Homeನ್ಯಾಯ ಪಥತಳಸಮುದಾಯಗಳ ಕಥನವನ್ನು ಮರೆಮಾಚುವುದು ಭಾರತದ ಮಟ್ಟಿಗೆ ಆತ್ಮವಂಚನೆಯೇ ಸರಿ

ತಳಸಮುದಾಯಗಳ ಕಥನವನ್ನು ಮರೆಮಾಚುವುದು ಭಾರತದ ಮಟ್ಟಿಗೆ ಆತ್ಮವಂಚನೆಯೇ ಸರಿ

- Advertisement -
- Advertisement -

| ಸಂಪಾದಕೀಯ |

ಕೇಂದ್ರ ಸರ್ಕಾರ ತಾನು ಆಡಳಿತ ನಡೆಸಿದ 5 ವರ್ಷಗಳಲ್ಲಿ ಸುಪ್ರೀಂ ಕೋರ್ಟ್, ಆರ್‍ಬಿಐ, ಸಿ.ಬಿ.ಐ, ದತ್ತಾಂಶ ಸಂಸ್ಥೆಗಳು ಸೇರಿದಂತೆ ಆಡಳಿತದ ಎಲ್ಲಾ ಸಾಂಸ್ಥಿಕ ಆಯಾಮಗಳನ್ನು ಹದಗೆಡಿಸಿರುವುದು ಪ್ರಜ್ಞಾವಂತರಿಗೆ ಗೊತ್ತೇ ಇದೆ. ಸರ್ಕಾರದ ಅನಧಿಕೃತ ಸಂಸ್ಥೆಗಳ ಮೂಲಕ ದೇಶದ ಜನ ಏನು ತಿನ್ನಬೇಕು, ಯಾವ ರೀತಿಯ ಬಟ್ಟೆ ಹಾಕಬೇಕು ಎನ್ನುವ ಫರ್ಮಾನು ಸಹ ಹೊರಡಿಸಲಾಯಿತು. ಈಗ ಅದೇ ಸರ್ಕಾರ ತನ್ನ ಕೊನೆಯ ದಿನಗಳಲ್ಲಿ ದೇಶದ ಮಕ್ಕಳು ಏನು ಕಲಿಯಬೇಕು ಏನು ಬಿಡಬೇಕು ಎಂದು ನಿರ್ಧರಿಸಲು ಮುಂದಾಗಿರುವುದು ಪ್ರಜಾಪ್ರಭುತ್ವ ಘೋರ ಅಣಕವಾಗಿದೆ.

ಭಾರತ ಬಹುತ್ವ ದೇಶ. ಈ ವೈವಿಧ್ಯತೆಯೇ ಅದರ ಜೀವಾಳ. ಈ ವೈವಿಧ್ಯತೆಯೂ ದೇಶದ ಎಲ್ಲಾ ರಂಗಗಳಲ್ಲೂ ಕಂಡಿಬಂದಿದ್ದು ಸಹಜವಾಗಿಯೇ ಮಕ್ಕಳ ಕಲಿಕೆಯಲ್ಲಿಯೂ ಸೇರಿಕೊಂಡಿದೆ. ಭಾರತದ ಪಠ್ಯಪುಸ್ತಕಗಳು ಸಮಗ್ರತೆಯಿಂದ ಕೂಡಿದ್ದು ಇಡೀ ದೇಶದ ಸಂಸ್ಕೃತಿ ಆಚಾರ ವಿಚಾರ ಜನಾಂಗಗಳ ಕುರಿತ ಮಾಹಿತಿಗಳನ್ನು ಒಳಗೊಂಡಿರಬೇಕೆನ್ನುವುದು ಸಂವಿಧಾನದ ಆಶಯ ಮಾತ್ರವಲ್ಲ ಮಕ್ಕಳ ಕಲಿಕೆಯ ದೃಷ್ಟಿಯಿಂದ, ಅವರ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಅನಿವಾರ್ಯವೆಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಈ ನಿಟ್ಟಿನಲ್ಲಿ ನಾವಿನ್ನು ನಮ್ಮ ಪಠ್ಯಪುಸ್ತಕಗಳಲ್ಲಿ ಒಳಗೊಳ್ಳಬೇಕಿರುವ ಸಾವಿರಾರು ಅಂಶಗಳಿದ್ದರೂ ಆ ಕಡೆ ಹೆಜ್ಜೆ ಇಟ್ಟೆದ್ದೆವು. ಆದರೆ ಈ ಸರ್ಕಾರ ಅದರಿಂದ ಹಿಂದೆ ಬರುವ ಸೂಚನೆಗಳನ್ನು ನೀಡುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ.

ಮೂರು ದಿನ ಹಿಂದೆಯಷ್ಟೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ಪ್ರಕಾಶ್ ಜಾವೇಡ್‍ಕರ್‍ ರವರ ನಿರ್ದೇಶನದ ಮೇರೆಗೆ ಮಕ್ಕಳ ಕಲಿಕೆಯ ಹೊರೆ ಕಡಿಮೆ ಮಾಡುವ ನೆಪಹೊಡ್ಡಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಭೇತಿ ಮಂಡಳಿಯು 9ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಭಾರೀ ಬದಲಾವಣೆಗಳನ್ನು ತಂದಿದೆ. ಭಾರತ ಮತ್ತು ಸಮಕಾಲೀನ ಜಗತ್ತು-1 ಎಂಬ ಪಠ್ಯಪುಸ್ತಕದಲ್ಲಿ 70 ಪುಟಗಳನ್ನು ಕೈಬಿಟ್ಟಿದೆ. ಆದರೆ ಅದರಲ್ಲಿ ಕೇರಳದ ಟ್ರಾವೆಂಕೂರ್‍ನಲ್ಲಿ ಕೆಳ ಜಾತಿಯವರಾಗಿ ಪರಿಗಣಿಸುವ ನಾಡಾರ್ ಮಹಿಳೆಯರು ಎದೆಭಾಗವನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವುದಕ್ಕಾಗಿ ನಡೆಸಿದ ಹೋರಾಟದ ಕಥನ ಸೇರಿದಂತೆ ಮಹತ್ವದ ಮೂರು ಪಾಠಗಳನ್ನು ತೆಗೆದಿರುವುದು ಕೇವಲ ಹೊರೆ ಕಡಿಮೆ ಮಾಡುವುದಕ್ಕಾಗಿ ಎಂದರೆ ನಂಬಲು ಸಾಧ್ಯವೇ?

ಮುಂದುವರಿದು ಇತಿಹಾಸ ಮತ್ತು ಕ್ರೀಡೆ ಎಂಬ ಅಧ್ಯಾಯದಲ್ಲಿ ಭಾರತದಲ್ಲಿ ಕ್ರಿಕೆಟ್ ಆಟವೆಂಬುದು ಕೆಲವೇ ಜಾತಿ, ಪ್ರದೇಶ ಮತ್ತು ಸಮುದಾಯದೊಂದಿಗೆ ಮಾತ್ರ ಬೆಸೆದುಕೊಂಡಿದೆ ಎಂಬುದರ ವಿಮರ್ಶಾತ್ಮಕ ಪಠ್ಯವನ್ನು ಸಹ ಕೈಬಿಡಲಾಗಿದೆ. ಹಾಗಯೇ ಗ್ರಾಮೀಣ ಜನರು ಮತ್ತು ರೈತರು ಎಂಬ ಅಧ್ಯಾಯದಡಿ ಬಂಡವಾಳಶಾಹಿ ಮತ್ತು ವಸಾಹತುಶಾಹಿ ಆಳ್ವಿಕೆಗಳು ಗ್ರಾಮೀಣ ಜನರ ಮೇಲೆ ಅದರಲ್ಲೂ ರೈತರ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಇದ್ದ ಅಧ್ಯಾಯವೂ ಹೊರೆಯ ಕಾರಣಕ್ಕೆ ಕಾಣೆಯಾಗಿದೆ. ಕೈಬಿಟ್ಟಿರುವ ಮೂರು ಪಠ್ಯಗಳು ಸಹ ದೇಶದ ತಳಸಮುದಾಯಗಳ ಕಥನವಾಗಿದ್ದು ಅವರಿಗಾಗುತ್ತಿರುವ ಅನ್ಯಾಯ ಮತ್ತು ಸಮಾಜವನ್ನು ವಿಮರ್ಶಾತ್ಮಕ ನೋಡಲು ಸಾಧ್ಯವಾಗುವಂತವೇ ಆಗಿರುವುದರಿಂದ ಇದು ಉದ್ದೇಶಪೂರ್ವಕ ಕೃತ್ಯ ಎಂಬುದು ಸ್ಪಷ್ಟವಾಗುತ್ತದೆ.

ಈ ಪ್ರಕ್ರಿಯೆ 2016ರಿಂದಲೂ ಚಾಲ್ತಿಯಲ್ಲಿದ್ದು ಈ ಪಠ್ಯಗಳ ಕುರಿತು ಪರೀಕ್ಷೆಗಳಲ್ಲಿ ಪ್ರಶ್ನೆ ಕೇಳಬಾರದೆಂದು ಆಗಲೇ ಸುತ್ತೋಲೆ ಹೊರಡಿಸಿತ್ತು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡದೇ ಕೇವಲ ಇತಿಹಾಸ (ಸಾಮಾಜಿಕ ವಿಜ್ಞಾನ)ದ ಪಠ್ಯಪುಸ್ತಕಗಳಲ್ಲಿ ಮಾತ್ರ ಪಠ್ಯಗಳನ್ನು ಕಡಿತ ಮಾಡಿದೆ ಎಂದರೆ ಆಳುವ ಸರ್ಕಾರದ ಹುನ್ನಾರ ಅರ್ಥವಾಗದೇ ಇರುವುದಿಲ್ಲ. ಇದೇ ಸಂದರ್ಭದಲ್ಲಿ ಹೊರೆ ಕಡಿಮೆ ಮಾಡುವ ಉದ್ದೇಶ ಅಂತ ಬಾಯಲ್ಲಿ ಹೇಳುತ್ತಿದ್ದು ಇತ್ತೀಚೆಗೆ ನಿಧನರಾದ ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ಹಿಂದಿ ಕವನವನ್ನು ಇದೇ ಎನ್‍ಸಿಇಆರ್‍ಟಿ ಪಠ್ಯದಲ್ಲಿ ಸೇರ್ಪಡೆ ಮಾಡಿದೆ.

ಮಕ್ಕಳು ಏನನ್ನು ಕಲಿಯಬೇಕು, ಪಠ್ಯ ಯಾವುದಿರಬೇಕೆಂಬುದನ್ನು ಹಾಗೂ ಎಷ್ಟಿರಬೇಕೆಂಬುದನ್ನು ನಿರ್ಧರಿಸಬೇಕಿರುವುದು ಶಿಕ್ಷಣ ತಜ್ಞರು, ಮಕ್ಕಳ ತಜ್ಞರು. ಆಳುವ ಸರ್ಕಾರಗಳು ತಮ್ಮ ರಾಜಕೀಯ ಲಾಭಕ್ಕಾಗಿ ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಮೂಗು ತೂರಿಸುವುದು ಪ್ರಜಾತಂತ್ರ ವಿರೋಧಿಯಾದುದು. ಆದರೆ ಬಲಪಂಥೀಯ ಸರ್ಕಾರಗಳು ಅಧಿಕಾರಕ್ಕೆ ಬಂದಂತೆಲ್ಲಾ ಶಿಕ್ಷಣದ ಕೇಸರಿಕರಣಕ್ಕೆ ನೇರವಾಗಿ ಕೈಹಾಕುತ್ತಾ ಎಳೆಯ ಮಕ್ಕಳ ಮನಸ್ಸಿನಲ್ಲಿ ವಿಷ ತುಂಬುವ ಪ್ರಯತ್ನ ಮಾಡುತ್ತಿವೆ. ಇನ್ನೊಂದು ಸರ್ಕಾರ ಅಧಿಕಾರಕ್ಕೆ ಬಂದಾಗ ಅವರು ತಮಗೆ ಮನಸ್ಸಿಗೆ ಬಂದುದ್ದನ್ನು ಪಠ್ಯಪುಸ್ತಕಗಳಲ್ಲಿ ತರಲು ಹೊರಟರೆ ಶಿಕ್ಷಣದ ಉದ್ದೇಶವೇ ಬೀದಿಪಾಲಾಗುತ್ತದೆ.

ಈ ಹಿಂದೆಯೂ 2009ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಶಾಲೆಗಳಲ್ಲಿ ಭಗವದ್ಗೀತೆ ಕಡ್ಡಾಯ ಮಾಡಬೇಕು ಎಂಬ ಸುತ್ತೋಲೆ ಹೊರಡಿಸಿತ್ತು. ಆಗ ಕರ್ನಾಟಕದ ಪ್ರಜ್ಞಾವಂತರಿಂದ ವ್ಯಾಪಕ ವಿರೋಧ ಬಂದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ನಿಲುವಿನಿಂದ ಹಿಂದೆ ಸರಿದಿತ್ತು. ತದನಂತರ ಸಂಸ್ಕøತ ಭಾಷೆಯನ್ನು ಕಡ್ಡಾಯ ಮಾಡುತ್ತೇವೆಂದು ಒಂದಷ್ಟು ದಿನ ಪ್ರಚಾರ ಮಾಡಿದರು. ಈಗ ವೇದ ಶಿಕ್ಷಣವನ್ನು ಕಡ್ಡಾಯಗೊಳಿಸುತ್ತೇವೆಂದು ಗುಲ್ಲೆಬ್ಬಿಸುತ್ತಿದ್ದಾರೆ. ಇಡೀ ಪ್ರಪಂಚವೇ ಆಧುನಿಕ, ವೈಜ್ಞಾನಿಕ ಶಿಕ್ಷಣ ಪಡೆದು ಅಭಿವೃದ್ದಿ ಪಥದಲ್ಲಿ ಮುನ್ನುಗ್ಗುತ್ತಿದ್ದರೆ ಭಾರತ ಮಾತ್ರ ಮತಾಂಧರ ಕೈಗೆ ಸಿಕ್ಕಿ ಹಿಮ್ಮುಖವಾಗಿ ಚಲಿಸುವ ದುಸ್ಥಿಗೆ ತಲುಪಿದೆ.

ಶಿಕ್ಷಣದ ಮೂಲಭೂತ ಉದ್ದೇಶ ಮಾನವೀಯವಾದ, ಪ್ರಜಾತಾಂತ್ರಿಕವಾದ, ಎಲ್ಲಾ ಜನರೂ ಸಮಾನರಾದ, ಬಹು ವೈವಿಧ್ಯತೆಯನ್ನು ಗೌರವಿಸುವ, ಸೃಜನಶೀಲತೆ, ಜ್ಞಾನ ಹಾಗೂ ನೆಮ್ಮದಿಯನ್ನು ಹೆಚ್ಚಿಸುತ್ತಾ ಹೋಗುವ ಸಮಾಜವನ್ನು ನಿರ್ಮಿಸುವುದಾಗಿದೆ. ಅದರ ಈಡೇರಿಕೆಗೆ ಎಲ್ಲಾ ಜಾತಿ ಧರ್ಮದ ಮಕ್ಕಳು ಸಹ ಒಂದೇ ಶಾಲೆಯಲ್ಲಿ ಕಲಿಯುವ ಸಮಾನ ಶಾಲಾ ವ್ಯವಸ್ಥೆಯ ಅಗತ್ಯವಿದೆ. ಆಗ ಮಾತ್ರ ಭಾರತದ ಮಕ್ಕಳು ಯಾವುದೇ ಹೇರಿಕೆ ಇಲ್ಲದೇ ಮುಕ್ತವಾಗಿ ಕಲಿಯುವ ವಾತವರಣ ನಿರ್ಮಾಣವಾಗುತ್ತದೆ. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಲಪಂಥೀಯ ಸರ್ಕಾರದ ಅರ್ಥಹೀನ ಕ್ರಮಗಳನ್ನು ವಿರೊಧಿಸುತ್ತಲೇ ಜನಪರ ಕಲಿಕಾ ವಿಧನಕ್ಕಾಗಿ ಒತ್ತಾಯಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...