Homeಅಂಕಣಗಳುಮೂರು ದಿನವೂ ಉಳಿಯದ ’ವಿರಳ’ ಪತ್ರಿಕಾ ಗೋಷ್ಠಿಯ ಎತ್ತರದ ಪ್ರತಿಪಾದನೆಗಳು!

ಮೂರು ದಿನವೂ ಉಳಿಯದ ’ವಿರಳ’ ಪತ್ರಿಕಾ ಗೋಷ್ಠಿಯ ಎತ್ತರದ ಪ್ರತಿಪಾದನೆಗಳು!

- Advertisement -
- Advertisement -

ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗಳಾಗಲಿ, ಸಂಸತ್ ಭವನದಲ್ಲಿ ಪ್ರತಿಪಕ್ಷಗಳು ಕೇಳುವ ಪ್ರಶ್ನೆಗಳಾಗಲೀ, ಅವಕ್ಕೆ ನೀಡುವ ಪ್ರತಿಕ್ರಿಯೆ ವಸನಿಷ್ಠ ಉತ್ತರಗಳಾಗಿರದೆ, ಅದು ಮುಂದೆ ಚುನಾವಣಾ ರ್‍ಯಾಲಿಗಳಲ್ಲಿ ಮಾಡುವ ಭಾಷಣದ ಪೂರ್ವತಯ್ಯಾರಿ ಆಗಿರಲಿದೆ ಎಂಬ ಆಪಾದನೆಯನ್ನು ಮಾನ್ಯ ಪ್ರಧಾನಮಂತ್ರಿಗಳು ಸಾಬೀತುಮಾಡಿಕೊಂಡೇ ಬಂದಿದ್ದಾರೆ. ಅತಿ ಹೆಚ್ಚು ಪ್ರಚಾರ ಮಾಡಲಾಗಿದ್ದ ಪ್ರಧಾನಿ ಅವರ ಯುಎಸ್‌ಎ ಪ್ರವಾಸದ ಕಾರ್ಯಕಲಾಪಗಳಲ್ಲಿ, ಆ ದೇಶದ ಅಧ್ಯಕ್ಷ ಜೋ ಬೈಡೆನ್ ಜೊತೆಗೆ ಮೋದಿ ನಡೆಸಲಿದ್ದ ಪತ್ರಿಕಾಗೋಷ್ಠಿ ಪ್ರವಾಸಕ್ಕಿಂತಲೂ ಸ್ವಲ್ಪ ಹೆಚ್ಚು ಪ್ರಚಾರ ಪಡೆದುಕೊಂಡಿದ್ದೇನೋ ನಿಜ. ಕೇವಲ ಎರಡು ಪ್ರಶ್ನೆಗಳಿಗೆ ಸೀಮಿತವಾಗಿದ್ದ ಆ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಎರಡೂ ರಾಷ್ಟ್ರಗಳ ಮುಖಂಡರು ಉತ್ತರಿಸಿದ್ದು, ಎರಡೂ ದೇಶಗಳಲ್ಲಿ ಇನ್ನೇನು ಬರಲಿರುವ ಚುನಾವಣೆಗಳಿಗೆ ಭಾಷಣ ಮಾಡಿ ಸಿದ್ಧತೆ ಮಾಡಿಕೊಳ್ಳುತ್ತಿರುವಂತಿತ್ತು. ಭಾರತದ ಪ್ರಧಾನಿಯವರಿಗೆ ಪ್ರೆಸ್ ಕಾನ್ಫರೆನ್ಸ್ ಎಂಬುದು ಬ್ರಹ್ಮಾಂಡದಲ್ಲಿ ನಡೆಯುವ ವಿರಳ ಘಟನೆಯಂತಾಗಿರುವ ಸಮಯದಲ್ಲಿ, ಪ್ರಜಾಪ್ರಭುತ್ವ ನಮ್ಮ ನರನಾಡಿಗಳಲ್ಲಿದೆ, ಪರಿಸರ-ಹವಾಮಾನ ಇವೆಲ್ಲವೂ ನಮ್ಮ ಸಂಸ್ಕೃತಿ ಎಂಬಿತ್ಯಾದಿಯಾಗಿ ಎಂದಿನಂತೆ ಯಾವುದೇ ಅಂಕಿಅಂಶಗಳ ಆಧಾರವಿಲ್ಲದೆ ಅವರು ಕೊಚ್ಚಿಕೊಂಡಿದ್ದಾರೆ. ಫಾಲೋ-ಅಪ್ ಪ್ರಶ್ನೆಗೆ ಅವಕಾಶವೂ ಇಲ್ಲದಂತೆ ’ಫಿಕ್ಸ್’ ಮಾಡಿಕೊಂಡಿದ್ದ ಪ್ರೆಸ್ ಕಾನ್ಫರೆನ್ಸ್‌ನಲ್ಲಿನ ಮಾತುಗಳಿಗೆ ಯಾವ ಆತ್ಮಸಾಕ್ಷಿಯ ಅವಶ್ಯಕತೆಯೂ ಇರುವುದಿಲ್ಲ. ಅದರಂತೆಯೇ ಇಬ್ಬರೂ ಮುಖಂಡರು ನಡೆದುಕೊಂಡಿದ್ದಾರೆ. ಕನಿಷ್ಠ ಪಕ್ಷ ಬೈಡೆನ್ ನಡೆಯನ್ನು ಬೂಟಾಟಿಕೆ ಎಂದು ಅಲ್ಲಿನ ಮಾಧ್ಯಮಗಳು (ಸ್ವತಂತ್ರ, ಸಣ್ಣವು, ದೊಡ್ಡವು ಮತ್ತು ಮುಖ್ಯವಾಹಿನಿಗಳು ಸೇರಿದಂತೆ) ಬಣ್ಣಿಸುವುದಕ್ಕೆ ಸಾಧ್ಯವಾದಷ್ಟು ಅಲ್ಲಿ ಖಂಡಿತಾ ಪ್ರಜಾಪ್ರಭುತ್ವ ಉಳಿದಿದೆ! ಇಲ್ಲಿ ಮೋದಿಯವರನ್ನು ಟೀಕಿಸಿದ ಮೇನ್‌ಸ್ಟ್ರೀಮ್ ಮಾಧ್ಯಮಗಳನ್ನು ದುರ್ಬೀನು ಹಾಕಿ ಹುಡುಕಿದರೂ ಸಿಗುವುದು ಕಷ್ಟ. ಆ ಮಟ್ಟಿಗೆ ತೋರಿಕೆಯ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಕೂಡ ಇಲ್ಲಿನ ಪ್ರಭುತ್ವ ಎಫರ್ಟ್ ಹಾಕಿರುವಂತೆ ಕಾಣುವುದಿಲ್ಲ.

ಪ್ರಜಾಪ್ರಭುತ್ವದ ತೋರಿಕೆಯೂ ಇಲ್ಲ ಎಂಬುವುದಕ್ಕೆ ಕ್ಲಾಸಿಕ್ ಉದಾಹರಣೆಯೆಂಬಂತೆ ಮೋದಿಯವರನ್ನು ಅಂದು ಪ್ರಶ್ನಿಸಿದ ’ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆಯ ಪತ್ರಕರ್ತೆಯ ಮೇಲೆ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ದಾಳಿ ಪ್ರಾರಂಭವಾಗಿತ್ತು. ದಾಳಿ ನಡೆಸುತ್ತಿದ್ದವರು ಯಾರೋ ’ಫ್ರಿಂಜ್’ಗಳಲ್ಲ; (2022ರಲ್ಲಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಇಸ್ಲಾಂ ಧರ್ಮ ಪ್ರವಾದಿ ಮೊಹಮದ್ ಅವರ ಮೇಲೆ ಅನುಚಿತ ಪ್ರತಿಕ್ರಿಯೆಗಳನ್ನು ನೀಡಿದ್ದರು. ಮಧ್ಯಪ್ರಾಚ್ಯದ ಕೆಲವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಇದನ್ನು ವಿರೋಧಿಸಿ ಆರ್ಥಿಕ ನಿರ್ಬಂಧದ ಬೆದರಿಕೆ ಹಾಕಿದ ಮೇಲೆ ಬಿಜೆಪಿ ಅವರನ್ನು ಫ್ರಿಂಜ್ ಎಂದು ಬಗೆದು ತನ್ನನ್ನು ನೂಪುರ್ ಅವರ ಹೇಳಿಕೆಯಿಂದ ಪ್ರತ್ಯೇಕಿಸಿಕೊಳ್ಳಲು ಪ್ರಯತ್ನಿಸಿತ್ತು. ಇಂತಹ ಸಂದರ್ಭ ಈಗ ಡಬ್ಲ್ಯುಎಸ್‌ಜೆ ಪತ್ರಕರ್ತೆಯ ಮೇಲೆ ಪ್ರತಿಕ್ರಿಯಿಸುವ ವ್ಯಕ್ತಿಗೆ ಮುಂದೆಂದಾದರೂ ಬರಬಹುದಾದರೂ, ಸದ್ಯಕ್ಕೆ ಆತ ಬಿಜೆಪಿಯಲ್ಲಿ ಪ್ರಭಾವಿ) ಆತ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವಿಯ. “ಮುಸ್ಲಿಮರ ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳ ’ರಕ್ಷಣೆ’ ಮಾಡಲು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂದು ಬೇಕಂತಲೇ ಕೇಳಿದ ಪೂರ್ವನಿರ್ಧರಿತ ಪ್ರಶ್ನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂಪೂರ್ಣವಾಗಿ ಹೊಡೆದುಹಾಕಿದರು. ಅವರ ಪ್ರತಿಕ್ರಿಯೆಯಲ್ಲಿ ಅವರು ಮುಸ್ಲಿಮರ ಹೆಸರನ್ನಾಗಲೀ ಅಥವಾ ಇನ್ಯಾವುದೇ ಹೆಸರನ್ನು ಎತ್ತಲಿಲ್ಲ, ಸಂವಿಧಾನದ ಬಗ್ಗೆ, ಅರ್ಹತೆಯ ಮಾನದಂಡದ ಆಧಾರದ ಮೇಲೆ ಸರ್ಕಾರಿ ಸಂಪನ್ಮೂಲಗಳನ್ನು ಪಡೆಯುವ ಪ್ರವೇಶಾವಕಾಶ ಮತ್ತು ಜಾತಿ, ಗುಂಪು, ಮತ ಅಥವಾ ಭೌಗೋಳಿಕತೆಯ ಮೇಲೆ ಯಾವುದೇ ತಾರತಮ್ಯ ಮಾಡದಿರುವುದರ ಬಗ್ಗೆ ಮಾತನಾಡಿದರು… ಅಂತಹುದೇ ಪ್ರಶ್ನೆಗೆ ಅಧ್ಯಕ್ಷ ಬೈಡೆನ್ ಅವರ ತಣ್ಣಗಿನ ಪ್ರತಿಕ್ರಿಯ ಬಳಿಕ ಇದು ಟೂಲ್‌ಕಿಟ್ ಗ್ಯಾಂಗ್‌ಗೆ ಕೊಟ್ಟ ಮತ್ತೊಂದು ಹೊಡೆತವಾಗಿತ್ತು” ಎಂದು ಮಾಳವಿಯ ಟ್ವೀಟ್ ಮಾಡಿದರು. ’ಮೋಟಿವೇಟೆಡ್’, ’ಟೂಲ್‌ಕಿಟ್’ ಎಂಬ ಪದಗಳನ್ನು ಬಳಸುವ ಮೂಲಕ ತಮ್ಮ ಟ್ರೋಲ್ ಪಡೆಯನ್ನು ಪ್ರಚೋದಿಸಿ ಉದ್ರೇಕಗೊಳಿಸಿದ್ದರು. ಅಲ್ಲಿಂದ ಪ್ರಾರಂಭವಾಯಿತು ನೋಡಿ, ಬಿಜೆಪಿ ಐಟಿ ಸೇನೆ ಡಬ್ಲ್ಯುಎಸ್‌ಜೆ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ವಿರುದ್ಧ ಸೆಟೆದು ನಿಂತಿತು. ಆಕೆ ಪಾಕಿಸ್ತಾನಿ, ಇಸ್ಲಾಮಿಸ್ಟ್, ಹಿಂದೂ ವಿರೋಧಿ ಮುಂತಾಗಿ ಟ್ರಾಲಿಂಗ್ ಶುರುಹಚ್ಚಿಕೊಂಡಿತು. ಈ ಆನ್‌ಲೈನ್ ಅಟ್ಯಾಕ್ ಯಾವ ಹಂತಕ್ಕೆ ಬೆಳೆಯಿತೆಂದರೆ, ಇದಕ್ಕೆ ವೈಟ್‌ಹೌಸ್ ಪ್ರತಿಕ್ರಿಯೆ ನೀಡಬೇಕಾಗಿ ಬಂತು. ಯುಎಸ್‌ನ ರಾಷ್ಟ್ರೀಯ ಭದ್ರತಾ ಪರಿಷತ್ತಿನ ಸಂವಹನ ವಿಭಾಗದ ಮುಖ್ಯಸ್ಥ ಜಾನ್ ಕಿರ್ಬಿ ಪ್ರತಿಕ್ರಿಯಿಸಿ, “ದೌರ್ಜನ್ಯದ ಬಗೆಗಿನ ವರದಿಗಳ ಬಗ್ಗೆ ನಮಗೆ ತಿಳಿದಿದೆ. ಇದನ್ನು ಒಪ್ಪಲು ಅಸಾಧ್ಯ, ಯಾವುದೇ ಸನ್ನಿವೇಶದಲ್ಲಿ, ಎಲ್ಲೇ ಆಗಲಿ, ಪತ್ರಕರ್ತರಿಗೆ ಕಿರುಕುಳ ನೀಡುವುದನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ಕಳೆದ ವಾರ ಸ್ಟೇಟ್ (ಅಮೆರಿಕ) ಭೇಟಿಯ ವೇಳೆ ಪ್ರದರ್ಶಿಸಲಾಗಿದ್ದ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದ್ದು ಇದು ಅನೈತಿಕವಾಗಿದೆ” ಎಂದಿದ್ದಾರೆ. ’ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ಕೂಡ ತನ್ನ ಉದ್ಯೋಗಿಯ ಮೇಲೆ ನಡೆದ ದಾಳಿಯನ್ನು ಖಂಡಿಸಿ ಪ್ರಕಟಣೆ ನೀಡಿತು. ಸಬ್ರಿನಾ ಸಿದ್ದಿಕಿ ತಾನು ಮತ್ತು ತನ್ನ ತಂದೆ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಬೆಂಬಲಿಸಿ ಟಿವಿ ನೋಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿಕೊಂಡರು ಕೂಡ!

ಇದನ್ನೂ ಓದಿ: ಮೋದಿಗೆ ಪ್ರಶ್ನೆ ಮಾಡಿದ್ದ ಪತ್ರಕರ್ತೆಗೆ ಹಿಂದುತ್ವವಾದಿಗಳಿಂದ ನಿಂದನೆ; ಅಮೆರಿಕ ಶ್ವೇತಭವನದಿಂದ ಖಂಡನೆ

ಈಗ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿರುವ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ಅವರ ಹೆಸರಿನಲ್ಲಿ ಇರುವ ’ಸಿದ್ದಿಕಿ’ ಭಾರತದಲ್ಲಿ ಪತ್ರಕರ್ತರ ಮೇಲೆ ನಡೆದ ದಾಳಿಯ ಮತ್ತೊಂದು ಪ್ರಕರಣವನ್ನು ನೆನಪಿಸದೆ ಇರದು. ಉತ್ತರಪ್ರದೇಶದ ಹಾತ್ರಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ನಡೆದ ರೇಪ್ ಮತ್ತು ಕೊಲೆ ಘಟನೆಯನ್ನು ವರದಿ ಮಾಡಲು ಸಿದ್ದಿಕ್ ಕಪ್ಪನ್ ಕೇರಳದಿಂದ ಬಂದಿದ್ದರು. ಅವರ ಜೊತೆಗೆ ಆತಿಕುರ್ ರಹಮಾನ್ ಮತ್ತು ವಿದ್ಯಾರ್ಥಿ ಮಸೂದ್ ಅಹ್ಮದ್ ಇದ್ದರು. ಅತ್ತ ಒಂದು ಕಡೆ ಕುಟುಂಬಸ್ಥರಿಗೂ ಶವವನ್ನು ನೀಡದೆ 19 ವರ್ಷದ ಆ ಸಂತ್ರಸ್ತ ಯುವತಿಯ ಶವವನ್ನು ಆತುರಾತುರದಲ್ಲಿ ಪೊಲೀಸರು ಸುಟ್ಟುಹಾಕುತ್ತಿದ್ದರೆ ಮತ್ತೊಂದು ಕಡೆ ಸಿದ್ದಿಕ್, ರಹಮಾನ್, ಅಹ್ಮದ್‌ರ ಮೇಲೆ ಪೊಲೀಸರು ’ಫಿಲ್ಮಿ’ ರೀತಿಯಲ್ಲಿ ಆರೋಪಗಳನ್ನು ಹೊರಿಸಿ ಯುಎಪಿಎ ಜಡಿದು ಬಂಧಿಸುತ್ತಿದ್ದರು. ಅಷ್ಟು ಸಾಲದೆಂಬಂತೆ ಅವರನ್ನು ಕರೆತಂದಿದ್ದ ಟ್ಯಾಕ್ಸಿ ಚಾಲಕ ಮೊಹಮ್ಮದ್ ಆಲಂ ಅವರ ಮೇಲೆಯೂ ಯುಎಪಿಎ ಹಾಕಿ ಬಂಧಿಸಿದ್ದರು. ಆಲಂ ಮತ್ತು ಸಿದ್ದಿಕಿ ಕ್ರಮವಾಗಿ 27 ಮತ್ತು 28 ತಿಂಗಳುಗಳ ಕಾಲ ಜೈಲಿನಲ್ಲಿದ್ದು 2022ರಲ್ಲಿ ಜಾಮೀನು ಪಡೆದರೆ ರಹಮಾನ ಅವರು 32 ತಿಂಗಳು ಕಾಲ ಜೈಲಿನಲ್ಲಿದ್ದು 23 ಜೂನ್ 2023ರಂದು ಜಾಮೀನು ಪಡೆದು ಹೊರಬಂದಿದ್ದಾರೆ. ಮಸೂದ್ ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಜಾಮೀನಿನ ಮೇಲೆ ಕೆಲವೇ ದಿನಗಳ ಹಿಂದೆ ಹೊರಬಂದ ರಹಮಾನ್ ಅವರು “ಮುಸ್ಲಿಮರಾಗಿದ್ದಕ್ಕೆ ನಮ್ಮನ್ನು ಶಿಕ್ಷಿಸಲಾಯಿತು. ಜೈಲಿನಲ್ಲಿ ನನ್ನ ಆತ್ಮಬಲವನ್ನು ಮುರಿಯಲು ಎಲ್ಲಾ ತಂತ್ರಗಳನ್ನು ಅವರು ಬಳಸಿದರು, ಆದರೆ ಆ ಕೆಲಸದಲ್ಲಿ ಅವರು ಸೋತರು. ನನಗೆ ಯಾವುದರ ಬಗ್ಗೆಯೂ ಭಯವಿಲ್ಲ. ಇನ್ನೂ ಹೆಚ್ಚೇನು ಅವರು ಮಾಡಬಲ್ಲರು? ನಿಮ್ಮನ್ನು ಜೈಲಿಗೆ ಹಾಕಿದ ಮೇಲೆ ಭಯ ಕಾಣೆಯಾಗಿಬಿಡುತ್ತದೆ” ಎಂದಿದ್ದಾರೆ. ನಮ್ಮ ಪ್ರಜಾಪ್ರಭುತ್ವ ಈ ಸ್ಥಿತಿಯನ್ನು ಎದುರಿಸುತ್ತಿರುವಾಗ ಯುಎಸ್‌ಎನಲ್ಲಿ ಪತ್ರಕರ್ತೆಯಾಗಿರುವ ಸಬ್ರಿನಾ ಸಿದ್ದಿಕಿ ಸಾಪೇಕ್ಷವಾಗಿ ಸ್ವಲ್ಪ ಹೆಚ್ಚು ಸೇಫ್ ಎನ್ನಬಹುದೇನೋ!

ಇದ್ರಿಸ್ ಪಾಷಾ

ದೊಡ್ಡದೊಡ್ಡ ಕಾರ್ಪೊರೇಟ್ ಧಣಿಗಳನ್ನು ಭೇಟಿ ಮಾಡಿ, ಅಮೆರಿಕದ ಕಾಂಗ್ರೆಸ್‌ನಲ್ಲಿ ಭಾಷಣ ಮಾಡಿ (ಭಾರತದಲ್ಲಿ ಅಲ್ಪಸಂಖ್ಯಾತರನ್ನು ದಮನಿಸಲಾಗುತ್ತಿದೆ ಎಂದು ಆರೋಪಿಸಿ ಮೂವರು ಅಮೆರಿಕ ಲಾಮೇಕರ್‌ಗಳು ಇದರಿಂದ ದೂರವುಳಿದಿದ್ದರು), ಬೈಡೆನ್ ಅವರ ಜೊತೆಗೆ ಪ್ರಜಾಪ್ರಭುತ್ವದ ಬಗ್ಗೆ ಕೊಚ್ಚಿಕೊಂಡು ಯುಎಸ್‌ಎ ಪ್ರವಾಸ ಮುಗಿಸಿ ಈಜಿಪ್ಟ್ ಪ್ರವಾಸ ಶುರುಮಾಡುವ ಹೊತ್ತಿಗೆ ಜೂನ್ 26ರಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಗೋರಕ್ಷಣೆಯ ಹೆಸರಿನ ಕೊಲೆಗಡುಕರು ಇಬ್ಬರು ಮುಸಲ್ಮಾನರ ಮೇಲೆ ದೊಣ್ಣೆ ಮತ್ತು ಸ್ಟೀಲ್ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಅದರಲ್ಲಿ ಅಫನ್ ಅನ್ಸಾರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರೆ, ನಾಸಿರ್ ಖುರೇಶಿ ತೀವ್ರ ಗಾಯಗಳಿಗೆ ತುತ್ತಾಗಿದ್ದಾರೆ. ಇದಕ್ಕೆ ಎರಡು ವಾರಗಳ ಹಿಂದೆಯಷ್ಟೇ ಜೂನ್ 8ರಂದು ನಾಸಿಕ್‌ನಲ್ಲಿಯೇ ಗೋರಕ್ಷಕರ ದಾಳಿಗೆ ಕೊಲೆಯಾಗಿದ್ದರು ಎನ್ನಲಾಗಿದ್ದ ಲುಕ್‌ಮನ್ ಅನ್ಸಾರಿ ಅವರ ಮೃತದೇಹ ಪತ್ತೆಯಾಗಿತ್ತು. ಏಪ್ರಿಲ್‌ನಲ್ಲಿ ಕರ್ನಾಟಕದ ರಾಮನಗರದಲ್ಲಿ ಇದ್ರಿಸ್ ಪಾಷಾ ಎಂಬುವವರನ್ನು ಗೋರಕ್ಷಣೆಯ ಹೆಸರನಲ್ಲಿ ಕೊಲೆಗೈಯ್ಯಲಾಗಿತ್ತು. ಇದ್ರಿಸ್ ಪಾಷಾ ಮತ್ತು ಸಹಚರರು ಅಧಿಕೃತ ರಶೀದಿಯೊಂದಿಗೇ ದನಗಳನ್ನು ಸಾಗಣೆ ಮಾಡುತ್ತಿದಾರೂ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ಗೋಸಾಗಣೆ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ಆರೋಪ ಮಾಡಲಾಗಿತ್ತು. ಈಗ ಪುನೀತ್ ಕೆರೆಹಳ್ಳಿ ಮತ್ತು ಇತರ ಐವರು ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆದರೆ ಕೊಲೆ ಆರೋಪಿಗಳು ಜಾಮೀನು ಪಡೆದು ರೋಷಾವೇಷದ ಮಾತುಗಳನ್ನಾಡುವುದರಲ್ಲಿ ನಿರತರಾಗಿದ್ದಾರೆ!

ಅಲ್ಪಸಂಖ್ಯಾತ ಧರ್ಮೀಯರ ಮೇಲೆ ದೇಶದ ಬಹುಸಂಖ್ಯಾತರು ಸವಾರಿ ನಡೆಸುತ್ತ್ತಿರುವುದಕ್ಕೆ ಬಹುಶಃ ದಿನಾಲು ನೂರಾರು ಉದಾಹರಣೆಗಳು ಸಿಕ್ಕಾವು.

ಇಂತಹ ಪರಿಸ್ಥಿತಿ ಸೃಷ್ಟಿಯಾಗುವುದಕ್ಕೆ ಮೋದಿ ಆಡಳಿತದ ಸರ್ಕಾರ ಕಾರಣವಲ್ಲವೇ? ಮೋದಿಯವರ ಪಕ್ಷ ಬಿಜೆಪಿ ಕಾರಣವಲ್ಲವೇ? ಬಿಜೆಪಿಯ ತಾತ್ವಿಕ ಪೋಷಕ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರ ಕಾರಣವಲ್ಲವೇ? ಇದನ್ನು ತಡೆಯಲು ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ನೀಡುವುದರ ಬದಲು ಪ್ರಜಾಪ್ರಭುತ್ವ ನರನಾಡಿಗಳಲ್ಲಿ ಹರಿಯುತ್ತಿದೆ ಎಂಬ ಒಣಮಾತು ಇದ್ರಿಸ್ ಪಾಷಾನ ಜೀವವನ್ನು ವಾಪಸ್ ತಂದುಕೊಡುತ್ತದೆಯೇ? ಅವರ ಕುಟುಂಬದ ಸಂಕಟವನ್ನು ಕಡಿಮೆ ಮಾಡುತ್ತದೆಯೇ?

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಭಾರತದಲ್ಲಿ ಕುಸಿಯುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರ ಸ್ವಾತಂತ್ರ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಬಿಜೆಪಿ ಮುಖಂಡರು ಒಬಾಮಾ ಹೆಸರನ್ನೂ ಆಡಿಕೊಂಡು ಟ್ರಾಲ್ ಮಾಡಿದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಟೀಕೆಯನ್ನು ಒಂದು ಹಂತ ಮುಂದಕ್ಕೆ ತೆಗೆದುಕೊಂಡುಹೋಗಿ, ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದ ಸಮಯದಲ್ಲಿ ಮುಸ್ಲಿಂ ರಾಷ್ಟ್ರಗಳ ಮೇಲಿನ ಅಮೆರಿಕ ದಾಳಿಯನ್ನು ನಿಲ್ಲಿಸಲಿಲ್ಲವೇಕೆ ಎಂದು ಪ್ರಶ್ನಿಸಿದರು. ಬೇರೆ ರಾಷ್ಟ್ರಗಳ ಜನರ ಮೇಲಿನ ಮಾನವ ಹಕ್ಕುಗಳ ಹರಣದ ವಿಷಯದಲ್ಲಿ ಯುಎಸ್‌ಎ ದಾಖಲೆ ಭಯಾನಕವಾಗಿರುವುದು ನಿಜ. ಅದು ಬರಾಕ್ ಒಬಾಮಾ ಅವರ ಕಾಲಕ್ಕೂ ದಯನೀಯವಾಗಿತ್ತು ಎಂಬುದನ್ನು ಹಲವರು ಗುರುತಿಸಿದ್ದಾರೆ.

ಬರಾಕ್ ಒಬಾಮಾ

ಆದರೆ ಇದು ಭಾರತದಂತಹ ದೇಶಕ್ಕೆ ಮಾದರಿಯಾಗಬಾರದಲ್ಲವೇ? ಪ್ರಜಾಪ್ರಭುತ್ವ ನರನಾಡಿಗಳಲ್ಲ ಹರಿಯುವ ದೇಶದಲ್ಲಿ ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಲಿಂಚಿಂಗ್‌ಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲವೇಕೆ?

ಮತ್ತೊಮ್ಮೆ ಆ ವಿರಳಾತಿ ವಿರಳ ಪತ್ರಿಕಾ ಗೋಷ್ಠಿಯಲ್ಲಿ ಸಬ್ರಿನಾ ಸಿದ್ದಿಕಿ ಕೇಳಿದ ಆ ಪ್ರಶ್ನೆಯನ್ನು ಇಲ್ಲಿ ಮತ್ತೆ ನೆನಪಿಸಿಕೊಳ್ಳುವುದು ಉಚಿತವಾದೀತು: “ಪ್ರಧಾನ ಮಂತ್ರಿಯವರೇ, ಭಾರತ ಬಹಳ ಕಾಲದಿಂದಲೂ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಾ ಬಂದಿದೆ, ಆದರೆ ಹಲವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯವೆಸಗಿರುವ ಮತ್ತು ವಿರೋಧಿಗಳ ಸದ್ದಡಗಿಸಿರುವ ಬಗ್ಗೆ ಮಾತಾಡುವ ಹಲವು ಮಾನವ ಹಕ್ಕುಗಳ ಸಂಘಟನೆಗಳಿವೆ. ಶ್ವೇತ ಭವನದ ಪೂರ್ವ ಕೊಠಡಿಯಲ್ಲಿ ಈಗ ನೀವು ನಿಂತಿರುವಾಗ, ಎಲ್ಲಿ ವಿಶ್ವದ ಹಲವು ನಾಯಕರು ಪ್ರಜಾಪ್ರಭುತ್ವವನ್ನು ರಕ್ಷಿಸುವ ಬಗ್ಗೆ ಭರವಸೆಗಳನ್ನು ನೀಡಿದ್ದಾರೋ ಅಲ್ಲಿ, ನಿಮ್ಮ ದೇಶದಲ್ಲಿ ಮುಸ್ಲಿಮರ ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ನಿಮ್ಮ ಸರ್ಕಾರ ಮತ್ತು ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗುತ್ತೀರಿ?

ಈ ಪ್ರಶ್ನೆಗೆ ಪ್ರಜಾಪ್ರಭುತ್ವದ ಬಗ್ಗೆ ಕೊಚ್ಚಿಕೊಳ್ಳುವ ಯಾವ ಉತ್ತರವನ್ನಾದರೂ ನೀಡಿ ನುಣುಚಿಕೊಳ್ಳಬಹುದು. ಆದರೆ ದಿನನಿತ್ಯ ಇಲ್ಲಿ ನಡೆಯುವ ಘಟನೆಗಳು ಅದಕ್ಕೆ ವ್ಯತಿರಿಕ್ತವಾದ ಮೆಜಾರಿಟೇರಿಯನ್ ಭಾವನೆ ಭಾರತದಲ್ಲಿ ನೆಲೆಸಿರುವುದಕ್ಕೆ ಸಾಕ್ಷ್ಯ ನುಡಿಯುತ್ತಿರುತ್ತವೆ. ಅಪರೂಪದ ಪತ್ರಿಕಾಗೋಷ್ಠಿಯ ಈ ಪ್ರಶ್ನೆ ಇನ್ನಷ್ಟು ದಿನ ಕಾಡಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...