Homeಅಂಕಣಗಳುರಾಮ ಕೃಷ್ಣ ಕಪ್ಪುಗಿದ್ರಲ್ಲವ..

ರಾಮ ಕೃಷ್ಣ ಕಪ್ಪುಗಿದ್ರಲ್ಲವ..

- Advertisement -
- Advertisement -

ಸಿಂಗಾಪುರದ ಮುಖಾಂತರ ಯೂರೋಪ್ ಪ್ರವಾಸ ಮುಗಿಸಿ ಕರ್ನಾಟಕಕ್ಕೆ ಬಂದ ಕುಮಾರಣ್ಣ ವಿಮಾನದಿಂದ ಇಳಿಯುವ ಕೊನೆ ಮೆಟ್ಟಿಲಲ್ಲೇ ಕರ್ನಾಟಕ ಸರ್ಕಾರದ ವರ್ಗಾವಣೆಯಲ್ಲಿ ಒಂದು ಸಾವಿರ ಕೋಟಿ ವ್ಯವಹಾರ ನಡೆದಿದೆ ಎಂದಿದ್ದಾರಲ್ಲಾ. ಸಿಂಗಾಪುರದಲ್ಲಿದ್ದ ಕುಮಾರಣ್ಣನಿಗೆ ಈ ಕಾಂಗ್ರೆಸ್ ಸರಕಾರದ ವರ್ಗಾವರ್ಗಿ ವಿವರ ಹೇಗೆ ಗೊತ್ತಾಯಿತು? ಕುಮಾರಣ್ಣನ ಕಡೆಯ ಅಧಿಕಾರಿಗಳು ಮತ್ತು ಅಭಿಮಾನಿಗಳು ಇನ್ನೆಂತಹ ಜಾಲ ಹೆಣೆದಿರಬಹುದು? ಜೊತೆಗೆ ಪೆನ್‌ಡ್ರೈವ್ ಬೇರೆ ಕೆಲಸ ಮಾಡುತ್ತಿದೆ. ಹೇಗಾದರಾಗಲಿ ಹುಷಾರಾಗಿರಬೇಕು ಎಂದು ಸಿದ್ದು ಸಂಪುಟದ ಸಚಿವರು ಚಿಂತಿಸುತ್ತಿರುವಾಗಲೇ, ಮಂತ್ರಿಗಳಲ್ಲಿ ಕೆಲವು ಚಾಲಾಕಿಗಳು ಕುಮಾರಣ್ಣ ಎರಡು ಬಾರಿ ಮುಖ್ಯಮಂತ್ರಿಯಾಗಿ ವರ್ಗಾವರ್ಗಿಯ ದಂಧೆ ಗ್ರಹಿಸಿದವರು, ಅಲ್ಲದೆ ಅಧಿಕಾರಕ್ಕೆ ಬಂದ ಆರಂಭದಲ್ಲೇ ಜನಾರ್ದನ ರೆಡ್ಡಿಯಿಂದ ವಸೂಲಿ ಮಾಡಿ ಅರಗಿಸಿಕೊಂಡವರು; ಈ ಅಂದಾಜಿನಲ್ಲೇ ಅವರು ಈ ಸರಕಾರದ ವಿರುದ್ಧ ಒಂದು ಸಾವಿರ ಕೋಟಿ ವ್ಯವಹಾರದ ದೂರನ್ನ ಮಾಡಿದ್ದಾರೆ. ಈ ವಿಷಯದಲ್ಲಿ ಅವರನ್ನ ಹಿಟ್ ಅಂಡ್ ರನ್ ಕೇಸಿಗೆ ಸೇರಿಸಿ ಮಾತನಾಡುವುದಕ್ಕಿಂತ ಕುಮಾರಣ್ಣನ ಅಂದಾಜಿಗೆ ಸಿಗದಂತೆ ವ್ಯವಹಾರ ಮಾಡಬೇಕಿದೆ. ಏಕೆಂದರೆ ಕಳೆದ ಚುನಾವಣೆಯಲ್ಲಿ ಮಾಡಿದ ಸಾಲ ಹಾಗೇ ಇದೆ ಎಂದು ಮಾತನಾಡಿಕೊಂಡರಂತಲ್ಲಾ, ಥೂತ್ತೇರಿ.

*****

ಕರ್ನಾಟಕ ಈವರೆಗೆ ಕಂಡ ಅತ್ಯಂತ ದುರ್ಬಲ ಗೃಹ ಸಚಿವರಾಗಿದ್ದ ಅರಗ ಜ್ಞಾನೇಂದ್ರ ಆಡಿರುವ ಮಾತೊಂದು ಇಡೀ ಕರ್ನಾಟಕದಲ್ಲೇ ಅಲ್ಲೊಲಕಲ್ಲೋಲವುಂಟುಮಾಡಿದೆಯಲ್ಲಾ. ಆರೆಸ್ಸ್ಸೆನ ಕಟ್ಟಾಳು ಮತ್ತು ಎಬಿವಿಪಿಯ ’ಧೀಮಂತ’ ವಿದ್ಯಾರ್ಥಿ, ಬಿಜೆಪಿಯ ’ಧೀಮಂತ’ ನಾಯಕನಾಗಿ ಬೆಳೆದು ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡರು ಮತ್ತು ಕಿಮ್ಮನೆ ರತ್ನಾಕರ್ ಪ್ರತಿನಿಧಿಸಿದ ತೀರ್ಥಹಳ್ಳಿಯಿಂದ ಗೆದ್ದುಬಂದು ಗೃಹ ಸಚಿವರೂ ಆಗಿದ್ದ ಜ್ಞಾನೇಂದ್ರ ಅರೆಗ್ನಾನಿಯಾಗಿ ಬದಲಾದದ್ದು ಯಾವಾಗ ಎಂದು ಯೋಚಿಸಿ ಪೋನ್ ಮಾಡಲಾಗಿ ರಿಂಗಾಯ್ತು

ರಿಂಗ್ ಟೋನ್, “ನಮಸ್ತೆ ಸಧಾವತ್ಸಲೇ ಮಾತೃಭೂಮಿ…”

“ಹಲೋ ಯಾರು?”

“ನಾನು ಸಾರ್ ನಿಮ್ಮ ಅಭಿಮಾನಿ.”

“ಅಭಿಮಾನಿ ಯಾರ್ರಿ?”

“ಅದು ಈ ಕ್ಷಣದ ಅಭಿಮಾನಿ ಸಾ. ಖರ್ಗೆಗೆ ಸರಿಯಾಗೇಳಿದ್ದಿರಿ ಬುಡಿ ಸಾ.”

“ನಾನೇನು ಹೇಳಿಲ್ಲ ಕಂಡ್ರಿ. ನನಿಗಾಗದವರು ಸುಳ್ಳು ಹೇಳ್ತ ಅವುರೆ. ಮಾಧ್ಯಮದವರು ಅದನ್ನೆ ನಂಬಿದಾರೆ.”

“ಅದೇನಾರ ಆಗ್ಲಿ, ಖರ್ಗೆ ಬಣ್ಣದ ಬಗ್ಗೆ ಹೇಳಿ, ನೋಡಿ ಸೀದು ಕರುಕಲಾಗ್ಯವುರೆ ಅಂದಿರದು ಸರಿ ಸಾ.”

“ರೀ ನಾನು ಅಂಗಂದೇಯಿಲ್ಲ ಕಂಡ್ರಿ.”

“ಅಂಗನ್ನಬಾರ್ದು ಸಾರ್. ಜಮೀರಹಮದ್ ತರ ಸಮರ್ಥಿಸಿಕೋಬೇಕು.”

“ಅವುರು ಏನನ್ನು ಸಮರ್ಥಿಸಿಕೊಂಡ್ರು ರೀ?”

“ಕುಮಾರಸ್ವಾಮಿ ಬಣ್ಣದ ಬಗ್ಗೆ ಆಡಿಕೊಳ್ಳುವಾಗ, ನಾನು ಕುಳ್ಳ ಎಂದು ಹೇಳ್ಕಂಡವರೆ.”

“ಅವುರ್‍ಯಾಕಂಗಂದರು?”

“ಕೆಲವರನ್ನ ಆಡಿಕೊಬೇಕಾದ್ರೆ ಕೆಲವು ಸಾರಿ ನಮ್ಮನ್ನ ಅಣಕಿಸಿಕೊಬೇಕಾಗತ್ತೆ, ಅದ್ಕೆ ಜಮೀರು ನಾನು ಕುಳ್ಳ ಸತ್ಯ ಅಲ್ಲವ ಅಂದು ಕುಮಾರಸ್ವಾಮಿ ಬಗ್ಗೆ ಹೇಳಿದ್ದು ನಿಜ ಅಲ್ಲವಾ” ಅಂದವರೆ ಸಾರ್.

“ಅವುರನಾರ ಅನ್ಲಿ, ನಾನು ಅನ್ನದೇಯಿರೊ ಮಾತನ್ನ ತಗೊಂಡು ರಾಜಕೀಯ ಮಾಡಿದಾರಲ್ರೀ.”

“ಹಂಗಿದ್ರೆ ನೀವು ಹಿಂಗೆ ಮಾಡಬಹುದು, ಅದು ನನ್ನ ಮಾತಲ್ಲ. ಮಿಮಿಕ್ರಿ ದಯಾನಂದರನ್ನ ಹಿಡಿದು ನನ್ನಂಗೆ ಮಾತಾಡ್ಸಿದಾರೆ. ನಾನು ಖರ್ಗೆ ಅಭಿಮಾನಿ ಅವರ ಕಾಲಿನ ಧೂಳಿಗೂ ಸಮ ಅಲ್ಲ. ಅಂತ ಪ್ರೆಸ್ ಸ್ಟೇಟುಮಂಟು ಕೊಡಿ ಸಾರ್.”

“ಈಗಾಗ್ಲೆ ಕೊಟ್ಟಿದ್ದಿನಿ ಕಂಡ್ರಿ.”

“ಅದರಲ್ಲೇ ಸಿಗಾಯ್ಕಂಡಿದ್ದಿರಲ್ಲ ಸಾರ್?”

“ಎಲ್ಲಿ ಸಿಗಾಯ್ಕಂಡಿದ್ದಿನ್ರಿ?”

“ಖರ್ಗೆಯವರನ್ನ ಟೀಕೀಸಿದ್ರೆ ನಾನು ಯಾವ ಶಿಕ್ಷೆ ಬೇಕಾದ್ರು ಅನುಭವುಸ್ತಿನಿ ಅಂದಿದ್ದಿರಿ.”

“ಸರಿ ಅಂದಿಲವಲ್ಲಾ…”

“ಅಂದಿರದ ಸಾಬೀತು ಮಾಡಿಕಂಡಿದ್ದಿರಿ.”

“ಹೇಗೆ ಅಂತ?”

“ನೀವು ಯಾವ ಮಾತನ್ನ ಆಡದೆ ಖರ್ಗೆ ಹೆಸರು ಹೆಂಗೆ ಬಂತು. ಇದ್ದಕ್ಕಿದ್ದಂಗೆ ಅವರನ್ನ ಹೊಗಳೊ ಕಾರಣ ಏನು? ವೈಯಕ್ತಕವಾಗಿ ನಿಂದಿಸಿ ಕೀಳುಮಟ್ಟದ ರಾಜಕಾರಣ ಮಾಡಲ್ಲ ಅಂದು ಅದ್ನೇ ಮಾಡಿದ್ದಿರಲ್ಲಾ ಸಾರ್. ಮನುಷ್ಯನ ಬಣ್ಣ ಆಕಾರ ಆಡಿಕಳದು ಅಪರಾಧ, ಅವನ್ನ ನೀವು ಮಾಡಬಾರದಿತ್ತು.”

“ಖಂಡಿತ ಮಾಡಿಲ್ಲ ಕಂಡ್ರಿ ನನ್ನ ಬಾಯಲ್ಲಿ ಆ ಮಾತೇ ಬರಲಿಲ್ಲಾ.”

“ಸರಿ, ಮಾಧ್ಯಮದ ಎದುರಿನ ಮೈಕಿನಲ್ಲಿ ಈ ಶಬ್ದ ಬಂತು, ನಿಮ್ಮ ತುಟಿ ಕೂಡ ಚಲಿಸಿವೆ ಸಾರ್.”

“ಅದೇ ಹೇಳಿದೆನಲ್ಲಾ, ನೀವೆ ಹೇಳಿದಂಗೆ ಮಿಮಿಕ್ರಿ ಕಲಾವಿದರ ಬಳಸಿ ಏನು ಬೇಕಾದ್ರು ಮಾಡಬಹುದು.”

“ಅದನ್ನ ಕೋರ್ಟಲ್ಲಿ ಸಾಬೀತು ಮಾಡ್ಸಿ. ಸಾರ್ ಹ್ಯಾಗಿದ್ರು ಬಿಜೆಪಿಗಳಿಗೆ ಕೋರ್ಟ್ ಅಂದ್ರೆ ತುಂಬಾ ಇಷ್ಟ. ನೀವು ಕೋರ್ಟಲ್ಲಿ ನಿಮ್ಮನ್ನ ಸಮರ್ಥಿಸಿಕೊಳ್ಳಬಹುದು; ರಾಹುಲಗಾಂಧಿ ನೋಡಿ, ತಪ್ಪು ಮಾಡಿಲ್ಲ, ತಪ್ಪು ಅಂತ ಒಪ್ಪಿಗಳಲ್ಲ ಅಂದ್ರು. ಅವರ ಪ್ರಾಮಾಣಿಕ ಮಾತಿಗೆ ಕೋರ್ಟ್ ಮನ್ನಣೆ ಕೊಟ್ಟು ಅವರ ಶಿಕ್ಷೆಗೆ ಸ್ಟೇ ತಂತು ಅಲ್ಲವ?”

“ಈಗ ನಾನೇನು ಮಾಡ್ಲಿ?”

“ಏನಿಲ್ಲ ಖರ್ಗೆಯವರ ಬಣ್ಣದ ಬಗ್ಗೆ ಮಾತಾಡಿದ್ದೀನಿ. ಯಾಕಂದ್ರೆ, ನಮ್ಮ ಶ್ರೀರಾಮಚಂದ್ರ ಕಪ್ಪಗಿದ್ದ, ಹನ್ನೆರಡು ವರ್ಷ ಅರಣ್ಯದಲ್ಲಿ ಅಲದೂ ಕಾಯಿ ಕುಸುರು ತಿಂದು ಕರಕಲಾಗಿದ್ದ. ನಮ್ಮ ಖರ್ಗೆ ಸಾಹೇಬರಿಗೆ ಕಚ್ಛೆ ಹಾಕಿ ಕೈಗೆ ಬಿಲ್ಲು ಬಾಣ ಕೊಟ್ರೆ ಥೇಟ್ ಶ್ರೀರಾಮಚಂದ್ರನಂಗೇ ಕಾಣ್ತಾರೆ. ಆ ವೇಶದಲ್ಲಿ ಅವರ ಕಾಲಿಗೆ ಬೀಳಂಗಾಗತ್ತೆ; ಇನ್ನ ನಮ್ಮ ಕೃಷ್ಣನೂ ಕಪ್ಪಗಿದ್ದ. ಇವರಿಬ್ಬರು ನಮ್ಮ ಬಿಜೆಪಿ ಪಾರ್ಟಿಗೆ ಎರಡು ಚಕ್ರ ಇದ್ದಂಗೆ; ಅದರಲ್ಲೂ ಕೃಷ್ಣ ದನ ಕಾಯ್ತಾ ಕಾಯ್ತ ಕಪ್ಪಗೆ ಕರಕಲಾಗಿದ್ದ. ನಮ್ಮ ಪುರೋಹಿತಶಾಹಿಗಳು ಕಪ್ಪು ಬಣ್ಣನ ಒಪ್ಪದೇಯಿರದ್ರಿಂದ ಅವುರಿಬ್ಬರಿಗೂ ನಾಟಕದಲ್ಲಿ ಮತ್ತು ಸಿನಿಮಾದಲ್ಲಿ ನೀಲಿಬಣ್ಣ ಬಳಿತರೆ. ಈ ಭೂಮಿ ಮೇಲೆ ಯಾರಾದ್ರು ನೀಲಿ ಬಣ್ಣಕ್ಕಿದ್ದಾರ? ಆದ್ರಿಂದ ನಮ್ಮ ಪುರೋಹಿತಶಾಹಿಗಳು ಕಪ್ಪುಬಣ್ಣ ಒಪ್ಪದೆ ನೀಲಿ ಬಣ್ಣ ಬಳದು ನಾವೆಲ್ಲಾ ಕಪ್ಪುಬಣ್ಣ ದ್ವೇಷ ಮಾಡಂಗೆ ಮಾಡಿದಾರೆ. ಆ ಕಾರಣಕ್ಕೆ ನನ್ನ ಬಾಯಿ ತಪ್ಪಿ ಖಂಡ್ರೆ ಖರ್ಗೆ ಕುರಿತು ಮಾತನಾಡುವಾಗ, ಆ ಬಯಲುಸೀಮೆ, ಗುಲಬರ್ಗಾ, ರಾಯಚೂರು, ಬಳ್ಳಾರಿ ಕಡೆಯೆಲ್ಲ ಬಿಸಲಲ್ಲಿ ಬೆಂದು ಹ್ಯಂಗೆ ಕರಲಾಗ್ಯವುರೆ ನೋಡಿ ಅಂದೆ ಸಾ, ಅಂತ ಹೇಳಿ.”

“ನಿಮ್ಮ ಮಾತ ಕೇಳಿದ್ರೆ ಜೈಲಿಗೋಗಬೇಕಾಯ್ತದೆ.”

“ಮತ್ತೇನು ಮಾಡ್ತಿರಿ ಸಾರ್?”

“ನಾನು ಅಂದೇಯಿಲ್ಲ ಅಂತಿನಿ, ಮಾತು ನಂದಲ್ಲ ವಾಯ್ಸು ನಂದಲ್ಲ ಅಂತಿನಿ.”

“ಥೂತ್ತೇರಿ.”


ಇದನ್ನೂ ಓದಿ: ಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...