Homeನಿಜವೋ ಸುಳ್ಳೋಅರೆ, ವಿಚಿತ್ರವಾಗಿದೆ, ಯಾವುದಪ್ಪ ಈ ಫೋಟೊ?

ಅರೆ, ವಿಚಿತ್ರವಾಗಿದೆ, ಯಾವುದಪ್ಪ ಈ ಫೋಟೊ?

ದಕ್ಷಿಣದಲ್ಲಿ ಸಿನಿಮಾನಟರು ದಿಢೀರ್ ರಾಜಕೀಯ ನಾಯಕರಾದುದನ್ನು ಎನ್‍ಟಿಆರ್, ಎಂಜಿಆರ್ ಉದಾಹರಿಸಿ ಬರೆಯುವ ವೀರರಾಘವನ್ ಕರ್ನಾಟಕದಲ್ಲಿ ಅಂತಹ ಶಕ್ತಿ ಇದ್ದುದು ಡಾ ರಾಜ್‍ಗೆ ಮಾತ್ರ ಎಂದಿದ್ದರು

- Advertisement -
- Advertisement -

ಅರೆ, ವಿಚಿತ್ರವಾಗಿದೆ, ಯಾವುದಪ್ಪ ಈ ಫೋಟೊ?
ವರನಟ ಡಾ. ರಾಜ್ ಮತ್ತು ಇಂದಿರಾಗಾಂಧಿ ನಡುವೆ ನರೇಂದ್ರ ಮೋದಿ!

ಮಿಥ್ಯ: ಇಂಥದೊಂದು ಫೋಟೊ ಸಾಕಷ್ಟು ವೈರಲ್ ಆಗಿದೆ. ಅದು ಗುಜರಾತಿನಲ್ಲೇ ಹೆಚ್ಚು ಓಡಾಡುತ್ತಿದ್ದು, ಈ ಫೋಟೊ ಬಳಸುವವರ ಟಾರ್ಗೆಟ್ ನರೇಂದ್ರ ಮೋದಿ! ‘ನೋಡ್ರಪ್ಪ ನಿಮ್ಮ ಮೋದಿ ಸಾಬ್ ಕೂಡ ಕಾಂಗ್ರೆಸ್‍ಮನ್ ಆಗಿದ್ದ. ಈಗ ಏನ್ ಹೇಳ್ತೀರಿ ಭಕ್ತರೇ?’ ಎಂದು ಕಿಚಾಯಿಸುವ ಸಂದೇಶವನ್ನು ತೇಲಿಬಿಡಲಾಗಿದೆ. ‘ವೊಟ್ ಫಾರ್ ಎಐಎಂಐಎಂ’ ಫೇಸ್‍ಬುಕ್ ಪುಟದಲ್ಲಿ ಇದು 5 ಸಾವಿರಕ್ಕೂ ಹೆಚ್ಚು ಸಲ ಶೇರ್ ಆಗಿದ್ದರೆ, ಇನ್ನೊಂದು ಫೇಸ್‍ಬುಕ್ ಪುಟದಲ್ಲಿ 6 ಸಾವಿರಕ್ಕೂ ಹೆಚ್ಚು ಸಲ ಶೇರ್ ಆಗಿದೆ.

ಸತ್ಯ: ಅಂದಿನ ಪ್ರಧಾನಿ ಇಂದಿರಾಗಾಂಧಿ ಮತ್ತು ಕನ್ನಡದ ಹೆಮ್ಮೆ ಡಾ. ರಾಜಕುಮಾರ್ ಮಧ್ಯೆ ಯುವಕ ಮೋದಿ ಇರುವ ಈ ಫೋಟೋ ನಕಲಿ. ಇದನ್ನು ಫೋಟೊಶಾಪ್ ಮಾಡಲಾಗಿದೆ. ‘ಮೋದಿಯೂ ನಮ್ಮವನೇ ಆಗಿದ್ದ’ ಎಂದು ಕಾಂಗ್ರೆಸ್‍ನವರು ಈ ಕೆಲಸ ಮಾಡಿರಲಿಕ್ಕಿಲ್ಲ. ಆದರೆ ಎಐಎಂಐಎಂ ಫೇಸ್‍ಬುಕ್ ಪೇಜ್‍ನಿಂದ ಹೆಚ್ಚು ಶೇರ್ ಆಗಿರುವುದನ್ನು ನೋಡಿದರೆ, ಆ ಪಾರ್ಟಿ ಕಡೆಯವರು ಮಾಡಿರುವ ಸಾಧ್ಯತೆ ಇದ್ದು, ನೋಡಿ ಕಾಂಗ್ರೆಸ್, ಬಿಜೆಪಿ, ಇಂದಿರಾ, ಮೋದಿ ಎಲ್ಲ ಒಂದೇ ಎಂದು ಕಿಚಾಯಿಸುವ ಉದ್ದೇಶವಿರಬಹುದು. ಒಟ್ಟಿನಲ್ಲಿ ಎರಡೂ ಸಾಧ್ಯತೆಯಿವೆ.

ಈ ನಕಲಿ ಫೋಟೊದಲ್ಲಿ ಇಂದಿರಾ ಮತ್ತು ರಾಜ್ ಮಧ್ಯದಿಂದ ಮುಖ ಕಾಣುವಂತೆ ಹಿಂದಿನ ಸಾಲಿನಲ್ಲಿ ಮೋದಿ ಮುಖ ತುರುಕಲಾಗಿದೆ. ವೈರಲ್ ಮಾಡಿದವರು ರಾಜ್ ಹೆಸರನ್ನು ಎಲ್ಲೂ ಬಳಸಿಲ್ಲ. altnews ಈ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್‍ನಲ್ಲಿ ಪರಿಶೀಲಿಸಿದಾಗ, ದಿ ಕ್ವಿಂಟ್ ಪೋರ್ಟಲ್‍ನಲ್ಲಿ ‘Karnataka’s  reluctant politician: The Life and Times of ‘Annavru’ ಎಂಬ ಲೇಖನವಿದ್ದು ಅದರಲ್ಲಿ ಓರಿಜಿನಲ್ ಫೋಟೊ ಸಿಕ್ಕಿದೆ. ಸಂಗೀತ ಕಾರ್ಯಕ್ರಮವೊಂದರಲ್ಲಿ ತೆಗೆದ ಫೋಟೊ ಇದು. ಆ ಫೋಟೊದಲ್ಲಿ ಮೋದಿ ಮೂತಿ ಇಲ್ಲ. ಈ ಫೋಟೊವನ್ನು ಫೋಟೊಶಾಪ್ ಮಾಡಿ ಮೋದಿಯನ್ನು ತುರುಕಲಾಗಿದೆ.

ಓರಿಜಿನಲ್ ಫೋಟೊ

ನಮ್ಮ ಓದುಗರಿಗಾಗಿ ನಾನುಗೌರಿ ಡೆಸ್ಕ್ ಈ ಲೇಖನ ಹುಡುಕಿ ಓದಿದಾಗ, ಅದನ್ನು ದಿ ಕ್ವಿಂಟ್‍ಗೆ ಟಿ.ಎಂ. ವೀರರಾಘವನ್ 2018ರಲ್ಲಿ ಬರೆದಿದ್ದು 24-04-2019ರಂದು ಮತ್ತೆ ಅಪ್‍ಡೇಟ್ ಮಾಡಲಾಗಿದೆ. ದಕ್ಷಿಣದಲ್ಲಿ ಸಿನಿಮಾನಟರು ದಿಢೀರ್ ರಾಜಕೀಯ ನಾಯಕರಾದುದನ್ನು ಎನ್‍ಟಿಆರ್, ಎಂಜಿಆರ್ ಉದಾಹರಿಸಿ ಬರೆಯುವ ವೀರರಾಘವನ್ ಕರ್ನಾಟಕದಲ್ಲಿ ಅಂತಹ ಶಕ್ತಿ ಇದ್ದುದು ಡಾ ರಾಜ್‍ಗೆ ಮಾತ್ರ. ಹಲವಾರು ಸಲ ರಾಜಕೀಯ ಪಕ್ಷಗಳು ಅವರಿಗೆ ದುಂಬಾಲು ಬಿದ್ದರೂ ರಾಜ್ ಎಂದೂ ಒಪ್ಪಿಕೊಳ್ಳಲಿಲ್ಲ. 1978ರಲ್ಲಿ ಚಿಕ್ಕಮಗಳೂರು ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ರಾಜ್‍ರನ್ನು ಕಣಕ್ಕಳಿಸಲು ಜನತಾ ಪಕ್ಷ ಯತ್ನಿಸಿತ್ತು ಎಂಬುದನ್ನು, ರಾಜ್ ಅದನ್ನು ನಿರಾಕರಿಸಿದ್ದರು ಎಂಬುದನ್ನು ಲೇಖನದಲ್ಲಿ ಬರೆಯಲಾಗಿದೆ.

ಫೋಟೊ ಕೃಪೆ ಸಂಗೀತಾ ಮ್ಯುಸಿಕ್ ಎಂದಿದ್ದು, ಅವರ ವೆಬ್‍ಸೈಟಿನ ಆಲ್ಬಮ್‍ನಲ್ಲಿ ಈ ಫೋಟೊ ಕಂಡುಬಂತು. ಸಂಗೀಯ ಮ್ಯೂಸಿಕ್‍ನವರ ಕಾರ್ಯಕ್ರಮಕ್ಕೆ ಇಂದಿರಾ ಗಾಂಧಿಯವರನ್ನು ಕರೆಸಿದಾಗ ಈ ಫೋಟೊ ಕ್ಲಿಕ್ಕಿಸಲಾಗಿದೆ. ಚಿತ್ರದಲ್ಲಿ ಪಾರ್ವತಮ್ಮ ರಾಜಕುಮಾರ್, ರಾಜ್ ಸಹೋದರಿ ಅವರನ್ನು ಕಾಣಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...