Homeಅಂಕಣಗಳುಸಂಪಾದಕೀಯ

ಸಂಪಾದಕೀಯ

- Advertisement -
- Advertisement -

ಕವಿದ ಕತ್ತಲ ನಡುವೆ ಬೆಳಕಿನ ಭರವಸೆಗಳು

ಸಂಪಾದಕೀಯ ತಂಡದ ಪರವಾಗಿ
@ ದೊಡ್ಡಿಪಾಳ್ಯ ನರಸಿಂಹಮೂರ್ತಿ

ಹಸುಗೂಸು ಆಸಿಫಾಳ ಮೇಲೆ ನಡೆದ ಆ ಕ್ರೌರ್ಯ ಕಲ್ಲುಹೃದಯಗಳನ್ನೂ ಕಲಕಿಬಿಟ್ಟಿದೆ. ಸೂಕ್ಷ್ಮಸಂವೇದನೆಯ ಅದೆಷ್ಟೋ ಮಂದಿ ಈ ಆಘಾತದ ವಿವರ ಕೇಳಿ ಮಂಕುಬಡಿದವರಂತಾಗಿದ್ದಾರೆ. ಆಸಿಫಾಳ ಪ್ರಸ್ತಾಪ ಬಂದಾಕ್ಷಣ ತೀವ್ರ ವ್ಯಾಕುಲತೆಗೆ ಜಾರುವವರಿದ್ದಾರೆ. ‘ಪ್ಲೀಸ್, ಆ ವಿಷ್ಯ ನಿಲ್ಸಿ, ಮತ್ತೆ ನೆನಪಿಸಬೇಡಿ’ ಎಂದು ಮರೆಯಲೆತ್ನಿಸುವವರೂ ಇದ್ದಾರೆ. ಹೌದು, ಇವೆಲ್ಲಾ ಮನುಷ್ಯರ ಸಹಜ ಪ್ರತಿಕ್ರಿಯೆಗಳು.

ಆದರೆ ಪಾತಕಿಗಳ ಪರವಾಗಿ ನಿಂತು ಆ ಮುಗ್ದ ಕೂಸಿನ ಮೇಲೆ ನಡೆದ ಕ್ರೌರ್ಯವನ್ನು ಮುಚ್ಚಿಹಾಕಲು ಹರಸಾಹಸಪಟ್ಟ ಕಥುವಾದ ಪೊಲೀಸರೂ ಮನುಷ್ಯರೇ ತಾನೆ? ಭಾರತ್ ಮಾತಾ ಕಿ ಜೈ ಘೋಷಣೆಯ ಅಬ್ಬರದಡಿ ನ್ಯಾಯದ ಕೂಗನ್ನು ಮುಚ್ಚಿಹಾಕಲು ಹೆಣಗುತ್ತಿರುವವರು, ತ್ರಿವರ್ಣದ್ವಜವನ್ನು ಪಟಪಟಿಸಿ ಅದರಡಿಯಲ್ಲಿ ಪಾತಕಿಗಳಿಗೆ ರಕ್ಷಣೆ ಒದಗಿಸಿದ್ದವರಿಗೂ ಕೂಡ ಮನುಷ್ಯ ರೂಪವೇ ಇತ್ತಲ್ಲಾ? ಅತ್ಯಾಚಾರಿ, ಕೊಲೆಗಡುಕರ ಪರವಾಗಿ ಭಾರೀ ರ್ಯಾಲಿ ಏರ್ಪಡಿಸಿದ ಸಂಘಿ ಕೂಟದ ‘ಹಿಂದೂ ಏಕತಾ ಮಂಚ್’ನವರ ಅಸಲಿಯತ್ತಾದರೂ ಏನು? ‘ಯಾರೊಬ್ಬರನ್ನೂ ಅರೆಸ್ಟ್ ಮಾಡುವಂತಿಲ್ಲ’ ಎಂದು ಬಿಜೆಪಿಯ ಕೈಗಾರಿಕಾ ಸಚಿವ ಚಂದ್ರಪ್ರಕಾಶ್ ಗಂಗ ಈ ಬಹಿರಂಗ ರ್ಯಾಲಿಗಳಲ್ಲೇ ಧಮಕಿ ಹಾಕುತ್ತಾನೆಂದರೆ ಅಲ್ಲಿ ಎಂಥಾ ವ್ಯವಸ್ಥೆ ಇರಬಹುದು? ‘ಒಬ್ಬ ಹುಡುಗಿಯಷ್ಟೇ ಸತ್ತಿರೋದು, ಇನ್ನೂ ಬಹಳ ಹೆಣ್ಣುಮಕ್ಕಳು ನಮ್ಮ ಮುಂದೆಯೇ ಇದ್ದಾರೆ’ ಎಂದು ಉಗ್ರಹಿಂದುತ್ವದ ಭಾಷಣ ಮಾಡಿ ಘೋರಪಾತಕಗಳಿಗೆ ಬಹಿರಂಗ ಪ್ರಚೋದನೆ ನೀಡಿದ ಲಾಲ್‍ಸಿಂಗ್ ಆ ರಾಜ್ಯದ ಅರಣ್ಯ ಸಚಿವನೆಂದರೆ ನಂಬುವುದಾದರೂ ಹೇಗೆ?

ಕಥುವಾ ಮತ್ತು ಉನ್ನಾವೊಗಳಲ್ಲಿ ಪಾತಕಿಗಳು, ಪೊಲೀಸರು ಮತ್ತು ಸರ್ಕಾರ ಎಲ್ಲರೂ ಒಂದೇ ಗ್ಯಾಂಗಿನ ಸದಸ್ಯರೆಂಬಂತೆ ವರ್ತಿಸಿದ್ದಾರೆ. ಇಷ್ಟು ಸಾಲದು ಎಂಬಂತೆ ಕೋಮುವ್ಯಾಧಿ ವೈರಸ್ ಹರಡುತ್ತಿರುವ ಶಕ್ತಿಗಳು ಈ ಪಾತಕಗಳಿಗೆ ಸಾಮಾಜಿಕ ಬೆಂಬಲ ಕೂಡಿಸುವ ಪಾಪದಲ್ಲಿ ತೊಡಗಿವೆ. ದೇಶಾದ್ಯಂತ ಈ ಜಾಲ ವೇಗವಾಗಿ ವಿಸ್ತರಿಸುತ್ತಿದೆ. ಹೀಗೇ ಮುಂದುವರೆದರೆ ಮನುಷ್ಯತ್ವಕ್ಕೆ ಉಳಿಗಾಲವಿದೆಯೆ? ನಮ್ಮ ಪ್ರಜಾತಂತ್ರಕ್ಕೆ ಭವಿಷ್ಯವಿದೆಯೆ ಎಂಬ ಆತಂಕ ಕಾಡುತ್ತದೆ. ನಾವು ಸಿನಿಕತೆಗೆ ಜಾರುವುದು ಇಂಥ ಸನ್ನಿವೇಶಗಳಲ್ಲೇ.

ಕೋರ್ಟ್ ಆವರಣದಲ್ಲಿ ದೀಪಿಕಾ ಸಿಂಗ್

ಇಂಥಾ ಕರಾಳ ಸನ್ನಿವೇಶದಲ್ಲೂ ಆಸಿಫಾಳ ಪೋಷಕರ ಪರ ನ್ಯಾಯಾಲಯದಲ್ಲಿ ದೃಡವಾಗಿ ಹೋರಾಡಿದ ಯುವ ವಕೀಲೆ ದೀಪಿಕಾ ಸಿಂಗ್ ರಜಾವತ್ ನಮಗೆ ಭರವಸೆಯ ಬೆಳಕಾಗಿ ಕಾಣುತ್ತಾರೆ. ಈ ಕೇಸು ಕೈಗೆತ್ತಿಕೊಂಡಿದ್ದಕ್ಕಾಗಿ ಸೋದರಿ ದೀಪಿಕಾರನ್ನು ಹಿಂದೂವಿರೋಧಿಯೆಂದು ಆರೋಪಿಸಿ ಹಿಂದೂ ಏಕತಾ ಮಂಚ್ ಗದ್ದಲವೆಬ್ಬಿಸಿತು. ಅವರ ಓಡಾಟಕ್ಕೇ ಆತಂಕ ಒಡ್ಡಲಾಯ್ತು. ಅತ್ಯಾಚಾರ ಮಾಡಿ ಕೊಲ್ಲುವ ಬೆದರಿಕೆಗಳೂ ಬಂದವು.

ದೀಪಿಕಾಗೆ ಸೂಕ್ತ ಭದ್ರತೆ ಒದಗಿಸುವಂತೆ ರಾಜ್ಯಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ಕೊಟ್ಟಿದೆಯೆಂದರೆ ಆಕೆ ಎದುರಿಸುತ್ತಿರುವ ಪರಿಸ್ಥಿತಿಯನ್ನು ಯಾರಾದರೂ ಗ್ರಹಿಸಬಹುದು. ‘ಆಸಿಫಾ ನನ್ನ ಮಗಳು, ಆಕೆಯ ಪರವಾಗಿ ನನ್ನ ಉಸಿರಿರುವವರೆಗೂ ಹೋರಾಡುತ್ತೇನೆ’ ಎಂದ ದೀಪಿಕಾ ನಮ್ಮ ಭರವಸೆ.

ಈ ಪ್ರಕರಣದಲ್ಲಿ ಪಾತಕಿಗಳನ್ನು ಪತ್ತೆಹಚ್ಚಿ, ಕಂಬಿಗಳ ಹಿಂದೆ ಕಳಿಸುವಲ್ಲಿ ಬಹುಮುಖ್ಯಪಾತ್ರ ವಹಿಸಿದವರು ಎಸ್‍ಐಟಿಯ ಡಿವೈಎಸ್‍ಪಿ ಶ್ವೇತಾಂಬರಿ ಶರ್ಮ. ಅವರ ಮಾತುಗಳನ್ನೇ ಕೇಳೋಣ.

“ಬಹುತೇಕ ಆರೋಪಿಗಳು ಬ್ರಾಹ್ಮಣರೇ ಆಗಿದ್ದುದರಿಂದ ಅವರು ತಮ್ಮ ಸರ್‍ನೇಮ್‍ಗಳನ್ನು ಒತ್ತಿ ಒತ್ತಿ ಹೇಳುತ್ತಿದ್ದರು. ನಾವೂ ನೀವೂ ಒಂದೇ ಜಾತಿಯವರು, ಒಂದೇ ಧರ್ಮದವರು. ಆದ್ದರಿಂದ ಆ ಮುಸ್ಲಿಂ ಹುಡುಗಿಯ ರೇಪ್ & ಮರ್ಡರ್ ಕೇಸಿನಿಂದ ತಮ್ಮನ್ನು ತಪ್ಪಿಸಬೇಕೆಂದು ನಾನಾ ವಿಧಾನದಲ್ಲಿ ಪ್ರಭಾವ ಬೀರಲು ಯತ್ನಿಸಿದರು. ಪೊಲೀಸ್ ಅಧಿಕಾರಿಯಾಗಿರುವ ನನಗೆ ಯಾವುದೇ ಧರ್ಮವಿಲ್ಲ, ನಾನು ತೊಟ್ಟಿರುವ ಸಮವಸ್ತ್ರವೇ ನನ್ನ ಧರ್ಮ ಎಂದು ಅವರಿಗೆ ಹೇಳಿ ಕಳಿಸಿದೆ.”

ರಮೇಶ ಕುಮಾರ್ ಜಲ್ಲಾ

ಈ ತನಿಖೆಯ ಮೇಲ್ವಿಚಾರಣಾಧಿಕಾರಿ ಎಸ್‍ಪಿ ರಮೇಶ್ ಕುಮಾರ್ ಜಲ್ಲಾ ಅತಿ ಸೂಕ್ಷ್ಮ ಕೇಸುಗಳನ್ನು ನಿಭಾಯಿಸಿದ ಅನುಭವಿ. ಅವರು ಆಸಿಫಾ ಕೇಸನ್ನು ಎಷ್ಟು ಮನಸ್ಸಿಗೆ ಹಚ್ಚಿಕೊಂಡಿದ್ದರೆಂದರೆ ‘ಎರಡು ತಿಂಗಳು ಹಗಲಿರುಳು ಶ್ರಮಿಸಿದ ನಂತರ ಅಂತಿಮವಾಗಿ ಚಾರ್ಜ್‍ಶೀಟ್ ದಾಖಲಿಸಲು ಸಾಧ್ಯವಾಯ್ತು. ನಂತರವಷ್ಟೇ ಕಣ್ತುಂಬಾ ನಿದ್ದೆ ಮಾಡಿದ್ದು’ ಎಂದು ವಿವರಿಸುತ್ತಾರೆ. ಶಿಸ್ತಿನ ಈ ಅಧಿಕಾರಿ ನುಸುಳುಕೋರರ ವಿರುದ್ಧದ ಹೋರಾಟದಲ್ಲಿ ಖ್ಯಾತಿ ಪಡೆದಿರುವವರು.

ಮಾನವೀಯತೆ ಹಾಗೂ ಕಾನೂನು ಆಡಳಿತದ ಪರವಾಗಿ ದಿಟ್ಟವಾಗಿ ನಿಂತ ಇಂಥಾ ಮಹಾನ್‍ವ್ಯಕ್ತಿಗಳ ಪ್ರಯತ್ನದಿಂದಲೇ ನಮ್ಮ ಸಮಾಜ ಇಷ್ಟಾದರೂ ಸಹ್ಯವಾಗಿ ಉಳಿದುಕೊಂಡಿದೆ. ಈ ದಿಟ್ಟ ದನಿಗಳಿಗೆ ಈಗ ದೇಶದಾದ್ಯಂತ ಕೋಟ್ಯಾಂತರ ಜನರು ಮಾರ್ದನಿಯಾಗಿದ್ದಾರೆ. ಮಾನವೀಯ ಭವಿಷ್ಯದ ಕನಸಿಗೆ ಮತ್ತಷ್ಟು ಕಸುವು ತುಂಬುತ್ತಿದ್ದಾರೆ.

ಕೊನೆಯದಾಗಿ, ಇನ್ಸ್‍ಟಾಗ್ರಾಮ್ ಮೂಲಕ ಪ್ರಧಾನಿ ಮೋದಿಗೆ ಪತ್ರ ಬರೆದ ಒಬ್ಬ ಮೋದಿ ಅಭಿಮಾನಿಯ ಮಾತನ್ನು ಕೇಳೋಣ.
“ಮಾನ್ಯ ಪ್ರಧಾನಿಯವರೆ,
ತಾವು ರಾತ್ರೋರಾತ್ರಿ ಕರೆನ್ಸಿ ನೋಟು ಬದಲಾಯಿಸಿಬಿಟ್ಟಿರಿ.
ರಾತ್ರೋರಾತ್ರಿ ತೆರಿಗೆ ವ್ಯವಸ್ಥೆಯನ್ನು ಬದಲಾಯಿಸಿಬಿಟ್ಟಿರಿ.
ರಾತ್ರೋರಾತ್ರಿ ಸರ್ಕಾರಗಳನ್ನೂ ಬದಲಾಯಿಬಿಡುತ್ತಿದ್ದೀರಿ.
ನೀವೀಗ ಈ ಅತ್ಯಾಚಾರದ ಸಂಸ್ಕøತಿಯನ್ನು ಬದಲಾಯಿಸದಿದ್ದರೆ, ಅತ್ಯಾಚಾರಿಗಳಿಗೆ ಶಿಕ್ಷೆಯಾಗುವಂತೆ ಮಾಡದಿದ್ದರೆ, ಆಗ ನಾನು ನನ್ನ ಓಟನ್ನು ರಾತ್ರೋರಾತ್ರಿ ಬದಲಿಸಬಲ್ಲೆ. 2019 ಬಹಳ ದೂರವೇನಿಲ್ಲ.”

ತಾವು ಬೆಂಬಲಿಸುವ ಬಿಜೆಪಿ ಪಕ್ಷದ ಮುಖಂಡರೇ ಘೋರ ಕೃತ್ಯಗಳಲ್ಲಿ ತೊಡಗಿದಾಗ, ಅದನ್ನು ಖಂಡಿಸಿ ಮಾನವೀಯತೆಯ ಪರವಾಗಿ ನಿಂತ ಸಹಸ್ರ ಸಹಸ್ರ ಮನುಷ್ಯರಿದ್ದಾರೆ. ಭವಿಷ್ಯದಲ್ಲಿ ಭರವಸೆ ಇಡೋಣ. ದನಿಗೂಡಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...