Homeಮುಖಪುಟಇಂದು ನಾವು ಗಾಂಧೀಜಿಯವರನ್ನೇಕೆ ನೆನೆಯಬೇಕು? - ಜಿ.ಎನ್‌. ನಾಗರಾಜ್

ಇಂದು ನಾವು ಗಾಂಧೀಜಿಯವರನ್ನೇಕೆ ನೆನೆಯಬೇಕು? – ಜಿ.ಎನ್‌. ನಾಗರಾಜ್

ಅಂದು ನೀಲಿ ರೈತರು ಅನುಭವಿಸಿದ ಸಂಕಟಗಳಂತಹವೇ ಭಾರತದ ಎಲ್ಲ ರೈತರ ಮೇಲೆ ಎರಗುತ್ತಿರುವ ಸಂದರ್ಭದಲ್ಲಿ ನೀಲ ವಿದ್ರೋಹ್, ಚಂಪಾರಣ್ ಹೋರಾಟಗಳು ನೆನಪಿಗೆ ಬಾರದಿದ್ದೀತೆ ?

- Advertisement -
- Advertisement -

ಭಾರತ ಇಂದು ಎದುರಿಸುತ್ತಿರುವ ಹಲವು ರೀತಿಯ ಸಂಕಟಗಳ ಪರಿಸ್ಥಿತಿಯಲ್ಲಿ ಗಾಂಧಿ ಅವರ ಪ್ರಧಾನ ಕೊಡುಗೆ ಏನೆಂದು ನೆನೆಯುವುದು ಮಾತ್ರವಲ್ಲ, ಅವುಗಳಲ್ಲಿ ಕ್ರಿಯಾಶೀಲವಾಗಿ ಕಾರ್ಯಗತ ಮಾಡಬೇಕಾದವುಗಳನ್ನು ಮಾತ್ರ ಈ ಕಿರು ಟಿಪ್ಪಣಿಯಲ್ಲಿ ಪರಿಶೀಲಿಸಬಯಸುತ್ತೇನೆ.

ಕೆಲವೇ ದಿನಗಳ ಹಿಂದೆ ದೇಶಾದ್ಯಂತ ಆರಂಭವಾದ ರೈತ ಹೋರಾಟದ ಮೊದಲ ಸುತ್ತು ಮುಗಿದಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಕೋಟ್ಯಂತರ ರೈತರು, ಕಾರ್ಮಿಕರು ಹಾಗೂ ಇತರ ಅನೇಕ ಜನ ಸಮುದಾಯಗಳು ಚಳುವಳಿಗೆ ಇಳಿದಿದ್ದಾರೆ. ಈ ಚಳುವಳಿ ಗಾಂಧಿಯವರನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ.

ಇದನ್ನೂ ಓದಿ: ಮಹಾತ್ಮ ಗಾಂಧಿ ಬಗ್ಗೆ ಸಂಘಪರಿವಾರ ಮತ್ತು ಜರ್ಮನಿಯ ಗೊಬೆಲ್ಸ್‌ಗೆ ಒಂದೇ ತರಹದ ಅಸಹನೆ ಏಕಿತ್ತು?

ಗಾಂಧೀಜಿಯವರು ಭಾರತದಲ್ಲಿ ಮೊದಲು ಕೈಗೊಂಡ ಹೋರಾಟಗಳು ಬ್ರಿಟಿಷ್ ಲೂಟಿಕೋರರು ಭಾರತದ ಬಡ ರೈತಾಪಿ ಜನರ ಮೇಲೆ ಎಸಗುತ್ತಿದ್ದ ದೌರ್ಜನ್ಯಗಳ ವಿರುದ್ಧ. ಈ ರೈತ ಹೋರಾಟಗಳಲ್ಲಿ ಪಡೆದ ಭಾಗಶಃ ಯಶಸ್ಸು ಅವರನ್ನು ಭಾರತದ ಒಬ್ಬ ಪ್ರಮುಖ ನಾಯಕರಾಗಿ ಸ್ಥಾಪಿಸಿತು. ತಿಲಕ್ ಯುಗದ ಅಂತ್ಯಕ್ಕೆ ನಾಂದಿ ಹಾಡಿತು.

PC: Central Press/Getty Images

ಬಿಹಾರದ ಚಂಪಾರಣ್ ಪ್ರದೇಶದಲ್ಲಿ, ಮ್ಯಾಂಚೆಸ್ಟರ್ ಜವಳಿ ಕೈಗಾರಿಕೆಗಳಲ್ಲಿ ಬಣ್ಣ ಹಚ್ಚುವುದಕ್ಕೆ ಬೇಕಾದ ನೀಲಿ ಬೆಳೆಯನ್ನು ಬೆಳೆಯುವಂತೆ ಒತ್ತಾಯ ಮಾಡಿ, ನಂತರ ಅದರ ಬೆಲೆಯನ್ನು ಏರುಪೇರು ಮಾಡುವುದು, ಕಂದಾಯವನ್ನು ಒತ್ತಾಯವಾಗಿ ವಸೂಲಿ ಮಾಡುವುದರ ಮೂಲಕ ಶೋಷಿಸುತ್ತಿದ್ದ ಬ್ರಿಟಿಷರು ಮತ್ತವರ ಬಾಲಂಗೋಚಿಗಳ ವಿರುದ್ಧ ಗಾಂಧೀಜಿ ಹೂಡಿದ ಚಳುವಳಿ ಅದು.

ನೀಲಿ ಬೆಳೆಯ ವಿರುದ್ಧ ಚಳುವಳಿಗೊಂದು ದೊಡ್ಡ ಇತಿಹಾಸವೇ ಇತ್ತು. ಬಂಗಾಲ, ಬಿಹಾರ, ಯುಪಿಗಳಲ್ಲಿ ಹಲವಾರು ಜಿಲ್ಲೆಗಳಲ್ಲಿ ರೈತರು ಬೆಳೆಯುತ್ತಿದ್ದ ಆಹಾರದ ಬೆಳೆಗಳನ್ನು ಕೈಬಿಟ್ಟು ನೀಲಿ ಮರದ ತೋಟಗಳನ್ನು ನೆಡಲು ಒತ್ತಾಯಿಸಲಾಯಿತು. ಆರಂಭದಲ್ಲಿ ಲಾಭಕರ ಬೆಲೆ, ತೋಟ ಮಾಡಲು ಸಾಲ ಇತ್ಯಾದಿಗಳನ್ನು ನೀಡಿ ಉತ್ತೇಜಿಸಲಾಯಿತು. ಆದರೆ ಒಮ್ಮೆ ಈ ಸಾಲ ಪಡೆದವರು ಎಂದೆಂದಿಗೂ ಸಾಲಗಾರರೇ ಆಗಿ ಉಳಿಯುವಂತಹ ದುಬಾರಿ ಬಡ್ಡಿ ಜೊತೆಗೆ, ಅನಕ್ಷರಸ್ಥ ರೈತರಿಗೆ ಲೆಕ್ಕದಲ್ಲಿ ಮೋಸ ಎಸಗಲಾಗುತ್ತಿತ್ತು.

ಇದನ್ನೂ ಓದಿ: ನೆನೆಯಬೇಕಿದೆ ಮಹಾತ್ಮನ ಮಡದಿಯನು…. : ಡಿ.ಉಮಾಪತಿ

ಇದರ ವಿರುದ್ಧ ಸಿಪಾಯಿ ದಂಗೆಯ ನಂತರದ ಕೆಲವೇ ಸಮಯದಲ್ಲಿ ಬಂಗಾಲದ ಆದಿವಾಸಿಗಳು ಮತ್ತಿತರ ರೈತರು ಸ್ಥಳೀಯ ನಾಯಕತ್ವದಲ್ಲಿ ದೊಡ್ಡ ಹೋರಾಟ ಮಾಡಿದರು. ಈ ಹೋರಾಟ ಬಂಗಾಲದ ಹಲವು ಜಿಲ್ಲೆಗಳಿಗೆ ಹಬ್ಬಿತು. ಸೈನ್ಯ ಬಳಸಿ ದೊಡ್ಡ ಹತ್ಯಾಕಾಂಡ ನಡೆಸಿ ಈ ಹೋರಾಟವನ್ನು ಹತ್ತಿಕ್ಕಿದರೂ ಅದು ಜನರಲ್ಲಿ ವ್ಯಾಪಕ ಜಾಗೃತಿಯನ್ನು ಉಂಟುಮಾಡಿತು. ಆಗ ಮೈಕೆಲ್ ಮಧುಸೂದನ ದತ್ತರು ಬರೆದ ನೀಲ ದರ್ಪಣ ಎಂಬ ನಾಟಕ ಬಹಳ ಜನಪ್ರಿಯವಾಗಿ ಈಸ್ಟ್ ಇಂಡಿಯಾ ಕಂಪನಿಯಿಂದ ನಿಷೇಧಕ್ಕೊಳಗಾಯಿತು.

ಗಾಂಧೀಜಿಯವರು ಇಂತಹ ಹೋರಾಟದ ವಾರಸುದಾರಿಕೆ ವಹಿಸಿಕೊಂಡಂತಾಯಿತು. ಗಾಂಧೀಜಿಯವರ ಚಳುವಳಿ ಚಂಪಾರಣ್‌ಗೆ ಸೀಮಿತವಾದರೂ ವ್ಯಾಪಕ ಜನಪ್ರಿಯತೆ ಪಡೆಯಿತು. ಇದರ ನಂತರ ಗಾಂಧೀಜಿ ಅಹಮದಾಬಾದ್‌ನಲ್ಲಿ ಜವಳಿ ಕೈಗಾರಿಕಾ ಕಾರ್ಮಿಕರ ಮುಷ್ಕರದಲ್ಲಿ ಮಧ್ಯಪ್ರವೇಶ ಮಾಡಿದರು. ಭಾರತದಲ್ಲಿ ಗಾಂಧೀಜಿಯವರ ಮೊದಲ ಉಪವಾಸ ಸತ್ಯಾಗ್ರಹ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಎಂಬುದು ಗಮನಾರ್ಹ.

PC:NYTimes

ಒಂದು ಕಡೆ ರೈತರ ಮೇಲೆ ಮತ್ತೊಂದು ಕಡೆ ಕಾರ್ಮಿಕರ ಮೇಲೆ ಆಳರಸರ ದಬ್ಬಾಳಿಕೆಯ ವಿರುದ್ಧ ಹೋರಾಟಗಳ ಮೂಲಕವೇ ಗಾಂಧೀಜಿ ಭಾರತದ ರಾಜಕೀಯ ನಭಕ್ಕೆ ಕಾಲಿಟ್ಟರು. ಹೀಗೆ ಸ್ವಾತಂತ್ರ್ಯ ಚಳುವಳಿಗೆ ಈ ಎರಡು ಬಹು ಮುಖ್ಯ ವರ್ಗಗಳನ್ನು ಸೆಳೆದರು ಎಂಬುದು ಗಮನಾರ್ಹ. ಚಂಪಾರಣ್ ಹೋರಾಟದಲ್ಲಿಯೇ ಗಾಂಧೀಜಿ ನಾಗರಿಕ ಹಕ್ಕುಗಳನ್ನು ಎತ್ತಿ ಹಿಡಿದು ಬ್ರಿಟಿಷ್ ಸರ್ಕಾರ ವಿಧಿಸಿದ್ದ ನಿಷೇಧವನ್ನು ಧಿಕ್ಕರಿಸಿ ಚಂಪಾರಣ್‌ನಲ್ಲಿ ವ್ಯಾಪಕ ಪ್ರವಾಸ ಕೈಗೊಂಡರು. ಭಾರತದಲ್ಲಿ ಮೊದಲ ಬಾರಿಗೆ ಬಂಧನಕ್ಕೊಳಗಾದರು. ಜನ ಪೊಲೀಸ್ ಠಾಣೆಗಳು, ಕೋರ್ಟ್‌ಗೆ ಮುತ್ತಿಗೆ ಹಾಕಿ ಬಿಡಿಸಿಕೊಂಡು ಬಂದರು.

ಇದನ್ನೂ ಓದಿ: ನೀವು ಯುದ್ಧದಲ್ಲಿ ಗೆದ್ದರೂ ಅದು ಸರಿಯೆಂದೇನೂ ಸಾಬೀತಾಗುವುದಿಲ್ಲ: ಹಿಟ್ಲರ್‌ಗೆ ಗಾಂಧಿ ಬರೆದಿದ್ದ ಪತ್ರ

ಈ ಎರಡು ಹೋರಾಟಗಳ ಮೂಲಕ ಗಾಂಧೀಜಿ ತಾವು ದಕ್ಷಿಣ ಆಫ್ರಿಕಾದಲ್ಲಿ ಪ್ರಯೋಗ ಮಾಡಿ ರೂಪಿಸಿಕೊಂಡಿದ್ದ ಸತ್ಯಾಗ್ರಹವೆಂದು ಜನಜನಿತವಾದ ಶಾಂತಿಯುತ ಚಳುವಳಿಯ ವಿಧಾನವನ್ನು ಭಾರತದಲ್ಲಿ ಪ್ರಯೋಗಕ್ಕೆ ತಂದರು. ಮತ್ತಷ್ಟು ಉತ್ತಮಗೊಳಿಸಿ ಪರಿಣಾಮಕಾರಿಯಾಗಿಸಿದರು.

ಈ ವಿಧಾನಗಳು ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿಗಳ (ಕೆಲವು ಹೋರಾಟಗಳು ಬೇರೆ ವಿಧಾನಗಳನ್ನು ರೂಪಿಸಿಕೊಂಡವು ಎಂಬ ಮಾತು ಬೇರೆ) ಪ್ರಮುಖ ಅಸ್ತ್ರವಾದವು ಎಂಬುದು ಎಲ್ಲರೂ ತಿಳಿದಿರುವ ಸಂಗತಿ. ಸತ್ಯಾಗ್ರಹ ವಿಧಾನವು ಇಡೀ ಜಗತ್ತಿನ ಜನಹೋರಾಟಗಳ ಚರಿತ್ರೆಗೆ ಪ್ರಸಿದ್ಧವಾದ ಕೊಡುಗೆಗಳಾದವು. ಸ್ವಾತಂತ್ರ್ಯಾನಂತರದ ಕಾಲದಲ್ಲಿಯೂ ಕೂಡಾ ವ್ಯಾಪಕವಾಗಿ ಬಳಕೆಯಾಗುತ್ತಿವೆ.

ಸತ್ಯಾಗ್ರಹ ವಿಧಾನ ಇಷ್ಟು ಪ್ರಾಮುಖ್ಯತೆ ಪಡೆಯಲು ಮುಖ್ಯವಾದ ಅಂಶವೆಂದರೆ ದೊಡ್ಡ ಪ್ರಮಾಣದಲ್ಲಿ ಜನ ಸಮುದಾಯಗಳು ಹೋರಾಟಗಳಲ್ಲಿ ಭಾಗವಹಿಸುವಂತೆ ಮಾಡಿದ್ದು. ಬಹಳ ಪ್ರಬಲವಾದ ಮಿಲಿಟರಿ ಹೊಂದಿದ, ದಬ್ಬಾಳಿಕೆ, ಕ್ರೌರ್ಯಗಳನ್ನು ನಿತ್ಯ ಬಳಸುವ ಬಲಶಾಲಿ ಸರ್ಕಾರದ ವಿರುದ್ಧ ಶಸ್ತ್ರಹೀನ ಅಥವಾ ಪ್ರಾಥಮಿಕ ರೂಪದ ಶಸ್ತ್ರಗಳನ್ನು ಮಾತ್ರ ಹೊಂದಿರುವ ಸಾಮಾನ್ಯ ಜನತೆ ಎದುರುಗೊಳ್ಳುವುದಕ್ಕೆ ಮತ್ತು ಅವು ಬೃಹತ್ ಹೋರಾಟಗಳಾಗಿ ಪರಿಣಮಿಸುವುದಕ್ಕೆ ಈ ವಿಧಾನಗಳು ನೆರವಾದವು.

PC: Commons

ಇವು ಮುಂದೆ 1920 ರ ಅಸಹಕಾರ ಚಳುವಳಿಗಳಲ್ಲಿ ಮತ್ತಷ್ಟು ವಿಸ್ತಾರಗೊಂಡವು. ಸುಡು ಸುಡು ಪರದೇಶಿಯರ ವಸ್ತ್ರವ, ತೊಡು ಖಾದಿ ಸಮಸ್ತವಾ ಎಂದು ಜನಪದವೇ ಆಗಿಬಿಟ್ಟ ಪರದೇಶಿ ವಸ್ತುಗಳ ಬಹಿಷ್ಕಾರ, ಕಾಲೇಜುಗಳು, ಕೋರ್ಟ್‌ಗಳ ಬಹಿಷ್ಕಾರ, ಸೀಮಿತ ಪ್ರಮಾಣದಲ್ಲಿ ಮಾತ್ರ ಪ್ರಯೋಗಕ್ಕೆ ಅವಕಾಶ ನೀಡಲ್ಪಟ್ಟ ಕರ ನಿರಾಕರಣೆ, ಜೈಲು ಭರೋ, ಸಾಮೂಹಿಕ ಹರತಾಳ ಇಂತಹವುಗಳು ಸತ್ಯಾಗ್ರಹಕ್ಕೆ ಸೇರಿಸಲ್ಪಟ್ಟ ಹೊಸ ವಿಧಾನಗಳಾದವು.

ಇದನ್ನೂ ಓದಿ: ಕ್ರಾಂತಿಯ ಕಿಡಿ ಹೊತ್ತಿಸಿದವರು ಕಿಡಿಗೇಡಿಗಳಿಂದ ಹತ್ಯೆಯಾದ ಕಥೆ

ಇತ್ತೀಚಿನ ರೈತ ಪ್ರತಿರೋಧದ ಸಮಯದಲ್ಲಿ ಈ ವಿಧಾನಗಳು ವ್ಯಾಪಕ ಬಳಕೆಯಾಗುವಾಗ ಗಾಂಧೀಜಿಯವರ ನೆನಪು ಬಾರದಿದ್ದೀತೆ?

ಜೊತೆಗೆ ಅಂದು ನೀಲಿ ರೈತರು ಅನುಭವಿಸಿದ ಸಂಕಟಗಳಂತಹವೇ ಭಾರತದ ಎಲ್ಲ ರೈತರ ಮೇಲೆ ಎರಗುತ್ತಿರುವ ಸಂದರ್ಭದಲ್ಲಿ ನೀಲ ವಿದ್ರೋಹ್, ಚಂಪಾರಣ್ ಹೋರಾಟಗಳು ನೆನಪಿಗೆ ಬಾರದಿದ್ದೀತೆ ? ತಮ್ಮ ಬದುಕಿಗೆ ಅತ್ಯಗತ್ಯವಾದ ಆಹಾರದ ಬೆಳೆಗಳನ್ನು ಬಿಟ್ಟು ಪರದೇಶಗಳಿಗೆ ಅವಶ್ಯವಾದ ಬೆಳೆಗಳನ್ನು ಬೆಳೆದುದರ ಪರಿಣಾಮವಾಗಿ ಭಾರತದ ಮಿಲಿಯಗಟ್ಟಲೆ ಜನ ಹಸಿವಿನಿಂದ ನರಳಿ ಸತ್ತದ್ದು ನಮ್ಮ ನೆನಪಿಗೆ ಈಗ ಬಾರದೇ ಹೋದರೆ ಹೇಗೆ?

ಹತ್ತಿ ಬಿತ್ತಿ ಬೆಳೆಕೊಂಡೆವು ಹಾಳು

ತಿನ್ನಲು ದೊರೆಯದು ತುಸು ಕಡಿಕಾಳು

ಬಕ್ಕರಿಸುವುದೋ ಹೆಂಟೆಯ ಕೂಳು

ಬತ್ತಿತ್ತು ಅನ್ನ ಹೊತ್ತಿತು ಚಿನ್ನ

ಅನ್ನವೆಲ್ಲವೂ ಆದರೆ ಚಿನ್ನ ತಿನ್ನುವುದೇ ನನ್ನ

ಎಂಬೆಲ್ಲಾ ತುತ್ತಿನ ಚೀಲದ ಸಂಕಷ್ಟಗಳನ್ನು, ಕುರುಡು ಕಾಂಚಾಣದ ಮೆರೆದಾಟವನ್ನು ಮರೆಯುವುದು ಹೇಗೆ?

ಕಾರ್ಮಿಕರ ಮೂಲಭೂತ ಪ್ರಜಾಪ್ರಭುತ್ವ ಹಕ್ಕುಗಳನ್ನು ನಾಶ ಮಾಡುತ್ತಿರುವಾಗ ಗಾಂಧಿ ಅವರು ಕಾರ್ಮಿಕರ ಸಮಸ್ಯೆಗಳಿಗಾಗಿ ಮಾಡಿದ ಇಪ್ಪತ್ತೊಂದು ದಿನಗಳ ಉಪವಾಸವನ್ನು ಮರೆಯಲಾದೀತೆ?

ಜಿ. ಎನ್. ನಾಗರಾಜ್‌

ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್  80 ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣವಾಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.

ಇದನ್ನೂ ಓದಿ: ’ನಮ್ಮನ್ನ ಕ್ಷಮಿಸಿ’: ಗಾಂಧಿ ಶಿಲ್ಪ ವಿರೂಪ ಘಟನೆಗೆ ಅಮೆರಿಕ ರಾಯಭಾರಿ ಕ್ಷಮೆಯಾಚನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...