Homeಅಂಕಣಗಳುನಮ್ಮ ಮನೋ ಬಯಕೆಗಳೇ ವರದಿಗಳಾದಾಗ....

ನಮ್ಮ ಮನೋ ಬಯಕೆಗಳೇ ವರದಿಗಳಾದಾಗ….

- Advertisement -
- Advertisement -

| ಡಾ. ವಾಸು ಎಚ್.ವಿ |

ಯಾವುದೇ ಪತ್ರಕರ್ತರಿಗೆ ಸುದ್ದಿ ಮಾಡುವಾಗ ಒಂದು ಪ್ರಮುಖ ಸವಾಲು ಇರುತ್ತದೆ. ಅದು ತನ್ನ ಮನಸ್ಸಿನ ಅಪೇಕ್ಷೆಗಿಂತ ಭಿನ್ನವಾಗಿ ಇರುವ ವಸ್ತುಸ್ಥಿತಿಯನ್ನು ವಸ್ತುನಿಷ್ಠವಾಗಿ ವರದಿ ಮಾಡುವುದು. ತನ್ನೊಳಗೆ ನಿರ್ದಿಷ್ಟ ಒಲವು ನಿಲುವುಗಳಿಲ್ಲದ ಪತ್ರಕರ್ತರು ಯಾರೂ ಇರುವುದಿಲ್ಲ. ಅದರಲ್ಲೂ ಸದ್ಯ ದೇಶವನ್ನಾಳುತ್ತಿರುವವರು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಧಕ್ಕೆ ತರುತ್ತಿದ್ದಾರೆ ಎಂಬುದು ಸ್ಪಷ್ಟವಿದ್ದರೆ, ಪತ್ರಕರ್ತರಾದವರು ಮಾಮೂಲಿಗಿಂತ ಹೆಚ್ಚೇ ವಿರೋಧ ಪಕ್ಷದ ಪಾತ್ರ ವಹಿಸಬೇಕಾಗುತ್ತದೆ. ಆದರೆ, ಹಾಗಾದಾಗ ಕಣ್ಣೆದುರಿಗಿನ ವಾಸ್ತವ ಗ್ರಹಿಸದೇ ಅಥವಾ ಗ್ರಹಿಸಿದರೂ ಅದನ್ನು ಬರಹಕ್ಕಿಳಿಸುವಾಗ ತನ್ನ ಮನೋಬಯಕೆಯನ್ನು ವಿಶ್ಲೇಷಣೆಯನ್ನಾಗಿಸುವ ಕೆಲಸ ನಡೆದುಬಿಡುತ್ತದೆ.

ಇದನ್ನು ಈ ನಿಮ್ಮ ಪತ್ರಿಕೆಯೂ ಎದುರಿಸುತ್ತಿರುವ ಸವಾಲು. ಕಾಂಗ್ರೆಸ್ ಅಥವಾ ಜೆಡಿಎಸ್ ಕುರಿತ ಯಾವ ಒಲವೂ ನಮಗಿಲ್ಲ. ಆದರೆ, ನಿಸ್ಸಂದೇಹವಾಗಿ ಬಿಜೆಪಿಯು ಭಾರತ ದೇಶದ ಮೂಲ ಅಡಿಪಾಯಕ್ಕೇ ಧಕ್ಕೆ ತರುತ್ತಿದೆ ಎಂಬ ಅಪಾಯದ ಅರಿವಿದೆ. ಹೀಗಿರುವಾಗ ಕೆಲವು ಎಡವಟ್ಟುಗಳನ್ನು ನಾವೂ ಮಾಡಿದ್ದೇವೆ. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದ್ದ ಅಲೆಯ ಸಂಪೂರ್ಣ ಗ್ರಹಿಕೆ ಇತ್ತೆಂದು ಹೇಳಲಾಗದಿದ್ದರೂ, ಎನ್‍ಡಿಎ ಸರ್ಕಾರ ರಚನೆ ಮಾಡುವ ಸಾಧ್ಯತೆಯೇ ಹೆಚ್ಚು ಎಂಬುದು ಸ್ಪಷ್ಟವಿತ್ತು. ಇಡೀ ದೇಶದಲ್ಲಿ ಮೋದಿ ಅಲೆ ಅತ್ಯಂತ ಹೆಚ್ಚಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಅದರಲ್ಲೂ ರಾಜ್ಯದ ಮೈತ್ರಿ ಸರ್ಕಾರವು ಜನರಿಗೆ ನಿರಾಶೆ ಮೂಡಿಸಿರುವುದು ಖಚಿತವಿತ್ತು. ಹೀಗಿದ್ದೂ, ನಮ್ಮ ವಿಶ್ಲೇಷಣೆಗಳಲ್ಲಿ ಬಿಜೆಪಿ ಸೋಲಬೇಕೆಂಬ ಬಯಕೆಯು ಎದ್ದು ಕಾಣುತ್ತಿತ್ತು.

ಇಂದು ಈ ಅಪೇಕ್ಷೆಯೇ ತಪ್ಪೆಂದು ಅನಿಸುವುದಿಲ್ಲ. ಅದು ದೇಶದ ನಾಗರಿಕರಾಗಿ ನಮ್ಮ ಕರ್ತವ್ಯವೂ ಆಗಿರಬಹುದು. ಆದರೆ, ಅದು ವಸ್ತುನಿಷ್ಠ ವಿಶ್ಲೇಷಣೆ ಆಗುವುದಿಲ್ಲ. ಹೀಗೆಂದ ಮೇಲೆ ಇನ್ನೊಂದು ಪ್ರಶ್ನೆ ಏಳುತ್ತದೆ. ಹಾಗಾದರೆ, ಪತ್ರಕರ್ತರು ಪ್ರಜಾಪ್ರಭುತ್ವದ ಪರ ನಿಲ್ಲುವ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೇ ಬೇಡವೇ? ಖಂಡಿತವಾಗಿ ಅಂತಹ ಕೆಲಸವನ್ನು ಪತ್ರಕರ್ತರು ಮಾಡಲೇಬೇಕು. ಆದರೆ ಎಂದಿಗೂ ತಮ್ಮ ವರದಿಗಳಲ್ಲಿ ಸುಳ್ಳಿನ ವಾಸನೆ ಇರದಂತೆ ನೋಡಿಕೊಳ್ಳಬೇಕು. ಬಹುಶಃ ಉದ್ದೇಶಪೂರ್ವಕ ಸುಳ್ಳನ್ನು ಈ ಪತ್ರಿಕೆಯಲ್ಲಿ ಬರೆಯುವುದಿಲ್ಲ. ಆದರೆ, ವಿಶ್ಲೇಷಣೆಯಲ್ಲಿ ಮನೋಬಯಕೆಗಳು ತೂರಿಕೊಂಡಿರುವುದು ವಾಸ್ತವ.

ಕಳೆದ ವಾರದ ಸಂಚಿಕೆ ಮುದ್ರಣಕ್ಕೆ ಹೋಗುವ ಮುನ್ನ ಮೂರು ಮೂಲಗಳಿಂದ ನಮಗೆ ಮಾಹಿತಿ ದೊರಕಿತು. ಅದರ ಪ್ರಕಾರ ಖಚಿತವಾಗಿ ಮೂರು ಗುಂಪುಗಳಲ್ಲಿ ಶಾಸಕರು ರಾಜೀನಾಮೆ ಕೊಡುತ್ತಾರೆ. ಎಚ್.ವಿಶ್ವನಾಥ್, ರಮೇಶ್ ಜಾರಕಿಹೊಳಿ ಮತ್ತು ಬೆಂಗಳೂರಿನ ಶಾಸಕರೊಬ್ಬರ ನೇತೃತ್ವ ಇರುತ್ತದೆ ಎಂಬುದು ಗೊತ್ತಾಗಿತ್ತು. 25 ಶಾಸಕರ ಜೊತೆ ಬಿಜೆಪಿಯು ಸಂಪರ್ಕದಲ್ಲಿದ್ದು, ಮೊದಲ 10 ಜನಕ್ಕೆ ವಿಶೇಷ ಆಫರ್ ಕೊಟ್ಟಿದ್ದಾರೆಂಬ ಸುಳಿವು ಸಿಕ್ಕಿತ್ತು. ಆನಂದ್‍ಸಿಂಗ್ ಮತ್ತು ರಮೇಶ್ ಜಾರಕಿಹೊಳಿಯವರ ರಾಜೀನಾಮೆ ಟ್ರೈಲರ್ ಮಾತ್ರ. ಗುಂಪು ಗುಂಪಾಗಿಯೇ ರಾಜೀನಾಮೆ ನೀಡಲಿದ್ದಾರೆ. ಅದು ಇನ್ನಷ್ಟು ಜನರನ್ನು ಹುರಿದುಂಬಿಸಲಿದೆ ಎಂಬುದು ಒಂದು ಮೂಲವಾದರೆ, ಆಶ್ಚರ್ಯಕರ ಮುಖಗಳು ರಾಜೀನಾಮೆ ನೀಡುವ ಗುಂಪಿನಲ್ಲಿರುತ್ತವೆ ಎಂಬುದು ಇನ್ನೊಂದು ಮೂಲವಾಗಿತ್ತು. ಈ ಸಾರಿಯ ಆಪರೇಷನ್ ಕಮಲದಿಂದ ಸಿದ್ದರಾಮಯ್ಯನವರ ಮೇಲೆ ಸಂಶಯಗಳು ದಟ್ಟವಾಗುತ್ತವೆ ಎಂಬುದು ಸಚಿವರೊಬ್ಬರು ನೀಡಿದ ಸುಳಿವಾಗಿತ್ತು.

ಇಷ್ಟು ಖಚಿತ ಸುಳಿವಿದ್ದಾಗಲೂ ನಮ್ಮ ವರದಿಗಳಲ್ಲಿ ಈ ಸಾರಿಯದ್ದೂ ಇನ್ನೊಂದು ಠುಸ್ ಆಪರೇಷನ್ ಎಂದೇ ಬಂದಿತು. ಹಾಗೆಯೇ ಎಚ್.ವಿಶ್ವನಾಥ್‍ರ ಸಂದರ್ಶನ ಮಾಡಲು ಹೋಗುವ ಹೊತ್ತಿಗಾಗಲೇ ಅವರ ಧೋರಣೆಯ ಕುರಿತು ಸಂಶಯವಿತ್ತಾದರೂ, ವರದಿ ಬರೆದಾಗ ರಾಜ್ಯದ ಚಿಂತನಶೀಲ ರಾಜಕಾರಣಿಯ ಕುರಿತ ಭ್ರಮೆಯು ಅದರಲ್ಲಿತ್ತು. ವಿಶ್ವನಾಥ್‍ರಂಥವರು ಹಾಗೆ ಮಾಡಲಾರರು ಎಂಬ ಮನೋಬಯಕೆಯಲ್ಲಿ ಎರಡು ಆಯಾಮಗಳಿದ್ದವು. ಒಂದು, ಅವರ ಕುರಿತ ಸರಿಯಾದ ಅಸೆಸ್‍ಮೆಂಟ್‍ನ ಕೊರತೆ. ಮತ್ತೊಂದು, ಹಾಗೆ ಮಾಡಬಾರದೆಂಬ ನಿರೀಕ್ಷೆ.

ಜೈಲು ಅಥವಾ ದೈಹಿಕ ದಾಳಿಗಳನ್ನೂ ಎದುರಿಸಿಯಾದರೂ ಸತ್ಯವನ್ನು ಹೇಳಬೇಕೆನ್ನುವ ತುಡಿತ ಮತ್ತು ಧೈರ್ಯವಿರುವ ಪತ್ರಕರ್ತರು ಈ ದೇಶದಲ್ಲಿ ಇನ್ನೂ ಸಾಕಷ್ಟು ಉಳಿದುಕೊಂಡಿದ್ದಾರೆ. ಆದರೆ, ಭ್ರಮೆಗಳನ್ನು ಮೀರುವುದು ಸುಲಭದ ಮಾತಲ್ಲ. ಈ ಭ್ರಮೆಗಳೂ ಅವರ ಸದ್ಭಾವನೆಗಳಿಂದಲೇ ಹುಟ್ಟಿರುವಂಥವು. ಓದು ಬಲ್ಲ ವರ್ಗವು ಇಂದು ಸರ್ವರ ಒಳಿತಿನ ದೃಷ್ಟಿಯಿಂದ ಸೂಕ್ತವಾದ ಓರಿಯೆಂಟೇಷನ್ ಬಯಸುತ್ತಿಲ್ಲ; ಬದಲಿಗೆ ತಾನೇ ಓರಿಯೆಂಟ್ ಮಾಡಬಲ್ಲಷ್ಟು ಪ್ರಬಲವಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ಸ್ಥಾಪಿತ ಮೌಲ್ಯಗಳ ಆಧಾರದ ಮೇಲಷ್ಟೇ ವಿಶ್ಲೇಷಣೆಯನ್ನು ಮಾಡುತ್ತಾ ಪಕ್ಷಗಳ ಕುರಿತ ಒಲವು-ನಿಲುವುಗಳನ್ನು ಪಕ್ಕಕ್ಕೆ ಸರಿಸುವುದು ಇಂದಿನ ಅಗತ್ಯವಾಗಿದೆ.

ಆ ನಿಟ್ಟಿನಲ್ಲಿ ಈ ಪತ್ರಿಕೆ ತನ್ನ ಭಾಷೆ, ಕಥನ ಮತ್ತು ವಿಶ್ಲೇಷಣಾ ವಿಧಾನವನ್ನು ರೂಪಿಸಿಕೊಳ್ಳಲಿದೆ. ಪತ್ರಿಕೆಯ ಓದುಗರೂ ಇದರ ಕುರಿತು ಚಿಂತಿಸಿ ತಮ್ಮ ಅನಿಸಿಕೆಗಳನ್ನು ಮುಂದಿಡಬೇಕೆಂದು ಕೋರುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...