ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಮೂರನೇ ಬಾರಿಗೆ ಅಭಿಷೇಕ್ ಬ್ಯಾನರ್ಜಿ ಅವರನ್ನು ಕಣಕ್ಕಿಳಿಸಿದ್ದು, ತಮ್ಮ ಅಭ್ಯರ್ಥಿಯ ಹೆಸರು ಘೋಷಣೆಗೆ ಕೇಸರಿ ಪಾಳಯ ಹಿಂದೇಟು ಹಾಕುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್ ಬಿಜೆಪಿಗೆ ಸವಾಲು ಎಸೆದಿದ್ದು, ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರನ್ನು ಡೈಮಂಡ್ ಹಾರ್ಬರ್ ಕ್ಷೇತ್ರದಿಂದ ಕಣಕ್ಕಿಳಿಸಿ ಎಂದಿದ್ದಾರೆ.
“ನಾನು ಸುವೆಂದು ಅಧಿಕಾರಿಯ ಮುಂದೆ ಒಂದು ಸವಾಲನ್ನು ಇಡುತ್ತಿದ್ದೇನೆ. ‘ಖುಲಿ ಚೇತವ್ನಿ’ (ಮುಕ್ತ ಸವಾಲು) ನೀವು ನನ್ನ ಸವಾಲನ್ನು ಸ್ವೀಕರಿಸಲು ಸಾಧ್ಯವಾದರೆ, ಬಂದು ಅಭಿಷೇಕ್ ವಿರುದ್ಧ ಹೋರಾಡಿ” ಎಂದು ಕುನಾಲ್ ಘೋಷ್ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ವಕ್ತಾರರಾದ ಕುನಾಲ್, ಬಿಜೆಪಿಗೆ ಬಂಗಾಳದಲ್ಲಿ ಕಣಕ್ಕಿಳಿಸಲು ಸಾಕಷ್ಟು ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದು ಹೇಳಿದರು.
“ಡೈಮಂಡ್ ಹಾರ್ಬರ್ ಮತ್ತು ಇತರ ಮೂರು ಸ್ಥಾನಗಳಿಂದ ಅವರು ಇನ್ನೂ ಯಾವುದೇ ಹೆಸರನ್ನು ಘೋಷಣೆ ಮಾಡಿಲ್ಲ. ಅವರು ಇಲ್ಲಿಂದ ಸ್ಪರ್ಧಿಸುವಂತೆ ಹಲವು ಜನರನ್ನು ಕೇಳುತ್ತಿದ್ದಾರೆ” ಎಂದು ಕುನಾಲ್ ಘೋಷ್ ಹೇಳಿದ್ದಾರೆ.
ಬಿಜೆಪಿ 111 ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಇದು ಬಂಗಾಳದಿಂದ 19 ಹೆಸರುಗಳನ್ನು ಒಳಗೊಂಡಿತ್ತು, ಪೂರ್ವ ರಾಜ್ಯದಿಂದ ಅದರ ನಾಮನಿರ್ದೇಶಿತರ ಸಂಖ್ಯೆ 38 ಕ್ಕೆ ಸೇರಿದೆ. ಆದಾಗ್ಯೂ, ಅಭಿಷೇಕ್ ಬ್ಯಾನರ್ಜಿಯ ಭದ್ರಕೋಟೆ ಎಂದು ಪರಿಗಣಿಸಲಾದ ಡೈಮಂಡ್ ಹಾರ್ಬರ್ನಲ್ಲಿ ಪಕ್ಷವು ಇನ್ನೂ ಅಭ್ಯರ್ಥಿಯನ್ನು ಹೆಸರಿಸಿಲ್ಲ.
ತೃಣಮೂಲ ಕಾಂಗ್ರೆಸ್ ವರಿಷ್ಠೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ 36 ವರ್ಷದ ಅವರು 2014 ರಿಂದ ಲೋಕಸಭೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ, ಅಭಿಷೇಕ್ ಬ್ಯಾನರ್ಜಿ ಬಿಜೆಪಿಯ ನಿಲಂಜನ್ ರಾಯ್ ಅವರನ್ನು ಮೂರು ಲಕ್ಷಕ್ಕೂ ಅಧಿಕ ಭಾರಿ ಮತಗಳ ಅಂತರದಿಂದ ಸೋಲಿಸಿದರು.
ಬಿಜೆಪಿಯ ಇತ್ತೀಚಿನ ಅಭ್ಯರ್ಥಿಗಳ ಪಟ್ಟಿಯು ಬಂಗಾಳದಿಂದ ಹಲವಾರು ಆಶ್ಚರ್ಯಕರ ಹೆಸರುಗಳನ್ನು ಹೊಂದಿದೆ. ಇದರಲ್ಲಿ ರೇಖಾ ಪಾತ್ರಾ ಅವರ ಹೆಸರಿದ್ದು, ಆಕೆ ಸಂದೇಶಖಾಲಿಯಿಂದ ತೊಂದರೆಗೀಡಾದ ಗೃಹಿಣಿ ಎಂದು ಬಿಜೆಪಿ ಬಿಂಬಿಸುತ್ತಿದೆ. ಅವರನ್ನು ಬಸಿರ್ಹತ್ ಸ್ಥಾನದಿಂದ ಕಣಕ್ಕಿಳಿದಿದ್ದಾರೆ.
ಇದನ್ನೂ ಓದಿ; ಚುನಾವಣಾ ಬಾಂಡ್: ‘ಕಚೇರಿ ಹೊರಗೆ ಡ್ರಾಪ್ ಬಾಕ್ಸ್ ಇಟ್ಟಿದ್ದೇವೆ, ಹಣ ಕೊಟ್ಟವರು ಯಾರೆಂಬುದು ಗೊತ್ತಿಲ್ಲ’ ಎಂದ ಟಿಎಂಸಿ