Homeಮುಖಪುಟಯಾರದೋ ಮನೆಯಲ್ಲಿ ಮಗು ಹುಟ್ಟಿದರೆ ಬಿಜೆಪಿ ಸಿಹಿ ಹಂಚಿಕೊಳ್ಳುತ್ತದೆ: ಕಾರ್ಪೋರೇಷನ್‌ ಚುನಾವಣಾ ಫಲಿತಾಂಶದ ಬಗ್ಗೆ ಕಾಂಗ್ರೆಸ್...

ಯಾರದೋ ಮನೆಯಲ್ಲಿ ಮಗು ಹುಟ್ಟಿದರೆ ಬಿಜೆಪಿ ಸಿಹಿ ಹಂಚಿಕೊಳ್ಳುತ್ತದೆ: ಕಾರ್ಪೋರೇಷನ್‌ ಚುನಾವಣಾ ಫಲಿತಾಂಶದ ಬಗ್ಗೆ ಕಾಂಗ್ರೆಸ್ ನಾಯಕ ಪ್ರತಿಕ್ರಿಯೆ

ಚುನಾವಣೆಯಲ್ಲಿ ಬಿಜೆಪಿ ಒಟ್ಟು ಏಳು ಕಾರ್ಪೋರೇಷನ್‌ಗಳನ್ನು ಕಳೆದುಕೊಂಡಿದೆ

- Advertisement -
- Advertisement -

ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಬುಧವಾರ ಮಧ್ಯಪ್ರದೇಶದ ಮುನ್ಸಿಪಲ್ ಚುನಾವಣೆಯ ಬಗ್ಗೆ ಬಿಜೆಪಿ ತರಾಟೆಗೆ ತೆಗೆದುಕೊಂಡಿದ್ದು, ಚುನಾವಣೆಯಲ್ಲಿ ಆಡಳಿತರೂಢ ಪಕ್ಷವು “ಪೊಲೀಸ್, ಆಡಳಿತ ಮತ್ತು ಹಣವನ್ನು ನಿರ್ಲಜ್ಜವಾಗಿ ಬಳಸಿದೆ” ಎಂದು ಆರೋಪಿಸಿದ್ದಾರೆ. “ಬಿಜೆಪಿ ಜನರನ್ನು ಖರೀದಿಸಲು ಪ್ರಯತ್ನಿಸಬಹುದು, ಆದರೆ ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು” ಎಂದು ಅವರು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾವು ಐದು ಮುನ್ಸಿಪಲ್ ಕಾರ್ಪೊರೇಷನ್‌ಗಳನ್ನು ಗೆದ್ದಿದ್ದೇವೆ ಮತ್ತು ತಲಾ ಒಂದನ್ನು ಎಎಪಿ ಮತ್ತು ಪಕ್ಷೇತರರು ಗೆದ್ದಿದ್ದಾರೆ. ಇದರರ್ಥ ಬಿಜೆಪಿ ಏಳು ಕಾರ್ಪೋರೇಷನ್‌ಗಳನ್ನು ಕಳೆದುಕೊಂಡಿದೆ. ಇದನ್ನೂ ಅವರು ಆಚರಿಸುವುದಾದರೆ ನಮಗೆ ಏನೂ ಸಮಸ್ಯೆ ಇಲ್ಲ. ಇದು ಹೇಗಂದರೆ ಬೇರೊಬ್ಬರ ಮನೆಯಲ್ಲಿ ಮಗು ಜನಿಸಿದ್ದಕ್ಕೆ, ಬಿಜೆಪಿಯವರು ಸಿಹಿ ಹಂಚಲು ಪ್ರಾರಂಭಿಸಿದಂತೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

347 ನಗರ ಪಾಲಿಕೆಗಳಲ್ಲಿ 300 ಪಾಲಿಕೆಗಳನ್ನು ಪಕ್ಷವೂ ಗೆದ್ದಿದೆ ಎಂದು ಬಿಜೆಪಿ ಪ್ರತಿಪಾದಿಸಿದ್ದು, ‘ಈ ಸಾಧನೆಯು ಐತಿಹಾಸಿಕ’ ಎಂದು ಬಣ್ಣಿಸಿದೆ.

ಇದನ್ನೂ ಓದಿ: ಏಕನಾಥ್‌ ಶಿಂಧೆ ಥರದ ಸಾಕಷ್ಟು ಮಂದಿ ಟಿಆರ್‌‌ಎಸ್‌ನಲ್ಲಿದ್ದಾರೆ: ತೆಲಂಗಾಣ ಬಿಜೆಪಿ ಹೇಳಿಕೆ

ರಾಜ್ಯದ ಒಟ್ಟು 16 ಮೇಯರ್ ಹುದ್ದೆಗಳ ಪೈಕಿ ಬಿಜೆಪಿ ಒಂಬತ್ತು, ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದುಕೊಂಡಿದ್ದು, ತಲಾ ಒಂದು ಸ್ಥಾನವನ್ನು ಎಎಪಿ ಮತ್ತು ಪಕ್ಷೇತರರು ಗೆದ್ದಿದ್ದಾರೆ. 2015ರಲ್ಲಿ ಬಿಜೆಪಿ ಎಲ್ಲಾ ಮೇಯರ್‌ ಹುದ್ದೆಗಳನ್ನು ಗೆದ್ದುಕೊಂಡಿತ್ತು.

ಅದರಲ್ಲೂ ಬಿಜೆಪಿ ಕಳೆದುಕೊಂಡಿರುವ ಮೇಯರ್ ಹುದ್ದೆಗಳಲ್ಲಿ ಒಂದು ಒಕ್ಕೂಟ ಸರ್ಕಾರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಭದ್ರಕೋಟೆಯಾದ ಮೊರೆನಾದಲ್ಲಿದ್ದರೆ, ಇನ್ನೊಂದು ಮಧ್ಯಪ್ರದೇಶದ ಬಿಜೆಪಿ ಅಧ್ಯಕ್ಷ, ಲೋಕಸಭಾ ಸಂಸದರಾದ ವಿಡಿ ಶರ್ಮಾ ಅವರ ಕಟ್ನಿಯದ್ದಾಗಿದೆ. ಮತ್ತೊಂದು ಬಿಜೆಪಿಯಿಂದ ಬಂಡಾಯ ಎದ್ದಿದ್ದ ಬಣ ಗೆದ್ದುಕೊಂಡಿದೆ. ಏತನ್ಮಧ್ಯೆ, ಕಾಂಗ್ರೆಸ್ ಶೂನ್ಯದಿಂದ ಐದಕ್ಕೆ ಏರಿದೆ ಮತ್ತು ಸಿಂಗ್ರೌಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಒಂದನ್ನು ಗೆದ್ದಿದೆ.

ರೇವಾ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಕಾಂಗ್ರೆಸ್‌ನ ಅಜಯ್ ಮಿಶ್ರಾ ಬಾಬಾ ಅವರು 10,301 ಮತಗಳಿಂದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಬೋಧ್ ವ್ಯಾಸ್ ಅವರನ್ನು ಸೋಲಿಸಿದ್ದಾರೆ. 1999 ರ ನಂತರ ಕಾಂಗ್ರೆಸ್ ಮೊದಲ ಬಾರಿಗೆ ರೇವಾದಲ್ಲಿ ಮೇಯರ್ ಸ್ಥಾನವನ್ನು ಗೆದ್ದಿದೆ.

ಇದನ್ನೂ ಓದಿ: ‘ಜುಮ್ಲಾಜೀವಿ’, ‘ಶಕುನಿ’, ‘ಸರ್ವಾಧಿಕಾರಿ’ ಅಸಂಸದೀಯ ಪದಗಳು!: ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ಸರ್ಕಾರ

ಮೊರೆನಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾರದ ಸೋಲಂಕಿ 14,631 ಮತಗಳಿಂದ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಮೀನಾ ಮುಖೇಶ್ ಜಾತವ್ ಅವರನ್ನು ಸೋಲಿಸಿದ್ದಾರೆ. ಮೊರೆನಾ ಮುನ್ಸಿಪಲ್ ಕಾರ್ಪೊರೇಶನ್ ಮೊರೆನಾ ಲೋಕಸಭಾ ಸ್ಥಾನದ ಭಾಗವಾಗಿದೆ. ಇದನ್ನೂ ಒಕ್ಕೂಟ ಸರ್ಕಾರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರತಿನಿಧಿಸುತ್ತಾರೆ.

ದೇವಾಸ್‌ನಲ್ಲಿ ಬಿಜೆಪಿಯ ಗೀತಾ ಅಗರವಾಲ್ ಅವರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿನೋದಿನಿ ವ್ಯಾಸ್ ಅವರನ್ನು 45,889 ಮತಗಳಿಂದ ಸೋಲಿಸಿದ್ದಾರೆ. ರತ್ಲಾಮ್ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಬಿಜೆಪಿಯ ಪ್ರಹ್ಲಾದ್ ಪಟೇಲ್ ಅವರು ಕಾಂಗ್ರೆಸ್‌ನ ಮಯಾಂಕ್ ಸಿಂಗ್ ಜಾಟ್ ಅವರನ್ನು 8,591 ಮತಗಳಿಂದ ಸೋಲಿಸಿದ್ದಾರೆ.

ಕಟ್ನಿ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಸ್ವತಂತ್ರ ಅಭ್ಯರ್ಥಿ ಪ್ರೀತಿ ಸಂಜೀವ್ ಸೂರಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ಜ್ಯೋತಿ ದೀಕ್ಷಿತ್ ಅವರನ್ನು 5,287 ಮತಗಳಿಂದ ಸೋಲಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮೂಲ್ಕಿ-ಮೂಡಬಿದಿರೆ: ಬಿಜೆಪಿ ಪಾಲಾಗಿರುವ ಹಳೆಯ ಕಾಂಗ್ರೆಸ್ ಕೋಟೆ! ಅದಲುಬದಲು ಸಾಧ್ಯವೇ?

ಎರಡನೇ ಹಂತದಲ್ಲಿ ಐದು ಮುನ್ಸಿಪಲ್ ಕಾರ್ಪೊರೇಷನ್‌ಗಳು, 40 ನಗರ ಪಾಲಿಕೆಗಳು ಮತ್ತು 43 ಜಿಲ್ಲೆಗಳ 169 ನಗರ ಸಭೆಗಳಲ್ಲಿ ಮತದಾನ ನಡೆದಿತ್ತು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷವಷ್ಟೆ ಇದ್ದು, ಸ್ಥಳೀಯ ಸಂಸ್ಥೆ ಚುಣಾವಣೆಯು ಅದರಕ್ಕೆ ದಿಕ್ಸೂಚಿ ಎನ್ನಲಾಗುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...