಿತ್ತು. ಆದರೆ ನಾನಾ ಕಾರಣಗಳಿಂದ ‘ಮುಂಗಾರು’, ಬಳಿಕ ಬಂದ ‘ಜನವಾಹಿನಿ’ ಪತ್ರಿಕೆಗಳು ಸೋತು ನಿರ್ಗಮಿಸಿದವು. ಆದರೆ ಇವು ನಡೆದ ನಿಲ್ಲಿಸಿದ ಹಾದಿಯಲ್ಲಿ ಪ್ರಯಣ ಆರಂಭಿಸಿದ ‘ವಾರ್ತಾಭಾರತಿ’ ಕರಾವಳಿಯಲ್ಲಿರುವ ಪೈಪೋಟಿಯ ಕದನದಲ್ಲಿ ಬದುಕಿದೆ. ಇದು ಮತೀಯವಾದದ ವಿರುದ್ಧ ಕೆಲಸ ಮಾಡುವ ಚಳವಳಿ ಮತ್ತು ಸಂಗಾತಿಗಳಿಗೆ ವೇದಿಕೆಯಾಗಿದೆ. ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಅಂಕಣ ಬರೆಹಗಳು, ಬಲಪಂಥೀಯ ರಾಜಕೀಯಕ್ಕೆ ಸಾಂಸ್ಕೃತಿಕ ಪ್ರತಿರೋಧವನ್ನು ಕಟ್ಟುವ ಕೆಲಸ ಮಾಡಿವೆ.

ಸಂಪಾದಕೀಯವು ಯಾವುದೇ ಪತ್ರಿಕೆಯ ದೃಷ್ಟಿಕೋನವನ್ನು ಪ್ರಕಟಪಡಿಸುವ ಹೃದಯ ಭಾಗ. ಆದರೆ ಕರ್ನಾಕಟದ ಕೆಲವು ಪತ್ರಿಕೆಗಳಿಗೆ ಸಂಪಾದಕೀಯಗಳೇ ಇಲ್ಲ. ಸಂಪಾದಕೀಯ ಇರುವ ಕೆಲವು ಪತ್ರಿಕೆಗಳಲ್ಲಿ ಅದು ಮಹತ್ವದ ಭಾಗವಾಗಿಲ್ಲ. ಸಂಪಾದಕೀಯ ಹೊಣೆಗಾರಿಕೆಯನ್ನು ಕಿರುಪತ್ರಿಕೆಗಳು ಅರ್ಥಪೂರ್ಣವಾಗಿ ನಿಭಾಯಿಸಿಕೊಂಡು ಬಂದ ಚರಿತ್ರೆಯಿದೆ. ‘ಜೀವನ’ ಪತ್ರಿಕೆಗೆ ಮಾಸ್ತಿ, ‘ರುಜುವಾತು’ಗೆ ಅನಂತಮೂರ್ತಿ, ‘ಸಂಕ್ರಮಣ’ಕ್ಕೆ ಚಂಪಾ, ‘ಪ್ರಪಂಚ’ಕ್ಕೆ ಪಾಪು, ‘ಲಂಕೇಶ್ ಪತ್ರಿಕೆ’ಗೆ ಲಂಕೇಶ್, ‘ಗೌರಿ ಲಂಕೇಶ್’ ಪತ್ರಿಕೆಗೆ ಗೌರಿಲಂಕೇಶ್ ಬರೆದ ಸಂಪಾದಕೀಯಗಳು ಪುಸ್ತಕಗಳಾಗಿ ಪ್ರಕಟವಾಗಿವೆ; ಕನ್ನಡ ಚಿಂತನ ಸಾಹಿತ್ಯದ ಭಾಗವಾಗಿವೆ. ತಿಂಗಳ ಅಥವಾ ವಾರದ ಪತ್ರಿಕೆಗಳಲ್ಲಿ ಚಿಂತನಶೀಲವಾದ ಧ್ಯಾನಸ್ಥ ಸಂಪಾದಕೀಯಗಳು ಸಾಧ್ಯ. ಆದರೆ ದಿನವೂ ಪ್ರಕಟವಾಗುವ ಧಾವಂತದ ದಿನಪತ್ರಿಕೆಗಳಲ್ಲಿ ಇವು ಕಷ್ಟ. ಆದರೂ ‘ಹಿಂದೂ’ ‘ಡೆಕ್ಕನ್‌ಹೆರಾಲ್ಡ್’ ಪತ್ರಿಕೆಗಳ, ಈಚೆಗೆ ‘ಪ್ರಜಾವಾಣಿ’ಯ ಸಂಪಾದಕೀಯಗಳು ತಮ್ಮ ಖಚಿತ ಮತ್ತು ಪ್ರಗತಿಪರ ನಾಡನ್ನು ಕಟ್ಟುವ ಕಾಳಜಿಯ ದೃಷ್ಟಿಕೋನಕ್ಕೆ ಸಾಕ್ಷಿಯಾಗಿವೆ. ರಘುರಾಮಶೆಟ್ಟರು ‘ಮುಂಗಾರು’ ಪತ್ರಿಕೆಗಳಿಗೆ ಬರೆಯುತ್ತಿದ್ದ ಸಂಪಾದಕೀಯಗಳು ಚಿಂತನೆಯಿಂದ ಕೂಡಿರುತ್ತಿದ್ದವು. ಅವು ಈಗ ಪುಸ್ತಕವಾಗಿ ಹೊರಬಂದಿವೆ.

ಈ ಹಿನ್ನೆಲೆಯಲ್ಲಿ ವಾರ್ತಾಭಾರತಿಯ ಸಂಪಾದಕೀಯಗಳಲ್ಲಿರುವ ಚಿಂತನಶೀಲತೆ, ರಾಜಕೀಯ ಪ್ರಜ್ಞೆ, ಅಂತಾರಾಷ್ಟ್ರೀಯ ರಾಜಕಾರಣದ ಅರಿವು, ಕೋಮುವಾದ ಮತ್ತು ಸಾಮ್ರಾಜ್ಯಶಾಹಿಯ ಬಗೆಗಿನ ಸೈದ್ಧಾಂತಿಕ ಪ್ರತಿರೋಧ, ಜನಪರ ಕಾಳಜಿ ಮತ್ತು ಬದ್ಧತೆ, ತಾತ್ವಿಕ ಖಚಿತತೆ ಮುಖ್ಯವಾಗಿವೆ. ಸಂಪಾದಕೀಯದ ಭಾಷೆಯಲ್ಲಿ ತಾರ್ಕಿಕ ಬಿಗಿಯಿರುತ್ತದೆ. ಹೊಣೆಗಾರಿಕೆ, ಬಿಕ್ಕಟ್ಟಿನ ಸನ್ನಿವೇಶದಲ್ಲಿ ವಿದ್ಯಮಾನವನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ ರೀತಿ, ಪರ್ಯಾಯಗಳನ್ನು ಹೊಳೆಸುವ ಬಗೆ, ನಾಡನ್ನು ಕಟ್ಟುವ ಕಾಣ್ಕೆ ಇರುತ್ತದೆ. ರಾಜಕೀಯವಾಗಿ ಸರಿತನಕ್ಕಾಗಿ ಅತಿ ಎಚ್ಚರವಹಿಸದೆ, ಚರ್ಚಿಸಲು ಹಿಂಜರಿಕೆ ಹುಟ್ಟಿಸುವ ಸಂಕೀರ್ಣ ವಿಷಯಗಳ ಬಗ್ಗೆ, ದಿಟ್ಟವಾದ ಸಂಪಾದಕೀಯಗಳು ಇಲ್ಲಿವೆ. ತಪ್ಪಾದ ಧೋರಣೆಯ ಸಂಪಾದಕೀಯ ಬಂದಾಗ ಓದುಗರು ಹೀಗಲ್ಲ ಎಂದು ಕಟುವಾಗಿ ಪ್ರತಿಕ್ರಿಯಿಸಿರುವುದೂ ಉಂಟು. ಉದಾಹರಣೆಗೆ ಆಫಘಾನಿಸ್ಥಾನದಲ್ಲಿ ಸಾಮ್ರಾಜ್ಯಶಾಹಿ ಅಮೆರಿಕದ ನಿರ್ಗಮನದ ಹೊತ್ತಲ್ಲಿ ಸಂಭವಿಸಿದ ಅಧಿಕಾರ ಬದಲಾವಣೆಯ ಕುರಿತು ಬರೆಯಲಾದ ಸಂಪಾದಕೀಯ. ವಾರ್ತಾಭಾರತಿಯ ಆಯ್ದ ಸಂಪಾದಕೀಯಗಳು ಪುಸ್ತಕ ರೂಪದಲ್ಲಿ ಪ್ರಕಟವಾದರೆ ಕನ್ನಡ ಚಿಂತನ ಸಾಹಿತ್ಯಕ್ಕೆ ಕೊಡುಗೆಯಾಗಬಲ್ಲವು; ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಕೈಪಿಡಿಯಾಗಬಲ್ಲವು.

ಕನ್ನಡದಲ್ಲಿ ಬಂಡವಾಳ ಹೂಡಿಕೆ, ಪ್ರಸರಣ ಸಂಖ್ಯೆ, ಗುಣಮಟ್ಟಗಳ ದೃಷ್ಟಿಯಿಂದ ಯಶಸ್ಸನ್ನು ಸಾಧಿಸಿದ ಪತ್ರಿಕೆಗಳು ಬಹಳಷ್ಟಿವೆ. ಆದರೆ ಸುದ್ದಿ ವಿಶ್ಲೇಷಣೆ ಮತ್ತು ವ್ಯಾಖ್ಯಾನ ಆ ಮೂಲಕ ಒಂದು ತಾತ್ವಿಕ ಚಿಂತನೆ ಮಂಡಿಸುವ ವಿಷಯ ಬಂದಾಗ, ಹೆಚ್ಚಿನವು ನಿರಾಶೆ ಹುಟ್ಟಿಸುತ್ತವೆ. ಕೆಲವಕ್ಕೆ ನಮ್ಮ ಕಣ್ಣೆದುರಿನ ಸಮಾಜ ಕುರಿತಂತೆ ಒಂದು ಆಳವಾದ ದಾರ್ಶನಿಕ ದೃಷ್ಟಿಕೋನವೇ ಇರುವುದಿಲ್ಲ. ಇದಕ್ಕೆ ಕಾರಣ, ಅಲ್ಲಿ ಬರೆಯುವ ಚಿಂತಕರ ಗುಣಮಟ್ಟವೂ ಕಾರಣ. ಆದರೆ ಕೆಲವು ಪತ್ರಿಕೆಗಳಲ್ಲಿ ಸುದ್ದಿಗಿಂತ ಸುದ್ದಿ ವಿಶ್ಲೇಷಣೆಗಳೇ ಅವುಗಳ ಹಿರಿಮೆಗೆ ಕಾರಣ. ಅಲ್ಲಿನ ಚಿಂತಕರು ಮಾಡುವ ವಿದ್ಯಮಾನಗಳ ವಿಶ್ಲೇಷಣೆ ಮತ್ತು ವ್ಯಾಖ್ಯಾನಗಳು ಓದುಗರ ಅರಿವನ್ನು ವಿಸ್ತರಿಸಿವೆ ಮತ್ತು ಚಿಂತಿಸುವ ದೃಷ್ಟಿಕೋನವನ್ನೆ ಬದಲಿಸಿವೆ. ‘ವಾರ್ತಾಭಾರತಿ’ಯಲ್ಲಿ ನಾಡಿನ ಅತ್ಯುತ್ತಮ ಚಿಂತಕರು ಬರೆಯುತ್ತಾ ಬಂದಿದ್ದಾರೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ಸೆ. 5ಕ್ಕೆ ಗೌರಿ ನೆನಪು ಕಾರ್ಯಕ್ರಮ: ಅರುಂಧತಿರಾಯ್, ಪ್ರಕಾಶ್ ರಾಜ್, ಮೊಹಮ್ಮದ್ ಝುಬೇರ್ ಭಾಗಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...