Homeಮುಖಪುಟಮತ ಹಾಕದಿದ್ದರೆ ಒಬ್ಬರು ಶಾಪ ಕೊಡುತ್ತಾರೆ, ಇನ್ನೊಬ್ಬರು ‘ನೋಡಿಕೊಳ್ಳುತ್ತಾರೆ’. ಅಕಟಕಟಾ ಉತ್ತರ ಪ್ರದೇಶವೇ...

ಮತ ಹಾಕದಿದ್ದರೆ ಒಬ್ಬರು ಶಾಪ ಕೊಡುತ್ತಾರೆ, ಇನ್ನೊಬ್ಬರು ‘ನೋಡಿಕೊಳ್ಳುತ್ತಾರೆ’. ಅಕಟಕಟಾ ಉತ್ತರ ಪ್ರದೇಶವೇ…

- Advertisement -
- Advertisement -

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಈ ಅಪಾಯಕಾರಿ ಬೆಳವಣಿಗೆಗಳ ಮೇಲೆ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡ ಸುದ್ದಿ ಇದುವರೆಗೂ ಬಂದಿಲ್ಲ. ಆದರೆ, ಈ ರೀತಿ ನಡೆದದ್ದು ನಿಜ ಎಂಬುದನ್ನು ಮಾಧ್ಯಮ ಸಂಸ್ಥೆಗಳು ವಿಡಿಯೋ ಪರಿಶೀಲಿಸಿ, ಸ್ಥಳೀಯ ವರದಿಗಾರರಿಂದಲೂ ಪರಿಶೀಲಿಸಿ ದೃಢಪಡಿಸಿವೆ. ಆ ಘಟನೆಗಳು ಏನು?

ಒಂದು,
ಭಾಜಪದ ಹಾಲಿ ಸಂಸತ್ಸದಸ್ಯ ಸಾಕ್ಷಿ ಮಹಾರಾಜ್ ತನ್ನ ಕ್ಷೇತ್ರದಲ್ಲಿ ಮತದಾರರಿಗೆ ಈ ರೀತಿ ಹೇಳುತ್ತಾರೆ. ‘ನಾನು ಸನ್ಯಾಸಿ. ನಾನು ನಿಮ್ಮ ಮನೆ ಬಾಗಿಲಿಗೆ ಭಿಕ್ಷೆ ಬೇಡಲು ಬಂದಿದ್ದೇನೆ. ಒಂದು ವೇಳೆ ನೀವು ಸನ್ಯಾಸಿಗೆ (ಭಿಕ್ಷೆ ನೀಡಲು) ನಿರಾಕರಿಸಿದರೆ, ನಿಮ್ಮ ಮನೆಯ ಎಲ್ಲಾ ಸಂತೋಷವನ್ನೂ ನಾನು ಕಸಿದುಕೊಂಡು ಬಿಡುತ್ತೇನೆ ಮತ್ತು ನಿಮಗೆ ಶಾಪ ಕೊಡುತ್ತೇನೆ’.
https://www.abplive.in/videos/im-a-sanyasi-will-curse-if-you-dont-vote-for-me-warns-bjp-mp-sakshi-maharaj-963543?fbclid=IwAR3m-tZPfMnrh_6rqP20P_f26181g9iijGAOxdcFcYVRB2IZIFeT4orSDt0

ಮನೆ ಬಾಗಿಲಿಗೆ ಬಂದ ಸನ್ಯಾಸಿಗಳಿಗೆ ಒಂದಲ್ಲಾ ಒಂದು ಕಾರಣಕ್ಕೆ ಭಿಕ್ಷೆ ನೀಡುವುದು ತಡವಾದರೆ ಅಥವಾ ನೀಡದಿದ್ದರೆ ಶಾಪ ಕೊಡುವ ಕಥೆಗಳು ಪುರಾಣಗಳಲ್ಲಿದ್ದು, ಅವು ಜನರ ಧಾರ್ಮಿಕ ನಂಬಿಕೆಗಳ ಭಾಗವಾಗಿವೆ. ಆ ಕಥೆಗಳಲ್ಲೂ ಸಹಾ ಮನೆಯೊಳಗಿನ ತನ್ನ ಕರ್ತವ್ಯವನ್ನು ಮಾಡುವುದರಲ್ಲಿ ನಿರತವಾಗಿರುವ ಮಹಿಳೆಯು ಇಂತಹ ಶಾಪದ ಬೆದರಿಕೆಗೆ ಹೆದರುವುದಿಲ್ಲ. ‘ನೀವು ದುರುಗುಟ್ಟಿ ನೋಡಿದರೆ ಸುಟ್ಟು ಹೋಗಲು ನಾನೇನು ಬಲಾಕ ಪಕ್ಷಿಯಲ್ಲ’ ಎಂದು ಹೇಳಿ ಸನ್ಯಾಸಿಯ ಅಹಂಅನ್ನು ಇಳಿಸುವ ಕಥೆಯೂ ಪುರಾಣಲ್ಲಿದೆ.
ಆದರೂ, ಸನ್ಯಾಸಿಗಳ ಶಕ್ತಿಯ ಮೇಲೆ ಇರುವ ಭಯ ಮತ್ತು ನಂಬಿಕೆಗಳನ್ನು ಬಳಸಿಕೊಂಡು ಸಾಕ್ಷಿ ಮಹಾರಾಜ್ ಹೇಳಿರುವ ಮಾತು ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಎರಡು,
ಫಿಲಿಬಿಟ್‍ನ ಸಂಸದೆ ಮನೇಕಾ ಗಾಂಧಿ ಈ ಸಾರಿ ಸುಲ್ತಾನ್‍ಪುರದಿಂದ ಸ್ಪರ್ಧಿಸುತ್ತಿದ್ದು, ತನ್ನ ಬಹಿರಂಗ ಸಭೆಯಲ್ಲಿ ಮುಸ್ಲಿಮರಿಗೆ ಈ ರೀತಿ ಹೇಳುತ್ತಾರೆ. ಅವರು ಈ ಮಾತನ್ನು ಹೇಳುವಾಗ ವೇದಿಕೆಯ ಮೇಲೂ ಮುಸ್ಲಿಂ ವ್ಯಕ್ತಿಗಳು ಇರುತ್ತಾರೆ ‘ನಾನು ಗೆಲ್ಲುತ್ತೇನೆ. ಆದರೆ, ಮುಸ್ಲಿಮರ ಬೆಂಬಲವಿಲ್ಲದೇ ಗೆದ್ದರೆ ನನಗೆ ಅಷ್ಟು ಸರಿ ಬರುವುದಿಲ್ಲ. ಆಗ ಒಂದು ವೇಳೆ ಮುಸ್ಲಿಮರು ಬಂದು ನನಗೆ ಏನಾದರೂ ಕೆಲಸ ಮಾಡಿಕೊಡಿ ಎಂದು ಕೇಳಿದರೆ, ನಾನು ಅದನ್ನು ಮಾಡಿಕೊಡುವುದಿಲ್ಲ. ಏಕೆಂದರೆ, ಇದು ಕೊಟ್ಟು ತೆಗೆದುಕೊಳ್ಳುವ ವ್ಯವಹಾರ. ನಾವೇನು ಮಹಾತ್ಮಾಗಾಂಧಿ ಮಕ್ಕಳಲ್ಲ. ನನಗೆ ನಿಮ್ಮ ಅಗತ್ಯವಿಲ್ಲ. ನಿಮಗೆ ನನ್ನ ಅಗತ್ಯವಿದೆ. ಫಲಿತಾಂಶ ಹೊರಬಂದ ಮೇಲೆ ಯಾವುದಾದರೂ ಬೂತ್‍ಗಳಲ್ಲಿ (ನನ್ನ ಪರವಾಗಿ) 50-100 ಮತಗಳಷ್ಟೇ ಬಂದಿದ್ದರೆ, ನನಗೆ ನೋವಾಗುತ್ತದೆ. ಇನ್ನು ನಿಮ್ಮಿಷ್ಟ’
https://www.thequint.com/news/politics/maneka-gandhi-mcc-threatens-muslims-to-vote-for-her?fbclid=IwAR2CH3FN61esmdrkjX0XrmIEt5_6rBNABtxSU9v5V6fik2gkW0jFgpfie8U

ತೆಲುಗು ಸಿನೆಮಾಗಳಲ್ಲಿನ ‘ಸೈಲೆಂಟ್ ವಿಲನ್’ ರೀತಿಯಲ್ಲಿ ನೀಡಿರುವ ಈ ಬೆದರಿಕೆಯನ್ನು ಮಿರರ್‍ನೌ ಪತ್ರಕರ್ತೆ ಫಾಯೇ ಡಿಸೌಜಾ, ನಟಿ ಸ್ವರಾ ಭಾಸ್ಕರ್ ಸೇರಿದಂತೆ ಹಲವರು ಟೀಕಿಸಿದ್ದಾರೆ. ಚುನಾವಣಾ ಆಯೋಗವು ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

 

ಆದರೆ, ಇಂತಹ ಸಾವಿರಾರು ಪ್ರಕರಣಗಳು ನಡೆಯುತ್ತಿದ್ದು, ಅವುಗಳಲ್ಲಿ ಶೇ.90ರಷ್ಟು ಪ್ರಕರಣಗಳು ಬಿಜೆಪಿ ನಾಯಕರಿಂದ ಆಗುತ್ತಿರುವುದು ವರದಿಯಾಗಿದೆ. ಅವುಗಳ ಮೇಲೆ ಗಂಭೀರ ಕ್ರಮವನ್ನು ಚುನಾವಣಾ ಆಯೋಗವು ತೆಗೆದುಕೊಳ್ಳುವ ಸಾಧ್ಯತೆ ಇದ್ದಂತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾನೂನುಬಾಹಿರ ಹತ್ಯೆ ಆರೋಪ : ಸಿಆರ್‌ಪಿಎಫ್ ಅಧಿಕಾರಿಗೆ ಶೌರ್ಯ ಚಕ್ರ ನೀಡಿರುವುದನ್ನು ಖಂಡಿಸಿದ ಕುಕಿ-ಝೋ ಗುಂಪುಗಳು

ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಅಧಿಕಾರಿಯೊಬ್ಬರು ತಮ್ಮ ಸಮುದಾಯದ ಹತ್ತು ಪುರುಷರ "ಕಾನೂನುಬಾಹಿರ ಹತ್ಯೆ"ಯಲ್ಲಿ ಭಾಗಿಯಾಗಿದ್ದಾರೆ ಎಂದು ಮಣಿಪುರದ ಕುಕಿ-ಝೋ ಸಂಘಟನೆಗಳು ಸೋಮವಾರ (ಜ.26) ಆರೋಪಿಸಿದ್ದು, ಆ ಅಧಿಕಾರಿಗೆ ಶೌರ್ಯ ಚಕ್ರ...

ಉತ್ತರ ಪ್ರದೇಶ: ಸೋನಭದ್ರಾದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ದುಷ್ಕರ್ಮಿಗಳು 

ಸೋನಭದ್ರ: ರಾಯ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಕ್ರವಾರ್ ಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸೋಮವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಕ್ರಾವರ್ ಗ್ರಾಮದ ಪಂಚಾಯತ್ ಕಟ್ಟಡದ ಬಳಿ...

ಬುಡಕಟ್ಟು ರೈತರ ಬೃಹತ್ ಮೆರವಣಿಗೆ: ಬೇಡಿಕೆಗಳ ಕುರಿತು ಸಿಪಿಐ(ಎಂ)-ಎಐಕೆಎಸ್ ನಿಯೋಗದೊಂದಿಗೆ ಮುಖ್ಯಮಂತ್ರಿ ಫಡ್ನವೀಸ್ ಮಾತುಕತೆ

ಬಾಕಿ ಇರುವ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ(ಎಂ)-ಎಐಕೆಎಸ್ ನೇತೃತ್ವದಲ್ಲಿ ನಾಸಿಕ್‌ನಿಂದ ಮುಂಬೈಗೆ ಸಾವಿರಾರು ರೈತರು ಮತ್ತು ಬುಡಕಟ್ಟು ನಿವಾಸಿಗಳು ನಡೆಸಿದ ದೀರ್ಘ ಮೆರವಣಿಗೆ ಇಂದು ಜನವರಿ 27 ರಂದು ಮುಂಬೈನ ಮಂತ್ರಾಲಯ...

‘ಭಾರತದಲ್ಲಿ ಬಿಜೆಪಿ ದಾಳಿಯನ್ನು ಎದುರಿಸಲು ‘ದೀದಿ’ಗೆ ಮಾತ್ರ ಸಾಧ್ಯ’: ಅಖಿಲೇಶ್ ಯಾದವ್ 

ಕೋಲ್ಕತ್ತಾ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ "ಬಿಜೆಪಿಯ ದಾಳಿಯನ್ನು ಎದುರಿಸುವಲ್ಲಿನ ಧೈರ್ಯ"ಕ್ಕಾಗಿ ಟಿಎಂಸಿ ಮುಖ್ಯಸ್ಥೆಯನ್ನು ಶ್ಲಾಘಿಸಿದ್ದಾರೆ. ಉತ್ತರ ಪ್ರದೇಶದ ಮಾಜಿ...

ಬದರಿನಾಥ್-ಕೇದಾರನಾಥ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶ ನಿಷೇಧ ಸಾಧ್ಯತೆ

ಉತ್ತರಾಖಂಡದ ಹಿಮಾಲಯದ ಮಡಿಲಲ್ಲಿ ನೆಲೆಗೊಂಡಿರುವ ಶತಮಾನಗಳಷ್ಟು ಹಳೆಯದಾದ ಬದರಿನಾಥ್ ಮತ್ತು ಕೇದಾರನಾಥ ದೇವಾಲಯಗಳಿಗೆ ಶೀಘ್ರದಲ್ಲೇ ಹಿಂದೂಗಳಿಗೆ ಮಾತ್ರ ಪ್ರವೇಶ ಅನುಮತಿಸಬಹುದು. ಚಾರ್ ಧಾಮ್ ತೀರ್ಥಯಾತ್ರೆಯ ಭಾಗವಾಗಿರುವ ಎರಡು ದೇವಾಲಯಗಳಿಗೆ ಹಿಂದೂಯೇತರರನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗುವುದು...

ವಿಬಿ-ಜಿ ರಾಮ್ ಜಿ ರದ್ದಾಗಿ ನರೇಗಾ ಪುನಃಸ್ಥಾಪನೆಯಾಗುವವರೆಗೆ ಹೋರಾಟ: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದ್ದು, ವಿಬಿ-ಜಿ ರಾಮ್ ಜಿ ಕಾಯ್ದೆ ರದ್ದಾಗಿ ನರೇಗಾ ಪುನಃಸ್ಥಾಪನೆಯಾಗುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಗಳವಾರ (ಜ.27) ಬೆಂಗಳೂರಿನ ಫ್ರೀಡಂ...

ಯುಸಿಸಿಯಲ್ಲಿ 18 ಬದಲಾವಣೆ ಮಾಡಿದ ಉತ್ತರಾಖಂಡ್ ಸರ್ಕಾರ; ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಜಾರಿಗೆ

ವಿವಾಹ, ವಿಚ್ಛೇದನ, ಲಿವ್-ಇನ್ ಸಂಬಂಧಗಳು ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸುವ ಗುರಿಯನ್ನು ಹೊಂದಿರುವ ಸುಮಾರು ಹದಿನೆಂಟು ಬದಲಾವಣೆಗಳನ್ನು ಪರಿಚಯಿಸುವ ಮೂಲಕ ಏಕರೂಪ ನಾಗರಿಕ ಸಂಹಿತೆಯ ಹಲವಾರು ನಿಬಂಧನೆಗಳನ್ನು ಮಾರ್ಪಡಿಸಲು ಉತ್ತರಾಖಂಡ ಸರ್ಕಾರ...

ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಮಹಾತ್ಮಗಾಂಧಿ ಹೆಸರು: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಮಹಾತ್ಮ ಗಾಂಧಿಯವರ ಹೆಸರಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಕೇಂದ್ರ ಸರ್ಕಾರ ನರೇಗಾ ಬದಲಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್‌ ಜಿ ಕಾಯ್ದೆ ವಿರುದ್ದ ಬೆಂಗಳೂರಿನ ಸ್ವಾತಂತ್ರ್ಯ...

ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಇಬ್ಬರು ಬುಡಕಟ್ಟು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ

ಗಿರಿದಿಹ್: ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯಲ್ಲಿ ಇಬ್ಬರು ಬುಡಕಟ್ಟು ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಭಾನುವಾರ ರಾತ್ರಿ ಪಿರ್ತಾಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಲಾದಿಹ್ ಪ್ರದೇಶದಲ್ಲಿ ಈ ಘಟನೆ...

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ : ಪ್ರಬಲ ಜಾತಿಯವರಿಂದ ತೀವ್ರ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಪ್ರಬಲ ಜಾತಿಯವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೊಸ ನಿಯಮಗಳ 'ಜಾತಿ ಆಧಾರಿತ ತಾರತಮ್ಯ' ಎಂಬುವುದರ...