Homeಕರ್ನಾಟಕನೋ ಡಿಸಿಎಂ, ನಿಷ್ಠರೇ ಡ್ರಾಪ್,ಮುಸುಕಿನ ಗುದ್ದಾಟಕ್ಕೆ ಕೊನೆಯಿಲ್ಲ ಯಡಿಯೂರಪ್ಪನವರ ಸಂಪುಟ ಸಂಕಟ ಏನು?

ನೋ ಡಿಸಿಎಂ, ನಿಷ್ಠರೇ ಡ್ರಾಪ್,ಮುಸುಕಿನ ಗುದ್ದಾಟಕ್ಕೆ ಕೊನೆಯಿಲ್ಲ ಯಡಿಯೂರಪ್ಪನವರ ಸಂಪುಟ ಸಂಕಟ ಏನು?

- Advertisement -
- Advertisement -

ಬಿಜೆಪಿ ಮೂಲಗಳ ಪ್ರಕಾರ, ಯಡಿಯೂರಪ್ಪನವರ ಆಲೋಚನೆ ಹೀಗಿದೆ. ಬೇರೆ ಬೇರೆ ಕಾರಣಗಳಿಂದ ಯಡಿಯೂರಪ್ಪನವರು 2-3 ಲಿಂಗಾಯಿತ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ. ಸಿ.ಸಿ.ಪಾಟೀಲ್ ಡ್ರಾಪ್ ಆಗುವುದು ಬಹುತೇಕ ಖಚಿತ. ಅದಲ್ಲದೇ ಯಡಿಯೂರಪ್ಪನವರ ಆಪ್ತರಾಗಿರುವ ಬೊಮ್ಮಾಯಿ ಮತ್ತು ಮಾಧುಸ್ವಾಮಿಯವರ ಬಗ್ಗೆಯೂ ಸಿಎಂ ಒಲವು ಕಡಿಮೆ ಇದೆ.

ಇವ್ಯಾವುವೂ ಅನಿರೀಕ್ಷಿತವಲ್ಲ. ಅನರ್ಹ ಶಾಸಕರು ಗೆಲ್ಲದಿದ್ದರೆ ಒಂಥರಾ ಕಷ್ಟ; ಗೆದ್ದರೆ ಇನ್ನೊಂಥರಾ ಕಷ್ಟ ಎಂಬುದು ಬಿಜೆಪಿಯೊಳಗೆ ಎಲ್ಲರಿಗೂ ಗೊತ್ತಿದ್ದ ಸಂಗತಿಯೇ ಆಗಿತ್ತು. ಆದರೆ, ಕೆಲವೇ ತಿಂಗಳ ಕೆಳಗೆ ಫಟಾಫಟ್ ತೀರ್ಮಾನಗಳನ್ನು ನಿಷ್ಠುರವಾಗಿ ಮಾಡುತ್ತಿದ್ದ ಬಿಜೆಪಿ ಹೈಕಮಾಂಡ್ ಇದೀಗ ಎಲ್ಲವನ್ನೂ ಎಳೆಯುತ್ತಿರುವುದಕ್ಕೆ ಮಾತ್ರ ವಿಶೇಷ ಕಾರಣಗಳಿವೆ. ಮೋದಿ – ಷಾ ಜೋಡಿಯನ್ನು ಮಣಿಸಲು ಯಡಿಯೂರಪ್ಪನವರ ಥರದ ಸೀಸನ್ಡ್ ರಾಜಕಾರಣಿಗಳು ಅವರದ್ದೇ ಪಟ್ಟುಗಳನ್ನು ಹಾಕಲು ಶುರು ಮಾಡಿದ್ದಾರೆ. ಪ್ರಧಾನಮಂತ್ರಿ ಮೋದಿಯ ಎದುರೇ ಯಡಿಯೂರಪ್ಪನವರು ಸಾರ್ವಜನಿಕ ಸಭೆಯಲ್ಲಿ ಕೇಂದ್ರದಿಂದ ಅನುದಾನ ಸರಿಯಾಗಿ ಬಂದಿಲ್ಲ ಎಂಬಂತೆ ಮಾತಾಡಿದ್ದು, ಎರಡು ಬಿಜೆಪಿ ಪತ್ರಿಕೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಲೀಡ್ ನ್ಯೂಸ್ ಬರುವಂತೆ ನೋಡಿಕೊಂಡಿದ್ದು ಅಕಸ್ಮಾತ್ತಾಗಿ ನಡೆದ ಘಟನೆಗಳಲ್ಲ. ಹಾಗೆಯೇ ತಾನಿಷ್ಟು ಕಷ್ಟಪಟ್ಟು ಕರ್ನಾಟಕದೊಳಗೆ ಬಿಜೆಪಿ ಸರ್ಕಾರ ತಂದಿದ್ದೇನೆ; ಇದರ ಚುಕ್ಕಾಣಿ ಹಿಡಿದಿರುವ ತನ್ನ ಮಾತು ನಡೆಯದಿದ್ದರೆ ಪಟ್ಟು ಸಡಿಲಿಸುವವನಲ್ಲ ಎಂಬ ಸೂಚನೆಯನ್ನೂ ಕೊಟ್ಟಾಗಿದೆ.

ಇಷ್ಟು ಗಡುಸಾಗಿ ಯಡಿಯೂರಪ್ಪನವರ ಸಂಪುಟ ರಚನೆಯ ಸಂದರ್ಭದಲ್ಲಿ ಇರಲಿಲ್ಲ. ಹಾಗಾಗಿಯೇ ಮೂವರು ಡಿಸಿಎಂಗಳನ್ನು ಹೇರಿಸಿಕೊಳ್ಳಬೇಕಾಗಿ ಬಂದಿತ್ತು. ಉಪಮುಖ್ಯಮಂತ್ರಿ ನೇಮಕಕ್ಕೆ ಮುಂಚೆಯೇ ಸಂಪುಟ ಸಚಿವರ ಪಟ್ಟಿ ಹೊರಬಿದ್ದಾಗಲೇ ಸೀನಿಯರ್‍ಗಳಲ್ಲದ ಮೂವರು ಹೆಸರು ಮುಖ್ಯಮಂತ್ರಿ ನಂತರ ಇರುವಂತೆ ನೋಡಿಕೊಳ್ಳಲಾಗಿತ್ತು. ಅಂದರೆ, ಪಟ್ಟಿಯ ಅನುಕ್ರಮಣಿಕೆಯನ್ನೂ ಹೈಕಮಾಂಡ್‍ನ ಸಂತೋಷಕ್ಕೆ ತಕ್ಕಂತೆ ಮಾಡಿ ಕಳಿಸುವ ಮಟ್ಟಕ್ಕೆ ಯಡಿಯೂರಪ್ಪನವರ ಮೇಲೆ ನಿಯಂತ್ರಣ ಸಾಧಿಸಲಾಗಿತ್ತು.

ಆದರೆ ಈಗಿನ ಯಡಿಯೂರಪ್ಪನವರು ಬೇರೆ. ಕಾಂಗ್ರೆಸ್, ಜೆಡಿಎಸ್‍ಗಳಿಂದ ಎತ್ತಾಕಿಕೊಂಡು ಬಂದವರ ಪೈಕಿ ಬಹುತೇಕರನ್ನು ಅವರು ಗೆಲ್ಲಿಸಿಕೊಂಡಿದ್ದಾರೆ. ಮಂಡ್ಯ, ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳಲ್ಲಿ ಬಿಜೆಪಿ ಪ್ರಥಮ ಬಾರಿಗೆ ಖಾತೆ ತೆರೆದಿದೆ. ಮಹಾರಾಷ್ಟ್ರ ಮುಖಭಂಗದ ನಂತರ ದೆಹಲಿ ಚಾಣಕ್ಯರ ಸಾಮಥ್ರ್ಯದ ಮಿತಿಯೂ ಬಯಲಿಗೆ ಬಂದಿದೆ. ಹಾಗಾಗಿ ಯಡಿಯೂರಪ್ಪನವರೂ ಪಟ್ಟು ಹಾಕತೊಡಗಿದ್ದಾರೆ. ಇದನ್ನು ಈಗಿಂದೀಗಲೇ ಮಣಿಸಲಾಗದು ಎಂಬುದರ ಅರಿವು ಇರುವ ಬಿಜೆಪಿಯ ದೆಹಲಿ ತ್ರೈಕಮಾಂಡ್ ಸಚಿವ ಸಂಪುಟ ವಿಸ್ತರಣೆಯನ್ನೇ ಎಳೆಯುತ್ತಿದ್ದಾರೆ.

ಹಳೇ ಡಿಸಿಎಂಗಳಾದ ಆರ್.ಅಶೋಕ್ ಮತ್ತು ಕೆ.ಎಸ್.ಈಶ್ವರಪ್ಪರಿಗೆ ಏನೇ ಅಸಮಾಧಾನವಿದ್ದರೂ ತಮ್ಮನ್ನೂ ಡಿಸಿಎಂ ಮಾಡಿ ಎಂದು ಕೇಳುವ ಸ್ಥಿತಿಯಲ್ಲೇನೂ ಇಲ್ಲ. ಆದರೆ, ಸವದಿ, ಅಶ್ವತ್ಥನಾರಾಯಣ ಮತ್ತು ಕಾರಜೋಳ ಡಿಸಿಎಂ ಪದವಿಯಿಂದ ಇಳಿದರೆ ಅವರಿಗೆ ಸಂತೋಷವೇ. ಹೊಸ ಡಿಸಿಎಂಗಳಾಗಲು ತುದಿಗಾಲಲ್ಲಿ ನಿಂತಿರುವವರೆಂದರೆ ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ. ಇಬ್ಬರಲ್ಲಿ ಯಾರೊಬ್ಬರಿಗೆ ಕೊಟ್ಟರೂ ಇನ್ನೊಬ್ಬರು ಮುನಿಸಿಕೊಳ್ಳುತ್ತಾರೆ. ಆದರೆ ಅವರಿಬ್ಬರೂ ಡಿಸಿಎಂಗೆ ಪಟ್ಟು ಹಾಕಿದಷ್ಟೂ ಯಡಿಯೂರಪ್ಪನವರಿಗೆ ಒಳ್ಳೆಯದೇ. ಈ ರೀತಿ ನಾಲ್ಕೈದು ಡಿಸಿಎಂಗಳಿರುವ ಹಾಸ್ಯಾಸ್ಪದ ಸನ್ನಿವೇಶಕ್ಕಿಂತ ಇರುವ ಡಿಸಿಎಂಗಳನ್ನೂ ತೆಗೆಯಿರಿ ಎಂದು ವಾದ ಮಂಡಿಸಲು ಅನುಕೂಲವಾಗುತ್ತದೆ. ಆದರೆ, ಕೆಲವೇ ತಿಂಗಳ ಹಿಂದಷ್ಟೇ ಮೇಲಿನಿಂದ ಹೇರಲಾದ ಡಿಸಿಎಂಗಳನ್ನು ಇಷ್ಟು ಬೇಗ ತೆಗೆದುಬಿಡಲು ಹೈಕಮಾಂಡ್ ಒಪ್ಪುವುದೂ ಕಷ್ಟ.

ಬಿಜೆಪಿ ಮೂಲಗಳ ಪ್ರಕಾರ, ಯಡಿಯೂರಪ್ಪನವರ ಆಲೋಚನೆ ಹೀಗಿದೆ. ಬೇರೆ ಬೇರೆ ಕಾರಣಗಳಿಂದ ಯಡಿಯೂರಪ್ಪನವರು 2-3 ಲಿಂಗಾಯಿತ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ. ಸಿ.ಸಿ.ಪಾಟೀಲ್ ಡ್ರಾಪ್ ಆಗುವುದು ಬಹುತೇಕ ಖಚಿತ. ಅದಲ್ಲದೇ ಯಡಿಯೂರಪ್ಪನವರ ಆಪ್ತರಾಗಿರುವ ಬೊಮ್ಮಾಯಿ ಮತ್ತು ಮಾಧುಸ್ವಾಮಿಯವರ ಬಗ್ಗೆಯೂ ಸಿಎಂ ಒಲವು ಕಡಿಮೆ ಇದೆ. ಇದಕ್ಕೆ ಕಾರಣವೆಂದು ಹೇಳಲಾಗುತ್ತಿರುವ ಸಂಗತಿಗಳು ಆಶ್ಚರ್ಯಕರವಾಗಿದೆ. ಇಬ್ಬರೂ ವೀರಶೈವ ಮಹಾಸಭಾ ಲಾಬಿಯೊಳಗೆ ತಮ್ಮನ್ನು ವೀರಶೈವ ಸಮಾಜದಲ್ಲಿ ಯಡಿಯೂರಪ್ಪನವರ ನಂತರದ ನಂ.2 ಸ್ಥಾನದಲ್ಲಿ ಕಲ್ಪಿಸಿಕೊಂಡು ಆ ರೀತಿ ಪ್ರೊಜೆಕ್ಟ್ ಮಾಡಿಕೊಳ್ಳುತ್ತಿದ್ದಾರೆಂದು ಸಿಎಂ ಬಳಗಕ್ಕೆ ಅನಿಸಿದೆ. ಆ ಜಾಗದಲ್ಲಿ ತಮ್ಮ ಎರಡನೆಯ ಪುತ್ರನನ್ನು ಈಗಾಗಲೇ ಕಲ್ಪಿಸಿಕೊಂಡಿರುವ ಯಡಿಯೂರಪ್ಪನವರಿಗೆ ಈಗಲೇ ಮುನ್ನೆಚ್ಚರಿಕೆ ವಹಿಸಬೇಕೆನಿಸಿದ್ದರೆ ಆಶ್ಚರ್ಯವಿಲ್ಲ.

ಕನಕವೃತ್ತದ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದಲ್ಲದೇ ವಿಜಯೇಂದ್ರ ಜೊತೆ ಸಹಾ ಸಂಬಂಧ ಕೆಡಿಸಿಕೊಂಡಿರುವುದು ಮಾಧುಸ್ವಾಮಿಯವರಿಗೆ ತೊಡಕು ಎನ್ನಲಾಗುತ್ತಿದೆ. ಹಾವೇರಿ ಜಿಲ್ಲೆಯ ಸಾದರ ಲಿಂಗಾಯಿತ ಬಿ.ಸಿ.ಪಾಟೀಲ್ ಅರ್ಹರಾಗಿ ಸಂಪುಟಕ್ಕೆ ಸೇರುವಾಗ, ಅದೇ ಜಿಲ್ಲೆಯ ಇನ್ನೊಬ್ಬ ಸಾದರ ಲಿಂಗಾಯಿತ ಬೊಮ್ಮಾಯಿಯವರೂ ಇರುವುದು ಅಸಮತೋಲನವಾಗುತ್ತದೆ ಎಂಬ ವಾದವೂ ಇದೆ. ಅಂತಿಮವಾಗಿ ಒಬ್ಬ ಲಿಂಗಾಯಿತರನ್ನು ಕೈಬಿಡುವುದಂತೂ ಖಚಿತವಾಗಿದೆ. ಉಮೇಶ್ ಕತ್ತಿಯನ್ನೂ ತೆಗೆದುಕೊಳ್ಳಲೇಬೇಕಾದ ಸ್ಥಿತಿಯಲ್ಲಿ ಯಡಿಯೂರಪ್ಪನವರು ಇದ್ದಾರೆ. ಹೀಗಾಗಿ ಲಿಂಗಾಯಿತರ ಭಾರದಿಂದ ಸಂಪುಟ ನೆಲಕಚ್ಚದಿರಬೇಕಾದರೆ ಯಾವುದೋ ರೀತಿಯ ಬ್ಯಾಲೆನ್ಸಿಂಗ್ ಕೆಲಸ ಆಗುತ್ತದೆ.

ಹಿಂದಿನ ಸಾರಿ ಇಡೀ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಬ್ಬರನ್ನೂ ತೆಗೆದುಕೊಂಡಿರಲಿಲ್ಲ; ಜೊತೆಗೆ ದಲಿತ ಬಲಗೈ ಸಮುದಾಯಕ್ಕೂ ಪ್ರಾತಿನಿಧ್ಯ ಕೊಡಲು ಹಿರಿಯ ಶಾಸಕ ಸುಳ್ಯದ ಅಂಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಯಡಿಯೂರಪ್ಪನವರು ತಮ್ಮ ನೀಲಿ ಕಣ್ಣಿನ ಹುಡುಗ ಲಿಂಬಾವಳಿಯನ್ನೂ ಬೋವಿ ಕೋಟಾದಲ್ಲಿ ತೆಗೆದುಕೊಳ್ಳಬೇಕೆಂದು ನಿಶ್ಚಯಿಸಿದ್ದಾರೆ. ಆದರೆ, ಅದಕ್ಕೆ ಸಿಡಿಗಳು ಹೊರಬೀಳುವ ಗುಮ್ಮ ತೋರಿಸಿ ಅಡ್ಡಿ ಮಾಡಬಹುದು ಎಂಬ ಸಂತೋಷವೂ ಕೆಲವರಲ್ಲಿ ಮನೆ ಮಾಡಿದೆ.

ಏನೇ ಇದ್ದರೂ ಅಂತಿಮವಾಗಿ 2-3 ಸೀಟುಗಳನ್ನು ಖಾಲಿ ಇಟ್ಟುಕೊಳ್ಳುವುದಂತೂ ಕಾಯಂ. ಒಂದೆಡೆ ಅತೃಪ್ತರಿಗೆ ಕ್ಯಾರೆಟ್ ತೋರಿಸಲು ಅನುಕೂಲ; ಇನ್ನೊಂದೆಡೆ ‘ಈ ಸರ್ಕಾರ ಬರಲು ಕಾರಣರಾದ ಯಾರನ್ನೂ ಯಡಿಯೂರಪ್ಪನವರು ಕೈಬಿಡಲಿಲ್ಲ’ವೆಂಬ ಖ್ಯಾತಿ ಉಳಿದುಕೊಳ್ಳಬೇಕು. ಹಾಗಾಗಿ ಎಂ.ಟಿ.ಬಿ.ನಾಗರಾಜ್ ಮತ್ತು ಆರ್.ಶಂಕರ್ ಇಬ್ಬರಿಗೂ ಸಚಿವ ಸ್ಥಾನ ಕಲ್ಪಿಸುವ ಅಗತ್ಯವಿದೆ. ರಿಜ್ವಾನ್ ಅರ್ಷದ್‍ರ ಎಂಎಲ್‍ಸಿ ಸೀಟು ಖಾಲಿಯಾದಾಗ ಅಲ್ಲಿ ಇಬ್ಬರಲ್ಲೊಬ್ಬರನ್ನು ಕೂರಿಸಿ ಮಂತ್ರಿ ಮಾಡಬಹುದು. ಆದರೆ, ಆಗಲೂ ಇರುವುದು ಒಂದೇ ಸೀಟು ಎಂಬ ಚಿಂತೆ ಈ ಎಲ್ಲರಲ್ಲೂ ಇದೆ. ಶರತ್ ಬಚ್ಚೇಗೌಡರ ಮೇಲೆ ಯಡಿಯೂರಪ್ಪನವರ ಸಿಟ್ಟು ಇನ್ನೂ ಮುಂದುವರೆದಿರುವುದನ್ನು ಶಾಸಕರ ಪ್ರಮಾಣ ಸ್ವೀಕಾರ ಸಂದರ್ಭದಲ್ಲಿ ವ್ಯಕ್ತವಾದುದನ್ನು ನೋಡಿದರೆ ಎಂ.ಟಿ.ಬಿ ಪರವಾಗಿ ಯಡ್ಡಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದ್ದೇ ಇದೆ.

ಆದರೆ, ಅದೇ ಎಂ.ಎಲ್.ಸಿ ಸ್ಥಾನದ ಮೇಲೆ ಕಣ್ಣಿಟ್ಟ ಇನ್ನೂ ಇಬ್ಬರಿದ್ದಾರೆ. ಒಬ್ಬರು ಡಿಸಿಎಂ ಸವದಿ. ಅವರ ಡಿಸಿಎಂ ಪಟ್ಟ ಮುಂದುವರೆಯಲು ಈಗ ಬೇರೆ ಯಾವ ದಾರಿಯೂ ಇಲ್ಲ. ಹಾಗೆಯೇ ತನ್ನಂತಹ ‘ಮುತ್ಸದ್ದಿ’ಗೆ ಸ್ಥಾನ ಕಲ್ಪಿಸದಿದ್ದರೆ ಹೇಗೆ ಎಂಬ ವಾದ ಎಚ್.ವಿಶ್ವನಾಥ್‍ರದ್ದೂ ಇರುತ್ತದೆ. ಅಂತಿಮವಾಗಿ ಸಂಪುಟ ರಚನೆಯಲ್ಲಿ ಯಡಿಯೂರಪ್ಪನವರಿಗೆ ಒಂದಷ್ಟು ಬಿಟ್ಟುಕೊಟ್ಟು ಎಂಎಲ್‍ಸಿ ಸೀಟು ಸವದಿ ಪಾಲಾಗಿ ಉಳಿದವರಿಗೆ ಫಲವತ್ತಾದ ನಿಗಮ ಮಂಡಳಿಗಳ ತುಪ್ಪ ಸವರುವ ಸಾಧ್ಯತೆಯೇ ಎದ್ದು ಕಾಣುತ್ತಿದೆ.
ಅದೇನೇ ಇದ್ದರೂ ಬಿಜೆಪಿಯೊಳಗೆ ಇನ್ನೊಂದು ಸುತ್ತು ಯಡಿಯೂರಪ್ಪ ವರ್ಸಸ್ ತ್ರೈಕಮಾಂಡ್‍ನ ಮುಸುಕಿನ ಗುದ್ದಾಟ ನಡೆಯುವುದಂತೂ ಖಾಯಂ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿಯಲ್ಲಿ ಭಯೋತ್ಪಾದನಾ ಸಂಚು ಆರೋಪ: ಬಾಂಗ್ಲಾದೇಶಿ ಪ್ರಜೆಗಳು ಸೇರಿ ಎಂಟು ಮಂದಿ ಬಂಧನ

ನವದೆಹಲಿ: ಪಾಕಿಸ್ತಾನದ ಐಎಸ್‌ಐ ಮತ್ತು ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆಗಳ ಸೂಚನೆಯ ಮೇರೆಗೆ ದೆಹಲಿಯಲ್ಲಿ ಪ್ರಮುಖ ಭಯೋತ್ಪಾದಕ ಪಿತೂರಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಎಂಟು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್...

ಕ್ಷುಲ್ಲಕ ಕಾರಣಕ್ಕೆ ಮೂವರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ

ಕ್ಷುಲ್ಲಕ ಕಾರಣಕ್ಕೆ ಇಬ್ಬರು ಹಿರಿಯ ವಯಸ್ಕರು ಸೇರಿದಂತೆ ಮೂವರು ಮುಸ್ಲಿಂ ವ್ಯಕ್ತಿಗಳ ಮೇಲೆ ದುಷ್ಕರ್ಮಿಯೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ಫೆಬ್ರವರಿ 15ರಂದು ಜಿಲ್ಲೆಯ ರುದಾಯನ್ ಪಟ್ಟಣದಲ್ಲಿ...

ಎಸ್‌ಐಆರ್ ಬಳಿಕ 9 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮತದಾರರ ಸಂಖ್ಯೆ 1.70 ಕೋಟಿ ಇಳಿಕೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಒಟ್ಟು ಸಂಖ್ಯೆಯಲ್ಲಿ 1.70 ಕೋಟಿ ಇಳಿಕೆ ಕಂಡಿದೆ. ಗುಜರಾತ್, ಪುದುಚೇರಿ, ಲಕ್ಷದ್ವೀಪ, ರಾಜಸ್ಥಾನ, ಛತ್ತೀಸ್‌ಗಢ, ಅಂಡಮಾನ್...

ಅಫ್ಘಾನ್ ಗಡಿಯಲ್ಲಿ ಪಾಕಿಸ್ತಾನ ವೈಮಾನಿಕ ದಾಳಿ : 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಶಂಕೆ

ಅಫ್ಘಾನಿಸ್ತಾನದ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ಭಾನುವಾರ (ಫೆ.22) ಭಾರೀ ವೈಮಾನಿಕ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಪಾಕಿಸ್ತಾನದ ವಾಯುಪಡೆಯು ಅಫ್ಘಾನಿಸ್ತಾನದ ಪಕ್ತಿಕಾ ಮತ್ತು ನಂಗರ್ಹಾರ್ ಪ್ರಾಂತ್ಯಗಳಲ್ಲಿರುವ ಏಳು ಸಶಸ್ತ್ರ ಗುಂಪುಗಳ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ...

ಹೊಸ ಜಾಗತಿಕ ಸುಂಕವನ್ನು ಶೇ.15ಕ್ಕೆ ಏರಿಸಿದ ಟ್ರಂಪ್

ಪ್ರತಿ ಸುಂಕ ನೀತಿಯನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದು, ಎಲ್ಲಾ ದೇಶಗಳ ಆಮದಿನ ಮೇಲೆ ಹೊಸದಾಗಿ 10 ಶೇಕಡ ಜಾಗತಿಕ ಸುಂಕ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶನಿವಾರ...

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...