Homeನ್ಯಾಯ ಪಥತಳಸಮುದಾಯಗಳ ಕಥನವನ್ನು ಮರೆಮಾಚುವುದು ಭಾರತದ ಮಟ್ಟಿಗೆ ಆತ್ಮವಂಚನೆಯೇ ಸರಿ

ತಳಸಮುದಾಯಗಳ ಕಥನವನ್ನು ಮರೆಮಾಚುವುದು ಭಾರತದ ಮಟ್ಟಿಗೆ ಆತ್ಮವಂಚನೆಯೇ ಸರಿ

- Advertisement -
- Advertisement -

| ಸಂಪಾದಕೀಯ |

ಕೇಂದ್ರ ಸರ್ಕಾರ ತಾನು ಆಡಳಿತ ನಡೆಸಿದ 5 ವರ್ಷಗಳಲ್ಲಿ ಸುಪ್ರೀಂ ಕೋರ್ಟ್, ಆರ್‍ಬಿಐ, ಸಿ.ಬಿ.ಐ, ದತ್ತಾಂಶ ಸಂಸ್ಥೆಗಳು ಸೇರಿದಂತೆ ಆಡಳಿತದ ಎಲ್ಲಾ ಸಾಂಸ್ಥಿಕ ಆಯಾಮಗಳನ್ನು ಹದಗೆಡಿಸಿರುವುದು ಪ್ರಜ್ಞಾವಂತರಿಗೆ ಗೊತ್ತೇ ಇದೆ. ಸರ್ಕಾರದ ಅನಧಿಕೃತ ಸಂಸ್ಥೆಗಳ ಮೂಲಕ ದೇಶದ ಜನ ಏನು ತಿನ್ನಬೇಕು, ಯಾವ ರೀತಿಯ ಬಟ್ಟೆ ಹಾಕಬೇಕು ಎನ್ನುವ ಫರ್ಮಾನು ಸಹ ಹೊರಡಿಸಲಾಯಿತು. ಈಗ ಅದೇ ಸರ್ಕಾರ ತನ್ನ ಕೊನೆಯ ದಿನಗಳಲ್ಲಿ ದೇಶದ ಮಕ್ಕಳು ಏನು ಕಲಿಯಬೇಕು ಏನು ಬಿಡಬೇಕು ಎಂದು ನಿರ್ಧರಿಸಲು ಮುಂದಾಗಿರುವುದು ಪ್ರಜಾಪ್ರಭುತ್ವ ಘೋರ ಅಣಕವಾಗಿದೆ.

ಭಾರತ ಬಹುತ್ವ ದೇಶ. ಈ ವೈವಿಧ್ಯತೆಯೇ ಅದರ ಜೀವಾಳ. ಈ ವೈವಿಧ್ಯತೆಯೂ ದೇಶದ ಎಲ್ಲಾ ರಂಗಗಳಲ್ಲೂ ಕಂಡಿಬಂದಿದ್ದು ಸಹಜವಾಗಿಯೇ ಮಕ್ಕಳ ಕಲಿಕೆಯಲ್ಲಿಯೂ ಸೇರಿಕೊಂಡಿದೆ. ಭಾರತದ ಪಠ್ಯಪುಸ್ತಕಗಳು ಸಮಗ್ರತೆಯಿಂದ ಕೂಡಿದ್ದು ಇಡೀ ದೇಶದ ಸಂಸ್ಕೃತಿ ಆಚಾರ ವಿಚಾರ ಜನಾಂಗಗಳ ಕುರಿತ ಮಾಹಿತಿಗಳನ್ನು ಒಳಗೊಂಡಿರಬೇಕೆನ್ನುವುದು ಸಂವಿಧಾನದ ಆಶಯ ಮಾತ್ರವಲ್ಲ ಮಕ್ಕಳ ಕಲಿಕೆಯ ದೃಷ್ಟಿಯಿಂದ, ಅವರ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಅನಿವಾರ್ಯವೆಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಈ ನಿಟ್ಟಿನಲ್ಲಿ ನಾವಿನ್ನು ನಮ್ಮ ಪಠ್ಯಪುಸ್ತಕಗಳಲ್ಲಿ ಒಳಗೊಳ್ಳಬೇಕಿರುವ ಸಾವಿರಾರು ಅಂಶಗಳಿದ್ದರೂ ಆ ಕಡೆ ಹೆಜ್ಜೆ ಇಟ್ಟೆದ್ದೆವು. ಆದರೆ ಈ ಸರ್ಕಾರ ಅದರಿಂದ ಹಿಂದೆ ಬರುವ ಸೂಚನೆಗಳನ್ನು ನೀಡುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ.

ಮೂರು ದಿನ ಹಿಂದೆಯಷ್ಟೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ಪ್ರಕಾಶ್ ಜಾವೇಡ್‍ಕರ್‍ ರವರ ನಿರ್ದೇಶನದ ಮೇರೆಗೆ ಮಕ್ಕಳ ಕಲಿಕೆಯ ಹೊರೆ ಕಡಿಮೆ ಮಾಡುವ ನೆಪಹೊಡ್ಡಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಭೇತಿ ಮಂಡಳಿಯು 9ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಭಾರೀ ಬದಲಾವಣೆಗಳನ್ನು ತಂದಿದೆ. ಭಾರತ ಮತ್ತು ಸಮಕಾಲೀನ ಜಗತ್ತು-1 ಎಂಬ ಪಠ್ಯಪುಸ್ತಕದಲ್ಲಿ 70 ಪುಟಗಳನ್ನು ಕೈಬಿಟ್ಟಿದೆ. ಆದರೆ ಅದರಲ್ಲಿ ಕೇರಳದ ಟ್ರಾವೆಂಕೂರ್‍ನಲ್ಲಿ ಕೆಳ ಜಾತಿಯವರಾಗಿ ಪರಿಗಣಿಸುವ ನಾಡಾರ್ ಮಹಿಳೆಯರು ಎದೆಭಾಗವನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವುದಕ್ಕಾಗಿ ನಡೆಸಿದ ಹೋರಾಟದ ಕಥನ ಸೇರಿದಂತೆ ಮಹತ್ವದ ಮೂರು ಪಾಠಗಳನ್ನು ತೆಗೆದಿರುವುದು ಕೇವಲ ಹೊರೆ ಕಡಿಮೆ ಮಾಡುವುದಕ್ಕಾಗಿ ಎಂದರೆ ನಂಬಲು ಸಾಧ್ಯವೇ?

ಮುಂದುವರಿದು ಇತಿಹಾಸ ಮತ್ತು ಕ್ರೀಡೆ ಎಂಬ ಅಧ್ಯಾಯದಲ್ಲಿ ಭಾರತದಲ್ಲಿ ಕ್ರಿಕೆಟ್ ಆಟವೆಂಬುದು ಕೆಲವೇ ಜಾತಿ, ಪ್ರದೇಶ ಮತ್ತು ಸಮುದಾಯದೊಂದಿಗೆ ಮಾತ್ರ ಬೆಸೆದುಕೊಂಡಿದೆ ಎಂಬುದರ ವಿಮರ್ಶಾತ್ಮಕ ಪಠ್ಯವನ್ನು ಸಹ ಕೈಬಿಡಲಾಗಿದೆ. ಹಾಗಯೇ ಗ್ರಾಮೀಣ ಜನರು ಮತ್ತು ರೈತರು ಎಂಬ ಅಧ್ಯಾಯದಡಿ ಬಂಡವಾಳಶಾಹಿ ಮತ್ತು ವಸಾಹತುಶಾಹಿ ಆಳ್ವಿಕೆಗಳು ಗ್ರಾಮೀಣ ಜನರ ಮೇಲೆ ಅದರಲ್ಲೂ ರೈತರ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಇದ್ದ ಅಧ್ಯಾಯವೂ ಹೊರೆಯ ಕಾರಣಕ್ಕೆ ಕಾಣೆಯಾಗಿದೆ. ಕೈಬಿಟ್ಟಿರುವ ಮೂರು ಪಠ್ಯಗಳು ಸಹ ದೇಶದ ತಳಸಮುದಾಯಗಳ ಕಥನವಾಗಿದ್ದು ಅವರಿಗಾಗುತ್ತಿರುವ ಅನ್ಯಾಯ ಮತ್ತು ಸಮಾಜವನ್ನು ವಿಮರ್ಶಾತ್ಮಕ ನೋಡಲು ಸಾಧ್ಯವಾಗುವಂತವೇ ಆಗಿರುವುದರಿಂದ ಇದು ಉದ್ದೇಶಪೂರ್ವಕ ಕೃತ್ಯ ಎಂಬುದು ಸ್ಪಷ್ಟವಾಗುತ್ತದೆ.

ಈ ಪ್ರಕ್ರಿಯೆ 2016ರಿಂದಲೂ ಚಾಲ್ತಿಯಲ್ಲಿದ್ದು ಈ ಪಠ್ಯಗಳ ಕುರಿತು ಪರೀಕ್ಷೆಗಳಲ್ಲಿ ಪ್ರಶ್ನೆ ಕೇಳಬಾರದೆಂದು ಆಗಲೇ ಸುತ್ತೋಲೆ ಹೊರಡಿಸಿತ್ತು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡದೇ ಕೇವಲ ಇತಿಹಾಸ (ಸಾಮಾಜಿಕ ವಿಜ್ಞಾನ)ದ ಪಠ್ಯಪುಸ್ತಕಗಳಲ್ಲಿ ಮಾತ್ರ ಪಠ್ಯಗಳನ್ನು ಕಡಿತ ಮಾಡಿದೆ ಎಂದರೆ ಆಳುವ ಸರ್ಕಾರದ ಹುನ್ನಾರ ಅರ್ಥವಾಗದೇ ಇರುವುದಿಲ್ಲ. ಇದೇ ಸಂದರ್ಭದಲ್ಲಿ ಹೊರೆ ಕಡಿಮೆ ಮಾಡುವ ಉದ್ದೇಶ ಅಂತ ಬಾಯಲ್ಲಿ ಹೇಳುತ್ತಿದ್ದು ಇತ್ತೀಚೆಗೆ ನಿಧನರಾದ ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ಹಿಂದಿ ಕವನವನ್ನು ಇದೇ ಎನ್‍ಸಿಇಆರ್‍ಟಿ ಪಠ್ಯದಲ್ಲಿ ಸೇರ್ಪಡೆ ಮಾಡಿದೆ.

ಮಕ್ಕಳು ಏನನ್ನು ಕಲಿಯಬೇಕು, ಪಠ್ಯ ಯಾವುದಿರಬೇಕೆಂಬುದನ್ನು ಹಾಗೂ ಎಷ್ಟಿರಬೇಕೆಂಬುದನ್ನು ನಿರ್ಧರಿಸಬೇಕಿರುವುದು ಶಿಕ್ಷಣ ತಜ್ಞರು, ಮಕ್ಕಳ ತಜ್ಞರು. ಆಳುವ ಸರ್ಕಾರಗಳು ತಮ್ಮ ರಾಜಕೀಯ ಲಾಭಕ್ಕಾಗಿ ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಮೂಗು ತೂರಿಸುವುದು ಪ್ರಜಾತಂತ್ರ ವಿರೋಧಿಯಾದುದು. ಆದರೆ ಬಲಪಂಥೀಯ ಸರ್ಕಾರಗಳು ಅಧಿಕಾರಕ್ಕೆ ಬಂದಂತೆಲ್ಲಾ ಶಿಕ್ಷಣದ ಕೇಸರಿಕರಣಕ್ಕೆ ನೇರವಾಗಿ ಕೈಹಾಕುತ್ತಾ ಎಳೆಯ ಮಕ್ಕಳ ಮನಸ್ಸಿನಲ್ಲಿ ವಿಷ ತುಂಬುವ ಪ್ರಯತ್ನ ಮಾಡುತ್ತಿವೆ. ಇನ್ನೊಂದು ಸರ್ಕಾರ ಅಧಿಕಾರಕ್ಕೆ ಬಂದಾಗ ಅವರು ತಮಗೆ ಮನಸ್ಸಿಗೆ ಬಂದುದ್ದನ್ನು ಪಠ್ಯಪುಸ್ತಕಗಳಲ್ಲಿ ತರಲು ಹೊರಟರೆ ಶಿಕ್ಷಣದ ಉದ್ದೇಶವೇ ಬೀದಿಪಾಲಾಗುತ್ತದೆ.

ಈ ಹಿಂದೆಯೂ 2009ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಶಾಲೆಗಳಲ್ಲಿ ಭಗವದ್ಗೀತೆ ಕಡ್ಡಾಯ ಮಾಡಬೇಕು ಎಂಬ ಸುತ್ತೋಲೆ ಹೊರಡಿಸಿತ್ತು. ಆಗ ಕರ್ನಾಟಕದ ಪ್ರಜ್ಞಾವಂತರಿಂದ ವ್ಯಾಪಕ ವಿರೋಧ ಬಂದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ನಿಲುವಿನಿಂದ ಹಿಂದೆ ಸರಿದಿತ್ತು. ತದನಂತರ ಸಂಸ್ಕøತ ಭಾಷೆಯನ್ನು ಕಡ್ಡಾಯ ಮಾಡುತ್ತೇವೆಂದು ಒಂದಷ್ಟು ದಿನ ಪ್ರಚಾರ ಮಾಡಿದರು. ಈಗ ವೇದ ಶಿಕ್ಷಣವನ್ನು ಕಡ್ಡಾಯಗೊಳಿಸುತ್ತೇವೆಂದು ಗುಲ್ಲೆಬ್ಬಿಸುತ್ತಿದ್ದಾರೆ. ಇಡೀ ಪ್ರಪಂಚವೇ ಆಧುನಿಕ, ವೈಜ್ಞಾನಿಕ ಶಿಕ್ಷಣ ಪಡೆದು ಅಭಿವೃದ್ದಿ ಪಥದಲ್ಲಿ ಮುನ್ನುಗ್ಗುತ್ತಿದ್ದರೆ ಭಾರತ ಮಾತ್ರ ಮತಾಂಧರ ಕೈಗೆ ಸಿಕ್ಕಿ ಹಿಮ್ಮುಖವಾಗಿ ಚಲಿಸುವ ದುಸ್ಥಿಗೆ ತಲುಪಿದೆ.

ಶಿಕ್ಷಣದ ಮೂಲಭೂತ ಉದ್ದೇಶ ಮಾನವೀಯವಾದ, ಪ್ರಜಾತಾಂತ್ರಿಕವಾದ, ಎಲ್ಲಾ ಜನರೂ ಸಮಾನರಾದ, ಬಹು ವೈವಿಧ್ಯತೆಯನ್ನು ಗೌರವಿಸುವ, ಸೃಜನಶೀಲತೆ, ಜ್ಞಾನ ಹಾಗೂ ನೆಮ್ಮದಿಯನ್ನು ಹೆಚ್ಚಿಸುತ್ತಾ ಹೋಗುವ ಸಮಾಜವನ್ನು ನಿರ್ಮಿಸುವುದಾಗಿದೆ. ಅದರ ಈಡೇರಿಕೆಗೆ ಎಲ್ಲಾ ಜಾತಿ ಧರ್ಮದ ಮಕ್ಕಳು ಸಹ ಒಂದೇ ಶಾಲೆಯಲ್ಲಿ ಕಲಿಯುವ ಸಮಾನ ಶಾಲಾ ವ್ಯವಸ್ಥೆಯ ಅಗತ್ಯವಿದೆ. ಆಗ ಮಾತ್ರ ಭಾರತದ ಮಕ್ಕಳು ಯಾವುದೇ ಹೇರಿಕೆ ಇಲ್ಲದೇ ಮುಕ್ತವಾಗಿ ಕಲಿಯುವ ವಾತವರಣ ನಿರ್ಮಾಣವಾಗುತ್ತದೆ. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಲಪಂಥೀಯ ಸರ್ಕಾರದ ಅರ್ಥಹೀನ ಕ್ರಮಗಳನ್ನು ವಿರೊಧಿಸುತ್ತಲೇ ಜನಪರ ಕಲಿಕಾ ವಿಧನಕ್ಕಾಗಿ ಒತ್ತಾಯಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...