Homeಅಂಕಣಗಳುಮೋದಿಗೂ ಅರ್ಜುನನಿಗೂ ಯಾವ ಸಂಬಂಧ!

ಮೋದಿಗೂ ಅರ್ಜುನನಿಗೂ ಯಾವ ಸಂಬಂಧ!

- Advertisement -
- Advertisement -

ಸಿದ್ದರಾಮಯ್ಯನವರ ಸರಕಾರ ರಚನೆಯಾಗಿ ತಿಂಗಳೊಪ್ಪತ್ತಾಗುವಷ್ಟರಲ್ಲಿ ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ವರ್ಗಾವಣೆಗೆ 30 ಲಕ್ಷ ಲಂಚ ತೆಗೆದುಕೊಳ್ಳಲಾಗುತ್ತಿದೆಯೆಂದೂ ಕುಮಾರಸ್ವಾಮಿಯವರು ಬಾಂಬು ಸಿಡಿಸಿದ್ದಾರಲ್ಲಾ. ಈ ಬಗ್ಗೆ ಕಾಂಗೈ ಪಾಳಯದಲ್ಲಿ ದೊಡ್ಡ ಚರ್ಚೆಯೇ ನಡೆದು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದಕ್ಕೆ ಹಲವು ವರ್ಷಗಳ ಮೊದಲು ದೇವೇಗೌಡರ ಹದಿನೆಂಟು ತಿಂಗಳು ಮುಖ್ಯಮಂತ್ರಿಯಾಗಿದ್ದರು. ಆಗ ರೇವಣ್ಣನಿಗೆ ಮತ್ತು ಕುಮಾರಣ್ಣನಿಗೆ ದೇವೇಗೌಡರ ಸನಿಹದಲ್ಲಿ ಸುಳಿದಾಡುವ ವಿಷಯದಲ್ಲಿ ಜಗಳವೇ ಆಗಿತ್ತು. ಅದರಲ್ಲೂ ರೇವಣ್ಣ ಮುಖ್ಯಮಂತ್ರಿ ಇಲ್ಲದ ಸಮಯ ನೋಡಿ ಅವರ ಕುರ್ಚಿಯಲ್ಲಿ ಕುಳಿತು ಗೌಡರಂತೆ ಅತ್ತ ಇತ್ತ ನೋಡಿದ್ದು ಸದನದಲ್ಲಿ ಚರ್ಚೆಗೆ ಬಂದಿತ್ತು. ಮುಂದೆ ದೇವೇಗೌಡರು ಪ್ರಧಾನಿಯಾದಾಗಲೂ ಅವರ ಬೆಂಗಾವಲಿನಂತೆ ಕುಮಾರಣ್ಣ ಸುಳಿದಾಡುತ್ತಿದ್ದರು, ಆದ್ದರಿಂದ ಒಬ್ಬ ಮಾಜಿ ಮುಖ್ಯಮಂತ್ರಿ ಮಗನ ದೂರನ್ನು ಅಷ್ಟು ಸುಲಭವಾಗಿ ತೆಗೆದುಹಾಕಲಾಗುವುದಿಲ್ಲ. ಅವರ ಅನುಭವದ ಮಾತನ್ನು ಅಲ್ಲಗಳೆಯಲಾಗುವುದಿಲ್ಲ ಅದರಲ್ಲೂ ಕುಮಾರಣ್ಣ ತಮ್ಮ ಹುಡುಗರನ್ನು ಸಿದ್ದರಾಮಯ್ಯನವರ ಸುತ್ತ ಬಿಟ್ಟಿದ್ದಾರೆ. ಸದ್ಯಕ್ಕೆ ಆಡಳಿತಾತ್ಮಕವಾದ ದೂರು ಟೀಕೆಗಳಿಗಿಂತ ಕುಮಾರಣ್ಣ ಇಂತಹವುಗಳನ್ನ ಹುಡುಕಿ ಕಡ್ಡಿಗೀರುವುದರಿಂದ ತಾವೆಲ್ಲಾ ಹುಷಾರಾಗಿರಬೇಕೆಂದು ಕಾಂಗೈ ಶಾಸಕರು ಚರ್ಚಿಸಿದರಂತಲ್ಲಾ, ಥೂತ್ತೇರಿ.

*****

ಕರ್ನಾಟಕದ ವಿಧಾನಸೌಧದ ಚರಿತ್ರೆಯಲ್ಲಿ ವಿರೋಧಪಕ್ಷದ ನಾಯಕನಿಲ್ಲದೆ ಸದನ ಆರಂಭಗೊಂಡು ರಾಜ್ಯಪಾಲರು ಭಾಷಣ ಮಾಡಿದ್ದು, ಸದನ ನಡೆದದ್ದು ಇದೇ ಮೊದಲಿರಬೇಕು. ಸಂವಿಧಾನ ವಿರೋಧಿಗಳಾದವರಿಗೆ ಇದೇನು ಅವಮಾನದ ಪ್ರಸಂಗವಲ್ಲ. ಹಾಗೆ ನೋಡಿದರೆ ಬಿಜೆಪಿಗಳ ಪರಿವಾರಕ್ಕೆ ಅವಮಾನವೇ ಆಗುವುದಿಲ್ಲ; ಬೇಕಾದರೆ ಕೇಳಿ ನೋಡಿ. ಇನ್ನು ಈ ಕುರಿತು ಮಾಧ್ಯಮದ ಮಂದಮತಿಗಳು ಹೇಗಿದ್ದಾರೆಂದರೆ, ಅವರಿಗೂ ಅದೊಂದು ಸುದ್ದಿಯಲ್ಲ. ಸಿದ್ದಾರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಮುಖ್ಯಮಂತ್ರಿ ಆಯ್ಕೆ ಸಮಯದಲ್ಲಿ ಜಟಾಪಟಿ ಇದ್ದಾಗ, ಕಡ್ಡಿ ರಂಗ ಹನುಮ ಜೊಷಿ ಪಾಸಿಗಳು ಟಿ.ವಿಯೊಳಗಿಂದ ಈಚೆಗೆ ನೆಗೆಯುವಂತಾಡಿದರು. ಇದೇ ಜನ ಎಡೂರಪ್ಪ ಸಂಪುಟ ರಚಿಸದೆ ಪ್ರವಾಹದ ಜಾಗಕ್ಕೆ ಒಬ್ಬರೇ ಹೋದಾಗ ಕಡುಬು ತುಂಬಿದ ಬಾಯಿ ಮಾಡಿಕೊಂಡಿದ್ದರು. ಇದಕ್ಕಿಂತ ಮುಖ್ಯವಾಗಿ ಆಕಸ್ಮಾತ್ ರೈತನಿಗೆ ಲಾಟರಿ ಹೊಡೆದಂತೆ ಟೊಮೊಟೊ ಕೆ.ಜಿ.ಗೆ ನೂರು ರೂಪಾಯಿ ಏರಿದ ಕೂಡಲೇ ರಕ್ತಕಾರುವುದಕ್ಕೆ ಶುರುಮಾಡಿದರು. ಆದರೆ ಇವರ ಕಣ್ಣೆದುರಿಗೆ ಡೀಸೆಲ್ ಪೆಟ್ರೋಲ್ ಬೆಲೆ ವಿಷದಂತೆ ಏರಿದ್ದು ಇವರಿಗೆ ದೊಡ್ಡ ಸುದ್ದಿಯೇ ಆಗಲಿಲ್ಲವಲ್ಲಾ. ಅಷ್ಟಕ್ಕೂ ಈ ಚಾನಲ್‌ಗಳು ಮನೆಯ ಹಟ್ಟಿ ಬಾಗಿಲಲ್ಲಿ ಕುಳಿತು ವದರುವ ವ್ಯಕ್ತಿಯಂತಾಗಿರುವುದು ಹಳೆಯ ಸುದ್ದಿಯಂತಲ್ಲಾ, ಥೂತ್ತೇರಿ.

*****

ಕೆ.ಎಸ್.ಆರ್.ಟಿ.ಸಿ ಆದಾಯ ಏರಿಕೆಯಾಗಿದೆ. ಮಹಿಳಾ ಪ್ರಯಾಣಿಕರ ಹಣವನ್ನು ತುಂಬಿಕೊಟ್ಟಿರುವ ಸರಕಾರದ ಬಗ್ಗೆ ಇಲಾಖೆ ಸಂತಸ ವ್ಯಕ್ತಪಡಿಸಿದೆ. ತಮ್ಮ ಜೀವಮಾನವಿಡೀ ಎಲ್ಲೂ ಹೋಗದೆ ಅಡುಗೆ ಮನೆ, ಕೊಟ್ಟಿಗೆ ಮತ್ತು ಹೊಲ, ತೋಟದ ದಾರಿ ಸವೆಸಿದ್ದ ಮಹಿಳೆಯರು ಮೊದಲಬಾರಿಗೆ ಕಳಸ, ಹೊರನಾಡು, ಸುಬ್ರಹ್ಮಣ್ಯ, ಧರ್ಮಸ್ಥಳ, ಮುರುಡೇಶ್ವರ, ಮಹದೇಶ್ವರಕ್ಕೆ ದಾಳಿಯಿಡುತ್ತಿದ್ದಾರೆ. ಸರಕಾರದ ಕಡೆಯಿಂದ ಅವರ ಕಡೆಗೆ ಒಳ್ಳೆ ಗಾಳಿ ಬೀಸಿದ್ದರಿಂದ ಕೆಲವರಿಗೆ ಸಹಜವಾಗಿ ಹೊಟ್ಟೆಗೆ ಸುಣ್ಣ ಹುಯ್ದಂತಾಗಿದೆ. ಮಹಿಳೆಗೆ ಸಿಗುವ ಒಂದು ಸಣ್ಣ ಸ್ವಾತಂತ್ರ್ಯ ಮತ್ತು ಸವಲತ್ತಿಗೆ ಕಂಗಾಲಾಗುವ ಕೆಲ ಪುರುಷ ಮೃಗಗಳು ಮಹಿಳೆಯರು ಬಸ್ಸತ್ತುವುದನ್ನು ಹತ್ತಲು ಹೋಗಿ ಬಾಗಿಲನ್ನೇ ಮುರಿದುದನ್ನು ದಿನವಿಡೀ ತೋರಿಸುತ್ತಿವೆ ಈ ಮಾಧ್ಯಮಗಳು. ಇತ್ತ ಕೆಲವು ಕಮಲ ಪಾರ್ಟಿಯರು ಹೆಂಗಳೆಯರನ್ನು ಹೀಗಳೆಯುತ್ತಿದ್ದಾರೆ. ಇಂತಹ ಮಹಿಳೆಯರು ಬಸ್ಸು ಹತ್ತಿದ ಕೂಡಲೆ ಟಿಕೆಟ್ ತೆಗೆದುಕೊಂಡರೆ ಎಷ್ಟು ಚಂದ ಅಲ್ಲವೆ ಎಂದು ತಮ್ಮ ಬಸ್ಸಿನಲ್ಲಿ ಫ್ರೀಯಾಗಿ ಓಡಾಡುವ ಮಹಿಳೆಯರು ಉತ್ತರವಾಗಿದೆಯಲ್ಲಾ, ಥೂತ್ತೇರಿ.

*****

ಇದನ್ನೂ ಓದಿ: ತುರ್ತುಪರಿಸ್ಥಿತಿಯ ಗರ್ಭದಲ್ಲೇ ಕಮಲ ಅರಳಿತಂತಲ್ಲಾ!

 

ಆಳುವ ಸರಕಾರವನ್ನು ಟೀಕಿಸುವುದು ವಿರೋಧ ಪಕ್ಷದ ಕೆಲಸ. ವಿರೋಧಿಗಳ ಮಾತುಗಳನ್ನ ಕೇಳಿಸಿಕೊಳ್ಳಬೇಕಾದರೆ ಅವರು ಘನತೆಯಿಂದಲೇ ಆರೋಪಿಸಬೇಕು. ಆದರೀಗ ವಿರೋಧಿಗಳು ಆಡುವ ಮಾತಿಗೆ ಜನಗಳು ಕನಿಕರದಿಂದ ಲೊಚಗರಿಯುತ್ತಿದ್ದಾರಲ್ಲಾ. ಉದಾಹರಣೆಗೆ ಅಕ್ಕಿ ಕೊಡಿ ಇಲ್ಲ ಹಣ ಕೊಡಿ ಎಂದು ಕೂಗುತ್ತಿದ್ದ ಬಿಜೆಪಿಗಳ ಬಾಯಿ ಬಂದ್ ಆಗುವಂತೆ ಸರಕಾರ ಐದು ಕೆ.ಜಿ ಬದಲು ಹಣಕೊಡಲು ಹೊರಟಿದೆ. ತಮ್ಮ ಮಾತು ತಮಗೇ ತಿರುಗುಬಾಣವಾದುದರಿಂದ ಗಲಿಬಿಲಿಯಾದ ಬಿಜೆಪಿಗಳು, ಮತ್ತೆ ಹಣ ಬೇಡ ಅಕ್ಕಿ ಕೊಡಿ ಎನ್ನುತ್ತಿವೆ. ಇವರ ಮಾತಿಗೆ ದನಿಗೂಡಿಸಿದ ಮತ್ತು ಒಂದು ಹೆಜ್ಜೆ ಮುಂದೆ ಹೋಗಿ, ಹಣ ಕೊಟ್ಟರೆ ಜನ ಕುಡಿದು ಇಸ್ಪೀಟ್ ಆಡುತ್ತಾರೆ ಎಂದುಬಿಟ್ಟಿದ್ದಾರಂತಲ್ಲಾ ಬಿಜೆಪಿ ಜತೆಗೆ ಮೈತ್ರಿಗೆ ಹವಣಿಸುತ್ತಿರುವ ಮುಖಂಡರು. ಇದಕ್ಕೆ ಕಾಂಗೈಗಳ ಕುಹಕವೇನೆಂದರೆ ಕುಮಾರಣ್ಣನ ಕಡೆಯ ಸೈನ್ಯದಲ್ಲಿ ಎಪ್ಪತ್ತು ಭಾಗ ಕುಡಿದು ಇಸ್ಪೀಟ್ ಆಡುವಂತವರೆ; ಬೇಕಿದ್ದರೆ ಚನ್ನಪಟ್ಟಣ ರಾಮನಗರದ ಕಡೆ ಹೋದರೆ ಗೊತ್ತಾಗುತ್ತದೆ; ತಮ್ಮವರು ಕುಡಿದು ಕಾರ್ಡ್ ಆಡಿಕೊಂಡು ಹಾಳಾಗುವುದನ್ನು ನೋಡಲಾಗುವುದಲ್ಲ, ಅದಕ್ಕೆ ಅವರು ಹಣ ಬೇಡ ಎನ್ನುತ್ತಿದ್ದಾರೆ. ಇದು ಒಂದೆಡೆಯಾದರೆ ಅವರ ಮಗ ನಿಖಿಲ್ ಮಂಡ್ಯದಲ್ಲಿ ಸಂಯುಕ್ತ ಆಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸೋತು, ತಮ್ಮದೇ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆಯ ಚುನಾವಣೆಯಲ್ಲಿ ರಾಮನಗರದಲ್ಲೂ ಸೋತರು. ಮುಂದೆ ಆತನ ಭವಿಷ್ಯ ಇರುವುದು ಕಾಂಗ್ರೆಸ್‌ನಲ್ಲಿ ಮಾತ್ರ ಎಂದು ರಾಮನಗರದ ಜೆ.ಡಿ.ಎಸ್‌ನ ನಿಷ್ಠಾವಂತ ಜನ ಮಾತನಾಡುತ್ತಿದ್ದಾರಂತಲ್ಲಾ, ಥೂತ್ತೇರಿ.

*****

ಫ್ರಾನ್ಸ್ ಹತ್ತಿ ಉರಿಯುತ್ತಿದೆ. ಪೊಲೀಸರು ಹುಡುಗನೊಬ್ಬನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾಂಗಿಯ ಗಲಭೆ ಸ್ಫೋಟಗೊಂಡು ಇಡೀ ದೇಶವೇ ಹತ್ತಿ ಉರಿದ ಉದಾಹರಣೆಯಿಲ್ಲ. ಇಂತಹ ಸ್ಫೋಟ ಸಂಭವಿಸಬೇಕಾದರೆ, ಹಲವು ಕಿಡಿಗಳು ಸೇರಿ ಸಿಡಿಮದ್ದಾಗಿರಬೇಕು. ಸಿಡಿಯಲು ಒಂದು ಕಾರಣ ಬೇಕಾಗಿತ್ತಷ್ಟೆ. ಜಗತ್ತಿನ ರಾಷ್ಟ್ರಗಳು ಎಚ್ಚೆತ್ತುಕೊಳ್ಳಬೇಕಾದ ಘಟನೆಯಿದು. ಹಾಗೆ ನೋಡಿದರೆ ಆ ದೇಶದ ಅಧ್ಯಕ್ಷ ಯಾಕೋ ನಮ್ಮ ಪ್ರಧಾನಿಯವರಂತೆ ಗೋಚರಿಸುತ್ತಿದ್ದಾನೆ. ಬೆಂಕಿ ಕಿಡಿಯನ್ನು ಆರಂಭದಲ್ಲೇ ಆರಿಸುವುದನ್ನು ಬಿಟ್ಟು ಮಹಡಿಮೇಲೆ ನಿಂತು ನೋಡುತ್ತಿರುವಂತೆ ಕಾಣುತ್ತಿದ್ದಾನೆ. ನಮ್ಮಲ್ಲೂ ಅಷ್ಟೇ ಅಲ್ಲವೆ? ನಮ್ಮ ಮಣಿಪುರ ಹೊತ್ತಿ ಉರಿಯುತ್ತಿದೆ. ಪ್ರಧಾನಿ ಆ ಬಗ್ಗೆ ಈವರೆಗೂ ಸಕಾರಾತ್ಮಕ ಕ್ರಮಕ್ಕೆ ಮುಂದಾಗಿಲ್ಲ. ಈ ವಿಷಯವಾಗಿ ನಮ್ಮ ಕಿಡಿಗೇಡಿ ಮನಸ್ಸು ಏನು ಹೇಳುತ್ತಿದೆಯೆಂದರೆ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದವರು. ಪ್ರಧಾನಿಯಾದ ಅವರಿಗೆ ಭಾರತದ ಎಲ್ಲ ರಾಜ್ಯಗಳು ಗುಜರಾತಿನಂತೆಯೆ. ನಾನೀಗ ರಾಜ್ಯದ ಮುಖ್ಯಮಂತ್ರಿಯಲ್ಲ, ದೇಶದ ಪ್ರಧಾನಿ ಎಂಬ ಭಾವ ಬಂದಿದ್ದರೆ, ವಿದೇಶಕ್ಕೆ ಹೋಗಿ ಯೋಗ ಮಾಡುವುದರ ಬದಲು ಮಣಿಪುರಕ್ಕೆ ಹೋಗಿ ಜನರ ಮನಗೆಲ್ಲುತ್ತಿದ್ದರಂತಲ್ಲಾ, ಥೂತ್ತೇರಿ.

*****

ಎಲ್ಲಿ ಗಲಭೆಯಾಗುತ್ತದೋ ಅಲ್ಲಿ ಜನರನ್ನು ಸಂತೈಸಲು ಕಾಣಿಸಿಕೊಳ್ಳುವಂತಹ ರಾಹುಲ್ ಗಾಂಧಿ ಮಣಿಪುರಕ್ಕೆ ಹೋದರಂತಲ್ಲಾ. ಮಣಿಪುರದ ಹೆಸರು ನಮ್ಮ ಕರ್ನಾಟಕಕ್ಕೂ ಪರಿಚಿತ. ಡಾ.ರಾಜಕುಮಾರ್ ನಟಿಸಿದ ಬಬ್ರುವಾಹನ ಚಿತ್ರದಲ್ಲಿ, ತನ್ನ ತಂದೆಯಾದ ಅರ್ಜುನನನ್ನು ಕಾಣಲು ಬಂದ ಬಬ್ರುವಾಹನನನ್ನ ಕುರಿತು ಅಣ್ಣನವರು, ’ನೀನೆಯೋ ಮಣಿಪುರದ ಅರಸು ವೀರ ಬಬ್ರುವಾಹನ? ಅಂತಹ ಹೆಸರಿನ ಮಕ್ಕಳು ನನಗಿಲ್ಲ. ಹೋಗಿ ನಿಮ್ಮಮ್ಮನನ್ನು ಕೇಳು, ನನಗೆ ಜನ್ಮ ಕೊಟ್ಟ ತಂದೆ ಯಾರು ಅಂತ’ ಎಂದು ಮೂದಲಿಸುತ್ತಾರೆ. ಹಾಗಾಗಿ ಕರ್ನಾಟಕಕ್ಕೆ ಮಣಿಪುರ ಹೀಗೆ ಪರಿಚಯ, ಉಲೂಚಿ ಚಿತ್ರಾಂಗದೆಯರೂ ಪರಿಚಯ. ಈಗಲೂ ಮಣಿಪುರದಲ್ಲಿ ಸ್ತ್ರೀ ಶಕ್ತಿಯೇ ಮುಂದೆ; ಯಾರೋ ಮೂರ್ಖ, ಅರ್ಜುನ ಮತ್ತು ನಮ್ಮ ಮೋದಿಯವರನ್ನು ಹೋಲಿಕೆ ಮಾಡಿ ವಾಟ್ಸಾಪ್ ಮಾಡಿದ್ದಾನೆ. ಏನಾದರಾಗಲಿ, ಅರ್ಜುನ ತನ್ನ ಮಗನ ಬಗ್ಗೆಯೇ ಸಂಶಯಿಸಿದಂತೆ, ಮಣಿಪುರ ನಮ್ಮ ದೇಶದ ರಾಜ್ಯವೋ ಅಲ್ಲವೋ ಎಂದು ಸಂಶಯಿಸುವ ಹಾಗೆ ಪ್ರಧಾನಿ ನಡೆದುಕೊಂಡಿರುವುದು ಇಡೀ ದೇಶವೇ ಮುಜುಗರ ಪಡುವ ಸಂಗತಿಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...

ಚೆನ್ನೈನಲ್ಲಿ ಮಾಸಿಕ ಸಹಾಯಧನ ಹೆಚ್ಚಿಸುವಂತೆ ಹೋರಾಟ ನಡೆಸುತ್ತಿದ್ದ ಅಂಗವಿಕಲರ ಮೇಲೆ ಪೊಲೀಸ್ ದೌರ್ಜನ್ಯದ ಆರೋಪ

ಚೆನ್ನೈ: ರಾಜ್ಯ ಸರ್ಕಾರದಿಂದ ನೀಡುತ್ತಿರುವ ಮಾಸಿಕ ಸಹಾಯಧನ ಹೆಚ್ಚಿಸುವಂತೆ ಒತ್ತಾಯಿಸಿ ಚೆನ್ನೈನಲ್ಲಿ ಅಂಗವಿಕಲರು ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.  ಅಂಗವಿಕಲರು ನಡೆಸುತ್ತಿದ್ದ ಈ ಪ್ರತಿಭಟನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಹಲವಾರು ಪ್ರತಿಭಟನಾಕಾರರನ್ನು...

ರಾಜ್ಯಸಭೆ 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ; ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ

10 ರಾಜ್ಯಗಳಿಂದ ಖಾಲಿ ಇರುವ 37 ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಬುಧವಾರ ವೇಳಾಪಟ್ಟಿ ಪ್ರಕಟಿಸಿದೆ. ಆಯೋಗದ ಪ್ರಕಾರ, ಮಾರ್ಚ್ 16 ರಂದು ಬೆಳಿಗ್ಗೆ 9:00...

ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಮಂಗಳವಾರ ಲಕ್ನೋದ ಸರಸ್ವತಿ ಶಿಶು ಮಂದಿರದಲ್ಲಿ ನಡೆದ ಸಾಮಾಜಿಕ ಸಾಮರಸ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಹಿಂದೂ...

5% ಮುಸ್ಲಿಂ ಮೀಸಲಾತಿ ಪ್ರಕ್ರಿಯೆ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ

ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಗಾಗಿ ಜಾತಿ ಪರಿಶೀಲನೆ ಮತ್ತು ಪ್ರಮಾಣೀಕರಣ ಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ಮಹಾರಾಷ್ಟ್ರ ಸರ್ಕಾರ ಮಂಗಳವಾರ (ಫೆ.17) ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ತಕ್ಷಣದ ಬದಲಾವಣೆಯನ್ನು ತರದಿದ್ದರೂ,...

‘ಆರ್‌ಎಸ್‌ಎಸ್ ನೋಂದಣಿಗೆ ಕಾಂಗ್ರೆಸ್ ಕಾನೂನು ತರಲಿದೆ’: ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತ ತಮ್ಮ ಹೇಳಿಕೆಗಳನ್ನು ಮತ್ತು ಕರಾವಳಿ ಕರ್ನಾಟಕದ ಹೂಡಿಕೆಗಳ ಮೇಲೆ ಕೋಮು ಉದ್ವಿಗ್ನತೆ ಪರಿಣಾಮ...

ವಿನೋದ್ ಅದಾನಿ ಸಹಚರರ ವಿರುದ್ಧ ತನಿಖೆ ನಡೆಸಿದ ಇಟಾಲಿಯನ್ ಬ್ಯಾಂಕ್; ಅನುಮಾನಾಸ್ಪದ ‘ಹೆಡ್ಜ್ ಫಂಡ್’ ಹೂಡಿಕೆ ಪತ್ತೆ

ಜನವರಿ 2023 ರಲ್ಲಿ ಹಿಂಡೆನ್‌ಬರ್ಗ್‌ ರಿಸರ್ಚ್ ವರದಿಯ ಬೆನ್ನಲ್ಲೇ, ಇಟಲಿಯ ಅತಿದೊಡ್ಡ ಬ್ಯಾಂಕ್ 'ಇಂಟೆಸಾ ಸ್ಯಾನ್ಪೋಲೊ' ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅವರ ಇಬ್ಬರು ಸಹಚರರನ್ನು...

‘ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ’ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

"ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು, ಅವರನ್ನು ಚರಂಡಿ ಕಡೆಗೆ ಅಥವಾ ಮೋರಿಯ ಅಡಿಗೆ ಎಳೆಯುವುದು 'ಅತ್ಯಾಚಾರ ಅಥವಾ ಅತ್ಯಾಚಾರ ಯತ್ನವಲ್ಲ" ಎಂಬ ಅಲಹಾಬಾದ್‌ ಹೈಕೋರ್ಟ್‌ನ ವಿವಾದಾತ್ಮಕ ತೀರ್ಪಿನ್ನು ಸುಪ್ರೀಂ...

‘ದೇವರಿಗೆ ಧನ್ಯವಾದಗಳು, ದಕ್ಷಿಣ ಇನ್ನೂ ಸ್ವತಂತ್ರವಾಗಿದೆ, ನಾವು ನಿಮ್ಮಿಂದ ಶಕ್ತಿ ಪಡೆಯುತ್ತೇವೆ’: ಕೇರಳ ಸಮ್ಮೇಳನದಲ್ಲಿ ಫಾರೂಕ್ ಅಬ್ದುಲ್ಲಾ ಭಾವುಕ ಮಾತು

"ದೇವರಿಗೆ ಧನ್ಯವಾದಗಳು, ದಕ್ಷಿಣ ಇನ್ನೂ ಸ್ವತಂತ್ರವಾಗಿದೆ, ಮತ್ತು ಅದು ಸ್ವತಂತ್ರವಾಗಿಯೇ ಉಳಿದಿದೆ ಮತ್ತು ಅಭಿವೃದ್ಧಿ ಹೊಂದುತ್ತದೆ ಮತ್ತು ಬಲಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ನಿಮ್ಮಿಂದ ಶಕ್ತಿಯನ್ನು ಪಡೆಯುತ್ತೇವೆ. ನಾವು ನಿಮ್ಮನ್ನು ನೋಡುತ್ತೇವೆ...

ದತ್ತಾಂಶ ಸಂರಕ್ಷಣಾ ಕಾನೂನಿನಡಿಯಲ್ಲಿ ಆರ್‌ಟಿಐ ತಿದ್ದುಪಡಿಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯ ಮೂಲಕ ಪರಿಚಯಿಸಲಾದ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿಯನ್ನು ತಡೆಹಿಡಿಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ ಎಂದು 'ಬಾರ್ ಮತ್ತು ಬೆಂಚ್' ವರದಿ ಮಾಡಿದೆ. ಸಾರ್ವಜನಿಕ ಹಿತಾಸಕ್ತಿಯ ಆಧಾರದ...