Homeಮುಖಪುಟ‘ಮರೆತೇನೆಂದರೂ ಮರೆಯಲಿ ಹೆಂಗೆ’ - ಹೋರಾಟಗಾರ ಜಿ. ರಾಜಶೇಖರ ಅವರಿಗೆ ನುಡಿನಮನ

‘ಮರೆತೇನೆಂದರೂ ಮರೆಯಲಿ ಹೆಂಗೆ’ – ಹೋರಾಟಗಾರ ಜಿ. ರಾಜಶೇಖರ ಅವರಿಗೆ ನುಡಿನಮನ

- Advertisement -
- Advertisement -

ಅಜ್ಞಾತವಾಸದಲ್ಲಿದ್ದರೂ ಆಗಾಗ ಕೇಳುತ್ತಲೇ ಇದ್ದ ಹೆಸರು ಜಿ. ರಾಜಶೇಖರ್. ಕರಾವಳಿ ಕೋಮುವಾದಿ ಜ್ವಾಲೆಗೆ ಸಿಕ್ಕಿತ್ತು. ರಥಬೀದಿ ಗೆಳೆಯರು ಬಕೆಟ್ ಹಿಡಿದು ಬೆಂಕಿ ನಂದಿಸಲು ಹೆಣಗುತ್ತಿದ್ದರು. ನಕ್ಕು ಸುಮ್ಮನಿದ್ದವರ ಮುಂದೆ ಈ ಸಣ್ಣ ಫೈರ್ ಬ್ರಿಗೇಡ್ ನಮ್ಮ ಮನಕ್ಕೆ ಎಂಥದೋ ಹಿತ ನೀಡುತ್ತಿತ್ತು. ತುಂಬಾ ವರ್ಷಗಳ ಕಾಲ ಅವರ ಬಗ್ಗೆ ಬಹಳ ಕೇಳಿದೆ, ಸ್ವಲ್ಪ ಓದಿದೆ. ಜೀವನದಲ್ಲಿ ಏನೇನೋ ನಡೆದುಹೋಯಿತು.

ಒಂದು ವಿಶೇಷ ಸಂದರ್ಭದಲ್ಲಿ ಮುಖ್ಯವಾಹಿನಿಗೆ ಮರಳುವ ಅವಕಾಶವೂ ದೊರೆಯಿತು. ಪ್ರೀತಿಯ ಸಮಾಜ ಸ್ವಾಗತಿಸಿತ್ತು. ಆದರೆ ಕಾನೂನು ಪ್ರಕ್ರಿಯೆ ಬಾಕಿ ಉಳಿದಿತ್ತು. ಉಡುಪಿಯಲ್ಲಿ UAPA ಒಳಗೊಂಡಂತೆ ನನ್ನ ಮೇಲೆ ಹಲವು ಕೇಸುಗಳಿದ್ದವು. ಬೇಲ್ ಪಡೆಯಲು ಜಾಮೀನು ಬೇಕಿತ್ತು. ನಕ್ಸಲೈಟನಿಗೆ ಜಾಮೀನು ನೀಡುವುದು ಸುಲಭವಲ್ಲ. ವಿಶ್ವಾಸ, ಗುಂಡಿಗೆ ಎರಡೂ ಇರಬೇಕಿತ್ತು. ಆದರೆ ರಾಜಶೇಖರರಿಗೆ ಅವ್ಯಾವುವೂ ಅಗತ್ಯವಿರಲಿಲ್ಲ. ಕನ್ವಿನ್ಸ್ ಮಾಡೋಣ ಎಂದು ಮಿತ್ರರು ಹೋದರಂತೆ. ಆದರೆ ಪೀಠಿಕೆ ಹಾಕುವ ಅಗತ್ಯವೂ ಬೀಳಲಿಲ್ಲವಂತೆ. “ಸರಿ ಕೊಡೋಣಬಿಡಿ, ಅದಕ್ಕೇನು? ನಾನು ಕೋರ್ಟಿಗೆ ಏನೆಲ್ಲಾ ತರಬೇಕು?” ಎಂದು ಕೇಳಿದರಂತೆ. ಮನುಷ್ಯರನ್ನು ನಂಬಲು‌ ಮನುಷ್ಯರಾಗಿದ್ದರೆ ಸಾಕು ಎಂಬ ಸಹಜ ವ್ಯಕ್ತಿತ್ವ ನಮ್ಮ ಸಾರ್‌ದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಎಲ್ಲಿ ಇದು ಸಾಲಲ್ಲ ಎಂದು ರಿಜೆಕ್ಟ್ ಮಾಡಿಬಿಡ್ತಾರೋ ಅಂತ ಲಾಯರ ಬಳಿ ಹಲವಾರು ಬಾರಿ ವಿಚಾರಿಸಿ, ಓಡಾಡಿ ಡಾಕ್ಯುಮೆಂಟ್ ತೆಗೆಸಿ, ಡಬಲ್ ಡಬಲ್ ಫೋಟೋಗಳನ್ನು ತೆಗೆದುಕೊಂಡು, ತಮ್ಮ ಕೊಡೆಯೊಂದಿಗೆ ನಾವು ಬರುವ ಮುನ್ನವೇ ಕೋರ್ಟಲ್ಲಿ ಬಂದು ಕಾಯುತ್ತಿದ್ದರು. ನೋಡಿ “ಮತ್ತೆ…” ಎಂದರು….ಜೀವಮಾನದ ಒಡನಾಡಿ ಎಂಬಂತೆ. ನಾನು ಅವರನ್ನು ಮೊದಲ ಬಾರಿ ಕಂಡದ್ದು ಆ ಕ್ಷಣದಲ್ಲೆ.

ನಾನು ಕಟಕಟೆಯಲ್ಲಿ ನಿಂತಿದ್ದೆ. ಅವರು ಹೊರಗಿದ್ದರು. ಕಾರಕೂನ ಅವರ ಹೆಸರು ಕೂಗಿದೊಡನೆ ಲಗುಬಗೆಯಿಂದ ಒಳಬಂದವರೇ ಸೀದಾ ಕಟಕಟೆಯಲ್ಲಿ ಬಂದು ನನ್ನ ಜೊತೆ ನಿಂತರು. ಅಲ್ಲಿ ಬೇಡ ಇಲ್ಲಿ ಬನ್ನಿ ಎಂದು ವಕೀಲರು ಅವರನ್ನು ಜಡ್ಜ್ ಬಳಿಗೆ ಕರೆದೊಯ್ದರು. ಹೊರ ಬಂದರೆ ಶಿವಸುಂದರದು ಒಂದೇ ಸಮ ನಗು. ಸಹ ಆರೋಪಿ ರಾಜಶೇಖರ್ ಎಂದು ಗೇಲಿ ಮಾಡಿದ್ದರು. ಮುಗ್ದ ರಾಜಶೇಖರರಿಗೆ ಅದರಿಂದ ಮುಜುಗರವೂ ಅನಿಸಲಿಲ್ಲ. ಸಹಜವಾಗಿಯೇ ಅವರು ನಾನು ಜೊತೆಗಿದ್ದೇನೆ ಎಂದು ನನ್ನ ಜೊತೆ ಕಟಕಟೆ ಹಂಚಿಕೊಂಡಿದ್ದರು.

ಇದನ್ನೂ ಓದಿ: ಹಿರಿಯ ಚಿಂತಕ, ಜನಪರ ಹೋರಾಟಗಾರ ಜಿ. ರಾಜಶೇಖರ (75) ನಿಧನ

ಅಂದಿನಿಂದ ನನ್ನ ಕೇಸ್ ಮುಗಿಯುವ ತನಕ ನಾನು ತಪ್ಪಿಸಿದರೂ ಅವರು ಕೋರ್ಟಿಗೆ ತಪ್ಪಿಸಲಿಲ್ಲ. ಕೋರ್ಟಿಗೆ ಅವರು ಬೇಕಿರಲಿಲ್ಲ. ಆದರೆ ಅವರಿಗೆ ಕೋರ್ಟಿಗೆ ಬರುವುದು ಮುಖ್ಯವಿತ್ತು. ಕೋರ್ಟಿನಲ್ಲಿ ನನಗೆ ಒಂಟಿತನ ಕಾಡಬಾರದು ಎಂಬುದು ಅವರ ಕಾಳಜಿಯಾಗಿತ್ತು. ಪ್ರತಿ ಡೇಟಿಗೆ ಬಂದು ಮಾತನಾಡಿಸಿ, ಕ್ಯಾಂಟೀನಿಗೆ ಕರೆದುಕೊಂಡು ಹೋಗಿ ಮಂಗಳೂರು ಬಜಿ, ಎಳ್ಳಿನ ಪಾನಕ ಕೊಡಿಸಿ, “ಬರ್ತೇನೆ..” ಅಂತ ಹೊರಡುತ್ತಿದ್ದರು.

ನನ್ನ ಕೇಸಿನ ವಿಚಾರಣೆ ಮುಗಿದು ತೀರ್ಪಿನ ದಿನ ಬರುವ ಹೊತ್ತಿಗೆ ಅವರಿಗೆ ಪಾರ್ಕಿನ್ಸನ್ ಆಗಿತ್ತು, ದೇಹ ಕೃಷವಾಗಿತ್ತು. ಆದರೂ ಕೋರ್ಟಿಗೆ ಬಂದು ಮತ್ತೊಮ್ಮೆ ಜಾಮೀನು ಧೃಡೀಕರಿಸಬೇಕಿತ್ತು. ಮಗ ವಿಷ್ಣುವಿಗೆ ಚಿಂತೆ. ಕೋರ್ಟಿನ ಮೆಟ್ಟಿಲು ಹತ್ತಿಸಿ ಕರೆತರುವುದು ಹೇಗೆ? ಜಡ್ಜ್ ಕೇಳುವ ಪ್ರಶ್ನೆಗೆ ಉತ್ತರಿಸುವಂತೆ ಮಾಡುವುದು ಹೇಗೆ? ಆಟೋದಲ್ಲಿ ಹುಶಾರಾಗಿ ಕರೆತಂದರು. ರಾಜಶೇಖರರ ದೇಹ ನಡುಗುತ್ತಿದ್ದರೂ ಮುಖ ಎಂದಿನಂತೆ ನಿಶ್ಚಲವಾಗಿತ್ತು.

ಜಡ್ಜ್ ಕೇಳಿದರು
“ಇವರ್ಯಾರು ಗೊತ್ತಾ?”
“ಗೊತ್ತು”.
“ಇವರು ನಿಮಗೆ ಏನಾಗಬೇಕು?”
“ನನ್ನ ಸ್ನೇಹಿತರು”
“ಇವರಿಗೆ ನೀವು ಶ್ಯೂರಿಟಿ ಕೊಡ್ತೀರಾ?”
“ಕೊಡ್ತೇನೆ”

ಕೇಸ್ ಖುಲಾಸ್ ಆಯಿತು. ನಾನು ಕಾನೂನಾತ್ಮಕವಾಗಿಯೂ ಬಿಡುಗಡೆಗೊಂಡೆ. ಎಂದಿನಂತೆ “ಬರ್ಲಾ…” ಎಂದು ವಿಷ್ಣು ಕೈ ಹಿಡಿದು ಹೊರಟರು.

ಇದನ್ನೂ ಓದಿ: ಗಾಂಧೀಜಿಯವರ ಪುಣ್ಯ ಸ್ಮರಣೆ : ಬಾಬಾ ಸಾಹೇಬರಿಗೆ ಕೃತಜ್ಞತೆ..- ಜಿ.ರಾಜಶೇಖರ್‌

ಮತ್ತೆ ಕಂಡದ್ದು ಇತ್ತೀಚಿನ ಸಹಬಾಳ್ವೆ ಸಮಯದಲ್ಲೆ. ನಾನು, ಅಶೋಕ್, ದಿನಕರ ಬೇಂಗ್ರೆ ಮನೆಗೆ ಹೋದೆವು. ಗುರುಗಳು ಬದಲಾಗೇ ಇಲ್ಲ. ಮುಖದಲ್ಲಿ ಅದೇ ದೃಡತೆ, ಮಾತಿನಲ್ಲಿ ಅದೇ ಲವಲವಿಕೆ. ಭಾವನೆ ಕಾಣದ ಮುಖದಿಂದ ನಿಲ್ಲದ ನಗೆ ಚಟಾಕಿ. ಗೆಳೆಯರು‌ ಮನೆಗೆ ಬಂದಿದ್ದಾರೆ ಎಂದು ಇನ್ನಷ್ಟು ಹುರುಪು. ವಿಷ್ಣು ವಿಡಿಯೋ ಮಾಡತೊಡಗಿದರು. ಮಗನ ಕೆಣಕುವ ಪ್ರಶ್ನೆಗಳಿಗೆ ಅಪ್ಪನ ಖಚಿತತೆಯ ಉತ್ತರ.

“ಮತ್ತೆ ಏನ್ಸಮಾಚಾರ”
“ಮೇ 7 ಕ್ಕೆ ಕಾರ್ಯಕ್ರಮ”
“ಯಾವ ಕಾರ್ಯಕ್ರಮ?”
“ಕೋಮು ಸೌಹಾರ್ದದ್ದು”
“ನೀವು ಹೋಗ್ತೀರಾ?”
“ಹಾಂ ಹೋಗ್ತೇನೆ….ನಾನು ಹೋಗದಿದ್ದರೆ ಆಗಲ್ಲ”.

ಇದು ನಮ್ಮ ರಾಜಶೇಖರ್ ಸಾರ್…

ನನ್ನ ಜೀವನದಲ್ಲಿ ಅನಿರೀಕ್ಷಿತ ಆಪದ್ಬಾಂಧವರಾಗಿ ಬಂದ ಹಿರಿ ಜೀವ ಅದು. ಅವರ ಆತ್ಮೀಯತೆ, ಅಚಲತೆ, ಸರಳತೆ, ಸಹಜತೆ, ಕನಸು, ವಿಶ್ವಾಸ ಎಲ್ಲವೂ ಮರೆಯಲಾಗದಂಹವು. ಅಧ್ಯಾಯನ ಯೋಗ್ಯವಾದಂತಹವು. ನಮ್ಮ ಅರಿವಿಗೇ ಬರದಂತೆ ನಮ್ಮ ವ್ಯಕ್ತಿತ್ವವನ್ನು ಪ್ರಭಾವಿಸುವಂತಹವು.

ಇದನ್ನೂ ಓದಿ: ಜಿ ರಾಜಶೇಖರ್‌ರವರಿಗೆ ಎಪ್ಪತ್ತೈದು; ರಾಜಶೇಖರರ ‘ತಿರುಕನ ಕನಸು’

ಹಾಗಾಗಿಯೇ ನಾಡಿನ ಪಾಲಿಗಷ್ಟೇ ಅಲ್ಲ ನನ್ನ ಪಾಲಿಗೆ ರಾಜಶೇಖರರು ಅಜರಾಮರರು. ಅವರನ್ನು ಮರೆತೇನೆಂದರೂ ಮರೆಯಲು ಅಸಾಧ್ಯವಾದವರು.

ಉಡುಪಿಗೆ ಬಂದಾಗೆಲ್ಲಾ ಸಿಗ್ತೇನೆ ಸಾರ್…ಒಂದು ಗಳಿಗೆ ಸಿಕ್ಕು ಎಳ್ಳು ಪಾನಕ ಕುಡಿಸಿ ಸಾಕು.

ನಿಮ್ಮ ರುಣಿ
ನೂರ್ ಶ್ರೀಧರ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋರ್ಟ್ ರಾಜಕೀಯ ಅಖಾಡ ಅಲ್ಲ: ಸಿಎಂ ವಿಜಯ್ ವಿರುದ್ಧ ಅರ್ಜಿ ಸಲ್ಲಿಸಿದ್ದ ಡಿಎಂಕೆಗೆ ಸುಪ್ರೀಂ ತರಾಟೆ

ತಮಿಳುನಾಡಿನ ಕರೂರ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡದಂತೆ ಮುಖ್ಯಮಂತ್ರಿ ವಿಜಯ್ ಅವರಿಗೆ ನಿರ್ಬಂಧ ಹೇರಬೇಕೆಂದು ಕೋರಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಜನರಿಂದ...

ಸುರಂಗ ರಸ್ತೆ ಕಾಮಗಾರಿ ವೇಳೆ ವಯನಾಡಿನಲ್ಲಿ ಭೂಕುಸಿತ: ಜನರು ಜೀವ ಉಳಿಸಿಕೊಳ್ಳಲು ಓಡಿದ ಭಯಾನಕ ದೃಶ್ಯ ಸೆರೆ

ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿಯಲ್ಲಿ ಮಂಗಳವಾರ (ಇಂದು) ಭೀಕರ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಾಯಗೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದ್ದು, ಈ...

ಒಟಿಟಿಗೆ ಬಂದ ಎರಡೇ ದಿನಕ್ಕೆ ದಿಲ್ಜಿತ್ ದೋಸಾಂಜ್ ನಟನೆಯ ‘ಸಟ್ಲಜ್’ ಸಿನಿಮಾ ಔಟ್! ಜೀ5 ವಿರುದ್ಧ ಆಕ್ರೋಶ, ಕಾನೂನು ಹೋರಾಟದ ಭರವಸೆ

ತೀವ್ರ ವಿವಾದ ಹಾಗೂ ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗದ ನಡುವೆಯೂ ಕೊನೆಗೂ ಒಟಿಟಿ ಪರದೆಯ ಮೇಲೆ ಬಿಡುಗಡೆಯಾಗಿದ್ದ ಖ್ಯಾತ ನಟ ದಿಲ್ಜಿತ್ ದೋಸಾಂಜ್ ಅಭಿನಯದ 'ಸಟ್ಲಜ್' (ಮೂಲ ಶೀರ್ಷಿಕೆ: ಪಂಜಾಬ್ 95) ಚಿತ್ರವನ್ನು...

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

ಹರಿಯಾಣದಲ್ಲಿ "ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ...

ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಸಾಮೂಹಿಕ ಅಕ್ರಮ’ ಆರೋಪ: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಎನ್‌ಡಿಎ ನಿಯೋಗ

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಸಾಂಸ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು...

SIR: ಮತದಾರರ ಹಕ್ಕು ರಕ್ಷಣೆಗೆ ಕಣಕ್ಕಿಳಿದ ‘ನಾಗರಿಕ ಮತ ಕಾವಲು ಸಮಿತಿ’

ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್‌ಐಆರ್...

ಮೋಹನ್‌ಲಾಲ್ ‘ದಂತ’ ಕಥೆ: ಅರಣ್ಯ ಇಲಾಖೆ ಮುಂದೆ 10 ಆನೆ ದಂತ, 13 ಮೂರ್ತಿಗಳ ಅಚ್ಚರಿಯ ಘೋಷಣೆ!

ನಟ ಮೋಹನ್‌ಲಾಲ್ ಅವರು ತಾವೇ ಕಾನೂನುಬಾಹಿರವಾಗಿ ವನ್ಯಜೀವಿ ವಸ್ತುಗಳನ್ನು ಹೊಂದಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದರೂ, ತಮ್ಮ ಬಳಿ 10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳು ಇರುವುದಾಗಿ ಕೇರಳ ಅರಣ್ಯ...

ಅಯೋಧ್ಯೆ ರಾಮಮಂದಿರ ಹಗರಣ: ‘ಕದ್ದ ಹಣ’ ಹಂಚಿಕೆಯ ಮೊಬೈಲ್ ಚಾಟ್‌ಗಳು ಬಹಿರಂಗ; ತೀವ್ರಗೊಂಡ ತನಿಖೆ

ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ತನಿಖೆ ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳ ಮೊಬೈಲ್ ಫೋನ್‌ಗಳ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಆರೋಪ : ಪ. ಬಂಗಾಳದ ಬಾರುಯಿಪುರದಲ್ಲಿ ಹಿಂಸಾಚಾರ ; ಶಂಕಿತ ಆರೋಪಿಯ ಗುಂಪು ಹತ್ಯೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ...

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...