Homeಕರ್ನಾಟಕಯುವರಂಗ ನಾಟಕೋತ್ಸವ 2021: 15 ದಿನ, 15 ನಾಟಕಗಳು, 15 ನಿರ್ದೇಶಕರು!

ಯುವರಂಗ ನಾಟಕೋತ್ಸವ 2021: 15 ದಿನ, 15 ನಾಟಕಗಳು, 15 ನಿರ್ದೇಶಕರು!

"ಮುಂದಿನ ಬದುಕಿನ ಯೋಚನೆಗೆ ಬಿದ್ದೋ, ಇಷ್ಟು ದಿನಗಳ ಖಾಲಿ ಕೈ ಬರ್ತಿ ಮಾಡಲಿಕ್ಕೋ,‌ ಹಸಿವನ್ನೋ, ದೇವರನ್ನು ಪ್ರಾರ್ಥಿಸಲೋ ಈ ಕಾಯಕಕ್ಕೆ ಇಳಿದಿದ್ದೇವೆ" ಎಂದು ರಂಗ ತಂಡಗಳು ಮನವಿ ಮಾಡಿವೆ.

- Advertisement -
- Advertisement -

ಬೆಂಗಳೂರಿನಲ್ಲಿ ಕೊರೊನಾ ಸಾಂಕ್ರಾಮಿಕದ ನಡುವೆಯೇ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡು ಜನರಿಗೆ ರಂಗಭೂಮಿಯ ಸವಿಯೂಣಿಸಲು 15 ರಂಗತಂಡಗಳು ಸಜ್ಜಾಗಿವೆ. ಬರೋಬ್ಬರಿ 15 ದಿನಗಳು, 15 ನಾಟಕಗಳು, 15 ನಿರ್ದೇಶಕರು ಮತ್ತು ವಿಭಿನ್ನ ಬರಹಗಾರರು ಸೇರಿ ಜ. 3 ರಿಂದ ಜ. 18ರ ವರೆಗೆ ’ಯುವರಂಗ ನಾಟಕೋತ್ಸವ 2021’ ಕಾರ್ಯಕ್ರಮ ಆಯೋಜಿಸಿವೆ.

ಕೊರೊನಾ ಭಯವನ್ನು ಪಕ್ಕಕಿಟ್ಟು, ಜವಾಬ್ದಾರಿಯನ್ನು ಹೆಗಲಿಗೆ ಹೊತ್ತು ಸದ್ದು ಮಾಡಲು ರಂಗಭೂಮಿ ಮತ್ತೆ ಸಜ್ಜಾಗಿದೆ. ’ಯುವರಂಗ ನಾಟಕೋತ್ಸವ 2021’ ವೇದಿಕೆ ಮೂಲಕ ಕೊರೊನಾ ಸಾಂಕ್ರಾಮಿಕದಿಂದ ಹೊಡೆತ ತಿಂದಿರುವ ರಂಗಭೂಮಿಯ ಹಲವು ಬಳಗಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿವೆ.

“ಪ್ರೇಕ್ಷಕರ ಮೇಲೆ ನಂಬಿಕೆ ಇಟ್ಟು, 15 ದಿನಗಳ ಕಾಲ 15  ನಾಟಕಗಳು ಬರೀ ಜನರನ್ನ ಮಾತ್ರ ನಂಬಿ ನಾಟಕಗಳನ್ನು ಪ್ರಸ್ತುತ ಪಡಿಸಲು ನಿರ್ಧರಿಸಿದ್ದೆವೆ. ಮುಂದಿನ ಬದುಕಿನ ಯೋಚನೆಗೆ ಬಿದ್ದೋ, ಇಷ್ಟು ದಿನಗಳ ಖಾಲಿ ಕೈ ಬರ್ತಿ ಮಾಡಲಿಕ್ಕೋ,‌ ಅವಮಾನಿಸಿದವರಿಗೆ ಉತ್ತರಿಸಲೆಂದೋ‌, ಹಸಿವನ್ನೋ, ದೇವರನ್ನು ಪ್ರಾರ್ಥಿಸಲೋ ಈ ಕಾಯಕಕ್ಕೆ ಇಳಿದಿದ್ದೇವೆ” ಎಂದು ರಂಗ ತಂಡಗಳು ಮನವಿ ಮಾಡಿವೆ.

ಇದನ್ನೂ ಓದಿ: ಐತಿಹಾಸಿಕ ರೈತ ಹೋರಾಟದೊಂದಿಗೆ ಕೈಜೋಡಿಸಿದ ದೊಡ್ಡ ಸಂಖ್ಯೆಯ ಕೃಷಿ ಕಾರ್ಮಿಕರು!

“ನಮ್ಮ ಈ ಪ್ರಯೋಗ ಹುಚ್ಚು ಸಾಹಸ ಎಂದೆನ್ನಿಸಬಹುದು. ಆದರೆ ಬಣ್ಣವನ್ನೇ ಬದುಕಾಗಿಸಿಕೊಂಡವರಿಗೆ  ಸಾಹಸಗಳನ್ನು ಮಾಡಿ ಅಭ್ಯಾಸ ಇರುತ್ತದೆ. ರಂಗಭೂಮಿ ಕಲಿಸೋದು ಹೋರಾಡು ಅಂತ. ಸಮಾಜಕ್ಕೆ ಕನ್ನಡಿ ರಂಗಭೂಮಿ ಎನ್ನುತ್ತಾರೆ. ಅದರಂತೆಯೇ 15 ಬಗೆಯ ವಿಭಿನ್ನ ಪ್ರಯೋಗಗಳನ್ನ ನಿಮ್ಮ ಮುಂದೆ ಇಡೋಕೆ ಯುವರಂಗ ಅನ್ನೋ ವೇದಿಕೆ ಸಿದ್ಧವಾಗಿದೆ. ಹೊಸ ವರ್ಷಕ್ಕೆ ಹೊಸ ಹೊಸ ಕನಸುಗಳನ್ನು ಹೊತ್ತು ಜನವರಿ 03 ರಿಂದ 18 ನೇ ತಾರೀಖಿನ 15ನ ದಿನಗಳು, 15 ತಂಡಗಳು ನಿಮ್ಮ ಮುಂದೆ ಬರುತ್ತಿವೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಪ್ರಕರಣ: FIR ರದ್ದತಿ ಕೋರಿದ್ದ ಮನವಿ ತಿರಸ್ಕರಿಸಿದ ಹೈಕೋರ್ಟ್‌

ದೃಶ್ಯಕಾವ್ಯ, ಖಾಲಿರಂಗ, ಥೇಮಾ, ರಂಗಭಾಸ್ಕರ, ಸವಿರಂಗ, ರಂಗವಿಜಯ, ನೆನಪುತಂಡ, ಅಶ್ವಘೋಷ ಥಿಯೇಟರ್ ಟ್ರಸ್ಟ್, ರಂಗನಿರಂತರ, ಸೈಡ್ ವಿಂಗ್, ವಿಶ್ವಪಥ ಕಲಾ ಸಂಗಮ, ಥಿಯೇಟರ್ ಥೇರಪಿ, ಸ್ಪಷ್ಟ, ಪ್ರವರ ಥಿಯೇಟರ್ ಮತ್ತು ರಂಗಪಯಣ ತಂಡಗಳು ಯುವರಂಗ ನಾಟಕೋತ್ಸವದಲ್ಲಿ ಪಾಲ್ಗೊಳ್ಳಲಿವೆ.

ಕೆ. ವೈ ನಾರಾಯಣ ಸ್ವಾಮಿ, ಬೇಲೂರು ರಘುನಂದನ್, ರಾಮಕೃಷ್ಣಕಲ್ಚಾರ್, ಲಿಂಗ ದೇವರು ಹಳೆ ಮನೆ, ರಾಜಗುರು, ಶೈಲೇಶ್ ಕುಮಾರ್, ಹನುಮಂತ ಹಾಲಿಗೇರಿ, ಎಂ. ಎಸ್ ನರಸಿಂಹ ಮೂರ್ತಿ, ಕರಣಂ ಪವನ್ ಪ್ರಸಾದ್ ಸೇರಿದಂತೆ ಹಲವು ಬರವಣಿಗೆಗಾರರ ಬರಹ ನಾಟಕಗಳಿಗಿದೆ.

ನಿರ್ದೇಶನ ವಿಭಾಗದಲ್ಲಿ ಕೃಷ್ಣ ಮೂರ್ತಿ ಕವತ್ತಾರ್, ನಂಜುಂಡೇಗೌಡ, ನಿರಂಜನ್ ಖಾಲಿಕೊಡ, ಡಾ. ಎಸ್. ವಿ. ಸುಷ್ಮಾ, ಭಾಸ್ಕರ್ ಗೌಡ, ದಿಲೀಪ್ ಬಿ.ಎಂ, ನಂದೀಶ್ ದೇವ್, ಶೈಲೇಶ್ ಕುಮಾರ್, ಭಾಸ್ಕರ್ ನೀನಾಸಂ, ರಾಮಕೃಷ್ಣ ಬೆಳ್ತೂರ್, ಗಗನ್ ಪ್ರಸಾದ್, ಹನು ರಾಮಸಂಜೀವ, ರಾಜಗುರು ಸೇರಿದ್ದಾರೆ.

ಇದನ್ನೂ ಓದಿ: ರೈತರ ಸಮಸ್ಯೆ ಬಗೆಹರಿಯುವವರೆಗೂ ಇಂಗ್ಲೆಂಡ್ ಪ್ರಧಾನಿ ಭಾರತಕ್ಕೆ ಬರುವುದು ಬೇಡ: ರೈತ ಮುಖಂಡರ ಪತ್ರ

ಈ  ಹದಿನೈದು ದಿನಗಳಲ್ಲಿ ನಾಟಕಗಳ ಜೊತೆಗೆ ಸಂವಾದ, ರಂಗಗೀತೆಗಳು, ಯುವರಂಗ 2021 ಪ್ರಶಸ್ತಿ ಪ್ರದಾನ ನಡೆಯಲಿದೆ. ಇದೆಲ್ಲದರ ಜೊತೆಗೆ ಜನವರಿ 11 ರಂದು ರಂಗನಿರಂತರ ತಂಡವು ಸಿಜಿಕೆ ಅವರ ಲಕೋಟೆಯನ್ನು ಬಿಡುಗಡೆ ಮಾಡಲಿದೆ ಎಂದು ರಂಗತಂಡಗಳು ಮಾಹಿತಿ ನೀಡಿದ್ದಾರೆ.

ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ನಾಟಕಗಳು ನಡೆಯಲಿವೆ. ಸರ್ಕಾರ ಬಿಡುಗಡೆ ಮಾಡಿರುವ ಎಲ್ಲಾ ಕೊರೊನಾ ನಿಯಮಗಳನ್ನು ಅನುಸರಿಸಲಾಗುವುದು, ಮಾಸ್ಕ್, ದೈಹಿಕ ಅಂತರ ಕಾಪಾಡುವುದು ಮುಖ್ಯ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರತಿ ನಾಟಕಕ್ಕೆ 100 ರೂಪಾಯಿ ಟಿಕೆಟ್ ದರ ಇರಲಿದೆ. ಹದಿನೈದು ದಿನಗಳ ಪಾಸ್ ಪಡೆದುಕೊಂಡವರಿಗೆ 1,000 ರೂಪಾಯಿಗೆ ಪಾಸ್ ದೊರೆಯಲಿದೆ.


ಇದನ್ನೂ ಓದಿ: ಪ.ಜಾತಿ, ಪ.ಪಂಗಡಗಳ ಬಡ್ತಿ ಸಮಸ್ಯೆ ನಿವಾರಿಸಿ, ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿಮಾಡಿ: ಸಿದ್ದರಾಮಯ್ಯ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...