Homeರಾಜಕೀಯಮೇಲ್ಜಾತಿಗಳ `ಯಜಮಾನಿಕೆ’ ಮತ್ತು ಸಿದ್ರಾಮಯ್ಯನವರ ಸಣ್ಣಪುಟ್ಟ ಮಿಸ್ಟೇಕ್‍ಗಳು

ಮೇಲ್ಜಾತಿಗಳ `ಯಜಮಾನಿಕೆ’ ಮತ್ತು ಸಿದ್ರಾಮಯ್ಯನವರ ಸಣ್ಣಪುಟ್ಟ ಮಿಸ್ಟೇಕ್‍ಗಳು

- Advertisement -
- Advertisement -

ಕರ್ನಾಟಕದ ಮತದಾರ ಯಾರೂ ಗೆಲ್ಲದ ಮತ್ತು ಎಲ್ಲರೂ ಸೋತ ಸ್ಥಿತಿಯನ್ನು 2018ರ ವಿಧಾನಸಭಾ ಚುನಾವಣೆಯಲ್ಲಿ ರೂಪಿಸಿದ್ದಾನೆ. ಅದನ್ನು ಪ್ರಬುದ್ಧತೆ ಅನ್ನಬೇಕೋ? ಅಸಹಾಯಕತೆ ಅನ್ನಬೇಕೋ? ಮೂರ್ಖತನ ಅನ್ನಬೇಕೋ ಅರ್ಥವಾಗುತ್ತಿಲ್ಲ. ಎಲ್ಲವೂ ಸೇರಿದ ಕಲಸುಮೇಲೋಗರ. ಯಾವುದನ್ನು ಹೇಳಿದರೂ, ಅಂದುಕೊಂಡರೂ ಉಳಿದೆರಡು ಅದಕ್ಕೆ ಪೈಪೋಟಿ ನೀಡಲು ಮುಂದೆ ಬರುತ್ತವೆ. ಮೇಲ್ಜಾತಿಯ ಮನೋಧರ್ಮ ಮತ್ತು ಕೆಳಜಾತಿಯ ದೌರ್ಬಲ್ಯಗಳೆರಡೂ ಅನಾವರಣಗೊಂಡಿವೆ. ಕೆಳಜಾತಿಯ ನಾಯಕನೊಬ್ಬ ‘ಐದು ವರ್ಷ’ದ ಅವಧಿ ಪೂರೈಸಿದ್ದು ಸೋಕಾಲ್ಡ್ ಮೇಲ್ಜಾತಿಯ ಮನಸ್ಸುಗಳಿಗೆ ಇಷ್ಟವಾಗಲಿಲ್ಲ. ಅದು ಕೇವಲ ಇಷ್ಟಾನಿಷ್ಟದ ಪ್ರಶ್ನೆ ಮಾತ್ರ ಆಗಿ ಉಳಿಯಲಿಲ್ಲ. ‘ಸೋಲಿಸಲೇ ಬೇಕು’ ಎನ್ನುವ ಜಿದ್ದಾಜಿದ್ದಿನ ಕಣವಾಗಿ ಪರಿವರ್ತಿತವಾಯಿತು. ಚಾಮುಂಡೇಶ್ವರಿಯ ಫಲಿತಾಂಶ ಅದನ್ನು ಸ್ಪಷ್ಟವಾಗಿ ಬಿಚ್ಚಿಡುತ್ತದೆ.

ಮಗ ಯತೀಂದ್ರ ಜೊತೆ ಸಿದ್ದು

ಹಾಲಿ ಮುಖ್ಯಮಂತ್ರಿ ಹಾಗೂ ಅಷ್ಟೇನು ದುರಾಡಳಿತ ನೀಡದ, ಸಣ್ಣಪುಟ್ಟ ಲೋಪಗಳ ನಡುವೆಯೂ ‘ಬಹುಜನ ಹಿತಾಯ’ ಕೆಲಸ ಮಾಡಿದ ನಾಯಕನನ್ನು ದಯನೀಯವಾಗಿ ಸೋಲಿಸಿದ ಮತ್ತು ‘ಸೋಲಿಸಲೇಬೇಕು’ ಎಂದು ಒಗ್ಗಟ್ಟಾಗಿ ನಿಂತು, ಅದಕ್ಕೆ ಪರಿಶ್ರಮ ವಹಿಸಿ ಆಗು ಮಾಡಿದ ಕರ್ನಾಟಕದ ಉಭಯ ಸಮುದಾಯಗಳ ‘ಯಜಮಾನಿಕೆ’ಯ ಸ್ವರೂಪ ಗೋಚರವಾಗುತ್ತದೆ. ಆದರೆ, ಅದಕ್ಕಿಂತ ವಿಚಿತ್ರ ಎಂದರೆ ಸೋಕಾಲ್ಡ್ ಕೆಳಜಾತಿ ಮತ್ತು ಮಧ್ಯಮ ವರ್ಗದ ಜನ ಅಪಾಯ ಅರಿಯದೇ ಶೋಷಕರ ಜೊತೆಗೇ ಹೋಗುವ ‘ದೌರ್ಬಲ್ಯ’. ವರುಣಾ ವಿಧಾನಸಭಾ ಕ್ಷೇತ್ರವನ್ನ ಮಗನಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿಯತ್ತ ಮುಖ ಮಾಡುವ ‘ಸ್ವಾರ್ಥ’ ಸಿದ್ದರಾಮಯ್ಯನವರ ತಲೆಗೆ ಹೇಗೆ? ಯಾಕೆ ಹೊಕ್ಕಿತೋ ಗೊತ್ತಿಲ್ಲ. ಅದು ಅವರನ್ನು ಮತ್ತು ಅವರ ಪಕ್ಷವನ್ನು ಸೋಲಿನ ಬಾಗಿಲಿಗೆ ತಂದು ನಿಲ್ಲಿಸಿದೆ. ಸಿದ್ದರಾಮಯ್ಯ ಸ್ವಲ್ಪ ಉದಾರವಾಗಿ ವರ್ತಿಸಿದ್ದರೆ ಇಂತಹ ಸ್ಥಿತಿ ಉದ್ಭವ ಆಗುವ ಸಾಧ್ಯತೆಗಳು ಕಡಿಮೆ ಆಗಿರುತ್ತಿದ್ದವು. ಭಾವನಾತ್ಮಕ ಮೇಲುಗೈ ಸಾಧಿಸುವುದಕ್ಕೆ ಸ್ವತಃ ಸಿದ್ದರಾಮಯ್ಯ ಅವಕಾಶ ಮಾಡಿಕೊಟ್ಟರು. ಅದಕ್ಕೆ ಸ್ವತಃ ಅವರೂ ಸೇರಿದಂತೆ ಕಾಂಗ್ರೆಸ್ ಅದಕ್ಕಿಂತ ಹೆಚ್ಚಾಗಿ ರಾಜ್ಯದ ಜನ ತುಂಬಾ ದುಬಾರಿ ಬೆಲೆ ತೆರ ಬೇಕಾಗಿದೆ. ರಾಜಕೀಯವೂ ಒಂದು ಆಟ.

ಇಲ್ಲಿ ಎಲ್ಲವೂ ನನ್ನದೇ ಆಗಬೇಕೆಂದರೆ ಆಗುವುದಿಲ್ಲ. ಕೆಲವೊಮ್ಮೆ ಬಿಟ್ಟು ಕೊಡುವ ದೊಡ್ಡ ಮನಸ್ಸೂ ಮಾಡಬೇಕಾಗುತ್ತದೆ. ಎಂದೂ ಇಲ್ಲದ ರಾಜಕೀಯಕ್ಕೆ ಮಗನನ್ನು ತರುವ ಆಸೆ, ಪುತ್ರ ವ್ಯಾಮೋಹ ಯಾಕೆ ಬೇಕಿತ್ತು? ಕಾಂಗ್ರೆಸ್‍ನ ಕುಟುಂಬ ರಾಜಕಾರಣವನ್ನು ಟೀಕೆ ಮಾಡುವ ಸ್ಥಿತಿಯನ್ನು ಯಾವ ರಾಜಕೀಯ ಪಕ್ಷವೂ, ನಾಯಕರೂ ಇಂದು ಉಳಿಸಿಕೊಂಡಿಲ್ಲ. ಸ್ವತಃ ಸಮಾಜವಾದಿ ಎಂದು ಭಾವಿಸಿರುವ ಸಿದ್ದರಾಮಯ್ಯ ಸೈದ್ಧಾಂತಿಕವಾಗಿ ಕುಟುಂಬ ರಾಜಕಾರಣ ವಿರೋಧಿ ನೆಲೆಯವರು. ಕುಟುಂಬ ರಾಜಕಾರಣದ ಕಾರಣಕ್ಕಾಗಿಯೇ ಅಪಾರ ಪ್ರಮಾಣದ ನಷ್ಟ ಅನುಭವಿಸಿದವರು. ಕೈ ಸುಟ್ಟುಕೊಂಡವರು. ‘ಬೆಂಕಿ’ಯ ಅನುಭವ ಪಾಠ ಕಲಿಸದಿದ್ದರೆ- ಕಲಿಯದಿದ್ದರೆ ಹೇಗೆ?

ಸೋಲುವುದಕ್ಕಿಂತ ಸೋಲಿನ ಭೀತಿ ಹೆಚ್ಚು ಅಪಾಯಕಾರಿ. ಚಾಮುಂಡೇಶ್ವರಿಯ ಅಪಾಯದ ಮುನ್ಸೂಚನೆಗೆ ಇದ್ದ ಕಾರಣ ತುಂಬಾ ಸ್ಪಷ್ಟ. ಮೇಲ್ಜಾತಿ- ಮೇಲ್ವರ್ಗಗಳು ಸೋಲಿಸಲು ಕಟಿಬದ್ಧವಾಗಿವೆ ಎಂಬುದರ ವಾಸನೆ ಬಂದಿತ್ತು. ಅದು ರಾಜ್ಯದಾದ್ಯಂತ ಇದ್ದ- ಇರಬಹುದಾದ ಅತೃಪ್ತಿಯ ಮೇಲೆ ಎಂದು ಅರ್ಥಮಾಡಿಕೊಳ್ಳದೇ ಇದ್ದರೆ ಹೇಗೆ? ಯಡಿಯೂರಪ್ಪ- ದೇವೇಗೌಡರು ತೋರಿದ ಧಾಷ್ಟ್ರ್ಯವನ್ನು ಸಿದ್ದರಾಮಯ್ಯ ಕೂಡ ತೋರಿಸಿದ್ದು ‘ಹುಂಬತನ’ ಎನ್ನದೇ ವಿಧಿಯಿಲ್ಲ. ಉಭಯ ನಾಯಕರಿಗೆ ಇದ್ದ ಜಾತಿಯ ಬಲ ಹಾಗೂ ಅದೇ ಪ್ರಮಾಣದಲ್ಲಿ ಇದ್ದ- ಇರುವ ಇಮೇಜ್ ಬಗ್ಗೆ ‘ಕ್ಯಾರೇ’ ಅನ್ನದ ಮನೋಭಾವ ಸಿದ್ದರಾಮಯ್ಯಗೆ ಇಲ್ಲ. ಮತ್ತು ಅದು ಬರುವುದೂ ಇಲ್ಲ.

ಎದುರಾಳಿಗೆ ಕೈಕಟ್ಟಲು ಅವಕಾಶ ಮಾಡಿಕೊಟ್ಟದ್ದು ಸಿದ್ದರಾಮಯ್ಯನವರ ಲೋಪ. ರಾಜಕೀಯ ಆಟದಲ್ಲಿ ಸಂದೇಶ- ಸೂಚನೆಗಳೇ ಪ್ರಾಬಲ್ಯ ಮೆರೆಯುತ್ತವೆ. ಅದು ನಲವತ್ತು ವರ್ಷ ರಾಜಕಾರಣ ಮಾಡಿದವರಿಗೆ ಅರ್ಥ ಆಗಿಲ್ಲ ಎಂದರೆ ಹೇಗೆ ನಂಬುವುದು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯಾಬಲವೇ ಮುಖ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಬಹುಜನರು ‘ಒಗ್ಗಟ್ಟು’ ಆಗಲು ಸಾಂಸ್ಕೃತಿಕ-ಸಾಮಾಜಿಕ ಕಾರಣಗಳಿಲ್ಲ. ಆದರೆ, ಪ್ರಬಲರಿಗೆ ಸಂಖ್ಯಾಬಲದ ಕೊರತೆ ಇದ್ದರೂ ‘ಪ್ರಾಬಲ್ಯ’ ತೋರಿಸುವುದಕ್ಕೆ ಹಿಂದೆ ಬೀಳುವುದಿಲ್ಲ. ಬೇಟೆಯಾಡುವ ಹುಲಿ ತಾನು ದುರ್ಬಲನಾದರೂ ಹಾಗೆ ಭಾವಿಸುವುದಿಲ್ಲ. ಅದು ಭೀತಿ ಉಂಟು ಮಾಡುವ ಮೂಲಕವೇ ಮೇಲುಗೈ ಸಾಧಿಸಲು ಬಯಸುತ್ತದೆ. ಮೇಲ್ಜಾತಿ-ಮೇಲ್ವರ್ಗಗಳ ತಂತ್ರ ಕೂಡ. ಹುಲಿ ಕಳೆಗುಂದಿದೆ ಎಂದು ಗೊತ್ತಾದರೆ ಜಿಂಕೆಗಳು ಸವಾರಿ ಮಾಡುತ್ತವೆ ಎಂಬ ಮನೋಭಾವವೇ ಆಕ್ರಮಣಾತ್ಮಕ ಧೋರಣೆಗೆ ಕಾರಣವಾಗುತ್ತದೆ. ಹುಲಿಗಳು ಒಂದಾಗುವುದು ದಾಳಿ ಮಾಡುವುದಕ್ಕಾದರೆ, ಜಿಂಕೆಗಳು ಒಂದಾಗುವುದು ರಕ್ಷಣೆಗಾಗಿ. ಜಿಂಕೆಗಳು ಒಂದಾಗಿಯೂ ಹುಲಿಯ ಮೇಲೆ ‘ಸವಾರಿ’ ಮಾಡಲು ಆಗುವುದಿಲ್ಲ. ಹುಲಿ-ಜಿಂಕೆಯ ನೈಸರ್ಗಿಕ ಆಟ- ಜೀವನ್ಮರಣದ ಹೋರಾಟ ಸಿದ್ದರಾಮಯ್ಯನವರಿಗೆ ಗೊತ್ತಿರದ ಸಂಗತಿಯೇನಲ್ಲ. ಪ್ರಬಲ ಸಮುದಾಯಗಳ ಧ್ರುವೀಕರಣದ ‘ಭಯ’ವೂ ದುರ್ಬಲರನ್ನು ಒಗ್ಗಟ್ಟಾಗಿಸಲು ಅವಕಾಶ ಕಲ್ಪಿಸುತ್ತದೆ. ಅದು ಪೊಲರೈಸೇಷನ್‍ನ ವೇಗವನ್ನು ತೀವ್ರಗೊಳಿಸುತ್ತದೆ. ಒಕ್ಕಲಿಗರು ಜನತಾದಳದ ಜೊತೆಗೆ, ಲಿಂಗಾಯತರು ಬಿಜೆಪಿಯ ಜೊತೆಗೆ ಎಂಬ ಭಾವನಾತ್ಮಕ ಸಂಗತಿ ಎಲ್ಲರಿಗೂ ಗೊತ್ತಿದ್ದ ತೆರೆದಿಟ್ಟ ಸತ್ಯವಾಗಿತ್ತು. ಕರ್ನಾಟಕದ ರಾಜಕಾರಣದ ಬಗ್ಗೆ ಗೊತ್ತಿರುವವರಿಗೆ ಇದು ಹೊಸ ಸಂಗತಿಯೇನಲ್ಲ. ‘ಜಾತಿ ಜನಗಣತಿ’ಯ ಅಸ್ತ್ರ ಬಳಸಿದರೆ ಲಿಂಗಾಯತ-ಒಕ್ಕಲಿಗರೇತರರು ಒಂದಾಗುವ ಅವಕಾಶ ಸಾಧ್ಯವಾಗುತ್ತಿತ್ತು.

ಕರ್ನಾಟಕದಲ್ಲಿ ಲಿಂಗಾಯತರು ಇದ್ದಾರೆ ಎಂದು ಭಾವಿಸಿದ್ದೇ ಸರಿಯಾಗಿರಲಿಲ್ಲ. ಬಸವಪ್ರಣೀತ ಲಿಂಗಾಯತ ನಗಣ್ಯವೆನಿಸುವಷ್ಟು ಅಲ್ಪಸಂಖ್ಯಾತ. ಇರುವವರೆಲ್ಲ ಸೈದ್ಧಾಂತಿಕವಾಗಿ- ಭಾವನಾತ್ಮಕವಾಗಿ ವೀರಶೈವರು. ಬಸವಣ್ಣ ಅವರಿಗೆ ಒಂದ ಸಾಂಸ್ಕೃತಿಕ ‘ಐಕಾನ್’. ಅದೂ 50-60ರ ದಶಕದಲ್ಲಿ ಐಡೆಂಟಿಟಿ ಕ್ರೈಸಿಸ್‍ನಿಂದ ಹೊರಬರುವುದಕ್ಕಾಗಿ ಹುಟ್ಟಿದ ಸಂಕೇತ. ಹನ್ನೆರಡನೇ ಶತಮಾನದ ಬಸವಣ್ಣನನ್ನು 2008ರ ವೇಳೆಗಾಗಲೇ ಕೈಬಿಟ್ಟು ‘ದೂರ’ ನಡೆದುಬಿಟ್ಟಿದ್ದರು. ದೀನ-ದುರ್ಬಲರ ಪರವಾಗಿ ಮಾತನಾಡುವ ಬಸವ ‘ಪ್ರಾಬಲ್ಯ’ ಮೆರೆಯುವುದಕ್ಕೆ ಅಗತ್ಯ ಎಂದು ಅನ್ನಿಸಿರಲಿಲ್ಲ. ಅದೇ ಕಾರಣಕ್ಕಾಗಿಯೇ ಬಸವಣ್ಣ ಮೇಲಿನ ಪ್ರೀತಿಗಿಂತ ‘ಜಾತಿ’ಯ ಪ್ರೇಮ ಹೆಚ್ಚಾಗಿ ಅದು ಬಿಜೆಪಿ ಪರವಾದ ನಿಲುವು ಆಗಿ ಪರಿವರ್ತನೆಗೊಂಡಿತ್ತು.

ಮೇಲ್ಜಾತಿಯವರಿಗೆ ಮಾತ್ರ. ಸ್ವಜನ ಪಕ್ಷಪಾತ ಮಾಡುವ- ಸ್ವಾರ್ಥಕ್ಕಾಗಿ ಏನನ್ನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳುವ ‘ಅಧಿಕಾರ’ ಮತ್ತು ‘ಹಕ್ಕು’ ಆಯಾಚಿತವಾಗಿ ದೊರೆತಿದೆ. ಅದನ್ನೇ ಸಿದ್ದರಾಮಯ್ಯ ಕೂಡ ಮಾಡಿದರೆ ಪಾಪಾ ಮೇಲ್ಜಾತಿಗಳು ಹೇಗೆ ತಾನೆ ಸಹಿಸಿಕೊಂಡಾವು? ಮೇಲ್ಜಾತಿಯ ಜನ ಜಾತಿಯ ಜನ ಒಂದೆಡೆ ಸೇರಿದರೆ ‘ಸಾಂಸ್ಕೃತಿಕ’ ಕಾರಣಕ್ಕಾಗಿ ಎಂದು ವ್ಯಾಖ್ಯಾನಿಸಲಾಗುತ್ತದೆ. ಅದೇ ‘ಕೆಳಜಾತಿ’ (ಪ್ರಬಲರಲ್ಲದ ಸಮುದಾಯ)ಯ ಜನ ಸೇರಿದರೆ ಅದು ‘ಜಾತೀಯತೆ’ ಆಗುತ್ತದೆ. ಶಬ್ದಗಳು ರೂಲ್ ಮಾಡುತ್ತವೆ. ಹೌದು. ಅಲ್ಲಮ ಹೇಳಿದಂತೆ ಭಾಷೆಯೆಂಬುದು ‘ಪ್ರಾಣ ಘಾತಕ’. ಭಾವನೆಗಳಿಗಿಂತ ಭಾಷೆಗೇ ಹೆಚ್ಚು ಮಹತ್ವ.

ಸಿದ್ಧರಾಮಯ್ಯ ಎಡವಿದರು. ಕರ್ನಾಟಕದ ಬಹುಜನರು ‘ಆತಂಕ’ಕ್ಕೆ ಒಳಗಾಗಿದ್ದಾರೆ. ಇರುವಾಗ ‘ವಸ್ತು’ವಿನ ಮಹತ್ವ ಗೊತ್ತಾಗುವುದಿಲ್ಲ. ಅರಸು ಜೊತೆ ಹೋಲಿಕೆ ಮಾಡಬಾರದು ಎಂದು ಎಷ್ಟೇ ಹಠ ಹಿಡಿದರೂ ಮಾಡದೇ ಇರಲು ಸಾಧ್ಯವಾಗುತ್ತಿಲ್ಲ. ಹಿಂದೆ ಅರಸು ಇದ್ದಾಗಲೂ ಹೀಗೆಯೇ ಆಗಿತ್ತು. ಈಗ ಸಿದ್ದರಾಮಯ್ಯ ಅವರಿಗೆ ಕೂಡ ಅದೇ ಆಗಿದೆ. ನಮಗೆ ಅದು ಇತಿಹಾಸ-ಚರಿತ್ರೆಯ ಪುಟ. ಆದರೆ, ಸ್ವತಃ ಅರಸು ರಾಜಕಾರಣ ಮತ್ತು ಅದಕ್ಕಾಗಿ ದೊರೆತ ಪ್ರತಿಫಲ ಸಿದ್ಧರಾಮಯ್ಯನವರಿಗೆ ವರ್ತಮಾನದ ಅನುಭವ ಆಗಿತ್ತು. ಸಿದ್ದರಾಮಯ್ಯನವರ ವಿರುದ್ಧದ ಅಲೆ ಸುಪ್ತವಾಗಿ, ಜೀವಂತವಾಗಿ ಉಳಿಯುವಂತೆ ಮಾಡುವಲ್ಲಿ ಪ್ರಬಲ ಸಮುದಾಯಗಳು ಯಶ ಕಂಡಿವೆ ಎಂಬುದೇ ಸದ್ಯದ ಸತ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....