Homeಅಂಕಣಗಳುನೀರನಡೆ | ಹುಡುಕಬೇಕಾದ ಹೊಸ ಹಾದಿ

ನೀರನಡೆ | ಹುಡುಕಬೇಕಾದ ಹೊಸ ಹಾದಿ

- Advertisement -
- Advertisement -

ಡಾ. ವಿನಯಾ ಒಕ್ಕುಂದ |

ಚುನಾವಣೆಯ ಫಲಿತಾಂಶ ಪ್ರಕಟವಾಯಿತು. ಚರಿತ್ರೆಯ ಅತ್ಯಂತ ನಿರ್ಣಾಯಕ ಕಾಲಘಟ್ಟದಲ್ಲಿ ಕರ್ನಾಟಕದ ಪ್ರಜ್ಞಾವಂತ ಸಮುದಾಯ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿತೇ? ಎಂಬ ಪ್ರಶ್ನೆ ಉಳಿಯಿತು. ಕನ್ನಡದ ಸಂಸ್ಕೃತಿ ಚಿಂತಕರಾಗಿದ್ದ ಡಿ.ಆರ್.ನಾಗರಾಜ ಹೇಳುತ್ತಾರೆ. “ಜನರಿಗೆ ಮಹಾ ಪ್ರಾಯೋಗಿಕವಾದ ನೈತಿಕ ಕ್ರಿಯಾಶೀಲತೆ ಅಂತಿಮವಾಗಿ ಇದ್ದೇ ಇರುತ್ತದೆ. ಆದರೆ ಜನರು ಅನೈತಿಕ ಭ್ರಷ್ಟತೆಗಳ ರಂಜಕ ಬೆಂಬಲಿಗರೂ ಆಗಬಲ್ಲರು. ಅಂಥ ಸ್ಥಿತಿಯಲ್ಲಿ ಜನರಿಗೆ ಕೊಲೆ ದರೋಡೆ ಪಾತಕತನಗಳೆಲ್ಲವೂ ಮನರಂಜನೆಗಳ ಹಾಗೆ ಕಾಣತೊಡಗುತ್ತದೆ.” ಈ ಮಾತು ಗಾಢವಾಗಿ ಕಲಕುತ್ತಿತ್ತು.

ಡಿ.ಆರ್.ನಾಗರಾಜ್

ಕಳೆದ ಐದು ವರ್ಷಗಳ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆತಂದ ಜನಪ್ರಿಯವಾದರೂ ಜನಪರವಾದ ಯೋಜನೆಗಳು ನೆನಪಾದವು. ಅಧಿಕಾರ ವಹಿಸಿಕೊಂಡ ತಕ್ಷಣ ಘೋಷಿಸಿದ ಅನ್ನಭಾಗ್ಯಯೋಜನೆ, ಹಸಿವು-ಮುಕ್ತ ಕರ್ನಾಟಕದÀ ಕನಸು… ಯಾರು ಎಷ್ಟೇ ವ್ಯಂಗ್ಯ ಮಾಡಿದರೂ, ಅಂತಹ ಯೋಜನೆಗಳಿಗೆ ಹಿಂದೇಟು ಹಾಕದಿರುವ ದೃಢನಿರ್ಧಾರವನ್ನು ಸರ್ಕಾರ ಮಾಡಿತ್ತು. ಯೋಜನೆಗಳ ಫಲಾನುಭವಿ ಸಮುದಾಯ ಖಂಡಿತ ತಮ್ಮ ಕೈ ಹಿಡಿಯುತ್ತದೆ ಎಂಬ ಒಂದಿಷ್ಟು ಅಹಂಕಾರ ಮತ್ತು ಆತ್ಮವಿಶ್ವಾಸಗಳಲ್ಲಿ ಸಿದ್ದರಾಮಯ್ಯ ಇದ್ದರು. ಫಲಿತಾಂಶ ನೋಡುವಾಗ, ಜನರ ಮೇಲಿಟ್ಟ ಈ ನಂಬಿಕೆ ಸುಳ್ಳಾಗಿರುವುದು ಕಾಣುತ್ತಿದೆ.

ಚುನಾವಣೆಯ ರಿಸಲ್ಟ್ ದಿನ ನಾನು ನಮ್ಮೂರಿನಲ್ಲಿದ್ದೆ. ಕಡಲತಡಿಯ ನಮ್ಮೂರಿನದು ಬೆಸೆದ ಬದುಕು. ಊರುಬಿಟ್ಟು ದೂರ ಇರುವ ವರ್ಷಕ್ಕೊಂದಾವರ್ತಿ ಕಾಣಿಸಿಕೊಳ್ಳುವ ಮಕ್ಕಳು ಯಾರ ಮನೆಗೇ ಬಂದರೂ ಊರು ಗಲಗಲ ಅನ್ನುತ್ತದೆ. ಅಂಬಿಗರ ಕೇರಿಯಿಂದ ಫಳಫಳ ಹೊಳೆವ ಮೀನಬುಟ್ಟಿ, ಹಾಲಕ್ಕಿ ಒಕ್ಕಲಿಗರ ಕೇರಿಯಿಂದ ದಣೇ ಆಗ ಕಿತ್ತು ನೀರಹೊಂಡದಲ್ಲದ್ದಿ ಬಂದ ತರಕಾರಿ ಬುಟ್ಟಿ. ಆ ಮನೆ ಅಂಗಳಕ್ಕಿಳಿದು ಬಿಡುತ್ತವೆ. ನಾವಿದ್ದ ಜಾಗೆ ಬಿಡುವಾಗ ಇವರ್ಯಾರು ನೆನಪಾಗದೆ ಇವರಿಗಾಗಿ ಏನೂ ಒಯ್ಯದೆ ಹೋಗಿಬಿಟ್ಟವರು ಕಂಗಾಲಾಗುತ್ತೇವೆ. ನಮ್ಮ ಮನಸ್ಸಿನ ಭಣಭಣಕ್ಕೆ ನಾವೇ ಗಾಬರಿ ಬೀಳುವಂತೆ. ಮೊನ್ನೆಯೂ ಹಾಗಾಯಿತು. ಬೆಳಗ್ಗಿನ 10 ಗಂಟೆಯ ಹೊತ್ತಿಗೆ, ‘ಹೋಯ್‍ತಂಗಿ, ಯಾವಾಗ ಬಂದೆ’-ಅನ್ನುತ್ತ ತಳತಳ ಹೊಳೆವ ಮೀನು ಬುಟ್ಟಿ ಹಿಡ್ದು, ‘ಒಳಗ್ ತಕಂಡ ಹೋಗು ಹಿಡಿ’ ಅನ್ನುತ್ತ; ಎಷ್ಟು ಏನು ಎಂಬ ಯಾವ ರೇಟಿನ ಉಸಾಬರಿಗೂ ಹೋಗದ ಹಾಗೆ ಹೊರಡಲು ಅನುವಾದಳು ಅಂಬೇರ ಶಾಂತಿ. ಟಿ.ವಿ.ಯಲ್ಲಿ ‘ಸಿದ್ರಾಮಯ್ಯ ಹಿನ್ನಡೆ’ ಅಂತ ಬರುತ್ತಿತ್ತು. ‘ಶಾಂತಿ, ನೀವೆಲ್ಲ ಸಿದ್ರಾಮಯ್ಯನ ಪಕ್ಷಕ್ಕೆ ವೋಟು ಹಾಕಿದ್ರಾ ಇಲ್ವಾ? ಅಂತ ಕೇಳಿದ್ದೆ ಲೋಕಾಭಿರಾಮವಾಗಿ. ‘ಇಲ್ರಾ„’ ಅಂದಳು. ಸಹಜ ಕೇಳಿದವಳು ಗಾಬರಿಯಾದೆ. ಸಾಂಪ್ರದಾಯಿಕವಾಗಿ ಇವರೆಲ್ಲ ಆ ಪಕ್ಷದ ಮತದಾರರು ಮತ್ತು ಹತ್ತೆಂಟು ಯೋಜನೆಗಳ ಫಲಾನುಭವಿಗಳು. ಯಾಕೇ? ಎಂದೆ. ‘ನಮ್ಮ ಜಾತಿ ಪೋರನ ಹೊಡ್ದು ಕೊಂದಿರಕಡಾ-ಆದ್ರೂ ಆ ಸಿದ್ರಾಮಯ್ಯ ಒಂದ್ ಮಾತೂ ಹೇಳ್ನೆಲಾ ಕಡಾ. ಗುತ್ತಿತ್ರಾ?’ ಎಂದು ತಿರುಗಿ ಪ್ರಶ್ನಿಸಿದಳು. ಅವಳು ಪರೇಶ ಮೆಸ್ತಾನ ಸಾವಿನ ಸುದ್ದಿ ಪ್ರಸ್ತಾಪಿಸಿದ್ದಳು. ಅದು ಹಾಗಲ್ಲ ಮಾರಾಯ್ತಿ… ಎಂದು ಅವಳ ಮನಸ್ಸಿನಲ್ಲಿ ಬರೆದ ಬರಹ ಅಳಿಸಿ, ಮತ್ತೆ ಬೇರೆ ಬರೆಯಲು ಅವಳ ಬುಟ್ಟಿಯ ಮೀನು ಪುರಸೊತ್ತು ಕೊಡಲಿಲ್ಲ. “ಹಾಳಾಗ್ಲಿ ತಂಗಿ ಆ ಉಸಾಬರಿ… ನೀ ಹ್ಯಾಂಗಿವೆ? ಬರೂದೇ ಅಪರೂಪಾಯ್ತಲೆ” ಅನ್ನುತ್ತ ನಡೆದಳು.

ಬಹುಪಾಲು ದುಡಿವ ವರ್ಗದ ಸಾಮಾನ್ಯ ಜನರೇ ತುಂಬಿರುವ ಸಮಾಜದಲ್ಲಿ, ಜನರ ಮನಸ್ಸಿನಲ್ಲಿ ವಿಷಾನಿಲ ತುಂಬಿದರೆ… ಏನು ಆಗಬಹುದೋ ಅದು ಆಗುತ್ತಿದೆ. ಪರೇಶ ಮೆಸ್ತಾ ಎಂಬ ಎಳೆಯ ಹುಡುಗನ ಅನ್ಯಾಯದ ಸಾವಾಗಿದೆ. ನಿಜಕ್ಕೂ ಅದು ಹತ್ಯೆಯಾಗಿದ್ದರೆ, ಹತ್ಯೆ ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಪ್ರಕರಣ ಸಿಬಿಐನಲ್ಲಿದೆ. ಆದ್ರೆ ಊರೂರುಗಳಲ್ಲಿ ಆ ಹುಡುಗನ ಕಟೌಟುಗಳು, ಪ್ರಚೋದಕ ಬರಹಗಳು ನೀತಿಸಂಹಿತೆ ಜಾರಿಯಾಗುವವರೆಗೂ ರಾರಾಜಿಸಿದವು. ಕಾನೂನು ಉಲ್ಲಂಘನೆಯ ಇಂತಹ ಕ್ರಮಗಳನ್ನು ಸರ್ಕಾರ ನಿರ್ಲಕ್ಷಿಸಿತು. ಚುನಾವಣೆಯ ಹಿಂದಿನ ದಿನ ಬಹಿರಂಗ ಪ್ರಚಾರ ಮತ್ತು ಜಾಹೀರಾತುಗಳಿಗೆ ತಡೆಬಿದ್ದ ಮಾರನೆಯ ದಿನವೂ ಬಹುತೇಕ ಎಲ್ಲ ಕನ್ನಡ ಇಂಗ್ಲಿಷ್ ದಿನಪತ್ರಿಕೆಗಳ ಮೊದಲಿಡೀ ಪುಟದಲ್ಲಿ ಒಂದು ಪಕ್ಷದ ಜಾಹೀರಾತು ರಾರಾಜಿಸಿತು. ಇದು ಮುಖ್ಯ ವಿಷಯ ಅನ್ನಿಸದಷ್ಟು ರಾಜಾರೋಷವಾಗಿ ಕಾನೂನು ಉಲ್ಲಂಘನೆ ನಡೆಯಿತು. ಒಂದು ಪಕ್ಷದವರನ್ನು ಗುರಿಯಾಗಿಟ್ಟುಕೊಂಡು ಚುನಾವಣೆಯ ಹಿಂದಿನ ದಿನದವರೆಗೂ ಐಟಿ ದಾಳಿ ನಡೆಯಿತು. ಇನ್ನೊಂದು ಪ್ರಬಲ ಪ್ರತಿಸ್ಪರ್ಧಿ ಪಕ್ಷದವರು ಶುದ್ಧಹಸ್ತರು. ಅವರ ಬಳಿ ಭ್ರಷ್ಟ ಹಣದ ವಹಿವಾಟು ನಡೆಯಲೇ ಇಲ್ಲವೆಂದು ಬಿಂಬಿಸುವಷ್ಟು.

ಕೋಮು ವಿದ್ರೋಹಕ್ಕೆ ಬಳಕೆಗೊಂಡ ಪರೇಶ್ ಮೇಸ್ತನ ಸಾವು

‘ತೊಂಡೆಕಾಯಿ ಲಾಯಕ್ಕೀತು. ನಿಮ್ಮೂರಲ್ ಸಿಗಾಕಲಾ. ತಕಂಡ ಹೋಗ್ ಮಗಾ’ ಎಂಬ ಅಕ್ಕರಾತಿಯ ಸ್ವರದೊಂದಿಗೇ ನಮ್ಮೂರ ತುಳಸಜ್ಜಿ ಬಂದಳು. ಅವಳ ಹಾಲಕ್ಕಿ ಒಕ್ಕಲಗಿತ್ತಿಯ ನಿಲುವಿಗೆ ಕ್ಯಾಮರಾ ಹಿಡಿದು ಓಡಿಬಂದಳು ಮಗಳು. ‘ಫೋಟೊವಾ? ಇಕಾ’ ಅಂತ ಜಬರ್ದಸ್ಥ ಫೋಸು ಕೊಟ್ಟಳು. ತಲೆಮೇಲೆ ಸಿಂಬಿ ಇಟ್ಟುಕೊಂಡೇ ನಿಂತಳು. ನೀನೂ ಬಾ ಅಂತ ನನ್ನೂ ಎಳಕೊಂಡಳು. ‘ಸಿಂಬಿ ಇಟ್ಟಕಂಡ್ರೆ ತಲಿ ಹಣ್‍ಕೂದ್ಲು ಕಾಣುಕಲಾ. ನೋಡು ಹ್ಯಾಂಗ್ ಬಂದೀದು… ಎಂದು ಜೀವತುಂಬಿ ನಕ್ಕಳು. ವೋಟಿನ ಮಾತಾಡಿದರೆ ತುಳಸಜ್ಜಿ ಕೊಟ್ಟ ಸ್ಪಷ್ಟೀಕರಣವೇ ಬೇರೆ.“ಮನೀಗೆ ಒಬ್ನೇ ಯಜಮಾನ ಮನಸ್ಯಾ ಇರಾಕು ಹೌದಾ. ಅಂವ ಕೊಟ್ಟೀನಕಂಡಾ. ಇವ್ರು ಹಂಚತೀರಕಂಡಾ. ಕೊಟ್ಟವರಿಗೆ ಹಾಕಾಕೋ… ಹಂಚೋರಿಗೆ ಹಾಕಾಕೋ…” ಎಂದು ನನ್ನೇ ದಂಗುಬಡಿಸಿದಳು. ತುಳಸಜ್ಜಿಯ ಪ್ರಕಾರ ಮೋದಿ ಎಂಬ ದೇವರು ಎಲ್ಲವನ್ನೂ ಕರುಣಿಸುತ್ತಿದ್ದಾನೆ. ಆ ಕರುಣೆಯ ಪ್ರಸಾದವನ್ನು ಮುಖ್ಯಮಂತ್ರಿಯೋ ಮತ್ತ್ಯಾರೋ ಹಂಚುತ್ತಾರೆ. ಜನರು ಪ್ರಸಾದ ಕರುಣಿಸುವ ದೇವರನ್ನು ಆರಾಧಿಸಬೇಕೋ, ಪ್ರಸಾದ ಹಂಚುವ ಪೂಜಾರಿಯನ್ನೋ? ತುಳಸಜ್ಜಿಯಂಥವರ ತಲೆಯಲ್ಲಿ ಹೀಗೆ ಅಚ್ಚೊತ್ತಿಸಿದ ಅಭಿಪ್ರಾಯವನ್ನು ಯಾವ ಕೈಯಿಂದ ಅಳಿಸಲಿ? ತಿಳಿಯಲಿಲ್ಲ. ಪೇಪರು, ಟಿ.ವಿ. ಉಸಾಬರಿಗೆ ಹೋಗದ ಈ ದುಡಿವ ಹೆಣ್ಣಿನ ಮನಸ್ಸಿನಲ್ಲಿ ಸುಳ್ಳು ಅಭಿಪ್ರಾಯವನ್ನು ಸರಿ ಎಂಬ ಧಿಮಾಕಿನಲ್ಲಿ ವ್ಯವಸ್ಥಿತವಾಗಿ ಹರಡಿದ ನೆಟ್‍ವರ್ಕ್ ಬಗ್ಗೆ ಗಾಬರಿ ಬಿದ್ದಿದ್ದೆ.

ಇನ್ನುಳಿದ ನಮ್ಮೂರು… ನಿವೃತ್ತ ಮಾಸ್ತರ ಮಂದಿಯಿಂದ ತುಂಬಿದ ಹೈಜಾನಿಕ್-ಹೈಟೆಕ್ ವ್ಯವಸ್ಥೆಯಿರುವ ವೃದ್ಧಾಶ್ರಮದಂತಿದೆ. ಬೆಳಗಿನ ತಿಂಡಿಗೆ ಪೇಪರ್, ಮಧ್ಯಾಹ್ನದೂಟಕ್ಕೆ ಟಿ.ವಿ. ಸುದ್ದಿ ನೋಡುವ ಮಧ್ಯಮ ವರ್ಗದ ಗೌರವಾನ್ವಿತರ ಮನಸ್ಸಿನ ಚಿಂತನೆಗಳು ಈ ಎರಡು ಗಡಿಗಳಾಚೆ ಎಂದೂ ಇಣುಕುವುದಿಲ್ಲ. ಈ ಮಾಧ್ಯಮಗಳೇ ಬಹುತೇಕ ರಾಜಕೀಯ ಪಕ್ಷ-ಸಿದ್ಧಾಂತಗಳಿಗೆ ಮಾರಿಕೊಂಡಿವೆ ಎಂಬುದು ಅವರೊಳಗೆ ಇಳಿಯುವುದಿಲ್ಲ. ನಮ್ಮೂರ ಚಹದಂಗಡಿಯ ಕಿಣಿ ಈಗಲೂ ಸೈಕಲ್ಲಿನಲ್ಲೇ ಓಡಾಡುವುದು. ಹಿಂದಿನ ಮನೆಯ ಬಾಗಿಲಲ್ಲಿ ನಿಂತ ಅವನ ಜರ್ಬಿನ ಮಾತು ಕೇಳಿಸ್ತಿತ್ತು. “ಹೋ ಮಾಸ್ತರೆ… ನಾಳೆ ನಾನೂ ಹೊಂಟೆ ಪ್ರಮಾಣವಚನದ ಕಾರ್ಯಕ್ರಮಕ್ಕೆ. ಪೆಟ್ಟಿಗಿ-ಕೀಲಿ ಎರಡೂ ನಮ್ಮಕಡೆಗೇ ಬಂತಲ್ರೋ…” ಎನ್ನುತ್ತಿದ್ದ. ಅವನ ಅಂಗಡಿಯ ಉಂಡಿ-ಮೈಸೂರ ಪಾಕಗಳಿಗೆ ಮಾಪಿಳ್ಳೆ ಮಕ್ಕಳೇ ಮುಖ್ಯ ಗಿರಾಕಿಗಳು. ಆದರವನಿಗದು ಮುಖ್ಯ ಅನ್ನಿಸಿದಂತಿರಲಿಲ್ಲ. ಹಿಂದೂ ಎಂಬ ಪುಂಗಿ ಅವನ ಕಿವಿಯಾಲೆಗಳಲ್ಲಿ ಸದಾ ಮೊರೆಯುತ್ತಿತ್ತು. ಸುಳ್ಳು-ಭ್ರಮೆಗಳನ್ನು ವ್ಯವಸ್ಥಿತವಾಗಿ ಹರಡಿ ನಂಬಿಸಿದ್ದರಿಂದಾಗಿ ಅವು ಮತಗಳಾಗಿ ಬದಲಾಗಿದ್ದವು. ಉಳಿದ ಯಾವ ಜನಪರ ಯೋಜನೆಗಳಿಗೂ ಆ ನಿಬಿಡತೆಯಲ್ಲಿ ಜಾಗೆಯೇ ಇರಲಿಲ್ಲ.

ಗುಡಿ-ಮಸೀದಿಗಳು ಎದುರು ಬದುರು ಬಾಳ್ವೆ ಮಾಡಿಕೊಂಡು ಬಂದಿದ್ದ ನಮ್ಮೂರಿನಲ್ಲೀಗ ಈ ಎರಡೂ ಯದ್ವಾತದ್ವಾ ಬೆಳೀತಿವೆ. ಮೈಕ್ ಕಟ್ಟಿಕೊಂಡು ಅರಚುತ್ತಿವೆ. ಈ ಎರಡನ್ನೂ ಬಳಸಿಕೊಂಡ ಹೊಳೆ ಹರಿಯುತ್ತಿದೆ. ಎರಡರ ಮಧ್ಯೆ ಸರ್ಕಾರಿ ರಸ್ತೆ ಊರಿಂದೂರನ್ನು ಬೆಸೆಯುತ್ತಿದೆ. ಈ ಎಲ್ಲವೂ ಹೀಗೇ… ಇಷ್ಟಾದರೂ ಸಹನಶೀಲತೆಯಲ್ಲಿ ಉಳಿಯಬೇಕಾದರೆ ಜನರ ಮನಸ್ಸಿಗೆ ನಿಜವಾದ ವಿಚಾರಶಕ್ತಿಯನ್ನು ಕೊಡಬೇಕಿದೆ. ಸರಿ-ತಪ್ಪುಗಳನ್ನು, ನಿಜ-ಸುಳ್ಳುಗಳನ್ನು ಶೋಧಿಸಿ ನೋಡುವ ತ್ರಾಣವನ್ನು ನನ್ನ ಜನ ಪಡೆಯಬೇಕಿದೆ. ಆದರೆ ಹೇಗೆ? ಅವರನ್ನು ಯೋಚನೆಗೆ ಸನ್ನದ್ಧಗೊಳಿಸುವ, ದಾರಿಯನ್ನು ಹುಡುಕಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...