Homeಮುಖಪುಟಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-3

ಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-3

- Advertisement -
- Advertisement -

“ಜೈವಿಕ ತಂತ್ರಜ್ಞಾನ” (BIO-TECHNOLOGY) ಎಂಬ ದೊಡ್ಡ ಗಂಡಾಂತರ

ಘೋರ ಪರಿಣಾಮವುಳ್ಳ ಮತ್ತೊಂದು ಹೊಸ ತಂತ್ರಜ್ಞಾನವನ್ನು ನಮ್ಮಂತಹ ದೇಶದೊಳಕ್ಕೆ ತರುವ ದೊಡ್ಡ ಪ್ರಯತ್ನ ನಡೆದಿದೆ. ಇದನ್ನು “ಜೈವಿಕ ತಂತ್ರಜ್ಞಾನ” ಎನ್ನುತ್ತಾರೆ. ಎಂದರೆ, ಬೇರೆಬೇರೆ ಜಾತಿಯ ತಳಿಗಳ ವಂಶವಾಹಿಯನ್ನು ಬೆರೆಸಿ ಅಧಿಕ ಆಹಾರ ಉತ್ಪಾದನೆ ಮಾಡಬಹುದೆಂದು ಹೇಳಿಕೊಳ್ಳುವ ತಂತ್ರಜ್ಞಾನ, ಕೆಲವು ಬಾರಿ ಬೇರೆಬೇರೆ ಕುಲಗಳಿಗೆ ಸೇರಿದ ಸಸ್ಯಗಳ ವಂಶವಾಹಿಯ ಬೆರಕೆ ಮತ್ತು ಕೆಲವು ಬಾರಿ ಸಸ್ಯಗಳಿಗೆ ಪ್ರಾಣಿಗಳ ವಂಶವಾಹಿ ಬೆರೆಸುವ ತಂತ್ರಜ್ಞಾನ ಇದು. ಇವುಗಳನ್ನು “ಕುಲಾಂತರಿ” ಬೀಜಗಳೆಂದು ಕರೆಯುತ್ತಾರೆ.

ತಕ್ಷಣಕ್ಕೆ, ಬೀಜದ ಕಂಪೆನಿಗಳು ನಮ್ಮ ದೇಶದಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದು ಎರಡು ಗುಣಗಳಿರುವ ಕುಲಾಂತರಿ ಬೀಜಗಳನ್ನು, ಅಂದರೆ 1) ಕೀಟ ನಿರೋಧಕ ತಳಿಗಳು ಮತ್ತು 2) ಕಳೆ ನಿರೋಧಕ ತಳಿಗಳು.

ಕೀಟ ನಿರೋಧಕ ತಳಿಗಳಿಂದಾಗುವ ಹಾನಿಗಳು

ಬೀಜದ ಕಂಪೆನಿಗಳು (ಉದಾ: ಮನ್ಸಾಂಟೋ ಕಂಪೆನಿ) ನಮ್ಮ ದೇಶದಲ್ಲಿ ಪ್ರಯೋಗ ಮಾಡುತ್ತಿರುವ ಕೀಟ ನಿರೋಧಕ ತಳಿ ಬಿಟಿ (BT) ತಂತ್ರಜ್ಞಾನದ್ದು. ಬಿಟಿ (BT) ಎಂದರೆ “ಬ್ಯಾಸಿಲಸ್ ತುರಿಂಗಿಯೆನ್ಸಿಸ್” ಎಂದು. ಇದು ಒಂದು ಸೂಕ್ಷ್ಮಜೀವಿ. ಇದು ಕೀಟಗಳನ್ನು ನಾಶಮಾಡುವ ವಿಷವನ್ನು ಹೊಂದಿರುವ ಸೂಕ್ಷ್ಮ ಪ್ರಾಣಿ. ಇದನ್ನು ಹತ್ತಿ ಬೀಜದೊಳಕ್ಕೆ ಜೈವಿಕ ತಂತ್ರಜ್ಞಾನದ ಮೂಲಕ ಅಳವಡಿಸುವುದರಿಂದ, ಹತ್ತಿಯ ಗಿಡ ಬೆಳೆಯುತ್ತಾ ತನ್ನ ಎಲ್ಲ ಭಾಗಗಳಲ್ಲಿ ಕೀಟನಾಶಕ ವಿಷವನ್ನು ಉತ್ಪಾದಿಸುತ್ತದೆಯಾದ್ದರಿಂದ, ಇಂತಹ ಗಿಡದ ಯಾವುದೇ ಭಾಗವನ್ನು ಹತ್ತಿಯ ಕಾಯಿ ಕೊರೆಯುವ ಹುಳು ತಿಂದ ಕೂಡಲೇ ಸಾಯುತ್ತದೆ. ರೈತರು ಈ ಕೀಟವನ್ನು ನಾಶಮಾಡಲು ಖರ್ಚು ಮಾಡಬೇಕಾಗಿಲ್ಲ. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವ ಹತ್ತಿ ತಳಿ ಇದೆಂದು ಕಂಪನಿಯವರ ಪ್ರಚಾರ.

ಆದರೆ, ಈ ತಳಿಯ ಬಳಕೆಯಿಂದಾಗುವ ಪರಿಣಾಮಗಳೇ ಬೇರೆ

ಮೊದಲನೆಯದಾಗಿ, ಈ ಹತ್ತಿಕಾಯಿ ಕೊರೆಯುವ ಹುಳುಗಳು ಈ ಗಿಡದಲ್ಲಿರುವ ವಿಷಕ್ಕೆ ನಿರೋಧಕ ಶಕ್ತಿ ಬೆಳೆಸಿಕೊಂಡುಬಿಡುತ್ತವೆ. (ಮಲೇರಿಯಾ ಸೊಳ್ಳೆಗಳು ಡಿಡಿಟಿಗೆ ನಿರೋಧಕ ಶಕ್ತಿ ಬೆಳೆಸಿಕೊಂಡಿರುವ ರೀತಿಯಲ್ಲಿ). ಅನಂತರ ಅವು ಸಾಯುವುದೇ ಇಲ್ಲ. ಜೊತೆಗೆ ಬೇರೆ ಕೀಟಗಳೊಂದಿಗಿನ ಲೈಂಗಿಕ ಸಂಪರ್ಕದಿಂದಾಗಿ ಕೀಟನಾಶಕ ನಿರೋಧಕ ಶಕ್ತಿಯಿರುವ ಮರಿಗಳನ್ನೇ ಹುಟ್ಟಿಸುತ್ತವೆ. ಈ ಕೀಟನಾಶಕ ನಿರೋಧಕ ಶಕ್ತಿಯಿರುವ ಸಂತಾನಾಭಿವೃದ್ಧಿಯಿಂದಾಗಿ, ನಂತರ ಎಷ್ಟೇ ಕೀಟನಾಶಕ ಬಳಸಿದರೂ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. (ಆಂಧ್ರಪ್ರದೇಶದಲ್ಲಿ ಆದದ್ದು ಹೀಗೆಯೇ ಹೀಗಾಗಿಯೇ. ಅಲ್ಲಿಯ 500-600 ಹತ್ತಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡದ್ದು).

ಎರಡನೆಯದಾಗಿ, ಈ ’ಬಿಟಿ’ ವಿಷ ಕೇವಲ ಹತ್ತಿಕಾಯಿ ಕೊರೆಯುವ ಹುಳುವನ್ನು ಸಾಯಿಸಲು ನಿರ್ದಿಷ್ಟವಾಗಿ ತಯಾರಾದದ್ದೇನಲ್ಲ. ಇದು ಎಲ್ಲ ಜೀವಿಗಳನ್ನು, ಇತರ ಕೀಟಗಳನ್ನು ಕೊಲ್ಲುವಂತಹ ವಿಷ. ಹಾಗೆಯೇ, ಈ ವಿಷವು ಗಿಡದ ಎಲ್ಲ ಭಾಗಗಳಲ್ಲಿ ಉತ್ಪಾದನೆಯಾಗುವುದರಿಂದ, ಬೇರುಗಳ ಮೂಲಕ ಹಾಗೂ ನೆಲಕ್ಕೆ ಉದುರುವ ಎಲೆಗಳಲ್ಲಿರುವ ವಿಷ ಮಣ್ಣಿನೊಂದಿಗೆ ಬೆರೆತು ಮಣ್ಣಿನಲ್ಲಿರುವ, ಭೂಮಿಯ ಫಲವತ್ತತೆಗೆ ಅತ್ಯವಶ್ಯಕವಾದ ಸೂಕ್ಷ್ಮಾಣುಜೀವಿಗಳನ್ನು ಮತ್ತು ಎಲ್ಲ ರೀತಿಯ “ಬೂಷ್ಟ”ಗಳನ್ನು (Fungi) ಸಾಯಿಸುತ್ತದೆ. ಇದರಿಂದಾಗಿ, ಭೂಮಿಯ ಫಲವತ್ತತೆ ಬಹುಬೇಗ ನಾಶವಾಗುತ್ತದೆ.

ಮೂರನೆಯದಾಗಿ, ಈ ಗಿಡದ ವಿಷ ಬೇರೆ ಎಲ್ಲ ಕೀಟಗಳನ್ನು ತಿನ್ನುವ ಮಿತ್ರ ಕೀಟಗಳನ್ನು ಸಾಯಿಸಿಬಿಡುವುದರಿಂದ ಬೆಳೆಗಳಿಗೆ ಬೇರೆಬೇರೆ ರೋಗಗಳು ತಗುಲಿಕೊಳ್ಳುತ್ತವೆ. ಹತ್ತಿಯಲ್ಲದೆ ಬೇರೆ ಬೆಳೆಗಳಿಗೂ ಇದರಿಂದಾಗಿ ರೋಗಗಳು ಹೆಚ್ಚಾಗುತ್ತವೆ. ಇದಲ್ಲದೆ, ಕೀಟಗಳನ್ನು ತಿನ್ನುವ ಪಕ್ಷಿಗಳೂ ಈ ವಿಷದಿಂದಾಗಿ ಸತ್ತಿರುವುದೂ ಗಮನಕ್ಕೆ ಬಂದಿದೆ. ಈ ಕಾರಣದಿಂದಲೂ ಬೆಳೆರೋಗಗಳು ಹೆಚ್ಚಾಗುತ್ತವೆ.

ಇವೆಲ್ಲಕ್ಕಿಂತ, ಈ ’ಬಿಟಿ’ ತಳಿಯಿಂದಾಗುವ ಹಾನಿಯೇನೆಂದರೆ, ಈ ತಳಿಯ ಪರಾಗ ಸುಮಾರು 2 ಕಿಲೋಮೀಟರ್‌ವರೆಗೂ ಗಾಳಿಯಲ್ಲಿ ಪ್ರಯಾಣ ಮಾಡುತ್ತವೆ. ನಮ್ಮ ಎಲ್ಲ ದೇಶೀಯ ತಳಿಗಳಿಗೂ, ಇದರ “ಪರಾಗ ಮಾಲಿನ್ಯ”ದಿಂದಾಗಿ, ಇದರ ಎಲ್ಲ ಗುಣಗಳೂ ವರ್ಗಾವಣೆಯಾಗಿ ಕ್ರಮೇಣ ನಮ್ಮ ಎಲ್ಲ ದೇಶೀಯ ತಳಿಗಳೂ ನಾಶವಾಗುತ್ತವೆ. ನಮ್ಮ ಜೈವಿಕ ವೈವಿಧ್ಯತೆಯಂತಹ ಅಮೂಲ್ಯ ಸಂಪತ್ತು ಶಾಶ್ವತವಾಗಿ ನಾಶವಾಗುತ್ತವೆ.

ಕಳೆ ನಿರೋಧಕ ತಳಿಗಳಿಂದಾಗುವ ಹಾನಿಗಳು

ಈಗಾಗಲೇ ನಮ್ಮ ದೇಶದಲ್ಲಿ ಬೀಜದ ಕಂಪನಿಗಳು (ಮಾನ್ಸಾಂಟೊ) ಮಾರಾಟ ಮಾಡುತ್ತಿರುವ ಕಳೆ ನಿರೋಧಕ ತಳಿಯೆಂದರೆ “ರೌಂಡ್ ಅಪ್ ರೆಡಿ” – ROUND UP READY ಎನ್ನುವ ತಳಿಗಳು. “ರೌಂಡ್ ಅಪ್ ರೆಡಿ” ಎನ್ನುವುದು ಈ ಕಂಪನಿ ತಯಾರು ಮಾಡಿರುವ ಕಳೆನಾಶಕ. ಈ ಕಳೆನಾಶಕ ಉಪಯೋಗಿಸುವುದರಿಂದ, ಈ ಕಂಪೆನಿ ಕೊಡುವ “ರೌಂಡ್ ಅಪ್ ರೆಡಿ” ತಳಿಯೊಂದನ್ನು ಬಿಟ್ಟು ಮಿಕ್ಕೆಲ್ಲ ಕಳೆಗಳೂ ನಾಶವಾಗುತ್ತವೆ. ಈ ಕಾರಣ ರೈತರ ಕಳೆ ತೆಗೆಯುವ ಖರ್ಚಿನ ಉಳಿತಾಯವಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆ ತೆಗೆಯಬಹುದೆಂಬುದು ಈ ಕಂಪನಿಯ ಪ್ರಚಾರ.

ಆದರೆ, ಈ ತಳಿಯ ಮತ್ತು ಈ ಕಳೆನಾಶಕದ ಬಳಕೆಯಿಂದಾಗುವ ಪರಣಾಮಗಳೇ ಬೇರೆ.

ಮೊದಲನೆಯದಾಗಿ, ಈ “ರೌಂಡ್ ಅಪ್” ಎನ್ನುವ ರಸಾಯನಿಕವು, ಅಮೆರಿಕ ದೇಶವು ವಿಯೆಟ್ನಾಂ ದೇಶದ ಮೇಲೆ ಯುದ್ಧಮಾಡುವಾಗ ವಿಯೆಟ್ನಾಂನ ಕಾಡುಗಳನ್ನು ನಾಶಮಾಡಲು ಉಪಯೋಗಿಸಿದ ರಸಾಯನಿಕ. ಇದು ಯಾವುದೇ ವಿಶಿಷ್ಟ ಕಳೆಗಳನ್ನು ನಾಶಮಾಡಲು ತಯಾರುಮಾಡಿದ ರಸಾಯನಿಕವಲ್ಲ. ಹೀಗಾಗಿ, ಇದೇ ಕಂಪನಿ ತಯಾರುಮಾಡಿದ, ಈ ರಸಾಯನಿಕಕ್ಕೆ ನಿರೋಧಕ ಶಕ್ತಿಯಿರುವ ತಳಿಗಳು ಮಾತ್ರ ಬದುಕುಳಿಯುತ್ತವೆಯೇ ಹೊರತು, ಮಿಕ್ಕೆಲ್ಲ ಸಸ್ಯ ಸಂಪತ್ತು ಶಾಶ್ವತವಾಗಿ ನಾಶವಾಗುತ್ತವೆ. ನಮ್ಮ ದೇಶೀಯ ತಳಿಗಳೆಲ್ಲ ನಾಶವಾಗುತ್ತವೆ.

ಎರಡನೆಯದಾಗಿ, ಈ “ರೌಂಡ್ ಅಪ್” ರಸಾಯನಿಕ ಬಳಕೆಯಿಂದ ಮಣ್ಣಿನಲ್ಲಿರುವ ಎಲ್ಲ ಸೂಕ್ಷ್ಮಾಣುಗಳೂ ಸಾಯುತ್ತವೆ. ಎಲ್ಲ “ಬೂಸ್ಟ್” (Fungi) ಸಾಯುತ್ತವೆ, ಹೀಗಾಗಿ ಮಣ್ಣು ಫಲವತ್ತತೆ ಕಳೆದುಕೊಂಡು ಬರಡಾಗುತ್ತದೆ.

ಇದೆಲ್ಲಕ್ಕಿಂತ ಘೋರ ಅಪಾಯವೇನೆಂದರೆ, ಈ ರಸಾಯನಿಕದಲ್ಲಿ “ಏಜೆಂಟ್ ಆರೆಂಜ್” (Agent orange)ಎಂಬ ವಿಷವಿದೆ. 25 ವರ್ಷಗಳ ಹಿಂದೆ ನಡೆದ ವಿಯಟ್ನಾಂ ಯುದ್ಧದಲ್ಲಿ ಈ ರಸಾಯನಿಕದ ಸೋಂಕು ತಗುಲಿದ ಜನರಿಗೆ ಈಗಲೂ ಅಂಗವಿಕಲ ಮಕ್ಕಳು ಹುಟ್ಟುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗಲೂ ಅಮೆರಿಕದ ವಿರುದ್ಧ ಕಾನೂನು ಕಟ್ಟಳೆಗಳು ನಡೆಯುತ್ತಿವೆ. ಈ ರಸಾಯನಿಕ ಬಳಸುತ್ತಿರುವ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಈ ಆಪಾಯ ಕಾದಿದೆ. ನೇರ ಸಂಪರ್ಕ ಅಥವಾ ಕುಡಿಯುವ ನೀರು ಮತ್ತು ಆಹಾರದ ಜೊತೆಗೆ ಸೋಂಕು ತಗಲುವ ಕಾರಣದಿಂದ.

ವಂಶವಾಹಿ ಬೆರಕೆ (Genetically Modified food) ಆಹಾರದಿಂದಾಗುವ ಹಾನಿಗಳು

ಇತ್ತೀಚೆಗೆ, ಅಧಿಕ ಇಳುವರಿ ಕಾರಣ ಕೊಟ್ಟು ಜೈವಿಕತಂತ್ರಜ್ಞಾನದ ಮೂಲಕ ವಂಶವಾಹಿ ವಿಕೃತ ತಳಿಗಳನ್ನು ತಯಾರಿಸಲಾಗುತ್ತಿದೆ. ಈ ತಂತ್ರಜ್ಞಾನದಲ್ಲಿ ಪ್ರಾಣಿಗಳ ವಂಶವಾಹಿಯನ್ನು ಸಸ್ಯಗಳಿಗೆ ಕೊಡಿಸುವುದು ಬಹುದೊಡ್ಡ ಕಾರ್ಯಕ್ರಮವಾಗಿದೆ. ಅದರಲ್ಲಿಯೂ ಸಸ್ತನಿಗಳ (mammal) ವಂಶವಾಹಿಯನ್ನು ಅದರಲ್ಲಿಯೂ ಮಾನವನ ವಂಶವಾಹಿಯನ್ನು ಕೂಡಿಸಿ ತಯಾರುಮಾಡುವ ಸಸ್ಯದ ತಳಿಗಳು ಮಾರಾಟಕ್ಕೆ ಬರಲಿವೆ. ಇದಕ್ಕಿಂತ ದೊಡ್ಡ ಅಪಾಯ ಎಂದರೆ ಮಾನವನಿಗೆ ರೋಗ ತರುವ ರೋಗಾಣುಗಳನ್ನು ಕೂಡಿಸಿ ತಯಾರಿಸಿದ ಸಸ್ಯಗಳ ತಳಿಗಳೂ ಮಾರಾಟಕ್ಕೆ ಬರಲಿವೆ.

ಇಂತಹ ವಂಶವಾಹಿ ಬೆರಕೆ ಬೆಳೆಗಳಿಂದ ಬೆಳೆಯಲಾದ ವಂಶವಾಹಿ ವಿಕೃತ ಅಹಾರ ಸೇವನೆಯಿಂದ ಮಾನವನ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ವಿಜ್ಞಾನಿಗಳು ಈಗಾಗಲೇ ಕಂಡುಕೊಂಡಿದ್ದಾರೆ.

ಮೊದಲನೆಯದಾಗಿ, ಮಾನವನ ಕರುಳಿನಲ್ಲಿರುವ ರಸಗಳಿಗೆ ಇಂತಹ ಆಹಾರದಲ್ಲಿ ಬರುವ ಜೈವಾಂಶಗಳನ್ನೆಲ್ಲ (DNA) ಅರಗಿಸಿಕೊಳ್ಳಬಲ್ಲ ಶಕ್ತಿಯಿಲ್ಲವೆಂಬುದು ಹಾಗೂ ಈ ಹೊರಗಿನ ಜೈವಾಂಶಗಳು ಬದುಕುಳಿದು ಮಾನವನ ರಕ್ತಸಂಚಾರದೊಳಗೆ ಸೇರುತ್ತವೆ ಎನ್ನುವುದು ಗೊತ್ತಾಗಿದೆ. ಅಷ್ಟೇ ಅಲ್ಲದೆ, ಇವು ಮಾನವನ ಹಾಗೂ ಪ್ರಾಣಿಗಳ ಗುಲ್ಮ ಮತ್ತು ಪಿತ್ತಜನಕಾಂಗಗಳನ್ನೂ ಪ್ರವೇಶಿಸುವುದರ ಜೊತೆಗೆ ಬಿಳಿ ರಕ್ತಕಣಗಳೊಳಕ್ಕೂ ಪ್ರವೇಶ ಮಾಡುತ್ತವೆ. ಇದರಿಂದಾಗಿ, ವಿವಿಧ ರೀತಿಯ “ಅಲರ್ಜಿನಿಕ್” (Allergenic) ಅಂದರೆ, ತುರಿಕೆ ರೋಗಗಳು ಬರುತ್ತವೆ.

ರೋಗ ನಿರೋಧಕಗಳಿಗೆ ನಿರೋಧಕ ಶಕ್ತಿಯಿರುವ ವಂಶವಾಹಿಗಳು ಮಾನವನ ಕರುಳನ್ನು, ಆ ಮೂಲಕ ಮಾನವನ ರಕ್ತ ಸಂಚಾರವನ್ನು, ಆ ಮೂಲಕ ಮಾನವನ ವಂಶವಾಹಿ ರಚನೆಯನ್ನೇ ಪ್ರವೇಶ ಮಾಡುವುದರಿಂದ ಮಾನವನಿಗೆ ಕೂಡ ರೋಗ ನಿರೋಧಕಗಳಿಗೆ ನಿರೋಧಕ (STEROID RESISTANCE) ಗುಣಗಳು ಮೈಗೂಡಿ ಎಲ್ಲ ರೀತಿಯ ರೋಗಗಳಿಗೆ ಆಹ್ವಾನ ಕೊಟ್ಟಂತಾಗುತ್ತದೆ. ಇದು ಕ್ಯಾನ್ಸರ್ ರೋಗಕ್ಕೂ ಎಡೆಮಾಡಿಕೊಡುತ್ತದೆ.

ಜೈವಿಕ ತಂತ್ರಜ್ಞಾನಕ್ಕಾಗಿ ಸರ್ಕಾರ ಒದಗಿಸುತ್ತಿರುವ ಸೌಲಭ್ಯಗಳು

ಅಧಿಕ ಇಳುವರಿ ಮಿಶ್ರತಳಿ ಬಳಕೆಯ ಮೊದಲನೆ ಹಸಿರು ಕ್ರಾಂತಿ (First Green Revolution Technology) ತಂತ್ರಜ್ಞಾನ ಪ್ರಪಂಚದ ಎಲ್ಲ ಜನರಿಗೆ ಆಹಾರ ಒದಗಿಸಲು ಸಾಧ್ಯವಾಗದ ಕಾರಣ ಹಾಗೂ ನಮ್ಮ ದೇಶದಲ್ಲಿ ದಿನೇದಿನೇ ಹೆಚ್ಚುತ್ತಿರುವ ಜನಸಂಖ್ಯೆಗೆ ಸಾಕಷ್ಟು ಆಹಾರ ಬೆಳೆಯಬೇಕಾಗಿರುವುದರಿಂದ ಈ ’ಜೈವಿಕ ತಂತ್ರಜ್ಞಾನ’ವನ್ನು ಎರಡನೇ ಹಸಿರು ಕ್ರಾಂತಿ (Second Green Revolution) ತಂತ್ರಜ್ಞಾನವೆಂದು ಪ್ರಚಾರ ಮಾಡಲಾಗುತ್ತಿದೆ. ಮೇಲ್ಕಂಡಂತೆ, ಇದರಿಂದ ಸಸ್ಯ ಮತ್ತು ಮಾನವ ಕುಲಕ್ಕೆ ಅಪಾಯಗಳಿವೆಯೆಂದು ಗೊತ್ತಿದ್ದರೂ ಸಹ, ಕೆಲವು ಶ್ರೀಮಂತ ಬೀಜದ ಕಂಪೆನಿಗಳು ಮತ್ತು ಕೃಷಿ ವ್ಯಾಪಾರಿಗಳ ಒತ್ತಡಕ್ಕೆ ಮತ್ತು ಆಮಿಷಗಳಿಗೆ ಬಲಿಯಾಗಿ ನಮ್ಮ ಸರ್ಕಾರ ಈಗಿರುವ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿ, ಈ ಕಂಪೆನಿಗಳಿಗೆ ಸೌಲಭ್ಯಗಳನ್ನು ಒದಗಿಸುತ್ತಿವೆ.

(ಇದು ಪ್ರೊ. ಎಂಡಿಎನ್ ಅವರ ಒಂದು ಹಳೆಯ ಲೇಖನದ ಮೂರನೇ ಭಾಗ. ಭಾರತದ ಕೃಷಿ ಸಮಸ್ಯೆಗಳಿಗೆ ಅಂತಾರಾಷ್ಟ್ರೀಯ ಒಪ್ಪಂದಗಳು ಹೇಗೆ ಕಾರಣವಾದವು ಮತ್ತು ಆ ಸಮಸ್ಯೆ ಇಂದಿಗೂ ಹೇಗೆ ಮುಂದುವರೆದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಕರಿಸುವ ಈ ಲೇಖನದ ಉಳಿದ ಭಾಗಗಳನ್ನು ಮುಂದಿನ ವಾರಗಳಲ್ಲಿ ಪ್ರಕಟಿಸಲಾಗುವುದು. ಮುಂದಿನ ವಾರ, ಕೊನೆಯ ಭಾಗ: ಸರ್ಕಾರದ ಕರಾಳ ಕಾನೂನುಗಳು)


ಇದನ್ನೂ ಓದಿ: ಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-2

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಬಿಎಸ್‌ಇ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮೊದಲ ಬೋರ್ಡ್ ಪರೀಕ್ಷೆ ಕಡ್ಡಾಯ, ಪರಿಣಾಮಗಳ ಬಗ್ಗೆ ಎಚ್ಚರಿಕೆ

ನವದೆಹಲಿ: 10ನೇ ತರಗತಿಯ ವಿದ್ಯಾರ್ಥಿಗಳು ಮೊದಲ ಬೋರ್ಡ್ ಪರೀಕ್ಷೆ ಬರೆಯುವುದು ಕಡ್ಡಾಯ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸ್ಪಷ್ಟಪಡಿಸಿದ್ದು, ಮೊದಲ ಆವೃತ್ತಿಯಲ್ಲಿ ಕನಿಷ್ಠ ಮೂರು ವಿಷಯಗಳನ್ನು ಪ್ರಯತ್ನಿಸದ ವಿದ್ಯಾರ್ಥಿಗಳು "ಅಗತ್ಯ...

ಬಾಗೇಪಲ್ಲಿ ಕಾಂಗ್ರೆಸ್‌ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್‌

ವಿಧಾನಸಭೆಯ 2023ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ (ಭಾಗ್ಯನಗರ) ಕ್ಷೇತ್ರದಿಂದ ಕಾಂಗ್ರೆಸ್ ಶಾಸಕ ಎನ್‌.ಸುಬ್ಬಾರೆಡ್ಡಿ ಆಯ್ಕೆಯಾಗಿರುವುದನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ ಬಾರ್ &ಬೆಂಚ್ ಸೋಮವಾರ (ಫೆ.16) ವರದಿ ಮಾಡಿದೆ. ಸುಬ್ಬಾರೆಡ್ಡಿ...

ಗಂಗಾವತಿ : ವಿದೇಶಿ ಮಹಿಳೆ ಸೇರಿ ಇಬ್ಬರ ಅತ್ಯಾಚಾರ, ಓರ್ವನ ಕೊಲೆ ಪ್ರಕರಣ ; ಮೂವರು ಅಪರಾಧಿಗಳಿಗೆ ಮರಣದಂಡನೆ

ಕೊಪ್ಪಳದ ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಬಳಿ ಸ್ಥಳೀಯ ಹೋಮ್‌ ಸ್ಟೇ ಮಾಲಕಿ ಮತ್ತು ಇಸ್ರೇಲಿ ಯುವತಿ ಮೇಲೆ ಅತ್ಯಾಚಾರವೆಸಗಿ, ಅವರ ಜೊತೆಗಿದ್ದ ಯುವಕನನ್ನು ಕೊಲೆಗೈದ ಪ್ರಕರಣದ ಮೂವರು ಅಪರಾಧಿಗಳಿಗೆ ಒಂದನೇ ಹೆಚ್ಚುವರಿ...

ಶಿವಮೊಗ್ಗ: 40 ಸಾವಿರ ಲಂಚ ಪಡೆಯುತ್ತಿದ್ದ ಕೆಎಎಸ್ ಅಧಿಕಾರಿ ಸೇರಿ ಇಬ್ಬರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು 

ಶಿವಮೊಗ್ಗ: 40,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂ ಸ್ವಾಧೀನಾಧಿಕಾರಿ (KAS officer) ಸಿದ್ದಲಿಂಗ ರೆಡ್ಡಿ ಮತ್ತು ಗ್ರಾಮ ಸಹಾಯಕ ರಾಜೇಶ್‌ ಎಂಬುವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ...

ದ್ವೇಷ ಭಾಷಣ | ಅಸ್ಸಾಂ ಸಿಎಂ ವಿರುದ್ಧದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ ; ಹೈಕೋರ್ಟ್‌ಗೆ ಹೋಗಲು ಸೂಚನೆ

ಸಂವಿಧಾನದ 32ನೇ ವಿಧಿಯಡಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಈ ವಿಷಯವಾಗಿ ಗುವಾಹಟಿ ಹೈಕೋರ್ಟ್...

ಕಲಬುರಗಿ| ಅನುಮತಿ ಇಲ್ಲದೆ ಪುರಾತತ್ವ ಇಲಾಖೆ ಕೋಟೆ ಪ್ರವೇಶಕ್ಕೆ ಯತ್ನಿಸಿದ ಪಿಎಸ್‌ಐ ಹಗರಣದ ಆರೋಪಿ ದಿವ್ಯಾ ಹಾಗರಗಿ ತಂಡ

ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಮಾಜಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ನೇತೃತ್ವದ ಗುಂಪೊಂದು ಭಾನುವಾರ ಕಲಬುರಗಿ ಕೋಟೆಗೆ ಮಹಾಶಿವರಾತ್ರಿ ಪೂಜೆ ಮಾಡಲು ಅನುಮತಿಯಿಲ್ಲದೆ ಪ್ರವೇಶಿಸಲು ಯತ್ನಿಸಿದ...

‘ಆರೆಸ್ಸೆಸ್ ಭೂತ, ಬಿಜೆಪಿ ಅದರ ನೆರಳು’: ಆರ್‌ಎಸ್‌ಎಸ್ ನೋಂದಣಿ ಆಗೇ ಆಗುತ್ತೆ, ನಾವು ಮಾಡಿಸುತ್ತೇವೆ: ಪ್ರಿಯಾಂಕ್ ಖರ್ಗೆ 

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಭಾನುವಾರ ಆರ್‌ಎಸ್‌ಎಸ್ ಮತ್ತು ಅದರ ಸೈದ್ಧಾಂತಿಕ ಸಂತತಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಆರ್‌ಎಸ್‌ಎಸ್ ಇಲ್ಲದೆ ಬಿಜೆಪಿ "ಜೆಡಿ (ಎಸ್) ಗಿಂತ ದುರ್ಬಲವಾಗಿದೆ"...

ರಾಜಸ್ಥಾನ| ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಅವಘಡ; ಏಳು ಮಂದಿ ಸಾವು – ಹಲವರು ಸಿಲುಕಿರುವ ಶಂಕೆ

ರಾಜಸ್ಥಾನದ ಖೈರ್ತಾಲ್-ತಿಜಾರಾ ಜಿಲ್ಲೆಯ ಭಿವಾಡಿ ಪಟ್ಟಣದಲ್ಲಿ ಸೋಮವಾರ ಅಕ್ರಮ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸಮಭವಿಸಿದ ಬೆಂಕಿ ಅವಘಡದಲ್ಲಿ ಏಳು ಮಂದಿ ಸಜೀವ ದಹನಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಘಟನೆಯಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಇದು...

ಶಬರಿಮಲೆಗೆ ಮಹಿಳೆಯರ ಪ್ರವೇಶ: ಏಪ್ರಿಲ್ 7ರಿಂದ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀಶರ ಸಂವಿಧಾನ ಪೀಠ

ಏಪ್ರಿಲ್ 7 ರಿಂದ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲು 9 ನ್ಯಾಯಾಧೀಶರ ಪೀಠವನ್ನು ಸ್ಥಾಪಿಸುವುದಾಗಿ ಸುಪ್ರೀಂ ಕೋರ್ಟ್ ಫೆಬ್ರವರಿ 16, ಸೋಮವಾರದಂದು ಘೋಷಿಸಿರುವುದಾಗಿ ಲೈವ್ ಲಾ...

ಬಾಂಗ್ಲಾ ಪ್ರಧಾನಿ ಪದಗ್ರಹಣ : ಭಾರತವನ್ನು ಪ್ರತಿನಿಧಿಸಲಿರುವ ಸ್ಪೀಕರ್ ಓಂ ಬಿರ್ಲಾ

ಫೆಬ್ರವರಿ 17ರಂದು ನಡೆಯಲಿರುವ ಬಾಂಗ್ಲಾದೇಶದ ನೂತನ ಪ್ರಧಾನಿ ತಾರಿಖ್ ರೆಹಮಾನ್ ಅವರ ಪದಗ್ರಹಣದ ಸಮಾರಂಭದಲ್ಲಿ ಭಾರತದಿಂದ ಅಧಿಕೃತ ಪ್ರತಿನಿಧಿಯಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು...