Homeಅಂಕಣಗಳುನೀರನಡೆ | ಹುಡುಕಬೇಕಾದ ಹೊಸ ಹಾದಿ

ನೀರನಡೆ | ಹುಡುಕಬೇಕಾದ ಹೊಸ ಹಾದಿ

- Advertisement -
- Advertisement -

ಡಾ. ವಿನಯಾ ಒಕ್ಕುಂದ |

ಚುನಾವಣೆಯ ಫಲಿತಾಂಶ ಪ್ರಕಟವಾಯಿತು. ಚರಿತ್ರೆಯ ಅತ್ಯಂತ ನಿರ್ಣಾಯಕ ಕಾಲಘಟ್ಟದಲ್ಲಿ ಕರ್ನಾಟಕದ ಪ್ರಜ್ಞಾವಂತ ಸಮುದಾಯ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿತೇ? ಎಂಬ ಪ್ರಶ್ನೆ ಉಳಿಯಿತು. ಕನ್ನಡದ ಸಂಸ್ಕೃತಿ ಚಿಂತಕರಾಗಿದ್ದ ಡಿ.ಆರ್.ನಾಗರಾಜ ಹೇಳುತ್ತಾರೆ. “ಜನರಿಗೆ ಮಹಾ ಪ್ರಾಯೋಗಿಕವಾದ ನೈತಿಕ ಕ್ರಿಯಾಶೀಲತೆ ಅಂತಿಮವಾಗಿ ಇದ್ದೇ ಇರುತ್ತದೆ. ಆದರೆ ಜನರು ಅನೈತಿಕ ಭ್ರಷ್ಟತೆಗಳ ರಂಜಕ ಬೆಂಬಲಿಗರೂ ಆಗಬಲ್ಲರು. ಅಂಥ ಸ್ಥಿತಿಯಲ್ಲಿ ಜನರಿಗೆ ಕೊಲೆ ದರೋಡೆ ಪಾತಕತನಗಳೆಲ್ಲವೂ ಮನರಂಜನೆಗಳ ಹಾಗೆ ಕಾಣತೊಡಗುತ್ತದೆ.” ಈ ಮಾತು ಗಾಢವಾಗಿ ಕಲಕುತ್ತಿತ್ತು.

ಡಿ.ಆರ್.ನಾಗರಾಜ್

ಕಳೆದ ಐದು ವರ್ಷಗಳ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆತಂದ ಜನಪ್ರಿಯವಾದರೂ ಜನಪರವಾದ ಯೋಜನೆಗಳು ನೆನಪಾದವು. ಅಧಿಕಾರ ವಹಿಸಿಕೊಂಡ ತಕ್ಷಣ ಘೋಷಿಸಿದ ಅನ್ನಭಾಗ್ಯಯೋಜನೆ, ಹಸಿವು-ಮುಕ್ತ ಕರ್ನಾಟಕದÀ ಕನಸು… ಯಾರು ಎಷ್ಟೇ ವ್ಯಂಗ್ಯ ಮಾಡಿದರೂ, ಅಂತಹ ಯೋಜನೆಗಳಿಗೆ ಹಿಂದೇಟು ಹಾಕದಿರುವ ದೃಢನಿರ್ಧಾರವನ್ನು ಸರ್ಕಾರ ಮಾಡಿತ್ತು. ಯೋಜನೆಗಳ ಫಲಾನುಭವಿ ಸಮುದಾಯ ಖಂಡಿತ ತಮ್ಮ ಕೈ ಹಿಡಿಯುತ್ತದೆ ಎಂಬ ಒಂದಿಷ್ಟು ಅಹಂಕಾರ ಮತ್ತು ಆತ್ಮವಿಶ್ವಾಸಗಳಲ್ಲಿ ಸಿದ್ದರಾಮಯ್ಯ ಇದ್ದರು. ಫಲಿತಾಂಶ ನೋಡುವಾಗ, ಜನರ ಮೇಲಿಟ್ಟ ಈ ನಂಬಿಕೆ ಸುಳ್ಳಾಗಿರುವುದು ಕಾಣುತ್ತಿದೆ.

ಚುನಾವಣೆಯ ರಿಸಲ್ಟ್ ದಿನ ನಾನು ನಮ್ಮೂರಿನಲ್ಲಿದ್ದೆ. ಕಡಲತಡಿಯ ನಮ್ಮೂರಿನದು ಬೆಸೆದ ಬದುಕು. ಊರುಬಿಟ್ಟು ದೂರ ಇರುವ ವರ್ಷಕ್ಕೊಂದಾವರ್ತಿ ಕಾಣಿಸಿಕೊಳ್ಳುವ ಮಕ್ಕಳು ಯಾರ ಮನೆಗೇ ಬಂದರೂ ಊರು ಗಲಗಲ ಅನ್ನುತ್ತದೆ. ಅಂಬಿಗರ ಕೇರಿಯಿಂದ ಫಳಫಳ ಹೊಳೆವ ಮೀನಬುಟ್ಟಿ, ಹಾಲಕ್ಕಿ ಒಕ್ಕಲಿಗರ ಕೇರಿಯಿಂದ ದಣೇ ಆಗ ಕಿತ್ತು ನೀರಹೊಂಡದಲ್ಲದ್ದಿ ಬಂದ ತರಕಾರಿ ಬುಟ್ಟಿ. ಆ ಮನೆ ಅಂಗಳಕ್ಕಿಳಿದು ಬಿಡುತ್ತವೆ. ನಾವಿದ್ದ ಜಾಗೆ ಬಿಡುವಾಗ ಇವರ್ಯಾರು ನೆನಪಾಗದೆ ಇವರಿಗಾಗಿ ಏನೂ ಒಯ್ಯದೆ ಹೋಗಿಬಿಟ್ಟವರು ಕಂಗಾಲಾಗುತ್ತೇವೆ. ನಮ್ಮ ಮನಸ್ಸಿನ ಭಣಭಣಕ್ಕೆ ನಾವೇ ಗಾಬರಿ ಬೀಳುವಂತೆ. ಮೊನ್ನೆಯೂ ಹಾಗಾಯಿತು. ಬೆಳಗ್ಗಿನ 10 ಗಂಟೆಯ ಹೊತ್ತಿಗೆ, ‘ಹೋಯ್‍ತಂಗಿ, ಯಾವಾಗ ಬಂದೆ’-ಅನ್ನುತ್ತ ತಳತಳ ಹೊಳೆವ ಮೀನು ಬುಟ್ಟಿ ಹಿಡ್ದು, ‘ಒಳಗ್ ತಕಂಡ ಹೋಗು ಹಿಡಿ’ ಅನ್ನುತ್ತ; ಎಷ್ಟು ಏನು ಎಂಬ ಯಾವ ರೇಟಿನ ಉಸಾಬರಿಗೂ ಹೋಗದ ಹಾಗೆ ಹೊರಡಲು ಅನುವಾದಳು ಅಂಬೇರ ಶಾಂತಿ. ಟಿ.ವಿ.ಯಲ್ಲಿ ‘ಸಿದ್ರಾಮಯ್ಯ ಹಿನ್ನಡೆ’ ಅಂತ ಬರುತ್ತಿತ್ತು. ‘ಶಾಂತಿ, ನೀವೆಲ್ಲ ಸಿದ್ರಾಮಯ್ಯನ ಪಕ್ಷಕ್ಕೆ ವೋಟು ಹಾಕಿದ್ರಾ ಇಲ್ವಾ? ಅಂತ ಕೇಳಿದ್ದೆ ಲೋಕಾಭಿರಾಮವಾಗಿ. ‘ಇಲ್ರಾ„’ ಅಂದಳು. ಸಹಜ ಕೇಳಿದವಳು ಗಾಬರಿಯಾದೆ. ಸಾಂಪ್ರದಾಯಿಕವಾಗಿ ಇವರೆಲ್ಲ ಆ ಪಕ್ಷದ ಮತದಾರರು ಮತ್ತು ಹತ್ತೆಂಟು ಯೋಜನೆಗಳ ಫಲಾನುಭವಿಗಳು. ಯಾಕೇ? ಎಂದೆ. ‘ನಮ್ಮ ಜಾತಿ ಪೋರನ ಹೊಡ್ದು ಕೊಂದಿರಕಡಾ-ಆದ್ರೂ ಆ ಸಿದ್ರಾಮಯ್ಯ ಒಂದ್ ಮಾತೂ ಹೇಳ್ನೆಲಾ ಕಡಾ. ಗುತ್ತಿತ್ರಾ?’ ಎಂದು ತಿರುಗಿ ಪ್ರಶ್ನಿಸಿದಳು. ಅವಳು ಪರೇಶ ಮೆಸ್ತಾನ ಸಾವಿನ ಸುದ್ದಿ ಪ್ರಸ್ತಾಪಿಸಿದ್ದಳು. ಅದು ಹಾಗಲ್ಲ ಮಾರಾಯ್ತಿ… ಎಂದು ಅವಳ ಮನಸ್ಸಿನಲ್ಲಿ ಬರೆದ ಬರಹ ಅಳಿಸಿ, ಮತ್ತೆ ಬೇರೆ ಬರೆಯಲು ಅವಳ ಬುಟ್ಟಿಯ ಮೀನು ಪುರಸೊತ್ತು ಕೊಡಲಿಲ್ಲ. “ಹಾಳಾಗ್ಲಿ ತಂಗಿ ಆ ಉಸಾಬರಿ… ನೀ ಹ್ಯಾಂಗಿವೆ? ಬರೂದೇ ಅಪರೂಪಾಯ್ತಲೆ” ಅನ್ನುತ್ತ ನಡೆದಳು.

ಬಹುಪಾಲು ದುಡಿವ ವರ್ಗದ ಸಾಮಾನ್ಯ ಜನರೇ ತುಂಬಿರುವ ಸಮಾಜದಲ್ಲಿ, ಜನರ ಮನಸ್ಸಿನಲ್ಲಿ ವಿಷಾನಿಲ ತುಂಬಿದರೆ… ಏನು ಆಗಬಹುದೋ ಅದು ಆಗುತ್ತಿದೆ. ಪರೇಶ ಮೆಸ್ತಾ ಎಂಬ ಎಳೆಯ ಹುಡುಗನ ಅನ್ಯಾಯದ ಸಾವಾಗಿದೆ. ನಿಜಕ್ಕೂ ಅದು ಹತ್ಯೆಯಾಗಿದ್ದರೆ, ಹತ್ಯೆ ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಪ್ರಕರಣ ಸಿಬಿಐನಲ್ಲಿದೆ. ಆದ್ರೆ ಊರೂರುಗಳಲ್ಲಿ ಆ ಹುಡುಗನ ಕಟೌಟುಗಳು, ಪ್ರಚೋದಕ ಬರಹಗಳು ನೀತಿಸಂಹಿತೆ ಜಾರಿಯಾಗುವವರೆಗೂ ರಾರಾಜಿಸಿದವು. ಕಾನೂನು ಉಲ್ಲಂಘನೆಯ ಇಂತಹ ಕ್ರಮಗಳನ್ನು ಸರ್ಕಾರ ನಿರ್ಲಕ್ಷಿಸಿತು. ಚುನಾವಣೆಯ ಹಿಂದಿನ ದಿನ ಬಹಿರಂಗ ಪ್ರಚಾರ ಮತ್ತು ಜಾಹೀರಾತುಗಳಿಗೆ ತಡೆಬಿದ್ದ ಮಾರನೆಯ ದಿನವೂ ಬಹುತೇಕ ಎಲ್ಲ ಕನ್ನಡ ಇಂಗ್ಲಿಷ್ ದಿನಪತ್ರಿಕೆಗಳ ಮೊದಲಿಡೀ ಪುಟದಲ್ಲಿ ಒಂದು ಪಕ್ಷದ ಜಾಹೀರಾತು ರಾರಾಜಿಸಿತು. ಇದು ಮುಖ್ಯ ವಿಷಯ ಅನ್ನಿಸದಷ್ಟು ರಾಜಾರೋಷವಾಗಿ ಕಾನೂನು ಉಲ್ಲಂಘನೆ ನಡೆಯಿತು. ಒಂದು ಪಕ್ಷದವರನ್ನು ಗುರಿಯಾಗಿಟ್ಟುಕೊಂಡು ಚುನಾವಣೆಯ ಹಿಂದಿನ ದಿನದವರೆಗೂ ಐಟಿ ದಾಳಿ ನಡೆಯಿತು. ಇನ್ನೊಂದು ಪ್ರಬಲ ಪ್ರತಿಸ್ಪರ್ಧಿ ಪಕ್ಷದವರು ಶುದ್ಧಹಸ್ತರು. ಅವರ ಬಳಿ ಭ್ರಷ್ಟ ಹಣದ ವಹಿವಾಟು ನಡೆಯಲೇ ಇಲ್ಲವೆಂದು ಬಿಂಬಿಸುವಷ್ಟು.

ಕೋಮು ವಿದ್ರೋಹಕ್ಕೆ ಬಳಕೆಗೊಂಡ ಪರೇಶ್ ಮೇಸ್ತನ ಸಾವು

‘ತೊಂಡೆಕಾಯಿ ಲಾಯಕ್ಕೀತು. ನಿಮ್ಮೂರಲ್ ಸಿಗಾಕಲಾ. ತಕಂಡ ಹೋಗ್ ಮಗಾ’ ಎಂಬ ಅಕ್ಕರಾತಿಯ ಸ್ವರದೊಂದಿಗೇ ನಮ್ಮೂರ ತುಳಸಜ್ಜಿ ಬಂದಳು. ಅವಳ ಹಾಲಕ್ಕಿ ಒಕ್ಕಲಗಿತ್ತಿಯ ನಿಲುವಿಗೆ ಕ್ಯಾಮರಾ ಹಿಡಿದು ಓಡಿಬಂದಳು ಮಗಳು. ‘ಫೋಟೊವಾ? ಇಕಾ’ ಅಂತ ಜಬರ್ದಸ್ಥ ಫೋಸು ಕೊಟ್ಟಳು. ತಲೆಮೇಲೆ ಸಿಂಬಿ ಇಟ್ಟುಕೊಂಡೇ ನಿಂತಳು. ನೀನೂ ಬಾ ಅಂತ ನನ್ನೂ ಎಳಕೊಂಡಳು. ‘ಸಿಂಬಿ ಇಟ್ಟಕಂಡ್ರೆ ತಲಿ ಹಣ್‍ಕೂದ್ಲು ಕಾಣುಕಲಾ. ನೋಡು ಹ್ಯಾಂಗ್ ಬಂದೀದು… ಎಂದು ಜೀವತುಂಬಿ ನಕ್ಕಳು. ವೋಟಿನ ಮಾತಾಡಿದರೆ ತುಳಸಜ್ಜಿ ಕೊಟ್ಟ ಸ್ಪಷ್ಟೀಕರಣವೇ ಬೇರೆ.“ಮನೀಗೆ ಒಬ್ನೇ ಯಜಮಾನ ಮನಸ್ಯಾ ಇರಾಕು ಹೌದಾ. ಅಂವ ಕೊಟ್ಟೀನಕಂಡಾ. ಇವ್ರು ಹಂಚತೀರಕಂಡಾ. ಕೊಟ್ಟವರಿಗೆ ಹಾಕಾಕೋ… ಹಂಚೋರಿಗೆ ಹಾಕಾಕೋ…” ಎಂದು ನನ್ನೇ ದಂಗುಬಡಿಸಿದಳು. ತುಳಸಜ್ಜಿಯ ಪ್ರಕಾರ ಮೋದಿ ಎಂಬ ದೇವರು ಎಲ್ಲವನ್ನೂ ಕರುಣಿಸುತ್ತಿದ್ದಾನೆ. ಆ ಕರುಣೆಯ ಪ್ರಸಾದವನ್ನು ಮುಖ್ಯಮಂತ್ರಿಯೋ ಮತ್ತ್ಯಾರೋ ಹಂಚುತ್ತಾರೆ. ಜನರು ಪ್ರಸಾದ ಕರುಣಿಸುವ ದೇವರನ್ನು ಆರಾಧಿಸಬೇಕೋ, ಪ್ರಸಾದ ಹಂಚುವ ಪೂಜಾರಿಯನ್ನೋ? ತುಳಸಜ್ಜಿಯಂಥವರ ತಲೆಯಲ್ಲಿ ಹೀಗೆ ಅಚ್ಚೊತ್ತಿಸಿದ ಅಭಿಪ್ರಾಯವನ್ನು ಯಾವ ಕೈಯಿಂದ ಅಳಿಸಲಿ? ತಿಳಿಯಲಿಲ್ಲ. ಪೇಪರು, ಟಿ.ವಿ. ಉಸಾಬರಿಗೆ ಹೋಗದ ಈ ದುಡಿವ ಹೆಣ್ಣಿನ ಮನಸ್ಸಿನಲ್ಲಿ ಸುಳ್ಳು ಅಭಿಪ್ರಾಯವನ್ನು ಸರಿ ಎಂಬ ಧಿಮಾಕಿನಲ್ಲಿ ವ್ಯವಸ್ಥಿತವಾಗಿ ಹರಡಿದ ನೆಟ್‍ವರ್ಕ್ ಬಗ್ಗೆ ಗಾಬರಿ ಬಿದ್ದಿದ್ದೆ.

ಇನ್ನುಳಿದ ನಮ್ಮೂರು… ನಿವೃತ್ತ ಮಾಸ್ತರ ಮಂದಿಯಿಂದ ತುಂಬಿದ ಹೈಜಾನಿಕ್-ಹೈಟೆಕ್ ವ್ಯವಸ್ಥೆಯಿರುವ ವೃದ್ಧಾಶ್ರಮದಂತಿದೆ. ಬೆಳಗಿನ ತಿಂಡಿಗೆ ಪೇಪರ್, ಮಧ್ಯಾಹ್ನದೂಟಕ್ಕೆ ಟಿ.ವಿ. ಸುದ್ದಿ ನೋಡುವ ಮಧ್ಯಮ ವರ್ಗದ ಗೌರವಾನ್ವಿತರ ಮನಸ್ಸಿನ ಚಿಂತನೆಗಳು ಈ ಎರಡು ಗಡಿಗಳಾಚೆ ಎಂದೂ ಇಣುಕುವುದಿಲ್ಲ. ಈ ಮಾಧ್ಯಮಗಳೇ ಬಹುತೇಕ ರಾಜಕೀಯ ಪಕ್ಷ-ಸಿದ್ಧಾಂತಗಳಿಗೆ ಮಾರಿಕೊಂಡಿವೆ ಎಂಬುದು ಅವರೊಳಗೆ ಇಳಿಯುವುದಿಲ್ಲ. ನಮ್ಮೂರ ಚಹದಂಗಡಿಯ ಕಿಣಿ ಈಗಲೂ ಸೈಕಲ್ಲಿನಲ್ಲೇ ಓಡಾಡುವುದು. ಹಿಂದಿನ ಮನೆಯ ಬಾಗಿಲಲ್ಲಿ ನಿಂತ ಅವನ ಜರ್ಬಿನ ಮಾತು ಕೇಳಿಸ್ತಿತ್ತು. “ಹೋ ಮಾಸ್ತರೆ… ನಾಳೆ ನಾನೂ ಹೊಂಟೆ ಪ್ರಮಾಣವಚನದ ಕಾರ್ಯಕ್ರಮಕ್ಕೆ. ಪೆಟ್ಟಿಗಿ-ಕೀಲಿ ಎರಡೂ ನಮ್ಮಕಡೆಗೇ ಬಂತಲ್ರೋ…” ಎನ್ನುತ್ತಿದ್ದ. ಅವನ ಅಂಗಡಿಯ ಉಂಡಿ-ಮೈಸೂರ ಪಾಕಗಳಿಗೆ ಮಾಪಿಳ್ಳೆ ಮಕ್ಕಳೇ ಮುಖ್ಯ ಗಿರಾಕಿಗಳು. ಆದರವನಿಗದು ಮುಖ್ಯ ಅನ್ನಿಸಿದಂತಿರಲಿಲ್ಲ. ಹಿಂದೂ ಎಂಬ ಪುಂಗಿ ಅವನ ಕಿವಿಯಾಲೆಗಳಲ್ಲಿ ಸದಾ ಮೊರೆಯುತ್ತಿತ್ತು. ಸುಳ್ಳು-ಭ್ರಮೆಗಳನ್ನು ವ್ಯವಸ್ಥಿತವಾಗಿ ಹರಡಿ ನಂಬಿಸಿದ್ದರಿಂದಾಗಿ ಅವು ಮತಗಳಾಗಿ ಬದಲಾಗಿದ್ದವು. ಉಳಿದ ಯಾವ ಜನಪರ ಯೋಜನೆಗಳಿಗೂ ಆ ನಿಬಿಡತೆಯಲ್ಲಿ ಜಾಗೆಯೇ ಇರಲಿಲ್ಲ.

ಗುಡಿ-ಮಸೀದಿಗಳು ಎದುರು ಬದುರು ಬಾಳ್ವೆ ಮಾಡಿಕೊಂಡು ಬಂದಿದ್ದ ನಮ್ಮೂರಿನಲ್ಲೀಗ ಈ ಎರಡೂ ಯದ್ವಾತದ್ವಾ ಬೆಳೀತಿವೆ. ಮೈಕ್ ಕಟ್ಟಿಕೊಂಡು ಅರಚುತ್ತಿವೆ. ಈ ಎರಡನ್ನೂ ಬಳಸಿಕೊಂಡ ಹೊಳೆ ಹರಿಯುತ್ತಿದೆ. ಎರಡರ ಮಧ್ಯೆ ಸರ್ಕಾರಿ ರಸ್ತೆ ಊರಿಂದೂರನ್ನು ಬೆಸೆಯುತ್ತಿದೆ. ಈ ಎಲ್ಲವೂ ಹೀಗೇ… ಇಷ್ಟಾದರೂ ಸಹನಶೀಲತೆಯಲ್ಲಿ ಉಳಿಯಬೇಕಾದರೆ ಜನರ ಮನಸ್ಸಿಗೆ ನಿಜವಾದ ವಿಚಾರಶಕ್ತಿಯನ್ನು ಕೊಡಬೇಕಿದೆ. ಸರಿ-ತಪ್ಪುಗಳನ್ನು, ನಿಜ-ಸುಳ್ಳುಗಳನ್ನು ಶೋಧಿಸಿ ನೋಡುವ ತ್ರಾಣವನ್ನು ನನ್ನ ಜನ ಪಡೆಯಬೇಕಿದೆ. ಆದರೆ ಹೇಗೆ? ಅವರನ್ನು ಯೋಚನೆಗೆ ಸನ್ನದ್ಧಗೊಳಿಸುವ, ದಾರಿಯನ್ನು ಹುಡುಕಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....