Homeಮುಖಪುಟಒಮ್ಮೆ ನೋಡಲೇಬೇಕಾದ ಸಿನಿಮಾ `ವೈರಸ್'

ಒಮ್ಮೆ ನೋಡಲೇಬೇಕಾದ ಸಿನಿಮಾ `ವೈರಸ್’

- Advertisement -
- Advertisement -

ಈಗ ತಿಂಗಳ ಹಿಂದೆ ಮಲಯಾಳಂ ಭಾಷೆಯಲ್ಲಿ ತಯಾರಾಗಿ ಬಿಡುಗಡೆಯಾದ ‘ವೈರಸ್’ ಸಿನಿಮಾದ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನೇ ಕೇಳಿದ್ದೆ. ಕೆಲವರ್ಷಗಳಿಂದ ಮಲಯಾಳಂನಲ್ಲಿ ಅತ್ಯುತ್ತಮ ಅನ್ನುವಂತಹ ಸಿನಿಮಾಗಳು ತಯಾರಾಗುತ್ತಿರುವ ಕಾರಣವೋ ಏನೋ ‘ವೈರಸ್’ ನನ್ನ ಗಮನ ಸೆಳೆದಿತ್ತು. ಜತೆಗೆ, ವರ್ಷದ ಹಿಂದೆ ಕೇರಳದಲ್ಲಿ ಸುಮಾರು 17 ಜನರ ಸಾವಿಗೆ ಕಾರಣವಾದ ‘ನಿಪಾ’ ವೈರಸ್, ಅದನ್ನು ತಹಬದಿಗೆ ತರಲು ಮಾಡಿದ ಹರಸಾಹಸಗಳ ಕತೆಯೇ ‘ವೈರಸ್’ ಎಂಬುದು ಇನ್ನಷ್ಟು ಕುತೂಹಲ ಕೆರಳಿಸಿತ್ತು. ನೋಡಬೇಕು ಅಂದುಕೊಂಡಿದ್ದೇ ಬಂತು…ದಿನಗಳು ಸರಿದವಷ್ಟೇ. ಥಿಯೇಟರ್‌ನಿಂದ ಸಿನಿಮಾ ತೆಗೆದುಹಾಕಿದ್ದರು. ಆದರೆ, ಎರಡು ದಿನಗಳ ಹಿಂದೆ ಅಮೇಜಾನ್ ಪ್ರೈಮ್ ಅಲ್ಲಿ ಈ ಸಿನಿಮಾ ನೋಡಿದೆ. What a masterpiece! Sheer brilliance at so many levels.

ನಿರ್ದೇಶಕ ಆಶಿಕ್ ಅಬು ನೋಡಲೇಬೇಕಾದ ಸಿನಿಮಾ ಮಾಡಿದ್ದಾನೆ. ಇಡೀ ಸಿನಿಮಾ ನಮ್ಮ ಅಸ್ತಿತ್ವವೇ ಅಸಂಗತ ಅನ್ನುವಂತೆ ಮಾಡುತ್ತಲೇ ಮತ್ತೆ ಭರವಸೆ ನೀಡುತ್ತದೆ. ಯಾಕೆಂದರೆ ಅದೊಂದು ಹೋರಾಟ. ಬದುಕಲು ಹೋರಾಡಲೇಬೇಕೆಂಬ ಸತ್ಯವೇ ಈ ಸಿನಿಮಾದ ಜೀವಾಳ. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಮುಖ ಹತ್ತು ಪ್ರಯಾರಿಟಿ ರೋಗಗಳಲ್ಲಿ ‘ನಿಪಾ’ ಕೂಡ ಒಂದು. 2018ರಲ್ಲಿ ಕೇರಳದಲ್ಲಿ ಕಾಣಿಸಿಕೊಳ್ಳುವ ಮುನ್ನ ಜಗತ್ತಿನ ಬೆರಳಣಿಕೆಯಷ್ಟು ಪ್ರದೇಶಗಳಲ್ಲಿ ಮಾತ್ರ ಈ ವೈರಸ್ ಪತ್ತೆಯಾಗಿತ್ತು. ಇದಕ್ಕಿಂತ ಭಯ ಹುಟ್ಟಿಸುವ ಸಂಗತಿ ಎಂದರೆ, ನಿಪಾ ವೈರಸ್ ಗೆ ಯಾವುದೇ ರೀತಿಯ ಸಮರ್ಪಕ vaccination ಆಗಲಿ ಅಥವಾ ಚಿಕಿತ್ಸಾ ವಿಧಾನಗಳಾಗಲಿ ಇಲ್ಲ! ಈ ಸತ್ಯ ಎಂತಹವರ ಜಂಘಾಬಲವನ್ನೇ ಉಡುಗಿಸಿಬಿಡುತ್ತದೆ.

ಅದುಅಲ್ಲದೇ ಇದೊಂದು ಸಾಂಕ್ರಾಮಿಕ ರೋಗ! ಪತ್ತೆ ಹಚ್ಚುವಲ್ಲಿ ಸ್ವಲ್ಪ ತಡವಾಗಿದ್ದರೂ, ಕೆಲಸದಲ್ಲಿ ಕೊಂಚ ಎಡವಿದ್ದರೂ ಕೇರಳದ ಕೋಳಿಕೋಡ್ ನಗರದಲ್ಲಿ ಪತ್ತೆಯಾದ ಈ ವೈರಸ್, ಇಡೀ ಜಿಲ್ಲೆ, ರಾಜ್ಯ, ದೇಶವನ್ನೇ ಸ್ಮಶಾನ ಮಾಡಿಬಿಡುತ್ತಿತ್ತು ಎಂಬ ಸಂಗತಿ ಅತಿಶಯೋಕ್ತಿ ಅಂತೂ ಅಲ್ಲ! ಇಂತಹ ಕಥಾನಕವನ್ನು ಬಹುತೇಕ ಸತ್ಯ ಘಟನೆಗಳು ಹಾಗೂ ಆ ಸಂದರ್ಭದಲ್ಲಿ ಕೆಲಸ ಮಾಡಿದ, ಸಾವಿಗೀಡಾದ, ಬದುಕುಳಿದ ನಿಜಜೀವನದ ವ್ಯಕ್ತಿಗಳನ್ನೇ ಆಧರಿಸಿ ಮೆಹಸಿನ್ ಪರಾರಿ, ಶೆರ್ಫು ಹಾಗೂ ಸುಹಾಸ್ ಅವರುಗಳು ಅತ್ಯುತ್ತಮ ಚಿತ್ರಕತೆ ಕಟ್ಟಿದ್ದಾರೆ. ಅದನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದೇ ಆಶಿಕ್ ಅಬುನ ನಿರ್ದೇಶನ!

ಕೆಲವರ್ಷಗಳ ಹಿಂದೆ ಬಿಡುಗಡೆಯಾಗಿದ್ದ Steven Soderbergh ನಿರ್ದೇಶನದ ‘Contagion’ ಎಂಬ ಹಾಲಿವುಡ್ ಚಲನಚಿತ್ರವನ್ನ ನೆನಪಿಸುತ್ತದೆ ‘ವೈರಸ್’. ಒಂದೇ ವ್ಯತ್ಯಾಸ ಅಂದ್ರೆ, ‘Contagion’ ಹೈಪಾಥಿಸಿಸ್ ಮೇಲೆ ತಯಾರಾಗಿದ್ದು. ಆದರೆ, ವೈರಸ್ ಹಾಗಲ್ಲ. ನೈಜ ಘಟನೆಗಳನ್ನಾಧರಿಸಿ ಸಿನಿಮಾ ಮಾಡುವುದು ಸುಲಭವಲ್ಲ. ಪ್ರತಿ ಹಂತದಲ್ಲೂ ಸೂಕ್ಷ್ಮತೆ ಇರಬೇಕು ಇಲ್ಲದಿದ್ದರೆ ಸಿನಿಮಾದ ಹದ ತಪ್ಪಿಹೋಗುತ್ತದೆ. ಆದರೆ, ವೈರಸ್ ಇಂತಹ ಯಾವ ವೀಕ್‍ನೆಸ್ ನಿಂದಲೂ ಗೌಣವಾಗುವುದಿಲ್ಲ. ಅದೇ ಈ ಸಿನಿಮಾದ ಮೊದಲ ಹೆಗ್ಗಳಿಕೆ.

ರಾಜ್ಯ ಆರೋಗ್ಯ ಸಚಿವೆ, ನಗರದ ಶಾಸಕ, ಆರೋಗ್ಯ ಇಲಾಖೆಯ ನಿರ್ದೇಶಕಿ, ಕೋಳಿಕೋಡ್ ಜಿಲ್ಲೆಯ ಜಿಲ್ಲಾಧಿಕಾರಿ, ಮಣಿಪಾಲ್  virology ಘಟಕದ ತಜ್ಞರು, ವೈದ್ಯರ ತಂಡ, ಕಮ್ಯುನಿಟಿ ಮೆಡಿಸಿನ್‍ನ ವೈದ್ಯೆ, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು, ಆಸ್ಪತ್ರೆಗಳ ಸಿಬ್ಬಂದಿ, ಅಟೆಂಡರ್‍ಗಳು, ಹೆಣ ಸುಡಲು ಹಾಗೂ ಹೂಳಲು ನೆರವಾಗುವ ಜನ, ಆಂಬುಲೆನ್ಸ್‍ನ ಡ್ರೈವರ್‍ಗಳು… ಹೀಗೇ ಎಲ್ಲರನ್ನೂ ಈ ಸಿನಿಮಾ ಒಳಗೊಳ್ಳುತ್ತದೆ. ಯಾಕೆಂದರೆ ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ ಮುಖ್ಯರಾಗುತ್ತಾರೆ. ಎಲ್ಲರೂ ಜತೆಗೂಡಿ ಇಡೀ ಊರು ಸ್ಮಶಾನವಾಗುವುದನ್ನ ಹೇಗೆ ತಪ್ಪಿಸುತ್ತಾರೆ ಹಾಗೆಯೇ ವೈರಸ್ ಹಬ್ಬಿದ dynamics ಅನ್ನು ಯಾವೆಲ್ಲ ಹರಸಾಹಸಗಳ ಮೂಲಕ ಪತ್ತೆ ಹಚ್ಚುತ್ತಾರೆ ಎಂಬುದನ್ನೇ ಒಂದು ಅದ್ಭುತವಾದ ಥ್ರಿಲ್ಲರ್ ಸಿನಿಮಾ ಆಗಿಸಿದ್ದಾನೆ ಆಶಿಕ್ ಅಬು.

ಇದರ ಮಧ್ಯೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಕಾರ್ಯದರ್ಶಿಗಳಾಗಿ ಕೆಲಸ ಮಾಡುವ ಇಬ್ಬರೂ ಹಿರಿಯ ಅಧಿಕಾರಿಗಳು ಕೇರಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವುದರ ಜತೆಗೆ ‘ಕೇಂದ್ರದಲ್ಲಿ ಅಧಿಕಾರದಲ್ಲಿರುವ’ ಸರ್ಕಾರದ ನಿರ್ದೇಶನದಂತೆ ರಾಜಕೀಯ ಮೇಲಾಟಕ್ಕೆ ಪ್ರಯತ್ನಿಸುತ್ತಾರೆ. ಈ ವೈರಸ್ ‘ಭಯೋತ್ಪಾದಕರ ಕೃತ್ಯ’ (ಅರ್ಥಾತ್ ‘biological warfare’) ಇರಬಹುದು, ಆ ನಿಟ್ಟಿನಲ್ಲಿ ತನಿಖೆ ನಡೆಸಲು ಒತ್ತಾಯಿಸುತ್ತಾರೆ. ಜೀವ ಪಣಕ್ಕಿಟ್ಟು ಕೆಲಸ ಮಾಡುವುದಷ್ಟೇ ಅಲ್ಲದೇ ಕೋಳಿಕೋಡ್‍ನಲ್ಲಿ ಕಾರ್ಯನಿರತರಾದ ಎಲ್ಲರಿಗೂ ಈ ಸವಾಲನ್ನೂ ಎದುರಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಇದೊಂದು ‘ಪಾಲಿಟಿಕಲಿ ಕರೆಕ್ಟ್’ ಸಿನಿಮಾ ಆಗುವ ಅಪಾಯದಿಂದ ತಪ್ಪಿಸಿಕೊಂಡು ರಿಯಾಲಿಸ್ಟಿಕ್ ಆಗಿ ನಿಲ್ಲುತ್ತದೆ.

ಇಡೀ ಸಿನಿಮಾದ ಮತ್ತೊಂದು ಜೀವಾಳ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಹಾಗೂ ಸಿನಿಮಾಟೋಗ್ರಫಿ. ಚಿತ್ರಕತೆಗೆ ಪೂರಕವಾಗುವಂತೆ ಸಂಗೀತ ಸಂಯೋಜಿಸುವುದು ಹಾಗೂ ಕ್ಯಾಮೆರಾ ಫ್ರೇಮ್‍ಗಳನ್ನ ಕಟ್ಟುವುದೇ ಒಂದು ಸವಾಲು. ಹಾಗಾಗಿ ಸಿನಿಮಾವನ್ನ ಮತ್ತಷ್ಟು ಉತ್ಕ್ರಷ್ಟವಾಗಿಸುವಲ್ಲಿ ಸುಷಿನ್ ಶ್ಯಾಮ್ ಹಾಗೂ ರಾಜೀವ್ ರವಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಮಲಯಾಳಂ ಸಿನಿಮಾಗಳಲ್ಲಿ ಮಿಂಚುತ್ತಿರುವ ಬಹುತೇಕ ಪ್ರಮುಖ ನಟನಟಿಯರು ಇದರಲ್ಲಿ ತಮ್ಮೆಲ್ಲ ‘ತಾರಾಮೌಲ್ಯ’ ಪಕ್ಕಕ್ಕಿಟ್ಟು ನಟಿಸಿದ್ದಾರೆ. ಹಾಗಾಗಿಯೇ ಸಿನಿಮಾ ಒಂದೇ ಗುಕ್ಕಿನಲ್ಲಿ ನಿಮ್ಮನ್ನು ಹಿಡಿದಿಡುತ್ತದೆ.

ಜಗತ್ತಿನ ಶ್ರೇಷ್ಠ ಲೇಖಕ ಫ್ರೆಂಚ್‍ನ ಅಲ್ಬರ್ಟ್ ಕಾಮುನ  ‘The Plague’ ಕಾದಂಬರಿಗೆ ಈ ಸಿನಿಮಾವನ್ನ ಹೋಲಿಸಿ ಸಾಹಿತ್ಯಪ್ರೇಮಿಗಳು ಅಲ್ಲಲ್ಲಿ ವಿಶ್ಲೇಷಿಸಿದ್ದಾರೆ. ನಿಸ್ಸಂದೇಹವಾಗಿ  ‘The Plague’ ಕಾದಂಬರಿಯ ರೂಪಕವೇ ‘ವೈರಸ್’ ಸಿನಿಮಾದಲ್ಲೂ ಸೂಕ್ಷ್ಮವಾಗಿ ಬಳಕೆಯಾಗಿದೆ. ಕಾಮುನ ಸಾಹಿತ್ಯವನ್ನ ಓದಿದವರಿಗೆ ಎಷ್ಟೋ ವರ್ಷಗಳ ಕಾಲ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಬಹುಶಃ ಸಾಧ್ಯವೇ ಇಲ್ಲವೇನೋ? ಅಸ್ತಿತ್ವವಾದದ ಮೂಲಕವೇ ಮಾನವತಾವಾದವನ್ನ ಎತ್ತಿಹಿಡಿದ ಮಹಾನ್ ಲೇಖಕ ಅಲ್ಬರ್ಟ್ ಕಾಮು. ಕ್ರಿಯೆಗೆ ಯಾವುದೇ ಅರ್ಥವಿಲ್ಲದಿದ್ದರೂ, ಕ್ರಿಯಾತ್ಮಕವಾಗಿದ್ದುಕೊಂಡೇ ಮಾನವೀಯ ಪ್ರಜ್ಞೆಯನ್ನೇ ಉದ್ದೇಶವಾಗಿಸಿಕೊಳ್ಳಬೇಕು ನಾವೆಲ್ಲ ಎಂಬುದೇ ಕಾಮುವಿನ ಒಟ್ಟಾರೆ ಸಾಹಿತ್ಯದ ಮೂಲದ್ರವ್ಯ. ಯಾಕೆಂದರೆ ಆತ ಬದುಕಿದ್ದೇ ಪ್ರಕ್ಷುಬ್ಧ ಕಾಲದಲ್ಲಿ! ನಾಜಿ ವಾದ ಹಾಗೂ ಎರಡನೇ ಮಹಾಯುದ್ಧದ ಸಮಯದಲ್ಲಿ ಯಃಕಶ್ಚಿತ್ ಹುಳುಗಳಂತೆ ಸಾಯುತ್ತಿದ್ದ ಮನುಷ್ಯರ ಜೀವಗಳಿಗೆ ಏನಾದರೂ ಬೆಲೆ ಇದೆಯೇ? ಈ ಪ್ರಶ್ನೆ ವಿಚಿತ್ರ ತೆರನಾದ ಚಡಪಡಿಕೆಗಳು ಹಾಗೂ ಮಾನಸಿಕ ಹಿಂಸೆಗಳಿಗೆ ಅನೇಕರನ್ನ ತಳ್ಳಿದ್ದ ಕಾಲವದು!  “…hopeless hope is what sustains us in difficult moments…”  — ಇದು ಕಾಮು ತನ್ನ ಜರ್ಮನ್ ಗೆಳೆಯನಿಗೆ ಬರೆದ ಪತ್ರದಲ್ಲಿ ಹೇಳುವ ಸಾಲುಗಳು (‘Resistance, Rebellion and Death’  ಎಂಬ ಪ್ರಬಂಧ ಸಂಕಲನ). ‘ವೈರಸ್’ ಸಿನಿಮಾದ ಪ್ರತಿ ಫ್ರೇಮ್ ಹಾಗೂ ಸನ್ನಿವೇಶಗಳು ಇದನ್ನೇ ಮಾರ್ದನಿಸುತ್ತವೆ. ಇಂಗ್ಲಿಷ್ ಸಬ್ ಟೈಟಲ್ಸ್‍ನೊಂದಿಗೆ ಅಮೇಜಾನ್ ಪ್ರೈಮ್‍ನಲ್ಲಿದೆ ‘ವೈರಸ್’ ಸಿನಿಮಾ. ತಪ್ಪದೇ ನೋಡಿ.

  • ವರುಣ್ ನಾಯ್ಕರ್‌

(ಉಪನ್ಯಾಸಕರು, ಯುವ ಬರಹಗಾರರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆ ಪ್ರಶ್ನಿಸಿ ಸಿಬಿಐ ಅರ್ಜಿ; ಪ್ರತಿಕ್ರಿಯಿಸಲು ಕೇಜ್ರಿವಾಲ್-ಸಿಸೋಡಿಯಾಗೆ ಸಮಯ ನೀಡಿದ ದೆಹಲಿ ಹೈಕೋರ್ಟ್

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 21 ಜನರ ತಮ್ಮ ಬಿಡುಗಡೆಯನ್ನು ಪ್ರಶ್ನಿಸಿ ಸಿಬಿಐ ಅರ್ಜಿಗೆ ಪ್ರತಿಕ್ರಿಯೆಗಳನ್ನು ಸಲ್ಲಿಸಲು ದೆಹಲಿ...

ಪ್ರಶ್ನೆಗಳಿಗೆ ಉತ್ತರಿಸದ ಸಚಿವರು: ಸದನ ಮುಂದೂಡಿದ ಸ್ಪೀಕರ್ ಯು.ಟಿ ಖಾದರ್

ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರ ಒದಗಿಸದ ಸಚಿವರು ಮತ್ತು ಅಧಿಕಾರಿಗಳ ವಿರುದ್ದ ಸೋಮವಾರ (ಮಾ.16) ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್, ಸದನವನ್ನು ಮುಂದೂಡಿಕೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ವಿಧಾನಸಭೆಯಲ್ಲಿ...

‘ಆಪರೇಷನ್ ಸಿಂಧೂರ್’ ಕುರಿತ ಪೋಸ್ಟ್: ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟ ಹರಿಯಾಣ ಸರ್ಕಾರ

'ಆಪರೇಷನ್ ಸಿಂಧೂರ್' ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಅವರ ವಿರುದ್ಧದ ಈ ಪ್ರಕರಣಗಳನ್ನು ಕೈಬಿಟ್ಟಿರುವುದಾಗಿ ಹರಿಯಾಣ...

ಎಲ್‌ಪಿಜಿ ಬಿಕ್ಕಟ್ಟಿನ ನಡುವೆ ಆಧಾರ್ ಮೂಲಕ ‘ಇ-ಕೆವೈಸಿ’ ಮಾಡಿಸಿಕೊಳ್ಳುವಂತೆ ಸರ್ಕಾರದ ಸೂಚನೆ

ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಬಳಸುವ 330 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ತಮ್ಮ ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್ (ಇ-ಕೆವೈಸಿ) ಅನ್ನು ಬಯೋಮೆಟ್ರಿಕ್ ಆಧಾರ್ ದೃಢೀಕರಣ ವ್ಯವಸ್ಥೆಯ ಮೂಲಕ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ...

ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದ ಚು. ಆಯೋಗ

ನಿರೀಕ್ಷೆಯಂತೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ತನ್ನ ಆಟ ಶುರು ಮಾಡಿದೆ. ರಾಜ್ಯದ ಸರ್ಕಾದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದೆ. ಪಶ್ಚಿಮ ಬಂಗಾಳ...

ಉತ್ತರ ಪ್ರದೇಶ| ಪಾಕ್ ಸಂಪರ್ಕದ ಆರೋಪ; ಮಹಿಳೆ ಸೇರಿದಂತೆ 6 ಜನರ ಬಂಧನ

ಪಾಕಿಸ್ತಾನದ ದೇಶದ ಕೋಡ್‌ನಲ್ಲಿ ನೋಂದಾಯಿಸಲಾದ ವಿದೇಶಿ ಸಂಖ್ಯೆಯೊಂದಿಗೆ ಭದ್ರತಾ ಕಚೇರಿಗಳು, ತನಿಖಾ ಸಂಸ್ಥೆಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಚಿತ್ರೀಕರಿಸಿ ಹಂಚಿಕೊಂಡ ಆರೋಪದ ಮೇಲೆ ಗಾಜಿಯಾಬಾದ್‌ನಲ್ಲಿ ಮಹಿಳೆ...

ವೈರಮುತ್ತುಗೆ ಜ್ಞಾನಪೀಠ ಪ್ರಶಸ್ತಿ : ಚಿನ್ಮಯಿ ಶ್ರೀಪಾದ, ಟಿಎಂ ಕೃಷ್ಣ ಸೇರಿ ಹಲವರಿಂದ ಟೀಕೆ

ಲಿಂಗತಾರತಮ್ಯ ಮತ್ತು ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ತಮಿಳು ಸಾಹಿತಿ ವೈರಮುತ್ತು ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಘೋಷಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.  ಸಾಹಿತ್ಯ ಕ್ಷೇತ್ರದಲ್ಲಿನ ಅವರ ಕೊಡುಗೆಯನ್ನು ಪರಿಗಣಿಸಿ...

ಡ್ರೋನ್ ದಾಳಿಯ ನಂತರ ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ ಅವಘಡ; ವಿಮಾನ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತ

ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿಯಿಂದಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಆದರೆ, ದುಬೈ ಅಧಿಕಾರಿಗಳ ಪ್ರಕಾರ, ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ."ದುಬೈ ಅಂತರಾಷ್ಟ್ರೀಯ ವಿಮಾನ...

ಕಾನ್ಶಿ ರಾಮ್‌ಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ರಾಹುಲ್ ಗಾಂಧಿ

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸ್ಥಾಪಿಸಿದ ದಲಿತ ಐಕಾನ್ ಕಾನ್ಶಿ ರಾಮ್‌ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಪ್ರಧಾನಿ ನರೇಂದ್ರ...

ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಹತ್ತು ರಾಜ್ಯಗಳ 37 ಸ್ಥಾನಗಳನ್ನು ಒಳಗೊಂಡ ದ್ವೈವಾರ್ಷಿಕ ರಾಜ್ಯಸಭಾ ಚುನಾವಣೆಗೆ ಸೋಮವಾರ (ಮಾ.16) ಮತದಾನ ನಡೆಯುತ್ತಿದೆ. ಬಿಹಾರ, ಒಡಿಶಾ ಮತ್ತು ಹರಿಯಾಣದಲ್ಲಿ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದ್ದು, 26 ಅಭ್ಯರ್ಥಿಗಳು ಈಗಾಗಲೇ...