Homeರಾಜಕೀಯ‘ಜುಮ್ಲಾಜೀವಿ’, ‘ಶಕುನಿ’, ‘ಸರ್ವಾಧಿಕಾರಿ’ ಅಸಂಸದೀಯ ಪದಗಳು!: ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ಸರ್ಕಾರ

‘ಜುಮ್ಲಾಜೀವಿ’, ‘ಶಕುನಿ’, ‘ಸರ್ವಾಧಿಕಾರಿ’ ಅಸಂಸದೀಯ ಪದಗಳು!: ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ಸರ್ಕಾರ

- Advertisement -
- Advertisement -

‘ಜುಮ್ಲಾಜೀವಿ’, ‘ಬಾಲ್ ಬುದ್ಧಿ’, ‘ಕೋವಿಡ್ ಸ್ಪ್ರೆಡರ್’, ‘ಸ್ನೂಪ್‌ಗೇಟ್’, ‘ನಾಚಿಕೆಯಾಗಬೇಕು’, ‘ದುರುಪಯೋಗಪಡಿಸಿಕೊಂಡ’, ‘ದ್ರೋಹ’, ‘ಭ್ರಷ್ಟ’, ‘ನಾಟಕ’, ‘ಬೂಟಾಟಿಕೆ’ ಮತ್ತು ‘ಅಸಮರ್ಥ’ ಮೊದಲಾದ ದಿನನಿತ್ಯ ಬಳಸುವ ಅನೇಕ ಪದಗಳನ್ನು ಸೋಮವಾರದಿಂದ ಪ್ರಾರಂಭವಾಗುವ ಅಧಿವೇಶನದಲ್ಲಿ ಬಳಸುವಂತಿಲ್ಲ ಎಂದು ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಹೇಳಿದೆ. ಸರ್ಕಾರವನ್ನು ವಿರೋಧಿಸಲು ಕಷ್ಟವಾಗುವಂತೆ ಲೋಕಸಭೆಯ ಸಚಿವಾಲಯವು ಉಭಯ ಸದನಗಳಿಗೆ ಅಸಂಸದೀಯ ಪದಗಳನ್ನು ಪಟ್ಟಿ ಮಾಡುವ ಹೊಸ ಕಿರುಪುಸ್ತಕವನ್ನು ಬಿಡುಗಡೆ ಮಾಡಿದೆ.

ಈ ಕಿರುಪುಸ್ತಕದಲ್ಲಿ, ‘ಅರಾಜಕತಾವಾದಿ’, ‘ಶಕುನಿ’, ‘ಸರ್ವಾಧಿಕಾರಿ’, ‘ಸರ್ವಾಧಿಕಾರ’, ‘ಜೈಚಂದ್’, ‘ವಿನಾಶ ಪುರುಷ’, ‘ಖಲಿಸ್ತಾನಿ’ ಮತ್ತು ‘ರಕ್ತದ ವ್ಯವಸಾಯ’ ಸೇರಿದಂತೆ ಹಲವು ಪದಗಳನ್ನು ಸದನದ ಚರ್ಚೆಯ ಸಮಯದಲ್ಲಿ ಅಥವಾ ಬೇರೆ ರೀತಿಯಲ್ಲಿ ಬಳಸಿದರೆ ಅದನ್ನು ತೆಗೆದುಹಾಕಲಾಗುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ದೋಹ್ರಾ ಚರಿತ್ರ’, ‘ನಿಕಮ್ಮ’, ‘ನೌಟಂಕಿ’, ‘ದಿಂಡೋರಾ ಪೀಟ್ನಾ’ ಮತ್ತು ‘ಬೆಹ್ರಿ ಸರ್ಕಾರ್’ ಪದಗಳನ್ನು ಕೂಡಾ ಬಳಸುವಂತಿಲ್ಲ.

ಅಸಂವಿಧಾನಿಕ ಪದಗಳ ಹೊಸ ಕಿರು ಪುಸ್ತಕ ಹೊರ ತಂದರೂ, ರಾಜ್ಯಸಭಾ ಮತ್ತು ಲೋಕಸಭಾ ಸ್ಪೀಕರ್‌ಗಳು ಈ ಪದಗಳನ್ನು ಕಡತದಿಂದ ತೆಗೆದುಹಾಕಬೇಕೆ ಅಥವಾ ಅದು ಇರಬಹುದೇ ಎಂಬ ಅಂತಿಮ ತೀರ್ಮಾವನ್ನು ತೆಗೆದುಕೊಳ್ಳಬುಹುದಾಗಿದೆ.

ಸರ್ಕಾರದ ಈ ನಿರ್ಧಾರದ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಟಿಎಂಸಿ ನಾಯಕ ಡೆರೆಕ್ ಒ’ಬ್ರಿಯಾನ್ ಅವರು ಇಂತಹ ಪದಗಳ ಬಳಕೆಯನ್ನು ಮುಂದುವರಿಸುವುದಾಗಿ ಹೇಳಿದ್ದು, ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ತೆಲಂಗಾಣಕ್ಕೆ ಮೋದಿ: ಬರಮಾಡಿಕೊಳ್ಳದ ಕೆಸಿಆರ್‌; ಧಮ್‌ ಬಿರಿಯಾನಿ ತಿಂದು ಹೋಗಿ ಎಂದ ಕೆಟಿಆರ್‌‌!

ಟಿಎಂಸಿಯ ಮತ್ತೊಬ್ಬ ಸಂಸದೆ ಮಹುವಾ ಮೊಯಿತ್ರಾ ಕೂಡಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ, “ಅಂದರೆ ನಾನು ಲೋಕಸಭೆಯಲ್ಲಿ ಎದ್ದು ನಿಂತು, ಈ ಅಸಮರ್ಥ ಸರ್ಕಾರ ಭಾರತೀಯರಿಗೆ ಹೇಗೆ ದ್ರೋಹ ಬಗೆದಿದೆ ಎಂಬುದರ ಕುರಿತು ಮಾತನಾಡಲು ಸಾಧ್ಯವಿಲ್ಲವೆ. ನಿಮ್ಮ ಬೂಟಾಟಿಕೆಗೆ ನಾಚಿಕೆಪಡಬೇಕು” ಎಂದು ಹೇಳಿದ್ದಾರೆ.

ಅಸಂಸದೀಯ ಎಂದು ಪಟ್ಟಿ ಮಾಡಲಾದ ಕೆಲವು ಪದಗಳ ಪಟ್ಟಿ ಹೀಗಿದೆ

‘ರಕ್ತಪಾತ’, ‘ರಕ್ತಸಿಕ್ತ’, ‘ದ್ರೋಹ’, ‘ನಾಚಿಕೆ’, ‘ದುರುಪಯೋಗ’, ‘ಮೋಸ, ‘ಚಮಚಾ’, ‘ಚಮಚಾಗಿರಿ’, ‘ಚೇಲಾಗಳು’, ‘ಬಾಲಿಶ’, ‘ಭ್ರಷ್ಟ’, ‘ಹೇಡಿ’, ‘ಅಪರಾಧ’ ಮತ್ತು ‘ಮೊಸಳೆ ಕಣ್ಣೀರು’, ‘ಅವಮಾನ’, ‘ಕತ್ತೆ’, ‘ನಾಟಕ’, ‘ಕಣ್ಣೀರು ತೊಳೆಯುವುದು’, ‘ಮೀಠಿ’, ‘ಗೂಂಡಾಗಿರಿ’, ‘ಬೂಟಾಟಿಕೆ’, ‘ಅಸಮರ್ಥ’, ‘ತಪ್ಪುದಾರಿ’, ‘ಸುಳ್ಳು’, ‘ಸತ್ಯ’, ‘ಅರಾಜಕತಾವಾದಿ’, ‘ಗದ್ದರ್’, ‘ಗಿರ್ಗಿಟ್‌’, ‘ಗೂಂಡಾಗಳು’, ‘ಮೊಸಳೆ ಕಣ್ಣೀರು’, ‘ಅಪಮಾನ’, ‘ಅಸತ್ಯ’, ‘ಅಹಂಕಾರ’, ‘ಭ್ರಷ್ಟ’, ‘ಕಾಲಾ ದಿನ’, ‘ಕಾಲಾ ಬಜಾರಿ’, ‘ಖರೀದ್ ಫರೋಖ್ತ್ ‘, ‘ದಂಗಾ’, ‘ದಲಾಲ್’, ‘ದಾದಗಿರಿ’, ‘ದೋಹ್ರಾ ಚರಿತ್ರೆ’, ‘ಬೇಚಾರ’, ‘ಬಾಬ್‌ಕಟ್’, ‘ಲಾಲಿಪಾಪ್’, ‘ವಿಶ್ವಾಘಾತ’, ‘ಸಂವೇದನ ಹೀನ’,, ‘ಮೂರ್ಖ’, ಮತ್ತು ‘ಲೈಂಗಿಕ ಕಿರುಕುಳ’.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...