Homeಮುಖಪುಟಒಮ್ಮೆ ನೋಡಲೇಬೇಕಾದ ಸಿನಿಮಾ `ವೈರಸ್'

ಒಮ್ಮೆ ನೋಡಲೇಬೇಕಾದ ಸಿನಿಮಾ `ವೈರಸ್’

- Advertisement -
- Advertisement -

ಈಗ ತಿಂಗಳ ಹಿಂದೆ ಮಲಯಾಳಂ ಭಾಷೆಯಲ್ಲಿ ತಯಾರಾಗಿ ಬಿಡುಗಡೆಯಾದ ‘ವೈರಸ್’ ಸಿನಿಮಾದ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನೇ ಕೇಳಿದ್ದೆ. ಕೆಲವರ್ಷಗಳಿಂದ ಮಲಯಾಳಂನಲ್ಲಿ ಅತ್ಯುತ್ತಮ ಅನ್ನುವಂತಹ ಸಿನಿಮಾಗಳು ತಯಾರಾಗುತ್ತಿರುವ ಕಾರಣವೋ ಏನೋ ‘ವೈರಸ್’ ನನ್ನ ಗಮನ ಸೆಳೆದಿತ್ತು. ಜತೆಗೆ, ವರ್ಷದ ಹಿಂದೆ ಕೇರಳದಲ್ಲಿ ಸುಮಾರು 17 ಜನರ ಸಾವಿಗೆ ಕಾರಣವಾದ ‘ನಿಪಾ’ ವೈರಸ್, ಅದನ್ನು ತಹಬದಿಗೆ ತರಲು ಮಾಡಿದ ಹರಸಾಹಸಗಳ ಕತೆಯೇ ‘ವೈರಸ್’ ಎಂಬುದು ಇನ್ನಷ್ಟು ಕುತೂಹಲ ಕೆರಳಿಸಿತ್ತು. ನೋಡಬೇಕು ಅಂದುಕೊಂಡಿದ್ದೇ ಬಂತು…ದಿನಗಳು ಸರಿದವಷ್ಟೇ. ಥಿಯೇಟರ್‌ನಿಂದ ಸಿನಿಮಾ ತೆಗೆದುಹಾಕಿದ್ದರು. ಆದರೆ, ಎರಡು ದಿನಗಳ ಹಿಂದೆ ಅಮೇಜಾನ್ ಪ್ರೈಮ್ ಅಲ್ಲಿ ಈ ಸಿನಿಮಾ ನೋಡಿದೆ. What a masterpiece! Sheer brilliance at so many levels.

ನಿರ್ದೇಶಕ ಆಶಿಕ್ ಅಬು ನೋಡಲೇಬೇಕಾದ ಸಿನಿಮಾ ಮಾಡಿದ್ದಾನೆ. ಇಡೀ ಸಿನಿಮಾ ನಮ್ಮ ಅಸ್ತಿತ್ವವೇ ಅಸಂಗತ ಅನ್ನುವಂತೆ ಮಾಡುತ್ತಲೇ ಮತ್ತೆ ಭರವಸೆ ನೀಡುತ್ತದೆ. ಯಾಕೆಂದರೆ ಅದೊಂದು ಹೋರಾಟ. ಬದುಕಲು ಹೋರಾಡಲೇಬೇಕೆಂಬ ಸತ್ಯವೇ ಈ ಸಿನಿಮಾದ ಜೀವಾಳ. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಮುಖ ಹತ್ತು ಪ್ರಯಾರಿಟಿ ರೋಗಗಳಲ್ಲಿ ‘ನಿಪಾ’ ಕೂಡ ಒಂದು. 2018ರಲ್ಲಿ ಕೇರಳದಲ್ಲಿ ಕಾಣಿಸಿಕೊಳ್ಳುವ ಮುನ್ನ ಜಗತ್ತಿನ ಬೆರಳಣಿಕೆಯಷ್ಟು ಪ್ರದೇಶಗಳಲ್ಲಿ ಮಾತ್ರ ಈ ವೈರಸ್ ಪತ್ತೆಯಾಗಿತ್ತು. ಇದಕ್ಕಿಂತ ಭಯ ಹುಟ್ಟಿಸುವ ಸಂಗತಿ ಎಂದರೆ, ನಿಪಾ ವೈರಸ್ ಗೆ ಯಾವುದೇ ರೀತಿಯ ಸಮರ್ಪಕ vaccination ಆಗಲಿ ಅಥವಾ ಚಿಕಿತ್ಸಾ ವಿಧಾನಗಳಾಗಲಿ ಇಲ್ಲ! ಈ ಸತ್ಯ ಎಂತಹವರ ಜಂಘಾಬಲವನ್ನೇ ಉಡುಗಿಸಿಬಿಡುತ್ತದೆ.

ಅದುಅಲ್ಲದೇ ಇದೊಂದು ಸಾಂಕ್ರಾಮಿಕ ರೋಗ! ಪತ್ತೆ ಹಚ್ಚುವಲ್ಲಿ ಸ್ವಲ್ಪ ತಡವಾಗಿದ್ದರೂ, ಕೆಲಸದಲ್ಲಿ ಕೊಂಚ ಎಡವಿದ್ದರೂ ಕೇರಳದ ಕೋಳಿಕೋಡ್ ನಗರದಲ್ಲಿ ಪತ್ತೆಯಾದ ಈ ವೈರಸ್, ಇಡೀ ಜಿಲ್ಲೆ, ರಾಜ್ಯ, ದೇಶವನ್ನೇ ಸ್ಮಶಾನ ಮಾಡಿಬಿಡುತ್ತಿತ್ತು ಎಂಬ ಸಂಗತಿ ಅತಿಶಯೋಕ್ತಿ ಅಂತೂ ಅಲ್ಲ! ಇಂತಹ ಕಥಾನಕವನ್ನು ಬಹುತೇಕ ಸತ್ಯ ಘಟನೆಗಳು ಹಾಗೂ ಆ ಸಂದರ್ಭದಲ್ಲಿ ಕೆಲಸ ಮಾಡಿದ, ಸಾವಿಗೀಡಾದ, ಬದುಕುಳಿದ ನಿಜಜೀವನದ ವ್ಯಕ್ತಿಗಳನ್ನೇ ಆಧರಿಸಿ ಮೆಹಸಿನ್ ಪರಾರಿ, ಶೆರ್ಫು ಹಾಗೂ ಸುಹಾಸ್ ಅವರುಗಳು ಅತ್ಯುತ್ತಮ ಚಿತ್ರಕತೆ ಕಟ್ಟಿದ್ದಾರೆ. ಅದನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದೇ ಆಶಿಕ್ ಅಬುನ ನಿರ್ದೇಶನ!

ಕೆಲವರ್ಷಗಳ ಹಿಂದೆ ಬಿಡುಗಡೆಯಾಗಿದ್ದ Steven Soderbergh ನಿರ್ದೇಶನದ ‘Contagion’ ಎಂಬ ಹಾಲಿವುಡ್ ಚಲನಚಿತ್ರವನ್ನ ನೆನಪಿಸುತ್ತದೆ ‘ವೈರಸ್’. ಒಂದೇ ವ್ಯತ್ಯಾಸ ಅಂದ್ರೆ, ‘Contagion’ ಹೈಪಾಥಿಸಿಸ್ ಮೇಲೆ ತಯಾರಾಗಿದ್ದು. ಆದರೆ, ವೈರಸ್ ಹಾಗಲ್ಲ. ನೈಜ ಘಟನೆಗಳನ್ನಾಧರಿಸಿ ಸಿನಿಮಾ ಮಾಡುವುದು ಸುಲಭವಲ್ಲ. ಪ್ರತಿ ಹಂತದಲ್ಲೂ ಸೂಕ್ಷ್ಮತೆ ಇರಬೇಕು ಇಲ್ಲದಿದ್ದರೆ ಸಿನಿಮಾದ ಹದ ತಪ್ಪಿಹೋಗುತ್ತದೆ. ಆದರೆ, ವೈರಸ್ ಇಂತಹ ಯಾವ ವೀಕ್‍ನೆಸ್ ನಿಂದಲೂ ಗೌಣವಾಗುವುದಿಲ್ಲ. ಅದೇ ಈ ಸಿನಿಮಾದ ಮೊದಲ ಹೆಗ್ಗಳಿಕೆ.

ರಾಜ್ಯ ಆರೋಗ್ಯ ಸಚಿವೆ, ನಗರದ ಶಾಸಕ, ಆರೋಗ್ಯ ಇಲಾಖೆಯ ನಿರ್ದೇಶಕಿ, ಕೋಳಿಕೋಡ್ ಜಿಲ್ಲೆಯ ಜಿಲ್ಲಾಧಿಕಾರಿ, ಮಣಿಪಾಲ್  virology ಘಟಕದ ತಜ್ಞರು, ವೈದ್ಯರ ತಂಡ, ಕಮ್ಯುನಿಟಿ ಮೆಡಿಸಿನ್‍ನ ವೈದ್ಯೆ, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು, ಆಸ್ಪತ್ರೆಗಳ ಸಿಬ್ಬಂದಿ, ಅಟೆಂಡರ್‍ಗಳು, ಹೆಣ ಸುಡಲು ಹಾಗೂ ಹೂಳಲು ನೆರವಾಗುವ ಜನ, ಆಂಬುಲೆನ್ಸ್‍ನ ಡ್ರೈವರ್‍ಗಳು… ಹೀಗೇ ಎಲ್ಲರನ್ನೂ ಈ ಸಿನಿಮಾ ಒಳಗೊಳ್ಳುತ್ತದೆ. ಯಾಕೆಂದರೆ ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ ಮುಖ್ಯರಾಗುತ್ತಾರೆ. ಎಲ್ಲರೂ ಜತೆಗೂಡಿ ಇಡೀ ಊರು ಸ್ಮಶಾನವಾಗುವುದನ್ನ ಹೇಗೆ ತಪ್ಪಿಸುತ್ತಾರೆ ಹಾಗೆಯೇ ವೈರಸ್ ಹಬ್ಬಿದ dynamics ಅನ್ನು ಯಾವೆಲ್ಲ ಹರಸಾಹಸಗಳ ಮೂಲಕ ಪತ್ತೆ ಹಚ್ಚುತ್ತಾರೆ ಎಂಬುದನ್ನೇ ಒಂದು ಅದ್ಭುತವಾದ ಥ್ರಿಲ್ಲರ್ ಸಿನಿಮಾ ಆಗಿಸಿದ್ದಾನೆ ಆಶಿಕ್ ಅಬು.

ಇದರ ಮಧ್ಯೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಕಾರ್ಯದರ್ಶಿಗಳಾಗಿ ಕೆಲಸ ಮಾಡುವ ಇಬ್ಬರೂ ಹಿರಿಯ ಅಧಿಕಾರಿಗಳು ಕೇರಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವುದರ ಜತೆಗೆ ‘ಕೇಂದ್ರದಲ್ಲಿ ಅಧಿಕಾರದಲ್ಲಿರುವ’ ಸರ್ಕಾರದ ನಿರ್ದೇಶನದಂತೆ ರಾಜಕೀಯ ಮೇಲಾಟಕ್ಕೆ ಪ್ರಯತ್ನಿಸುತ್ತಾರೆ. ಈ ವೈರಸ್ ‘ಭಯೋತ್ಪಾದಕರ ಕೃತ್ಯ’ (ಅರ್ಥಾತ್ ‘biological warfare’) ಇರಬಹುದು, ಆ ನಿಟ್ಟಿನಲ್ಲಿ ತನಿಖೆ ನಡೆಸಲು ಒತ್ತಾಯಿಸುತ್ತಾರೆ. ಜೀವ ಪಣಕ್ಕಿಟ್ಟು ಕೆಲಸ ಮಾಡುವುದಷ್ಟೇ ಅಲ್ಲದೇ ಕೋಳಿಕೋಡ್‍ನಲ್ಲಿ ಕಾರ್ಯನಿರತರಾದ ಎಲ್ಲರಿಗೂ ಈ ಸವಾಲನ್ನೂ ಎದುರಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಇದೊಂದು ‘ಪಾಲಿಟಿಕಲಿ ಕರೆಕ್ಟ್’ ಸಿನಿಮಾ ಆಗುವ ಅಪಾಯದಿಂದ ತಪ್ಪಿಸಿಕೊಂಡು ರಿಯಾಲಿಸ್ಟಿಕ್ ಆಗಿ ನಿಲ್ಲುತ್ತದೆ.

ಇಡೀ ಸಿನಿಮಾದ ಮತ್ತೊಂದು ಜೀವಾಳ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಹಾಗೂ ಸಿನಿಮಾಟೋಗ್ರಫಿ. ಚಿತ್ರಕತೆಗೆ ಪೂರಕವಾಗುವಂತೆ ಸಂಗೀತ ಸಂಯೋಜಿಸುವುದು ಹಾಗೂ ಕ್ಯಾಮೆರಾ ಫ್ರೇಮ್‍ಗಳನ್ನ ಕಟ್ಟುವುದೇ ಒಂದು ಸವಾಲು. ಹಾಗಾಗಿ ಸಿನಿಮಾವನ್ನ ಮತ್ತಷ್ಟು ಉತ್ಕ್ರಷ್ಟವಾಗಿಸುವಲ್ಲಿ ಸುಷಿನ್ ಶ್ಯಾಮ್ ಹಾಗೂ ರಾಜೀವ್ ರವಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಮಲಯಾಳಂ ಸಿನಿಮಾಗಳಲ್ಲಿ ಮಿಂಚುತ್ತಿರುವ ಬಹುತೇಕ ಪ್ರಮುಖ ನಟನಟಿಯರು ಇದರಲ್ಲಿ ತಮ್ಮೆಲ್ಲ ‘ತಾರಾಮೌಲ್ಯ’ ಪಕ್ಕಕ್ಕಿಟ್ಟು ನಟಿಸಿದ್ದಾರೆ. ಹಾಗಾಗಿಯೇ ಸಿನಿಮಾ ಒಂದೇ ಗುಕ್ಕಿನಲ್ಲಿ ನಿಮ್ಮನ್ನು ಹಿಡಿದಿಡುತ್ತದೆ.

ಜಗತ್ತಿನ ಶ್ರೇಷ್ಠ ಲೇಖಕ ಫ್ರೆಂಚ್‍ನ ಅಲ್ಬರ್ಟ್ ಕಾಮುನ  ‘The Plague’ ಕಾದಂಬರಿಗೆ ಈ ಸಿನಿಮಾವನ್ನ ಹೋಲಿಸಿ ಸಾಹಿತ್ಯಪ್ರೇಮಿಗಳು ಅಲ್ಲಲ್ಲಿ ವಿಶ್ಲೇಷಿಸಿದ್ದಾರೆ. ನಿಸ್ಸಂದೇಹವಾಗಿ  ‘The Plague’ ಕಾದಂಬರಿಯ ರೂಪಕವೇ ‘ವೈರಸ್’ ಸಿನಿಮಾದಲ್ಲೂ ಸೂಕ್ಷ್ಮವಾಗಿ ಬಳಕೆಯಾಗಿದೆ. ಕಾಮುನ ಸಾಹಿತ್ಯವನ್ನ ಓದಿದವರಿಗೆ ಎಷ್ಟೋ ವರ್ಷಗಳ ಕಾಲ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಬಹುಶಃ ಸಾಧ್ಯವೇ ಇಲ್ಲವೇನೋ? ಅಸ್ತಿತ್ವವಾದದ ಮೂಲಕವೇ ಮಾನವತಾವಾದವನ್ನ ಎತ್ತಿಹಿಡಿದ ಮಹಾನ್ ಲೇಖಕ ಅಲ್ಬರ್ಟ್ ಕಾಮು. ಕ್ರಿಯೆಗೆ ಯಾವುದೇ ಅರ್ಥವಿಲ್ಲದಿದ್ದರೂ, ಕ್ರಿಯಾತ್ಮಕವಾಗಿದ್ದುಕೊಂಡೇ ಮಾನವೀಯ ಪ್ರಜ್ಞೆಯನ್ನೇ ಉದ್ದೇಶವಾಗಿಸಿಕೊಳ್ಳಬೇಕು ನಾವೆಲ್ಲ ಎಂಬುದೇ ಕಾಮುವಿನ ಒಟ್ಟಾರೆ ಸಾಹಿತ್ಯದ ಮೂಲದ್ರವ್ಯ. ಯಾಕೆಂದರೆ ಆತ ಬದುಕಿದ್ದೇ ಪ್ರಕ್ಷುಬ್ಧ ಕಾಲದಲ್ಲಿ! ನಾಜಿ ವಾದ ಹಾಗೂ ಎರಡನೇ ಮಹಾಯುದ್ಧದ ಸಮಯದಲ್ಲಿ ಯಃಕಶ್ಚಿತ್ ಹುಳುಗಳಂತೆ ಸಾಯುತ್ತಿದ್ದ ಮನುಷ್ಯರ ಜೀವಗಳಿಗೆ ಏನಾದರೂ ಬೆಲೆ ಇದೆಯೇ? ಈ ಪ್ರಶ್ನೆ ವಿಚಿತ್ರ ತೆರನಾದ ಚಡಪಡಿಕೆಗಳು ಹಾಗೂ ಮಾನಸಿಕ ಹಿಂಸೆಗಳಿಗೆ ಅನೇಕರನ್ನ ತಳ್ಳಿದ್ದ ಕಾಲವದು!  “…hopeless hope is what sustains us in difficult moments…”  — ಇದು ಕಾಮು ತನ್ನ ಜರ್ಮನ್ ಗೆಳೆಯನಿಗೆ ಬರೆದ ಪತ್ರದಲ್ಲಿ ಹೇಳುವ ಸಾಲುಗಳು (‘Resistance, Rebellion and Death’  ಎಂಬ ಪ್ರಬಂಧ ಸಂಕಲನ). ‘ವೈರಸ್’ ಸಿನಿಮಾದ ಪ್ರತಿ ಫ್ರೇಮ್ ಹಾಗೂ ಸನ್ನಿವೇಶಗಳು ಇದನ್ನೇ ಮಾರ್ದನಿಸುತ್ತವೆ. ಇಂಗ್ಲಿಷ್ ಸಬ್ ಟೈಟಲ್ಸ್‍ನೊಂದಿಗೆ ಅಮೇಜಾನ್ ಪ್ರೈಮ್‍ನಲ್ಲಿದೆ ‘ವೈರಸ್’ ಸಿನಿಮಾ. ತಪ್ಪದೇ ನೋಡಿ.

  • ವರುಣ್ ನಾಯ್ಕರ್‌

(ಉಪನ್ಯಾಸಕರು, ಯುವ ಬರಹಗಾರರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...