ಕ್ಷೇತ್ರ ವಿಂಗಡನೆ ಮತ್ತು ತ್ರಿಭಾಷಾ ನೀತಿ ವಿಚಾರದ ಬಗ್ಗೆ ಮಾತನಾಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಧರ್ಮದ ಆಧಾರದ ಮೇಲೆ ವಿಭಜನೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಸ್ಟಾಲಿನ್, “ಇದು ಮತಕ್ಕಾಗಿ ನಡೆಸುವ ರಾಜಕೀಯ ಗಲಭೆಯಲ್ಲ, ಘನತೆ ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ” ಎಂದು ಹೇಳಿದ್ದಾರೆ. ನಮ್ಮದು ರಾಜಕೀಯ ಗಲಭೆಯಲ್ಲ
ಆದಿತ್ಯನಾಥ್ ಅವರ ಹೇಳಿಕೆಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಸ್ಟಾಲಿನ್, ದ್ವಿಭಾಷಾ ನೀತಿ ಮತ್ತು ನ್ಯಾಯಯುತ ಕ್ಷೇತ್ರ ಪುನರ್ವಿಂಗಡನೆ ಕುರಿತ ತಮಿಳುನಾಡಿನ ಗಟ್ಟಿಯಾದ ಧ್ವನಿ ಬಿಜೆಪಿಯನ್ನು ‘ಕಿರಿಕಿರಿಗೊಳಿಸಿದೆ’. ಬಿಜೆಪಿಯ ನಾಯಕರ ಸಂದರ್ಶನ ನೋಡಿದರೆ ಇದು ತಿಳಿಯುತ್ತದೆ ಎಂದು ಹೇಳಿದ್ದಾರೆ. ನಮ್ಮದು ರಾಜಕೀಯ ಗಲಭೆಯಲ್ಲ
“ಮತ್ತು, ಈಗ ಗೌರವಾನ್ವಿತ ಯೋಗಿ ಆದಿತ್ಯನಾಥ್ ಅವರು ನಮಗೆ ದ್ವೇಷದ ಬಗ್ಗೆ ಉಪನ್ಯಾಸ ನೀಡಲು ಬಯಸುತ್ತಿದ್ದಾರೆಯೇ? ನಮ್ಮನ್ನು ಬಿಡಿ. ಇದು ವ್ಯಂಗ್ಯ ಕೂಡಾ ಅಲ್ಲ – ಇದು ಅತ್ಯಂತ ಕೆಟ್ಟ ಕರಾಳ ರಾಜಕೀಯ ಹಾಸ್ಯ.” ಎಂದು ಅವರು ಹೇಳಿದ್ದಾರೆ.
Tamil Nadu’s fair and firm voice on #TwoLanguagePolicy and #FairDelimitation is echoing nationwide—and the BJP is clearly rattled. Just watch their leaders’ interviews.
And now Hon’ble Yogi Adityanath wants to lecture us on hate? Spare us. This isn’t irony—it’s political black… https://t.co/NzWD7ja4M8
— M.K.Stalin (@mkstalin) March 27, 2025
ತಮಿಳುನಾಡು ರಾಜ್ಯವು ಯಾವುದೇ ನಿರ್ದಿಷ್ಟ ಭಾಷೆಯ ವಿರೋಧಿಗಳಲ್ಲ, ಬದಲಾಗಿ ರಾಜ್ಯ ಸರ್ಕಾರವು ‘ಭಾಷಾ ಹೇರಿಕೆ’ ಮತ್ತು ‘ಜನಾಂಗೀಯತೆ’ಯನ್ನು ವಿರೋಧಿಸುತ್ತಿದೆಯೆ. ಇದು ಮತಕ್ಕಾಗಿ ನಡೆಸುವ ರಾಜಕೀಯ ಗಲಭೆಗಳಲ್ಲ, ಬದಲಾಗಿ ಘನೆತೆ ಮತ್ತು ನ್ಯಾಯಕ್ಕಾಗಿ ನಡೆಸುವ ಹೋರಾಟ ಎಂದು ಅವರು ಹೇಳಿದ್ದಾರೆ.
ಸುದ್ದಿ ಸಂಸ್ಥೆ ANI ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಆದಿತ್ಯನಾಥ್, ಸ್ಟಾಲಿನ್ ಅವರು ತಮ್ಮ ಮತಬ್ಯಾಂಕ್ ಅಪಾಯದಲ್ಲಿದೆ ಎಂದು ಭಾವಿಸಿ ಪ್ರಾದೇಶಿಕತೆ ಮತ್ತು ಭಾಷೆಯ ಆಧಾರದ ಮೇಲೆ ವಿಭಜನೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.
“ಅವರು ಹಿಂದಿಯನ್ನು ಏಕೆ ದ್ವೇಷಿಸಬೇಕು. ದೇಶವನ್ನು ಭಾಷೆ ಅಥವಾ ಪ್ರದೇಶದ ಆಧಾರದ ಮೇಲೆ ವಿಭಜಿಸಬಾರದು. ವಾರಣಾಸಿಯಲ್ಲಿ ಕಾಶಿ-ತಮಿಳು ಸಂಗಮದ ಮೂರನೇ ತಲೆಮಾರನ್ನು ಆಯೋಜಿಸಿದ್ದಕ್ಕಾಗಿ ನಾವು ಪ್ರಧಾನಿ ಮೋದಿ ಜಿ ಅವರಿಗೆ ಕೃತಜ್ಞರಾಗಿರುತ್ತೇವೆ. ತಮಿಳು ಭಾರತದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ ಮತ್ತು ಅದರ ಇತಿಹಾಸವು ಸಂಸ್ಕೃತದಷ್ಟೇ ಪ್ರಾಚೀನವಾಗಿದೆ.” ಎಂದು ಹೇಳಿದ್ದಾರೆ.
“ಭಾರತೀಯ ಪರಂಪರೆಯ ಹಲವು ಅಂಶಗಳು ಇನ್ನೂ ಭಾಷೆಯಲ್ಲಿ ಜೀವಂತವಾಗಿರುವುದರಿಂದ ಪ್ರತಿಯೊಬ್ಬ ಭಾರತೀಯನಿಗೆ ತಮಿಳಿನ ಬಗ್ಗೆ ಆದರ ಮತ್ತು ಗೌರವವಿದೆ. ಹಾಗಾದರೆ, ನಾವು ಹಿಂದಿಯನ್ನು ಏಕೆ ದ್ವೇಷಿಸಬೇಕು?” ಎಂದು ಅವರು ಕೇಳಿದ್ದರು. ಕ್ಷೇತ್ರ ಪುನರ್ವಿಂಗಡನೆ ವಿಚಾರದಲ್ಲಿ ಸ್ಟಾಲಿನ್ ಅವರ ಕಳವಳಗಳನ್ನು ತಳ್ಳಿಹಾಕಿದ ಆದಿತ್ಯನಾಥ್, ಅದು ರಾಜಕೀಯ ಕಾರ್ಯಸೂಚಿ ಎಂದು ಕರೆದಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕೇಂದ್ರ ಸರ್ಕಾರವು ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ರಲ್ಲಿ ವಿವರಿಸಿರುವ ತ್ರಿಭಾಷಾ ಸೂತ್ರದ ಅನುಷ್ಠಾನವನ್ನು ತಿರಸ್ಕರಿಸಿದ್ದಾರೆ. ಈ ನಿರಾಕರಣೆ ದೇಶದಲ್ಲಿ ಭಾಷಾ ನೀತಿಗಳ ಸುತ್ತಲಿನ ನಡೆಯುತ್ತಿರುವ ಚರ್ಚೆಯನ್ನು ಮತ್ತೆ ಹೆಚ್ಚಿಸಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹನಿಟ್ರ್ಯಾಪ್ ಆರೋಪ | ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ವಜಾಮಾಡಿದ ಸುಪ್ರೀಂಕೋರ್ಟ್
ಹನಿಟ್ರ್ಯಾಪ್ ಆರೋಪ | ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ವಜಾಮಾಡಿದ ಸುಪ್ರೀಂಕೋರ್ಟ್

