Homeಕರ್ನಾಟಕತೇಜಸ್ವಿ ಸೂರ್ಯನನ್ನು ಸೋಲಿಸಲು ಬಿಜೆಪಿಯೊಳಗೆ ಅರ್ಧ ಪರಿವಾರ ಸಜ್ಜು

ತೇಜಸ್ವಿ ಸೂರ್ಯನನ್ನು ಸೋಲಿಸಲು ಬಿಜೆಪಿಯೊಳಗೆ ಅರ್ಧ ಪರಿವಾರ ಸಜ್ಜು

- Advertisement -
- Advertisement -

ಹೌದು, ಬಿಜೆಪಿ ಮತ್ತು ಸಂಘಪರಿವಾರದ ಒಳಗೆ ಇದೇನೂ ಗುಟ್ಟಿನ ವಿಷಯವಾಗುಳಿದಲ್ಲ. ಸೋಮಣ್ಣರ ಬಹಿರಂಗ ಅಸಮಾಧಾನ ಚಾನೆಲ್‍ಗಳಲ್ಲಿ ಸುದ್ದಿಯಾಗಿದೆ. ಆದರೆ, ಚಕ್ರವರ್ತಿ ಸೂಲಿಬೆಲೆ ಸ್ವತಃ ವಾಟ್ಸಾಪ್ ಸಂದೇಶ ಹರಿಬಿಟ್ಟಿರುವುದು ಮತ್ತು ಅವುಗಳ ಸ್ಕ್ರೀನ್‍ಷಾಟ್‍ಗಳೂ ಓಡಾಡುತ್ತಿರುವುದು ಇನ್ನೂ ಅವರ ವಲಯದೊಳಗೇ ಇದೆ. ಮೇ 23ರಂದು ತೇಜಸ್ವಿ ಹರಕೆಯ ಕುರಿಯಾದರೆ ಬಿಜೆಪಿ ಪರಿವಾರದೊಳಗಿನ ಆತನ ವಿರೋಧಿಗಳು ಸಂಪನ್ನರಾಗುವುದರಲ್ಲಿ ಸಂದೇಹವೇ ಇಲ್ಲ. ತೇಜಸ್ವಿನಿ ಅನಂತಕುಮಾರ್‍ರಿಗೆ ಟಿಕೆಟ್ ನಿರಾಕರಣೆಯಾಗಿದ್ದರಿಂದ, ಈಗಾಗಲೇ ಸೋಲಿನ ಸುಳಿಯಲ್ಲಿ ಸಿಕ್ಕಿಕೊಂಡಿರುವ ತೇಜಸ್ವಿ ಸೂರ್ಯನ ವಿರುದ್ಧ ಸಂಘಪರಿವಾರದ ಹುಡುಗರು ಮತ್ತು ಯುವ ಬ್ರಿಗೇಡ್ ಬಾಯ್ಸ್ ಸಹಾ ತೊಡೆತಟ್ಟಿದ್ದಾರೆ.

ಟಿಕೆಟ್ ಘೋಷಣೆಯಾದ ತಕ್ಷಣ ನಿದ್ದೆ ಬರ್ತಿಲ್ಲ, ನಂಗೆ ನಿದ್ದೆ ಬರ್ತಿಲ್ಲ ಎಂದು ಟ್ವೀಟ್ ಮಾಡಿದ್ದ ಎಳಸು ವ್ಯಕ್ತಿ ಈತ. ಅಲ್ಲಿಂದಾಚೆಗೆ ಟ್ವಿಟ್ಟರ್‍ನಲ್ಲಿ ಕೆಲವರು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಅದಕ್ಕೆ ಉತ್ತರವಾಗಿ ತೇಜಸ್ವಿ ಸೂರ್ಯನಿಂದ ತಾನು ಮೋಸ ಹೋಗಿದ್ದಾಗಿ ಸೋಮ್ ದತ್ತ ಎಂಬ ಉದ್ಯಮಿ ಟ್ವೀಟ್ ಮಾಡಿದ್ದು ಎಲ್ಲೆಡೆ ಸುದ್ದಿಯಾಗಿದೆ. ಆದರೆ, ಆಕೆ ಹೇಳಿರುವ ಮತ್ತೊಂದು ಮಾತು ಈ ರೀತಿ ಮೋಸ ಹೋಗಿರುವುದರಲ್ಲಿ ತಾನು ಮೊದಲನೆಯವಳೂ ಅಲ್ಲ, ಕೊನೆಯವಳೂ ಅಲ್ಲ ಎಂದು. ಇದರ ಕುರಿತು ಹೊರಗಿನ ವಲಯಕ್ಕೆ ಹೆಚ್ಚು ಗೊತ್ತಿಲ್ಲದಿದ್ದರೂ, ಸಂಘಪರಿವಾರದ ವಾಟ್ಸಾಪ್ ಗುಂಪುಗಳಲ್ಲಿ ಹೆಚ್ಚಿನ ಸುದ್ದಿ ಹರಿದಾಡುತ್ತಿದೆ. ಪ್ರಮುಖವಾಗಿ ರಿಪಬ್ಲಿಕ್ ಟಿವಿಯ ಮತ್ತೊಂದು ಹುಡುಗಿಯ ಬಗ್ಗೆ ಸಹಾ ಸುದ್ದಿ ಓಡಾಡುತ್ತಿದೆ. ಅದರ ಸ್ಕ್ರೀನ್‍ಷಾಟ್‍ನಲ್ಲಿ ಹೆಸರು ಇತ್ಯಾದಿಗಳ ವಿವರವಿದೆಯಾದ್ದರಿಂದ ಇಲ್ಲಿ ಪ್ರಕಟಿಸುತ್ತಿಲ್ಲ.

ಅರಬ್ ಮುಸ್ಲಿಂ ಮಹಿಳೆಯರ ಲೈಂಗಿಕತೆಯ ಕುರಿತೆಲ್ಲಾ ಅಸಭ್ಯವಾಗಿ ಟ್ವೀಟ್ ಮಾಡಿದ್ದ ತೇಜಸ್ವಿಯ ಮನಸ್ಥಿತಿ ನೋಡಿದರೆ ಇಂತಹವು ಇನ್ನೂ ಹೆಚ್ಚಿರಬಹುದೆಂದು ಯಾರಿಗೂ ಗೊತ್ತಾಗುತ್ತದೆ. ಆತ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದಾಗಿನಿಂದ ಆತನ ವಿರುದ್ಧ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್‍ಗಳ ಸುರಿಮಳೆಯಾಗಿದೆ. ಅಂಬೇಡ್ಕರ್ ಬಗ್ಗೆ ಹೇಳಿಕೆ, ಸಂವಿಧಾನ ಬದಲಿಸುವುದು, ಮಹಿಳೆಯರಿಗೆ ಮೀಸಲಾತಿ ನೀಡಬಾರದು ಎಂಬೆಲ್ಲಾ ವಿಷಯಗಳಲ್ಲಿ ಆತ ಹಿಂದೆ ಹೇಳಿದ್ದ ಮಾತು ವಿಡಿಯೋಗಳನ್ನೆಲ್ಲಾ ತಂದು ಸುರಿದು ಅಪಹಾಸ್ಯ ಮಾಡುತ್ತಿದ್ದಾರೆ. ಮಹಿಳೆಯರ ಕುರಿತ ಈತನ ಅಸಭ್ಯ ನಡವಳಿಕೆ ಹೇಸಿಗೆ ಹುಟ್ಟಿಸುವಂತಿದೆ. ಇನ್ನು ಮೋದಿ ಮೆಚ್ಚಿಸಲು ಕನ್ನಡ ವಿರೋಧಿ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಂಡಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ.

ಮಹತ್ವದ ವಿಷಯವೆಂದರೆ ಚಕ್ರವರ್ತಿ ಸೂಲಿಬೆಲೆಗೂ ತೇಜಸ್ವಿ ಸೂಯರ್ಂಗೂ ಮೊದಲಿಂದಲೂ ಮುಸುಕಿನ ಜಗಳ ಒಳಗೊಳಗೆ ಮೊದಲಿಂದಲೂ ಇತ್ತು. ತೇಜಸ್ವಿಗೆ ಟಿಕೆಟ್ ಘೋಷಣೆಯಾದ ದಿನ ನಿದ್ದೆ ಬಾರದೇ ಇದ್ದುದು ತೇಜಸ್ವಿಗಲ್ಲ, ಸೂಲಿಬೆಲೆಗೆ ಎಂಬುದು ಪರಿವಾರದ ಒಳಗಿನ ಮಾತು. ಇವರಿಬ್ಬರ ನಡುವೆ ಪರಸ್ಪರ ಅವಕಾಶ ಕಸಿಯುವುದು, ತಪ್ಪಿಸುವುದು ಹಿಂದಿನಿಂದಲೂ ನಡೆದೇ ಇತ್ತು. ಸುಳ್ಳುಗಳನ್ನು ಹರಡುವುದರಲ್ಲಿ, ಭಾಷಣಗಳನ್ನು ಮಾಡುವುದರಲ್ಲಿ, ವಯಸ್ಸಿನಲ್ಲಿ ಎಲ್ಲಾ ರೀತಿಯಲ್ಲಿಯೂ ಮೇಲಾಗಿದ್ದ ಸೂಲಿಬೆಲೆಗೆ ಟಿಕೆಟ್ ಸಿಗದೇ ತೇಜಸ್ವಿಗೆ ದಕ್ಕಿದ್ದು ಸೂಲಿಬೆಲೆಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ವಾಸ್ತವದಲ್ಲಿ ಒಂದು ವರ್ಷಕ್ಕೂ ಹಿಂದಿನಿಂದಲೇ ಚಕ್ರವರ್ತಿ ಸೂಲಿಬೆಲೆ ಫಾರ್ ಸಿಎಂ ಎಂಬ ಪೇಜ್‍ಗಳೆಲ್ಲಾ ಇದ್ದು, ಅಂತಹ ಮಹತ್ವಾಕಾಂಕ್ಷೆ ಆತನಿಗೂ ಅತಿಯಾಗಿಯೇ ಇದೆ. ಅದಕ್ಕೆ ಸೂಜಿ ಚುಚ್ಚಿದಂತಾಗಿದ್ದು, ಸೂಲಿಬೆಲೆ ತನ್ನ ಭಾಷಣಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಮಂಡ್ಯವನ್ನು ಉಲ್ಲೇಖಿಸುತ್ತಿದ್ದಾನೇ ಹೊರತು ಅಪ್ಪಿತಪ್ಪಿಯೂ ತೇಜಸ್ವಿ ಕುರಿತು ಒಂದೂ ಮಾತಾಡಿಲ್ಲ.

ತೇಜಸ್ವಿ ಪಕ್ಕಾ ಸಂಘದ ಉತ್ಪನ್ನ. ಸಂತೋಷ್ ಜಿ ಬಿಟ್ರೆ ಸೂರ್ಯನೆ ಟಿಪಿಕಲ್ ಸಂಘಿ ರಾಜಕಾರಣಿ. ತೇಜಸ್ವಿ ಸೂರ್ಯ ಪಿಯುಸಿ ದಿನಗಳಲ್ಲೇ ಎಂ ಎಲ್ ಎ – ಎಂ ಪಿ ಆಗ್ಬೇಕು ಅಂತ ಮಹತ್ವಾಕಾಂಕ್ಷೆ ಇಟ್ಕೊಂಡಿದ್ದ. ಅದಕ್ಕಾಗಿ ಸಂಘದ ಬೇರೆ ಹುಡುಗರನ್ನು ತುಳಿದು ಮೇಲೆ ಬರದಂತೆ ತಡೀತಿದ್ದ ಅನ್ನೋ ಆರೋಪವಿದೆ. ಸಂಘ ಪರಿವಾರದ ಸಿದ್ಧಾಂತಕ್ಕೆ ತಕ್ಕಂತೆ ಸುಳ್ಳೋ, ನಿಜವೋ ಅದನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಹೇಳುವುದರಲ್ಲಿ ಈತನಿಗಿದ್ದ ಸಾಮಥ್ರ್ಯದ ಆಧಾರದ ಮೇಲೆ ಬಿಜೆಪಿ ಸೋಶಿಯಲ್ ಮೀಡಿಯಾ ಜವಾಬ್ದಾರಿ ವಹಿಸಲಾಗಿತ್ತು. ಹಸಿ ಸುಳ್ಳುಗಳ ತಯಾರಿಕೆಯ ಆರೋಪದಲ್ಲಿ ಮಹೇಶ್ ವಿಕ್ರಮ ಹೆಗಡೆ ಜೈಲುಪಾಲಾದಾಗ ಆತನ ಪರವಾಗಿ ವಕೀಲಿಕೆ ಮಾಡಿದವನು ಇದೇ ತೇಜಸ್ವಿ ಸೂರ್ಯ.

ಈತನ ಮಾತು ಮಾತ್ರ ಸನಾತನ. ಜೀವನಶೈಲಿ ಮಾತ್ರ ಗಾಬರಿಯಾಗಬಹುದಾದಷ್ಟು ಆಧುನಿಕ. ವಿಲಾಸಿ, ಸ್ವೇಚ್ಛೆ. ಇವೆಲ್ಲಾ ಕಾರಣಗಳಿಂದ ಈತನನ್ನು ಕಂಡರೆ 50% ಬಿಜೆಪಿಗರಿಗೆ ಆಗಲ್ಲ. ಇನ್ನು 50% ಬಿಜೆಪಿಗರಿಗೆ ಅವನ್ಯಾರೆಂದೇ ಗೊತ್ತಿಲ್ಲ. ಬೆಂಗಳೂರಿನಲ್ಲಿ ಸರಿಯಾದ ಕಾರಣ ಸಿಗುವವರೆಗೂ ಪ್ರಚಾರ ಮಾಡುವುದಿಲ್ಲವೆಂದು ಈಗಾಗಲೇ ವಿ. ಸೋಮಣ್ಣ ಬಂಡಾಯವೆದ್ದಿದಾಗಿದೆ. ಆರ್.ಅಶೋಕ್‍ಗಂತೂ ಮುಂದೆ ಈತ ಗೆದ್ದರೆ ಈತನೆದುರು ತಾವು ಕೈ ಕಟ್ಟಿ ನಿಲ್ಲುವ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ತಯಾರಿಲ್ಲ. ಅದಕ್ಕಾಗಿ ಈ ಬಾರಿ ತೇಜಸ್ವಿ ಸೂರ್ಯನನ್ನು ಸೋಲಿಸಲು ಸೂಲಿಬೆಲೆ, ಸೋಮಣ್ಣ, ಅಶೋಕ್‍ಆದಿಯಾಗಿ ಎಲ್ಲರೂ ನಾ ಮುಂದು, ತಾ ಮುಂದು ಎಂದು ಪೈಪೋಟಿಗಿಳಿದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...