’ಗೋಧ್ರಾದ ನಂತರ ಗುಜರಾತ್ನಲ್ಲಿ ಏನಾಯಿತು ಎಂಬುದನ್ನು ನೆನಪಿಸಿಕೊಳ್ಳಿ’ ಎಂದು ಹೇಳಿದ ಸಿ.ಟಿ ರವಿರವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವುದು ವಿರೋಧ ಪಕ್ಷದವರಿಂದ ಅಲ್ಲ, ಅದನ್ನು ನಿರಂತರವಾಗಿ ಮಾಡ್ತಾ ಇರುವವರು ನಿಮ್ಮದೇ ಸಹೋದ್ಯೋಗಿ ಸಿ.ಟಿ ರವಿ ಆಗಿದ್ದಾರೆ. ಯಡಿಯೂರಪ್ಪನವರೆ, ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ಹೇಳಿಕೆ ನೀಡಿದ ನಂತರವೂ ಪೊಲೀಸರು ಕಣ್ಣು ಮುಚ್ಚಿಕೊಂಡಿದ್ದಾರೆಂದರೆ ರಾಜ್ಯದಲ್ಲಿ ಸರ್ಕಾರ ಸತ್ತಿದೆ ಎಂದರ್ಥ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂಸಾಚಾರಕ್ಕೆ ಪ್ರಚೋದನೆ ವಿರೋಧ ಪಕ್ಷದವರಿಂದ ಅಲ್ಲ,
ಅದನ್ನು ನಿರಂತರವಾಗಿ ಮಾಡ್ತಾ ಇರುವವರು ನಿಮ್ಮದೇ ಸಹೋದ್ಯೋಗಿ @CTRavi_BJP.@BSYBJP ಅವರೇ,
ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ
ಒಬ್ಬ ವ್ಯಕ್ತಿ ಹೇಳಿಕೆ ನೀಡಿದ ನಂತರವೂ ಪೊಲೀಸರು ಕಣ್ಣು ಮುಚ್ಚಿಕೊಂಡಿದ್ದಾರೆಂದರೆ ರಾಜ್ಯದಲ್ಲಿ ಸರ್ಕಾರ ಸತ್ತಿದೆ ಎಂದರ್ಥ. pic.twitter.com/iKtkythyIm— Siddaramaiah (@siddaramaiah) December 21, 2019
ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಯು.ಟಿ ಖಾದರ್ರಂತಹ ಮನಸ್ಥಿತಿಯವರೆ ಗೋಧ್ರಾದಲ್ಲಿ ಕರಸೇವಕರಿಗೆ ಬೆಂಕಿ ಹಚ್ಚಿದ್ದು. ಆದರೆ ಆಮೇಲೆ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಬಹುಸಂಖ್ಯಾತರರು ರೊಚ್ಚಿಗೆದ್ದರು ನೀವು ಉಳಿಯುವುದಿಲ್ಲ ಎಂಬು ಕೋಮುದ್ವೇಷದ ಹೇಳಿಕೆ ನೀಡಿದ್ದರು.
CT Ravi,Karnataka Min on Congress's UT Khader: Ppl with such mentality had set fire in Godhra&killed Karsevakas.Hope he remembers what answer was given.If he doesn't,he can recall it.Majority is very patient,pls look back&see what happens when patience of majority runs out(19.12) pic.twitter.com/r9vyZIoxI5
— ANI (@ANI) December 21, 2019
ಈ ಕುರಿತು ರಾಜ್ಯದ ಹಲವಾರು ವಲಯಗಳಿಂದ ವಿರೋಧ ವ್ಯಕ್ತವಾಗಿತ್ತು. ಈಗ ಸಿದ್ದರಾಮಯ್ಯನವರು ಸಹ ರಾಜ್ಯದಲ್ಲಿ ಶಾಂತಿ ಕದಡುತ್ತಿರುವವರು ವಿರೋಧ ಪಕ್ಷಗಳಲ್ಲ ಬದಲಿಗೆ ಆಡಳಿತ ಪಕ್ಷದ ಸಚಿವರೆ ಹಿಂಸೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.