Homeನಿಜವೋ ಸುಳ್ಳೋಅರೆ, ವಿಚಿತ್ರವಾಗಿದೆ, ಯಾವುದಪ್ಪ ಈ ಫೋಟೊ?

ಅರೆ, ವಿಚಿತ್ರವಾಗಿದೆ, ಯಾವುದಪ್ಪ ಈ ಫೋಟೊ?

ದಕ್ಷಿಣದಲ್ಲಿ ಸಿನಿಮಾನಟರು ದಿಢೀರ್ ರಾಜಕೀಯ ನಾಯಕರಾದುದನ್ನು ಎನ್‍ಟಿಆರ್, ಎಂಜಿಆರ್ ಉದಾಹರಿಸಿ ಬರೆಯುವ ವೀರರಾಘವನ್ ಕರ್ನಾಟಕದಲ್ಲಿ ಅಂತಹ ಶಕ್ತಿ ಇದ್ದುದು ಡಾ ರಾಜ್‍ಗೆ ಮಾತ್ರ ಎಂದಿದ್ದರು

- Advertisement -
- Advertisement -

ಅರೆ, ವಿಚಿತ್ರವಾಗಿದೆ, ಯಾವುದಪ್ಪ ಈ ಫೋಟೊ?
ವರನಟ ಡಾ. ರಾಜ್ ಮತ್ತು ಇಂದಿರಾಗಾಂಧಿ ನಡುವೆ ನರೇಂದ್ರ ಮೋದಿ!

ಮಿಥ್ಯ: ಇಂಥದೊಂದು ಫೋಟೊ ಸಾಕಷ್ಟು ವೈರಲ್ ಆಗಿದೆ. ಅದು ಗುಜರಾತಿನಲ್ಲೇ ಹೆಚ್ಚು ಓಡಾಡುತ್ತಿದ್ದು, ಈ ಫೋಟೊ ಬಳಸುವವರ ಟಾರ್ಗೆಟ್ ನರೇಂದ್ರ ಮೋದಿ! ‘ನೋಡ್ರಪ್ಪ ನಿಮ್ಮ ಮೋದಿ ಸಾಬ್ ಕೂಡ ಕಾಂಗ್ರೆಸ್‍ಮನ್ ಆಗಿದ್ದ. ಈಗ ಏನ್ ಹೇಳ್ತೀರಿ ಭಕ್ತರೇ?’ ಎಂದು ಕಿಚಾಯಿಸುವ ಸಂದೇಶವನ್ನು ತೇಲಿಬಿಡಲಾಗಿದೆ. ‘ವೊಟ್ ಫಾರ್ ಎಐಎಂಐಎಂ’ ಫೇಸ್‍ಬುಕ್ ಪುಟದಲ್ಲಿ ಇದು 5 ಸಾವಿರಕ್ಕೂ ಹೆಚ್ಚು ಸಲ ಶೇರ್ ಆಗಿದ್ದರೆ, ಇನ್ನೊಂದು ಫೇಸ್‍ಬುಕ್ ಪುಟದಲ್ಲಿ 6 ಸಾವಿರಕ್ಕೂ ಹೆಚ್ಚು ಸಲ ಶೇರ್ ಆಗಿದೆ.

ಸತ್ಯ: ಅಂದಿನ ಪ್ರಧಾನಿ ಇಂದಿರಾಗಾಂಧಿ ಮತ್ತು ಕನ್ನಡದ ಹೆಮ್ಮೆ ಡಾ. ರಾಜಕುಮಾರ್ ಮಧ್ಯೆ ಯುವಕ ಮೋದಿ ಇರುವ ಈ ಫೋಟೋ ನಕಲಿ. ಇದನ್ನು ಫೋಟೊಶಾಪ್ ಮಾಡಲಾಗಿದೆ. ‘ಮೋದಿಯೂ ನಮ್ಮವನೇ ಆಗಿದ್ದ’ ಎಂದು ಕಾಂಗ್ರೆಸ್‍ನವರು ಈ ಕೆಲಸ ಮಾಡಿರಲಿಕ್ಕಿಲ್ಲ. ಆದರೆ ಎಐಎಂಐಎಂ ಫೇಸ್‍ಬುಕ್ ಪೇಜ್‍ನಿಂದ ಹೆಚ್ಚು ಶೇರ್ ಆಗಿರುವುದನ್ನು ನೋಡಿದರೆ, ಆ ಪಾರ್ಟಿ ಕಡೆಯವರು ಮಾಡಿರುವ ಸಾಧ್ಯತೆ ಇದ್ದು, ನೋಡಿ ಕಾಂಗ್ರೆಸ್, ಬಿಜೆಪಿ, ಇಂದಿರಾ, ಮೋದಿ ಎಲ್ಲ ಒಂದೇ ಎಂದು ಕಿಚಾಯಿಸುವ ಉದ್ದೇಶವಿರಬಹುದು. ಒಟ್ಟಿನಲ್ಲಿ ಎರಡೂ ಸಾಧ್ಯತೆಯಿವೆ.

ಈ ನಕಲಿ ಫೋಟೊದಲ್ಲಿ ಇಂದಿರಾ ಮತ್ತು ರಾಜ್ ಮಧ್ಯದಿಂದ ಮುಖ ಕಾಣುವಂತೆ ಹಿಂದಿನ ಸಾಲಿನಲ್ಲಿ ಮೋದಿ ಮುಖ ತುರುಕಲಾಗಿದೆ. ವೈರಲ್ ಮಾಡಿದವರು ರಾಜ್ ಹೆಸರನ್ನು ಎಲ್ಲೂ ಬಳಸಿಲ್ಲ. altnews ಈ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್‍ನಲ್ಲಿ ಪರಿಶೀಲಿಸಿದಾಗ, ದಿ ಕ್ವಿಂಟ್ ಪೋರ್ಟಲ್‍ನಲ್ಲಿ ‘Karnataka’s  reluctant politician: The Life and Times of ‘Annavru’ ಎಂಬ ಲೇಖನವಿದ್ದು ಅದರಲ್ಲಿ ಓರಿಜಿನಲ್ ಫೋಟೊ ಸಿಕ್ಕಿದೆ. ಸಂಗೀತ ಕಾರ್ಯಕ್ರಮವೊಂದರಲ್ಲಿ ತೆಗೆದ ಫೋಟೊ ಇದು. ಆ ಫೋಟೊದಲ್ಲಿ ಮೋದಿ ಮೂತಿ ಇಲ್ಲ. ಈ ಫೋಟೊವನ್ನು ಫೋಟೊಶಾಪ್ ಮಾಡಿ ಮೋದಿಯನ್ನು ತುರುಕಲಾಗಿದೆ.

ಓರಿಜಿನಲ್ ಫೋಟೊ

ನಮ್ಮ ಓದುಗರಿಗಾಗಿ ನಾನುಗೌರಿ ಡೆಸ್ಕ್ ಈ ಲೇಖನ ಹುಡುಕಿ ಓದಿದಾಗ, ಅದನ್ನು ದಿ ಕ್ವಿಂಟ್‍ಗೆ ಟಿ.ಎಂ. ವೀರರಾಘವನ್ 2018ರಲ್ಲಿ ಬರೆದಿದ್ದು 24-04-2019ರಂದು ಮತ್ತೆ ಅಪ್‍ಡೇಟ್ ಮಾಡಲಾಗಿದೆ. ದಕ್ಷಿಣದಲ್ಲಿ ಸಿನಿಮಾನಟರು ದಿಢೀರ್ ರಾಜಕೀಯ ನಾಯಕರಾದುದನ್ನು ಎನ್‍ಟಿಆರ್, ಎಂಜಿಆರ್ ಉದಾಹರಿಸಿ ಬರೆಯುವ ವೀರರಾಘವನ್ ಕರ್ನಾಟಕದಲ್ಲಿ ಅಂತಹ ಶಕ್ತಿ ಇದ್ದುದು ಡಾ ರಾಜ್‍ಗೆ ಮಾತ್ರ. ಹಲವಾರು ಸಲ ರಾಜಕೀಯ ಪಕ್ಷಗಳು ಅವರಿಗೆ ದುಂಬಾಲು ಬಿದ್ದರೂ ರಾಜ್ ಎಂದೂ ಒಪ್ಪಿಕೊಳ್ಳಲಿಲ್ಲ. 1978ರಲ್ಲಿ ಚಿಕ್ಕಮಗಳೂರು ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ರಾಜ್‍ರನ್ನು ಕಣಕ್ಕಳಿಸಲು ಜನತಾ ಪಕ್ಷ ಯತ್ನಿಸಿತ್ತು ಎಂಬುದನ್ನು, ರಾಜ್ ಅದನ್ನು ನಿರಾಕರಿಸಿದ್ದರು ಎಂಬುದನ್ನು ಲೇಖನದಲ್ಲಿ ಬರೆಯಲಾಗಿದೆ.

ಫೋಟೊ ಕೃಪೆ ಸಂಗೀತಾ ಮ್ಯುಸಿಕ್ ಎಂದಿದ್ದು, ಅವರ ವೆಬ್‍ಸೈಟಿನ ಆಲ್ಬಮ್‍ನಲ್ಲಿ ಈ ಫೋಟೊ ಕಂಡುಬಂತು. ಸಂಗೀಯ ಮ್ಯೂಸಿಕ್‍ನವರ ಕಾರ್ಯಕ್ರಮಕ್ಕೆ ಇಂದಿರಾ ಗಾಂಧಿಯವರನ್ನು ಕರೆಸಿದಾಗ ಈ ಫೋಟೊ ಕ್ಲಿಕ್ಕಿಸಲಾಗಿದೆ. ಚಿತ್ರದಲ್ಲಿ ಪಾರ್ವತಮ್ಮ ರಾಜಕುಮಾರ್, ರಾಜ್ ಸಹೋದರಿ ಅವರನ್ನು ಕಾಣಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...