Homeಮುಖಪುಟನೋಟು ರದ್ದತಿ : ಬಿಜೆಪಿಯ `ಕ್ಯಾಶ್ ಲೆಸ್’ ಸುಳ್ಳೂ ಇದೀಗ ಬಯಲಾಯ್ತು

ನೋಟು ರದ್ದತಿ : ಬಿಜೆಪಿಯ `ಕ್ಯಾಶ್ ಲೆಸ್’ ಸುಳ್ಳೂ ಇದೀಗ ಬಯಲಾಯ್ತು

- Advertisement -
- Advertisement -

ನೋಟು ರದ್ದತಿ ಮಾಡಲು ಹೊರಟಾಗ ಅದರಿಂದ ಕಪ್ಪುಹಣ ಹಿಡಿಯುತ್ತೇವೆಂದು ಹೇಳಿದ್ದರು. 3 ರಿಂದ 4 ಲಕ್ಷ ಕೋಟಿ ಕಪ್ಪುಹಣ ಬ್ಯಾಂಕ್‌ಗಳಿಗೆ ವಾಪಸ್ ಬರಲ್ಲ, ಅದೇ ದೊಡ್ಡ ಸಾಧನೆಯೆಂದು. ಶೇ.99.99ರಷ್ಟು ಹಣ ವಾಪಸ್ ಬಂದಿತು. ಏನೂ ಪ್ರಯೋಜನವಾಗಲಿಲ್ಲ. ಬದಲಿಗೆ ಸರ್ಕಾರವು ಹೊಸ ನೋಟು ಮುದ್ರಿಸಲು ಸಾವಿರಾರು ಕೋಟಿ ರೂ. ವೆಚ್ಚ ಮಾಡಬೇಕಾಯಿತು.

ಖೋಟಾ ನೋಟು ಹಿಡಿಯುತ್ತೇವೆಂದು ಹೇಳಿದ್ದರು. ಅದಕ್ಕಾಗಿ ಇಂತಹ ದೊಡ್ಡ ಸರ್ಕಸ್ ಬೇಕಿಲ್ಲವೆಂದು ತಜ್ಞರು ಹೇಳಿದ್ದರು. ಕೆಲವೇ ದಿನಗಳಲ್ಲಿ ಹೊಸ 2000 ರೂ. ಖೋಟಾ ನೋಟೂ ಪತ್ತೆಯಾಯಿತು.

ಭಯೋತ್ಪಾದನೆ ತಡೆಯುತ್ತೇವೆಂದಿದ್ದರು. ಈ ದೇಶದ ದುರಂತವೆಂದರೆ, ಯಾವ ಪಕ್ಷವೂ ಭಯೋತ್ಪಾದನೆ ನಿರ್ಮೂಲನೆಗೆ ಬೇಕಾದ ಸಮಗ್ರ ಕ್ರಮ ತೆಗೆದುಕೊಳ್ಳುತ್ತಿಲ್ಲ. ನೋಟು ರದ್ದತಿಯ ನಂತರ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾದವೆಂದು ಅಂಕಿ-ಅಂಶ ಹೇಳುತ್ತಿವೆ.

ಇರಲಿ, ಅವೆಲ್ಲಾ ವಿವರಗಳಿಗೆ ಇಲ್ಲಿ ಹೋಗಲ್ಲ.

ನೋಟು ರದ್ದತಿಯಿಂದಾಗುವ ಅನುಕೂಲವೆಂದು ಕಡೆಯಲ್ಲಿ ಹೇಳಿದ ಸುಳ್ಳು ಯಾವುದು ಗೊತ್ತೇ? ಡಿಸೆಂಬರ್ ಹೊತ್ತಿಗೆ ಮಿಕ್ಕವೆಲ್ಲಾ ಸುಳ್ಳು ಎಂದು ಬಯಲಾದ ನಂತರ ಹೊಸೆದ ಹೊಸ ಕಾರಣ ಅದು. ನವೆಂಬರ್ 8ರಂದು ಪ್ರಸ್ತಾಪಿಸಿಯೇ ಇರದಿದ್ದ ಕ್ಯಾಷ್‌ಲೆಸ್/ನಗದು ರಹಿತ ವಹಿವಾಟು ಹೆಚ್ಚಿಸುವುದು. ಹಾಗಾಗಿ ಇನ್ನು ಮುಂದೆ ನೋಟುಗಳ ಚಲಾವಣೆ ಬಹಳ ಕಡಿಮೆ ಇರುತ್ತದೆಂದು ಬಿಜೆಪಿ ಮತ್ತದರ ಪ್ರಚಾರಕರು ಹೇಳುತ್ತಾ ಹೋದರು.

ಇದೀಗ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ವಿವರವಾಗಿ ಬರೆದಿರುವಂತೆ, ವಾಸ್ತವದಲ್ಲಿ ನೋಟುಗಳ ಚಲಾವಣೆ ಹೆಚ್ಚಾಗಿದೆ. ಅಂದರೆ ಆರ್‌ಬಿಐ ನೋಟು ಮುದ್ರಣವನ್ನು ಹೆಚ್ಚಿಸಬೇಕಾಗಿ ಬಂದಿದೆ. 2016 ನವೆಂಬರ್ 4ರಂದು (ಅಂದರೆ ನೋಟು ರದ್ದತಿಗೆ ನಾಲ್ಕು ದಿನ ಮುಂಚೆ ಆರ್‌ಬಿಐ ಬಿಡುಗಡೆ ಮಾಡಿದಂತೆ) ದೇಶದಲ್ಲಿ 17.97 ಲಕ್ಷ ಕೋಟಿಗಳಷ್ಟು ನೋಟು ಚಲಾವಣೆ ಇತ್ತು. ಮಾರ್ಚ್ 15, 2015ರ ಹೊತ್ತಿಗೆ ಭಾರತದ ಆರ್ಥಿಕತೆಯಲ್ಲಿ 21.41 ಲಕ್ಷ ಕೋಟಿಗಳಷ್ಟು ನೋಟುಗಳ ಚಲಾವಣೆ ಆಗುತ್ತಿದೆ. ಇದು ಸ್ವತಃ ಆರ್‌ಬಿಐ ಬಿಡುಗಡೆ ಮಾಡಿದ ಅಂಕಿ-ಅಂಶ ಆಗಿದೆ. ಅಂದರೆ ಶೇ.19ರಷ್ಟು ಹೆಚ್ಚಳ!

ನೋಟು ರದ್ದತಿಯಾದ ತಕ್ಷಣ ಸುಳ್ಳು ಪ್ರಚಾರಕರು ಬ್ಲ್ಯಾಕ್ ಅಂಡ್ ವೈಟ್ ಕಾರ್ಯಕ್ರಮ ಮಾಡಲು ಹೊರಟಿದ್ದರು. ಅದು ಫೇಕ್ ಎಂದು ಸಾಬೀತಾದ ನಂತರ ಕ್ಯಾಷ್‌ಲೆಸ್ ದುನಿಯಾ ಅಂತಹ ಸುಳ್ಳು ಹರಡಲು ಹೊರಟರು. ಈಗ ಕ್ಯಾಷ್‌ಫುಲ್ ಆಗಿದೆ. ಸಾಮಾನ್ಯ ಜನರು ಮಾತ್ರ ಕ್ಯಾಷ್‌ಲೆಸ್ ಆಗಿದ್ದಾರೆ.

ನೋಟು ರದ್ದತಿಯಂತಹ ಒಂದು ಅಪಕ್ವವಾದ, ದುರುದ್ದೇಶಪೂರ್ವಕವಾದ ಕ್ರಮದಿಂದ ಆದ ನಷ್ಟ ಅಗಾಧವಾದದ್ದು. ಅದರಿಂದ ಒಂದೇ ಒಂದು ಲಾಭವೂ ಆಗಲಿಲ್ಲ; ಬದಲಿಗೆ ಜನರಲ್ಲಿ ಹುಟ್ಟಿಸಿದ ಹೆದರಿಕೆಯಿಂದ ಜನರು ಹೆಚ್ಚೆಚ್ಚು ಕ್ಯಾಷ್ ಇಟ್ಟುಕೊಳ್ಳಲು ಆರಂಭಿಸಿರುವುದಷ್ಟೇ ಇದಕ್ಕೆ ಕಾರಣವಲ್ಲ. ಕ್ಯಾಷ್‌ಲೆಸ್ ಮಾಡಲು ಬೇಕಾದ ನಿಧಾನಗತಿಯ ಪ್ರೋತ್ಸಾಹಕರ ಕ್ರಮಗಳ ಮೂಲಕ ಬದಲಾವಣೆ ತರದೇ, ಕೆಟ್ಟ ಆಪರೇಷನ್ ಮಾಡಿದರು. ಕ್ಯಾಷ್‌ಲೆಸ್ ಆಗಲು ಪ್ರೋತ್ಸಾಹ ಕೊಡುವ ಬದಲು, ಜನರು ಕ್ಯಾಷ್‌ಲೆಸ್ ವಹಿವಾಟು ಮಾಡಿದರೆ, ಕಮೀಷನ್ ಕಟ್ ಆಗಲು ಶುರುವಾಯಿತು.

ಹಾಗಾಗಿ ಸುಳ್ಳು ಪ್ರಚಾರಕರು ಭಾಷಣಗಳ ಮುಖಾಂತರ ಮತ್ತು ವಾಟ್ಸಾಪ್ ಫಾರ್ವರ್ಡ್‌ಗಳ ಮೂಲಕ ಜನರನ್ನು ದಿಕ್ಕುತಪ್ಪಿಸಲು ಹೊಸ ಹೊಸ ಸುಳ್ಳುಗಳನ್ನು ಹೆಣೆಯಯುತ್ತಾ ಸಾಗಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಗೆ ನೋಡಿ:

https://indianexpress.com/article/business/economy/cash-in-circulation-jumps-19-1-from-pre-demonetisation-level-5637325/

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...