Homeಮುಖಪುಟ‘ಮರೆತೇನೆಂದರೂ ಮರೆಯಲಿ ಹೆಂಗೆ’ - ಹೋರಾಟಗಾರ ಜಿ. ರಾಜಶೇಖರ ಅವರಿಗೆ ನುಡಿನಮನ

‘ಮರೆತೇನೆಂದರೂ ಮರೆಯಲಿ ಹೆಂಗೆ’ – ಹೋರಾಟಗಾರ ಜಿ. ರಾಜಶೇಖರ ಅವರಿಗೆ ನುಡಿನಮನ

- Advertisement -
- Advertisement -

ಅಜ್ಞಾತವಾಸದಲ್ಲಿದ್ದರೂ ಆಗಾಗ ಕೇಳುತ್ತಲೇ ಇದ್ದ ಹೆಸರು ಜಿ. ರಾಜಶೇಖರ್. ಕರಾವಳಿ ಕೋಮುವಾದಿ ಜ್ವಾಲೆಗೆ ಸಿಕ್ಕಿತ್ತು. ರಥಬೀದಿ ಗೆಳೆಯರು ಬಕೆಟ್ ಹಿಡಿದು ಬೆಂಕಿ ನಂದಿಸಲು ಹೆಣಗುತ್ತಿದ್ದರು. ನಕ್ಕು ಸುಮ್ಮನಿದ್ದವರ ಮುಂದೆ ಈ ಸಣ್ಣ ಫೈರ್ ಬ್ರಿಗೇಡ್ ನಮ್ಮ ಮನಕ್ಕೆ ಎಂಥದೋ ಹಿತ ನೀಡುತ್ತಿತ್ತು. ತುಂಬಾ ವರ್ಷಗಳ ಕಾಲ ಅವರ ಬಗ್ಗೆ ಬಹಳ ಕೇಳಿದೆ, ಸ್ವಲ್ಪ ಓದಿದೆ. ಜೀವನದಲ್ಲಿ ಏನೇನೋ ನಡೆದುಹೋಯಿತು.

ಒಂದು ವಿಶೇಷ ಸಂದರ್ಭದಲ್ಲಿ ಮುಖ್ಯವಾಹಿನಿಗೆ ಮರಳುವ ಅವಕಾಶವೂ ದೊರೆಯಿತು. ಪ್ರೀತಿಯ ಸಮಾಜ ಸ್ವಾಗತಿಸಿತ್ತು. ಆದರೆ ಕಾನೂನು ಪ್ರಕ್ರಿಯೆ ಬಾಕಿ ಉಳಿದಿತ್ತು. ಉಡುಪಿಯಲ್ಲಿ UAPA ಒಳಗೊಂಡಂತೆ ನನ್ನ ಮೇಲೆ ಹಲವು ಕೇಸುಗಳಿದ್ದವು. ಬೇಲ್ ಪಡೆಯಲು ಜಾಮೀನು ಬೇಕಿತ್ತು. ನಕ್ಸಲೈಟನಿಗೆ ಜಾಮೀನು ನೀಡುವುದು ಸುಲಭವಲ್ಲ. ವಿಶ್ವಾಸ, ಗುಂಡಿಗೆ ಎರಡೂ ಇರಬೇಕಿತ್ತು. ಆದರೆ ರಾಜಶೇಖರರಿಗೆ ಅವ್ಯಾವುವೂ ಅಗತ್ಯವಿರಲಿಲ್ಲ. ಕನ್ವಿನ್ಸ್ ಮಾಡೋಣ ಎಂದು ಮಿತ್ರರು ಹೋದರಂತೆ. ಆದರೆ ಪೀಠಿಕೆ ಹಾಕುವ ಅಗತ್ಯವೂ ಬೀಳಲಿಲ್ಲವಂತೆ. “ಸರಿ ಕೊಡೋಣಬಿಡಿ, ಅದಕ್ಕೇನು? ನಾನು ಕೋರ್ಟಿಗೆ ಏನೆಲ್ಲಾ ತರಬೇಕು?” ಎಂದು ಕೇಳಿದರಂತೆ. ಮನುಷ್ಯರನ್ನು ನಂಬಲು‌ ಮನುಷ್ಯರಾಗಿದ್ದರೆ ಸಾಕು ಎಂಬ ಸಹಜ ವ್ಯಕ್ತಿತ್ವ ನಮ್ಮ ಸಾರ್‌ದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಎಲ್ಲಿ ಇದು ಸಾಲಲ್ಲ ಎಂದು ರಿಜೆಕ್ಟ್ ಮಾಡಿಬಿಡ್ತಾರೋ ಅಂತ ಲಾಯರ ಬಳಿ ಹಲವಾರು ಬಾರಿ ವಿಚಾರಿಸಿ, ಓಡಾಡಿ ಡಾಕ್ಯುಮೆಂಟ್ ತೆಗೆಸಿ, ಡಬಲ್ ಡಬಲ್ ಫೋಟೋಗಳನ್ನು ತೆಗೆದುಕೊಂಡು, ತಮ್ಮ ಕೊಡೆಯೊಂದಿಗೆ ನಾವು ಬರುವ ಮುನ್ನವೇ ಕೋರ್ಟಲ್ಲಿ ಬಂದು ಕಾಯುತ್ತಿದ್ದರು. ನೋಡಿ “ಮತ್ತೆ…” ಎಂದರು….ಜೀವಮಾನದ ಒಡನಾಡಿ ಎಂಬಂತೆ. ನಾನು ಅವರನ್ನು ಮೊದಲ ಬಾರಿ ಕಂಡದ್ದು ಆ ಕ್ಷಣದಲ್ಲೆ.

ನಾನು ಕಟಕಟೆಯಲ್ಲಿ ನಿಂತಿದ್ದೆ. ಅವರು ಹೊರಗಿದ್ದರು. ಕಾರಕೂನ ಅವರ ಹೆಸರು ಕೂಗಿದೊಡನೆ ಲಗುಬಗೆಯಿಂದ ಒಳಬಂದವರೇ ಸೀದಾ ಕಟಕಟೆಯಲ್ಲಿ ಬಂದು ನನ್ನ ಜೊತೆ ನಿಂತರು. ಅಲ್ಲಿ ಬೇಡ ಇಲ್ಲಿ ಬನ್ನಿ ಎಂದು ವಕೀಲರು ಅವರನ್ನು ಜಡ್ಜ್ ಬಳಿಗೆ ಕರೆದೊಯ್ದರು. ಹೊರ ಬಂದರೆ ಶಿವಸುಂದರದು ಒಂದೇ ಸಮ ನಗು. ಸಹ ಆರೋಪಿ ರಾಜಶೇಖರ್ ಎಂದು ಗೇಲಿ ಮಾಡಿದ್ದರು. ಮುಗ್ದ ರಾಜಶೇಖರರಿಗೆ ಅದರಿಂದ ಮುಜುಗರವೂ ಅನಿಸಲಿಲ್ಲ. ಸಹಜವಾಗಿಯೇ ಅವರು ನಾನು ಜೊತೆಗಿದ್ದೇನೆ ಎಂದು ನನ್ನ ಜೊತೆ ಕಟಕಟೆ ಹಂಚಿಕೊಂಡಿದ್ದರು.

ಇದನ್ನೂ ಓದಿ: ಹಿರಿಯ ಚಿಂತಕ, ಜನಪರ ಹೋರಾಟಗಾರ ಜಿ. ರಾಜಶೇಖರ (75) ನಿಧನ

ಅಂದಿನಿಂದ ನನ್ನ ಕೇಸ್ ಮುಗಿಯುವ ತನಕ ನಾನು ತಪ್ಪಿಸಿದರೂ ಅವರು ಕೋರ್ಟಿಗೆ ತಪ್ಪಿಸಲಿಲ್ಲ. ಕೋರ್ಟಿಗೆ ಅವರು ಬೇಕಿರಲಿಲ್ಲ. ಆದರೆ ಅವರಿಗೆ ಕೋರ್ಟಿಗೆ ಬರುವುದು ಮುಖ್ಯವಿತ್ತು. ಕೋರ್ಟಿನಲ್ಲಿ ನನಗೆ ಒಂಟಿತನ ಕಾಡಬಾರದು ಎಂಬುದು ಅವರ ಕಾಳಜಿಯಾಗಿತ್ತು. ಪ್ರತಿ ಡೇಟಿಗೆ ಬಂದು ಮಾತನಾಡಿಸಿ, ಕ್ಯಾಂಟೀನಿಗೆ ಕರೆದುಕೊಂಡು ಹೋಗಿ ಮಂಗಳೂರು ಬಜಿ, ಎಳ್ಳಿನ ಪಾನಕ ಕೊಡಿಸಿ, “ಬರ್ತೇನೆ..” ಅಂತ ಹೊರಡುತ್ತಿದ್ದರು.

ನನ್ನ ಕೇಸಿನ ವಿಚಾರಣೆ ಮುಗಿದು ತೀರ್ಪಿನ ದಿನ ಬರುವ ಹೊತ್ತಿಗೆ ಅವರಿಗೆ ಪಾರ್ಕಿನ್ಸನ್ ಆಗಿತ್ತು, ದೇಹ ಕೃಷವಾಗಿತ್ತು. ಆದರೂ ಕೋರ್ಟಿಗೆ ಬಂದು ಮತ್ತೊಮ್ಮೆ ಜಾಮೀನು ಧೃಡೀಕರಿಸಬೇಕಿತ್ತು. ಮಗ ವಿಷ್ಣುವಿಗೆ ಚಿಂತೆ. ಕೋರ್ಟಿನ ಮೆಟ್ಟಿಲು ಹತ್ತಿಸಿ ಕರೆತರುವುದು ಹೇಗೆ? ಜಡ್ಜ್ ಕೇಳುವ ಪ್ರಶ್ನೆಗೆ ಉತ್ತರಿಸುವಂತೆ ಮಾಡುವುದು ಹೇಗೆ? ಆಟೋದಲ್ಲಿ ಹುಶಾರಾಗಿ ಕರೆತಂದರು. ರಾಜಶೇಖರರ ದೇಹ ನಡುಗುತ್ತಿದ್ದರೂ ಮುಖ ಎಂದಿನಂತೆ ನಿಶ್ಚಲವಾಗಿತ್ತು.

ಜಡ್ಜ್ ಕೇಳಿದರು
“ಇವರ್ಯಾರು ಗೊತ್ತಾ?”
“ಗೊತ್ತು”.
“ಇವರು ನಿಮಗೆ ಏನಾಗಬೇಕು?”
“ನನ್ನ ಸ್ನೇಹಿತರು”
“ಇವರಿಗೆ ನೀವು ಶ್ಯೂರಿಟಿ ಕೊಡ್ತೀರಾ?”
“ಕೊಡ್ತೇನೆ”

ಕೇಸ್ ಖುಲಾಸ್ ಆಯಿತು. ನಾನು ಕಾನೂನಾತ್ಮಕವಾಗಿಯೂ ಬಿಡುಗಡೆಗೊಂಡೆ. ಎಂದಿನಂತೆ “ಬರ್ಲಾ…” ಎಂದು ವಿಷ್ಣು ಕೈ ಹಿಡಿದು ಹೊರಟರು.

ಇದನ್ನೂ ಓದಿ: ಗಾಂಧೀಜಿಯವರ ಪುಣ್ಯ ಸ್ಮರಣೆ : ಬಾಬಾ ಸಾಹೇಬರಿಗೆ ಕೃತಜ್ಞತೆ..- ಜಿ.ರಾಜಶೇಖರ್‌

ಮತ್ತೆ ಕಂಡದ್ದು ಇತ್ತೀಚಿನ ಸಹಬಾಳ್ವೆ ಸಮಯದಲ್ಲೆ. ನಾನು, ಅಶೋಕ್, ದಿನಕರ ಬೇಂಗ್ರೆ ಮನೆಗೆ ಹೋದೆವು. ಗುರುಗಳು ಬದಲಾಗೇ ಇಲ್ಲ. ಮುಖದಲ್ಲಿ ಅದೇ ದೃಡತೆ, ಮಾತಿನಲ್ಲಿ ಅದೇ ಲವಲವಿಕೆ. ಭಾವನೆ ಕಾಣದ ಮುಖದಿಂದ ನಿಲ್ಲದ ನಗೆ ಚಟಾಕಿ. ಗೆಳೆಯರು‌ ಮನೆಗೆ ಬಂದಿದ್ದಾರೆ ಎಂದು ಇನ್ನಷ್ಟು ಹುರುಪು. ವಿಷ್ಣು ವಿಡಿಯೋ ಮಾಡತೊಡಗಿದರು. ಮಗನ ಕೆಣಕುವ ಪ್ರಶ್ನೆಗಳಿಗೆ ಅಪ್ಪನ ಖಚಿತತೆಯ ಉತ್ತರ.

“ಮತ್ತೆ ಏನ್ಸಮಾಚಾರ”
“ಮೇ 7 ಕ್ಕೆ ಕಾರ್ಯಕ್ರಮ”
“ಯಾವ ಕಾರ್ಯಕ್ರಮ?”
“ಕೋಮು ಸೌಹಾರ್ದದ್ದು”
“ನೀವು ಹೋಗ್ತೀರಾ?”
“ಹಾಂ ಹೋಗ್ತೇನೆ….ನಾನು ಹೋಗದಿದ್ದರೆ ಆಗಲ್ಲ”.

ಇದು ನಮ್ಮ ರಾಜಶೇಖರ್ ಸಾರ್…

ನನ್ನ ಜೀವನದಲ್ಲಿ ಅನಿರೀಕ್ಷಿತ ಆಪದ್ಬಾಂಧವರಾಗಿ ಬಂದ ಹಿರಿ ಜೀವ ಅದು. ಅವರ ಆತ್ಮೀಯತೆ, ಅಚಲತೆ, ಸರಳತೆ, ಸಹಜತೆ, ಕನಸು, ವಿಶ್ವಾಸ ಎಲ್ಲವೂ ಮರೆಯಲಾಗದಂಹವು. ಅಧ್ಯಾಯನ ಯೋಗ್ಯವಾದಂತಹವು. ನಮ್ಮ ಅರಿವಿಗೇ ಬರದಂತೆ ನಮ್ಮ ವ್ಯಕ್ತಿತ್ವವನ್ನು ಪ್ರಭಾವಿಸುವಂತಹವು.

ಇದನ್ನೂ ಓದಿ: ಜಿ ರಾಜಶೇಖರ್‌ರವರಿಗೆ ಎಪ್ಪತ್ತೈದು; ರಾಜಶೇಖರರ ‘ತಿರುಕನ ಕನಸು’

ಹಾಗಾಗಿಯೇ ನಾಡಿನ ಪಾಲಿಗಷ್ಟೇ ಅಲ್ಲ ನನ್ನ ಪಾಲಿಗೆ ರಾಜಶೇಖರರು ಅಜರಾಮರರು. ಅವರನ್ನು ಮರೆತೇನೆಂದರೂ ಮರೆಯಲು ಅಸಾಧ್ಯವಾದವರು.

ಉಡುಪಿಗೆ ಬಂದಾಗೆಲ್ಲಾ ಸಿಗ್ತೇನೆ ಸಾರ್…ಒಂದು ಗಳಿಗೆ ಸಿಕ್ಕು ಎಳ್ಳು ಪಾನಕ ಕುಡಿಸಿ ಸಾಕು.

ನಿಮ್ಮ ರುಣಿ
ನೂರ್ ಶ್ರೀಧರ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...