Homeಮುಖಪುಟಒಮ್ಮೆ ನೋಡಲೇಬೇಕಾದ ಸಿನಿಮಾ `ವೈರಸ್'

ಒಮ್ಮೆ ನೋಡಲೇಬೇಕಾದ ಸಿನಿಮಾ `ವೈರಸ್’

- Advertisement -
- Advertisement -

ಈಗ ತಿಂಗಳ ಹಿಂದೆ ಮಲಯಾಳಂ ಭಾಷೆಯಲ್ಲಿ ತಯಾರಾಗಿ ಬಿಡುಗಡೆಯಾದ ‘ವೈರಸ್’ ಸಿನಿಮಾದ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನೇ ಕೇಳಿದ್ದೆ. ಕೆಲವರ್ಷಗಳಿಂದ ಮಲಯಾಳಂನಲ್ಲಿ ಅತ್ಯುತ್ತಮ ಅನ್ನುವಂತಹ ಸಿನಿಮಾಗಳು ತಯಾರಾಗುತ್ತಿರುವ ಕಾರಣವೋ ಏನೋ ‘ವೈರಸ್’ ನನ್ನ ಗಮನ ಸೆಳೆದಿತ್ತು. ಜತೆಗೆ, ವರ್ಷದ ಹಿಂದೆ ಕೇರಳದಲ್ಲಿ ಸುಮಾರು 17 ಜನರ ಸಾವಿಗೆ ಕಾರಣವಾದ ‘ನಿಪಾ’ ವೈರಸ್, ಅದನ್ನು ತಹಬದಿಗೆ ತರಲು ಮಾಡಿದ ಹರಸಾಹಸಗಳ ಕತೆಯೇ ‘ವೈರಸ್’ ಎಂಬುದು ಇನ್ನಷ್ಟು ಕುತೂಹಲ ಕೆರಳಿಸಿತ್ತು. ನೋಡಬೇಕು ಅಂದುಕೊಂಡಿದ್ದೇ ಬಂತು…ದಿನಗಳು ಸರಿದವಷ್ಟೇ. ಥಿಯೇಟರ್‌ನಿಂದ ಸಿನಿಮಾ ತೆಗೆದುಹಾಕಿದ್ದರು. ಆದರೆ, ಎರಡು ದಿನಗಳ ಹಿಂದೆ ಅಮೇಜಾನ್ ಪ್ರೈಮ್ ಅಲ್ಲಿ ಈ ಸಿನಿಮಾ ನೋಡಿದೆ. What a masterpiece! Sheer brilliance at so many levels.

ನಿರ್ದೇಶಕ ಆಶಿಕ್ ಅಬು ನೋಡಲೇಬೇಕಾದ ಸಿನಿಮಾ ಮಾಡಿದ್ದಾನೆ. ಇಡೀ ಸಿನಿಮಾ ನಮ್ಮ ಅಸ್ತಿತ್ವವೇ ಅಸಂಗತ ಅನ್ನುವಂತೆ ಮಾಡುತ್ತಲೇ ಮತ್ತೆ ಭರವಸೆ ನೀಡುತ್ತದೆ. ಯಾಕೆಂದರೆ ಅದೊಂದು ಹೋರಾಟ. ಬದುಕಲು ಹೋರಾಡಲೇಬೇಕೆಂಬ ಸತ್ಯವೇ ಈ ಸಿನಿಮಾದ ಜೀವಾಳ. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಮುಖ ಹತ್ತು ಪ್ರಯಾರಿಟಿ ರೋಗಗಳಲ್ಲಿ ‘ನಿಪಾ’ ಕೂಡ ಒಂದು. 2018ರಲ್ಲಿ ಕೇರಳದಲ್ಲಿ ಕಾಣಿಸಿಕೊಳ್ಳುವ ಮುನ್ನ ಜಗತ್ತಿನ ಬೆರಳಣಿಕೆಯಷ್ಟು ಪ್ರದೇಶಗಳಲ್ಲಿ ಮಾತ್ರ ಈ ವೈರಸ್ ಪತ್ತೆಯಾಗಿತ್ತು. ಇದಕ್ಕಿಂತ ಭಯ ಹುಟ್ಟಿಸುವ ಸಂಗತಿ ಎಂದರೆ, ನಿಪಾ ವೈರಸ್ ಗೆ ಯಾವುದೇ ರೀತಿಯ ಸಮರ್ಪಕ vaccination ಆಗಲಿ ಅಥವಾ ಚಿಕಿತ್ಸಾ ವಿಧಾನಗಳಾಗಲಿ ಇಲ್ಲ! ಈ ಸತ್ಯ ಎಂತಹವರ ಜಂಘಾಬಲವನ್ನೇ ಉಡುಗಿಸಿಬಿಡುತ್ತದೆ.

ಅದುಅಲ್ಲದೇ ಇದೊಂದು ಸಾಂಕ್ರಾಮಿಕ ರೋಗ! ಪತ್ತೆ ಹಚ್ಚುವಲ್ಲಿ ಸ್ವಲ್ಪ ತಡವಾಗಿದ್ದರೂ, ಕೆಲಸದಲ್ಲಿ ಕೊಂಚ ಎಡವಿದ್ದರೂ ಕೇರಳದ ಕೋಳಿಕೋಡ್ ನಗರದಲ್ಲಿ ಪತ್ತೆಯಾದ ಈ ವೈರಸ್, ಇಡೀ ಜಿಲ್ಲೆ, ರಾಜ್ಯ, ದೇಶವನ್ನೇ ಸ್ಮಶಾನ ಮಾಡಿಬಿಡುತ್ತಿತ್ತು ಎಂಬ ಸಂಗತಿ ಅತಿಶಯೋಕ್ತಿ ಅಂತೂ ಅಲ್ಲ! ಇಂತಹ ಕಥಾನಕವನ್ನು ಬಹುತೇಕ ಸತ್ಯ ಘಟನೆಗಳು ಹಾಗೂ ಆ ಸಂದರ್ಭದಲ್ಲಿ ಕೆಲಸ ಮಾಡಿದ, ಸಾವಿಗೀಡಾದ, ಬದುಕುಳಿದ ನಿಜಜೀವನದ ವ್ಯಕ್ತಿಗಳನ್ನೇ ಆಧರಿಸಿ ಮೆಹಸಿನ್ ಪರಾರಿ, ಶೆರ್ಫು ಹಾಗೂ ಸುಹಾಸ್ ಅವರುಗಳು ಅತ್ಯುತ್ತಮ ಚಿತ್ರಕತೆ ಕಟ್ಟಿದ್ದಾರೆ. ಅದನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದೇ ಆಶಿಕ್ ಅಬುನ ನಿರ್ದೇಶನ!

ಕೆಲವರ್ಷಗಳ ಹಿಂದೆ ಬಿಡುಗಡೆಯಾಗಿದ್ದ Steven Soderbergh ನಿರ್ದೇಶನದ ‘Contagion’ ಎಂಬ ಹಾಲಿವುಡ್ ಚಲನಚಿತ್ರವನ್ನ ನೆನಪಿಸುತ್ತದೆ ‘ವೈರಸ್’. ಒಂದೇ ವ್ಯತ್ಯಾಸ ಅಂದ್ರೆ, ‘Contagion’ ಹೈಪಾಥಿಸಿಸ್ ಮೇಲೆ ತಯಾರಾಗಿದ್ದು. ಆದರೆ, ವೈರಸ್ ಹಾಗಲ್ಲ. ನೈಜ ಘಟನೆಗಳನ್ನಾಧರಿಸಿ ಸಿನಿಮಾ ಮಾಡುವುದು ಸುಲಭವಲ್ಲ. ಪ್ರತಿ ಹಂತದಲ್ಲೂ ಸೂಕ್ಷ್ಮತೆ ಇರಬೇಕು ಇಲ್ಲದಿದ್ದರೆ ಸಿನಿಮಾದ ಹದ ತಪ್ಪಿಹೋಗುತ್ತದೆ. ಆದರೆ, ವೈರಸ್ ಇಂತಹ ಯಾವ ವೀಕ್‍ನೆಸ್ ನಿಂದಲೂ ಗೌಣವಾಗುವುದಿಲ್ಲ. ಅದೇ ಈ ಸಿನಿಮಾದ ಮೊದಲ ಹೆಗ್ಗಳಿಕೆ.

ರಾಜ್ಯ ಆರೋಗ್ಯ ಸಚಿವೆ, ನಗರದ ಶಾಸಕ, ಆರೋಗ್ಯ ಇಲಾಖೆಯ ನಿರ್ದೇಶಕಿ, ಕೋಳಿಕೋಡ್ ಜಿಲ್ಲೆಯ ಜಿಲ್ಲಾಧಿಕಾರಿ, ಮಣಿಪಾಲ್  virology ಘಟಕದ ತಜ್ಞರು, ವೈದ್ಯರ ತಂಡ, ಕಮ್ಯುನಿಟಿ ಮೆಡಿಸಿನ್‍ನ ವೈದ್ಯೆ, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು, ಆಸ್ಪತ್ರೆಗಳ ಸಿಬ್ಬಂದಿ, ಅಟೆಂಡರ್‍ಗಳು, ಹೆಣ ಸುಡಲು ಹಾಗೂ ಹೂಳಲು ನೆರವಾಗುವ ಜನ, ಆಂಬುಲೆನ್ಸ್‍ನ ಡ್ರೈವರ್‍ಗಳು… ಹೀಗೇ ಎಲ್ಲರನ್ನೂ ಈ ಸಿನಿಮಾ ಒಳಗೊಳ್ಳುತ್ತದೆ. ಯಾಕೆಂದರೆ ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ ಮುಖ್ಯರಾಗುತ್ತಾರೆ. ಎಲ್ಲರೂ ಜತೆಗೂಡಿ ಇಡೀ ಊರು ಸ್ಮಶಾನವಾಗುವುದನ್ನ ಹೇಗೆ ತಪ್ಪಿಸುತ್ತಾರೆ ಹಾಗೆಯೇ ವೈರಸ್ ಹಬ್ಬಿದ dynamics ಅನ್ನು ಯಾವೆಲ್ಲ ಹರಸಾಹಸಗಳ ಮೂಲಕ ಪತ್ತೆ ಹಚ್ಚುತ್ತಾರೆ ಎಂಬುದನ್ನೇ ಒಂದು ಅದ್ಭುತವಾದ ಥ್ರಿಲ್ಲರ್ ಸಿನಿಮಾ ಆಗಿಸಿದ್ದಾನೆ ಆಶಿಕ್ ಅಬು.

ಇದರ ಮಧ್ಯೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಕಾರ್ಯದರ್ಶಿಗಳಾಗಿ ಕೆಲಸ ಮಾಡುವ ಇಬ್ಬರೂ ಹಿರಿಯ ಅಧಿಕಾರಿಗಳು ಕೇರಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವುದರ ಜತೆಗೆ ‘ಕೇಂದ್ರದಲ್ಲಿ ಅಧಿಕಾರದಲ್ಲಿರುವ’ ಸರ್ಕಾರದ ನಿರ್ದೇಶನದಂತೆ ರಾಜಕೀಯ ಮೇಲಾಟಕ್ಕೆ ಪ್ರಯತ್ನಿಸುತ್ತಾರೆ. ಈ ವೈರಸ್ ‘ಭಯೋತ್ಪಾದಕರ ಕೃತ್ಯ’ (ಅರ್ಥಾತ್ ‘biological warfare’) ಇರಬಹುದು, ಆ ನಿಟ್ಟಿನಲ್ಲಿ ತನಿಖೆ ನಡೆಸಲು ಒತ್ತಾಯಿಸುತ್ತಾರೆ. ಜೀವ ಪಣಕ್ಕಿಟ್ಟು ಕೆಲಸ ಮಾಡುವುದಷ್ಟೇ ಅಲ್ಲದೇ ಕೋಳಿಕೋಡ್‍ನಲ್ಲಿ ಕಾರ್ಯನಿರತರಾದ ಎಲ್ಲರಿಗೂ ಈ ಸವಾಲನ್ನೂ ಎದುರಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಇದೊಂದು ‘ಪಾಲಿಟಿಕಲಿ ಕರೆಕ್ಟ್’ ಸಿನಿಮಾ ಆಗುವ ಅಪಾಯದಿಂದ ತಪ್ಪಿಸಿಕೊಂಡು ರಿಯಾಲಿಸ್ಟಿಕ್ ಆಗಿ ನಿಲ್ಲುತ್ತದೆ.

ಇಡೀ ಸಿನಿಮಾದ ಮತ್ತೊಂದು ಜೀವಾಳ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಹಾಗೂ ಸಿನಿಮಾಟೋಗ್ರಫಿ. ಚಿತ್ರಕತೆಗೆ ಪೂರಕವಾಗುವಂತೆ ಸಂಗೀತ ಸಂಯೋಜಿಸುವುದು ಹಾಗೂ ಕ್ಯಾಮೆರಾ ಫ್ರೇಮ್‍ಗಳನ್ನ ಕಟ್ಟುವುದೇ ಒಂದು ಸವಾಲು. ಹಾಗಾಗಿ ಸಿನಿಮಾವನ್ನ ಮತ್ತಷ್ಟು ಉತ್ಕ್ರಷ್ಟವಾಗಿಸುವಲ್ಲಿ ಸುಷಿನ್ ಶ್ಯಾಮ್ ಹಾಗೂ ರಾಜೀವ್ ರವಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಮಲಯಾಳಂ ಸಿನಿಮಾಗಳಲ್ಲಿ ಮಿಂಚುತ್ತಿರುವ ಬಹುತೇಕ ಪ್ರಮುಖ ನಟನಟಿಯರು ಇದರಲ್ಲಿ ತಮ್ಮೆಲ್ಲ ‘ತಾರಾಮೌಲ್ಯ’ ಪಕ್ಕಕ್ಕಿಟ್ಟು ನಟಿಸಿದ್ದಾರೆ. ಹಾಗಾಗಿಯೇ ಸಿನಿಮಾ ಒಂದೇ ಗುಕ್ಕಿನಲ್ಲಿ ನಿಮ್ಮನ್ನು ಹಿಡಿದಿಡುತ್ತದೆ.

ಜಗತ್ತಿನ ಶ್ರೇಷ್ಠ ಲೇಖಕ ಫ್ರೆಂಚ್‍ನ ಅಲ್ಬರ್ಟ್ ಕಾಮುನ  ‘The Plague’ ಕಾದಂಬರಿಗೆ ಈ ಸಿನಿಮಾವನ್ನ ಹೋಲಿಸಿ ಸಾಹಿತ್ಯಪ್ರೇಮಿಗಳು ಅಲ್ಲಲ್ಲಿ ವಿಶ್ಲೇಷಿಸಿದ್ದಾರೆ. ನಿಸ್ಸಂದೇಹವಾಗಿ  ‘The Plague’ ಕಾದಂಬರಿಯ ರೂಪಕವೇ ‘ವೈರಸ್’ ಸಿನಿಮಾದಲ್ಲೂ ಸೂಕ್ಷ್ಮವಾಗಿ ಬಳಕೆಯಾಗಿದೆ. ಕಾಮುನ ಸಾಹಿತ್ಯವನ್ನ ಓದಿದವರಿಗೆ ಎಷ್ಟೋ ವರ್ಷಗಳ ಕಾಲ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಬಹುಶಃ ಸಾಧ್ಯವೇ ಇಲ್ಲವೇನೋ? ಅಸ್ತಿತ್ವವಾದದ ಮೂಲಕವೇ ಮಾನವತಾವಾದವನ್ನ ಎತ್ತಿಹಿಡಿದ ಮಹಾನ್ ಲೇಖಕ ಅಲ್ಬರ್ಟ್ ಕಾಮು. ಕ್ರಿಯೆಗೆ ಯಾವುದೇ ಅರ್ಥವಿಲ್ಲದಿದ್ದರೂ, ಕ್ರಿಯಾತ್ಮಕವಾಗಿದ್ದುಕೊಂಡೇ ಮಾನವೀಯ ಪ್ರಜ್ಞೆಯನ್ನೇ ಉದ್ದೇಶವಾಗಿಸಿಕೊಳ್ಳಬೇಕು ನಾವೆಲ್ಲ ಎಂಬುದೇ ಕಾಮುವಿನ ಒಟ್ಟಾರೆ ಸಾಹಿತ್ಯದ ಮೂಲದ್ರವ್ಯ. ಯಾಕೆಂದರೆ ಆತ ಬದುಕಿದ್ದೇ ಪ್ರಕ್ಷುಬ್ಧ ಕಾಲದಲ್ಲಿ! ನಾಜಿ ವಾದ ಹಾಗೂ ಎರಡನೇ ಮಹಾಯುದ್ಧದ ಸಮಯದಲ್ಲಿ ಯಃಕಶ್ಚಿತ್ ಹುಳುಗಳಂತೆ ಸಾಯುತ್ತಿದ್ದ ಮನುಷ್ಯರ ಜೀವಗಳಿಗೆ ಏನಾದರೂ ಬೆಲೆ ಇದೆಯೇ? ಈ ಪ್ರಶ್ನೆ ವಿಚಿತ್ರ ತೆರನಾದ ಚಡಪಡಿಕೆಗಳು ಹಾಗೂ ಮಾನಸಿಕ ಹಿಂಸೆಗಳಿಗೆ ಅನೇಕರನ್ನ ತಳ್ಳಿದ್ದ ಕಾಲವದು!  “…hopeless hope is what sustains us in difficult moments…”  — ಇದು ಕಾಮು ತನ್ನ ಜರ್ಮನ್ ಗೆಳೆಯನಿಗೆ ಬರೆದ ಪತ್ರದಲ್ಲಿ ಹೇಳುವ ಸಾಲುಗಳು (‘Resistance, Rebellion and Death’  ಎಂಬ ಪ್ರಬಂಧ ಸಂಕಲನ). ‘ವೈರಸ್’ ಸಿನಿಮಾದ ಪ್ರತಿ ಫ್ರೇಮ್ ಹಾಗೂ ಸನ್ನಿವೇಶಗಳು ಇದನ್ನೇ ಮಾರ್ದನಿಸುತ್ತವೆ. ಇಂಗ್ಲಿಷ್ ಸಬ್ ಟೈಟಲ್ಸ್‍ನೊಂದಿಗೆ ಅಮೇಜಾನ್ ಪ್ರೈಮ್‍ನಲ್ಲಿದೆ ‘ವೈರಸ್’ ಸಿನಿಮಾ. ತಪ್ಪದೇ ನೋಡಿ.

  • ವರುಣ್ ನಾಯ್ಕರ್‌

(ಉಪನ್ಯಾಸಕರು, ಯುವ ಬರಹಗಾರರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...