Homeಸುಳ್ಳಪ್ಪೋ ಸುಳ್ಳುಚಲಾನಾ... ಜಲಾನಾ... ನೋಡಿದಿರಾ ‘ಬೆಂಕಿ ಹಚ್ಚುವ’ ಚಾನೆಲ್‌ನಾ?

ಚಲಾನಾ… ಜಲಾನಾ… ನೋಡಿದಿರಾ ‘ಬೆಂಕಿ ಹಚ್ಚುವ’ ಚಾನೆಲ್‌ನಾ?

- Advertisement -
- Advertisement -

ಮಿಥ್ಯ: ‘ಹಮ್ ಭಾರತ್ ಬಂದ್ ಕರನಾ ಜಾನತೆ ಹೈ, ತೊ ಹಮ್ ಭಾರತ್ ಜಲಾನಾ ಭೀ ಜಾನತೆ ಹೈ’
(ಭಾರತ್ ಬಂದ್ ಮಾಡುವುದು ಗೊತ್ತಿರುವ ನಮಗೆ ಭಾರತವನ್ನು ಸುಡುವುದೂ ಗೊತ್ತು)

ಭಾರತ ಸುಡುವ ಇಂತಹ ಪ್ರಚೋದನಾತ್ಮಕ ಹೇಳಿಕೆಯನ್ನು ಭೀಮ್ ಆರ್ಮಿ ಸಂಸ್ಥಾಪಕ, ದಲಿತ ನಾಯಕ ಚಂದ್ರಶೇಖರ್ ಅಜಾದ್ ರಾವಣ್ ಬಹಿರಂಗ ಸಭೆಯಲ್ಲಿ ಆಡಿರುವರೆಂದು ಮೂರು ದಿನಗಳ ಹಿಂದೆ ಝೀ ನ್ಯೂಸ್ (ಹಿಂದಿ) ಮತ್ತು ನ್ಯೂಸ್ 18 ಚಾನೆಲ್‌ಗಳು ಅಪಾದಿಸಿವೆ. ತಮ್ಮ ವೆಬ್‌ಸೈಟಿನಲ್ಲಿನ ಲೇಖನ ಮತ್ತು ಟ್ವಿಟರ್‌ನಲ್ಲಿ ಅವು, ‘ಮುಝಾಫರ್ ನಗರದಲ್ಲಿ ದಲಿತ ಸಭೆಯೊಂದರಲ್ಲಿ ಮಾತನಾಡುವಾಗ ಚಂದ್ರಶೇಖರ್ ಅವರು, ಜನರು ನನ್ನ ಸಿಗ್ನಲ್‌ಗೆ ಕಾಯುತ್ತಿದ್ದಾರೆ, ನಾವು ಭಾರತ್ ಬಂದ್ ಮಾಡಬಲ್ಲೆವಾದರೆ, ಭಾರತವನ್ನು ಸುಡಲೂಬಲ್ಲೆವು…,ನಮ್ಮ ಸಹನೆಗೂ ಒಂದು ಮಿತಿಯಿದೆ, ದೌರ್ಜನ್ಯಗಳಿಗೂ ಒಂದು ಮಿತಿ ಇದೆ ಎಂದು ಹೇಳಿಕೆ ನೀಡಿದರು’ ಎಂದಿವೆ.

ಸತ್ಯ: ಸತ್ಯ ಬೇರೇನೇ ಇದೆ. ಅದಕ್ಕೂ ಮೊದಲು ಝೀ ನ್ಯೂಸ್, ನ್ಯೂಸ್ 18ಗಳ ಈ ಸುದ್ದಿಗೆ ‘ಹಿಂದುತ್ವವಾದಿಗಳು’ ಸ್ಪಂದಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಚಂದ್ರಶೇಖರ್ ವಿರುದ್ಧ ವಿಪರೀತ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಅತ್ಯಂತ ಪ್ರಚೋದನಾಕಾರಿ ಸಂದೇಶಗಳನ್ನು ಹಾಕಿದ್ದನ್ನು ನೋಡೋಣ.

ತನ್ನನ್ನು ರಾಷ್ಟ್ರೀಯವಾದಿ ಎಂದುಕೊಳ್ಳುವ ‘ಭಯ್ಯಾಜಿ’ (ಟ್ವಿಟರ್ ಹ್ಯಾಂಡಲ್ @shiraloksharma) ಎಂಬ ವ್ಯಕ್ತಿ ಟ್ವೀಟ್ ಮಾಡಿ, ‘ಹಾಗೆ ಭಾರತ ಸುಡುತ್ತೇನೆ ಎಂದು ಬೆದರಿಸುವವರನ್ನು ಅದೇ ಬೆಂಕಿಯಲ್ಲಿ ಹಾಕಿ ಬರ‍್ಯಾನಿ ಮಾಡಿ, ಬೀದಿನಾಯಿಗಳಿಗೆ ಹಾಕುತ್ತೇವೆ. ಪ್ರಯತ್ನ ಮಾಡಿ ನೋಡಿ, ಪರಿಣಾಮ ಏನಾಗುತ್ತೆ ನೋಡಿ’ ಎಂದು ಬೆದರಿಸುತ್ತಾನೆ. ಇದೇ ಬಗೆಯಲ್ಲಿ ಹಲವಾರು ‘ದೇಶಭಕ್ತರು’ ಚಂದ್ರಶೇಖರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದ್ದಾರೆ.

‘ಭಯ್ಯಾಜಿ’ ಎನ್ನುವಾತನ ಆಕ್ರೋಶಭರಿತ, ದಲಿತವಿರೋಧಿ ಟ್ವೀಟ್

ಆದರೆ, ಆ ಸಭೆಯ ವಿಡಿಯೋವನ್ನು ಪಡೆದು ಪರೀಕ್ಷಿಸಿದಾಗ, ಚಂದ್ರಶೇಖರ್ ಹೇಳಿದ್ದು: ‘ಭಾರತ್ ಚಲಾನಾ’ (ಭಾರತ ನಡೆಸುವುದು, ಭಾರತ ಆಳುವುದು, ರನ್ನಿಂಗ್ ಇಂಡಿಯಾ) ಎಂದೇ ಹೊರತು, ‘ಭಾರತ್ ಜಲಾನಾ’ (ಭಾರತ ಸುಡುವುದು, ಬರ್ನಿಂಗ್ ಇಂಡಿಯಾ) ಎಂದು ಅಲ್ಲವೇ ಅಲ್ಲ.

ಝೀ ನ್ಯೂಸ್, ನ್ಯೂಸ್18 ಮಾಧ್ಯಮಗಳು ಬೇಕೆಂತಲೇ ‘ಚಲಾನಾ’ ಎಂಬುದನ್ನು ‘ಜಲಾನಾ’ ಎಂದು ತಿರುಚಿ ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿವೆ. ಇಂತಹ ಬಹುತೇಕ ಮಾಧ್ಯಮಗಳ ಮಾಲಿಕರು ಮತ್ತು ಮ್ಯಾನೇಜ್‌ಮೆಂಟ್ ದಲಿತ ವಿರೋಧಿ ಆಗಿರುವುದೇ ಇದಕ್ಕೆಲ್ಲ ಕಾರಣ….

ವಿಡಿಯೊ ಲಿಂಕ್ ವಿಳಾಸ:  https://vimeo.com/315073201 (ವಿಡಿಯೊವನ್ನು ಸ್ಲೋ ಮಾಡಿ ಪರೀಕ್ಷಿಸಿದ್ದು)
ಇದಕ್ಕೆ ಪ್ರತಿಕ್ರಿಯಿಸಿರುವ ಚಂದ್ರಶೇಖರ್, ‘ಬೇಕೆಂತಲೇ ವಿಷಯ ತಿರುಚಿ ಗದ್ದಲ ಎಬ್ಬಿಸಲು ನೋಡಿದ ಈ ದಲಿತ ವಿರೋಧಿ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವೆ’ ಎಂದಿದ್ದಾರೆ.

ಮಾನಗೇಡಿ ಚಾನೆಲ್‌ಗಳ ವಿರುದ್ಧ ಚಂದ್ರಶೇಖರ್ ಟ್ವೀಟ್

ಚಲಾನಾ ಎಂಬುದನ್ನು ಜಲಾನಾ ಮಾಡಿ ‘ಬೆಂಕಿ ಹಚ್ಚುವ’ ಇಂತಹ ಮಾಧ್ಯಮಗಳಿಗೆ ನಮ್ಮ ಧಿಕ್ಕಾರವಿರಲಿ. ಅಂದಂತೆ, ಜೆಎನ್‌ಯುನಲ್ಲಿ ಕನ್ಹಯ್ಯಕುಮಾರ್ ಮಾಡಿದ ಭಾಷಣದ ತಿರುಚಿದ ವಿಡಿಯೋವನ್ನು ಮೊದಲು ಪ್ರಸಾರ ಮಾಡಿದ್ದೇ ಇದೇ ಝೀ ನ್ಯೂಸ್ (ಹಿಂದಿ) ಚಾನೆಲ್. ಇದು ಮೋದಿ ಮತ್ತು ಬಿಜೆಪಿಯ ಕಾಲು ನೆಕ್ಕುವ ಚಾನೆಲ್ ಎಂದು ಪದೇ ಪದೇ ಸಾಬೀತಾಗಿದೆ.

(ಕೃಪೆ: ಅಲ್ಟ್ನ್ಯೂಸ್.ಕಾಮ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...