Homeಮುಖಪುಟ‘ಮರೆತೇನೆಂದರೂ ಮರೆಯಲಿ ಹೆಂಗೆ’ - ಹೋರಾಟಗಾರ ಜಿ. ರಾಜಶೇಖರ ಅವರಿಗೆ ನುಡಿನಮನ

‘ಮರೆತೇನೆಂದರೂ ಮರೆಯಲಿ ಹೆಂಗೆ’ – ಹೋರಾಟಗಾರ ಜಿ. ರಾಜಶೇಖರ ಅವರಿಗೆ ನುಡಿನಮನ

- Advertisement -
- Advertisement -

ಅಜ್ಞಾತವಾಸದಲ್ಲಿದ್ದರೂ ಆಗಾಗ ಕೇಳುತ್ತಲೇ ಇದ್ದ ಹೆಸರು ಜಿ. ರಾಜಶೇಖರ್. ಕರಾವಳಿ ಕೋಮುವಾದಿ ಜ್ವಾಲೆಗೆ ಸಿಕ್ಕಿತ್ತು. ರಥಬೀದಿ ಗೆಳೆಯರು ಬಕೆಟ್ ಹಿಡಿದು ಬೆಂಕಿ ನಂದಿಸಲು ಹೆಣಗುತ್ತಿದ್ದರು. ನಕ್ಕು ಸುಮ್ಮನಿದ್ದವರ ಮುಂದೆ ಈ ಸಣ್ಣ ಫೈರ್ ಬ್ರಿಗೇಡ್ ನಮ್ಮ ಮನಕ್ಕೆ ಎಂಥದೋ ಹಿತ ನೀಡುತ್ತಿತ್ತು. ತುಂಬಾ ವರ್ಷಗಳ ಕಾಲ ಅವರ ಬಗ್ಗೆ ಬಹಳ ಕೇಳಿದೆ, ಸ್ವಲ್ಪ ಓದಿದೆ. ಜೀವನದಲ್ಲಿ ಏನೇನೋ ನಡೆದುಹೋಯಿತು.

ಒಂದು ವಿಶೇಷ ಸಂದರ್ಭದಲ್ಲಿ ಮುಖ್ಯವಾಹಿನಿಗೆ ಮರಳುವ ಅವಕಾಶವೂ ದೊರೆಯಿತು. ಪ್ರೀತಿಯ ಸಮಾಜ ಸ್ವಾಗತಿಸಿತ್ತು. ಆದರೆ ಕಾನೂನು ಪ್ರಕ್ರಿಯೆ ಬಾಕಿ ಉಳಿದಿತ್ತು. ಉಡುಪಿಯಲ್ಲಿ UAPA ಒಳಗೊಂಡಂತೆ ನನ್ನ ಮೇಲೆ ಹಲವು ಕೇಸುಗಳಿದ್ದವು. ಬೇಲ್ ಪಡೆಯಲು ಜಾಮೀನು ಬೇಕಿತ್ತು. ನಕ್ಸಲೈಟನಿಗೆ ಜಾಮೀನು ನೀಡುವುದು ಸುಲಭವಲ್ಲ. ವಿಶ್ವಾಸ, ಗುಂಡಿಗೆ ಎರಡೂ ಇರಬೇಕಿತ್ತು. ಆದರೆ ರಾಜಶೇಖರರಿಗೆ ಅವ್ಯಾವುವೂ ಅಗತ್ಯವಿರಲಿಲ್ಲ. ಕನ್ವಿನ್ಸ್ ಮಾಡೋಣ ಎಂದು ಮಿತ್ರರು ಹೋದರಂತೆ. ಆದರೆ ಪೀಠಿಕೆ ಹಾಕುವ ಅಗತ್ಯವೂ ಬೀಳಲಿಲ್ಲವಂತೆ. “ಸರಿ ಕೊಡೋಣಬಿಡಿ, ಅದಕ್ಕೇನು? ನಾನು ಕೋರ್ಟಿಗೆ ಏನೆಲ್ಲಾ ತರಬೇಕು?” ಎಂದು ಕೇಳಿದರಂತೆ. ಮನುಷ್ಯರನ್ನು ನಂಬಲು‌ ಮನುಷ್ಯರಾಗಿದ್ದರೆ ಸಾಕು ಎಂಬ ಸಹಜ ವ್ಯಕ್ತಿತ್ವ ನಮ್ಮ ಸಾರ್‌ದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಎಲ್ಲಿ ಇದು ಸಾಲಲ್ಲ ಎಂದು ರಿಜೆಕ್ಟ್ ಮಾಡಿಬಿಡ್ತಾರೋ ಅಂತ ಲಾಯರ ಬಳಿ ಹಲವಾರು ಬಾರಿ ವಿಚಾರಿಸಿ, ಓಡಾಡಿ ಡಾಕ್ಯುಮೆಂಟ್ ತೆಗೆಸಿ, ಡಬಲ್ ಡಬಲ್ ಫೋಟೋಗಳನ್ನು ತೆಗೆದುಕೊಂಡು, ತಮ್ಮ ಕೊಡೆಯೊಂದಿಗೆ ನಾವು ಬರುವ ಮುನ್ನವೇ ಕೋರ್ಟಲ್ಲಿ ಬಂದು ಕಾಯುತ್ತಿದ್ದರು. ನೋಡಿ “ಮತ್ತೆ…” ಎಂದರು….ಜೀವಮಾನದ ಒಡನಾಡಿ ಎಂಬಂತೆ. ನಾನು ಅವರನ್ನು ಮೊದಲ ಬಾರಿ ಕಂಡದ್ದು ಆ ಕ್ಷಣದಲ್ಲೆ.

ನಾನು ಕಟಕಟೆಯಲ್ಲಿ ನಿಂತಿದ್ದೆ. ಅವರು ಹೊರಗಿದ್ದರು. ಕಾರಕೂನ ಅವರ ಹೆಸರು ಕೂಗಿದೊಡನೆ ಲಗುಬಗೆಯಿಂದ ಒಳಬಂದವರೇ ಸೀದಾ ಕಟಕಟೆಯಲ್ಲಿ ಬಂದು ನನ್ನ ಜೊತೆ ನಿಂತರು. ಅಲ್ಲಿ ಬೇಡ ಇಲ್ಲಿ ಬನ್ನಿ ಎಂದು ವಕೀಲರು ಅವರನ್ನು ಜಡ್ಜ್ ಬಳಿಗೆ ಕರೆದೊಯ್ದರು. ಹೊರ ಬಂದರೆ ಶಿವಸುಂದರದು ಒಂದೇ ಸಮ ನಗು. ಸಹ ಆರೋಪಿ ರಾಜಶೇಖರ್ ಎಂದು ಗೇಲಿ ಮಾಡಿದ್ದರು. ಮುಗ್ದ ರಾಜಶೇಖರರಿಗೆ ಅದರಿಂದ ಮುಜುಗರವೂ ಅನಿಸಲಿಲ್ಲ. ಸಹಜವಾಗಿಯೇ ಅವರು ನಾನು ಜೊತೆಗಿದ್ದೇನೆ ಎಂದು ನನ್ನ ಜೊತೆ ಕಟಕಟೆ ಹಂಚಿಕೊಂಡಿದ್ದರು.

ಇದನ್ನೂ ಓದಿ: ಹಿರಿಯ ಚಿಂತಕ, ಜನಪರ ಹೋರಾಟಗಾರ ಜಿ. ರಾಜಶೇಖರ (75) ನಿಧನ

ಅಂದಿನಿಂದ ನನ್ನ ಕೇಸ್ ಮುಗಿಯುವ ತನಕ ನಾನು ತಪ್ಪಿಸಿದರೂ ಅವರು ಕೋರ್ಟಿಗೆ ತಪ್ಪಿಸಲಿಲ್ಲ. ಕೋರ್ಟಿಗೆ ಅವರು ಬೇಕಿರಲಿಲ್ಲ. ಆದರೆ ಅವರಿಗೆ ಕೋರ್ಟಿಗೆ ಬರುವುದು ಮುಖ್ಯವಿತ್ತು. ಕೋರ್ಟಿನಲ್ಲಿ ನನಗೆ ಒಂಟಿತನ ಕಾಡಬಾರದು ಎಂಬುದು ಅವರ ಕಾಳಜಿಯಾಗಿತ್ತು. ಪ್ರತಿ ಡೇಟಿಗೆ ಬಂದು ಮಾತನಾಡಿಸಿ, ಕ್ಯಾಂಟೀನಿಗೆ ಕರೆದುಕೊಂಡು ಹೋಗಿ ಮಂಗಳೂರು ಬಜಿ, ಎಳ್ಳಿನ ಪಾನಕ ಕೊಡಿಸಿ, “ಬರ್ತೇನೆ..” ಅಂತ ಹೊರಡುತ್ತಿದ್ದರು.

ನನ್ನ ಕೇಸಿನ ವಿಚಾರಣೆ ಮುಗಿದು ತೀರ್ಪಿನ ದಿನ ಬರುವ ಹೊತ್ತಿಗೆ ಅವರಿಗೆ ಪಾರ್ಕಿನ್ಸನ್ ಆಗಿತ್ತು, ದೇಹ ಕೃಷವಾಗಿತ್ತು. ಆದರೂ ಕೋರ್ಟಿಗೆ ಬಂದು ಮತ್ತೊಮ್ಮೆ ಜಾಮೀನು ಧೃಡೀಕರಿಸಬೇಕಿತ್ತು. ಮಗ ವಿಷ್ಣುವಿಗೆ ಚಿಂತೆ. ಕೋರ್ಟಿನ ಮೆಟ್ಟಿಲು ಹತ್ತಿಸಿ ಕರೆತರುವುದು ಹೇಗೆ? ಜಡ್ಜ್ ಕೇಳುವ ಪ್ರಶ್ನೆಗೆ ಉತ್ತರಿಸುವಂತೆ ಮಾಡುವುದು ಹೇಗೆ? ಆಟೋದಲ್ಲಿ ಹುಶಾರಾಗಿ ಕರೆತಂದರು. ರಾಜಶೇಖರರ ದೇಹ ನಡುಗುತ್ತಿದ್ದರೂ ಮುಖ ಎಂದಿನಂತೆ ನಿಶ್ಚಲವಾಗಿತ್ತು.

ಜಡ್ಜ್ ಕೇಳಿದರು
“ಇವರ್ಯಾರು ಗೊತ್ತಾ?”
“ಗೊತ್ತು”.
“ಇವರು ನಿಮಗೆ ಏನಾಗಬೇಕು?”
“ನನ್ನ ಸ್ನೇಹಿತರು”
“ಇವರಿಗೆ ನೀವು ಶ್ಯೂರಿಟಿ ಕೊಡ್ತೀರಾ?”
“ಕೊಡ್ತೇನೆ”

ಕೇಸ್ ಖುಲಾಸ್ ಆಯಿತು. ನಾನು ಕಾನೂನಾತ್ಮಕವಾಗಿಯೂ ಬಿಡುಗಡೆಗೊಂಡೆ. ಎಂದಿನಂತೆ “ಬರ್ಲಾ…” ಎಂದು ವಿಷ್ಣು ಕೈ ಹಿಡಿದು ಹೊರಟರು.

ಇದನ್ನೂ ಓದಿ: ಗಾಂಧೀಜಿಯವರ ಪುಣ್ಯ ಸ್ಮರಣೆ : ಬಾಬಾ ಸಾಹೇಬರಿಗೆ ಕೃತಜ್ಞತೆ..- ಜಿ.ರಾಜಶೇಖರ್‌

ಮತ್ತೆ ಕಂಡದ್ದು ಇತ್ತೀಚಿನ ಸಹಬಾಳ್ವೆ ಸಮಯದಲ್ಲೆ. ನಾನು, ಅಶೋಕ್, ದಿನಕರ ಬೇಂಗ್ರೆ ಮನೆಗೆ ಹೋದೆವು. ಗುರುಗಳು ಬದಲಾಗೇ ಇಲ್ಲ. ಮುಖದಲ್ಲಿ ಅದೇ ದೃಡತೆ, ಮಾತಿನಲ್ಲಿ ಅದೇ ಲವಲವಿಕೆ. ಭಾವನೆ ಕಾಣದ ಮುಖದಿಂದ ನಿಲ್ಲದ ನಗೆ ಚಟಾಕಿ. ಗೆಳೆಯರು‌ ಮನೆಗೆ ಬಂದಿದ್ದಾರೆ ಎಂದು ಇನ್ನಷ್ಟು ಹುರುಪು. ವಿಷ್ಣು ವಿಡಿಯೋ ಮಾಡತೊಡಗಿದರು. ಮಗನ ಕೆಣಕುವ ಪ್ರಶ್ನೆಗಳಿಗೆ ಅಪ್ಪನ ಖಚಿತತೆಯ ಉತ್ತರ.

“ಮತ್ತೆ ಏನ್ಸಮಾಚಾರ”
“ಮೇ 7 ಕ್ಕೆ ಕಾರ್ಯಕ್ರಮ”
“ಯಾವ ಕಾರ್ಯಕ್ರಮ?”
“ಕೋಮು ಸೌಹಾರ್ದದ್ದು”
“ನೀವು ಹೋಗ್ತೀರಾ?”
“ಹಾಂ ಹೋಗ್ತೇನೆ….ನಾನು ಹೋಗದಿದ್ದರೆ ಆಗಲ್ಲ”.

ಇದು ನಮ್ಮ ರಾಜಶೇಖರ್ ಸಾರ್…

ನನ್ನ ಜೀವನದಲ್ಲಿ ಅನಿರೀಕ್ಷಿತ ಆಪದ್ಬಾಂಧವರಾಗಿ ಬಂದ ಹಿರಿ ಜೀವ ಅದು. ಅವರ ಆತ್ಮೀಯತೆ, ಅಚಲತೆ, ಸರಳತೆ, ಸಹಜತೆ, ಕನಸು, ವಿಶ್ವಾಸ ಎಲ್ಲವೂ ಮರೆಯಲಾಗದಂಹವು. ಅಧ್ಯಾಯನ ಯೋಗ್ಯವಾದಂತಹವು. ನಮ್ಮ ಅರಿವಿಗೇ ಬರದಂತೆ ನಮ್ಮ ವ್ಯಕ್ತಿತ್ವವನ್ನು ಪ್ರಭಾವಿಸುವಂತಹವು.

ಇದನ್ನೂ ಓದಿ: ಜಿ ರಾಜಶೇಖರ್‌ರವರಿಗೆ ಎಪ್ಪತ್ತೈದು; ರಾಜಶೇಖರರ ‘ತಿರುಕನ ಕನಸು’

ಹಾಗಾಗಿಯೇ ನಾಡಿನ ಪಾಲಿಗಷ್ಟೇ ಅಲ್ಲ ನನ್ನ ಪಾಲಿಗೆ ರಾಜಶೇಖರರು ಅಜರಾಮರರು. ಅವರನ್ನು ಮರೆತೇನೆಂದರೂ ಮರೆಯಲು ಅಸಾಧ್ಯವಾದವರು.

ಉಡುಪಿಗೆ ಬಂದಾಗೆಲ್ಲಾ ಸಿಗ್ತೇನೆ ಸಾರ್…ಒಂದು ಗಳಿಗೆ ಸಿಕ್ಕು ಎಳ್ಳು ಪಾನಕ ಕುಡಿಸಿ ಸಾಕು.

ನಿಮ್ಮ ರುಣಿ
ನೂರ್ ಶ್ರೀಧರ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...