Homeಮುಖಪುಟ2010ರಿಂದ 16 ಪತ್ರಕರ್ತರ ಮೇಲೆ ಕಠೋರ UAPA ಕಾಯ್ದೆಯಡಿ ಕೇಸ್ ದಾಖಲು: ಹೆಚ್ಚಿನವರು ಮುಸ್ಲಿಂ ಸಮುದಾಯದವರು

2010ರಿಂದ 16 ಪತ್ರಕರ್ತರ ಮೇಲೆ ಕಠೋರ UAPA ಕಾಯ್ದೆಯಡಿ ಕೇಸ್ ದಾಖಲು: ಹೆಚ್ಚಿನವರು ಮುಸ್ಲಿಂ ಸಮುದಾಯದವರು

- Advertisement -
- Advertisement -

2010ರಿಂದ ಇಲ್ಲಿಯವರೆಗೆ ದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ 1967ರ ಯುಎಪಿಎ ಅಡಿಯಲ್ಲಿ 16 ಪತ್ರಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ಈ ರೀತಿ ಕಠೋರ ಕಾನೂನುಗಳ ಅಡಿಯಲ್ಲಿ ಪತ್ರಕರ್ತರ ಮೇಲೆ ಪ್ರಕರಣ ದಾಖಲಿಸಿರುವುದು ಭಾರತದಲ್ಲಿ ವಾಕ್ ಸ್ವಾತಂತ್ರ್ಯದ ಅಪಾಯಕಾರಿ ಸ್ಥಿತಿಯಲ್ಲಿರುವುದನ್ನು ಸೂಚಿಸುತ್ತದೆ.

ಸಮಾಜದಲ್ಲಿನ ಕೆಲ ನ್ಯೂನ್ಯತೆಗಳ, ಸಮಸ್ಯೆಗಳ ಕುರಿತು ತನಿಖೆ ಮಾಡಲು ಮತ್ತು ವರದಿ ಮಾಡಲು ಬಯಸುವ ಪತ್ರಕರ್ತರ ವಿರುದ್ಧ UAPA ಕಾಯ್ದೆಯನ್ನು ಬಳಸಿದಾಗ, ಅದು ಅವರ ಕಾನೂನುಬದ್ಧ ಕೆಲಸವನ್ನು ಅಪರಾಧೀಕರಿಸಲು ಮತ್ತು ಅವರನ್ನು “ಭಯೋತ್ಪಾದಕರು” ಎಂದು ಕಳಂಕಗೊಳಿಸುವ ಕೆಲಸ ಮಾಡುತ್ತದೆ.  ಇದಲ್ಲದೆ ಅವರ ಘನತೆಗೆ ಚ್ಯುತಿ ತರುವ ಮತ್ತು ಅವರನ್ನು ವಿನಾಃಕಾರಣ ಕಾನೂನು ಪ್ರಕ್ರಿಯೆಗಳ ಹಿಂದೆ ಅಲೆದಾಡಿಸಲು ಪ್ರಯತ್ನಿಸುತ್ತದೆ. ಇದು ಅವರ ವೃತ್ತಿಪರ ಕೆಲಸದ ಮೇಲೆ ಅಗಾಧ ಪ್ರಭಾವವನ್ನು ಬೀರುತ್ತದೆ.

ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕಲು ಯುಎಪಿಎ ಕಾಯ್ದೆ ಜಾರಿಗೆ ತರಲಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಆಪಾದಿತ ದೇಶವಿರೋಧಿ ಚಟುವಟಿಕೆಗಳನ್ನು ಕೂಡ ಯುಎಪಿಎಯಡಿ ಸೇರಿಸಲಾಗಿದೆ. ಭಾರತದಲ್ಲಿ ಉಗ್ರ ಚಟುವಟಿಕೆ ನಿಗ್ರಹಕ್ಕೆ ಸಂಬಂಧಿಸಿದಂತೆ ಟಾಡಾ(TADA) ಮತ್ತು ಪೋಟಾ (POTA) ಕಾಯ್ದೆಗಳು ಅಸ್ತಿತ್ವದಲ್ಲಿದ್ದವು. ಆದರೆ, 1995ರಲ್ಲಿ ಟಾಡಾ ಕಾಯ್ದೆಯನ್ನು ಹಿಂಪಡೆಯಲಾಯಿತು. ಬಳಿಕ 2004ರಲ್ಲಿ ಪೋಟಾ ಕಾಯ್ದೆಯನ್ನು ಕೈ ಬಿಡಲಾಯಿತು. 1967ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಜಾರಿಗೆ ತಂದಿದ್ದ ಯುಎಪಿಎ ಕಾಯ್ದೆಯನ್ನು ಬಲಪಡಿಸಲಾಯಿತು. ಇದಕ್ಕಾಗಿ 2004, 2008, 2013 ಮತ್ತು 2019ರಲ್ಲಿ ತಿದ್ದುಪಡಿಗಳನ್ನು ತರುವ ಮೂಲಕ ಮತ್ತಷ್ಟು ಅಧಿಕಾರಗಳನ್ನು ನೀಡಲಾಯಿತು

ಇತ್ತೀಚಿನ ಬೆಳವಣಿಗೆಯಲ್ಲಿ ನ್ಯೂಸ್‌ಕ್ಲಿಕ್ ಸುದ್ದಿ ಪೋರ್ಟಲ್‌ನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರ  ಮೇಲೆ ಯುಎಪಿಎಯಡಿ ಪ್ರಕರಣವನ್ನು ದಾಖಲಿಸಿ ಬಂಧಿಸಲಾಗಿದೆ. ಪುರ್ಕಾಯಸ್ಥ ಮತ್ತು ನ್ಯೂಸ್‌ಕ್ಲಿಕ್ ಸುದ್ದಿ ಪೋರ್ಟಲ್‌ನ ಹೆಚ್‌ಆರ್‌ ಅಮಿತ್ ಚಕ್ರವರ್ತಿ ವಿರುದ್ಧದ ಎಫ್‌ಐಆರ್‌ನಲ್ಲಿ ಸೆಕ್ಷನ್ 13 (ಕಾನೂನುಬಾಹಿರ ಚಟುವಟಿಕೆಗಳು), 16 (ಭಯೋತ್ಪಾದನಾ ಕೃತ್ಯ), 17 (ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹಿಸುವುದು), 18 (ಪಿತೂರಿ) ಮತ್ತು ಯುಎಪಿಎ ಜೊತೆಗೆ ಐಪಿಸಿ ಸೆಕ್ಷನ್ 153ಎ (ವಿವಿಧ ಗುಂಪಿನ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 120 ಬಿ (ಅಪರಾಧ ಪಿತೂರಿ) ಆರೋಪವನ್ನು ಹೊರಿಸಲಾಗಿದೆ.

ಇದಲ್ಲದೆ ಮಾಧ್ಯಮದ ವಿರುದ್ಧ ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆಯನ್ನು ನೇಹಾ ದೀಕ್ಷಿತ್ ಮತ್ತು ಪರಂಜಾಯ್ ಗುಹಾ ಠಾಕುರ್ತಾ ಸೇರಿದಂತೆ ಹಲವಾರು ಪತ್ರಕರ್ತರ ವಿರುದ್ಧ ಕೂಡ ಬಳಸಲಾಗಿದೆ.

ಮಾನವ ಹಕ್ಕುಗಳ ಕಾರ್ಯಕರ್ತರು, ವಕೀಲರು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಬುಡಕಟ್ಟು ಜನಾಂಗದವರ ಮೇಲೆ ಕಳೆದ ಕೆಲವು ವರ್ಷಗಳಿಂದ ಯುಎಪಿಎಯನ್ನು ನಿರ್ದಾಕ್ಷಿಣ್ಯವಾಗಿ ಬಳಸಿರುವುದು ಕಂಡು ಬಂದಿದೆ. ಇದಲ್ಲದೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಸಾರ್ವಜನಿಕ ಸುರಕ್ಷತಾ ಕಾಯಿದೆ ಮತ್ತು ಛತ್ತೀಸ್‌ಗಢ ಜನ್ ಸುರಕ್ಷಾ ಅಧಿನಿಯಮ್, ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ನಿಬಂಧನೆಗಳಂತಹ ಇತರ ಕಠೋರ ನಿಯಮಗಳನ್ನು  ಕೂಡ ಪತ್ರಕರ್ತರ ಮೇಲೆ ವಿಧಿಸಲಾಗಿದೆ.

ಫ್ರೀ ಸ್ಪೀಚ್ ಕಲೆಕ್ಟಿವ್‌ನ ಅಧ್ಯಯನದ ಪ್ರಕಾರ 2010-20ರವರೆಗೆ ಭಾರತದಲ್ಲಿ 154 ಪತ್ರಕರ್ತರನ್ನು ಬಂಧಿಸಲಾಗಿದೆ. ವಿಚಾರಣೆಗೆ ಒಳಪಡಿಸಲಾಗಿದೆ ಅಥವಾ ಅವರ ವೃತ್ತಿಪರ ಕೆಲಸಕ್ಕಾಗಿ ಅವರಿಗೆ ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿದೆ. ಇದರಲ್ಲಿ 40 ಪ್ರತಿಶತ 2020ರಲ್ಲಿ ನಡೆದಿದೆ ಎಂದು ತಿಳಿಸಿದೆ. ಇದಲ್ಲದೆ 9 ವಿದೇಶಿ ಪತ್ರಕರ್ತರು ಗಡೀಪಾರು, ಬಂಧನ, ಭಾರತಕ್ಕೆ ಪ್ರವೇಶವನ್ನು ನಿರಾಕರಣೆ ತೊಡಕುಗಳನ್ನು ಎದುರಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪತ್ರಕರ್ತರು ಸುದ್ದಿ ಮತ್ತು ಮಾಹಿತಿಯ ಸಂದೇಶವಾಹಕರು. ಅವರನ್ನು ಮೌನಗೊಳಿಸುವುದು ಅವರ ವರದಿಗಾರಿಕೆಯನ್ನು ಮೌನಗೊಳಿಸಿದಂತೆ. ಇದರಿಂದ ಯಾವುದೇ ಭಯವಿಲ್ಲದೆ ಮಾಹಿತಿಯನ್ನು ಪಡೆಯುವ ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕಿಗೆ ಧಕ್ಕೆಯಾಗುತ್ತದೆ.

ಭಾರತದಲ್ಲಿ UAPA ಅಡಿಯಲ್ಲಿ ಪತ್ರಕರ್ತರ ಮೇಲೆ ದಾಖಲಾದ ಪ್ರಕರಣಗಳು 

ಪತ್ರಕರ್ತರ ಮೇಲೆ ಪ್ರಸ್ತುತ UAPA ಅಡಿಯಲ್ಲಿ ದಾಖಲಾಗಿರುವ ಪ್ರಕರಣ :16
ಯುಎಪಿಎಯಡಿ ಬಂಧಿತ ಪತ್ರಕರ್ತರು:07
ಯುಎಪಿಎಯಡಿ ಜಾಮೀನಿನ ಮೇಲೆ ಇರುವ ಪತ್ರಕರ್ತರು:08
ಯುಎಪಿಎಯಡಿ ಆರೋಪಿತ ಬಂಧನವಾಗದ ಪತ್ರಕರ್ತರ  ಸಂಖ್ಯೆ:01
ಯುಎಪಿಎಯಡಿ ಖುಲಾಸೆಗೊಂಡ ಪತ್ರಕರ್ತರು:01
ಯುಎಪಿಎಯಿಂದ ಮುಕ್ತಗೊಂಡ ಪತ್ರಕರ್ತರು:01

ಬಂಧಿತ, ಪೊಲೀಸ್ ಕಸ್ಟಡಿಯಲ್ಲಿ ಇರುವವರು
1. ಪ್ರಬೀರ್ ಪುರ್ಕಾಯಸ್ಥ, ಸಂಪಾದಕ, ನ್ಯೂಸ್‌ಕ್ಲಿಕ್ – 03.10.2023, ನವದೆಹಲಿ

ಜೈಲಿನಲ್ಲಿರುವವರು
1. ಆಸಿಫ್ ಸುಲ್ತಾನ್, ವರದಿಗಾರರು ಕಾಶ್ಮೀರ – 27.08.2018ರಿಂದ ಜೈಲಿನಲ್ಲಿದ್ದಾರೆ.
2. ಫಹಾದ್ ಶಾ, ಸಂಪಾದಕರು, ಕಾಶ್ಮೀರವಾಲಾ – 04.02.2022ರಲ್ಲಿ ಬಂಧನವಾಗಿದೆ. ಇವರು  ಪುಲ್ವಾಮಾದವರು. 
3. ಸಜ್ಜದ್ ಗುಲ್, ‘ದಿ ಕಾಶ್ಮೀರ್ ವಾಲಾ’ದ ಟ್ರೈನಿ ವರದಿಗಾರರು 

4. ರೂಪೇಶ್ ಕುಮಾರ್ ಪತ್ರಕರ್ತರು ರಾಮಗಢ ಜಿಲ್ಲೆ, ಜಾರ್ಖಂಡ್
5. ಇರ್ಫಾನ್ ಮೆಹ್ರಾಜ್, ಸಂಪಾದಕ, ವಂದೇ ಮ್ಯಾಗಜೀನ್ ಶ್ರೀನಗರ, ಜಮ್ಮು ಮತ್ತು ಕಾಶ್ಮೀರ

ಗೃಹ ಬಂಧನದಲ್ಲಿರುವವರು

1. ಗೌತಮ್ ನವ್ಲಾಖಾ, ಬರಹಗಾರರು, ಸಲಹಾ ಸಂಪಾದಕರು

ಜಾಮೀನಿನ ಮೇಲೆ ಇರುವವರು (ಬಂಧನ ದಿನಾಂಕದ ಆದೇಶದ ಪ್ರಕಾರ)

1. ಸೀಮಾ ಆಜಾದ್: ಇವರು ‘ದಸ್ತಕ್‌’ನ  ಸಂಪಾದಕರು  ಉತ್ತರ ಪ್ರದೇಶದ ಪ್ರಯಾಗ್ರಾಜ್‌ನವರು ಇವರನ್ನು  ಫೆಬ್ರವರಿ 2010ರಲ್ಲಿ ಬಂಧಿಸಲಾಗಿತ್ತು. ಆಗಸ್ಟ್ 2012 ರಲ್ಲಿ ಜಾಮೀನು ನೀಡಲಾಯಿತು.

2. ವಿಶ್ವ ವಿಜಯ್: ದಸ್ತಕ್‌ ಸಂಪಾದಕರು, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 2010 ಬಂಧಿಸಲಾಯಿತು ಮತ್ತು ಆಗಸ್ಟ್ 2012ರಲ್ಲಿ ಜಾಮೀನು ನೀಡಲಾಯಿತು.

3. ಕೆ ಕೆ ಶಾಹಿನಾ: ಔಟ್‌ಲುಕ್ ಪತ್ರಕರ್ತೆ, ಡಿಸೆಂಬರ್ 2010 ರಲ್ಲಿ ದಾಖಲಾದ ಪ್ರಕರಣ. ಜುಲೈ 2011 ರಲ್ಲಿ ನಿರೀಕ್ಷಣಾ ಜಾಮೀನು ಮಂಜೂರು.

4. ಸಿದ್ದಿಕ್ ಕಪ್ಪನ್; ಪತ್ರಕರ್ತ, ದೆಹಲಿಯಲ್ಲಿ 05.10.2020 ರಂದು ಬಂಧಿಸಲಾಯಿತು, 09.09.2023 ರಂದು UAPA ಪ್ರಕರಣದಲ್ಲಿ ಮತ್ತು 23.12.2022 ರಂದು PMLA ಪ್ರಕರಣದಲ್ಲಿ ಜಾಮೀನು ನೀಡಲಾಯಿತು.

5. ಪಾವೊಜೆಲ್ ಚಾವೊಬಾ; ದಿ ಫ್ರಾಂಟಿಯರ್ ಮಣಿಪುರದ ಕಾರ್ಯನಿರ್ವಾಹಕ ಸಂಪಾದಕ, ಇಂಫಾಲ್‌ನಲ್ಲಿ 17.01.2021 ಬಂಧಿಸಲಾಯಿತು, 18.01.2021 ಜಾಮೀನು ಮಂಜೂರು ಮಾಡಲಾಯಿತು.

6. ದಿ ಫ್ರಾಂಟಿಯರ್ ಮಣಿಪುರ ಇಂಫಾಲ್‌ನ ಸಂಪಾದಕರಾದ ಧೀರೇನ್ ಸದೋಕ್‌ಪಂ ಅವರನ್ನು 17.01.2021 ಬಂಧನ ಮಾಡಲಾಗಿತ್ತು. ಮತ್ತು 18.01.2021ರಲ್ಲಿ ಜಾಮೀನು ನೀಡಲಾಗಿತ್ತು.

7. ಶ್ಯಾಮ್ ಮೀರಾ ಸಿಂಗ್:  ಪತ್ರಕರ್ತ, ನವದೆಹಲಿಯಲ್ಲಿ 10.11. 2021ರಲ್ಲಿ ಬಂಧನ  18.11.2021 ರಂದು ನಿರೀಕ್ಷಣಾ ಜಾಮೀನು ಪಡೆದರು.

8. ಮನನ್ ದಾರ್: ಶ್ರೀನಗರದ ಫೋಟೋ ಜರ್ನಲಿಸ್ಟ್,  22.10.2021ರಂದು ಇವರ ಬಂಧನ ನಡೆದಿದ್ದು, 04.01.2023 ರಂದು ಜಾಮೀನಿನ ಮೂಲಕ ಬಿಡುಗಡೆ

 ಯುಎಪಿಯಡಿ ಪ್ರಕರಣ ದಾಖಲಾಗಿ ಬಂಧನವಾಗದೆ ಇರುವವರು

  1. ಶ್ರೀನಗರದ ಫೋಟೋ ಜರ್ನಲಿಸ್ಟ್ ಮಸರತ್ ಜಹ್ರಾ ಅವರ ಮೇಲೆ 18.04.2020 ರಂದು ಪ್ರಕರಣ ದಾಖಲಿಸಲಾಗಿದೆ. ಆದರೆ ಬಂಧನ ನಡೆದಿಲ್ಲ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...