Homeಅಂಕಣಗಳುನಮ್ಮ ಮನೋ ಬಯಕೆಗಳೇ ವರದಿಗಳಾದಾಗ....

ನಮ್ಮ ಮನೋ ಬಯಕೆಗಳೇ ವರದಿಗಳಾದಾಗ….

- Advertisement -
- Advertisement -

| ಡಾ. ವಾಸು ಎಚ್.ವಿ |

ಯಾವುದೇ ಪತ್ರಕರ್ತರಿಗೆ ಸುದ್ದಿ ಮಾಡುವಾಗ ಒಂದು ಪ್ರಮುಖ ಸವಾಲು ಇರುತ್ತದೆ. ಅದು ತನ್ನ ಮನಸ್ಸಿನ ಅಪೇಕ್ಷೆಗಿಂತ ಭಿನ್ನವಾಗಿ ಇರುವ ವಸ್ತುಸ್ಥಿತಿಯನ್ನು ವಸ್ತುನಿಷ್ಠವಾಗಿ ವರದಿ ಮಾಡುವುದು. ತನ್ನೊಳಗೆ ನಿರ್ದಿಷ್ಟ ಒಲವು ನಿಲುವುಗಳಿಲ್ಲದ ಪತ್ರಕರ್ತರು ಯಾರೂ ಇರುವುದಿಲ್ಲ. ಅದರಲ್ಲೂ ಸದ್ಯ ದೇಶವನ್ನಾಳುತ್ತಿರುವವರು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಧಕ್ಕೆ ತರುತ್ತಿದ್ದಾರೆ ಎಂಬುದು ಸ್ಪಷ್ಟವಿದ್ದರೆ, ಪತ್ರಕರ್ತರಾದವರು ಮಾಮೂಲಿಗಿಂತ ಹೆಚ್ಚೇ ವಿರೋಧ ಪಕ್ಷದ ಪಾತ್ರ ವಹಿಸಬೇಕಾಗುತ್ತದೆ. ಆದರೆ, ಹಾಗಾದಾಗ ಕಣ್ಣೆದುರಿಗಿನ ವಾಸ್ತವ ಗ್ರಹಿಸದೇ ಅಥವಾ ಗ್ರಹಿಸಿದರೂ ಅದನ್ನು ಬರಹಕ್ಕಿಳಿಸುವಾಗ ತನ್ನ ಮನೋಬಯಕೆಯನ್ನು ವಿಶ್ಲೇಷಣೆಯನ್ನಾಗಿಸುವ ಕೆಲಸ ನಡೆದುಬಿಡುತ್ತದೆ.

ಇದನ್ನು ಈ ನಿಮ್ಮ ಪತ್ರಿಕೆಯೂ ಎದುರಿಸುತ್ತಿರುವ ಸವಾಲು. ಕಾಂಗ್ರೆಸ್ ಅಥವಾ ಜೆಡಿಎಸ್ ಕುರಿತ ಯಾವ ಒಲವೂ ನಮಗಿಲ್ಲ. ಆದರೆ, ನಿಸ್ಸಂದೇಹವಾಗಿ ಬಿಜೆಪಿಯು ಭಾರತ ದೇಶದ ಮೂಲ ಅಡಿಪಾಯಕ್ಕೇ ಧಕ್ಕೆ ತರುತ್ತಿದೆ ಎಂಬ ಅಪಾಯದ ಅರಿವಿದೆ. ಹೀಗಿರುವಾಗ ಕೆಲವು ಎಡವಟ್ಟುಗಳನ್ನು ನಾವೂ ಮಾಡಿದ್ದೇವೆ. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದ್ದ ಅಲೆಯ ಸಂಪೂರ್ಣ ಗ್ರಹಿಕೆ ಇತ್ತೆಂದು ಹೇಳಲಾಗದಿದ್ದರೂ, ಎನ್‍ಡಿಎ ಸರ್ಕಾರ ರಚನೆ ಮಾಡುವ ಸಾಧ್ಯತೆಯೇ ಹೆಚ್ಚು ಎಂಬುದು ಸ್ಪಷ್ಟವಿತ್ತು. ಇಡೀ ದೇಶದಲ್ಲಿ ಮೋದಿ ಅಲೆ ಅತ್ಯಂತ ಹೆಚ್ಚಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಅದರಲ್ಲೂ ರಾಜ್ಯದ ಮೈತ್ರಿ ಸರ್ಕಾರವು ಜನರಿಗೆ ನಿರಾಶೆ ಮೂಡಿಸಿರುವುದು ಖಚಿತವಿತ್ತು. ಹೀಗಿದ್ದೂ, ನಮ್ಮ ವಿಶ್ಲೇಷಣೆಗಳಲ್ಲಿ ಬಿಜೆಪಿ ಸೋಲಬೇಕೆಂಬ ಬಯಕೆಯು ಎದ್ದು ಕಾಣುತ್ತಿತ್ತು.

ಇಂದು ಈ ಅಪೇಕ್ಷೆಯೇ ತಪ್ಪೆಂದು ಅನಿಸುವುದಿಲ್ಲ. ಅದು ದೇಶದ ನಾಗರಿಕರಾಗಿ ನಮ್ಮ ಕರ್ತವ್ಯವೂ ಆಗಿರಬಹುದು. ಆದರೆ, ಅದು ವಸ್ತುನಿಷ್ಠ ವಿಶ್ಲೇಷಣೆ ಆಗುವುದಿಲ್ಲ. ಹೀಗೆಂದ ಮೇಲೆ ಇನ್ನೊಂದು ಪ್ರಶ್ನೆ ಏಳುತ್ತದೆ. ಹಾಗಾದರೆ, ಪತ್ರಕರ್ತರು ಪ್ರಜಾಪ್ರಭುತ್ವದ ಪರ ನಿಲ್ಲುವ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೇ ಬೇಡವೇ? ಖಂಡಿತವಾಗಿ ಅಂತಹ ಕೆಲಸವನ್ನು ಪತ್ರಕರ್ತರು ಮಾಡಲೇಬೇಕು. ಆದರೆ ಎಂದಿಗೂ ತಮ್ಮ ವರದಿಗಳಲ್ಲಿ ಸುಳ್ಳಿನ ವಾಸನೆ ಇರದಂತೆ ನೋಡಿಕೊಳ್ಳಬೇಕು. ಬಹುಶಃ ಉದ್ದೇಶಪೂರ್ವಕ ಸುಳ್ಳನ್ನು ಈ ಪತ್ರಿಕೆಯಲ್ಲಿ ಬರೆಯುವುದಿಲ್ಲ. ಆದರೆ, ವಿಶ್ಲೇಷಣೆಯಲ್ಲಿ ಮನೋಬಯಕೆಗಳು ತೂರಿಕೊಂಡಿರುವುದು ವಾಸ್ತವ.

ಕಳೆದ ವಾರದ ಸಂಚಿಕೆ ಮುದ್ರಣಕ್ಕೆ ಹೋಗುವ ಮುನ್ನ ಮೂರು ಮೂಲಗಳಿಂದ ನಮಗೆ ಮಾಹಿತಿ ದೊರಕಿತು. ಅದರ ಪ್ರಕಾರ ಖಚಿತವಾಗಿ ಮೂರು ಗುಂಪುಗಳಲ್ಲಿ ಶಾಸಕರು ರಾಜೀನಾಮೆ ಕೊಡುತ್ತಾರೆ. ಎಚ್.ವಿಶ್ವನಾಥ್, ರಮೇಶ್ ಜಾರಕಿಹೊಳಿ ಮತ್ತು ಬೆಂಗಳೂರಿನ ಶಾಸಕರೊಬ್ಬರ ನೇತೃತ್ವ ಇರುತ್ತದೆ ಎಂಬುದು ಗೊತ್ತಾಗಿತ್ತು. 25 ಶಾಸಕರ ಜೊತೆ ಬಿಜೆಪಿಯು ಸಂಪರ್ಕದಲ್ಲಿದ್ದು, ಮೊದಲ 10 ಜನಕ್ಕೆ ವಿಶೇಷ ಆಫರ್ ಕೊಟ್ಟಿದ್ದಾರೆಂಬ ಸುಳಿವು ಸಿಕ್ಕಿತ್ತು. ಆನಂದ್‍ಸಿಂಗ್ ಮತ್ತು ರಮೇಶ್ ಜಾರಕಿಹೊಳಿಯವರ ರಾಜೀನಾಮೆ ಟ್ರೈಲರ್ ಮಾತ್ರ. ಗುಂಪು ಗುಂಪಾಗಿಯೇ ರಾಜೀನಾಮೆ ನೀಡಲಿದ್ದಾರೆ. ಅದು ಇನ್ನಷ್ಟು ಜನರನ್ನು ಹುರಿದುಂಬಿಸಲಿದೆ ಎಂಬುದು ಒಂದು ಮೂಲವಾದರೆ, ಆಶ್ಚರ್ಯಕರ ಮುಖಗಳು ರಾಜೀನಾಮೆ ನೀಡುವ ಗುಂಪಿನಲ್ಲಿರುತ್ತವೆ ಎಂಬುದು ಇನ್ನೊಂದು ಮೂಲವಾಗಿತ್ತು. ಈ ಸಾರಿಯ ಆಪರೇಷನ್ ಕಮಲದಿಂದ ಸಿದ್ದರಾಮಯ್ಯನವರ ಮೇಲೆ ಸಂಶಯಗಳು ದಟ್ಟವಾಗುತ್ತವೆ ಎಂಬುದು ಸಚಿವರೊಬ್ಬರು ನೀಡಿದ ಸುಳಿವಾಗಿತ್ತು.

ಇಷ್ಟು ಖಚಿತ ಸುಳಿವಿದ್ದಾಗಲೂ ನಮ್ಮ ವರದಿಗಳಲ್ಲಿ ಈ ಸಾರಿಯದ್ದೂ ಇನ್ನೊಂದು ಠುಸ್ ಆಪರೇಷನ್ ಎಂದೇ ಬಂದಿತು. ಹಾಗೆಯೇ ಎಚ್.ವಿಶ್ವನಾಥ್‍ರ ಸಂದರ್ಶನ ಮಾಡಲು ಹೋಗುವ ಹೊತ್ತಿಗಾಗಲೇ ಅವರ ಧೋರಣೆಯ ಕುರಿತು ಸಂಶಯವಿತ್ತಾದರೂ, ವರದಿ ಬರೆದಾಗ ರಾಜ್ಯದ ಚಿಂತನಶೀಲ ರಾಜಕಾರಣಿಯ ಕುರಿತ ಭ್ರಮೆಯು ಅದರಲ್ಲಿತ್ತು. ವಿಶ್ವನಾಥ್‍ರಂಥವರು ಹಾಗೆ ಮಾಡಲಾರರು ಎಂಬ ಮನೋಬಯಕೆಯಲ್ಲಿ ಎರಡು ಆಯಾಮಗಳಿದ್ದವು. ಒಂದು, ಅವರ ಕುರಿತ ಸರಿಯಾದ ಅಸೆಸ್‍ಮೆಂಟ್‍ನ ಕೊರತೆ. ಮತ್ತೊಂದು, ಹಾಗೆ ಮಾಡಬಾರದೆಂಬ ನಿರೀಕ್ಷೆ.

ಜೈಲು ಅಥವಾ ದೈಹಿಕ ದಾಳಿಗಳನ್ನೂ ಎದುರಿಸಿಯಾದರೂ ಸತ್ಯವನ್ನು ಹೇಳಬೇಕೆನ್ನುವ ತುಡಿತ ಮತ್ತು ಧೈರ್ಯವಿರುವ ಪತ್ರಕರ್ತರು ಈ ದೇಶದಲ್ಲಿ ಇನ್ನೂ ಸಾಕಷ್ಟು ಉಳಿದುಕೊಂಡಿದ್ದಾರೆ. ಆದರೆ, ಭ್ರಮೆಗಳನ್ನು ಮೀರುವುದು ಸುಲಭದ ಮಾತಲ್ಲ. ಈ ಭ್ರಮೆಗಳೂ ಅವರ ಸದ್ಭಾವನೆಗಳಿಂದಲೇ ಹುಟ್ಟಿರುವಂಥವು. ಓದು ಬಲ್ಲ ವರ್ಗವು ಇಂದು ಸರ್ವರ ಒಳಿತಿನ ದೃಷ್ಟಿಯಿಂದ ಸೂಕ್ತವಾದ ಓರಿಯೆಂಟೇಷನ್ ಬಯಸುತ್ತಿಲ್ಲ; ಬದಲಿಗೆ ತಾನೇ ಓರಿಯೆಂಟ್ ಮಾಡಬಲ್ಲಷ್ಟು ಪ್ರಬಲವಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ಸ್ಥಾಪಿತ ಮೌಲ್ಯಗಳ ಆಧಾರದ ಮೇಲಷ್ಟೇ ವಿಶ್ಲೇಷಣೆಯನ್ನು ಮಾಡುತ್ತಾ ಪಕ್ಷಗಳ ಕುರಿತ ಒಲವು-ನಿಲುವುಗಳನ್ನು ಪಕ್ಕಕ್ಕೆ ಸರಿಸುವುದು ಇಂದಿನ ಅಗತ್ಯವಾಗಿದೆ.

ಆ ನಿಟ್ಟಿನಲ್ಲಿ ಈ ಪತ್ರಿಕೆ ತನ್ನ ಭಾಷೆ, ಕಥನ ಮತ್ತು ವಿಶ್ಲೇಷಣಾ ವಿಧಾನವನ್ನು ರೂಪಿಸಿಕೊಳ್ಳಲಿದೆ. ಪತ್ರಿಕೆಯ ಓದುಗರೂ ಇದರ ಕುರಿತು ಚಿಂತಿಸಿ ತಮ್ಮ ಅನಿಸಿಕೆಗಳನ್ನು ಮುಂದಿಡಬೇಕೆಂದು ಕೋರುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...