Homeಮುಖಪುಟವಿಶ್ವದ ಅತಿ ದೊಡ್ಡ ಶ್ರೀಮಂತ ಅಮೇಜಾನು ಕಂಪನಿ ಮಾಲೀಕನ ಫೋನು ಹ್ಯಾಕ್ ಆದ ಕತಿ...

ವಿಶ್ವದ ಅತಿ ದೊಡ್ಡ ಶ್ರೀಮಂತ ಅಮೇಜಾನು ಕಂಪನಿ ಮಾಲೀಕನ ಫೋನು ಹ್ಯಾಕ್ ಆದ ಕತಿ…

- Advertisement -
- Advertisement -

ಇಡೀ ಜಗತ್ತಿನ ಅತಿದೊಡ್ಡ ಸಾಹುಕಾರನ  ಫೋನಿಂದ ಈ ಗತಿ ಆದರ ಉಳದವರದೇನು? ಯಾರನ್ನೂ ಯಾರೂ ಹ್ಯಾಕು ಮಾಡಬಹುದು. ಯಾರ ಫೋನಿನಲ್ಲಿಯೂ ಮಾಹಿತಿ ಸುರಕ್ಷಿತವಾಗಿಲ್ಲ. ಯಾವಾಗಾದರೂ ಸೋರಿಕೆ ಆದೀತು ಅನ್ನೋ ಚಿಂತಿ.

ಜೆಫರಿ ಪ್ರೆಸ್ಟನ್ ಬೇಜೋಸ್ ಜೊರ್ಗೆನ್ಸನ್ ಅನ್ನುವ ವಿಚಿತ್ರ ಹೆಸರಿನ ಅಸಾಧಾರಣ ಮನುಷ್ಯ ಒಬ್ಬವ ಅಮೆರಿಕಾದಾಗ ಇದ್ದಾನ. ಅವನು ಅಮೇಜಾನ್ ಕಂಪನಿ ಮಾಲಿಕ. ಆಧುನಿಕ ಜಗತ್ತಿನ ಇತಿಹಾಸದಾಗ ಅವನಷ್ಟು ದುಡ್ಡು ಯಾರೂ ಗಳಿಸಿಲ್ಲ ಅಂತ ಫೋಬ್ಸ ಪತ್ರಿಕೆ ಘೋಷಣೆ ಮಾಡಿದೆ. ಕಳೆದ ಎರಡು ವರ್ಷದಾಗ ಅವನ ವೈಯಕ್ತಿಕ ಗಳಿಕೆ ಸುಮಾರು 10 ಲಕ್ಷ, ಐವತ್ತು ಸಾವಿರ ಕೋಟಿ ರೂಪಾಯಿಗಳು. ಕಂಪನಿಯ ಗಳಿಕೆ ಬ್ಯಾರೆ. ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಜಗತ್ತಿನ ಅತಿಹೆಚ್ಚು ಶ್ರೀಮಂತನಾಗಿ ಮೆರೆದ ಬಿಲ್‍ಗೇಟ್ಸ್ ನನ್ನು ಹಿಂದಕ್ಕೆ ಹಾಕಿ ಈ ಮನುಷ್ಯ ಮುಂದ ಹೋದ.

ಇವನ ಸಾಹುಕಾರಿಕೆಗೆ ಕಾರಣ ಅಂದರ ನಮ್ಮೆಲ್ಲರ ಖರೀದಿ ಗೀಳು. ಬ್ಯಾರೆ ಏನೂ ಅಲ್ಲ. ಇವನ ಆನ್‍ಲೈನ್ ಕಿರಾಣಿ ದುಕಾನು ನಮ್ಮೆಲ್ಲರನ್ನೂ ಸೆಳೆದದ. ಎಲ್ಲರ ಇ-ಕಿಸೆಯಿಂದ ಅಲ್ಲಿಗೆ ಹಣ ಸೋರೇದ. ಮುಂಚೆ ಪುಸ್ತಕ, ಫೋನು, ಟೀವಿ ಮುಂತಾದ ಎಲೆಕ್ಟ್ರಾನಿಕ್ ಸಾಮಾನು, ತರಸತಿದ್ದಿವಿ, ಈಗೀಗ ಕೈಕಾಲು ಆಡಿಸಿಕೊಂಡು ಮನಿ ಮುಂದಿನ ಅಂಗಡಿಗೆ ಹೋಗಲಾರದ ಸೋಮಾರಿಗಳು ಅಮೇಜಾನ್‍ನ್ಯಾಗ ಹಾಲು- ಮೊಸರು ತರಸಲಿಕ್ಕೆ ಹತ್ಯಾರ. ಇನ್ನು ಮುಂದ ಇನ್ನೂ ಏನೇನು ಅದನೋ.

ಈ ಮನುಷ್ಯಾ ಭಾರತಕ್ಕ ಬಂದ. ಬೀ ಅ ರೋಮನ್ ವೈಲ್ ಇನ್ ರೋಮ್ ಅನ್ನೋ ಹಂಗ ನೆಹರು ಜಾಕೆಟ್ – ಜುಬ್ಬಾ ಪಾಯಿಜಾಮ ಹಾಕ್ಕೊಂಡು ಗಾಂಧೀಸ್ಕೃತಿಗೆ ಹೋದ. ಆಮ್ಯಾಲೆ ತನ್ನ ಕಚೇರಿಗೆ ಹೋದ. ಕಾಪೊರ್ರೇಟು ಕಾಲಾಳುಗಳನ್ನ, ಕರ್ನಲ್ ಜನರಲ್‍ಗಳನ್ನು ಭೇಟಿ ಆದ. ಆದರ ಪ್ರಧಾನ ಮಂತ್ರಿ ಇರಲಿ, ಬ್ಯಾರೆ ಯಾವ ಮಂತ್ರಿನೂ ಈ ಬಡಪಾಯಿಯನ್ನ ಭೇಟಿ ಆಗಲಿಲ್ಲ. ಯಾಕಾಗಲಿಲ್ಲ ಅನ್ನೋದು ಭಾಳ ಗಂಭೀರ ವಿಷಯ. ನೀವು ಸಾರಾಸಾರ ವಿಚಾರ ಮಾಡಿದರ ನಿಮಗ ತಿಳೀತದ.

`ಜೆಫ್ ಅವರು ಭಾರತದಾಗ ಸುಮಾರು ಏಳು ಸಾವಿರ ಕೋಟಿ ರೂಪಾಯಿ ಬಂಡವಾಳ ಹಾಕಿ ಒಂದು ಲಕ್ಷಕ್ಕೂ ಹೆಚ್ಚು ನೌಕರಿಗಳನ್ನು ಸೃಷ್ಟಿ ಮಾಡತೇವಿ ಅಂತ ಹೇಳ್ಯಾರ. ಅವರೇನು ನಮಗ ಉಪಕಾರ ಮಾಡಲಿಕ್ಕೆ ಹತ್ತಿಲ್ಲ. ಅವರಿಗೆ ಅದು ಸಹಜ ವ್ಯಾಪಾರ- ವ್ಯವಹಾರ,’ ಅಂತ ಕೇಂದ್ರ ರೇಲ್ವೆ ಮಂತ್ರಿ ಪಿಯೂಷ ಗೋಯಲ್ ಅವರು ಹೇಳಿದರು.

ಇಷ್ಟು ದೂರ ಇರಿಸಿಕೊಂಡ ಮ್ಯಾಲೆ ಜೆಫ್ ವಾಪಸ್ ಹೋದರು. ಚೌಥಾಯಿಯಾ ಅನ್ನೋ ಸಂಸತ್ ಸದಸ್ಯರು ಜೆಫ್ ಅವರು ಭಾರತದ ಬಗ್ಗೆ ಒಳ್ಳೆ ಸುದ್ದಿ ಬರಿಬೇಕಂತ ತಮ್ಮ ವಾಷಿಂಗ್ಟನ್ ಫೋಸ್ಟಿನ ವರದಿಗಾರರಿಗೆ ಹೇಳಬೇಕು ಅಂತ ಫರಮಾನು ಹೊರಡಿಸಿದರು.

ಅದರ ನಂತರ ಒಂದು ವಾರದಾಗ ವಿಶ್ವಾಸಾರ್ಹತೆಗೆ ಪ್ರಸಿದ್ಧವಾದ ದಿ ಗಾರ್ಡಿಯನ್ ಪತ್ರಿಕೆಯವರು ಜೆಫ್ ಅವರ ಫೋನನ್ನು ಕಳೆದ ವರ್ಷ ಹ್ಯಾಕು ಮಾಡಲಾಗಿತ್ತು ಅಂತ ಸುದ್ದಿ ಬರದರು. ಅದರಾಗ ಅತೀ ವಿಶೇಷ ಏನು ಅಂದರ ಆ ಫೋನನ್ನ ಸೌದಿಯ ರಾಜಕುಮಾರ ಮಹಮ್ಮದ ಬಿನ್ ಸಲ್ಮಾನ ಅಲ್ ಸೌದ್ ಅವರೇ ಹ್ಯಾಕು ಮಾಡಿದರು ಅಂತ ಖಾಸಗಿ ಪತ್ತೇದಾರರೊಬ್ಬರು ತಿಳಿಸಿದ್ದರು. ಅದೂ ಹೆಂಗೆಂದರೆ, ಜೆಫ್ ಅವರು ಸೌದಿ ಹೋದಾಗ ಅವರೂ ಇವರೂ ಕೈ ಹಿಡಕೊಂಡು, ತಬ್ಬಿಕೊಂಡು ಬ್ರೊಮ್ಯಾನ್ಸ ಮಾಡಿದ ಮ್ಯಾಲೆ ಸಲ್ಮಾನ ಅವರು ಇವರ ಫೋನ್ ನಂಬರು ಕೇಳಿದರು. ಇವರು ಕೊಟ್ಟರು. ಅವರು ಇವರಿಗೆ ಹೆಲೋ ಗುಡ ಮಾರ್ನಿಂಗ ಅಂತ ಮೆಸೇಜು ಕೊಟ್ಟರು. ಇವರೂ ಗುಡ್ ಮಾರ್ನಿಂಗ ಅಂತ ರಿಟರ್ನ ಗಿಫ್ಟು ಕೊಟ್ಟು ಸುಮ್ಮನಾದರು.

ಆ ಮೆಸೇಜಿನಿಂದ ಈ ಪುಣ್ಯಾತ್ಮ ಜೆಫ್ಫಿನ ಫೋನಿನಿಂದ ಏನೇನು ಮಾಹಿತಿ ತೆಗೆದನೋ ಏನೋ, ಅವನ ಮದುವಿ ಮುರದ ಬಿತ್ತು. ವಿಶ್ವದ ಇತಿಹಾಸದಲ್ಲಿಯೇ ಅತಿ ತುಟ್ಟಿ ಡೈವೋರ್ಸ್ ಆತು.

ಇಡೀ ಜಗತ್ತಿನ ಅತಿದೊಡ್ಡ ಸಾಹುಕಾರನ ಫೋನಿಂದ ಈ ಗತಿ ಆದರ ಉಳದವರದೇನು? ಯಾರನ್ನೂ ಯಾರೂ ಹ್ಯಾಕು ಮಾಡಬಹುದು. ಯಾರ ಫೋನಿನಲ್ಲಿಯೂ ಮಾಹಿತಿ ಸುರಕ್ಷಿತವಾಗಿಲ್ಲ. ಯಾವಾಗಾದರೂ ಸೋರಿಕೆ ಆದೀತು ಅನ್ನೋ ಚಿಂತಿ.

ನಮ್ಮ ಫೋನಿನಾಗ ಏನಿರತದ? ನಮ್ಮ ಸೋಷಿಯಲ್ ಮೀಡಿಯಾ ಫೋಸ್ಟು, ಎಸ್‍ಎಮ್‍ಎಸ್, ಈ ಮೇಲು, ಇತ್ಯಾದಿ ಮಾಹಿತಿ. ಬ್ಯಾಂಕ ಅಕೌಂಟಿನ ಮಾಹಿತಿ, ಪಾಸ್ ವರ್ಡು, ಇತ್ಯಾದಿ, ಇವುಗಳನ್ನ ಯಾರಾದರೂ ಕದ್ದರ ಒಂದ ಚಿಂತಿ. ದುರುಪಯೋಗಪಡಿಸಿಕೊಂಡರ ಇನ್ನೊಂದು ಚಿಂತಿ. ನಿಮ್ಮ ಹೆಸರಿಲೆ ಯಾರಾದರೂ ಹೆಣ್ಣುಮಗಳಿಗೆ ಅಶ್ಲೀಲ ಫೋಟೋ ಕಳಿಸಿದರ ಏನು ಗತಿ? ನಿಮ್ಮ ಸ್ನೇಹಿತರ ವಿರುದ್ಧ ಏನರ ಸುಳ್ಳ ಸುಳ್ಳೇ ಸಂದೇಶ ಸೃಷ್ಟಿ ಮಾಡಿ ಅದನ್ನ ಕಳಿಸಿದರ ಏನು ಗತಿ?

ಅದಕ್ಕಿಂತ ಹೆಚ್ಚು ಅಪಾಯ ಅಂದರ ಆಳುವವರ ಕೈಗೆ ಇಂತಹ ಉಪಕರಣ ಸಿಕ್ಕರ ಏನು ಗತಿ? ಸಲ್ಮಾನ್ ಅವರು ಉಪಯೋಗಿಸಿದ ಸಾಫ್ಟವೇರು ಅಥವಾ ಇ- ಉಪಕರಣದ ಹೆಸರು ಪೆಗಾಸಸ್. ಅದನ್ನು ತಯಾರಿಸಿದವರು ಇಸ್ರೇಲಿನ ಎನ್‍ಎಸ್‍ಓ ಅನ್ನೋ ಕಂಪನಿ. ಅದನ್ನು ನಿಮ್ಮ ಫೋನಿಗೆ ಕಳಿಸಿ, ನೀವು ಅದಕ್ಕ ಪ್ರತಿಕ್ರಿಯೆ ಕೊಟ್ಟರ ಮುಗೀತು. ನಿಮ್ಮ ಫೋನು ಹ್ಯಾಕ ಆಗಲು ತಯಾರು. ಎನ್‍ಎಸ್‍ಓದವರು ಪೆಗಾಸಸ್ ಅನ್ನು ಬರೇ ಸರಕಾರಗಳಿಗೆ ಮಾತ್ರ ಮಾರಾಟ ಮಾಡತಾರ. ಇಲ್ಲಿಯವರೆಗೆ ಅದನ್ನು ವಿವಿಧ ಸರಕಾರಗಳು ಉಪಯೋಗಿಸಲಿಕ್ಕೆ ಹತ್ಯಾವು. ನಮ್ಮ ದೇಶದಾಗ ಸಹಿತ ಅದರ ಉಪಯೋಗ ನಡದಿರಬಹುದು ಅನ್ನೋ ಸಂಶಯವನ್ನು ಅಂತಾರಾಷ್ಟ್ರೀಯ ಪತ್ರಿಕೆಗಳು ವ್ಯಕ್ತಪಡಿಸಿದ್ದಾವು.

ಒಬ್ಬ ವ್ಯಕ್ತಿಗೆ ಪೆಗಾಸಸ್ ಸಿಗೋದಕ್ಕೂ, ಸರಕಾರಕ್ಕ ಸಿಗೋದಕ್ಕೂ ವ್ಯತ್ಯಾಸ ಅದ. ಸರಕಾರಕ್ಕ ಸಿಕ್ಕರ ಸಾವಿರಾರು ಜನರ ಮ್ಯಾಲೆ ಒಂದೇ ಸರೆ ಕಣ್ಣು ಇಡಬಹುದು, ಅವರ ಫೋನು, ಕಂಪ್ಯೂಟರು, ಹ್ಯಾಕು ಮಾಡಬಹುದು.

ವಿರೋಧ ಪಕ್ಷದ ನಾಯಕರ ಮೇಲೆ ಕಣ್ಣಿಡಲಿಕ್ಕೆ ಇದನ್ನ ಬಳಸಲಾಗುತ್ತಿದೆ. ಇದರ ಹೆದರಿಕೆಯಿಂದಲೇ ಆಳುವ ಪಕ್ಷ ವಿರೋಧಿಗಳನ್ನು ಹದ್ದುಬಸ್ತಿನಲ್ಲಿ ಇಡುತ್ತಿದೆ ಅಂತ ಕೆಲವರು ಅಭಿಪ್ರಾಯ ಪಡಿಸ್ಯಾರ. ಇದನ್ನ ತೆರಿಗೆಕಳ್ಳರನ್ನು ಹಿಡಿಯಲು ಉಪಯೋಗಿಸಬಹುದು. ಅವರನ್ನು ಪಕ್ಷಾಂತರಕ್ಕ ಪುಸಲಾಯಿಸಬಹುದು.

ಇನ್ನ ಯಾರನ್ನಾದರೂ ಫೋಲೀಸರು ಭಯೋತ್ಪಾದನೆ ಅಥವಾ ನಕ್ಸಲರ ಸಂಪರ್ಕದ ಆರೋಪದ ಮ್ಯಾಲೆ ಹಿಡದರು ಅಂತ ತಿಳೀರಿ. ಅವರ ಫೋನಿನಿಂದ ಬಾಂಬು, ಪಿಸ್ತೂಲು, ಆರ್‍ಡಿಎಕ್ಸ ಅನ್ನೋ ಪದಗಳನ್ನು ಹೊಂದಿರೋ ಸಂದೇಶಗಳನ್ನ ಕಳಿಸಲಿಕ್ಕೆ ಉಪಯೋಗಿಸಬಹುದು. ಸಾಕ್ಷಿ ಸೃಷ್ಟಿ ಮಾಡಬಹುದು. ಇದರ ಸಾಧ್ಯತೆಗಳು ಅನೇಕ ಹಾಗೂ ಭಯಾನಕ.

ಎಲ್ಲಾ ವಿಷಯದಾಗೂ ನಮಗಿಂತಾ ಮುಂದೆ ಇರುವ ಚೈನಾ ಇದರಾಗುನೂ ಮುಂದ ಹೋಗೇದ. ವಿರೋಧಿಗಳನ್ನ ಹತ್ತಿಕ್ಕಲಿಕ್ಕೆ ಚೈನಾದಾಗ ಪೆಗಾಸಸ್ ಅನ್ನು ಬಳಸತಾರ. ಅದಕ್ಕಿಂತ ಮುಂದುವರೆದ ತಂತ್ರ ಜ್ಞಾನವನ್ನೂ ಬಳಸತಾರ. ಅಲ್ಲಿ ಮುಖ ಗುರುತು ಹಿಡಿಯೋ ತಂತ್ರಜ್ಞಾನ ಬಂದದ. ಅದನ್ನು ಉಪಯೋಗಿಸಿ (ಸೋಷಿಯಲ್ ಕ್ರೆಡಿಟ್) ಸಾಮಾಜಿಕ ಉದ್ರಿ ಅನ್ನೋ ವ್ಯವಸ್ಥಾ ತಂದಾರ. ಉದಾಹರಣೆಗೆ ನೀವು ಒಂದು ದಿವಸ ಟ್ರಾಫಿಕ್ ಸಿಗ್ನಲ್ ತಪ್ಪಿಸಿ ಹೋದಿರಿ ಅಂದರ ಆ ಸಾಫ್ಟವೇರು ನಿಮ್ಮ ಮುಖ ಹಾಗೂ ವಾಹನ ಗುರುತು ಹಿಡೀತದ. ನಿಮ್ಮ ಖಾತೆದಾಗಿಂದಾ ಒಂದಿಷ್ಟು ಪಾಯಿಂಟು ಕಮ್ಮಿ ಆಗತದ. ಹಿಂಗ ಆಗಿಕೋತ ಹೋದರ ಕಡೀಕೆ ನಿಮಗ ಗಾಡಿ ಪರವಾನಗಿ ರದ್ದಾಗತದ, ಗಾಡಿ ಖರೀದಿ ಮಾಡಲಿಕ್ಕೆ ಬರೋದಿಲ್ಲ, ಬಾಡಿಗಿ ಮನೀ ಸಿಗೋದಿಲ್ಲ, ಕಾಲೇಜಿನ್ಯಾಗ ದಾಖಲಾತಿ ಸಿಗೋದಿಲ್ಲ, ಕಡೀಕೆ ನೀವು ನಾಗರಿಕತೆ ಕಳಕೋತೀರಿ, ಜೀವಂತ ಶವ ಆಗಿ ಇರತೀರಿ. ಈ ವ್ಯವಸ್ಥೆ ವಿರುದ್ಧ ಇಡೀ ವಿಶ್ವದಾಗ ಚರ್ಚೆ ನಡದದ.

ಪೆಗಾಸಸ್ ಅನ್ನೋ ಹೆಸರಿನಲ್ಲೂ ರಾಜಕೀಯ ಅದ. ಇದು ಗ್ರೀಕ ಪುರಾಣದಾಗ ಬರೋ, ಹಾರುವ ಕುದುರೆ. ಇದನ್ನ ಹತ್ತಿ ದೇವರು ದಾನವರನ್ನ ಗೆಲ್ಲತಾರ. ಆದರ ಈಗ ಇದರ ಉದ್ದೇಶ ಬ್ಯಾರೆ. ಅದರ ಬದಲೀ ಅದಕ್ಕ ಟ್ರೋಜನ್ ಕುದುರೆ ಅಂತ ಹೆಸರು ಇಡಬೇಕಾಗಿತ್ತು. ಟ್ರಾಯ್ ನಗರವನ್ನು ಗ್ರೀಕರು ಆಕ್ರಮಿಸಿಕೊಳ್ಳಲಿಕ್ಕೆ ಬಂದಾಗ ಅಲ್ಲಿನ ಕೋಟೆಯ ಒಳಗ ನುಗ್ಗಲಾಗದೇ ಒಂದು ವರ್ಷ ಹೊರಗ ಕಾಯತಾರ. ಒಂದು ದಿವಸ ಇಲ್ಲಿಂದ ವಾಪಸ ಹೋದವರ ಗತೆ ಮಾಡಿ, ಕಟ್ಟಿಗೆಯಿಂದ ಮಾಡಿದ ದೊಡ್ಡ ಕುದುರಿಯನ್ನ ಕೋಟೆಯ ಹೊರಗ ಬಿಟ್ಟು ಹೋಗತಾರ. ಇದನ್ನು ನೋಡಿದ ಟ್ರಾಯ್ ಸೈನಿಕರು ಆ ಕುದುರೆಯನ್ನ ಊರಿನ ಒಳಗ ತೊಗೊಂಡು ಬರತಾರ. ಆದರ ಆ ಕುದುರೀ ಒಳಗ ಗ್ರೀಕ ಸೈನಿಕರು ಅಡಗಿಕೊಂಡು ಕೂತಿರತಾರ. ರಾತ್ರಿ ಹೊರಗ ಬಂದು ಕೋಟೆಯ ಬಾಗಿಲು ಒಳಗಿನಿಂದ ತಗೀತಾರ. ಹೊರಗ ಹೊಂಚು ಹಾಕಿಕೊಂಡು ಕೂತಿದ್ದ ಗ್ರೀಕ ಸೈನಿಕರು ಟ್ರಾಯ್ ಮ್ಯಾಲೆ ದಾಳಿ ಮಾಡಿ ಆ ನಗರವನ್ನು ಸುಟ್ಟು ಬಿಡತಾರ. ಪೆಗಾಸಸ್ ಅನ್ನು ಟ್ರೋಜನ್ ಕುದುರೆ ಅಂತ ಕರೀಬೇಕಿತ್ತು. ಆದರ ಅಷ್ಟ ಖರೆ ಯಾರ ಮಾತಾಡತಾರ? ಹೇಳೋದೊಂದು, ಮಾಡೋದೊಂದು ಮಾಡುವವರಿಗೆನ ಈಗ ಕಾಲ, ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫ್ಲಿಪ್‌ಕಾರ್ಟ್‌ನಿಂದ 1 ರೂ.ಗೆ ಹಾಲು ಮಾರಾಟ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಬಮುಲ್‌ ಆಗ್ರಹ

ಫ್ಲಿಪ್‌ಕಾರ್ಟ್‌ ಸಂಸ್ಥೆಯು ಆನ್‌ಲೈನ್‌ ಮೂಲಕ 1 ರೂ.ಗೆ ಲೀಟರ್‌ ಹಾಲನ್ನು ಮಾರಾಟ ಮಾಡಿರುವುದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ, ಬೆಂಗಳೂರು ನಗರ, ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ...

“ಮಕ್ಕಳ ಹಂತಕನನ್ನು ಹುಡುಕಿ ಹತ್ಯೆ ಮಾಡುತ್ತೇವೆ” : ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎಂಬ ಇಸ್ರೇಲ್ ಸ್ಪಷ್ಟನೆ ಬೆನ್ನಲ್ಲೆ ಐಆರ್‌ಜಿಸಿ ಹೇಳಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹುಡುಕಿ ಹತ್ಯೆ ಮಾಡುತ್ತೇವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿರುವುದಾಗಿ ವರದಿಯಾಗಿದೆ. ನೆತನ್ಯಾಹು ಅವರ ಹತ್ಯೆಯ ವದಂತಿಗಳನ್ನು ಇಸ್ರೇಲ್ ನಿರಾಕರಿಸಿದ ಬೆನ್ನಲ್ಲೇ, ಐಆರ್‌ಜಿಸಿ ಈ...

ಮಹಾರಾಷ್ಟ್ರ| ಇಫ್ತಾರ್ ಕೂಟಕ್ಕೆ ಸೇರಿದ್ದ ಮುಸ್ಲಿಮರ ಮೇಲೆ ಹಿಂದುತ್ವವಾದಿ ಗುಂಪಿನಿಂದ ದಾಳಿ

ರಂಜಾನ್‌ ಮಾಸದ ಉಪವಾಸ ಮುರಿಯಲು ನೆರೆದಿದ್ದ ಜನರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಫ್ತಾರ್ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಸುಮಾರು 100 ಕ್ಕೂ ಹೆಚ್ಚು...

ಆಸ್ಕರ್‌ ಅಂತಿಮ ಪಟ್ಟಿಗೆ ಆಯ್ಕೆಯಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ ಮತ್ತು ಆಕೆಯ ಸಂಬಂಧಿಕರನ್ನು ಇಸ್ರೇಲಿ ಸೈನಿಕರು ಭೀಕರವಾಗಿ ಹತ್ಯೆ ಮಾಡಿದ ಕಥೆಯನ್ನು ಹೇಳುವ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರವು 2026ರ ಆಸ್ಕರ್...

ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮನೆಯಲ್ಲಿ ಸವರ್ಣಿಯರಿಂದ ಹಲ್ಲೆ; ಬಂದೂಕಿನಿಂದ ಬೆದರಿಕೆ

ಮಾರ್ಚ್ 10 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರದ ತೀವ್ರ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. 24 ಗಂಟೆಗಳ ಒಳಗೆ ಎಫ್‌ಐಆರ್...

’70 ಲಕ್ಷ ಬಂಗಾಳಿ ಮುಸ್ಲಿಮರನ್ನು ಹೊರದಬ್ಬಲು ಸಾಧ್ಯವಿಲ್ಲ..ಅವರೇ ದೇಶ ಬಿಡುವಂತಹ ಪರಿಸ್ಥಿತಿ ಸೃಷ್ಟಿಸುತ್ತೇವೆ’: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸುಮಾರು 70 ಲಕ್ಷ 'ಬಂಗಾಳಿ ಮುಸ್ಲಿಮರ'ನ್ನು ಭಾರತದಿಂದ ಹೊರಹಾಕುವುದು 'ಮಾನವೀಯವಾಗಿ ಸಾಧ್ಯವಿಲ್ಲ'. ಹಾಗಾಗಿ, ಅವರಾಗಿಯೇ ದೇಶ ತೊರೆಯುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು. ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ...

ದೆಹಲಿ ಪೊಲೀಸರಿಂದ 10 ಮಂದಿ ಹೋರಾಟಗಾರರ ಅಪಹರಣ ಆರೋಪ : ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಸಿವಿಲ್ ಸೊಸೈಟಿಯ ಹತ್ತು ಮಂದಿ ಹೋರಾಟಗಾರರನ್ನು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಅಥವಾ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಹತ್ತು ಮಂದಿಯನ್ನು ದೆಹಲಿ ಪೊಲೀಸರು ಮತ್ತು ಇತರ ರಾಜ್ಯಗಳ ಏಜೆನ್ಸಿಗಳು ಅಪಹರಿಸಿವೆ...

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...

‘ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ’: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.  ಮಾರ್ಚ್ 14ರಂದು, ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ...