Homeಮುಖಪುಟಒಂದು ಸಂಶೋಧನಾ ಪ್ರಬಂಧಕ್ಕೆ ಸರಕಾರ ಹೆದರಿತೇಕೆ?

ಒಂದು ಸಂಶೋಧನಾ ಪ್ರಬಂಧಕ್ಕೆ ಸರಕಾರ ಹೆದರಿತೇಕೆ?

- Advertisement -
- Advertisement -

15ನೇ ಆಗಸ್ಟ್‌ಗೆ ಒಂದು ದಿನ ಮುನ್ನ ಬಂದ ಈ ಸುದ್ದಿ ಸ್ವಾತಂತ್ರ್ಯದ ಪರವಿರುವ ಪ್ರತಿಯೊಬ್ಬ ಭಾರತೀಯಳಿ/ನಿಗೆ ಚಿಂತೆಗೆ ದೂಡುತ್ತಿದೆ. ಸುದ್ದಿ ಏನೆಂದರೆ, ಅಶೋಕ ಯುನಿವರ್ಸಿಟಿಯ ಅರ್ಥಶಾಸ್ತ್ರದ ಯುವ ಪ್ರೊಫೆಸರ್ ಸಬ್ಯಸಾಚಿ ದಾಸ್ ರಾಜೀನಾಮೆ ನೀಡಬೇಕಾಗಿ ಬಂದಿದೆ. ಅವರು ಮಾಡಿದ ಅಪರಾಧವೇನೆಂದರೆ ಅವರು 2019ರ ಚುನಾವಣೆಗಳ ಅಂಕಿಅಂಶಗಳ ವಿಶ್ಲೇಷಣೆ ಮಾಡಿ ಒಂದು ಅಕೆಡೆಮಿಕ್ ಪ್ರಬಂಧ ಬರೆದಿದ್ದರು. ಈ ಸುದ್ದಿ ದೇಶದ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಉಳಿದುಕೊಂಡಿರುವ ಅಕೆಡೆಮಿಕ್ ಸ್ವಾತಂತ್ರದ ಮೇಲೆ ಘೋರ ಆಘಾತವಾಗಿದೆ.

ಅಂದಹಾಗೆ ಈ ಲೇಖಕರಿಗೆ ಹೆದರುವ ಯಾವ ಕಾರಣವೂ ಸರಕಾರಕ್ಕಿಲ್ಲ. ಸಬ್ಯಸಾಚಿ ದಾಸ್ ಇನ್ನೂ ಒಬ್ಬ ಪ್ರಸಿದ್ಧವಾದ ಅರ್ಥಶಾಸ್ತ್ರಜ್ಞರಲ್ಲ. ಅವರ ಹೆಚ್ಚಿನ ಲೇಖನಗಳು ಕಲ್ಯಾಣ ಯೋಜನೆಗಳ ಮೌಲ್ಯಮಾಪದಂತಹ ಪ್ರಶ್ನೆಗಳ ಮೇಲಿವೆ. ಯಾವುದೇ ರಾಜಕೀಯ ಸಂಘಟನೆ ಅಥವಾ ಸಿದ್ಧಾಂತದೊಂದಿಗೆ ಅವರ ಯಾವುದೇ ಸಂಬಂಧಗಳು ಕಂಡುಬಂದಿಲ್ಲ. ಹಾಗೂ ಸರಕಾರ ತನ್ನ ದಂಡ ಚಲಾಯಿಸಲು ಅಶೋಕ ಯುನಿವರ್ಸಿಟಿ ಯಾವುದೇ ಸರಕಾರಿ ಅನುದಾನದ ಮೇಲೆ ನಡೆಯುವ ಸಂಸ್ಥೆಯಂತೂ ಅಲ್ಲ.

ಯಾವ ಲೇಖನದ ಮೇಲೆ ಇಷ್ಟೊಂದು ವಿವಾದವಾಗಿದೆಯೋ, ಅದು ಈಗ ರಹಸ್ಯವಾಗಿ ಉಳಿದಿಲ್ಲ. ಈ ಲೇಖನವನ್ನು ಕೇವಲ ಒಂದೆರಡು ಕಾನ್ಫರೆನ್ಸ್‌ಗಳಲ್ಲಿ ಪ್ರಸ್ತುತಪಡಿಸಲಾಗಿದೆ ಹಾಗೂ ಪ್ರಕಟವಾಗುವುದಕ್ಕೂ ಮುಂಚೆ ಚರ್ಚೆಗೆ ಲಭ್ಯವಿದೆ. ಈ ಲೇಖನದಲ್ಲಿ ಸರಕಾರದ ಯಾವ ಟೀಕೆಯೂ ಇಲ್ಲ, ಬಿಜೆಪಿಯನ್ನು ನಿಂದಿಸಿಲ್ಲ, ಯಾವುದೇ ಆರೋಪ ಪ್ರತ್ಯಾರೋಪಗಳಿಲ್ಲ ಹಾಗೂ ಯಾವುದೇ ರಾಜಕೀಯ ವಾಗ್ದಾಳಿಯೂ ಇಲ್ಲ. “ಡೆಮಾಕ್ರಟಿಕ್ ಬ್ಯಾಕ್‌ಸ್ಲೈಡಿಂಗ್ ಇನ್ ವರ್ಲ್ಡ್‌ಸ್ ಲಾರ್ಜೆಸ್ಟ್ ಡೆಮಾಕ್ರಸಿ” (ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲಿ ಪ್ರಜಾಸತ್ತೆಯ ಹಿನ್ನಡೆ) ತಲೆಬರಹದ ಈ ಲೇಖನದಲ್ಲಿ 2019ರ ಲೋಕಸಭಾ ಚುನಾವಣೆಗಳ ಅಧಿಕೃತ ಪರಿಣಾಮಗಳನ್ನು ಸಂಖ್ಯಾಶಾಸ್ತ್ರದ ವಿಧಾನದ ಮೂಲಕ ವಿಶ್ಲೇಷಣೆ ಮಾಡಿದ್ದಾರೆ. ಒಂದು ಕಾಲದಲ್ಲಿ ನಾನೂ ಈ ವಿಷಯದ ಪರಿಣಿತನಾಗಿದ್ದರಿಂದ ವಿಶ್ವಾಸದಿಂದ ಇಷ್ಟು ಹೇಳಬಲ್ಲೆ; ಸಬ್ಯಸಾಚಿ ದಾಸ್‌ರ ಈ ಲೇಖನ ಭಾರತದ ಚುನಾವಣಾ ಅಂಕಿಅಂಶಗಳ ಮೇಲೆ ಬರೆಯಲಾಗಿರುವ ಅತ್ಯಂತ ಗಂಭೀರ ಹಾಗೂ ಗಹನವಾದ ಲೇಖನಗಳಲ್ಲಿ ಒಂದು ಎಂದು.

ನಿಶಿಕಾಂತ್ ದುಬೆ

ಈ ಅಂಕಿಅಂಶಗಳ ಅಥವಾ ವಿಧಾನದಲ್ಲಿ ಯಾವುದೇ ವಿವಾದವಿಲ್ಲ, ವಿವಾದವಿರುವುದು ಈ ಲೇಖನದ ನಿಷ್ಕರ್ಷದಲ್ಲಿ. 2019ರ ಚುನಾವಣೆಗಳ ಮತಗಟ್ಟೆಯಿಂದ ಹಿಡಿದು ಸೀಟುಗಳ ತನಕ ಅಂಕಿಅಂಶಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ನಂತರ ಏನೋ ಸಮಸ್ಯೆ ಇದೆ ಎಂಬ ನಿಷ್ಕರ್ಷಕ್ಕೆ ಲೇಖಕರು ಬರುತ್ತಾರೆ. ಯಾವ 59 ಕ್ಷೇತ್ರಗಳಲ್ಲಿ ಸೋಲುಗೆಲುವಿನ ತೀರ್ಮಾನ ಶೇ.5ಕ್ಕಿಂತ ಕಡಿಮೆ ಆಗಿದೆಯೋ, ಅವುಗಳಲ್ಲಿ 41 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಗಣಿತದ ಸಾಮಾನ್ಯ ನಿಯಮಗಳ ಅನುಗುಣವಾಗಿ ಹಾಗೂ ದೇಶ ಮತ್ತು ಜಗತ್ತಿನ ಚುನಾವಣೆಗಳ ಹಳೆಯ ದಾಖಲೆಗಳನ್ನು ನೋಡಿದರೆ, ಇದು ಅತ್ಯಂತ ಅಸಾಮಾನ್ಯವಾದ ಪ್ರವೃತ್ತಿಯಾಗಿ ಕಂಡುಬರುತ್ತದೆ. ಈ ಇಡೀ ಲೇಖನ ಅಸಾಮಾನ್ಯ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ನೋಡುತ್ತದೆ. ಬಿಜೆಪಿಯು ಅತ್ಯುತ್ತಮವಾಗಿ ಊಹೆಮಾಡಿರಬಹುದಾದ ಮುನ್ಸೂಚನೆ ಮತ್ತು ಉತ್ತಮವಾದ ಚುನಾವಣಾ ಪ್ರಚಾರದ ಕಾರಣದಿಂದ ಹೀಗೆ ಆಗಿರಬಹುದು ಎಂಬ ಸಾಧ್ಯತೆಯನ್ನು ಈ ಲೇಖನವು ಪರಿಶೀಲಿಸಿ ಅದನ್ನು ತಳ್ಳಿಹಾಕುತ್ತದೆ. ನಂತರ ಒಂದೊಂದು ವಿಷಯಕ್ಕೆ ಸಾಕ್ಷ್ಯ ಒದಗಿಸುತ್ತ ಈ ಲೇಖನವು ಕೆಲವು ಕ್ಷೇತ್ರಗಳಲ್ಲಿ ಅಕ್ರಮ ಆಗಿದೆ ಎಂಬುದನ್ನು ಸೂಚಿಸುತ್ತದೆ. ಲೇಖಕರ ಪ್ರಕಾರ, ಇದು ಕೆಲವು ಆಯ್ದ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಮುಸ್ಲಿಂ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಅಥವಾ ಮತದಾನದ ಅಥವಾ ಮತ ಎಣಿಕೆಯಲ್ಲಿ ಅಕ್ರಮ ಮಾಡುವುದರ ಮೂಲಕ ಆಗಿದೆ. ಈ ಲೇಖನ ಸಂಖ್ಯಾಶಾಸ್ತ್ರೀಯ ಪದ್ಧತಿಯ ಮೇಲೆ ಆಧಾರಿತವಾಗಿರುವುದರಿಂದ ಮೋಸದಾಟದ ಸಾಧ್ಯತೆಯನ್ನು ಸೂಚಿಸಬಲ್ಲದು; ಆದರೆ ಅದಕ್ಕೆ ಸಾಕ್ಷ್ಯ ಒದಗಿಸಲಾರದು. ಯಾವುದೇ ಸೆನ್ಸೇಷನಲ್ ಆರೋಪ ಹೊರಿಸುವ ಕೆಲಸ ಮಾಡದೇ ಲೇಖಕರು ಸ್ಪಷ್ಟಪಡಿಸುವುದೇನೆಂದರೆ, ಹೀಗೆ ಮಾಡಿದ್ದರೂ ಕೂಡ ಇದರಿಂದ ಬಿಜೆಪಿಗೆ ಗರಿಷ್ಠ 9ರಿಂದ 18 ಸೀಟುಗಳ ನಷ್ಟವಾಗುತ್ತಿತ್ತು. ಅದರಿಂದ ಬಿಜೆಪಿಯ ಬಹುಮತದ ಮೇಲೆ ಯಾವ ಪರಿಣಾಮವೂ ಬೀರುತ್ತಿರಲಿಲ್ಲ. ಹಾಗಾಗಿ ಲೇಖಕರು ಸ್ಪಷ್ಟಪಡಿಸುವುದೇನೆಂದರೆ, 2019ರಲ್ಲಿ ಬಿಜೆಪಿಯು ಮೋಸದಿಂದ ಚುನಾವಣೆ ಗೆದ್ದಿತ್ತು ಎಂಬ ನಿಷ್ಕರ್ಷವು ಖಂಡಿತವಾಗಿಯೂ ತಪ್ಪಾಗುತ್ತದೆ.

ಇದನ್ನೂ ಓದಿ: ಸಬ್ಯಸಾಚಿ ದಾಸ್ ಗೆ ಬೆಂಬಲಿಸಿ ಅಶೋಕ ವಿವಿಯ ಮತ್ತೋರ್ವ ಪ್ರಾಧ್ಯಾಪಕ ರಾಜೀನಾಮೆ

ಇಷ್ಟು ಸೀಮಿತವಾದ ಮಾತು ಹೇಳಿದ್ದಕ್ಕೆ ಇಷ್ಟೊಂದು ವಿವಾದ ಸೃಷ್ಟಿಯಾಗಿದೆ. ಬಿಜೆಪಿಯ ಸಮರ್ಥಕರು ಲೇಖಕರ ಮೇಲೆ ಎಲ್ಲಾ ಬಗೆಯ ಅಕೆಡೆಮಿಕ್ ಮತ್ತು ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ. ಇಂತಹ ಲೇಖನ ಬರೆಯುವುದಕ್ಕೆ ನೀವು ಹೇಗೆ ಅನುಮತಿ ನೀಡಿದಿರಿ ಎಂದು ಬಿಜೆಪಿ ಎಂಪಿ ನಿಶಿಕಾಂತ್ ದುಬೆ (ಇವರ ಡಿಗ್ರಿ ಬಗ್ಗೆ ವಿವಾದವಿದೆ) ಅಶೋಕ ಯುನಿವರ್ಸಿಟಿಗೆ ಕೇಳಿದರು. ತಮ್ಮ ಅಧ್ಯಾಪಕರ ಪರವಾಗಿ ನಿಲ್ಲುವುದರ ಬದಲಾಗಿ ಅಶೋಕ ಯುನಿವರ್ಸಿಟಿಯು ಒಂದು ಹೇಳಿಕೆ ನೀಡಿ ಲೇಖನ ಮತ್ತು ಲೇಖಕರಿಂದ ಅಂತರ ಕಾಪಾಡಿಕೊಂಡಿತು. ಈಗ ಗೊತ್ತಾಗಿದ್ದೇನೆಂದರೆ, ಪ್ರೊ ದಾಸ್ ಅವರು ವಿಶ್ವವಿದ್ಯಾಲಯಕ್ಕೆ ರಾಜೀನಾಮೆ ನೀಡಿದ್ದಾರೆ (ಅವರನ್ನು ವಿಶ್ವವಿದ್ಯಾಲಯವು ಕೆಲಸದಿಂದ ತೆಗೆದುಹಾಕಿಲ್ಲ); ಆದರೆ ಇಂತಹ ಪರಿಸ್ಥಿತಿಯಲ್ಲಿ ನೀಡಿದ ರಾಜೀನಾಮೆಯನ್ನು ಐಚ್ಛಿಕ ಸೇವಾನಿವೃತ್ತಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ನಿಸ್ಸಂಶಯವಾಗಿ ಲೇಖಕರ ಮೇಲೆ ಒತ್ತಡ ಹಾಕಲಾಗಿ, ಆ ಕಾರಣದಿಂದ ರಾಜೀನಾಮೆ ನೀಡಬೇಕಾಗಿ ಬಂದಿರುವುದು ಸ್ವಾಭಾವಿಕ.

ಅಶೋಕ ವಿಶ್ವವಿದ್ಯಾಲಯದಲ್ಲಿ ಈ ಘಟನೆ ಆಗಿರುವುದು ದೇಶಕ್ಕೆ ಒಂದು ಅಶುಭ ಸಂಕೇತ ನೀಡಿದೆ. ಗಮನಿಸಬೇಕಾದ ಅಂಶವೇನೆಂದರೆ, ಈ ಮುನ್ನ ಪ್ರೊ ಪ್ರತಾಪ್ ಭಾನು ಮೆಹ್ತಾ ಮತ್ತು ರಾಜೇಂದ್ರನ್ ನಾರಾಯಣರಿಗೂ ಸರಕಾರೀ ಒತ್ತಡದ ಅನುಮಾನದ ಕಾರಣದಿಂದ ಇದೇ ಅಶೋಕ ವಿಶ್ವವಿದ್ಯಾಲಯ ತೊರೆಯಬೇಕಾಗಿ ಬಂದಿತ್ತು. ಈ ವಿಶ್ವವಿದ್ಯಾಲಯವು ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯಗಳಲ್ಲಿ ದೇಶದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಯಾಗಿ ತನ್ನ ಗುರುತು ದಾಖಲಿಸಿಕೊಂಡಿದೆ; ಇದು ಹಣಕಾಸಿನ ವಿಷಯದಲ್ಲೂ ಸರಕಾರಿ ನಿಯಂತ್ರಣದಿಂದ ಸ್ವತಂತ್ರವಾಗಿದೆ. ತಾನು ಅಕೆಡೆಮಿಕ್ ಸ್ವಾತಂತ್ರ್ಯಕ್ಕೆ ಬದ್ಧವಾಗಿರುವುದಾಗಿ ವಿಶ್ವವಿದ್ಯಾಲಯ ಹೇಳಿಕೊಳ್ಳುತ್ತದೆ.

ಒಂದು ವೇಳೆ ಇಂತಹ ವಿಶ್ವವಿದ್ಯಾಲಯದ ಯಾವುದೇ ಅಧ್ಯಾಪಕನಿ/ಳಿಗೆ ತನ್ನ ಸಂಶೋಧನೆಗೆ ಇಂತಹ ಪರಿಣಾಮ ಎದುರಿಸಬೇಕಾಗುತ್ತದೆ ಎಂದರೆ ದೇಶದ ಉಳಿದೆಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಅಕೆಡೆಮಿಕ್ ಸಂಸ್ಥೆಗಳ ಪರಿಸ್ಥಿತಿ ಹೇಗಿರಬಹುದು ಎಂಬುದು ಸ್ಪಷ್ಟವಾಗುತ್ತದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ವಕಾಲತ್ತು ಮಾಡುತ್ತ ಜಾನ್ ಸ್ಟುವರ್ಟ್ ಮಿಲ್ ಹೇಳಿದ್ದೇನೆಂದರೆ, ’ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಕೇವಲ ಸತ್ಯ ಮತ್ತು ಪ್ರಾಮಾಣಿಕ ಮಾತುಗಳನ್ನು ಹೇಳುವ ಸ್ವಾತಂತ್ರ್ಯವಲ್ಲ. ಕೆಲವು ಅಪವಾದಗಳನ್ನು ಹೊರತುಪಡಿಸಿ, ಯಾವುದನ್ನು ನಾವು ಅಸತ್ಯ ಎಂದುಕೊಳ್ಳುತ್ತೇವೋ, ಅದನ್ನು ಸಾರ್ವಜನಿಕವಾಗಿ ಹೇಳುವ ಸ್ವಾತಂತ್ರ್ಯ ಇರಬೇಕು, ಆಗ ಅದರ ಸಾರ್ವಜನಿಕ ಖಂಡನೆ, ನಿರಾಕರಣೆ ಆಗಿ, ನಾವೆಲ್ಲ ಸತ್ಯದ ದಿಕ್ಕಿನಲ್ಲಿ ಮುಂದೆಹೋಗಬಹುದು’ ಎಂದು. ಹಾಗಾಗಿ, ಸಬ್ಯಸಾಚಿ ದಾಸ್‌ರ ಲೇಖನ ದೋಷಪೂರ್ಣವಾಗಿದೆ ಹಾಗೂ ಅವರ ನಿಷ್ಕರ್ಷ ಪೊಳ್ಳಾಗಿದೆ ಎಂದು ವಾದಕ್ಕಾಗಿ ಒಂದು ಕ್ಷಣ ಒಪ್ಪಿಕೊಂಡರೂ ಸಹ ಆಗಲೂ ಅವರ ಧ್ವನಿ ಹತ್ತಿಕ್ಕುವುದು ಪ್ರಜಾಪ್ರಭುತ್ವಕ್ಕೆ ಹಾನಿಕಾರಕವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಅವರ ಅಂಕಿಅಂಶಗಳು, ವಿಧಾನ ಮತ್ತು ನಿಷ್ಕರ್ಷದ ನಿರಾಕರಣೆ ಮಾಡಲು, ಖಂಡಿಸಲು ಅಧಿಕಾರವಿದೆ; ಆ ಪ್ರಯತ್ನವನ್ನು ಬಿಜೆಪಿ ಸಮರ್ಥಕರು ಕಳೆದ ಎರಡು ವಾರಗಳಿಂದ ಮಾಡಿದ್ದಾರೆ. ಆದರೆ ಅಧಿಕಾದ ಬಲದಿಂದ ಇಂತಹ ಧ್ವನಿಯನ್ನು ಮುಚ್ಚಿಹಾಕುವುದು ನಮ್ಮ ಪ್ರಜಾಪ್ರಭುತ್ವದ ದೌರ್ಬಲ್ಯದ ಸೂಚನೆ ನೀಡುತ್ತದೆ. ಇದರಿಂದ ಸಬ್ಯಸಾಚಿ ದಾಸ್ ಅವರು ಆಡಳಿತ ಪಕ್ಷದ ದೌರ್ಬಲ್ಯದ ಮೇಲೆಯೇ ದಾಳಿ ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತೆ ಹಾಗೂ ಏನೋ ಅಕ್ರಮ ನಡೆದಿದೆ ಎಂಬ ಅನುಮಾನಕ್ಕೆ ಪುಷ್ಟಿನೀಡುತ್ತದೆ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟ್ರಾಧ್ಯಕ್ಷರು. ರೈತ ಸಮಸ್ಯೆಗಳನ್ನು ಒಳಗೊಂಡಂತೆ ಪ್ರಸಕ್ತ ದೇಶದ ಸಮಸ್ಯೆಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿರುವ ಯೋಗೇಂದ್ರ ಅವರು ಜನಪರ ಹೋರಾಟಗಳಲ್ಲಿ ಭಾಗಿಯಾಗುವಂತೆಯೇ ಅವುಗಳ ವಿಚಾರಗಳನ್ನು ಸಾಮಾನ್ಯರಿಗೆ ತಿಳಿಸಲು ಜನಪ್ರಿಯ ಪತ್ರಿಕೆಗಳಿಗೆ ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರಾಜಭವನ’ಗಳನ್ನು ‘ಲೋಕಭವನ’ಗಳೆಂದು ಮರುನಾಮಕರಣ; ಇದು ಒಕ್ಕೂಟ ವ್ಯವಸ್ಥೆ ಮತ್ತು ಭಾಷಾ ಸಮಾನತೆಯ ಮೇಲಿನ ಆಕ್ರಮಣ: ಜಾಗೃತ ಕರ್ನಾಟಕ

ದೇಶಾದಾದ್ಯಂತ ಇರುವ ರಾಜಭವನಗಳ ಹೆಸರನ್ನು ಲೋಕಭವನ ಎಂದು ಮರುನಾಮಕರಣ ಮಾಡುವುದಾಗಿ ಕೇಂದ್ರ ಗೃಹಸಚಿವಾಲಯ ತೀರ್ಮಾನಿಸಿದೆ. ಕೇಂದ್ರದ  ಈ ನೀತಿಯನ್ನು ವಿರೋಧಿಸಿರುವ ಜಾಗೃತ ಕರ್ನಾಟಕ ದೇಶದ ಎಲ್ಲಾ ಹಿಂದಿಯೇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ....

ಯುಜಿಸಿ ಈಕ್ವಿಟಿ ನಿಯಮಗಳ ಮೇಲಿನ ಸುಪ್ರೀಂ ಕೋರ್ಟ್ ತಡೆಗೆ ವಿದ್ಯಾರ್ಥಿಗಳ ಪ್ರತಿಭಟನೆ, ರೋಹಿತ್ ಕಾಯ್ದೆಗೆ ಒತ್ತಾಯ

ಯುಜಿಸಿ ಇಕ್ವಿಟಿ ನಿಯಮಗಳಿಗೆ ಸುಪ್ರೀಂ ಕೋರ್ಟ್ ನೀಡಿದ ತಡೆಯಾಜ್ಞೆಯ ವಿರುದ್ಧ ಮತ್ತು ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯವನ್ನು ಎದುರಿಸಲು ಶಾಸನಬದ್ಧ ರೋಹಿತ್ ಕಾಯ್ದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್ಎ)...

ನರವಾಣೆ ಅಪ್ರಕಟಿತ ಪುಸ್ತಕ ಗದ್ದಲ | ಸತ್ಯ ಹೊರಬಂದರೆ ಮೋದಿ, ರಾಜನಾಥ್ ಸಿಂಗ್ ಮುಖವಾಡ ಬಯಲಾಗಲಿದೆ : ರಾಹುಲ್ ಗಾಂಧಿ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ ಕುರಿತು ರಾಹುಲ್ ಗಾಂಧಿ ಸೋಮವಾರ (ಫೆ.2) ಲೋಕಸಭೆಯಲ್ಲಿ ಉಲ್ಲೇಖಿಸಿದ್ದು, ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ...

ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ಘರ್ಷಣೆ : ಮೂವರ ಬಂಧನ

ಗುಜರಾತ್‌ನ ಪಠಾಣ್ ತಾಲೂಕಿನ ಚದ್ರುಮಣ ಗ್ರಾಮದಲ್ಲಿ ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಐವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ದ ಎಸ್‌ಸಿ/ಎಸ್‌ಟಿ...

ಲೋಕಸಭೆಯಲ್ಲಿ ಲಡಾಖ್ ಬಿಕ್ಕಟ್ಟಿನ ಬಗ್ಗೆ ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆ ಉಲ್ಲೇಖಿಸಿದ ರಾಹುಲ್ ಗಾಂಧಿ: ಸಭೆಯಲ್ಲಿ ತೀವ್ರ ಗದ್ದಲ

ಸೋಮವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಆತ್ಮಚರಿತ್ರೆಯಿಂದ ಉಲ್ಲೇಖಿಸಲು ಪ್ರಯತ್ನಿಸಿದ ನಂತರ ಗದ್ದಲ ಭುಗಿಲೆದ್ದಿತು. ರಾಹುಲ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ರಕ್ಷಣಾ ಸಚಿವ...

ಪಂಜಾಬ್ ನಿರೀಕ್ಷೆಗಳನ್ನು ಪೂರೈಸುವಲ್ಲಿ ಕೇಂದ್ರ ಬಜೆಟ್ ಮತ್ತೊಮ್ಮೆ ವಿಫಲವಾಗಿದೆ: ಸಿಎಂ ಭಗವಂತ್ ಮಾನ್

ಕೇಂದ್ರ ಬಜೆಟ್ ಮತ್ತೊಮ್ಮೆ ಪಂಜಾಬ್‌ನ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಸಚಿವರು ಭಾನುವಾರ ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ರೈತರಿಗೆ ಯಾವುದೇ...

ರಾಜ್ಯಪಾಲರು ಪೂರ್ಣ ಭಾಷಣ ಓದಿಲ್ಲ, ‘ಜೈ ಸಂವಿಧಾನ’ ಎನ್ನುವುದನ್ನು ಉಲ್ಲೇಖಿಸದೆ ಹೋದರು : ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರು ಪೂರ್ತಿ ಭಾಷಣ ಓದದೆ ತರಾತುರಿಯಲ್ಲಿ ಹೋದರು. ಭಾಷಣದಲ್ಲಿದ್ದ "ಜೈ ಸಂವಿಧಾನ" ಎನ್ನುವುದನ್ನೂ ಉಲ್ಲೇಖಿಸದೆ ತೆರಳಿದರು. ರಾಷ್ಟ್ರಗೀತೆ ಮುಗಿಯುವವರೆಗೂ ಕಾಯದೆ ಹೋಗಿಬಿಟ್ಟರು. ಇದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಿಜೆಪಿ ಶಾಸಕ...

ಉತ್ತರಾಖಂಡ| ಹಿಂದುತ್ವ ಗುಂಪಿನ ಕಿರುಕುಳದಿಂದ ಮುಸ್ಲಿಂ ಅಂಗಡಿ ಮಾಲೀಕನನ್ನು ರಕ್ಷಿಸಿದ ದೀಪಕ್ ಕುಮಾರ್

ಸ್ಥಳೀಯ ಮುಸ್ಲಿಂ ಅಂಗಡಿ ಮಾಲೀಕನ ವಿರುದ್ಧ ಬಜರಂಗದಳ ಸದಸ್ಯರು ನೀಡುತ್ತಿದ್ದ ಕಿರುಕುಳವನ್ನು ಜಿಮ್ ಮಾಲೀಕ ದೀಪಕ್ ಕುಮಾರ್ ಸ್ಥಳದಲ್ಲೇ ಎದುರಿಸಿದ್ದಾರೆ. ಆಕ್ರೋಶಿತರಾದ ಹಿಂದುತ್ವ ಗುಂಪಿನ ಸದಸ್ಯರು ದೀಪಕ್ ವಿರುದ್ಧವೇ ಪ್ರತಿಭಟನೆ ನಡೆಸಿದ್ದು, ಹಲವಾರ...

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ...

ದಕ್ಷಿಣ ಪಿನಾಕಿನಿ ಜಲವಿವಾದ : ನ್ಯಾಯಮಂಡಳಿ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶ

ದಕ್ಷಿಣ ಪಿನಾಕಿನಿ (ಪೆನ್ನೈಯಾರ್) ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ಬಾಕಿ ಇರುವ ವಿವಾದಗಳನ್ನು ಪರಿಹರಿಸಲು ನ್ಯಾಯಮಂಡಳಿ ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಫೆ.2) ನಿರ್ದೇಶನ ನೀಡಿದೆ. ಕೇಂದ್ರ...